Tag: ಪಾಕ್

  • ಭಾರತ-ಪಾಕ್ ಸಂಘರ್ಷ – ಬಿನ್ ಲಾಡೆನ್ ಆಪ್ತನ ಮಗ ಈಗ ಪಾಕ್ ಸೇನಾ ವಕ್ತಾರ

    ಭಾರತ-ಪಾಕ್ ಸಂಘರ್ಷ – ಬಿನ್ ಲಾಡೆನ್ ಆಪ್ತನ ಮಗ ಈಗ ಪಾಕ್ ಸೇನಾ ವಕ್ತಾರ

    ಇಸ್ಲಾಮಾಬಾದ್: ಭಾರತ-ಪಾಕ್ (India-Pakistan) ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ವೇಳೆ ಪಾಕ್ ಸೇನೆಗೆ ಸಂಬಂಧಿಸಿದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಉಗ್ರ ಒಸಾಮಾ ಬಿನ್ ಲಾಡೆನ್‌ (Osama Bin Laden) ಆಪ್ತನ ಮಗನೇ ಈಗ ಪಾಕ್ ಸೇನಾ ವಕ್ತಾರ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿದುಬಂದಿದೆ.

    ಭಾರತದ ವಿರುದ್ಧ ಪಾಕಿಸ್ತಾನದ ಅಘೋಷಿತ ಕದನ ಸಾಗಿರುವ ನಡುವೆಯೇ ಪಾಕಿಸ್ತಾನ ಸೇನಾ ಪಡೆಗಳ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅವರು ಒಸಾಮಾ ಬಿನ್ ಲ್ಯಾಡೆನ್ ಆಪ್ತನ ಮಗ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಆಪರೇಷನ್‌ ಸಿಂಧೂರ ಮುಂದುವರಿಯುತ್ತದೆ – ಭಾರತೀಯ ವಾಯುಸೇನೆ ಅಧಿಕೃತ ಘೋಷಣೆ

    ಅಲ್‌ಖೈದಾ ಸಂಸ್ಥಾಪಕ ಉಗ್ರ ಒಸಾಮಾ ಬಿನ್ ಲಾಡೆನ್ ಆಪ್ತ ಪಾಕಿಸ್ತಾನದ ಪರಮಾಣು ವಿಜ್ಞಾನಿ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಅವರ ಮಗ ಅಹ್ಮದ್ ಷರೀಫ್ ಚೌಧರಿ ಈಗಿನ ಪಾಕ್ ಸಾರ್ವಜನಿಕ ಸಂಪರ್ಕಾಧಿಕಾರಿಯೆಂದು ತಿಳಿದುಬಂದಿದೆ.

    ಈ ಮೊದಲು ಲಾಡೆನ್ ಆಪ್ತ ಉಗ್ರರಿಗೆ ಪರಮಾಣು ಶಸ್ತ್ರಾಸ್ತ್ರ ತಂತ್ರಜ್ಞಾನ ಹಸ್ತಾಂತರಿಸಲು ಯತ್ನಿಸಿದ್ದರು ಹಾಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಆರೋಪ ಹೊತ್ತಿದ್ದರು. ಬಳಿಕ ಅವರನ್ನು ವಿಶ್ವಸಂಸ್ಥೆ ನಿರ್ಬಂಧಿಸಿತ್ತು.ಇದನ್ನೂ ಓದಿ: 6 ವರ್ಷಗಳ ಬಳಿಕ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಕುತಂತ್ರಿ ಪಾಕ್‌

  • ಪಾಕ್ ಅಣುಬಾಂಬ್ ತೋರಿಸಿ ಕಾಂಗ್ರೆಸ್ ದೇಶವನ್ನು ಹೆದರಿಸ್ತಿದೆ: ಮೋದಿ ವಾಗ್ದಾಳಿ

    ಪಾಕ್ ಅಣುಬಾಂಬ್ ತೋರಿಸಿ ಕಾಂಗ್ರೆಸ್ ದೇಶವನ್ನು ಹೆದರಿಸ್ತಿದೆ: ಮೋದಿ ವಾಗ್ದಾಳಿ

    – ಮಣಿಶಂಕರ್ ಅಯ್ಯರ್ ಹೇಳಿಕೆ ಉಲ್ಲೇಖಿಸಿ ಕಿಡಿ

    ನವದೆಹಲಿ: ಪಾಕಿಸ್ತಾನದಲ್ಲಿ ಅಣುಬಾಂಬ್ ಇದೆ ಎನ್ನುವ ಮೂಲಕ ಕಾಂಗ್ರೆಸ್ (Congress) ದೇಶವನ್ನು ಹೆದರಿಸುವ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಒಡಿಶಾದ ಕಂಧಮಾಲ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ (Narendra Modi), ಕಾಂಗ್ರೆಸ್ ಪದೇ ಪದೇ ತನ್ನದೇ ದೇಶವನ್ನು ಹೆದರಿಸಲು ಪ್ರಯತ್ನಿಸುತ್ತಿದೆ. ಅವರು ಬಳಿ ಅಣು ಬಾಂಬ್ ಇದೆ ಎಚ್ಚರಿಕೆಯಿಂದಿರಿ ಎಂದು ಭಯಭೀತಗೊಳಿಸುತ್ತಿದೆ. ಆ ದೇಶ ನಮ್ಮ ದೇಶದ ಮೇಲೆ ದಾಳಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

    ಅವರು ಪಾಕಿಸ್ತಾನದ (Pakistan) ಬಾಂಬ್ ಬಗ್ಗೆ ಮಾತನಾಡುತ್ತಾರೆ. ಆದರೆ ಪಾಕಿಸ್ತಾನದ ಸ್ಥಿತಿಯು ಅವರಿಗೆ ತಿಳಿದಿಲ್ಲ. ಅವರು ತಮ್ಮ ಬಾಂಬ್‌ಗಳನ್ನು ಮಾರಾಟ ಮಾಡಲು ಖರೀದಿದಾರರನ್ನು ಹುಡುಕುತ್ತಿದ್ದಾರೆ. ಆದರೆ ಜನರಿಗೆ ಅವರ ಗುಣಮಟ್ಟದ ಬಗ್ಗೆ ತಿಳಿದಿರುವುದರಿಂದ ಯಾರೂ ಖರೀದಿಸಲು ಬಯಸುತ್ತಿಲ್ಲ ಎಂದ ಅವರು ಪಾಕ್ ಆರ್ಥಿಕತೆಯನ್ನು ವ್ಯಂಗ್ಯ ಮಾಡಿದರು. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೂ ಮೋದಿ ಪ್ರಧಾನಿಯಾಗಲ್ಲ: ಅರವಿಂದ್ ಕೇಜ್ರಿವಾಲ್ ಭವಿಷ್ಯ

    ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಮಣಿಶಂಕರ್ ಅಯ್ಯರ್ (Manishankar Ayyar), ಪಾಕಿಸ್ತಾನ ಒಂದು ನೆರೆಯ ದೇಶ ಅವರಿಗೂ ಗೌರವಿಸಬೇಕಾಗುತ್ತದೆ. ಅವರ ಜೊತೆಗೆ ಎಷ್ಟು ಕಠಿಣವಾಗಿ ಮಾತನಾಡಬಹುದು ಮಾತನಾಡಿ, ಕನಿಷ್ಠ ಮಾತನಾಡಿ, ಬಂದೂಕು ತಗೊಂಡು ಓಡಾಡುತ್ತಿದ್ದೀರಿ ಅದರಿಂದ ಏನಾಗುತ್ತದೆ. ಇದರಿಂದ ದ್ವೇಷ ಹೆಚ್ಚಾಗುತ್ತದೆ. ಅಲ್ಲಿ ಯಾರಾದ್ರೂ ಹುಚ್ಚ ಬಂದರೆ ದೇಶದ ಕಥೆ ಏನು?.

    ಅವರ ಬಳಿಯೂ ಅನುಬಾಂಬ್ ಇದೆ ನಮ್ಮ ಬಳಿಯೂ ಇದೆ. ಯಾರಾದ್ರೂ ಹುಚ್ಚ ಅಣುಬಾಂಬ್ ನ ಲಾಹೋರ್ (Lahore) ಮೇಲೆ ಹಾಕಿದರೆ ಅದರ ವಿಕಿರಣ ಎಂಟು ಸೆಕೆಂಡ್ ನಲ್ಲಿ ಅಮೃತಸರ ತಲುಪಲಿದೆ. ಬಾಂಬ್ ಬಳಸುವುದನ್ನು ನಿಲ್ಲಿಸಿ ಅವರನ್ನು ಗೌರವಿಸಿದರೆ ಅವರು ತಮ್ಮ ಬಾಂಬ್ ಬಳಸುವ ಬಗ್ಗೆ ಯೋಚಿಸುವುದು ನಿಲ್ಲಿಸುತ್ತಾರೆ. ಅವರನ್ನು ಪ್ರೆರೇಪಿಸುತ್ತಿದ್ದರೆ ಅಲ್ಲೊಬ್ಬ ಹುಚ್ಚ ಬಂದು ಬಾಂಬ್ ತೆಗೆದರೆ ಅದರ ಪರಿಣಾಮ ಏನು? ವಿಶ್ವಗುರುವಾಗಲು ಸಮಸ್ಯೆ ಎಷ್ಟೆ ದೊಡ್ಡದಾಗಿದ್ದರೂ ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತೋರಿಸಬೇಕು. ಆದರೆ ಕಳೆದ ಹತ್ತು ವರ್ಷದಲ್ಲಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ಆರೋಪಿಸಿದ್ದರು.

  • ಮೋದಿ ಟೀಕಿಸೋ ಭರದಲ್ಲಿ ಪಾಕ್ ಮೇಲೆ ಪ್ರೀತಿ ತೋರಿದ ಕಾಂಗ್ರೆಸ್ ಶಾಸಕ

    ಮೋದಿ ಟೀಕಿಸೋ ಭರದಲ್ಲಿ ಪಾಕ್ ಮೇಲೆ ಪ್ರೀತಿ ತೋರಿದ ಕಾಂಗ್ರೆಸ್ ಶಾಸಕ

    ಚಿಕ್ಕಮಗಳೂರು: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಜ್ಜನ, ಸೌಮ್ಯ ವ್ಯಕ್ತಿತ್ವ ಹೊಂದಿರುವವನು. ಪಾಕ್‍ನೊಳಗೆ ಬಿದ್ದ ಭಾರತದ ಪೈಲಟ್‍ನನ್ನ ವಾಪಸ್ ಕಳಿಸಿದ್ದಾರೆ ಎಂದರೆ ಅದು ಅವರ ಸೌಜನ್ಯ, ಭಯಕ್ಕಲ್ಲ ಎಂದು ಪಾಕಿಸ್ತಾನ ಪರ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮೃದು ಧೋರಣೆ ತೋರಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಎನ್.ಆರ್.ಪುರ ತಾಲೂಕಿನ ಮೆಣಸೂರಿನಲ್ಲಿ ಮತಯಾಚನೆ ಮಾಡುವ ವೇಳೆ ಪ್ರಧಾನಿ ಮೋದಿಯನ್ನ ಟೀಕಿಸುವ ಭರದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್‍ರನ್ನ ಹಾಡಿ ಹೊಗಳಿದ್ದಾರೆ. ಆದ್ದರಿಂದ ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

    ಇದೇ ಆಡಿಯೋದಲ್ಲಿ ಗೋವಾದಿಂದ 2 ಬಾಟಲಿ ವಿಸ್ಕಿ ತಂದರೆ ದಂಡ ಹಾಕುತ್ತಾರೆ. 350 ಕೆ.ಜಿ. ಆರ್.ಡಿ.ಎಕ್ಸ್ ನ ಜೀಪಿನಲ್ಲಿ ತಂದು ಸೈನಿಕರ ಬಸ್ಸಿಗೆ ಗುದ್ದಿ ಸೈನಿಕರ ಹತ್ಯೆ ಮಾಡುತ್ತಾರೆ. ಮೋದಿಯವರೆ ಆಗ ಎಲ್ಲೋಗಿತ್ತು ನಿಮ್ಮ ಭದ್ರತೆ, 56 ಇಂಚಿನ ಎದೆ, ನಿಮ್ಮ ಶೌರ್ಯ ಎಂದು ಮೋದಿಯನ್ನ ಟೀಕಿಸುವಾಗ ಪಾಕಿಸ್ತಾನದ ಅಭಿಮಾನಿಯಾಗಿದ್ದಾರೆ. ಮೋದಿ ನೋಡಿ ಪಾಕಿಸ್ತಾನ ಹೆದರಲ್ಲ. ನಮ್ಮ ದೇಶದ ಜನ, ಸೈನಿಕರು ಹಾಗೂ ಭಾವನೆಗಳಿಗೆ ಬೇರೆ ದೇಶಗಳು ಬೆಲೆ ಕೊಡುತ್ತಿವೆ ಎಂದು ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ನೀವು ಅಧಿಕಾರದಲ್ಲಿದ್ದಾಗಲೇ ಹಲವು ದಾಳಿಗಳಾಗಿದ್ವು. ಆಗ ಎಲ್ಲೋಗಿತ್ತು ನಿಮ್ಮ ಪೌರುಷ, 56 ಇಂಚಿನ ಎದೆಗಾರಿಕೆ. ನಮ್ಮ ದೇಶದ ಭದ್ರತೆ ಹಾಗೂ ಸೈನಿಕರ ಬಗ್ಗೆ ಮಾತನಾಡಲು ನಿಮಗೆ ಅಧಿಕಾರವಿಲ್ಲ. ಪ್ರಧಾನಿ ಕುರ್ಚಿ ಅಂದರೆ ಮಹಾರಾಜನಿದ್ದಂತೆ, ನೀವು ಮಹಾರಾಜನಂತೆ ನಡೆದುಕೊಳ್ಳಬೇಕಿತ್ತು. ನಿಮ್ಮ ಸರ್ಕಾರ ಮಸೀದಿ ಹಾಗೂ ಚರ್ಚ್ ಕಟ್ಟಲಿಲ್ಲ. ನಮ್ಮ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಸರ್ಕಾರ ಮಸೀದಿ ಹಾಗೂ ಕ್ರೈಸ್ತ ದೇವಾಲಯಗಳನ್ನ ನಿರ್ಮಾಣ ಮಾಡಿಕೊಟ್ಟಿದ್ದೇವೆ ಎಂದು ಮೋದಿ ಟೀಕಿಸುವ ಭರದಲ್ಲಿ ಪಾಕಿಸ್ತಾನವನ್ನ ಹೊಗಳಿ ಸಾರ್ವಜನಿಕರ ಟೀಕೆಗೆ ಗುರಿಯಾಗುತ್ತಿದ್ದಾರೆ.

    ಸ್ಥಳೀಯ ಮಟ್ಟದಲ್ಲಿ ಆಡಿಯೋ ವೈರಲ್ ಆಗಿದ್ದು, ಇದೂವರೆಗೂ ಶಾಸಕರು ಯಾವುದೇ ಸ್ಪಷ್ಟನೆ ನೀಡಿಲ್ಲ.

  • ರಾಹುಲ್ ಗಾಂಧಿ ಹೇಳಿದ್ದಕ್ಕೆ ನಾನು ಪಾಕಿಸ್ತಾನಕ್ಕೆ ಹೋಗಿದ್ದು: ಸಿಧು

    ರಾಹುಲ್ ಗಾಂಧಿ ಹೇಳಿದ್ದಕ್ಕೆ ನಾನು ಪಾಕಿಸ್ತಾನಕ್ಕೆ ಹೋಗಿದ್ದು: ಸಿಧು

    ಹೈದರಾಬಾದ್: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರಿಂದಲೇ ನಾನು ಪಾಕಿಸ್ತಾನಕ್ಕೆ ತೆರಳಿದ್ದೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

    ಪಾಕ್ ಭೇಟಿಯಿಂದಾಗಿ ಉಂಟಾಗಿದ್ದ ವಿವಾದಕ್ಕೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರೇ ನನ್ನ ನಾಯಕ. ಅವರು ಹೇಳಿದ್ದರಿಂದಲೇ ನಾನು ಕರ್ತಾರ್‌ಪುರ್‌ ಕಾರಿಡಾರ್ ಯೋಜನೆಯ ಅಡಿಗಲ್ಲು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಲಾಹೋರ್ ಗೆ ತೆರಳುವಂತೆ ಸುಮಾರು 20 ಕಾಂಗ್ರೆಸ್ ನಾಯಕರು ನನಗೆ ಹೇಳಿದ್ದರು. ಹೈಕಮಾಂಡ್ ಕೂಡ ನನ್ನನ್ನು ಸಮಾರಂಭಕ್ಕೆ ಹೋಗುವಂತೆ ಹೇಳಿತ್ತು. ಹೀಗಾಗಿ ನಾನು ಪಾಕಿಸ್ತಾನಕ್ಕೆ ಹೋಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಸಿಧುರವರ ಪಾಕ್ ಭೇಟಿಯ ಬಗ್ಗೆ ಖುದ್ದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿ, ಅವರ ನಡೆಯನ್ನು ಪ್ರಶ್ನಿಸಿದ್ದರು. ಸಿಧುರನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುವ ಬಗ್ಗೆ ಪ್ರಾರಂಭದಲ್ಲೇ ಅಮರಿಂದರ್ ಅಸಮಾಧಾನ ಹೊರಹಾಕಿದ್ದರು. ಪಾಕ್ ಭೇಟಿಯನ್ನು ಮಾನ್ಯ ಮಾಡಲು ಸಹ ಅವರು ನಿರಾಕರಿಸಿದ್ದರು. ಏಕೆಂದರೆ ಅಮೃತಸರ್ ನಲ್ಲಿ ಉಗ್ರರ ಗ್ರೆನೇಡ್ ದಾಳಿಯಿಂದ ಮೂವರು ಮೃತಪಟ್ಟಿದ್ದರು. ಹೀಗಾಗಿ ತಮ್ಮ ಸಂಪುಟ ಸಹೋದ್ಯೋಗಿಯನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಲು ನಿರಾಕರಿಸಿದ್ದರು.

    ಏನಿದು ಕರ್ತಾರ್‌ಪುರ್‌ ಕಾರಿಡಾರ್?
    ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಾರೋವಲ್ ಜಿಲ್ಲೆಯಲ್ಲಿರುವ ಶಕರ್‌ಗಢ ಬಳಿ ಈ ಕರ್ತಾರ್‌ಪುರ್‌ ಇದೆ. ಇಲ್ಲಿ ಸಿಖ್ ಧರ್ಮ ಗುರುಗಳಾದ ಗುರುನಾನಕ್ ಅವರು ಸುಮಾರು 18 ವರ್ಷಗಳಿಗೂ ಅಧಿಕ ಕಾಲ ಜೀವನ ನಡೆಸಿದ್ದರು. ಅಲ್ಲದೇ ಪಾಕಿಸ್ತಾನದ ಗಡಿಯಿಂದ ನಾಲ್ಕೈದು ಕಿ.ಮೀ ದೂರವಿರುವ ರಾವಿ ನದಿ ದಂಡೆಯಲ್ಲಿ ಕರ್ತಾರ್‌ಪುರ್‌ ನಲ್ಲಿ ಸಾಹಿಬ್ ಗುರುದ್ವಾರವೂ ಇದೆ. ಹೀಗಾಗಿ ಇದು ಸಿಖ್ಖರ ಪವಿತ್ರ ದೇಗುಲವೆಂದೇ ಹೆಸರು ಪಡೆದಿತ್ತು. ಆದರೆ ಈ ದೇಗುಲಕ್ಕೆ ತೆರಳಲು ಕಡ್ಡಾಯವಾಗಿ ವೀಸಾ ಮಾಡಿಸಬೇಕಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ಪಾಕಿಸ್ತಾನದ ಕರ್ತಾರ್‌ಪುರ್‌ ನಲ್ಲಿರುವ ಸಾಹಿಬ್ ಗುರದ್ವಾರಕ್ಕೆ ಭಾರತೀಯ ಸಿಖ್ ಭಕ್ತರು ವೀಸಾ ಮುಕ್ತ ಅವಕಾಶ ನೀಡುವಂತೆ ಪಾಕಿಸ್ತಾನದ ಬಳಿ ಕೇಳಿಕೊಂಡಿತ್ತು. ಭಾರತದ ಮನವಿಯನ್ನು ಸ್ವೀಕರಿಸಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನವೆಂಬರ್ 28 ರಂದು ಕರ್ತಾರ್‌ಪುರ್‌ ಕಾರಿಡಾರ್ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್ ನಿಂದ ಒಂದು ಗುಂಡು ಗಡಿ ದಾಟಿದ್ರೂ ಅಸಂಖ್ಯಾತ ಗುಂಡು ಹಾರಿಸಿ: ರಾಜನಾಥ್ ಸಿಂಗ್

    ಪಾಕ್ ನಿಂದ ಒಂದು ಗುಂಡು ಗಡಿ ದಾಟಿದ್ರೂ ಅಸಂಖ್ಯಾತ ಗುಂಡು ಹಾರಿಸಿ: ರಾಜನಾಥ್ ಸಿಂಗ್

    ಬೆಂಗಳೂರು: ಭಾರತೀಯ ಸೈನಿಕರ ಗುಂಡಿನ ದಾಳಿಗೆ ಪ್ರತಿದಿನ ಗಡಿಯಲ್ಲಿ 5-6 ಉಗ್ರರು ಹತ್ಯೆಯಾಗುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಹೇಳಿದ್ದಾರೆ.

    ಪಾಕಿಸ್ತಾನ ಪದೇ-ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ನೆರೆಯ ದೇಶಗಳು ನಿರಂತರವಾಗಿ ಭಾರತದ ಗಡಿಯೊಳಗೆ ಉಗ್ರಗಾಮಿಗಳನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ. ಗಡಿಯಲ್ಲಿ ದೇಶದ ರಕ್ಷಣೆ ಮಾಡುತ್ತಿರುವ ಭಾರತೀಯ ಸೈನಿಕರ ಗುಂಡಿಗೆ ಪ್ರತಿ ದಿನ 5-6 ಉಗ್ರರು ಸಾಯುತ್ತಿದ್ದಾರೆ ಎಂದು ತಿಳಿಸಿದರು.

    ನೀವಾಗಿಯೇ ಮೊದಲು ಗುಂಡನ್ನು ಹಾರಿಸಬೇಡಿ, ಒಂದು ವೇಳೆ ಪಾಕಿಸ್ತಾನದಿಂದ ಒಂದು ಗುಂಡು ನಮ್ಮ ಗಡಿ ಪ್ರದೇಶವನ್ನು ದಾಟಿದರೂ, ಪ್ರತ್ಯುತ್ತರವಾಗಿ ಅಸಂಖ್ಯಾತ ಗುಂಡುಗಳನ್ನು ಹಾರಿಸುವಂತೆ ತಿಳಿಸಿರುವುದಾಗಿ ಹೇಳಿದರು.

    ಇದೇ ಸಂದರ್ಭದಲ್ಲಿ ಚೀನಾದೊಂದಿಗಿನ ಡೋಕ್ಲಾಂ ಗಡಿ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಭಾರತದ ದುರ್ಬಲ ದೇಶವಲ್ಲ, ಡೋಕ್ಲಾಂ ಸಂಘರ್ಷವನ್ನು ಚೀನಾದೊಂದಿಗೆ ಬಗೆಹರಿಸಿದ ವಿಧಾನವೇ ಭಾರತದ ಬಲವನ್ನು ತಿಳಿಸುತ್ತದೆ. ವಿಶ್ವ ಹಲವು ಜನರು ಆಸಕ್ತಿಯಿಂದ ಚೀನಾ ಮತ್ತು ಭಾರತದ ನಡುವಿನ ಸಂಘರ್ಷವನ್ನು ಗಮನಿಸುತ್ತಿದ್ದರು ಎಂದು ತಿಳಿಸಿದರು.

    ಒಂದು ವೇಳೆ ಭಾರತವು ದುರ್ಬಲ ರಾಷ್ಟ್ರವಾಗಿದ್ದಾರೆ ಚೀನಾದೊಡನೆ ಇದ್ದ ಸಂಘರ್ಷವನ್ನು ಪರಿಹಾರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.