Tag: ಪಾರು

  • ನಿಜ ಜೀವನದಲ್ಲೂ ವಿಶೇಷ ಚೇತನ ತಮ್ಮನನ್ನು ಅಮ್ಮನಂತೆ ಸಲಹುತ್ತಿರುವ `ಪಾರು’

    ನಿಜ ಜೀವನದಲ್ಲೂ ವಿಶೇಷ ಚೇತನ ತಮ್ಮನನ್ನು ಅಮ್ಮನಂತೆ ಸಲಹುತ್ತಿರುವ `ಪಾರು’

    ಕಿರುತೆರೆಯ ಬ್ಯೂಟಿ ಪಾರು ಅಲಿಯಾಸ್ ಮೋಕ್ಷಿತ್ ಪೈ ಸದ್ಯ `ಪಾರು’ ಧಾರಾವಾಹಿ ಜತೆ ತಮಿಳಿನ ಸೀರಿಯಲ್‌ನಲ್ಲೂ ಬ್ಯುಸಿಯಾಗಿದ್ದಾರೆ. ಸೀರಿಯಲ್‌ನಲ್ಲಿ ಸಹೋದರ ಗಣಿಗೆ ಪ್ರೀತಿಯ ಅಕ್ಕನಾಗಿರುವ ಪಾರು, ರಿಯಲ್ ಲೈಫ್‌ನಲ್ಲಿರುವ ವಿಶೇಷ ಚೇತನ ತಮ್ಮನಿಗೆ ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ.

     

    View this post on Instagram

     

    A post shared by Mokshitha Pai (@mokshitha22)

    ಟಿವಿಲೋಕದ ನಂಬರ್ ಒನ್ ಶೋಗಳಲ್ಲಿ ಒಂದಾಗಿರುವ ಪಾರು ಧಾರಾವಾಹಿಯಲ್ಲಿ ತೆರೆಯ ಮೇಲೆ ನಟಿಸುವವರ ನಿಜ ಜೀವನದಲ್ಲಿ ಒಂದಲ್ಲ ಒಂದು ಕಷ್ಟ ಇರುತ್ತೆ. ಎಲ್ಲವನ್ನೂ ಮರೆತು ನಗುತ್ತಾ ನಟನೆ ಮಾಡುತ್ತಾ ಇರುತ್ತಾರೆ. ಮೋಕ್ಷಿತಾ ಅವರ ಜೀವನದಲ್ಲೂ ಹಾಗೆ, ಅವರಿಗೆ ರಿಯಲ್ ಲೈಫ್‌ನಲ್ಲಿ ವಿಕಲ ಚೇತನ ತಮ್ಮನಿದ್ದು, ಪಾರುನೇ ಅವನನ್ನ ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಮುಜುಗರ ಪಟ್ಟುಕೊಳ್ಳದೇ, ತಮ್ಮನ ಪಾಲನೆ ಮಾಡುತ್ತಾರೆ. ಇದನ್ನೂ ಓದಿ:ಹೊಂಬಾಳೆ ಬ್ಯಾನರ್ ಮುಂದಿನ ಚಿತ್ರಕ್ಕೆ `ಮಹಾನಟಿ’ ಕೀರ್ತಿ ಸುರೇಶ್ ನಾಯಕಿ

     

    View this post on Instagram

     

    A post shared by Mokshitha Pai (@mokshitha22)

    ಇನ್ನು ಧಾರಾವಾಹಿಯಲ್ಲಿ ಗಣಿ ಎಂಬ ತಮ್ಮನಿದ್ದಾನೆ. ಪಾರುಗೆ ಗಣಿ ಅಂದ್ರೆ ತುಂಬಾ ಇಷ್ಟ. ಧಾರಾವಾಹಿಯಲ್ಲಿ ಇವರಿಗೆ ತಾಯಿ ಇಲ್ಲದ ಕಾರಣ, ಗಣಿಯನ್ನು ಪಾರು ಅಮ್ಮನಂತೆ ನೋಡಿಕೊಳ್ಳುತ್ತಿದ್ದಾಳೆ. ಗಣಿಗೆ ಅಕ್ಕ ಪಾರು ಅಂದ್ರೆ ಪ್ರಾಣ. ಅಲ್ಲದೇ ರಿಯಲ್ ಲೈಫ್ ನಲ್ಲೂ ಗಣಿ ಮೋಕ್ಷಿತ ಅವರಿಗೆ ತಮ್ಮನಂತೆ ಆಗಿ ಬಿಟ್ಟಿದ್ದಾನೆ. ಪಾರು ಈ ಬಾರಿಯ ರಕ್ಷಾ ಬಂಧನವನ್ನು ಇಬ್ಬರು ತಮ್ಮಂದಿರೊಂದಿಗೆ ಆಚರಿಸಿದ್ದಾರೆ. ಒಂದು ಅವರ ನಿಜವಾದ ತಮ್ಮ.ʻಪಾರುʼ ಧಾರಾವಾಹಿ ಕೊಟ್ಟ ಸಹೋದರ ಗಣಿ, ಇಬ್ಬರಿಗೂ ರಾಖಿಯನ್ನು ಕಟ್ಟಿ, ಸಿಹಿ ತಿನ್ನಿಸಿ ಸಂಭ್ರಮ ಪಟ್ಟಿದ್ದಾರೆ. ಆ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಮಿಳು ಕಿರುತೆರೆಯತ್ತ `ಪಾರು’ ಖ್ಯಾತಿಯ ಮೋಕ್ಷಿತಾ ಪೈ

    ತಮಿಳು ಕಿರುತೆರೆಯತ್ತ `ಪಾರು’ ಖ್ಯಾತಿಯ ಮೋಕ್ಷಿತಾ ಪೈ

    ನ್ನಡ ಕಿರುತೆರೆಯ ಬ್ಯೂಟಿ ಪಾರು ಮೋಕ್ಷಿತಾ ಪೈ ತಮ್ಮ ವೃತ್ತಿ ಬದುಕಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಇದೀಗ `ಪಾರು’ ಸೀರಿಯಲ್ ನಾಯಕಿ ಮೋಕ್ಷಿತಾ ಪೈ ತಮಿಳು ಕಿರುತೆರೆಯತ್ತ ಮುಖ ಮಾಡಿದ್ದಾರೆ.ನಟಿಯಾಗಬೇಕು ಎಂಬ ಕನಸು ಕಾಣದ ಮಧ್ಯಮ ವರ್ಗದ ಹುಡುಗಿ ಮೋಕ್ಷಿತಾ ಪೈ, ತಮಗೆ ಸಿಕ್ಕ `ಪಾರು’ ಧಾರಾವಾಹಿ ಅವಕಾಶವನ್ನ ಸರಿಯಾಗಿ ಸದುಪಯೋಗಪಡಿಸಿಕೊಂಡು ಕನ್ನಡಿಗರ ಮನದಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಂಡರು. ಅಂದಿನಿಂದ ಇಂದಿನವರೆಗೂ ಟಿವಿ ಪರದೆಯಲ್ಲಿ ತಮ್ಮ ಅಭಿಮಾನಿಗಳಿಗೆ ಮೋಡಿ ಮಾಡುತ್ತಲೇ ಬಂದಿದ್ದಾರೆ. ಇದೀಗ ತಮ್ಮ ವೃತ್ತಿ ಜೀವನದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ತಮಿಳು ಕಿರುತೆರೆಯಲ್ಲಿ ಮಿಂಚಲು ಪಾರು ರೆಡಿಯಾಗಿದ್ದಾರೆ.

    `ಮೀನಾಕ್ಷಿ ಪೊಣ್ಣು’ ಧಾರಾವಾಹಿಯಲ್ಲಿ ಮೋಕ್ಷಿತಾ ಪೈ ಅವರಿಗೆ ಪ್ರಮುಖ ಪಾತ್ರ ಲಭಿಸಿದೆ. ಸೀರಿಯಲ್‌ನಲ್ಲಿ ರೆಬೆಲ್ ಹುಡುಗಿಯ ಪಾತ್ರದಲ್ಲಿ ಮೋಕ್ಷಿತಾ ಪೈ ಕಾಣಿಸಿಕೊಳ್ಳಲಿದ್ದಾರೆ. ಮೀನಾಕ್ಷಿಯ ಎರಡನೇ ಪುತ್ರಿಯಾಗಿ ಶಕ್ತಿ ಪಾತ್ರದಲ್ಲಿ ಮೋಕ್ಷಿತಾ ಪೈ ಅಭಿನಯಿಸಲಿದ್ದಾರೆ. ಸದ್ಯದಲ್ಲಿಯೇ ತಮಿಳಿನ ಖಾಸಗಿ ವಾಹಿನಿಯಲ್ಲಿ `ಮೀನಾಕ್ಷಿ ಪೊಣ್ಣು’ ಧಾರಾವಾಹಿ ಪ್ರಸಾರವಾಗಲಿದೆ. ಈ ಧಾರಾವಾಹಿಯ ಮತ್ತೊಂದು ಪ್ಲಸ್ ಪಾಯಿಂಟ್ ಅಂದ್ರೆ ಕನ್ನಡ ಮತ್ತು ತಮಿಳಿನಲ್ಲಿ ಈಗಾಗಲೇ ಗಮನ ಸೆಳೆದಿರುವ ಹಿರಿಯ ನಟಿ ಅರ್ಚನಾ ಮೋಕ್ಷಿತಾ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಇಸ್ಮಾರ್ಟ್ ಜೋಡಿಗೆ ಜೊತೆಯಾಗಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

    ಕನ್ನಡದ `ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ರೀಮೇಕ್ ಈ `ಮೀನಾಕ್ಷಿ ಪೊಣ್ಣು’ ಧಾರಾವಾಹಿಯಾಗಿದೆ. ಮುಗ್ಧ ಹುಡುಗಿ ಪಾರು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮೋಕ್ಷಿತಾ ತಮಿಳಿನಲ್ಲಿ ಸಖತ್ ರಗಡ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೀರಿಯಲ್ ಕಥೆ ಕೇಳಿದ ಕೂಡಲೇ ಈ ಪ್ರಾಜೆಕ್ಟ್ ತಾನು ಮಾಡಲೇಬೇಕು ಎಂದು ಖುಷಿಯಿಂದ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಇನ್ನು ಮುಗ್ಧ ಪಾರುಗೂ ರಗಡ್ ಶಕ್ತಿ ಪಾತ್ರಕ್ಕೂ ಸಿಕ್ಕಾಪಟ್ಟೆ ವ್ಯತ್ಯಾಸವಿದ್ದು, ನೆಚ್ಚಿನ ನಟಿ ಪಾರು ಅವರ ಹೊಸ ಅವತಾರ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಸೀರಿಯಲ್ ಜತೆ ಸಾಕಷ್ಟು ಸಿನಿಮಾಗಳು ನಟಿಯ ಕೈಯಲ್ಲಿದೆ. ಇನ್ನು ತಮಿಳು ಕಿರುತೆರೆಯಲ್ಲಿ ಮೋಕ್ಷಿತಾ ಹೇಗೆಲ್ಲಾ ಕಮಾಲ್ ಮಾಡಬಹುದು ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಾನೇನು ಮನುಷ್ಯನಲ್ವ, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ – ಕೈ ಮುಗಿದು ನಲಪಾಡ್ ಕಣ್ಣೀರು

    ನಾನೇನು ಮನುಷ್ಯನಲ್ವ, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ – ಕೈ ಮುಗಿದು ನಲಪಾಡ್ ಕಣ್ಣೀರು

    – ಕಾರನ್ನು ನಾನು ಡ್ರೈವ್ ಮಾಡುತ್ತಿರಲಿಲ್ಲ
    – ಗೂಂಡಾ, ಗೂಂಡಾ, ಎಂದ್ರೆ ನಾನು ಏನು ಮಾಡಿದ್ದೇನೆ?

    ಬೆಂಗಳೂರು: ನಾನು ಅವತ್ತು ಏನೂ ಮಾಡಿಲ್ಲ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಮಾಧ್ಯಮಗಳ ಮುಂದೆ ಕೈ ಮುಗಿದು ಮನವಿ ಮಾಡಿಕೊಂಡಿದ್ದಾನೆ.

    ಮಾಧ್ಯಮಗಳ ಜೊತೆ ಮಾತನಾಡಿದ ನಲಪಾಡ್, ಭಾನುವಾರ ಘಟನೆ ನಡೆದಾಗ ಹಿಂದಿನ ಗಾಡಿಯಲ್ಲಿ ನಾನಿದ್ದೆ. ನಾನೇ ಸಹಾಯ ಮಾಡಿ, ಅವರನ್ನು ಕಳುಹಿಸಿಕೊಟ್ಟು ವಾಪಸ್ ಬಂದಿದ್ದೇನೆ. ಇದರ ಹಿಂದೆ ಯಾರೆಲ್ಲಾ ಏನೋ ಪ್ಲಾನ್ ಮಾಡಿದ್ದಾರೆ. ಅಪಘಾತ ಆಕಸ್ಮಿಕವಾಗಿ ನಡೆದಿದೆ ಎಂದಿದ್ದಾನೆ. ಇದನ್ನೂ ಓದಿ: ಹಿಟ್ ಆಂಡ್ ರನ್ ಕೇಸ್, ಗನ್‍ಮ್ಯಾನ್ ಅರೆಸ್ಟ್ – ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿದ್ದ ನಲಪಾಡ್ ಸಿಕ್ಕಿ ಬಿದ್ದಿದ್ದು ಹೇಗೆ?

    ನಾನು ಗಾಡಿ ಓಡಿಸಿಲ್ಲ. ನನಗೆ 84 ವರ್ಷದ ತಾತ, ಅಜ್ಜಿ ಇದ್ದಾರೆ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ. ನಾನು ಅವತ್ತು ಏನೂ ಮಾಡಿಲ್ಲ ಎಂದು ಭಾವುಕರಾಗಿ ಕೈ ಮುಗಿದು ನಲಪಾಡ್ ಮನವಿ ಮಾಡಿಕೊಂಡಿದ್ದಾನೆ.ಇದನ್ನೂ ಓದಿ: ಸರಣಿ ಅಪಘಾತ ಮಾಡಿ ಬೆಂಟ್ಲಿ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ ನಲಪಾಡ್

    ಈ ಹಿಂದೆ ನಡೆದ ಘಟನೆಯಿಂದ ನಾನು ತುಂಬಾ ಬದಲಾಗಿದ್ದೀನಿ. ಆದರೆ ಪತ್ರಿಕೆಯಲ್ಲಿ ಇಬ್ಬರನ್ನು ಕೊಲೆ ಮಾಡಿದ್ದಾರೆ ಎಂದು ಬರೆದಿದ್ದಾರೆ. ನಮ್ಮ ಮಾವ, ಪತ್ನಿಗೆ ಏನು ಎಂದು ಉತ್ತರ ಕೊಡಲಿ. ಏನು ಮಾಡಲು ಹೊರಟ್ಟಿದ್ದೀರಿ? ನಾನೇನು ಮನುಷ್ಯ ಅಲ್ವ, ನನಗೆ ಮನಸ್ಸಿಲ್ವ. ಗೂಂಡಾ, ಗೂಂಡಾ, ಗೂಂಡಾ ಎಂದರೆ ನಾನೇನು ಮಾಡಿದ್ದೀನಿ ಎಂದು ಕಣ್ಣೀರು ಹಾಕಿದನು.

    ಕಾರು ಓಡಿಸಿರುವುದು ಬಾಲು, ಎಲ್ಲರಿಗೂ ಗೊತ್ತಿದೆ ನಾನು ಎಲ್ಲೇ ಹೋದರು ಬಾಲುನೇ ಕಾರು ಓಡಿಸುವುದು. ಬೇಕಿದ್ದರೆ ವಿಡಿಯೋ ನೋಡಿ ಅವನೇ ಕಾರು ಓಡಿಸಿರುವುದು. ನಾನು ಕಾರು ಓಡಿಸಿಲ್ಲ. ಹೀಗಾಗಿ ನನ್ನ ಮೇಲೆ ಏನು ಆರೋಪ ಮಾಡುತ್ತೀರ ಎಂದು ಪ್ರಶ್ನೆ ಮಾಡಿದನು.

    ಒಂದು ಸಾಕ್ಷಿಯಿದ್ದರೂ ಸಾಬೀತುಪಡಿಸಿ, ನಾನು ನ್ಯಾಯಾಲಯಕ್ಕೆ ಹೋಗಿ ಅವರ ವಿರುದ್ಧ ಹೋರಾಟ ಮಾಡುತ್ತೇನೆ. ಇದರ ಹಿಂದೆ ಯಾರದ್ದೋ ಕೈವಾಡ ಇದೆ. ಅವರು ಮತ್ತೆ ನನ್ನನ್ನು ಜೈಲಿಗೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಪರವಾಗಿಲ್ಲ ಜನರು ನೋಡಿದ್ದಾರೆ. ಅವರು ನನ್ನ ಜಾಮೀನು ಕ್ಯಾನ್ಸಲ್ ಮಾಡಿ ಜೈಲಿಗೆ ವಾಪಸ್ ಹೋಗುವಂತೆ ಮಾಡಿದರೂ ನಾನು ಹೋಗುತ್ತೇನೆ ಎಂದು ಗರಂ ಆದನು.

    ಕಾರು ಅಪಘಾತ ಮಾಡಿದ್ದು, ಇದು ಜಗತ್ತಿನ ಮೊದಲ ಕೇಸಲ್ಲ. ನಮ್ಮ ಜನರನ್ನು ಕಳುಹಿಸಿ ಅವರನ್ನು ನಾವೇ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅವರ ಖರ್ಚುನ್ನು ನಾವೇ ನೋಡಿಕೊಂಡಿದ್ದೇವೆ ಎಂದು ನಲಪಾಡ್ ಹೇಳಿದ್ದಾನೆ.

  • ಏರ್ ಶೋ ಬೆಂಕಿ ಅವಘಡದಲ್ಲಿ ಪವಾಡಸದೃಶ ಪಾರಾದ ಬಾಲಕಿ!

    ಏರ್ ಶೋ ಬೆಂಕಿ ಅವಘಡದಲ್ಲಿ ಪವಾಡಸದೃಶ ಪಾರಾದ ಬಾಲಕಿ!

    ಬೆಂಗಳೂರು: ಏರ್ ಶೋ ನಡೆಯುತ್ತಿದ್ದ ವೇಳೆ ಪಾರ್ಕಿಂಗ್ ಸ್ಥಳದಲ್ಲಾದ ಬೆಂಕಿ ಅನಾಹುತದಿಂದ ಬಾಲಕಿಯೊಬ್ಬಳು ಪವಾಡ ರೀತಿಯಲ್ಲಿ ಪಾರಾಗಿರುವ ಸಂಗತಿ ಬೆಳಕಿಗೆ ಬಂದಿದೆ.

    ಏರ್ ಶೋ ನೋಡಲು ಬಂದಿದ್ದ ಕಿರಣ್ ಸಿಂಗ್ ಎಂಬವರ ಮಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇಂದು ಏರ್ ಶೋ ನೋಡಲು ಕಿರಣ್ ಸಿಂಗ್ ಕುಟುಂಬ ಸಮೇತರಾಗಿ ಹೋಗಿದ್ದರು. ಆದರೆ ಸ್ಥಳದಲ್ಲಿ ಬಿಸಿಲು ತುಂಬಾ ಇದ್ದ ಕಾರಣ ಕಿರಣ್ ಅವರ ಮಗಳು ಕಾರಿನಲ್ಲಿ ಮಲಗಿರುತ್ತೇನೆ ಎಂದು ಹೋಗಿದ್ದಳು. ಬಳಿಕ ಬೆಂಕಿ ಅನಾಹುತ ನಡೆಯುವ ಅರ್ಧ ಗಂಟೆಯ ಮೊದಲಷ್ಟೇ ಮಗಳನ್ನು ಕಾರಿನಿಂದ ಕಿರಣ್ ಸಿಂಗ್ ಕರೆದುಕೊಂಡು ಹೋಗಿದ್ದರು. ನಂತರ ಪುನಃ ಬಂದು ನೋಡುವಷ್ಟರಲ್ಲಿ ಕಾರು ಸುಟ್ಟು ಕರಕಲಾಗಿತ್ತು. ಕಾರು ಹೋದರು ಚಿಂತೆ ಇಲ್ಲ. ಮಗಳು ಬದುಕಿ ಉಳಿದಿದ್ದೇ ಸಾಕು ಎಂದು ತಂದೆ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ:ಮದ್ವೆಯಾಗಿ ಮೊದ್ಲ ಬಾರಿಗೆ ಪತಿಯ ಮನೆಗೆ ಈ ಕಾರಿನಲ್ಲೇ ಬಂದಿದ್ದೆ: ಕಾರ್ ಮಾಲಕಿ ಕಣ್ಣೀರು

    ಪಬ್ಲಿಕ್ ಟಿವಿ ಜೊತೆ ಘಟನೆ ಕುರಿತು ಕರೆ ಮಾಡಿ ಮಾತನಾಡಿದ ಕಿರಣ್ ಸಿಂಗ್, ಯಾಕೋ ಸುಸ್ತಾಗುತ್ತಿದೆ ಎಂದು ಮಗಳು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ನಮ್ಮ ಹೋಂಡಾ ಸಿಟಿ ಕಾರಿನೊಳಗೆ ಹೋಗಿ ಮಲಗಿದ್ದಳು. ಬಳಿಕ ಅನಾಹುತ ನಡೆಯುವ ಕೇವಲ ಅರ್ಧ ಗಂಟೆ ಮುನ್ನವಷ್ಟೇ ನನ್ನ ಪತ್ನಿ ಮಗಳನ್ನು ಕರೆತರಲು ಹೇಳಿದ್ದಕ್ಕೆ ಕಾರ್ ಬಳಿ ಹೋಗಿ ಶೋ ನೋಡಲು ಆಕೆಯನ್ನು ವಾಪಾಸ್ ಕರೆದುಕೊಂಡು ಬಂದೆ. ಅದೃಷ್ಟವಶಾತ್ ದೇವರ ಧಯೆಯಿಂದ ನಮ್ಮ ಮಗಳು ಉಳಿದಳು ಎಂದು ತಿಳಿಸಿದರು. ಇದನ್ನೂ ಓದಿ:1 ಸಾವಿರ ಕಾರ್ ಪಾರ್ಕ್ ಮಾಡಿದ್ದ ಜಾಗದಲ್ಲಿ ಬೆಂಕಿ ಅವಘಡ: ಅಗ್ನಿಶಾಮಕ ದಳದ ಡಿಜಿಪಿ

    ಏರೋ ಇಂಡಿಯಾ 2019ರ ಏರ್ ಶೋ ಅಗ್ನಿ ಅವಘಡ ಸಂಭವಿಸಿದ್ದು, ಸದ್ಯಕ್ಕೆ ಬೆಂಕಿಯನ್ನು ನಿಯಂತ್ರಣಕ್ಕೆ ಬಂದಿದೆ. ಆದರೆ ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಸಾರ್ವಜನಿಕರಿಗೆ ಸ್ಥಳಕ್ಕೆ ಅವಕಾಶ ನೀಡಲಾಗುವುದು ಎಂದು ಅಗ್ನಿಶಾಮಕ ದಳದ ಡಿಜಿಪಿ ಎಂಎನ್ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಏರ್ ಶೋ ನಡೆಯುತ್ತಿರುವ ಕಾರಣ ಸ್ಥಳದಲ್ಲಿ 1 ಸಾವಿರ ಕಾರುಗಳು ಪಾರ್ಕ್ ಮಾಡಲಾಗಿತ್ತು. ಶೋಗೆ ಹೆಚ್ಚಿನ ಜನರು ಆಗಮಿಸಿದ ಕಾರಣ ಕಾರುಗಳನ್ನು ಮೈದಾನದಂತಹ ಪ್ರದೇಶದಲ್ಲಿ ತಾತ್ಕಾಲಿವಾಗಿ ನಿಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಸ್ಥಳದಲ್ಲಿ ಹುಲ್ಲು ಹೆಚ್ಚಾಗಿರುವುದರಿಂದ ಗಾಳಿಗೆ ಬೆಂಕಿ ಬಹುಬೇಗ ಹರಡಿದೆ. ಪರಿಣಾಮ 300ಕ್ಕೂ ಹೆಚ್ಚು ಕಾರುಗಳು ಹಾನಿಯಾಗಿದೆ ಎಂದು ಸ್ಪಷ್ಟನೆ ನೀಡಿದರು.

    https://www.youtube.com/watch?v=Dqyc4h3Tc1Y

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೇಗವಾಗಿ ಬಂದು ಮತ್ತೊಂದು ಬೈಕಿಗೆ ಡಿಕ್ಕಿ- ಪವಾಡ ರೀತಿಯಲ್ಲಿ ಪಾರಾದ ದಂಪತಿ, ಮಗು

    ವೇಗವಾಗಿ ಬಂದು ಮತ್ತೊಂದು ಬೈಕಿಗೆ ಡಿಕ್ಕಿ- ಪವಾಡ ರೀತಿಯಲ್ಲಿ ಪಾರಾದ ದಂಪತಿ, ಮಗು

    ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ನಿಯಮ ಪಾಲಿಸದ ಬೈಕ್ ಸವಾರ ವೇಗವಾಗಿ ಬಂದು ಮತ್ತೊಂದು ಬೈಕಿಗೆ ಡಿಕ್ಕಿ ಹೊಡೆದಿರುವ ಭೀಕರ ದೃಶ್ಯ ಸೆರೆಯಾಗಿದೆ. ಈ ಭೀಕರ ಅಪಘಾತ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದ ಬಳಿ ಸಂಭವಿಸಿದೆ.

    ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಅಪಘಾತ ನಡೆದಿದ್ದು, ತುಮಕೂರು ಮಾರ್ಗದಿಂದ ಬೆಂಗಳೂರು ಕಡೆಗೆ ಬರುತಿದ್ದ ಬೈಕಿಗೆ ಅದೇ ಮಾರ್ಗದಲ್ಲಿ ಬಂದ ಮತ್ತೊಂದು ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಆ ದಂಪತಿ ಹಾಗೂ ಪುಟ್ಟ ಮಗು ಪವಾಡ ರೀತಿಯಲ್ಲಿ ಪಾರಾಗಿದ್ದಾರೆ.

    ಅಪಘಾತವಾದ ತಕ್ಷಣವೇ ದಂಪತಿ ಬಿದ್ದು ಉರುಳಾಡಿದರೆ, ಬೈಕಿನ ಮುಂದೆ ಕುಳಿತಿದ್ದ ಪುಟ್ಟ ಮಗು ಬೈಕಿನಲ್ಲಿ 500 ಮೀ. ಮುಂದೆ ಸಾಗಿ ಡಿವೈಡರ್ ಬಳಿಯ ಹುಲ್ಲಿನ ಪೊದೆಯಲ್ಲಿ ಬಿದ್ದು ಸುರಕ್ಷಿತವಾಗಿದೆ. ಈ ದೃಶ್ಯಗಳು ಕಾರ್ ನಲ್ಲಿ ಇದ್ದವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

    ಇಬ್ಬರು ಬೈಕ್ ಸವಾರರಿಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಅಪಘಾತ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ. ಜೀವ ಗಟ್ಟಿ ಇದ್ದರೆ ಬಂಡೆ ಬಂದು ಅಪ್ಪಳಿಸಿದ್ದರು ಏನೂ ಆಗಲ್ಲ ಎಂಬುದಕ್ಕೆ ಈ ಅಪಘಾತವೇ ಸಾಕ್ಷಿಯಾಗಿದೆ. ಅವಸರ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದೆ, ಈ ಭೀಕರ ಅಪಘಾತಕ್ಕೆ ಸಾಕ್ಷಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಸ್ಸಿನಡಿ ಸಿಲುಕಿದ್ರೂ ಹಿಂಬದಿಯಿಂದ ಹೊರ ಬಂದು ಎದ್ದು ನಿಂತ ಸವಾರ!

    ಬಸ್ಸಿನಡಿ ಸಿಲುಕಿದ್ರೂ ಹಿಂಬದಿಯಿಂದ ಹೊರ ಬಂದು ಎದ್ದು ನಿಂತ ಸವಾರ!

    ಮಂಗಳೂರು: ಅದೃಷ್ಟ ಇದ್ದರೆ ಸಾವನ್ನೂ ಗೆದ್ದು ಬರಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಆಕ್ಟೀವಾ ಸವಾರನೊಬ್ಬ ಬಸ್ಸಿನ ಕೆಳಗೆ ಸಿಲುಕಿದರೂ ಎದ್ದು ಬಂದಿರುವ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

    ಜಿಲ್ಲೆಯ ವಿಟ್ಲ ಬಳಿಯ ಚಂದಳಿಕೆ ಎಂಬಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊಂಡಾ ಆಕ್ಟೀವಾ ಸವಾರನೊಬ್ಬ ಮಾರುತಿ ಓಮ್ನಿಯನ್ನು ಓವರ್ ಟೇಕ್ ಮಾಡುವ ಯತ್ನದಲ್ಲಿ ಜಾರಿ ಬಿದ್ದಿದ್ದಾನೆ. ಪರಿಣಾಮ ಎದುರುಗಡೆಯಿಂದ ಬರುತ್ತಿದ್ದ ಬಸ್ ಅಡಿಗೆ ಸಿಲುಕಿದ್ದಾನೆ. ಬಳಿಕ ಸವಾರ ಪವಾಡಸದೃಶ ರೀತಿಯಲ್ಲಿ ಹಿಂಬದಿಯ ಟೈರ್ ಬಳಿಯಿಂದ ಎದ್ದು ಬಂದಿದ್ದಾನೆ.

    ಸದ್ಯ ಈ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೇವಲ ಅದೃಷ್ಟ ಬಲದಿಂದಲೇ ಸವಾರ ಬದುಕಿ ಬಂದಿದ್ದಾನೆ ಎನ್ನುವಂತಿತ್ತು.

  • ಅಚ್ಚರಿ ವಿಡಿಯೋ: ಟ್ರಕ್ ಚಕ್ರದ ಕೆಳಗೆ ಸಿಲುಕಿದರೂ ಬದುಕಿ ಬಂದ ಬೈಕ್ ಸವಾರ

    ಅಚ್ಚರಿ ವಿಡಿಯೋ: ಟ್ರಕ್ ಚಕ್ರದ ಕೆಳಗೆ ಸಿಲುಕಿದರೂ ಬದುಕಿ ಬಂದ ಬೈಕ್ ಸವಾರ

    ಬೀಜಿಂಗ್: ಟ್ರಕ್‍ವೊಂದರ ಚಕ್ರದ ಕೆಳಗೆ ಬೈಕ್ ಸವಾರ ಸಿಲುಕಿಕೊಂಡರೂ ಅದೃಷ್ಟವಶಾತ್ ಬದುಕಿ ಬಂದಿರುವ ಅಚ್ಚರಿಯ ಘಟನೆ ನೈರುತ್ಯ ಚೀನಾದ ಗುಯಾಂಗ್‍ನಲ್ಲಿ ನಡೆದಿದೆ.

    ಈ ಘಟನೆ ಅಕ್ಟೋಬರ್ 24 ರಂದು ಸುಮಾರು ಬೆಳಗ್ಗೆ 11. 30 ಕ್ಕೆ ನಡೆದಿದ್ದು, ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕ್ ಸವಾರನಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮಾಡುತ್ತಿದ್ದಾರೆ.

    ಸಿಸಿಟಿಯ ಪ್ರಕಾರ, ಗುಯಾಂಗ್ ರಸ್ತೆಯೊಂದರ ಸಿಗ್ನಲ್‍ನಲ್ಲಿ ವಾಹಗಳು ನಿಂತಿದ್ದವು. ಸ್ವಲ್ಪ ಸಮಯದ ನಂತರ ಗ್ರೀನ್ ಸಿಗ್ನಲ್ ಬಿದ್ದ ನಂತರ ಟ್ರಕ್ ಒಂದು ಮುಂದೆ ಬಂದಿದೆ. ಆದರೆ ಅದರ ಮುಂದೆ ಬೈಕ್ ಮತ್ತು ಬೈಕ್ ಸವಾರ ಸಿಲುಕಿಕೊಂಡಿದ್ದು, ಎಲ್ಲರೂ ಬೈಕ್ ಸವಾರ ಸತ್ತೇ ಹೋದ ಅಂದುಕೊಂಡಿದ್ದರು. ಆದರೆ ಟ್ರಕ್ ಕೆಳಗೆ ಸವಾರ ಉರುಳಿ ಉರುಳಿ ನಂತರ ಚಕ್ರದ ಬಳಿಯಿಂದ ಆಚೆಗೆ ಹೋಗಿದ್ದಾರೆ. ಆದರೆ ಟ್ರಕ್ ಬೈಕ್ ಅನ್ನು ಸುಮಾರು 30 ಮೀಟರ್ ದೂರದವರೆಗೆ ತಳ್ಳಿಕೊಂಡು ಹೋಗಿದೆ.

     

  • ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಬೃಹತ್ ಮರ – ಪವಾಡ ಸದೃಶ ರೀತಿಯಲ್ಲಿ ಸವಾರ ಪಾರು

    ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಬೃಹತ್ ಮರ – ಪವಾಡ ಸದೃಶ ರೀತಿಯಲ್ಲಿ ಸವಾರ ಪಾರು

    ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ಬೈಕ್ ಮೇಲೆ ಬೃಹತ್ ಮರವೊಂದು ಬಿದಿದ್ದು, ಬೈಕ್ ಸವಾರ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ತಾಲೂಕಿನ ನಂದಿ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ 7 ರ ಮಾರ್ಗದ ರಸ್ತೆಯಲ್ಲಿ ನಡೆದಿದೆ. ಸುಲ್ತಾನ್ ಪೇಟೆ ಗ್ರಾಮದ ಬೈಕ್ ಸವಾರ ನಾಗರಾಜು ಅದೃಷ್ಟವಶಾತ್ ಘಟನೆಯಲ್ಲಿ ಪಾರಾಗಿದ್ದಾರೆ.

    ನಾಗರಾಜು ಅವರು ಬೈಕ್‍ನಲ್ಲಿ ತೆರಳುತ್ತಿದ್ದಾಗ ಏಕಾಏಕಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರಿಂದ ಸವಾರ ಪಾರಾಗಿದ್ದು, ಟಿವಿಎಸ್ ಎಕ್ಸ್ ಎಲ್ ವಾಹನ ಮರದಡಿ ಸಿಲುಕಿಕೊಂಡಿದೆ.

    ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.