Tag: ಪಾರ್ಶ್ವವಾಯು

  • ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ನಿಧನ

    ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ನಿಧನ

    ಲಕ್ನೋ: ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ (83) (Acharya Satyendra Das) ಅವರು ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಸಂಸ್ಥೆಯಲ್ಲಿ (SGPGI) ಬುಧವಾರ ನಿಧನರಾಗಿದ್ದಾರೆ.

    ಪಾರ್ಶ್ವವಾಯುವಿನಿಂದ (Brain Stroke) ಬಳಲುತ್ತಿದ್ದ 83 ವರ್ಷದ ಸತ್ಯೇಂದ್ರ ದಾಸ್‌ ಅವರನ್ನು ಫೆಬ್ರುವರಿ 3ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ: ಉದಯಗಿರಿ ದಾಂಧಲೆಗೂ ಮುನ್ನ ಮೌಲ್ವಿ ಪ್ರಚೋದನಕಾರಿ ಭಾಷಣ

    1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ಕೆಡವಿದ ಸಂದರ್ಭದಲ್ಲಿ ಸತ್ಯೇಂದ್ರ ದಾಸ್ ಅವರು ರಾಮ ಮಂದಿರದ ಅರ್ಚಕರಾಗಿದ್ದರು. ಇದನ್ನೂ ಓದಿ: 2025ರಲ್ಲಿ ಹಜ್‌ ಯಾತ್ರೆಗೆ ಮಕ್ಕಳು ನಿಷೇಧ – ಕಾರಣ ಏನು ಗೊತ್ತಾ?

    ‘ನಿರ್ವಾಣಿ’ ಅಖಾಡದಿಂದ ಬಂದ ಸತ್ಯೇಂದ್ರ ದಾಸ್‌ ಅವರು ಅಯೋಧ್ಯೆಯ ಪ್ರಮುಖ ಸಂತರಲ್ಲಿ ಒಬ್ಬರಾಗಿದ್ದರು. ಅಯೋಧ್ಯೆ ಮತ್ತು ರಾಮ ಮಂದಿರದ ಬೆಳವಣಿಗೆಗಳ ಬಗ್ಗೆ ಮಾಹಿತಿಯುಳ್ಳವರಾಗಿದ್ದರು.

    ಬಾಬರಿ ಮಸೀದಿಯನ್ನು ಕೆಡವಿದಾಗ ತಾತ್ಕಾಲಿಕವಾಗಿ ನಿರ್ಮಿಸಿದ್ದ ಟೆಂಟ್‌ನಲ್ಲಿ ರಾಮ ಲಲ್ಲಾ ವಿಗ್ರಹವನ್ನು ಇಟ್ಟುಕೊಂಡು ಸತ್ಯೇಂದ್ರ ದಾಸ್ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ನಿಮಿಷಾಂಭ ದೇವಸ್ಥಾನದಲ್ಲಿ ಮಾಘ ಹುಣ್ಣಿಮೆ ಸಂಭ್ರಮ – ಕಾವೇರಿ ನದಿಯಲ್ಲಿ ಪುಣ್ಯಸ್ನಾನ

  • 5 ಬಾರಿ ಮರುಜನ್ಮ ಪಡೆದಿದ್ದೇನೆ, ನನ್ನ ಜೀವನದ ಬಗ್ಗೆ ಕನಿಕರದಿಂದ ನೋಡಿ: ಹೆಚ್‌ಡಿಕೆ ರಿಯಾಕ್ಷನ್

    5 ಬಾರಿ ಮರುಜನ್ಮ ಪಡೆದಿದ್ದೇನೆ, ನನ್ನ ಜೀವನದ ಬಗ್ಗೆ ಕನಿಕರದಿಂದ ನೋಡಿ: ಹೆಚ್‌ಡಿಕೆ ರಿಯಾಕ್ಷನ್

    ಬೆಂಗಳೂರು: ನಾನು 5 ಬಾರಿ ಮರುಜನ್ಮ ಪಡೆದಿದ್ದೇನೆ, ಈ ಬಾರಿ ಸ್ವಲ್ಪ ತಡ ಮಾಡಿದ್ದರೂ ಇವತ್ತು ನಿಮ್ಮ ಜೊತೆ ಮಾತನಾಡಲು ಆಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಆಘಾತಕಾರಿ ಅನುಭವಗಳನ್ನ ಹಂಚಿಕೊಂಡಿದ್ದಾರೆ.

    ಪಾರ್ಶ್ವವಾಯು (Stroke) ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಚ್.ಡಿ ಕುಮಾರಸ್ವಾಮಿ ಅವರಿಂದು ಡಿಸ್ಚಾರ್ಜ್ ಆಗಿದ್ದಾರೆ. ಬಳಿಕ ಆಸ್ಪತ್ರೆಯಲ್ಲಿ (Hospital) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಂದೆ-ತಾಯಿ ಅಶೀರ್ವಾದದಿಂದ ನಾನು ಇಲ್ಲಿದ್ದೇನೆ, ನನಗೆ ಪುನರ್ಜನ್ಮ ಬಂದಿದೆ. ದೇವರ ದಯೆಯಿಂದ ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.

    ಅಂದು ರಾತ್ರಿ 2 ಗಂಟೆ ವೇಳೆಗೆ ನನಗೆ ಎಚ್ಚರವಾಯ್ತು, ತಕ್ಷಣ ನನ್ನ ದೇಹದಲ್ಲಿ ಬದಲಾವಣೆ ಕಂಡುಬಂದಿತು, ಧ್ವನಿಯಲ್ಲೂ ಬದಲಾವಣೆ ಕಂಡುಬಂದಿತು. ಕೂಡಲೇ ಡಾ.ಮಂಜುನಾಥ್ ಹಾಗೂ ಡಾ.ಯತೀಶ್ ಅವರಿಗೆ ಕರೆ ಮಾಡಿ, ಬಿಡದಿಯ ತೋಟದಿಂದ ಇಪ್ಪತ್ತೇ ನಿಮಿಷಕ್ಕೆ ಆಸ್ಪತ್ರೆಗೆ ಬಂದೆ ಎಂದು ಆಕ್ಷಣದಲ್ಲಾದ ಕಹಿ ಅನುಭವವನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅತಿಥಿ ಶಿಕ್ಷಕಿ, ವಿದ್ಯಾರ್ಥಿನಿಯರಿಗೆ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕನಿಂದ ಲೈಂಗಿಕ ಕಿರುಕುಳ

    ಮುಂದುವರಿದು.. ನಾನಿಂದು ರಾಜಕೀಯ ಬಿಟ್ಟು ಕೆಲ ಮಾತನ್ನ ಮಾತನಾಡಬೇಕಿದೆ, ನನಗಾದ ಜೀವನ್ಮರಣದ ಹೋರಾಟದ ಬಗ್ಗೆ ಹೇಳಬೇಕಿದೆ. ತುಂಬಾ ಕ್ಲಿಷ್ಟಕರ ಸನ್ನಿವೇಶ ಎದುರಿಸಿದ್ದೇನೆ, ಈ ರೀತಿಯ ಆರೋಗ್ಯ ಸಮಸ್ಯೆಯಾದಾಗ ಯಾರೂ ನಿರ್ಲಕ್ಷ್ಯ ಮಾಡಬಾರದು.. ಗೋಲ್ಡನ್ ಅವರ್‌ನಲ್ಲಿ ನಾವು ಚಿಕಿತ್ಸೆ ಪಡೆಯದೇ ಇದ್ರೇ ಜೀವನ ಪರ್ಯಂತ ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.

    ರಾಜ್ಯದ ಸಾವಿರಾರು ಕುಟುಂಬಗಳ ಆಶೀರ್ವಾದ, ಪ್ರಾರ್ಥನೆಯಿಂದ ನಾನು ಮತ್ತೆ ಬಂದಿದ್ದೇನೆ, ವೈದ್ಯರು ನನಗೆ ಎಚ್ಚರಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ದಿನಚರಿ ಬದಲಾಗಲಿದೆ. ನನ್ನ ಜೀವನದ ಬಗ್ಗೆ ಸ್ವಲ್ಪ ಕನಿಕರದಿಂದ ನೀವೆಲ್ಲ ನೋಡಿ. ಮೊದಲ ರೀತಿ ನಿಮಗೆ ಸಿಗುವುದು ಕಷ್ಟವಾಗಬಹುದು. ನೀವು ನನ್ನ ಆರೋಗ್ಯ ಸ್ಥಿತಿ ಅರ್ಥ ಮಾಡಿಕೊಳ್ಳಿ. ನನ್ನ ಜೀವನ ಶೈಲಿ ಬದಲಿಸಿಕೊಳ್ಳಲು ವೈದ್ಯರು ಸೂಚಿಸಿದ್ದಾರೆ, ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ – ಅಭಿಮಾನಿಯಿಂದ ಕುಂಕುಮ ಅಕ್ಷತೆ ಸ್ವೀಕರಿಸಿದ ಮಾಜಿ ಸಿಎಂ

    5 ಬಾರಿ ಮರುಜನ್ಮ ಪಡೆದಿರುವೆ: 5 ಬಾರಿ ನಾನು ಮರುಜನ್ಮ ಪಡೆದಿದ್ದೇನೆ, ಅದಕ್ಕೆ ಕಾರಣ ವೈದ್ಯರು. ನಾನು ಅಂದು ಸ್ವಲ್ಪ ತಡ ಮಾಡಿದ್ರೂ ಈ ರೀತಿ ನಿಮ್ಮ ಜೊತೆ ಮಾತನಾಡಲು ಆಗ್ತಿರಲಿಲ್ಲ. ನಾನು ಬಿಡದಿಯಿಂದ ಬಂದ ಕೂಡಲೇ ವೈದ್ಯ‌ರೆಲ್ಲ ಬಂದಿದ್ರು ಬಂದ ಕೂಡಲೇ ಚಿಕಿತ್ಸೆ ಶುರು ಮಾಡಿದ್ರು. ನನ್ನ ಅದೃಷ್ಟ ಎಲ್ಲಾ ವೈದ್ಯರು ಆಸ್ಪತ್ರೆಗೆ ಬರುವಂತಾಯ್ತು, ಮೂರ್ನಾಲ್ಕು ತಿಂಗಳು ಹಾಸಿಗೆ ಹಿಡಿಯಬೇಕಾದವನನ್ನ ಒಂದು ಗಂಟೆಯಲ್ಲೇ ಮೊದಲಿನ ಸ್ಥಿತಿಗೆ ಬರುವಂತೆ ಮಾಡಿದರು ಎಂದು ತಿಳಿಸಿದ್ದಾರೆ.

    ಇದು ನನಗೆ 2ನೇ ಬಾರಿ ಪಾರ್ಶ್ವವಾಯು ಆಗಿರೋದು. ಈ ಹಿಂದೆ ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಒಂದು ಸುದ್ದಿ ನೋಡ್ತಾ ಕುಳಿತಿದ್ದೆ. ಆಗ ನಾನು ಮಾನಸಿಕ ಆಘಾತಕ್ಕೆ ಒಳಗಾಗಿದ್ದೆ. ಆಗ ಮೊದಲ ಬಾರಿ ಸ್ಟ್ರೋಕ್ ಆಗಿತ್ತು, ಇದು 2ನೇ ಬಾರಿ. ನಾನು ಬೆಳಗ್ಗೆ ಹೋದ್ರೆ ಆಯ್ತು ಅಂತಾ ನಿರ್ಲಕ್ಷ್ಯ ಮಾಡಿದ್ದರೆ ಲೈಫ್‌ಟೈಂ ಹಾಸಿಗೆ ಹಿಡಿಯುತ್ತಿದ್ದೆ ಎಂದು ಕಹಿ ಅನುಭವ ಹಂಚಿಕೊಂಡಿದ್ದಾರೆ.

    ನಮ್ಮ ರಾಜ್ಯದಲ್ಲಿ ಪರಿಣತ ವೈದ್ಯರಿದ್ದಾರೆ, ಜೀವದ ಮುಂದೆ ಹಣ ಮುಖ್ಯವಲ್ಲ. ಯಾವುದೇ ಕಾರಣಕ್ಕೂ ತಡ ಮಾಡದೇ ಈ ರೀತಿ ಸಮಸ್ಯೆಯಾದಾಗ ಆಸ್ಪತ್ರೆಗೆ ಹೋಗಿ ಎಂದು ಸಲಹೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾರ್ಶ್ವವಾಯು ಬಾರದಂತೆ 150 ರೂ. ಇಂಜೆಕ್ಷನ್ ಪಡೆದ CA – ಕೆಲವೇ ನಿಮಿಷಗಳಲ್ಲಿ ಆರೋಗ್ಯವಂತ ಮಹಿಳೆ ಸಾವು

    ಪಾರ್ಶ್ವವಾಯು ಬಾರದಂತೆ 150 ರೂ. ಇಂಜೆಕ್ಷನ್ ಪಡೆದ CA – ಕೆಲವೇ ನಿಮಿಷಗಳಲ್ಲಿ ಆರೋಗ್ಯವಂತ ಮಹಿಳೆ ಸಾವು

    ಕಾರವಾರ: ಪಾರ್ಶ್ವವಾಯುವಿಗೆ (Paralysis) ಚಿಕಿತ್ಸೆ ನೀಡುವ ಆಸ್ಪತ್ರೆಯ ವೈದರು ಆರೋಗ್ಯವಾಗಿದ್ದ ಮಹಿಳೆಗೆ ಪಾರ್ಶ್ವವಾಯು ಬಾರದಂತೆ ಇಂಜೆಕ್ಷನ್ (Injection) ನೀಡಿ ಆಕೆಯ ಸಾವಿಗೆ ಕಾರಣವಾದ ಆಘಾತಕಾರಿ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ (Karwar) ತಾಲೂಕಿನ ಹಳಗ ಗ್ರಾಮದ ಆಸ್ಪತ್ರೆಯೊಂದರಲ್ಲಿ ನಡೆದಿದೆ.

    ಕೊಪ್ಪಳ ಮೂಲದ ಚಾರ್ಟೆಡ್ ಅಕೌಂಟೆಂಟ್ ಸ್ವಪ್ನ ರಾಯ್ಕರ್ (32) ಮೃತ ಮಹಿಳೆ. ಈಕೆಯ ತಂದೆ ಕೇಶವ್ ಪಾಶ್ವವಾಯುವಿಗೆ ಇಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ತಮ್ಮ ಕುಟುಂಬದವರಿಗೆ ಮೈ-ಕೈ ನೋವು ಇರಿವುದರಿಂದ ಸ್ವಪ್ನ ಸೇರಿ 4 ಜನ ಆಸ್ಪತ್ರೆ ವೈದ್ಯರ ಸಲಹೆ ಪಡೆದು ಪಾರ್ಶ್ವವಾಯು ಬಾರದಂತೆ ಇಂಜೆಕ್ಷನ್ ಪಡೆದಿದ್ದಾರೆ. ಚುಚ್ಚುಮದ್ದು ಪಡೆದ 3 ಜನರಿಗೆ ಏನೂ ಆಗದೆ ಸ್ವಪ್ನ ಮಾತ್ರ ಇಂಜೆಕ್ಷನ್ ಪಡೆದ ಕೆಲವೇ ನಿಮಿಷಗಳಲ್ಲಿ ಮೃತರಾಗಿದ್ದಾರೆ.

    ಪಾರ್ಶ್ವವಾಯುವಿಗೆ ಮಾತ್ರ ಈ ಆಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡಲಾಗುತ್ತಿದ್ದು, ಪ್ರತಿ ಇಂಜೆಕ್ಷನ್‌ಗೆ ಕೇವಲ 150 ರೂ. ತೆಗೆದುಕೊಳ್ಳಲಾಗುತ್ತಿದೆ. ರಾಜ್ಯ, ಹೊರ ರಾಜ್ಯಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಇಂಜೆಕ್ಷನ್ ತೆಗೆದುಕೊಳ್ಳಲು ಜನರು ಬರುತ್ತಾರೆ. ಈ ಹಿಂದೆ ಈ ಆಸ್ಪತ್ರೆ ವಿರುದ್ಧ ಸಾಕಷ್ಟು ದೂರುಗಳಿದ್ದರೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮಾತ್ರ ಕ್ರಮ ಕೈಗೊಂಡಿರಲಿಲ್ಲ. ಇದನ್ನೂ ಓದಿ: ಎಮ್ಮೆಗಳ ಜೊತೆ ಸೇರಲು ಬಿಡದಿದ್ದಕ್ಕೆ ಮಾಲೀಕನನ್ನೇ ಇರಿದು ಕೊಂದ ಕೋಣ

    ವಿದ್ಯಾವಂತರಾಗಿದ್ದರೂ ಮುಂದೆ ತಂದೆಗೆ ಆದ ಪಾರ್ಶ್ವವಾಯು ತನಗೂ ಬರಬಹುದು ಎಂಬ ಭಯ ಹಾಗೂ ವೈದ್ಯರ ನಿರ್ಲಕ್ಷ ಸ್ವಪ್ನ ಅವರ ಸಾವಿಗೆ ಕಾರಣವಾದರೆ 3 ವರ್ಷದ ಅವರ ಮಗು ಅನಾಥವಾಗಿದೆ. ಘಟನೆ ಸಂಬಂಧ ಕಾರವಾರದ ಚಿತ್ತಾಕುಲ ಠಾಣೆಯಲ್ಲಿ ಮೃತ ಮಹಿಳೆ ಸಂಬಂಧಿಕರು ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಬೀದರ್ ಪೊಲೀಸರ ಕಾರ್ಯಾಚರಣೆ – 7 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ

  • 8 ಜನರಿಗೆ ಅಂಗಾಂಗ ದಾನ – ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ

    8 ಜನರಿಗೆ ಅಂಗಾಂಗ ದಾನ – ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ

    ಮಡಿಕೇರಿ: ಕಳೆದ 15 ವರ್ಷಗಳಿಂದ ತನ್ನ ಮನೆಯಲ್ಲೇ ಸಾವಿರಾರು ಮಕ್ಕಳಿಗೆ ಶಿಕ್ಷಣ (Education) ನೀಡುತ್ತಿದ್ದ ಶಿಕ್ಷಕಿಯೊಬ್ಬರು (Teacher), ದಸರಾ (Dasara) ರಜೆ ಕಳೆಯಲು ಬೆಂಗಳೂರಿನಲ್ಲಿರುವ (Bengaluru) ತನ್ನ ಮಗಳ ಮನೆಗೆ ತೆರಳಿದ್ದ ವೇಳೆ ಮೆದುಳು ಪಾರ್ಶ್ವವಾಯುವಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ಆದರೆ ಸಾಯುವಾಗಲೂ ಎಂಟು ಜನರಿಗೆ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

    ಕಣ್ಣು, ಕಿಡ್ನಿ, ಹೃದಯ (Heart), ಲೀವರ್ ದಾನ ಮಾಡುವ ಮೂಲಕ ಮಡಿಕೇರಿ (Madikeri) ನಿವಾಸಿ ಹಾಗೂ ಶಿಕ್ಷಕರೂ ಆದ ಪಂದ್ಯಂಡ ಆಶಾ (53) ಸಾವಿನಲ್ಲೂ ಸಾರ್ಥಕತೆ ಮೆರೆದ್ದಾರೆ. ಇದನ್ನೂ ಓದಿ: ಅತ್ತ ಭಾರತ್ ಜೋಡೋ ಪಾದಯಾತ್ರೆ- ಇತ್ತ ಕಾಂಗ್ರೆಸ್ ಚೋಡೋ ಯಾತ್ರೆ

    ಕಳೆದ ಶನಿವಾರ ಬೆಂಗಳೂರಿನಲ್ಲಿರುವ ತನ್ನ ಮಗಳ ಮನೆಗೆ ಹೋಗಿದ್ದ ಆಶಾ, ಅವರು ಮೆದುಳು ಪಾರ್ಶ್ವವಾಯುವಿಗೆ (Brain Stroke) ತುತ್ತಾಗಿದ್ದರು. ತಕ್ಷಣವೇ ಅವರನ್ನು ನಾರಾಯಣ ಹೃದಯಾಲಯ (Narayana hrudayalaya) ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಅಷ್ಟರಲ್ಲಾಗಲೇ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಶಿಕ್ಷಕಿ ಆಶಾ ಅವರ ಪತಿ ಹಾಗೂ ಮಕ್ಕಳು ಅಂಗಾಂಗ ದಾನಕ್ಕೆ ಒಪ್ಪಿ ಸಹಿ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ `108′ ಸಮಸ್ಯೆ – 2 ತಿಂಗಳಲ್ಲಿ ಬಗೆಹರಿಯಲಿದೆ ಎಂದ ಸುಧಾಕರ್

    ಮಡಿಕೇರಿ ನಗರದ ಸುದರ್ಶನ ಬಡಾವಣೆಯ ನಿವಾಸಿ ಆಶಾ ಅವರು, ಕಳೆದ 15 ವರ್ಷದಿಂದ ತಮ್ಮ ಮನೆಯಲ್ಲೇ ಬೇಬಿ ಸಿಟ್ಟಿಂಗ್ ನಡೆಸುತ್ತಿದ್ದರು. ಮಕ್ಕಳೆಂದರೆ ಇವರಿಗೆ ಅಚ್ಚುಮೆಚ್ಚು. ಹಾಗಾಗಿ ಮಕ್ಕಳ ಹೆಸರಿನಲ್ಲೇ ಅಂಗಾಂಗ ದಾನ ಮಾಡಿ ಬದುಕಿಗೆ ಪೂರ್ಣವಿರಾಮ ಇಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಾಸಿಗೆ ಹಿಡಿದು 5 ವರ್ಷವಾದ್ರೂ ಸರ್ಕಾರದಿಂದ ಸಿಗದ ಪರಿಹಾರ

    ಹಾಸಿಗೆ ಹಿಡಿದು 5 ವರ್ಷವಾದ್ರೂ ಸರ್ಕಾರದಿಂದ ಸಿಗದ ಪರಿಹಾರ

    -ಸಂಕಷ್ಟದಲ್ಲಿ ಪಾರ್ಶ್ವವಾಯು ಪೀಡಿತ ಉಪನ್ಯಾಸಕರ ಕುಟುಂಬ

    ಧಾರವಾಡ: ಪಾರ್ಶ್ವವಾಯು ಪೀಡಿತ ಉಪನ್ಯಾಸಕರೊಬ್ಬರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು, ಸರ್ಕಾರ ಸಹಾಯಕ್ಕೆ ಮುಂದಾಗಬೇಕೆಂದು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

    ಧಾರವಾಡದ ನಿಸರ್ಗ ಲೇಔಟ್ ನಲ್ಲಿರುವ ಮಹಾದೇವ್ ಮಾಳಗಿ ಕಳೆದ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. 1999ರಲ್ಲಿ ಕೆಇಎಸ್ ಪರೀಕ್ಷೆಯಲ್ಲಿ ಪಾಸಾದ ನಂತರ ಶಿಕ್ಷಣ ಇಲಾಖೆಯಲ್ಲಿ 15 ವರ್ಷ ಸರ್ವಿಸ್ ಮಾಡಿದ್ದಾರೆ. ಬಿಇಓ ಆಗಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಮಹಾದೇವ್ ಮಾಳಗಿ ಅವರು ಹಿರಿಯ ಉಪನ್ಯಾಸಕರಾಗಿ ಬೆಳಗಾವಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪಾರ್ಶ್ವವಾಯುಗೆ ತುತ್ತಾಗಿದ್ದರು.

    ಅಂದಿನಿಂದ ಮಹಾದೇವ್ ಮಾಳಗಿ ಅವರಿಗೆ ಸಂಬಳವೂ ಬಂದಿಲ್ಲ ಮತ್ತು ಇಲಾಖೆಯಿಂದ ಯಾವುದೇ ಸಹಾಯ ದೊರೆತಿಲ್ಲ. ಮಹಾದೇವ್ ಅವರ ಚಿಕಿತ್ಸೆಗಾಗಿ ಆಸ್ತಿ ಮಾರಾಟ ಮಾಡಿ ಆಸ್ಪತ್ರೆ ಬಿಲ್ ಪಾವತಿಸುತ್ತಿದ್ದಾರೆ. ಸ್ವಯಂ ನಿವೃತ್ತಿ ಪಡೆಯಲು ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ರೂ ಕಾನೂನು ತೊಡಕು ಉಂಟಾಗಿದೆ. ಹೀಗಾಗಿ ಈ ಅಧಿಕಾರಿ ಕುಟುಂಬ ಈಗ ಸಮಸ್ಯೆಗೆ ಸಿಲುಕಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಚಿಕಿತ್ಸೆ ಹಣ ಇಲ್ಲದೇ ಪರದಾಟ ನಡೆಸಿದೆ. ಸರ್ಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಿ ಇವರ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಕೊರೊನಾ ಸೋಂಕಿತ ಮಧ್ಯವಯಸ್ಕರು ಪಾರ್ಶ್ವವಾಯುವಿಗೆ ಬಲಿಯಾಗಬಹುದು ಎಚ್ಚರ!

    ಕೊರೊನಾ ಸೋಂಕಿತ ಮಧ್ಯವಯಸ್ಕರು ಪಾರ್ಶ್ವವಾಯುವಿಗೆ ಬಲಿಯಾಗಬಹುದು ಎಚ್ಚರ!

    ನವದೆಹಲಿ: ಕೊರೊನಾ ವೈರಸ್ ಸೋಂಕಿನಿಂದ ಮಧ್ಯ ವಯಸ್ಕರಲ್ಲಿ ಪಾರ್ಶ್ವವಾಯು ಉಂಟಾಗುವ ಸಾಧ್ಯತೆ ಇದೆ ಎಂದು ಅಮೆರಿಕ ಮೂಲದ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ವೈದ್ಯರು ನಡೆಸಿದ ಸಂಶೋಧನಾ ವರದಿಯನ್ನು ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದೆ.

    ಕೊರೊನಾ ಸೋಂಕು ಕೇವಲ ಶ್ವಾಸಕೋಶ ಮಾತ್ರವಲ್ಲದೇ ದೇಹದ ಇತರೆ ಯಾವುದೇ ಭಾಗಗಳನ್ನು ಘಾಸಿಗೊಳಿಸಬಹುದು ಎಂದು ವೈದ್ಯರು ಹೇಳಿದ್ದು, ಕೊರೊನಾ ಸೋಂಕಿಗೆ ಮೂರು ಹೊಸ ಗುಣಲಕ್ಷಣಗಳು ಸೇರಿಕೊಂಡ ಬೆನ್ನೆಲೆ ಈ ವರದಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ.

    ಅಮೆರಿಕದ ವೈದ್ಯರು ನೀಡಿರುವ ಈ ವರದಿಯಲ್ಲಿ, 30-40 ರ ವಯಸ್ಸಿನ ಕೊರೊನಾ ರೋಗಿಗಳು ಪಾರ್ಶ್ವವಾಯು ಪೀಡಿತರಾಗಿದ್ದಾರೆ. ಈ ಪೈಕಿ ಹಲವರು ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇದೇ ಮಾದರಿಯಲ್ಲಿ ಚೀನಾದಲ್ಲೂ ಹಲವು ರೋಗಿಗಳಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿರುವುದನ್ನು ನಾವು ಗಮನಿಸಬಹುದು. ಈ ಪ್ರಮಾಣ ಕಡಿಮೆ ಎಂದು ತಾತ್ಸರ ಮಾಡುವಂತಿಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ.

    ವಯೋವೃದ್ದರು ಸೋಂಕಿನ ಬಳಿಕ ವಯೋಸಹಜ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದಾರೆ. ಆದರೆ ಮಧ್ಯ ವಯಸ್ಕರು ಬಹುತೇಕ ಗುಣ ಮುಖರಾಗುತ್ತಾರೆ ಎನ್ನುವ ನಂಬಿಕೆ ಇದೆ. ಆದರೆ ಸೋಂಕಿತ ವ್ಯಕ್ತಿಗಳು ಹೀಗೆ ಸಣ್ಣ ಪ್ರಮಾಣದಲ್ಲಿ ಪಾರ್ಶ್ವವಾಯು ಪೀಡಿತರಾಗಿ ಸಾಯುತ್ತಿರುವುದನ್ನು ಗಮನಿಸಬೇಕು ಎಂದಿದ್ದಾರೆ.

    ಶ್ವಾಸಕೋಶ ಸೇರುವ ವೈರಸನಿಂದ ಉಸಿರಾಟದ ತೊಂದರೆ ಉಂಟಾಗಬಹುದು. ಬಳಿಕ ಇದು ರಕ್ತಚಲನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬಳಿಕ ಪಾರ್ಶ್ವವಾಯುವಾಗಿ ಬದಲಾಗುವ ಸಾಧ್ಯತೆ ಇದೆ ಎಂದು ಅಮೆರಿಕಾ ವೈದ್ಯರು ತಿಳಿಸಿದ್ದಾರೆ.

  • ವಿಧಿಗೆ ಸೆಡ್ಡು ಹೊಡೆದ ಬಡವರ ಮೇಲೆಯೇ ವಿಧಿಯ ಮತ್ತೊಂದು ಸವಾರಿ

    ವಿಧಿಗೆ ಸೆಡ್ಡು ಹೊಡೆದ ಬಡವರ ಮೇಲೆಯೇ ವಿಧಿಯ ಮತ್ತೊಂದು ಸವಾರಿ

    ಚಿಕ್ಕಮಗಳೂರು: ವಯಸ್ಸಿಗೆ ಬಂದ ಇಬ್ಬರು ಮಕ್ಕಳು ಬುದ್ಧಿಮಾಂದ್ಯರು. ಆ ಮಕ್ಕಳ ಪರಿಸ್ಥಿತಿ ಕೂತಲ್ಲೇ ಎಲ್ಲಾ. ಮನೆಗೆ ಆಧಾರ ಸ್ತಂಭವಾಗಿ ಸಂಸಾರದ ನೊಗ ಹೊತ್ತಿದ್ದ ಅಪ್ಪನೂ ಮಕ್ಕಳ ಜೊತೆ ಮಗುವಾಗಿದ್ದಾನೆ. ಮೂವರನ್ನೂ ನೋಡಿಕೊಳ್ಳಬೇಕಾದ ಸ್ಥಿತಿ ಅಮ್ಮನದ್ದು. 3 ದಶಕಗಳಿಂದ ಅಕ್ಷರಶಃ ಗೃಹಬಂಧನದಂತೆ ಬದುಕು ಸವೆಸಿದ ಆ ತಾಯಿ ಈಗ ಮಕ್ಕಳ ಜೊತೆ ಗಂಡನನ್ನೂ ನೋಡಿಕೊಳ್ಳಬೇಕಾದ ಸ್ಥಿತಿ ನೆನೆದು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

    ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚನ್ನಹಡ್ಲು ಗ್ರಾಮದ ಈ ಕಥೆ ಕೇಳಿದ್ರೆ ನಿಮ್ಮ ಕಣ್ಣುಗಳು ತೇವಗೊಂಡು, ನಮ್ಮ ಶತ್ರುಗೂ ಈ ಸ್ಥಿತಿ ಬೇಡ ಅಂತ ಭಗವಂತನಿಗೆ ಬೇಡಿಕೊಳ್ಳುತ್ತೀರ.

    ಹೌದು, ಬದುಕಿನ ಮೇಲೆ ವಿಧಿ ಸವಾರಿ ಮಾಡ ಹೊರಟರೆ ಬದುಕು ಮೂರಾಬಟ್ಟೆಯಾಗೋದರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ ಈ ಕುಟುಂಬದ ಕಣ್ಣೀರ ಕಥೆ ಇಂದು-ನಿನ್ನೆಯದಲ್ಲ. ಬರೋಬ್ಬರಿ ಮೂರು ದಶಕದ್ದು. ವಯಸ್ಸಿಗೆ ಬಂದ ಬುದ್ದಿಮಾಂದ್ಯ ಮಕ್ಕಳಿಬ್ಬರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆ ದಂಪತಿಗೆ ಮಕ್ಕಳ ಸಾಕುವುದೇ ಸವಾಲು. ಅಮ್ಮ ಮಕ್ಕಳ ಆರೈಕೆಯಲ್ಲಿದ್ದರೆ, ಅಪ್ಪ ತುತ್ತಿನ ಚೀಲಕ್ಕಾಗಿ ಹೋರಾಡುತ್ತಿದ್ದ. ಇದೀಗ ತಂದೆಯೂ ಹಾಸಿಗೆ ಹಿಡಿದಿದ್ದಾರೆ. 2 ಬುದ್ಧಿಮಾಂದ್ಯ ಮಕ್ಕಳ ಜೊತೆ ಆ ತಾಯಿಗೆ ಕೈಕಾಲಾಡದ ಗಂಡನೂ ಮಗುವಾಗಿದ್ದಾರೆ. ಈ ಸ್ಟೋರಿ ಓದಿದ ಮೇಲೆ ಕಲ್ಲಿನ ದೇವರು ನಿಜಕ್ಕೂ ಕಲ್ಲೇ ಎಂದು ಅನ್ನಿಸದೆ ಇರದು.

    ಸದಾ ಹಸನ್ಮುಖಿ ಮಗಳು. ಕೂತಲ್ಲಿಂದ ಮೇಲೇಳದ ಮಗ. ಪಾರ್ಶ್ವವಾಯುವಿನಿಂದ ಬಳಲುತ್ತಿರೋ ಅಪ್ಪ. ಕಟ್ಕೊಂಡ ಗಂಡ, ಹೆತ್ತ ಮಕ್ಕಳ ಸ್ಥಿತಿ ಕಂಡು ಕಣ್ಣೀರಿಡುತ್ತಿರುವ ಅಮ್ಮ. ವಿಧಿಯ ಕಣ್ಣಾಮುಚ್ಚಾಲೆ ಆಟಕ್ಕೆ ಈ ಕುಟುಂಬ ನೊಂದು-ಬೆಂದು, ಬಳಲಿ ಬೆಂಡಾಗಿದೆ. ನಮ್ಮ ಶತ್ರುಗಳಿಗೂ ಈ ಸ್ಥಿತಿ ಬರೋದು ಬೇಡ. ಇದು ಮಲೆನಾಡ ಶ್ರಮಜೀವಿ ಹಾಗೂ ಸ್ವಾಭಿಮಾನಿ ಸುಂದರ್ ಕುಟುಂಬ ಘನಘೋರ ಕಥೆ. ಇರೋ ಇಬ್ಬರು ಮಕ್ಕಳು ಚಿಕ್ಕವರಲ್ಲ. ಮಗನಿಗೆ 29 ವರ್ಷ. ಮಗಳಿಗೆ 24 ವರ್ಷ ವಯಸ್ಸು. ವಿಧಿಯಾಟಕ್ಕೆ ಇಬ್ಬರೂ ದೈಹಿಕ ಹಾಗೂ ಮಾನಸಿಕವಾಗಿ ಬಲವಿಲ್ಲದೆ ಬಳಲುತ್ತಿದ್ದಾರೆ.

    ಮೂರು ದಶಕಗಳಿಂದ 2 ಮಕ್ಕಳ ಸಾಕುವುದಕ್ಕೆ ಸುಂದರ್-ಅರುಣ ದಂಪತಿ ಪಟ್ಟ ಕಷ್ಟ ಹೇಳಲು ಪದ ಸಾಲದು. ಮಕ್ಕಳ ಒಂದೊಂದು ಹೆಜ್ಜೆಯ ಹಿಂದೆಯೂ ದೈವಸ್ವರೂಪಿ ಅಮ್ಮನ ನೆರಳಿದೆ. ಹಾಗಾಗಿ ಅಮ್ಮನದ್ದು ಅಕ್ಷರಶಃ ಗೃಹಬಂಧನ. ಅಮ್ಮ ಮಕ್ಕಳ ನೋಡ್ಕೊಂಡ್ರೆ, ಮಕ್ಕಳ ಮೆಡಿಸನ್ ಹಾಗೂ ತುತ್ತಿನ ಚೀಲಕ್ಕಾಗಿ 3 ದಶಕಗಳಿಂದ ದಣಿವರಿಯದ ದುಡಿಮೆ ಅಪ್ಪನದ್ದು. ಆದರೆ ಪಾಪಿ ಕೊರೊನಾ ಕಾಟಕ್ಕೆ ತಿಂಗಳಿಂದ ಮನೆಯಲ್ಲಿದ್ದ ಅಪ್ಪನೂ ಪಾಶ್ರ್ವವಾಯುವಿನಿಂದ ಹಾಸಿಗೆ ಹಿಡಿದಿದ್ದಾರೆ. ಹಾಸಿಗೆಯಿಂದ ಏಳಲಾಗದೆ, ಮಾತನಾಡಲಾಗದೆ ವಿಧಿಗೆ ಹಿಡಿಶಾಪ ಹಾಕೊಂಡ್ ಮೌನಕ್ಕೆ ಜಾರಿದ್ದಾರೆ.

    ಮನುಷ್ಯನಿಗೆ ಜೀವನದಲ್ಲಿ ಒಂದೋ-ಎರಡೋ ಕಷ್ಟ ಬಂದರೆ ಎದುರಿಸಿ, ಜಯಿಸಬಹುದು. ಮೇಲಿಂದ ಮೇಲೆ ಕಷ್ಟಗಳು ಬಂದರೆ ಎಂತವರಿಗೂ ಗೆಲುವು ಸಾಧಿಸುವುದು ಅಸಾಧ್ಯ. ಈ ಕುಟುಂಬ ಕಥೆ ಅದಕ್ಕಿಂತ ಭಿನ್ನವಾಗೇನಿಲ್ಲ. 2019ರ ವರುಣನ ರಣರುದ್ರ ಪ್ರವಾಹಕ್ಕೆ ಮನೆ-ಮಠ ಬಿಟ್ಟು 3 ಕಿ.ಮೀ. ಮಕ್ಕಳನ್ನ ಹೆಗಲ ಮೇಲಾಕ್ಕೊಂಡ್ ಬಂದು ನಿರಾಶ್ರಿತ ಕೇಂದ್ರ ಸೇರಿದರು. 2 ತಿಂಗಳ ಬಳಿಕ ಮನೆ ಸೇರಿ ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಎದುರಾಗಿದ್ದೆ ಕಣ್ಣಿಗೆ ಕಾಣದ ನರಹಂತಕ ಕೊರೊನಾ. ತಿಂಗಳಿಂದ ದುಡಿಮೆ ಇಲ್ಲ. ಕೆಲಸಕ್ಕೆ ಹೋಗಂಗಿಲ್ಲ. ತುತ್ತು ಅನ್ನಕ್ಕಾಗಿ ಪರದಾಡಿದ ಪರಿಪಾಟಲು ಅಷ್ಟಿಷ್ಟಲ್ಲ. ಮಕ್ಕಳನ್ನೂ ಸಂಭಾಳಿಸಬೇಕು. ಅವರ ಹೊಟ್ಟೆ ತುಂಬಿಸಬೇಕು. ತೋಳಲ್ಲಿ ಶಕ್ತಿ ಇದೆ. ದುಡಿಯೋ ಚೈತನ್ಯ-ಹುಮ್ಮಸ್ಸು ಎರಡೂ ಇದೆ. ಆದರೆ ಲಾಕ್‍ಡೌನ್‍ನಿಂದಾಗಿ ಕೆಲಸಕ್ಕೆ ಹೋಗಂಗಿಲ್ಲ. ಸಂಪಾದನೆಯೂ ಇಲ್ಲ. ಹಾಗಾಗಿ ಚಿಂತಾಕ್ರಾಂತನಾಗಿದ್ದ ಸುಂದರ್ ಇದೀಗ, ಪಾರ್ಶ್ವವಾಯುವಿಗೆ ತುತ್ತಾಗಿ ಬಲಗೈ, ಬಲಗಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಆ ತಾಯಿ ಮಕ್ಕಳ ನೋಡ್ತಾಳೋ, ಗಂಡನ ನೋಡ್ತಾಳೋ, ದುಡಿಯುತ್ತಾಳೋ ಯಾವುದೊಂದು ಅಸಾಧ್ಯ. ಇದರಿಂದಾಗಿ ಬಾಗಿಲ ಹೊಸ್ತಿಲ ಬಳಿ ನಿಂತು ದಾನಿಗಳ ದಾರಿ ಕಾಯ್ತಿದ್ದಾರೆ ಆ ತಾಯಿ.

    ಒಂದೆಡೆ ಕಲ್ಲಿನ ದೇವರು ಕಲ್ಲೇ ಅನ್ನೋದಕ್ಕೆ ಸಾಕ್ಷಿ. ಮತ್ತೊಂದೆಡೆ ವಿಧಿಗೆ ಸೆಡ್ಡು ಹೊಡೆದಿದ್ದವರ ಬದುಕಿನ ಮೇಲೆ ವಿಧಿಯ ಮತ್ತೊಂದು ಸವಾರಿ. ಮಗದೊಡೆ ಬದುಕು, ಬದುಕುವ ಆಸೆಯನ್ನ ಕಿತ್ತು ತಿನ್ನುಂತಿರೋ ಕೊರೊನಾ. ಈ ಕುಟುಂಬ ಸ್ಥಿತಿ ನಮ್ಮ ಶತ್ರುಗೂ ಬರಬಾರದರು. ವಯಸ್ಸಿಗೆ ಬಂದ ಮಕ್ಕಳಲ್ಲಿ ಚೈತನ್ಯವಿಲ್ಲ. ದುಡಿಯೋ ಅಪ್ಪನ ತೋಳ ರಟ್ಟೆಯಲ್ಲಿ ಶಕ್ತಿ ಇಲ್ಲ. ಮಕ್ಕಳು-ಗಂಡನ ಸಾಕೋ ಹಠವಿರೋ ಅಮ್ಮನಿಗೆ ಪರಿಸ್ಥಿತಿ-ವಯಸ್ಸು ಎರಡೂ ಸಪೋರ್ಟ್ ಮಾಡುತ್ತಿಲ್ಲ. ಹಾಗಾಗಿ ಕಣ್ಣೀರಲ್ಲೇ ಕೈ ತೊಳೆಯುತ್ತಿರೋ ಈ ಕುಟುಂಬಕ್ಕೆ ತುಂಬು ಹೃದಯದ ದಾನಿಗಳ ನೆರವು ಬೇಕಿದೆ.

  • ನಿರಂತರ 20 ಗಂಟೆ ವಿಡಿಯೋ ಗೇಮ್ ಆಡಿ ಸೊಂಟದಿಂದ ಕೆಳಭಾಗ ಸ್ವಾಧೀನವೇ ಹೋಯ್ತು

    ನಿರಂತರ 20 ಗಂಟೆ ವಿಡಿಯೋ ಗೇಮ್ ಆಡಿ ಸೊಂಟದಿಂದ ಕೆಳಭಾಗ ಸ್ವಾಧೀನವೇ ಹೋಯ್ತು

    ಬೀಜಿಂಗ್: ಚೀನಾದ ಯುವಕನೊಬ್ಬ ಸೈಬರ್ ಕೆಫೆಯಲ್ಲಿ ನಿರಂತರವಾಗಿ 20 ಗಂಟೆ ಕಾಲ ವಿಡಿಯೋ ಗೇಮ್ ಆಡಿದ ಪರಿಣಾಮ ಆತನ ಸೊಂಟದಿಂದ ಕೆಳಭಾಗ ಸಂಪೂರ್ಣ ಸ್ವಾಧೀನವೇ ಕಳೆದುಕೊಂಡಿದ್ದಾನೆ.

    ಯುವಕ ವಿಡಿಯೋ ಗೇಮ್ ಆಡಲು ಜನವರಿ 27ರಂದು ಸಂಜೆ ಸೈಬರ್ ಕೆಫೆಗೆ ಹೋಗಿದ್ದು, ಜನವರಿ 28 ರ ಮಧ್ಯಾಹ್ನದ ವರೆಗೂ ಗೇಮ್ ಆಡಿದ್ದಾನೆ. ನಂತರ ಆತ ಶೌಚಾಲಯಕ್ಕೆ ಹೋಗಬೇಕೆಂದು ಮೇಲೇಳಲು ಪ್ರಯತ್ನಿಸಿದ್ದಾನೆ. ಆದರೆ ಅವನಿಗೆ ಏಳಲು ಸಾಧ್ಯವಾಗಲಿಲ್ಲ. ಆಗ ಅವನಿಗೆ ತಾನು ಯಾವ ಕಡೆಯೂ ಅಲುಗಾಡಲು ಸಾಧ್ಯವಾಗುತ್ತಿಲ್ಲ ಎಂದು ಗೊತ್ತಾಗಿದೆ. ಅದೇ ಕೆಫೆಯಲ್ಲಿ ಇದ್ದ ಆತನ ಸ್ನೇಹಿತನಲ್ಲಿ ತನ್ನ ಸೊಂಟದಿಂದ ಕೆಳಭಾಗದ ಅಂಗಗಳು ಸ್ವಾಧೀನ ಇಲ್ಲದಂತೆ ಆಗಿದೆ ಎಂಬುದನ್ನ ಹೇಳಿದ್ದು, ಅವರು ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ನಂತರ ಯುವಕನನ್ನು ಸ್ಟ್ರೆಚ್ಚರ್ ನಲ್ಲಿ ಇರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

    ಗೇಮ್ ಕಂಪ್ಲೀಟ್ ಮಾಡಲು ಗೆಳೆಯನಿಗೆ ಹೇಳ್ದ: ಆಶ್ಚರ್ಯವೆಂದರೆ ಆ ರೀತಿಯ ಪರಿಸ್ಥಿತಿ ಇದ್ದರೂ ಯುವಕ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕಿದ್ದ. ತನ್ನ ಬದಲಿಗೆ ತನ್ನ ಆಟವನ್ನು ಪೂರ್ಣಗೊಳಿಸಲು ಸ್ನೇಹಿತನಿಗೆ ಮನವಿ ಮಾಡಿಕೊಂಡಿದ್ದ.

    ಯುವಕ ಯಾವ ಆಟವನ್ನು ಆಡುತ್ತಿದ್ದನು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಸದ್ಯಕ್ಕೆ ಆ ಯುವಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನಾ ಇಲ್ಲವಾ ಎಂಬ ಮಾಹಿತಿಯೂ ಸ್ಪಷ್ಟವಾಗಿಲ್ಲ.

    ಗೇಮ್‍ಗೆ ಅಡಿಕ್ಷನ್ ಯುವಕ ಜನಾಂಗಕ್ಕೆ ಮಾರಕವಾದ ಅನೇಕ ಉದಾಹರಣೆಗಳಿವೆ. ಈ ಹಿಂದೆ ಚೀನಾದಲ್ಲಿ ನಿರಂತರ 24 ಗಂಟೆಗಳ ಕಾಲ ತನ್ನ ಮೊಬೈಲ್ ಫೋನ್‍ನಲ್ಲಿ ಗೇಮ್ ಆಡಿ ಮಹಿಳೆಯೊಬ್ಬಳು ತನ್ನ ದೃಷ್ಟಿಯನ್ನೇ ಕಳೆದುಕೊಂಡಿದ್ದಳು ಎಂದು ವರದಿಯಾಗಿತ್ತು. ಇದನ್ನೂ ಓದಿ: ಸತತ 24 ಗಂಟೆ ವಿಡಿಯೋ ಗೇಮ್ ಆಡಿ ಕಣ್ಣು ಕಳೆದುಕೊಂಡ ಯುವತಿ

  • ವ್ಯಕ್ತಿಯ ಪಾರ್ಶ್ವವಾಯು ನಿವಾರಣೆಗಾಗಿ 10 ವರ್ಷದ ಬಾಲಕಿಯನ್ನು ಬಲಿ ಕೊಟ್ರು!

    ವ್ಯಕ್ತಿಯ ಪಾರ್ಶ್ವವಾಯು ನಿವಾರಣೆಗಾಗಿ 10 ವರ್ಷದ ಬಾಲಕಿಯನ್ನು ಬಲಿ ಕೊಟ್ರು!

    ರಾಮನಗರ: ಪಾರ್ಶ್ವವಾಯು ರೋಗ ನಿವಾರಣೆಗಾಗಿ ಮುದ್ದಾದ ಬಾಲಕಿಯನ್ನು ಕೊಲೆ ಮಾಡಿರುವ ಆರೊಪಿಗಳನ್ನು ಬಂಧಿಸುವಲ್ಲಿ ಮಾಗಡಿ ಪೊಲೀಸರು ಯಶ್ವಸಿಯಾಗಿದ್ದಾರೆ.

    10 ವರ್ಷ ವಯಸ್ಸಿನ ಆಯೇಶಾ ವಾಮಾಚಾರಕ್ಕೆ ಬಲಿಯಾದ ಮಗು. ಮಾಗಡಿ ಪಟ್ಟಣದ ಹೊಸ ಮಸೀದಿ ಮೊಹಲ್ಲಾದ ನಿವಾಸಿಯಾದ ಮಹಮದ್ ನೂರುಲ್ಲಾ ಹಾಗು ಜಮೀಲಾ ದಂಪತಿಯ ಪುತ್ರಿ ಆಯೇಶಾ ಮಾರ್ಚ್ 1 ರಂದು ಕಾಣೆಯಾಗಿದ್ದಳು. ಕಾಣೆಯಾದ ಎರಡು ದಿನಗಳ ನಂತರ ಮಾರ್ಚ್ 3, ಶುಕ್ರವಾರದಂದು ಮಾಗಡಿ ಪಟ್ಟಣದ ಕಲ್ಯಾಗೇಟ್ ಸಮೀಪದ ಹೊಸಳ್ಳಿ ರಸ್ತೆಯ ದರ್ಗಾ ಬಳಿ ಆಯೇಶಾಳ ಶವ ಪತ್ತೆಯಾಗಿತ್ತು.

    ಪ್ರಕರಣದ ಬೆನ್ನತ್ತಿದ ಮಾಗಡಿ ಪೊಲೀಸರು ಪಟ್ಟಣದ ಮಹಮದ್ ವಾಸೀಲ್, ರಾಶಿದುನ್ನಿಸ್ಸಾ ಹಾಗೂ ನಸೀಂ ತಾಜ್ ಜೊತೆಗೆ ಓರ್ವ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ. ಮಹಮದ್ ವಾಸೀಲ್ ಮೃತ ಆಯೇಶಾಳ ಸೋದರ ಸಂಬಂಧಿ. ವಾಸೀಲ್ ಸಹೋದರ ಮಹಮದ್ ರಫೀ ಎಂಬವರು ಪಾರ್ಶ್ವವಾಯುವಿಗೆ ಒಳಗಾಗಿದ್ರು. 40 ದಿನಗಳಲ್ಲಿ ವಾಮಾಚಾರ ನಡೆಸಿದ್ರೆ ಸಹೋದರ ಗುಣಮುಖವಾಗುತ್ತಾರೆಂದು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

    ವಾಮಾಚಾರಕ್ಕೂ ಮೊದಲು ಬಾಲಕಿಯನ್ನು ವಶೀಕರಣಗೊಳಿಸಿ ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಲಾಗಿತ್ತು. ನಂತರ ಬಾಲಕಿಯ ದೇಹವನ್ನು ಚೀಲದಲ್ಲಿ ತುಂಬಿ ಕಸದ ರಾಶಿಯಲ್ಲಿ ಎಸೆದು ಹೋಗಿದ್ದರು. ಈ ಸಂಬಂಧ ಪೊಲೀಸರು ಈಗ ನಾಲ್ವರನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ.