Tag: ಪೀಣ್ಯ

  • 5 ಲಕ್ಷ ರೂ. ನೀಡಿಯೂ ಉದ್ಯೋಗ ಸಿಗದ್ದಕ್ಕೆ ಬೇಸತ್ತು ಯುವಕ ಆತ್ಮಹತ್ಯೆ

    5 ಲಕ್ಷ ರೂ. ನೀಡಿಯೂ ಉದ್ಯೋಗ ಸಿಗದ್ದಕ್ಕೆ ಬೇಸತ್ತು ಯುವಕ ಆತ್ಮಹತ್ಯೆ

    ಬೆಂಗಳೂರು: ದೇವಸ್ಥಾನದ ಆವರಣದಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ವಿರೇಶ್ ಆತ್ಮಹತ್ಯೆಗೆ ಶರಣಾದ ಯುವಕ. ನಗರದ ಪೀಣ್ಯದ ಬಡಾವಣೆಯ ದೇವಾಸ್ಥಾನದಲ್ಲಿ ವಿರೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿರೇಶ್ ಐಟಿಐ ಓದಿಕೊಂಡಿದ್ದನು. ನಗರದ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಲು ತನಗೆ ಪರಿಚಯದ ವ್ಯಕ್ತಿಗೆ ಸುಮಾರು 5 ಲಕ್ಷ ರೂ. ಹಣವನ್ನು ನೀಡಿದ್ದನು.

    ಹಣ ನೀಡಿದ ಮೇಲೆ ವಿರೇಶನಿಗೆ ಯಾವುದೇ ಉದ್ಯೋಗ ಸಿಕ್ಕಿರಲಿಲ್ಲ, ಇದ್ರಿಂದ ಮನನೊಂದ ವಿರೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಮಹಿಳೆಯಿಂದ ರಾಂಗ್‍ನಂಬರ್‍ಗೆ ಕರೆ- ತಡರಾತ್ರಿ ಫೋನ್ ಮಾಡಿ ಸೆಕ್ಸ್ ಗೆ ಕರೆದ ಯುವಕ

    ಮಹಿಳೆಯಿಂದ ರಾಂಗ್‍ನಂಬರ್‍ಗೆ ಕರೆ- ತಡರಾತ್ರಿ ಫೋನ್ ಮಾಡಿ ಸೆಕ್ಸ್ ಗೆ ಕರೆದ ಯುವಕ

    ಬೆಂಗಳೂರು: ತಡರಾತ್ರಿ ಫೋನ್ ಕರೆ ಮಾಡಿ ಕಿರುಕುಳ ಕೊಡುತ್ತಿದ್ದ ಯುವಕನಿಗೆ ಮಹಿಳೆ ಮತ್ತು ಆಕೆಯ ಪತ್ನಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಪೀಣ್ಯದಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಯುವಕನನ್ನು 22 ವರ್ಷದ ಶ್ರೀಮಂತ್ ಎಂದು ಗುರುತಿಸಲಾಗಿದ್ದು, ಈಗ ಪೀಣ್ಯ ಪೊಲೀಸರ ವಶದಲ್ಲಿದ್ದಾನೆ.

    ಏನಿದು ಪ್ರಕರಣ?: ಪೀಣ್ಯ ನಿವಾಸಿಯಾಗಿರುವ ಮಹಿಳೆಯೋರ್ವರು ತನ್ನ ಗೆಳತಿಗೆ ಕರೆ ಮಾಡುವ ವೇಳೆ ನಂಬರ್ ಮಿಸ್ ಆಗಿ ಶ್ರೀಮಂತ್ ಎಂಬಾತನಿಗೆ ಕರೆ ಮಾಡಿದ್ದರು. ಈ ವೇಳೆ ಶ್ರೀಮಂತ್ ಕರೆ ಸ್ವೀಕರಿಸಿ ಮಾತನಾಡಿರಲಿಲ್ಲ. ಬಳಿಕ ರಾತ್ರಿ ಮಹಿಳೆಗೆ ಕರೆ ಮಾಡಿದ್ದ. ಈ ವೇಳೆ ಮಹಿಳೆ `ಕ್ಷಮಿಸಿ ರಾಂಗ್ ನಂಬರ್ ಗೆ ಡಯಲ್ ಆಗಿತ್ತು’ ಎಂದು ಸಂಭಾಷಣೆ ವೇಳೆ ತಿಳಿಸಿದ್ದರು. ಆದ್ರೆ ನಂತರ ಶ್ರೀಮಂತ್ ಮಹಿಳೆಗೆ ತಡರಾತ್ರಿ ಕರೆ ಮಾಡುತ್ತಿದ್ದ. ಬರೋಬ್ಬರಿ ನೂರಕ್ಕೂ ಹೆಚ್ಚು ಕಾಲ್ ಮಾಡಿ ಅಸಭ್ಯವಾಗಿ ವರ್ತಿಸಿದ್ದ. ಅಷ್ಟೇ ಅಲ್ಲದೇ ದೈಹಿಕ ಸಂಪರ್ಕಕ್ಕೆ ಬೇಡಿಕೆ ಇಟ್ಟಿದ್ದ. ಆತನನ್ನು ಅವಾಯ್ಡ್ ಮಾಡಲು ಹೋದಾಗ ಶ್ರೀಮಂತ್ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ.

    ಇಷ್ಟೆಲ್ಲಾ ಆದರೂ ಮಹಿಳೆ ತನ್ನ ಪತಿಗೆ ಈ ಬಗ್ಗೆ ಏನೂ ಹೇಳಿರಲಿಲ್ಲ. ಕೀಚಕ ಶ್ರೀಮಂತ್ ಕೃತ್ಯದಿಂದ ನೊಂದಿದ್ದ ಮಹಿಳೆ ಬಳಿಕ ತನ್ನ ಪತಿಯ ಮುಂದೆ ಯುವಕನ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ.

    ಬಳಿಕ ಪತಿ ಹೇಳಿದಂತೆ ಮಹಿಳೆ ಶ್ರೀಮಂತ್‍ಗೆ ಕರೆ ಮಾಡಿ 8ನೇ ಮೈಲಿಯ ಜಂಕ್ಷನ್ ಬಳಿ ಬರುವಂತೆ ಸೂಚಿಸಿದ್ದರು. ತಾನಿಟ್ಟಿರುವ ಬೇಡಿಕೆ ಒಪ್ಪಿರುವಂತೆ ತಿಳಿದಿದ್ದ ಶ್ರೀಮಂತ್, ಅದರಂತೆ ಕಳೆದ ಬುಧವಾರ ಆಕೆ ಹೇಳಿದ ಸ್ಥಳಕ್ಕೆ ಬಂದಿದ್ದ. ಆತ ಬಂದ ವೇಳೆ ಮಹಿಳೆ ಹಾಗೂ ಆಕೆಯ ಪತಿ ಶ್ರೀಮಂತ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ವೇಳೆ ಶ್ರೀಮಂತ್ ಪರಾರಿಯಾಗಲು ಮುಂದಾಗಿದ್ದು, ಆತನನ್ನು ಹಿಡಿದು ದಂಪತಿ ಅಲ್ಲೇ ಇದ್ದ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಪೀಣ್ಯ ಮಹಿಳೆಯ ಜೊತೆ ಫೋನ್ ನಲ್ಲಿ ಅಸಭ್ಯ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಬಾಬೂರಾವ್ ಮಾತನಾಡಿ, ಮಹಿಳೆ ಸ್ನೇಹಿತರಿಗೆ ಕಾಲ್ ಮಾಡೊದಕ್ಕೆ ಹೋಗಿ ಆರೋಪಿಗೆ ಕಾಲ್ ಹೋಗಿದೆ. ಆದ್ರೆ ಆ ವ್ಯಕ್ತಿ ಪದೇ ಪದೇ ಕಾಲ್ ಮಾಡಿ ಅಸಭ್ಯ ರೀತಿ ಮಾತಾನಾಡ್ತಿದ್ದ. ಮಹಿಳೆ  ಕಳೆದ 28ರಂದು ಪೀಣ್ಯಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ಈ ಹಿನ್ನೆಲೆಯಲ್ಲಿ ಪೊಲಿಸ್ರು ತನಿಖೆ ಮಾಡಿ ಆರೋಪಿಯನ್ನ ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಆರೋಪಿ ಡ್ರೈವರ್ ಕೆಲಸ ಮಾಡ್ತಿದ್ದ ಅಂತಾ ಹೇಳಿದ್ದಾರೆ.

  • ಜೂನ್‍ನಲ್ಲಿ ಬೆಂಗಳೂರಿನ ಪೀಣ್ಯದಲ್ಲಿ ಐಫೋನ್ ಉತ್ಪಾದನೆ ಆರಂಭ!

    ಬೆಂಗಳೂರು: ಆಪಲ್ ಕಂಪೆನಿಯ ಐಫೋನ್ ಉತ್ಪಾದನಾ ಘಟಕ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲವೇ ತಿಂಗಳಿನಲ್ಲಿ ಆರಂಭವಾಗಲಿದೆ. ರಾಜ್ಯದಲ್ಲಿ ಘಟಕ ಸ್ಥಾಪನೆ ನಡೆಸುವಂತೆ ರಾಜ್ಯ ಸರ್ಕಾರ ಐಫೋನ್ ಕಾರ್ಯಾಚರಣೆಯ ಉಪಾಧ್ಯಕ್ಷೆ ಪ್ರಿಯಾ ಬಾಲಸುಬ್ರಮಣಿಯಂ ನೇತೃತ್ವದ ತಂಡದ ಜೊತೆ ಮಾತುಕತೆ ನಡೆಸಿತ್ತು. ಈ ಮಾತುಕತೆ ಫಲ ಕೊಟ್ಟಿದ್ದು ಪೀಣ್ಯದಲ್ಲಿ ಘಟಕ ಸ್ಥಾಪಿಸಲು ಆಪಲ್ ಒಪ್ಪಿಗೆ ನೀಡಿದೆ.

    ಭಾರತಕ್ಕೆ ಅವಶ್ಯ ಇರುವಷ್ಟು ಐ ಫೋನ್ ಗಳನ್ನು ಬೆಂಗಳೂರಿನಲ್ಲಿ ತಯಾರಿಸಲು ಆಪಲ್ ಮುಂದಾಗಿದೆ. ಆದರೆ ಯಾವಾಗ ಈ ಘಟಕ ಆರಂಭವಾಗಲಿದೆ ಎನ್ನುವ ಮಾಹಿತಿ ಸ್ಟಷ್ಟವಾಗಿ ಸಿಕ್ಕಿಲ್ಲ. ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಜೂನ್ ತಿಂಗಳಿನಲ್ಲಿ ಘಟಕ ಆರಂಭವಾಗುವ ಸಾಧ್ಯತೆಯಿದೆ.

    ಆಪಲ್ ಪ್ರಸ್ತುತ ಈಗ ಐಫೋನ್‍ಗಳನ್ನು ತೈವಾನ್ ಮೂಲದ ಫಾಕ್ಸ್ ಕನ್ ಮತ್ತು ಪೆಗಟ್ರಾನ್ ಕಂಪೆನಿ ತಯಾರಿಸುತ್ತದೆ. ಈ ಎರಡೂ ಕಂಪೆನಿಗಳ ಘಟಕಗಳು ಚೀನಾದಲ್ಲಿದ್ದು ಇಲ್ಲಿ ಎಲ್ಲ ಭಾಗಗಳನ್ನು ಜೋಡಿಸಿ ಮಾರುಕಟ್ಟೆಗೆ ಬಿಡಲಾಗುತ್ತದೆ.

    ಐಫೋನ್ ಒಂದೊಂದು ಭಾಗಗಳನ್ನು ಒಂದೊಂದು ಕಂಪೆನಿ ತಯಾರಿಸುತ್ತದೆ. 3ಜಿ, 4ಜಿ, ಎಲ್‍ಟಿಇ ನೆಟ್‍ವರ್ಕ್ ಚಿಪ್ ಕ್ವಾಲಕಂ ಕಂಪೆನಿ ತಯಾರಿಸಿದರೆ ಎ ಸಿರೀಸ್ ಪ್ರೊಸೆಸರ್ ಸ್ಯಾಮ್ ಸಂಗ್ ತಯಾರಿಸುತ್ತದೆ. ಬ್ಯಾಟರಿ ಸನ್‍ವೊಡಾ/ ಸ್ಯಾಮ್ ಸಂಗ್ ಕಂಪೆನಿ ತಯಾರಿಸಿದರೆ,ಗ್ಲಾಸ್ ಸ್ಕ್ರೀನ್ ಮತ್ತೊದು ಕಂಪನಿ ತಯಾರಿಸುತ್ತದೆ. ಈ ಎಲ್ಲ ಕಂಪೆನಿಗಳ ಭಾಗಗಳು ಅಂತಿಮವಾಗಿ ಫಾಕ್ಸ್ ಕನ್ ಫ್ಯಾಕ್ಟರಿಯಲ್ಲಿ ಜೋಡನೆಯಾಗಿ ಮಾರುಕಟ್ಟೆಗೆ ಬರುತ್ತದೆ.