Tag: ಪಿ ಯು ಸಿ

  • 1 ತಿಂಗಳ ನಂತ್ರ ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಹೊರಹಾಕಿದ್ರು!

    1 ತಿಂಗಳ ನಂತ್ರ ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿನಿಯನ್ನು ಕಾಲೇಜಿನಿಂದ ಹೊರಹಾಕಿದ್ರು!

    ಕಾರವಾರ: ಕಡಿಮೆ ಅಂಕ ಬಂದಿದೆ ಎಂದು ಪ್ರಥಮ ಪಿಯುಸಿಗೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿನಿಯನ್ನು ಕಾಲೇಜಿನಿಂದಲೇ ಹೊರ ಹಾಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾದಲ್ಲಿ ನಡೆದಿದೆ.

    ಕರೋಲೀನಾ ಎನ್ನುವ ವಿದ್ಯಾರ್ಥಿನಿಯು ಕೈಗಾ ಅಣುಶಕ್ತಿ ಕೇಂದ್ರೀಯ ವಿದ್ಯಾಲಯದ ಶಾಲೆಯಲ್ಲಿ 10ನೇ ತರಗತಿಯಲ್ಲಿ ಶೇಕಡ 43ರಷ್ಟು ಅಂಕ ಗಳಿಸಿ ಪಾಸಾಗಿದ್ದಳು. ವಿದ್ಯಾರ್ಥಿನಿ ಇನ್ನು ಇದೇ ಸಂಸ್ಥೆಗೆ ಸೇರಿದ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆದಿದ್ದಳು. ಇತ್ತೀಚೆಗೆ 10ನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದಿದ್ದಾಳೆ ಎಂಬ ಕಾರಣ ನೀಡಿ ಕಾಲೇಜಿನಿಂದ ಪ್ರಾಂಶುಪಾಲರು ತೆಗೆದುಹಾಕಿದ್ದಾರೆ.

    ಏಕಾಏಕಿ ಕಾಲೇಜಿನ ತೀರ್ಮಾನದಿಂದಾಗಿ ವಿದ್ಯಾರ್ಥಿನಿಯು ತೊಂದರೆ ಅನುಭವಿಸಿದ್ದಾಳೆ. ವಿದ್ಯಾರ್ಥಿನಿ ಕುಟುಂಬವು ಕೈಗಾ ಅಣು ಸ್ಥಾವರಕ್ಕೆ ಭೂಮಿ ನೀಡಿ ನಿರಾಶ್ರಿತ ಕುಟುಂಬವಾಗಿದೆ. ಹೀಗಾಗಿ ನಿರಾಶ್ರಿತ ಕುಟುಂಬಕ್ಕೆ ಕಡ್ಡಾಯವಾಗಿ ದಾಖಲಾತಿ ಮಾಡಿಕೊಳ್ಳಬೇಕು ಎಂಬ ನಿಯಮವಿದ್ದರೂ, ಒಂದು ತಿಂಗಳವರೆಗೆ ವಿದ್ಯಾರ್ಥಿಯನ್ನು ದಾಖಲೆ ಮಾಡಿಕೊಂಡು ನಂತರ ಹೊರಹಾಕಿದ್ದಾರೆ. ಕೈಗಾ ಉದ್ಯೋಗಿಗಳ ಮಕ್ಕಳು ಕೂಡ ಕಮ್ಮಿ ಅಂಕ ಬಂದಿದ್ದರೂ, ಅವರಿಗೆ ಮಾತ್ರ ಪ್ರವೇಶ ನೀಡಿ ಅನ್ಯಾಯ ಎಸಗಿ, ವಿದ್ಯಾರ್ಥಿನಿಯ ಭವಿಷ್ಯದ ಜೊತೆ ಆಡಳಿತ ವರ್ಗ ಚೆಲ್ಲಾಟವಾಡುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.

    ಕಾಲೇಜಿನ ನಿರ್ಧಾರವನ್ನು ವಿರೋಧಿಸಿದ ಮಾಜಿ ಶಾಸಕ ಸತೀಶ್ ಸೈಲ್ ಹಾಗೂ ಸ್ಥಳೀಯರೊಂದಿಗೆ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಬೇರೆ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ದಿನಾಂಕ ಮುಗಿದಿದ್ದು, ಬೇರೆ ಕಾಲೇಜಿನಲ್ಲಿ ಪ್ರವೇಶ ಸಿಗದೇ ವಿದ್ಯಾರ್ಥಿನಿಯು ಒಂದು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡದಂತಹ ಪರಿಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದರು.

  • ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ – ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಲಿದೆ ಎಕ್ಸಾಂ

    ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ – ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಲಿದೆ ಎಕ್ಸಾಂ

    ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇಂದಿನಿಂದ ಪ್ರಾರಂಭವಾಗಲಿದೆ. ಪಿಯುಸಿ ಪರೀಕ್ಷೆಯಂತೆಯೇ ಹೆಚ್ಚಿನ ಭದ್ರೆತಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆ ಮೇಲೆ ಹದ್ದಿನ ಕಣ್ಣಿಡಲಾಗಿದೆ.

    ಮೊನ್ನೆಯಷ್ಟೆ ಪಿಯುಸಿ ಎಕ್ಸಾಂ ಮುಗಿದ ನಂತ್ರ ಇಂದಿನಿಂದ ವಿದ್ಯಾರ್ಥಿ ಜೀವನದ ಮತ್ತೊಂದು ಪ್ರಮುಖ ಪರೀಕ್ಷೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭವಾಗಲಿದೆ. ಮೊದಲ ದಿನವಾದ ಇಂದು ಪ್ರಥಮ ಭಾಷೆಯ ಪರೀಕ್ಷೆಗಳು ನಡೆಯಲಿದ್ದು, ಏಪ್ರಿಲ್ 12ಕ್ಕೆ ಪರೀಕ್ಷೆ ಮುಕ್ತಾಯವಾಗಲಿದೆ. ಬೆಳಗ್ಗೆ 9.30 ರಿಂದ 12.30ರ ಒಳಗೆ ಪರೀಕ್ಷೆ ನಡೆಯಲಿದೆ.

    ಈ ಬಾರಿ ಒಟ್ಟು 877174 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದ್ರಲ್ಲಿ 4,69,835 ಬಾಲಕರು ಹಾಗೂ 4 ಲಕ್ಷದ 7 ಸಾವಿರ 339 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 2770 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

    ಕಳೆದ ಹಲವು ವರ್ಷಗಳಿಂದ ಇದ್ದ ಪರೀಕ್ಷಾ ವಿಧಾನವನ್ನು ಈ ಬಾರಿ ಬದಲಾವಣೆ ಮಾಡಲಾಗಿದೆ. ಉತ್ತರ ಪತ್ರಿಕೆಯಲ್ಲೇ ಪ್ರಶ್ನೆಗಳು ಇರುತ್ತಿದ್ದ ವಿಧಾನ ಬದಲಾಯಿಸಿ ಪ್ರತ್ಯೇಕವಾಗಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ನೀಡಲಾಗುತ್ತಿದೆ. ಪಿಯುಸಿ ಪರೀಕ್ಷೆಯಂತೆ ಕರ್ನಾಟಕ ಸೆಕ್ಯೂರ್ ಎಕ್ಸಾಂಮಿನೇಷನ್ ಸಿಸ್ಟಮ್ ಪ್ರೋಗ್ರಾಂನ್ನ ಅಳವಡಿಸಿಕೊಂಡಿದ್ದು, ಸಿಸಿಟಿವಿ ಕಣ್ಗಾವಲುಗಳಲ್ಲಿ ಪರೀಕ್ಷೆ ನಡೆಯಲಿದೆ ಅಂತಾ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತೆ ಸೌಜನ್ಯ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಭದ್ರಕೋಟೆ ಮಧ್ಯೆ ಇಂದಿನಿಂದ ಪರೀಕ್ಷೆ ನಡೆಯಲಿದ್ದು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ನಮ್ಮ ಕಡೆಯಿಂದ ಕೆಲವು ಟಿಪ್ಸ್ ಇಲ್ಲಿದೆ.

    * ಪರೀಕ್ಷಾ ಹಿಂದಿನ ದಿಣ ಚೆನ್ನಾಗಿ ನಿದ್ರೆ ಮಾಡಿ. ನಿದ್ರೆ ಕೆಟ್ಟು ಓದಬೇಡಿ
    * ಹಾಲ್ ಟಿಕೆಟ್, ಪರೀಕ್ಷಾ ಸಾಮಾಗ್ರಿಗಳನ್ನ ಹಿಂದಿನ ದಿನವೇ ಜೋಡಿಸಿಕೊಳ್ಳಿ
    * ಪರೀಕ್ಷಾ ಕೇಂದ್ರಕ್ಕೆ 20 ನಿಮಿಷ ಮುಂಚಿತವಾಗಿ ಹೋಗಿ ನಿಮ್ಮ ಸೆಂಟರ್ ಖಚಿತಪಡಿಸಿಕೊಳ್ಳಿ
    * ಪ್ರಶ್ನೆ ಪತ್ರಿಕೆ ನೀಡಿದ ಬಳಿಕ 15 ನಿಮಿಷ ವಿವರವಾಗಿ ಓದಿ ಅರ್ಥ ಮಾಡಿಕೊಳ್ಳಿ
    * ಮೊದಲ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ. ನಂತರ ಉಳಿಕೆ ಪ್ರಶ್ನೆಗಳಿಗೆ ಉತ್ತರಿಸಿ
    * ಉತ್ತರ ಬರೆದ ನಂತ್ರ ಕೊನೆಯದಾಗಿ ನೋಂದಣಿ ಸಂಖ್ಯೆ,ಸೂಚಿಸಿದ ಮಾಹಿತಿ ನಮೂದಿಸಿರುವ ಬಗ್ಗೆ ಖಚಿತ ಪಡಿಸಿಕೊಳ್ಳಿ

    ಒಟ್ಟಾರೆ ಯಾವುದೇ ಅಕ್ರಮಗಳು ನಡೆಯದಂತೆ ಬಿಗಿಭದ್ರತೆಯಲ್ಲಿ ಪರೀಕ್ಷೆ ನಡೆಯುತ್ತಿದ್ದು, ಮಕ್ಕಳು ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪಬ್ಲಿಕ್ ಟಿವಿ ಕಡೆಯಿಂದ ಆಲ್ ದಿ ಬೆಸ್ಟ್.