Tag: ಪಾರಿವಾಳ

  • KSRTC ಇನ್ಸ್‌ಪೆಕ್ಟರ್‌ನಿಂದ ಪಾರಿವಾಳಗಳಿಗೆ 900 ರೂ. ದಂಡ

    KSRTC ಇನ್ಸ್‌ಪೆಕ್ಟರ್‌ನಿಂದ ಪಾರಿವಾಳಗಳಿಗೆ 900 ರೂ. ದಂಡ

    ಬೆಂಗಳೂರು: ಕೋಳಿಗಳಿಗೆ ಟಿಕೆಟ್ ತೆಗೆದುಕೊಂಡಿಲ್ಲ ಎಂದು ಪ್ರಯಾಣಿಕನೊಬ್ಬನಿಗೆ 100 ರೂ. ದಂಡ ಹಾಕಿದ್ದ ಕೆಎಸ್‍ಆರ್ ಟಿಸಿ ಈ ಬಾರಿ ಪಾರಿವಾಳಗಳಿಗೆ 900 ರೂ. ದಂಡ ಪ್ರಯೋಗ ಮಾಡಿದೆ.

    ಲಿಂಗಸೂರುನಿಂದ ರಾಯಚೂರುಗೆ ಪ್ರಯಾಣ ಬೆಳೆಸಿದ್ದ ವ್ಯಕ್ತಿಯೊಬ್ಬರು, ಒಂದ್ ಬಾಕ್ಸ್ ನಲ್ಲಿ ಪಾರಿವಾಳಗಳನ್ನು ಹಿಡಿದುಕೊಂಡಿದ್ದರು. ಆದರೆ ಆ ವ್ಯಕ್ತಿ ಪಾರಿವಾಳಗಳಿಗೆ ಟಿಕೆಟ್ ತೆಗೆದುಕೊಂಡಿರಲಿಲ್ಲ.

    ಈ ವೇಳೆ ಚೆಕ್ಕಿಂಗ್ ಮಾಡಲು ಬಂದ ಇನ್ಸ್ ಪೆಕ್ಟರ್ ಒಂದ್ ಬಾಕ್ಸ್ ಪಾರಿವಾಳಗಳಿಗೆ ಭರ್ತಿ 900 ರೂ. ಫೈನ್ ಹಾಕಿದ್ದಾರೆ. ಈ ಹಿಂದೆ ಕೋಳಿಗೆ ಟಿಕೆಟ್ ತೆಗೆದುಕೊಂಡಿದ್ದಕ್ಕೆ ವ್ಯಕ್ತಿಯೊಬ್ಬರು ಸೀಟಿನಲ್ಲಿಯೇ ಕೋಳಿಯನ್ನು ಕುಳ್ಳಿರಿಸಿದ್ದರು.

    ಸದ್ಯ ಕೆಎಸ್‍ಆರ್ ಟಿಸಿಯ ಈ ನಡೆ ಈಗ ಸಾರ್ವಜನಿಕರಲ್ಲಿ ನಗುವಿನ ಜೊತೆ ಸಿಟ್ಟು ಕೂಡ ತರಿಸಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪಾರಿವಾಳಗಳಿಗೆ ಆಶ್ರಯತಾಣವಾದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನ!

    ಪಾರಿವಾಳಗಳಿಗೆ ಆಶ್ರಯತಾಣವಾದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನ!

    ಚಿಕ್ಕಬಳ್ಳಾಪುರ: ವಿಧಾನಸೌಧವನ್ನೇ ಮೀರಿಸುವ ಹಾಗೆ ಸುಂದರವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನ ನಿರ್ಮಾಣವಾಗಿದೆ. ಭವನದ ಒಳಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದರೆ, ಭವನದ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಪಾರಿವಾಳಗಳು ಬೀಡುಬಿಟ್ಟಿವೆ.

    ಸಿಬ್ಬಂದಿ ಬಂದು ಕಚೇರಿ ತೆರೆಯುತ್ತಿದ್ದಂತೆ ಹಾರಿಬಂದು ಭವನದ ಮೇಲೆ ಸದ್ದು ಮಾಡುತ್ತವೆ. ಭವನದ ಮೇಲೆ ಇರುವ ರಾಷ್ಟ್ರಲಾಂಛನದಿಂದ ಹಿಡಿದು ಗೋಪುರಗಳ ಮೇಲೆ ಹೂವು ಪೋಣಿಸಿ ಹಾರ ಹಾಕಿದಂತೆ ಸಾಲಾಗಿ ಕುಳಿತು ಮನ ಸೆಳೆಯುತ್ತಿವೆ ಎಂದು ಸ್ಥಳೀಯ ಚಂದ್ರಶೇಖರ್ ಹೇಳಿದ್ದಾರೆ.

    ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿರುವ ಪಾರಿವಾಳಗಳನ್ನು ಯಾರೂ ಸಾಕಿಲ್ಲ. ಕಚೇರಿಗಳಲ್ಲಿ ಅವರು ಬಂದಿಲ್ಲ ಇವರು ಬಂದಿಲ್ಲ ಎಂದು ಬೇಸರದಿಂದ ಕಾಲ ಕಳೆಯುವ ಸಾರ್ವಜನಿಕರು ಪಾರಿವಾಳಗಳ ಚಿತ್ತಾರದ ಹಾರಾಟ-ಗೂಯ್ ಗುಟ್ಟುವ ಸದ್ದನ್ನ ನೋಡಿ ಬೇಸರ ಕಳೆಯುತ್ತಾರೆ. ಮತ್ತೊಂದೆಡೆ ಮುಗಿಲೆತ್ತರದ ಕಟ್ಟಡಗಳ ಮೇಲೆ ಯಾರ ಕಿರಿಕಿರಿಯೂ ಇಲ್ಲದೆ ಇರುವುದರಿಂದ ಸ್ವಚ್ಛಂದ ಸ್ವತಂತ್ರವಾಗಿ ಆಶ್ರಯಿಸುತ್ತವೆ ಎಂದು ಪಶುವೈಧ್ಯ ಡಾ.ಜ್ಞಾನೇಶ್ ತಿಳಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ, ಪಾರಿವಾಳಗಳು ನಗರ ಪ್ರದೇಶಗಳಿಂದ ಕಾಣೆಯಾಗುತ್ತಿವೆ. ಆದರೆ ನಗರಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮೇಲೆ ಪಾರಿವಾಳಗಳ ಪರಿವಾರವೇ ಬಿಡಾರ ಹೂಡಿದ್ದು, ಭವನದ ಮೇಲೆ ಬಾನಾಡಿ ಪಾರಿವಾಳಗಳ ಕಲರವ ನೋಡುಗರ ಮನಸೂರೆಗೊಂಡಿದೆ.

  • ಪಾಕಿಸ್ತಾನದಿಂದ ಹಾರಿ ಬಂದ ಪಾರಿವಾಳ!

    ಪಾಕಿಸ್ತಾನದಿಂದ ಹಾರಿ ಬಂದ ಪಾರಿವಾಳ!

    ಚಂಡೀಗಢ: ಪಾಕಿಸ್ತಾನದಿಂದ ಹಾರಿ ಬಂದಿದೆ ಎನ್ನಲಾದ ಪಾರಿವಾಳವನ್ನು ಪಂಜಾಬ್ ರಾಜ್ಯದ ಅಜನಾಲಾ ಕ್ಷೇತ್ರದ ದಯಾಲಪುರ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.

    ದಯಾಲಪುರ ಗ್ರಾಮದ ಮುಖಂಡ ಜಸ್ಬೀರ್ ಸಿಂಗ್ ಎಂಬವರ ಮನೆಯಂಗಳದಲ್ಲಿ ಪಾರಿವಾಳ ಕಾಣಿಸಿಕೊಂಡಿತ್ತು. ಪಾರಿವಾಳದ ಕಾಲಿಗೆ ಗುಲಾಬಿ ಬಣ್ಣದ ಬ್ಯಾಂಡ್ ಕಟ್ಟಲಾಗಿತ್ತು. ಬ್ಯಾಂಡ್‍ನಲ್ಲಿ 03404061730 ಎಂಬ ಮೊಬೈಲ್ ನಂಬರ್ ಜೊತೆಗೆ ಶಕೀಲ್ ಎಂಬ ಹೆಸರನ್ನು ಬರೆಯಲಾಗಿತ್ತು.

    ಮೊದಲಿಗೆ ಮನೆಯಂಗಳದಲ್ಲಿ ಪಾರಿವಾಳ ಕಾಣಿಸಿಕೊಂಡಾಗ ಜಸ್ಬೀರ್ ಸಿಂಗ್ ಅದರತ್ತ ಲಕ್ಷ್ಯ ನೀಡಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಬೇರೆ ಪಾರಿವಾಳಗಿಂತ ಭಿನ್ನವಾಗಿ ಕಂಡಿದ್ದರಿಂದ ಕಾಳು ನೀಡಿ ಹಿಡಿದಿದ್ದಾರೆ. ಆದ್ರೆ ಪಾರಿವಾಳ ಹೆಚ್ಚು ದೂರ ಹಾರುವ ಶಕ್ತಿ ಹೊಂದಿರದ ಕಾರಣ ಜಸ್ಬೀರ್ ಕೈಗೆ ಸಿಕ್ಕಿದೆ. ಬ್ಯಾಂಡ್‍ನಲ್ಲಿ ಅನುಮಾನಾಸ್ಪದ ನಂಬರ್ ಹಾಗೂ ಹೆಸರು ಬರೆದಿದ್ದರಿಂದ ಸ್ಥಳೀಯ ಗಗ್ಗೋಮಾಹಲ್ ಪೊಲೀಸರ ವಶಕ್ಕೆ ಪಾರಿವಾಳವನ್ನು ನೀಡಿದ್ದಾರೆ.

    ಅನುಮಾನಾಸ್ಪದ ರೀತಿಯಲ್ಲಿ ಹಾರಿ ಬಂದ ಪಾರಿವಾಳವನ್ನು ವಶಕ್ಕೆ ಪಡೆದಿರುವ ಮಾಹಿತಿಯನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗಿದೆ. ಅಲ್ಲದೇ ಪಾರಿವಾಳ ಕುರಿತಾಗಿ ಸ್ಥಳೀಯರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಗಗ್ಗೋಮಾಹಲ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸುಖ್‍ದೇವ್ ಸಿಂಗ್ ತಿಳಿಸಿದ್ದಾರೆ.

  • ಒಂದಲ್ಲ, ಎರಡಲ್ಲ ಬರೋಬ್ಬರಿ 90 ಪಾರಿವಾಳಗಳಿಗೆ ವಿಷವಿಟ್ಟ ಪಾಪಿಗಳು!

    ಒಂದಲ್ಲ, ಎರಡಲ್ಲ ಬರೋಬ್ಬರಿ 90 ಪಾರಿವಾಳಗಳಿಗೆ ವಿಷವಿಟ್ಟ ಪಾಪಿಗಳು!

    ಬೆಂಗಳೂರು: ಬೆಳ್ಳಂಬೆಳಗ್ಗೆ ಮೈ ಬೆವರಿಳಿಸಲು ವಾಕಿಂಗ್ ಜಾಗಿಂಗ್ ಎಂದು ಪಾರ್ಕಿಗೆ ಕಾಲಿಟ್ಟವರು ಒಂದು ಕ್ಷಣ ನಡುಗಿ ಹೋಗಿದ್ದರು. ಪಾರ್ಕಿನಲ್ಲಿ ಹಾರಾಡುತ್ತಿದ್ದ ಪಕ್ಷಿಗಳ ರಾಶಿ ರಾಶಿ ಹೆಣ ಅಲ್ಲಿ ಬಿದ್ದಿತ್ತು. ಒಂದಲ್ಲ, ಎರಡಲ್ಲ ಬರೋಬ್ಬರಿ ತೊಂಬತ್ತು ಪಾರಿವಾಳಗಳು ಸಾಲಾಗಿ ಮೃತಪಟ್ಟಿತ್ತು.

    ಪಾರಿವಾಳಗಳನ್ನು ನೋಡುವುದಕ್ಕಾಗಿಯೇ ಪಾರ್ಕಿಗೆ ಬರುತ್ತಿದ್ದ ಅವುಗಳು ಸತ್ತು ಬಿದ್ದಿರುವುದನ್ನು ಕಂಡು ಜನ ಕಣ್ಣೀರು ಹಾಕಿದರು. ದಿನನಿತ್ಯ ಕಾಳು ಹಾಕಿ ಖುಷಿಪಡುತ್ತಿದ್ದ ಮಕ್ಕಳು ಇಂದು, ಅಮ್ಮಾ ಪಾರಿವಾಳಗಳು ನಿದ್ದೆ ಮಾಡುತ್ತಿದ್ದಾವಾ ಎಂದು ಮುಗ್ಧವಾಗಿ ಕೇಳುತ್ತಿದ್ದತು. ಬುಲ್ ಟೆಂಪಲ್ ಗಣೇಶ್ ದೇಗುಲದ ಬ್ಯೂಗಲ್ ರಾಕ್ ಪಾರ್ಕಿನಲ್ಲಿ ಈ ಅಮಾನವೀಯ ದೃಶ್ಯ ಕಂಡುಬಂದಿದೆ.

    ರಾತ್ರೋರಾತ್ರಿ ಈ ಪಕ್ಷಿಗಳಿಗೆ ಆಹಾರದಲ್ಲಿ ವಿಷ ಬೆರೆಸಲಾಗಿದೆ. ಕೆಲ ಪಕ್ಷಿಗಳನ್ನು ಕತ್ತು ಕೊಯ್ದು ಸಾಯಿಸಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ಮೂಕ ಪ್ರಾಣಿ ಪಕ್ಷಿಗಳನ್ನು ಅಧಿಕಾರ ದಾಹಕ್ಕಾಗಿ ಚಿತ್ರ ವಿಚಿತ್ರವಾಗಿ ಕೊಲ್ಲಲಾಗುತ್ತದೆ. ಇದು ಕೂಡ ಅಮಾವಾಸ್ಯೆ ದಿನ ನಡೆದ ಕೃತ್ಯವಾಗಿದ್ದು, ವಾಮಾಚಾರದ ಉದ್ದೇಶದಿಂದಲೇ ಸಾಯಿಸಲಾಗಿದೆ ಎಂದು ಜನ ಕಿರಿಕಾಡಿದ್ದಾರೆ.

    ಪಾರಿವಾಳಗಳು ಸೇರಿದಂತೆ ಪಾರ್ಕಿನಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಅಷ್ಟು ಪಕ್ಷಿಗಳು ಸಾವನ್ನಪ್ಪಿದೆ. ಜನ ಕಣ್ಣೀರಿಟ್ಟು ಪಾರ್ಕಿನಲ್ಲೇ ಸಮಾಧಿ ಮಾಡಿದರು. ಮೂಕ ಪಕ್ಷಿಗಳನ್ನು ಕೊಲ್ಲುವ ಪ್ರವೃತ್ತಿಯವರೆಗೆ ಮೊದಲು ಶಿಕ್ಷಯಾಗಲಿ ಎಂದು ಜನ ಇದೇ ವೇಳೆ ಆಗ್ರಹಿಸಿದರು.

  • ಬಜಾರಲ್ಲಿ ಹಾರಾಡಲಿರೋದು ಭೂಗತ ಪಾರಿವಾಳ!

    ಬಜಾರಲ್ಲಿ ಹಾರಾಡಲಿರೋದು ಭೂಗತ ಪಾರಿವಾಳ!

    ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರ ಈಗಾಗಲೇ ವಿಭಿನ್ನವಾಗಿರೋ ಪೋಸ್ಟರ್, ಟ್ರೈಲರ್‍ಗಳಿಂದಾಗಿ ಸಖತ್ ಸೌಂಡ್ ಮಾಡುತ್ತಿದೆ. ಫೆಬ್ರವರಿ ಒಂದರಂದು ತೆರೆ ಕಾಣುತ್ತಿರೋ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿರೋ ಕುತೂಹಲ ಒಂದೆರಡಲ್ಲ. ಅದೆಲ್ಲದಕ್ಕೂ ಕಾರಣ ಪಾರಿವಾಳ!

    ಈವರೆಗೂ ಪಾರಿವಾಳಗಳನ್ನು ಸಿನಿಮಾಗಳಲ್ಲಿ ಬಳಸುವ ಪರಿಪಾಠ ನಡೆದುಕೊಂಡು ಬಂದಿದೆ. ಆದರೆ ಪಾರಿವಾಳಗಳೇ ಪ್ರಧಾನವಾಗಿರುವ, ಅದರ ಮೂಲಕವೇ ಕಥೆ ಬಿಚ್ಚಿಕೊಳ್ಳುವ ಸಿನಿಮಾಗಳು ಬಂದಿಲ್ಲ. ಈ ನಿಟ್ಟಿನಲ್ಲಿ ಬಜಾರ್ ಚಿತ್ರ ಮೈಲಿಗಲ್ಲಾಗಿ ದಾಖಲಾಗುತ್ತದೆ.

    ಬೆಂಗಳೂರಿನಂಥಾ ನಗರಗಳಲ್ಲಿ ಪಾರಿವಾಳಗಳ ರೇಸ್ ಆಗಾಗ ನಡೆಯುತ್ತಿರುತ್ತದೆ. ಈಗ ಮೋಜಿಗಷ್ಟೇ ಸೀಮಿತವಾಗಿರೋ ಈ ಆಟ ಒಂದು ಕಾಲದಲ್ಲಿ ರೌಡಿಸಂನ ಸೂತ್ರವಾಗಿತ್ತೆಂಬುದು ಅಚ್ಚರಿಯ ವಿಚಾರ. ಅಂಥಾ ಸೂಕ್ಷ್ಮ ಕಥೆಯನ್ನು ಕಲೆ ಹಾಕಿಯೇ ಸುನಿ ಈ ಚಿತ್ರವನ್ನು ರೂಪಿಸಿದ್ದಾರೆ. ನವ ನಾಯಕ ಧನ್ವೀರ್ ಇಲ್ಲಿ ವಿಭಿನ್ನವಾದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈ ಮೂಲಕವೇ ಅವರು ನಾಯಕನಾಗಿಯೂ ಅದ್ಧೂರಿ ಎಂಟ್ರಿ ಕೊಡುವ ಸನ್ನಾಹದಲ್ಲಿದ್ದಾರೆ.

    https://www.youtube.com/watch?v=m1gTKSLidMs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಜಾರ್: ಸಿಂಪಲ್ ಸುನಿಯ ಸಿನಿ ಜರ್ನಿ ಸಲೀಸಿನದ್ದಲ್ಲ!

    ಬಜಾರ್: ಸಿಂಪಲ್ ಸುನಿಯ ಸಿನಿ ಜರ್ನಿ ಸಲೀಸಿನದ್ದಲ್ಲ!

    ಸಿಂಪಲ್ಲಾಗೊಂದು ಲವ್ ಸ್ಟೋರಿ ಚಿತ್ರದ ಮೂಲಕವೇ ಸ್ಟಾರ್ ನಿರ್ದೇಶಕರಾಗಿ ಹೊರ ಹೊಮ್ಮಿದವರು ಸುನಿ. ಈ ಚಿತ್ರದ್ದು ಕನ್ನಡ ಚಿತ್ರರಂಗದಲ್ಲಿಯೇ ಅಚ್ಚರಿದಾಯಕವಾದ ಗೆಲುವು. ಒಂದು ಹೊಸ ತಂಡ, ಫ್ರೆಶ್ ಆದ ಕಥೆಯೊಂದಿಗೆ ಸುನಿ ಮಾಡಿದ್ದ ಮೋಡಿ ಸಣ್ಣದೇನಲ್ಲ. ಹೊರ ಜಗತ್ತಿನ ಪಾಲಿಗೆ ಸುನಿ ಸಿಂಪಲ್ಲಾಗೊಂದ್ ಲವ್ ಸ್ಟೋರಿ ಮೂಲಕ ಏಕಾಏಕಿ ಉದ್ಭವಿಸಿದ ಹುಡುಗ ಅನ್ನಿಸಿದ್ದರೂ ಇರಬಹುದು. ಆದರೆ, ಸುನಿ ಯುವ ನಿರ್ದೇಶಕ ಸಿಂಪಲ್ ಸುನಿ ಆಗಿದ್ದರ ಹಾದಿಯೇನೂ ಅಷ್ಟು ಸಲೀಸಿನದ್ದಲ್ಲ.

    ಹೆಸರಘಟ್ಟ ಸೀಮೆಯಲ್ಲಿಯೇ ಹುಟ್ಟಿ ಬೆಳೆದವರು ಸುನಿ. ಅವರ ತಂದೆ ಇನ್ಸ್ ಪೆಕ್ಟರ್ ಆಗಿದ್ದವರು. ಆದ್ದರಿಂದ ಸುನಿ ಪಾಲಿಗೆ ಮನೆಯ ವಾತಾವರಣದಲ್ಲಿ ಕಷ್ಟ ಗೊತ್ತಾಗಿಲ್ಲ. ಆದರೆ ಆ ಕಾಲದಲ್ಲಿಯೇ ಓದುವ, ಕಥೆ ಕವನ ಬರೆಗೋ ಗೀಳಿತ್ತಲ್ಲಾ? ಅದುವೇ ಸಿನಿಮಾ ಹುಚ್ಚು ಹತ್ತಿಸಿ ಸುನಿಯನ್ನು ಕಡು ಕಷ್ಟದ ಟ್ರ್ಯಾಕಿಗೆ ತಂದು ಬಿಟ್ಟಿತ್ತು.

    ಸಿನಿಮಾ ನಿರ್ದೇಶಕನಾಗೋ ಕನಸು ಹೊತ್ತು ಗಾಂಧಿನಗರದತ್ತ ಬಂದ ಸುನಿ ಕಷ್ಟದ ಹಾದಿ ಸವೆಸಿದ್ದಾರೆ. ಕೆಲ ನಿರ್ದೇಶಕರ ಬಳಿ ಅಸಿಸ್ಟೆಂಟ್ ಆಗಿದ್ದುಕೊಂಡು ವರ್ಷಾಂತರಗಳ ಕಾಲ ದುಡಿದಿದ್ದಾರೆ. ಆದರೆ ಏನೇ ಕಷ್ಟಗಳು ಬಂದರೂ ಎದೆಗುಂದದೆ ಮುಂದುವರೆದ ಪರಿಣಾಮವಾಗಿಯೇ ಅವರು ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ.

    ಸಿಂಪಲ್ ಆಗೊಂದ್ ಲವ್ ಸ್ಟೋರಿಯಿಂದ ಆರಂಭವಾದ ಅವರ ಪ್ರಯಾಣ ಬಜಾರ್ ವರೆಗೂ ಬಂದು ತಲುಪಿಕೊಂಡಿದೆ. ಆದರೆ ಬಜಾರ್ ಸುನಿಯ ಈ ಹಿಂದಿನ ಚಿತ್ರಗಳಿಗಿಂತಲೂ ಸಂಪೂರ್ಣ ಭಿನ್ನ. ಈ ಸಿನಿಮಾ ಈ ಪಾಟಿ ಸೆನ್ಸೇಷನ್ ಕ್ರಿಯೇಟ್ ಮಾಡಿರೋದೇ ಆ ಕಾರಣಕ್ಕಾಗಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾರಿವಾಳ ಹಿಡಿಯೋ ನೆಪದಲ್ಲಿ ಕಳ್ಳತನ ಎಸಗ್ತಿದ್ದ ಕಳ್ಳರು ಅಂದರ್: ಸಿಕ್ಕಿಬಿದ್ದಿದ್ದು ಹೇಗೆ?

    ಪಾರಿವಾಳ ಹಿಡಿಯೋ ನೆಪದಲ್ಲಿ ಕಳ್ಳತನ ಎಸಗ್ತಿದ್ದ ಕಳ್ಳರು ಅಂದರ್: ಸಿಕ್ಕಿಬಿದ್ದಿದ್ದು ಹೇಗೆ?

    ಬೆಂಗಳೂರು: ಪಾರಿವಾಳ ಹಿಡಿಯುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಅನಿಲ್‍ಕುಮಾರ್ ಜಾನಿ (19), ರಾಹುಲ್ ನಾಯ್ಕ (20) ಹಾಗೂ ಓರ್ವ ಬಾಲಾಪರಾಧಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 2 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಬಂಧನದಿಂದಾಗಿ ಐದಕ್ಕೂ ಹೆಚ್ಚು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹೇಗೆ ಸಂಚು ರೂಪಿಸುತ್ತಿದ್ದರು?
    ಆರೋಪಿಗಳು ಕ್ಯಾಪ್ ಧರಿಸಿ ಬೈಕ್ ನಲ್ಲಿ ಬಂದು ಬೀಗ ಹಾಕಿರುವ ಮನೆಗಳನ್ನ ಗುರುತಿಸಿ ಮನೆಗಳ್ಳತನಕ್ಕೆ ಪ್ಲಾನ್ ಹಾಕಿಕೊಳ್ಳುತ್ತಿದ್ದರು. ಬೀಗ ಹಾಕಿರುವ ಮನೆಗಳ ಮೇಲೆ ಹಾರಲು ಬಾರದ ಪಾರಿವಾಳ ಬಿಟ್ಟು ಯಾರಿಗೂ ಅನುಮಾನ ಬಾರದಂತೆ ಕಳ್ಳತನ ಮಾಡುತ್ತಿದ್ದರು. ಕಳ್ಳತನದ ವೇಳೆ ಯಾರಾದರೂ ಅನುಮಾನಿಸಿ ಪ್ರಶ್ನಿಸಿದರೆ ಪಾರಿವಾಳ ಟೆರೆಸ್ ಮೇಲೆ ಬಂದಿದೆ ಹಿಡಿದುಕೊಳ್ಳೋಕೆ ಬಂದಿದ್ದೇವೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು.

    ಸಿಕ್ಕಿಬಿದ್ದಿದ್ದು ಹೇಗೆ?
    ಕುಮಾರಸ್ವಾಮಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ಘಟನಾ ಸ್ಥಳದಲ್ಲಿದ್ದ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಓರ್ವ ಬಾಲಕ ಅನುಮಾನಸ್ಪದವಾಗಿ ಪಾರಿವಾಳ ಹಿಡಿದು ಓಡಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಸಿಸಿ ಟಿವಿಯ ಜಾಡನ್ನು ಹಿಡಿದು ಬೆನ್ನತ್ತಿದ್ದಾರೆ. ಈ ವೇಳೆ ಪೊಲೀಸರಿಗೆ ಓರ್ವ ಬಾಲಕ ಸಿಕ್ಕಿದ್ದಾನೆ. ವಿಚಾರಣೆಗೆ ಒಳಪಡಿಸಿದಾಗ ಬಾಲಕ ಕಳ್ಳತನವನ್ನು ಒಪ್ಪಿಕೊಂಡಿದ್ದು, ಕೃತ್ಯದಲ್ಲಿ ಇನ್ನೂ ಇಬ್ಬರು ಭಾಗಿಯಾಗಿರುವುದಾಗಿ ತಿಳಿಸಿದ್ದಾನೆ. ಈ ವೇಳೆ ಆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ.

  • ಸೋಲದೇವನಹಳ್ಳಿ ಮಗು ಕೊಲೆ ಪ್ರಕರಣಕ್ಕೆ ಟ್ವಿಸ್ಟ್- 15 ವರ್ಷದ ಬಾಲಕನ ಬಂಧನ

    ಸೋಲದೇವನಹಳ್ಳಿ ಮಗು ಕೊಲೆ ಪ್ರಕರಣಕ್ಕೆ ಟ್ವಿಸ್ಟ್- 15 ವರ್ಷದ ಬಾಲಕನ ಬಂಧನ

    ಬೆಂಗಳೂರು: ಗುರುವಾರದಂದು ಸೋಲದೇವನಹಳ್ಳಿ ನಡೆದಿದ್ದ 2 ವರ್ಷದ ಮಗು ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ.

    ಸೋಲದೇವನಹಳ್ಳಿಯ ನಿವಾಸಿ ಬಸವರಾಜು ಮತ್ತು ವೆಂಕಮ್ಮ ದಂಪತಿಯ ಮಗನಾದ ಎರಡು ವರ್ಷದ ವೆಂಕಟೇಶ್ ನನ್ನು ಕಾಲಿನಿಂದ ಕುತ್ತಿಗೆಯನ್ನು ತುಳಿದು ಕೊಲೆ ಮಾಡಲಾಗಿತ್ತು. ಎರಡು ದಿನಗಳ ಹಿಂದೆ ಪಕ್ಕದ ಮನೆಯ ಈರಣ್ಣ ಹಾಗೂ ಬಸವರಾಜು ಕುಟುಂಬಕ್ಕೆ ನಾಯಿಗೆ ಹಾಲು ಹಾಕುವ ಬಟ್ಟಲಿನ ವಿಚಾರಕ್ಕೆ ಜಗಳವಾಗಿತ್ತು. ಜಗಳವಾದ ಬಳಿಕ ಈರಣ್ಣನೇ ಮಗುವನ್ನು ಕೊಲೆ ಮಾಡಿದ್ದಾನೆ ಎಂದು ವೆಂಕಟೇಶ್ ಪೋಷಕರು ಆರೋಪಿಸಿದ್ದರು.

    ಆದ್ರೆ ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಈರಣ್ಣನ ಮಗನಾದ 15 ವರ್ಷದ ಬಾಲಕನಿಂದ ವೆಂಕಟೇಶ್ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಆರೋಪಿ ಬಾಲಕ ನಾಲ್ಕೈದು ವರ್ಷಗಳಿಂದ ಮನೆಯಲ್ಲಿ ಪಾರಿವಾಳ ಸಾಕುತ್ತಿದ್ದ. ಕೊಲೆಯಾದ ಮಗು ವೆಂಕಟೇಶ್ ಕೀಟಲೆ ಮಾಡಿ ಆ ಪಾರಿವಾಳವನ್ನೆಲ್ಲಾ ಪಂಜರದಿಂದ ತೆಗೆದು ಹಾರಲು ಬಿಡುತ್ತಿದ್ದ. ಇದ್ರಿಂದ ಆರೋಪಿಗೆ ವೆಂಕಟೇಶನ ಮೇಲೆ ಕೋಪ ಇತ್ತು. ಮೊನ್ನೆಯೂ ಕೂಡ ಮೃತ ವೆಂಕಟೇಶ್ ಪಾರಿವಾಳ ಹಾರಲು ಬಿಟ್ಟಿದ್ದ. ಆ ಪಾರಿವಾಳ ನೀಲಗಿರಿ ತೋಪಿಗೆ ಹೋಗಿತ್ತು. ಅದನ್ನು ಹಿಡಿಯಲು ಹೋದ ಆರೋಪಿ ಜೊತೆ ವೆಂಕಟೇಶ್ ಕೀಟಲೆ ಮಾಡಿದ್ದರಿಂದ ಪಾರಿವಾಳವನ್ನು ಸಾಯಿಸ್ತೀಯಾ ಅಂತ ಕಾಲಿನಿಂದ ತುಳಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಬಾಲಕನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಬುಧವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಈರಣ್ಣ ಮತ್ತು ಬಸವರಾಜು ಕುಟುಂಬಗಳ ನಡುವೆ ಜಗಳ ನಡೆದಿತ್ತು. ನಂತರ ಮಧ್ಯಾಹ್ನ 3 ಗಂಟೆಗೆ ವೆಂಕಟೇಶ್ ನಾಪತ್ತೆಯಾಗಿದ್ದ. ಸಂಜೆ 5 ಗಂಟೆ ವೇಳೆ ಮನೆಯಿಂದ ಸುಮಾರು 3 ಕಿಮೀ ದೂರದಲ್ಲಿರುವ ನೀಲಗಿರಿ ತೋಪಿನಲ್ಲಿ ಕಂದಮ್ಮನ ಶವ ಪತ್ತೆಯಾಗಿತ್ತು.

    ಮಧ್ಯಾಹ್ನ ಈರಣ್ಣನೇ ಮಗುವನ್ನು ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಘಟನೆ ಬಳಿಕ ಈರಣ್ಣ ಮತ್ತು ಕುಟುಂಬಸ್ಥರು ನಾಪತ್ತೆಯಾಗಿದ್ದರು. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ಮನೆಯೊಳಗೆ ಪಾರಿವಾಳ ಬರುವುದನ್ನ ತಪ್ಪಿಸಲು ಹೋಗಿ 5ನೇ ಮಹಡಿಯಿಂದ ಬಿದ್ದು ಗೃಹಿಣಿ ಸಾವು

    ಮನೆಯೊಳಗೆ ಪಾರಿವಾಳ ಬರುವುದನ್ನ ತಪ್ಪಿಸಲು ಹೋಗಿ 5ನೇ ಮಹಡಿಯಿಂದ ಬಿದ್ದು ಗೃಹಿಣಿ ಸಾವು

    ಮುಂಬೈ: ಮನೆಯೊಳಗೆ ಪಾರಿವಾಳ ಬರುವುದನ್ನು ತಪ್ಪಿಸಲು ಹೋಗಿ ಗೃಹಿಣಿಯೊಬ್ಬರು 5ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಮುಂಬೈನ ನೆಹರು ನಗರದಲ್ಲಿ ನಡೆದಿದೆ.

    ಕರುಣಾ (57) ಮೃತ ದುರ್ದೈವಿ. ಕುರ್ಲಾದ ಕಟ್ಟಡವೊಂದರಲ್ಲಿ 5ನೇ ಮಹಡಿಯಲ್ಲಿ ವಾಸವಿದ್ದರು. ಇವರು ಶುಕ್ರವಾರ ಬೆಡ್‍ರೂಂನ ಕಿಟಕಿಯ ಗ್ರಿಲ್ ಮೂಲಕ ಪಾರಿವಾಳ ಒಳಗೆ ಬರುವುದನ್ನು ತಪ್ಪಿಸಲೆಂದು ಗ್ರಿಲ್‍ಗೆ ತಂತಿ ಕಟ್ಟಲು ಹೋದಾಗ ಗ್ರಿಲ್ ಕುಸಿದಿದ್ದು, ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

    ಕರುಣಾ ಅವರ ಪತಿ ವಿಜಯ್ ಸ್ವಂತ ಉದ್ಯಮ ನಡೆಸುತ್ತಿದ್ದು, ಮಗಳು ವೈಷ್ಣವಿ ಎಂಬಿಎ ಮಾಡಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ದಶಕಗಳಿಂದ ಇರುವ ಸುಮಾರು 6 ಮಿಲಿಮೀಟರ್‍ನಷ್ಟು ದಪ್ಪವಿರೋ ಗ್ರಿಲ್ ಹೀಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿರೋದು ಕಟ್ಟಡದ ಇತರೆ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಒಂದು ಕಡೆಗೆ ಬಾಗಿರುವುದು ಬಿಟ್ಟರೆ ಗ್ರಿಲ್‍ಗೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ ಗ್ರಿಲ್‍ಗೆ ಹಾಕಲಾಗಿದ್ದ ಮೊಳೆ/ಸ್ಕ್ರೂ ಸಡಿಲಗೊಂಡು ಈ ರೀತಿ ಆಗಿರಬಹುದು ಅಥವಾ ಗೋಡೆಯಲ್ಲೇ ಸಮಸ್ಯೆ ಇರಬಹುದು ಎಂದು ವರದಿಯಾಗಿದೆ.

    ಗ್ರಿಲ್ ಬಹಳ ಗಟ್ಟಿಯಾಗಿದೆ ಎಂದು ಕಟ್ಟಡದ ನಿವಾಸಿಗಳು ಮಕ್ಕಳನ್ನ ಅದರೊಳಗೆ ಆಟವಾಡಲು ಬಿಡುತ್ತಿದ್ದರು. ಕೆಲವರು ಕೆಲವು ಭಾರವಾದ ಅನವಶ್ಯಕ ವಸ್ತುಗಳನ್ನು ಕೂಡ ಇದೇ ಗ್ರಿಲ್‍ನಲ್ಲಿ ರಾಶಿ ಹಾಕುತ್ತಿದ್ದರು. ಆದ್ರೆ ಈ ಘಟನೆಯಿಂದ ಗ್ರಿಲ್ ಹೆಚ್ಚು ಭಾರ ತಡೆಯುವ ಸಾಮಥ್ರ್ಯ ಹೊಂದಿಲ್ಲ ಎಂಬುದು ಅವರಿಗೆ ಮನವರಿಕೆಯಾಗಿದೆ.

    ಶುಕ್ರವಾರ ಸುಮಾರು 10.15ರ ವೇಳೆಯಲ್ಲಿ ವೈಷ್ಣವಿ ಒಂದು ರೂಮಿನಲ್ಲಿದ್ದರು. ಆಕೆಯ ತಾಯಿ ಮತ್ತೊಂದು ರೂಮಿನಲ್ಲಿ ಗ್ರಿಲ್‍ಗೆ ತಂತಿ ಕಟ್ಟುತ್ತಿದ್ದರು. ಆಗ ಗ್ರಿಲ್ ಕುಸಿದು ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.

    ನನಗೆ ಜೋರಾದ ಶಬ್ದ ಕೇಳಿಸಿತು. ತಕ್ಷಣ ಹೊರಗೆ ಬಂದು ನೋಡಿದೆ. ಕಿಟಕಿಯ ಗ್ರಿಲ್ ಬಾಕ್ಸ್ ಸಮೇತ ಅಮ್ಮ ಕೂಡ ಕೆಳಗೆ ಬಿದ್ದಿದ್ದರು. ನಾನು ಕೆಳಗೆ ಓಡಿ ಹೋದೆ ಆದರೆ. ಅಷ್ಟರಲ್ಲಿ ಅಮ್ಮ ಮೃತಪಟ್ಟಿದ್ದರು ಎಂದು ವೈಷ್ಣವಿ ಹೇಳಿದ್ದಾರೆ.

    ಈ ಬಗ್ಗೆ ನೆಹರು ನಗರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಗ್ರಿಲ್‍ನ ಮೊಳೆಗಳು ರಸ್ಟ್ ಹಿಡಿದಿದ್ದವು. ಅದು ಮೃತ ಮಹಿಳೆಯ ದೇಹದ ಭಾರವನ್ನು ಹೊರುವಷ್ಟು ಸಾಮಥ್ರ್ಯ ಹೊಂದಿರಲಿಲ್ಲ. ಇದರಲ್ಲಿ ಕಟ್ಟಡ ಮಾಲೀಕರ ನಿರ್ಲಕ್ಷ್ಯ ಇದೆಯಾ ಎಂದು ಪರಿಶೀಲನೆ ಮಾಡುತ್ತೇವೆ ಎಂದು ಡಿಸಿಪಿ ಶಶಿ ಉಮ್ಯಾಪ್ ತಿಳಿಸಿದರು.

    ಈ ರೀತಿ ಗ್ರಿಲ್ ಕುಸಿದು ಬಿದ್ದಿರುವುದನ್ನು ನಾನು 25 ವರ್ಷಗಳ ವೃತ್ತಿಯಲ್ಲಿ ಕಂಡಿಲ್ಲ. ಕೆಲವೊಮ್ಮೆ ಸ್ಕ್ರೂಗಳು ಸ್ವಲ್ಪ ಸಡಿಲವಾಗುವುದು ಮತ್ತು ತುಕ್ಕು ಹಿಡಿಯುತ್ತವೆ. ಬಹುಶಃ ಗೋಡೆಯಲ್ಲೇ ಸಮಸ್ಯೆ ಇರಬಹುದು ಎಂದು ಗ್ರಿಲ್ ತಯಾರಿಕೆಯಲ್ಲಿ ಪರಿಣತರಾಗಿರೋ ಹರೂನ್ ಖಾನ್ ಹೇಳಿದ್ದಾರೆ.

  • ಪಕ್ಷಿಗಳಿಗೆ ಎಲ್ಲಾ ಕಾಲದಲ್ಲೂ ಸಿಗುತ್ತೆ ಆಸರೆ- ಇದು ಬೀದರ್‍ನ ಮಸ್ಕಲ್ ಗ್ರಾಮಸ್ಥರ ಪಕ್ಷಿಪ್ರೇಮ

    ಪಕ್ಷಿಗಳಿಗೆ ಎಲ್ಲಾ ಕಾಲದಲ್ಲೂ ಸಿಗುತ್ತೆ ಆಸರೆ- ಇದು ಬೀದರ್‍ನ ಮಸ್ಕಲ್ ಗ್ರಾಮಸ್ಥರ ಪಕ್ಷಿಪ್ರೇಮ

    ಬೀದರ್: ಬೇಸಿಗೆ ಪ್ರಾರಂಭವಾಗಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಬಿಸಿಲು ದಾಖಲಾಗುತ್ತಿದೆ. ಜನರಿಗೇನೋ ಮಾತು ಬರುತ್ತೆ ಸಂಕಟ, ಸಮಸ್ಯೆಯನ್ನ ಹೇಳ್ಕೊಳ್ತಾರೆ. ಆದ್ರೆ ಪ್ರಾಣಿ-ಪಕ್ಷಿಗಳು ಏನು ಮಾಡ್ಬೇಕು? ಇಂಥ ಪಕ್ಷಿಗಳಿಗೆ ಬೀದರ್‍ನ ಮಸ್ಕಲ್ ಗ್ರಾಮಸ್ಥರು ಒಳ್ಳೇ ಐಡಿಯಾ ಮಾಡಿ ಆಶ್ರಯ ಕೊಟ್ಟಿದ್ದಾರೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಸ್ಕಲ್ ಗ್ರಾಮಸ್ಥರು ಪಕ್ಷಿಗಳಿಗೆ ಡಬ್ಬಗಳನ್ನು ನಿರ್ಮಾಣ ಮಾಡಿ ಆಶ್ರಯ ಕೊಟ್ಟಿದ್ದಾರೆ. ಗ್ರಾಮದ 2 ಕಡೆ 20ಕ್ಕೂ ಹೆಚ್ಚು ಡಬ್ಬಗಳನ್ನು ಕಟ್ಟಿದ್ದಾರೆ. ಅಷ್ಟೇ ಅಲ್ಲದೇ ಇವುಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆಯನ್ನೂ ಮಾಡಿದ್ದಾರೆ.

    ಮನುಷ್ಯನ ಅತಿಯಾಸೆಯಿಂದ ಅವಸಾನವಾಗ್ತಿರೋ ಕಾಡಿನಿಂದಾಗಿ ಪಕ್ಷಿಗಳಿಗೂ ಆಸರೆಯಿಲ್ಲದಂತಾಗಿದೆ. ಆದ್ರೆ ಈ ಗ್ರಾಮಸ್ಥರು ಮಾತ್ರ ಮೂರು ಕಾಲದಲ್ಲೂ ಪಕ್ಷಿಗಳಿಗೆ ಅನ್ನಾಹಾರ ನೀಡ್ತಿದ್ದಾರೆ. ಈಗಿನ ಬೇಸಿಗೆಯಲ್ಲಂತೂ ಪಾರಿವಾಳ, ಗುಬ್ಬಚ್ಚಿಗಳು ಖುಷಿಯಾಗಿ ಗ್ರಾಮಸ್ಥರ ಆತಿಥ್ಯ ಸ್ವೀಕರಿಸುತ್ತಿವೆ.

    https://www.youtube.com/watch?v=4EH1zg-enwo