Tag: ಪಿಯು ಫಲಿತಾಂಶ

  • ಪಿಯು ಪರೀಕ್ಷೆಯಲ್ಲಿ ಪಾಸ್ ಆದ ಜಿಲ್ಲಾ ಪಂಚಾಯತಿ ಸದಸ್ಯೆ

    ಪಿಯು ಪರೀಕ್ಷೆಯಲ್ಲಿ ಪಾಸ್ ಆದ ಜಿಲ್ಲಾ ಪಂಚಾಯತಿ ಸದಸ್ಯೆ

    ಚಿಕ್ಕಬಳ್ಳಾಪುರ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಚೀಮಂಗಲ ಜಿಲ್ಲಾ ಪಂಚಾಯತಿ ಕ್ಷೇತ್ರ ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾ ರಘು ಉತ್ತೀರ್ಣರಾಗಿದ್ದಾರೆ.

    ಖಾಸಗಿ ಅಭ್ಯರ್ಥಿಯಾಗಿ ದ್ವಿತೀಯ ಪಿಯು ಎಚ್.ಇ.ಪಿ.ಎಸ್ ಪರೀಕ್ಷೆ ಎದುರಿಸಿದ್ದ ತನುಜಾ ರಘು 368 ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. 2004 ರಲ್ಲಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿದ್ದ ತನುಜಾ ರಘುರವರು, ಈ ಬಾರಿ ಪಿಯುಸಿ ಪರೀಕ್ಷೆ ಎದುರಿಸಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

    ರಾಜಕಾರಣ ಹಾಗೂ ಜನಸಾಮಾನ್ಯರ ಸೇವೆಯೂ ಜೊತೆ ಜೊತೆಗೆ ತಮ್ಮ ವೈಯುಕ್ತಿಕ ಬದುಕಿಗೆ ವಿದ್ಯಾಭ್ಯಾಸವನ್ನ ಮುಂದುವರೆಸಿ ಪರೀಕ್ಷೆ ಪಾಸಾದ ಜಿಲ್ಲಾ ಪಂಚಾಯತಿ ಸದಸ್ಯೆಗೆ ಹಲವರು ಅಭಿನಂದನೆಗಳನ್ನ ಸಲ್ಲಿಸಿದ್ದಾರೆ.

  • ವಾಣಿಜ್ಯದಲ್ಲಿ ಆಳ್ವಾಸ್ ಕಾಲೇಜಿನ ಒಲ್ವಿಟಾ ಫಸ್ಟ್ – ಟಾಪರ್ ಪಟ್ಟಿ ಇಲ್ಲಿದೆ

    ವಾಣಿಜ್ಯದಲ್ಲಿ ಆಳ್ವಾಸ್ ಕಾಲೇಜಿನ ಒಲ್ವಿಟಾ ಫಸ್ಟ್ – ಟಾಪರ್ ಪಟ್ಟಿ ಇಲ್ಲಿದೆ

    ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಎಂದಿನಂತೆ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ. ಪಿಯು ಬೋರ್ಡ್ ನಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಅವರು ಫಲಿತಾಂಶವನ್ನು ಪ್ರಕಟಿಸಿದರು.

    ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ನಿರ್ಮಿಸಿದ್ದು ಉಡುಪಿ ಮೊದಲ ಸ್ಥಾನ ಪಡೆದರೆ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನವನ್ನು ಪಡೆದಿದೆ. ಈ ವರ್ಷ ಒಟ್ಟು ಶೇ.61.73 ಫಲಿತಾಂಶ ದಾಖಲಾಗಿದ್ದು, ಒಟ್ಟು 4,14,587 ಮಂದಿ ಪಾಸ್ ಆಗಿದ್ದಾರೆ. ಇದನ್ನೂ ಓದಿ:ಕಲಾ ವಿಭಾಗದಲ್ಲಿ ಬಳ್ಳಾರಿಯ ಕುಸುಮ ಫಸ್ಟ್ – ಇಂದೂ ಕಾಲೇಜಿನ 9 ಮಂದಿ ಟಾಪರ್

    ದ್ವಿತಿಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡದ ಮೂಡಬಿದ್ರೆಯ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಒಲ್ವಿಟಾ ಎನ್ಸಿಲ್ಲಾ ಡಿಸೋಜಾ ಅವರು 596 ಅಂಕ ಪಡೆದು ಮೊದಲ ಸ್ಥಾನಗಳಿಸಿದ್ದಾರೆ. ಇದನ್ನೂ ಓದಿ:ವಿಜ್ಞಾನ ವಿಭಾಗದಲ್ಲಿ ಬೆಂಗ್ಳೂರಿನ ರಜತ್ ಫಸ್ಟ್ – ಟಾಪ್ 10 ಪಟ್ಟಿ ಇಲ್ಲಿದೆ

    ಟಾಪ್ 10 ಪಟ್ಟಿಯಲ್ಲಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು

    1. ಹೆಸರು: ಒಲ್ವಿಟಾ ಎನ್ಸಿಲ್ಲಾ ಡಿಸೋಜಾ
    ಕಾಲೇಜು: ಆಳ್ವಾಸ್ ಪಿಯು ಕಾಲೇಜು, ಮೂಡಬಿದ್ರೆ, ದಕ್ಷಿಣ ಕನ್ನಡ
    ಪಡೆದ ಅಂಕ: 596

    2. ಹೆಸರು: ಶ್ರೀಕೃಷ್ಣ ಶರ್ಮಾ ಕೆ
    ಕಾಲೇಜು: ಸತ್ಯಸಾಯಿ ಪಿಯು ಕಾಲೇಜು, ಅಳಿಕೆ ಸತ್ಯಸಾಯಿ ವಿಹಾರ್ ದ.ಕ
    ಪಡೆದ ಅಂಕ: 596

    3. ಹೆಸರು: ಶ್ರೇಯಾ ಶೆಣೈ
    ಕಾಲೇಜು: ಕೆನರಾ ಪಿಯು ಕಾಲೇಜು, ಕೊಡಿಯಲ್‍ಬೈಲ್, ಮಂಗಳೂರು
    ಪಡೆದ ಅಂಕ: 595

    4. ಹೆಸರು: ಸ್ವಸ್ತಿಕ್ ಪಿ
    ಕಾಲೇಜು: ಸಂತ ಫಿಲೋಮಿನಾ ಪಿಯು ಕಾಲೇಜು, ಪುತ್ತೂರು
    ಪಡೆದ ಅಂಕ: 594

    5. ಹೆಸರು: ಗೌತಮ್ ರಾಥಿ
    ಕಾಲೇಜು: ಕ್ರೈಸ್ಟ್ ಪಿಯು ಕಾಲೇಜು, ಬೆಂಗಳೂರು
    ಪಡೆದ ಅಂಕ: 594

    6. ಹೆಸರು: ವೈಷ್ಣವಿ ಕೆ
    ಕಾಲೇಜು: ಎಸ್. ಕದಂಬಿ ಪಿಯು ಕಾಲೇಜು, ಬಸವೇಶ್ವರನಗರ, ಬೆಂಗಳೂರು
    ಪಡೆದ ಅಂಕ: 594

    7. ಹೆಸರು: ಪ್ರಜ್ಞಾ ಸತೀಶ್
    ಕಾಲೇಜು: ವಿದ್ಯಾವಾಹಿನಿ ಪಿಯು ಕಾಲೇಜು, ತುಮಕೂರು
    ಪಡೆದ ಅಂಕ: 594

    8. ಹೆಸರು: ಭೀಮಿ ರೆಡ್ಡಿ ಸಂದೀಪ್ ರೆಡ್ಡಿ
    ಕಾಲೇಜು: ಜೈನ್ ಪಿಯು ಕಾಲೇಜು, ಬೆಂಗಳೂರು
    ಪಡೆದ ಅಂಕ: 594

    9. ಹೆಸರು: ಪ್ರಣವ್.ಎಸ್. ಶಾಸ್ತ್ರಿ
    ಕಾಲೇಜು: ಕ್ರೈಸ್ಟ್ ಪಿಯು ಕಾಲೇಜು, ಬೆಂಗಳೂರು
    ಪಡೆದ ಅಂಕ: 594

    10. ಹೆಸರು: ಶ್ರಾವಂತಿ ಜಯಪಾಲ್
    ಕಾಲೇಜು: ಎಸ್.ಬಿ ಮಹಾವೀರ್ ಜೈನ್ ಕಾಲೇಜು, ಬೆಂಗಳೂರು
    ಪಡೆದ ಅಂಕ: 594

  • ದ್ವಿತೀಯ ಪಿಯುಸಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

    ದ್ವಿತೀಯ ಪಿಯುಸಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

    ಬೆಂಗಳೂರು: ದ್ವಿತೀಯ ಪಿಯುಸಿ ಮರು ಮೌಲ್ಯಮಾಪನಕ್ಕೆ ನಿಗದಿಪಡಿಸಿದ್ದ ದಿನಾಂಕವನ್ನು ಮೇ 29ರವರೆಗೆ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯನ್ನು ಸ್ಕ್ಯಾನ್ ಕಾಫಿ ಪಡೆಯಲು ಮೇ27 ರವರೆಗೆ ಮಾಡಿಕೊಡಲಾಗಿದೆ ಎಂದು ಪಿಯು ಬೋರ್ಡ್ ತಿಳಿಸಿದೆ.

    ಇನ್ನೂ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಅಂಕಗಳ ಮರು ಮೌಲ್ಯಮಾಪನಕ್ಕೆ ಮೇ 29 ರವರೆಗೆ ಸಮಯಾವಕಾಶ ನೀಡಿದೆ. ಮೇ 11 ರಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

    ಇದನ್ನೂ ಓದಿ: ಕೋಚಿಂಗ್ ಇಲ್ದೇ, ಟ್ಯೂಷನ್‍ಗೆ ಹೋಗದೆ ಉಡುಪಿಯ ರಾಧಿಕಾ ಪೈ ರಾಜ್ಯಕ್ಕೆ ಫಸ್ಟ್ 

    ಈ ಮೊದಲು ಉತ್ತರ ಪತ್ರಿಕೆ ಸ್ವೀಕರಿಸಲು (ಸ್ಕ್ಯಾನಿಂಗ್ ಪ್ರತಿಗೆ) ಅರ್ಜಿ ಸಲ್ಲಿಸಲು ಮೇ 19, ಮರು ಮೌಲ್ಯಮಾಪನ ಅರ್ಜಿ ಸಲ್ಲಿಸಲು ಮತ್ತು ಮರು ಏಣಿಕೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಮೇ 24 ಆಗಿತ್ತು. ಪೂರಕ ಪರೀಕ್ಷೆ ಜೂನ್ 28ರಿಂದ ಜುಲೈ 8ರವರೆಗೆ ನಡೆಯಲಿದೆ. ಸಪ್ಲಿಮೆಂಟರಿ ಪರೀಕ್ಷೆಗೆ ಶುಲ್ಕ ಕಟ್ಟಲು ಜೂನ್ 23 ಕೊನೆ ದಿನಾಂಕವಾಗಿದೆ.

    ಇದನ್ನೂ ಓದಿ: ಪಿಯು ಫಲಿತಾಂಶ: ಮೂರು ವಿಭಾಗದ ಟಾಪ್ 10 ಟಾಪರ್ ಲಿಸ್ಟ್ ಇಲ್ಲಿದೆ