Tag: ಪೀಠಾಧಿಪತಿ

  • ಪೀಠಾಧ್ಯಕ್ಷ ಸ್ಥಾನದಿಂದ ಮುರುಘಾಶ್ರೀ ವಜಾಕ್ಕೆ ಆಗ್ರಹ – ನೂತನ ಪೀಠಾಧಿಪತಿ ನೇಮಕಕ್ಕೆ ಹೆಚ್ಚಿದ ಒತ್ತಡ

    ಪೀಠಾಧ್ಯಕ್ಷ ಸ್ಥಾನದಿಂದ ಮುರುಘಾಶ್ರೀ ವಜಾಕ್ಕೆ ಆಗ್ರಹ – ನೂತನ ಪೀಠಾಧಿಪತಿ ನೇಮಕಕ್ಕೆ ಹೆಚ್ಚಿದ ಒತ್ತಡ

    ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ 2ನೇ ಪೋಕ್ಸೋ ಕೇಸ್ ದಾಖಲಾಗುತ್ತಿದ್ದಂತೆ, ಪೀಠಾಧಿಪತಿಗಳ ಬದಲಾವಣೆ ಕೂಗು ಹೆಚ್ಚಾಗಿದೆ. ನಿನ್ನೆಯಷ್ಟೇ ಸಿಎಂ ಬೊಮ್ಮಾಯಿ (Basavaraj Bommai) ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (B S Yediyurappa) ಎದುರು ವೀರಶೈವ ಲಿಂಗಾಯತರು ಪ್ರಸ್ತಾವನೆ ಮುಂದಿಟ್ಟ ಬೆನ್ನಲ್ಲೇ ಇದೀಗ ನಾನಾ ಸುದ್ದಿಗಳು ಮಠದ ಆವರಣದಲ್ಲಿ ಹರಡಿದೆ. ಸರ್ಕಾರ ಕೂಡ ಶ್ರೀಗಳ ಬದಲಾವಣೆ ಬಗ್ಗೆ ಪರೋಕ್ಷ ಸುಳಿವು ನೀಡಿದ್ದು, ಕೋರ್ಟ್ ಬೆಳವಣಿಗೆಗಳನ್ನು ಕಾದು ನೋಡುತ್ತಿದೆ.

    ನೂತನ ಪೀಠಾಧಿಪತಿಗಳ ರೇಸ್‍ನಲ್ಲಿ ಆರು ಸ್ವಾಮೀಜಿಗಳಿದ್ದಾರೆ. ಎಸ್‍ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎಸ್ ಬಿ ವಸ್ತ್ರದಮಠಗೆ ಪವರ್ ಆಫ್ ಅಟಾರ್ನಿ ನೀಡಲಾಗಿದೆ. ಮುರುಘಾ ಶ್ರೀಗಳು ಅಧಿಕೃತವಾಗಿ ನೋಟರಿ ಮಾಡಿ ಪವರ್ ಆಫ್ ಅಟಾರ್ನಿ ನೀಡಿದ್ದಾರೆ. ಹೈಕೋರ್ಟ್ ಸೂಚನೆಯಂತೆ ಎಸ್ ಜೆ ಎಂ ವಿದ್ಯಾಪೀಠದ ಚೆಕ್ ಸಹಿ ಸೇರಿ ವಿವಿಧ ಆಡಳಿತಾತ್ಮಕ ನಿರ್ಧಾರಕ್ಕಾಗಿ ಪವರ್ ಆಫ್ ಅಟಾರ್ನಿ ನೀಡಲಾಗಿದೆ.

    ಹೊಸ ಪೀಠಾಧಿಪತಿ ಯಾರಾಗ್ತಾರೆ?
    > ಮಲ್ಲಿಕಾರ್ಜುನ ದೇವರು- ಸರ್ಪಭೂಷಣ ಮಠ, ಬೆಂಗಳೂರು
    > ಮಹಾಂತ ರುದ್ರೇಶ್ವರ ಶ್ರೀ- ಹೆಬ್ಬಾಳ ಮಠ
    > ಬಸವಪ್ರಭು ಶ್ರೀ- ವಿರಕ್ತ ಮಠ, ದಾವಣಗೆರೆ
    > ಶಾಂತವೀರ ಶ್ರೀ- ಗುರುಮಿಠ್ಕಲ್ ಮಠ, ಯಾದಗಿರಿ
    > ಶಿವಬಸವ ಶ್ರೀ- ಅಥಣಿ ಮಠ, ಬೆಳಗಾವಿ
    > ಸಿದ್ಧರಾಮ ಶ್ರೀ- ಇಳಕಲ್ ಮಠ

    ಮುರುಘಾ ಶ್ರೀ (Murugha Shree) ಗಳ ವಿರುದ್ಧ ಎರಡನೇ ಎಫ್‍ಐಆರ್ ದಾಖಲಾಗ್ತಿದ್ದಂತೆ ಮುರುಘಾಮಠದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಇರುವ ವಿಚಾರ ದೊಡ್ಡ ಸಂಚಲನ ಸೃಷ್ಟಿಸಿತ್ತು. ಆ ಕೇಸ್‍ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಈ ಮಗುವಿನಂತೆ ಅನೇಕರು ಮಠದಲ್ಲಿದ್ದಾರೆಂಬ ಸ್ಪೋಟಕ ಮಾಹಿತಿಯನ್ನು ಮಠದ ಮುಂಭಾಗದಲ್ಲಿ ಅಂಗಡಿ ನಡೆಸುವ ಫೈರೋಜಾ ಎಂಬ ಮಹಿಳೆ ಹೊರಹಾಕಿದ್ದಾರೆ. ಈ ಹಿಂದೆಯೂ ಕಳೆದ 17-18 ವರ್ಷಗಳ ಹಿಂದೆಯೂ ಓರ್ವ ಬಾಲಕಿ ಮಠದ ಮುಭಾಗದ ಕೆರೆ ಸಮೀಪ ಪತ್ತೆಯಾಗಿದ್ಳು. ಆಕೆಗೆ ನಿರ್ಣಯ ಎಂಬ ಹೆಸರಿಲಾಗಿತ್ತು. ಆದ್ರೆ ಈಗ ಎಲ್ಲಿದ್ದಾಳೆಂಬ ಮಾಹಿತಿ ಸಹ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಮುರುಘಾ ಮಠಕ್ಕೆ ಹೊಸ ಶ್ರೀಗಳ ನೇಮಕ ಕಾನೂನು ಪ್ರಕಾರ ನಿರ್ಧಾರ: ಬೊಮ್ಮಾಯಿ

    ಮಠದ ಬಳಿ ಈ ಹಿಂದೆ ಅನೇಕ ಬಾರಿ ನವಜಾತ ಶಿಶುಗಳನ್ನು ಎಸೆದು ಹೋಗ್ತಿದ್ದ ಹಿನ್ನಲೆಯಲ್ಲಿ ಅಂದಿನಿಂದ ಬಸವ ಮಕ್ಕಳೆಂಬ ಹೆಸರಲ್ಲಿ ಅಂತಹ ಮಕ್ಕಳನ್ನು ಪಾಲನೆ ಮಾಡುವ ಸಂಪ್ರದಾಯವು ರೂಡಿಯಲ್ಲಿದ್ಯಂತೆ. ಆದ್ರೆ ಶಿವಮೂರ್ತಿ ಮುರುಘಾ ಶರಣರು ಪೀಠಾಧಿಪತಿಯಾದ ಬಳಿಕ ಮಠದ ದ್ವಾರ ಬಾಗಿಲಲ್ಲೇ ಹೈಟೆಕ್ ತೊಟ್ಟಿಲನ್ನು ಇಡಸಲಾಗಿದೆ. ಆದರೆ ಆ ತೊಟ್ಟಿಲಿಂದ ಎಷ್ಟು ಜನ ಮಕ್ಕಳು ಮಠಕ್ಕೆ ಸೇರಿವೆ ಎಂಬ ಬಗ್ಗೆ ಯಾವ್ದೇ ದಾಖಲೆಗಳು ಇಲ್ಲದಿರೋದು ಬಾರಿ ಅನುಮಾನಕ್ಕೆ ಕಾರಣವಾಗಿದೆ.

    ಮಠದ ವಸತಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ತನ್ನಿಬ್ಬರು ಮಕ್ಕಳ ಜೊತೆ ಇನ್ನಿಬ್ಬರು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ ಅಂತ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಆ ಇಬ್ಬರು ಮಕ್ಕಳ ಜೊತೆ ಮಕ್ಕಳ ಕಲ್ಯಾಣ ಸಮಿತಿ ಆಪ್ತ ಸಮಾಲೋಚನೆ ನಡೆಸಿದೆ. ಈ ವೇಳೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಅಂತ ಆ ಮಕ್ಕಳು ಹೇಳಿರೋದಾಗಿ ತಿಳಿದುಬಂದಿದೆ. 2ನೇ ಫೋಕ್ಸೋ ಕೇಸಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆಯ ತನಿಖಾಧಿಕಾರಿ ಸಿಪಿಐ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಚಿತ್ರದುರ್ಗಕ್ಕೆ ಸಂತ್ರಸ್ತ ಬಾಲಕಿಯರನ್ನ ಕರೆತಂದರೆ ಸಂತ್ರಸ್ತ ಬಾಲಕಿಯರಿಗೆ ವೈದ್ಯಕೀಯ ಪರೀಕ್ಷೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಮುರುಘಾಮಠಕ್ಕೆ ಕರೆತಂದು ಸ್ಥಳ ಮಹಜರು ನಡೆಸುವ ಸಾಧ್ಯತೆಯೂ ಇದೆ.

    Live Tv
    [brid partner=56869869 player=32851 video=960834 autoplay=true]

  • ಶಿರೂರು ಮಠದ ಪೀಠಾಧಿಪತಿಯಾಗಿ ಉಡುಪಿ ವಿದ್ಯೋದಯ ಶಾಲೆಯ ಅನಿರುದ್ಧ್ ಆಯ್ಕೆ

    ಶಿರೂರು ಮಠದ ಪೀಠಾಧಿಪತಿಯಾಗಿ ಉಡುಪಿ ವಿದ್ಯೋದಯ ಶಾಲೆಯ ಅನಿರುದ್ಧ್ ಆಯ್ಕೆ

    ಉಡುಪಿ: ವಿದ್ಯೋದಯ ಪ್ರೌಢ ಶಾಲೆಯ ವಿದ್ಯಾರ್ಥಿ ಅನಿರುದ್ಧ್ ಸರಳತ್ತಾಯರನ್ನು ಶಿರೂರು ಮಠದ ನೂತನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ. ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣನಾಗಿರುವ ಅನಿರುದ್ಧ್ ಸರಳತ್ತಾಯಗೆ ಈಗ ಕೇವಲ 16 ವರ್ಷಗಳು.

    ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಉಡುಪಿಯ ಶೀರೂರು ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಅನಿರುದ್ಧ್ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ನಿಡ್ಲೆ ಮೂಲದವರಾಗಿದ್ದು, ಮೇ 11 ರಿಂದ 14ರ ವರೆಗೆ ಪಟ್ಟಾಭಿಷೇಕ ಪ್ರಕ್ರಿಯೆ ಉತ್ತರ ಕನ್ನಡ ಜಿಲ್ಲೆಯ ಸೋಂದಾ ಮಠದಲ್ಲಿ ನಡೆಯಲಿದೆ.

    ಅಷ್ಟಮಠಗಳಲ್ಲಿ ಬಾಲಸನ್ಯಾಸ ಸ್ವೀಕಾರ ಸಂಪ್ರದಾಯ ಇದೆ. ಹಿಂದಿನ ಸಂಪ್ರದಾಯದ ಪ್ರಕಾರವೇ ವಟುವಿನ ಆಯ್ಕೆ ನಡೆದಿದೆ. ಅಷ್ಟಮಠಗಳ ಯತಿಗಳಿಂದ ಸನ್ಯಾಸ ವಿಚಾರದಲ್ಲಿ ಯಾವುದೇ ಸಂವಿಧಾನ ರಚನೆಯಾಗಿಲ್ಲ. ಇಂತಿಷ್ಟೇ ವಯಸ್ಸು ಎಂಬುದು ನಿಗದಿಯಾಗಿಲ್ಲ. ಎಲ್ಲ ಯತಿಗಳ ಗಮನಕ್ಕೆ ತಂದು ಶಿಷ್ಯನ ಆಯ್ಕೆ ಮಾಡಿದ್ದೇವೆ ಎಂದು ಸ್ವಾಮೀಜಿ ಹೇಳಿದರು.

    ಶ್ರೀ ಕೃಷ್ಣನನ್ನು ಮುಟ್ಟಿ ಪೂಜೆ ಮಾಡುವ ಆಸೆ. ಇನ್ನೂ ಹಲವು ವರ್ಷ ನಾನು ಅಧ್ಯಯನ ಮಾಡಬೇಕಾಗಿದೆ, ಹತ್ತು ವರ್ಷ ಶಿಕ್ಷಣ ಮಾಡಿದ್ದೇನೆ ಮುಂದೆ ವೇದಾಧ್ಯಯನಕ್ಕೆ ಸಮಯ ಮೀಸಲಿಡಬೇಕಾಗುತ್ತದೆ. ಗುರುಗಳ ಮಾರ್ಗದರ್ಶನದಂತೆ ವಿದ್ವಾಂಸರ ಸೂಚನೆಯಂತೆ ಪಾಠ, ಪ್ರವಚನಗಳಲ್ಲಿ ತಲ್ಲೀನನಾಗುತ್ತೇನೆ ಎಂದು ವಟು ಅನಿರುದ್ಧ್ ಹೇಳಿದರು.

    ಇದೊಂದು ಅವಕಾಶ, ಮಗನಿಗೆ ಸನ್ಯಾಸ ಯೋಗ ಇದ್ದು, ಹಲವು ಕಡೆ ಜಾತಕ ತೋರಿಸಿ ಸಲಹೆ ಪಡೆದು ಈ ತೀರ್ಮಾನಕ್ಕೆ ಬರಲಾಗಿದೆ. ಶಿರೂರು ಮಠದ ಪೀಠಕ್ಕೆ ನನ್ನ ಮಗ ಉತ್ತರಾಧಿಕಾರಿ ಆಗುತ್ತೇನೆ ಎಂದರೆ ಸಂತಸವಾಗುತ್ತದೆ. ಈ ವಿಚಾರದಲ್ಲಿ ನಮ್ಮ ಕುಟುಂಬದ ಯಾವುದೇ ಒತ್ತಾಯ ಇಲ್ಲ. ಅನಿರುದ್ಧ್ ನ ಆಸಕ್ತಿಯ ಪ್ರಕಾರ ಎಲ್ಲವೂ ನಡೆಯುತ್ತಿದೆ. ನಾನು ಸನ್ಯಾಸಿ ಆಗುತ್ತೇನೆ ಎಂದಾಗ ಸಂಸಾರ ಅಂದರೆ ಏನು ಸನ್ಯಾಸತ್ವ ಎಂದರೆ ಏನು ಎಂಬ ಬಗ್ಗೆ ಮಾಹಿತಿ ನೀಡಿದ್ದೇನೆ. ನಂತರ ಕೂಡ ಆತ ತನ್ನ ಇಚ್ಛೆಯನ್ನು ಬದಲು ಮಾಡಲಿಲ್ಲ ಎಂದು ಅನಿರುದ್ಧ್ ತಂದೆ ಉದಯ ಕುಮಾರ್ ಸರಳತೆಯ ಹೇಳಿದರು.

    ಈ ಸಂದರ್ಭದಲ್ಲಿ ವಟು ಅನಿರುದ್ಧ್ ತಾಯಿ ಶ್ರೀವಿದ್ಯಾ, ತಂಗಿ ಹಿರಣ್ಮಯಿ ಸೋದೆ ಮತ್ತು ಶಿರೂರು ಮಠದ ಭಕ್ತವೃಂದ ಉಪಸ್ಥಿತವಿತ್ತು. 16 ವರ್ಷದ ಬಾಲಕನಿಗೆ ಸನ್ಯಾಸತ್ವ ನೀಡಬಾರದು ಎಂದು ವೃಂದಾವನಸ್ಥರಾದ ಲಕ್ಷ್ಮೀವರತೀರ್ಥ ಸ್ವಾಮೀಜಿ ಪೂರ್ವಾಶ್ರಮದ ಸಹೋದರರು ತಗಾದೆ ಎತ್ತಿದ್ದರು. ಅವರ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯ ಇಲ್ಲ ಎಂದು ಸೋದೆ ಸ್ವಾಮೀಜಿ ಹೇಳಿದ್ದಾರೆ.

  • ಶೀರೂರು ಮಠಕ್ಕೆ ನಾಳೆ ನೂತನ ಪೀಠಾಧಿಪತಿ ಘೋಷಣೆ- ಪೂರ್ವಾಶ್ರಮ ಸಹೋದರರ ಆಕ್ಷೇಪ

    ಶೀರೂರು ಮಠಕ್ಕೆ ನಾಳೆ ನೂತನ ಪೀಠಾಧಿಪತಿ ಘೋಷಣೆ- ಪೂರ್ವಾಶ್ರಮ ಸಹೋದರರ ಆಕ್ಷೇಪ

    ಉಡುಪಿ: ಸೋದೆ ಮಠಾಧೀಶರಿಂದ ಬುಧವಾರ ಶೀರೂರು ಮಠಕ್ಕೆ ನೂತನ ಪೀಠಾಧಿಪತಿ ಘೋಷಣೆ ಆಗಲಿದೆ. ನೂತನ ಪೀಠಾಧಿಪತಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ, ವೃಂದಾವನಸ್ಥ ಲಕ್ಷ್ಮಿವರ ತೀರ್ಥ ಶ್ರೀಗಳ ಸಹೋದರರಿಂದ ಆಕ್ಷೇಪ ವ್ಯಕ್ತವಾಗಿದೆ.

    ಲಕ್ಷ್ಮೀವರತೀರ್ಥ ಸ್ವಾಮೀಜಿ 2018ರ ಜುಲೈ 19 ರಂದು ಸಂಶಯಾಸ್ಪದ ರೀತಿಯಲ್ಲಿ ನಿಧನರಾಗಿದ್ದರು. ಆನಂತರ ಪೀಠ ಖಾಲಿಯಿತ್ತು. ದ್ವಂದ್ವ ಮಠವಾಗಿರುವ ಸೋದೆ ಮಠ ಶಿರೂರು ಮಠದ ನಿರ್ವಹಣೆ ಮಾಡುತ್ತಿದ್ದು, ಮಠದ ವ್ಯವಹಾರ, ಆಸ್ತಿಪಾಸ್ತಿ, ತೆರಿಗೆ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲ. ಈ ಬಗ್ಗೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ ಎಂದು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಹೋದರ ಲಾತವ್ಯ ಆಚಾರ್ಯ ಹೇಳಿದ್ದಾರೆ.

    ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಪೀಠಾಧಿಪತಿ ನೇಮಕ ಸರಿಯಲ್ಲ. ಅದರಲ್ಲೂ ಎಳೆಯ ವಯಸ್ಸಿನ ವಟುವನ್ನು ನಾಳೆ ಪೀಠಕ್ಕೆ ಘೋಷಣೆ ಮಾಡುತ್ತಿದ್ದಾರೆ. ಕನಿಷ್ಠ ಹತ್ತು ವರ್ಷದ ವೇದ ಅಧ್ಯಯನ ಮಾಡಿದವರನ್ನು ಪೀಠಾಧಿಪತಿ ಮಾಡಬೇಕು. ನೂತನ ಪೀಠಾಧಿಪತಿ ನೇಮಕಕ್ಕೆ ನಮ್ಮ ಸಮ್ಮತಿ ಇಲ್ಲ. ಈ ಬಗ್ಗೆ ಅಷ್ಟ ಮಠಾಧೀಶರ ಗಮನಕ್ಕೂ ತಂದಿದ್ದೇವೆ ಎಂದರು.

    ಶೀರೂರು ಶ್ರೀ ನಿಧನ ನಂತರ ಅನೇಕ ಅಪವಾದ ಬಂದವು. ಆಸ್ತಿ ವಿಚಾರದಲ್ಲಿ ವ್ಯವಹಾರ ಸರಿಯಿಲ್ಲ. ಪಾರದರ್ಶಕದ ಕೊರತೆ ಕಂಡುಬಂದಿದೆ. ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಮೊಕದ್ದಮೆ ಜಾರಿಯಲ್ಲಿದೆ. 17 ವರ್ಷದ ಹುಡುಗನನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುವುದು ಸರಿಯಲ್ಲ. 10 ವರ್ಷ ಯೋಗ್ಯ ವಿದ್ವತ್ ಬೇಕಿತ್ತು. ಸೋದೆ ಮಠದ ವ್ಯವಹಾರ ನಡೆಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

    ಮತ್ತೋರ್ವ ಸಹೋದರ ವಾದಿರಾಜ ಆಚಾರ್ಯ ಮಾತನಾಡಿ, ದೊಡ್ಡ ಹುದ್ದೆ ಸ್ವೀಕರಿಸುವಾಗ ಜ್ಞಾನ ಪರಿಪೂರ್ಣ ಆಗಿರಬೇಕು. ಒಂದು ಕಾಲದಲ್ಲಿ ಬಾಲ ಸನ್ಯಾಸ ನಡೆದಿದೆ. ಈಗ ಒಪ್ಪಲು ತಯಾರಿಲ್ಲ. ಮೂರು ವರ್ಷದ ಹಿಂದೆ ಎಲ್ಲಾ ಪೀಠಾಧಿಪತಿಗಳ ಮಾತು ಕತೆಯಾಗಿತ್ತು. ದಾವೆ ಇರುವಾಗ ಪೀಠಾಧಿಪತಿ ನೇಮಕ ಸರಿಯಲ್ಲ ಎಂದರು. ಶೀರೂರು ಸ್ವಾಮೀಜಿ ವೃಂದಾವನಸ್ಥರಾಗಿ ಎರಡು ತಿಂಗಳೊಳಗೆ ನೂತನ ಪೀಠಾಧಿಪತಿ ನೇಮಕವಾಗಬೇಕಿತ್ತು. ಒಂದು ಪರ್ಯಾಯ ದಾಟಿ ಹೋಗಿದೆ. ಯತಿಯಿಲ್ಲದೆ ಎರಡೂವರೆ ವರ್ಷ ಕಳೆದು ಹೋದದ್ದು ಇತಿಹಾಸದಲ್ಲೇ ಇದೇ ಮೊದಲು ಎಂದರು.

  • ಸುಪ್ರಸಿದ್ಧ ಶರಣಬಸವೇಶ್ವರ ಪೀಠಕ್ಕೆ 2 ವರ್ಷದ ಚಿರಂಜೀವಿ ನೂತನ ಪೀಠಾಧಿಪತಿ

    ಸುಪ್ರಸಿದ್ಧ ಶರಣಬಸವೇಶ್ವರ ಪೀಠಕ್ಕೆ 2 ವರ್ಷದ ಚಿರಂಜೀವಿ ನೂತನ ಪೀಠಾಧಿಪತಿ

    ಕಲಬುರಗಿ: ಜಿಲ್ಲೆಯ ಸುಪ್ರಸಿದ್ಧ ಶರಣಬಸವೇಶ್ವರ ಸಂಸ್ಥಾನಕ್ಕೆ ನೂತನ ಪೀಠಾಧಿಪತಿಯ ನೇಮಕ ಮಾಡಲಾಗಿದೆ. ತಮ್ಮ ಎರಡು ವರ್ಷದ ಪುತ್ರ ಚಿರಂಜೀವಿಯನ್ನು 9ನೇ ಪೀಠಾಧಿಪತಿಯಾಗಿ ಡಾ. ಶರಣಬಸಪ್ಪ ಅಪ್ಪಾ ಅವರು ಪೀಠದಲ್ಲಿ ಕೂರಿಸಿದ್ದಾರೆ.

    ಪೀಠಾಲಂಕಾರ ಮಾಡುವ ಮುನ್ನ ಧಾರ್ಮಿಕ ಕಾರ್ಯ ನೆರವೇರಿಸಿ ಬೆಳ್ಳಿ ಕಿರಿಟ ತೊಡಿಸಿ, ಬಳಿಕ ಪೀಠದ ಮೇಲೆ ಮಗನನ್ನು ಡಾ. ಶರಣಬಸವಪ್ಪ ಅಪ್ಪಾ ಅವರು ಕೂರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಮತ್ತು ಸಂಸ್ಥಾನದ ಭಕ್ತರು ಉಪಸ್ಥಿತರಿದ್ದರು. 82 ವಯಸ್ಸಿಗೆ ಡಾ. ಶರಣಬಸಪ್ಪ ಅಪ್ಪಾ ಅವರು ಮಗುವನ್ನು ಪಡೆದು ಇಡೀ ರಾಜ್ಯವೇ ಕಲಬುರಗಿಯತ್ತ ನೋಡುವಂತೆ ಮಾಡಿದ್ದರು. ಇದನ್ನೂ ಓದಿ: 82ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆಯಾದ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಶರಣಬಸಪ್ಪ ಅಪ್ಪಾ

    ಇದೀಗ ಅದೇ ಬಾಲಕನನ್ನು ಪೀಠಾಧಿಪತಿಯಾಗಿ ಮಾಡಲಾಗಿದೆ. ಕಲಬುರಗಿ ನಗರದಲ್ಲಿರುವ ಈ ಮಠದ ಅಡಿ ಹಲವು ಶಿಕ್ಷಣ ಸಂಸ್ಥೆಗಳು ನಡೆಯುತ್ತಿದ್ದು, ಅಂದಾಜು 8 ಸಾವಿರ ಕೋಟಿಗೂ ಅಧಿಕ ಆಸ್ತಿಯನ್ನು ಈ ಶಿಕ್ಷಣ ಸಂಸ್ಥೆ ಹೊಂದಿದೆ.