Tag: ಪಿಯುಸಿ ಫಲಿತಾಂಶ

  • ತಿಳುವಳಿಕೆ ಇಲ್ಲದವರ ಜಿಲ್ಲೆ ಫಸ್ಟ್, ಸೆಕೆಂಡ್ ಬಂದದ್ದು ಹೇಗೆ ಸ್ವಾಮಿ- ಸಿಎಂಗೆ ಕೋಟ ಟಾಂಗ್

    ತಿಳುವಳಿಕೆ ಇಲ್ಲದವರ ಜಿಲ್ಲೆ ಫಸ್ಟ್, ಸೆಕೆಂಡ್ ಬಂದದ್ದು ಹೇಗೆ ಸ್ವಾಮಿ- ಸಿಎಂಗೆ ಕೋಟ ಟಾಂಗ್

    ಉಡುಪಿ: ಪಿಯುಸಿ ಫಲಿತಾಂಶ ಬಂದ ಬೆನ್ನಲ್ಲೇ ಬಿಜೆಪಿ ನಾಯಕರು ವಿಪಕ್ಷ ಸಿಎಂ ಕುಮಾರಸ್ವಾಮಿ ಅವರ ಮೇಲೆ ಮುಗಿಬಿದ್ದಿದ್ದು, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟಾಂಗ್ ಕೊಟ್ಟಿದ್ದಾರೆ.

    ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ರಾಜ್ಯಕ್ಕೆ ಉಡುಪಿ ಜಿಲ್ಲೆ ತೃತೀಯ ಸ್ಥಾನ ಬಂದಿರುವ ಬೆನ್ನಲ್ಲೇ ಪಿಯು ಫಲಿತಾಂಶ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದೆ. ಈ ಹಿಂದೆ ಸಿಎಂ ಕರಾವಳಿಗರಿಗೆ ತಿಳುವಳಿಕೆ ಕಡಿಮೆ ಎನ್ನುವ ಹೇಳಿಕೆ ನೀಡಿದ್ದರು. ಇದೀಗ ಫಲಿತಾಂಶದಲ್ಲಿ ಉಡುಪಿ ಫಸ್ಟ್ ಹಾಗೂ ದಕ್ಷಿಣ ಕನ್ನಡ ಸೆಕೆಂಡ್ ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸಿಎಂಗೆ ಟಾಂಗ್ ಕೊಡಲು ಶುರು ಮಾಡಿದ್ದಾರೆ.  ಇದನ್ನು ಓದಿ: ಹಾರ್ಡ್‌ವರ್ಕ್‌ಗೆ ತಕ್ಕ ಪ್ರತಿಫಲ ಸಿಕ್ಕಿದೆ: ಖುಷಿ ಹಂಚಿಕೊಂಡ ಉಡುಪಿಯ ಸ್ವಾತಿ

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ವಿಪಕ್ಷ ನಾಯಕರು, ಸಿಎಂ ಕುಮಾರಸ್ವಾಮಿ ಅವರು ಕರಾವಳಿ ಜನಕ್ಕೆ ತಿಳುವಳಿಕೆ ಇಲ್ಲ ಎಂದಿದ್ದರು. ಇಲ್ಲಿನ ಜನರು, ಮಕ್ಕಳು ಬುದ್ಧಿವಂತರಿದ್ದಾರೆ. ಇಡೀ ರಾಜ್ಯಕ್ಕೆ ಮಾದರಿಯಾಗುವಂತಹ ಸಾಧನೆ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರಿಗೆ ಕಿವಿಮಾತು ಹೇಳುತ್ತೇನೆ. ಮೂದಲಿಸಿದವರಿಗೆ ಮತದ ಮೂಲಕ ಉತ್ತರ ಕೊಡುತ್ತೇವೆ. ಸಡಿಲವಾದ ಮಾತನಾಡುವುದನ್ನು ಸಿಎಂ ಬಿಟ್ಟುಬಿಡಲಿ ಎಂದು ಎಚ್ಚರಿಕೆ ನೀಡಿದ್ದಾರೆ.

    ಪಿಯುಸಿ ಫಲಿತಾಂಶ ನಮಗೆ ಅತ್ಯಂತ ಸಂತೋಷ ತಂದಿದೆ. ಕರಾವಳಿಯ ಎರಡೂ ಜಿಲ್ಲೆಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿವೆ. ಉಡುಪಿ, ದಕ್ಷಿಣ ಕನ್ನಡದ ವಿದ್ಯಾರ್ಥಿಗಳ ಪೋಷಕರಿಗೆ ಅಭಿನಂದನೆಗಳು. ಶಿಕ್ಷಕರ ಹಾಗೂ ಶಿಕ್ಷಣ ಇಲಾಖೆಯ ಶ್ರಮ ಅಭಿನಂದನೀಯ ಎಂದರು.

  • ವಿಜ್ಞಾನ ವಿಭಾಗದಲ್ಲಿ ಬೆಂಗ್ಳೂರಿನ ರಜತ್ ಫಸ್ಟ್ – ಟಾಪ್ 10 ಪಟ್ಟಿ ಇಲ್ಲಿದೆ

    ವಿಜ್ಞಾನ ವಿಭಾಗದಲ್ಲಿ ಬೆಂಗ್ಳೂರಿನ ರಜತ್ ಫಸ್ಟ್ – ಟಾಪ್ 10 ಪಟ್ಟಿ ಇಲ್ಲಿದೆ

    ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಎಂದಿನಂತೆ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ. ಪಿಯು ಬೋರ್ಡ್ ನಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಅವರು ಫಲಿತಾಂಶವನ್ನು ಪ್ರಕಟಿಸಿದರು.

    ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಒಟ್ಟು 2,17,766 ಮಂದಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 1,44,983 ಮಂದಿ ತೇರ್ಗಡೆಯಾಗಿ ಶೇ.66.58 ರಷ್ಟು ಫಲಿತಾಂಶ ದಾಖಲಾಗಿದೆ. ಬೆಂಗಳೂರಿನ ಎಸ್. ರಜತ್ ಕಶ್ಯಪ್ 594 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

                                                      ರಯಿಸಾ

    ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಟಾಪ್ 10 ವಿದ್ಯಾರ್ಥಿಗಳು

    1. ಎಸ್. ರಜತ್ ಕಶ್ಯಪ್ – 594 – ಕುಮಾರನ್ಸ್ ಪಿಯು ಕಾಲೇಜು, ಬೆಂಗಳೂರು
    2. ದಿವ್ಯಾ ಕೆ – 593 – ವಿದ್ಯಾಮಂದಿರ ಪಿಯು ಕಾಲೇಜು, ಬೆಂಗಳೂರು
    3. ಪ್ರಿಯಾ ನಾಯಕ್ – 593 – ಆರ್ ವಿ ಪಿಯು ಕಾಲೇಜು, ಬೆಂಗಳೂರು
    4. ರಯಿಸಾ – 592 – ಎಸ್‍ಆರ್ ಪಿಯು ಕಾಲೇಜು, ಉಡುಪಿ
    5. ಡಿ. ನಿಕೇತನ್ ಗೌಡ – 592 – ಮಾಸ್ಟರ್ಸ್ ಪಿಯು ಕಾಲೇಜು, ಹಾಸನ

                                                     ಸ್ವಾತಿ

    6. ಜಾಗೃತಿ. ಜೆ. ನಾಯಕ್ – 592 – ವಿವೇಕಾನಂದ ಪಿಯು ಕಾಲೇಜು, ಪುತ್ತೂರು
    7. ಸ್ವಾತಿ – 592 – ಮಹತ್ಮಾ ಗಾಂಧಿ ಮೆಮೋ ಪಿಯು ಕಾಲೇಜು, ಉಡುಪಿ
    8. ಸೈಶ್ ಶ್ರೀಕಾಂತ್ ಮೆಂದ್ಕೆ – 591 – ಗೋವಿಂದರಾಮ್ ಸೆಕ್ಸಾರಿಯಾ ಪಿಯು ಕಾಲೇಜು, ಬೆಳಗಾವಿ
    9. ಪಲ್ಲವಿ. ಜಿ – 591 – ಎಎಸ್‍ಸಿ ಪಿಯು ಕಾಲೇಜು, ಬೆಂಗಳೂರು
    10. ಪ್ರಥಮ್. ಎನ್ – 591- ಶಾರದಾ ಪಿಯುಸಿ ಕಾಲೇಜು, ಮಂಗಳೂರು