Tag: ಪಶುಪಾಲನ ಇಲಾಖೆ

  • ಚಿಕ್ಕಬಳ್ಳಾಪುರದಲ್ಲಿ ಹಂದಿಜ್ವರ ದೃಢ; ಸತ್ತ ಹಂದಿಗಳ ಕಳೇಬರ ಕೆರೆಗೆ ಎಸೆದಿದ್ದ ಅವಿವೇಕಿ – ಇಡೀ ಕೆರೆ ಮಲಿನ

    ಚಿಕ್ಕಬಳ್ಳಾಪುರದಲ್ಲಿ ಹಂದಿಜ್ವರ ದೃಢ; ಸತ್ತ ಹಂದಿಗಳ ಕಳೇಬರ ಕೆರೆಗೆ ಎಸೆದಿದ್ದ ಅವಿವೇಕಿ – ಇಡೀ ಕೆರೆ ಮಲಿನ

    – 100ಕ್ಕೂ ಅಧಿಕ ಹಂದಿ ಸಾವು; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ (African Swine Fever Virus) ಧೃಢವಾಗಿದೆ. ವೆಂಕಟರೆಡ್ಡಿ ಎಂಬುವವರಿಗೆ ಸೇರಿದ ಹಂದಿಗಳ ಫಾರಂನಲ್ಲಿ 200 ಹಂದಿಗಳಿದ್ದು ಆಗಸ್ಟ್ 14ರಿಂದಲೇ ಅನುಮಾನಸ್ಪಧವಾಗಿ ಹಂದಿಗಳು ಸಾವನ್ನಪ್ಪಲು ಆರಂಭಿಸಿವೆ.

    ಹೀಗಾಗಿ ಪಶುಪಾಲನಾ ಇಲಾಖಾಧಿಕಾರಿಗಳ ಸತ್ತ ಹಂದಿಗಳ ಮಾದರಿಗಳನ್ನ ಪರೀಕ್ಷೆಗೆ ಕಳುಹಿಸಿದ್ದು ಹಂದಿ ಜ್ವರ ಧೃಢಪಟ್ಟಿದೆ. ಅಷ್ಟರಲ್ಲೇ 100ಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿದ್ದು ಸತ್ತ ಹಂದಿಗಳನ್ನ ಫಾರಂ ಸಮೀಪದ ಹೆಬ್ಬರಿ ಗ್ರಾಮದ ಕೆರೆಗೆ ಬಿಸಾಡಲಾಗಿದೆ. ಹೀಗಾಗಿ ಕೆರೆಯ ನೀರಿನಲ್ಲಿ ಎಲ್ಲಂದರಲ್ಲಿ ಸತ್ತ ಹಂದಿಗಳ ಕಳೇಬರಗಳು ತೇಲಾಡುತ್ತಿವೆ. ಹಂದಿಗಳು ಕೊಳೆತು ಗಬ್ಬು ನಾರಿ ದುರ್ವಾಸನೆ ಬೀರುತ್ತಿವೆ. ಇದ್ರಿಂದ ಇಡೀ ಕೆರೆಯ ನೀರು ಮಲಿನವಾಗಿದೆ.

    ಈ ಘಟನೆಯ ನಂತರ ಎಚ್ಚೆತ್ತುಕೊಂಡಿರುವ ಪಶುಪಾಲನಾ ಇಲಾಖೆ ಈಗ ಫಾರಂ ನಲ್ಲಿ ಉಳಿದಿದ್ದ 57 ಹಂದಿಗಳ ಸಾಮೂಹಿಕ ಹತ್ಯೆ ನಡೆಸಿದೆ. ಮತ್ತೊಂದಡೆ ತಾಲೂಕು ಆಡಳಿತ ಕೆರೆಯಲ್ಲಿ ಬಿಸಾಡಿರುವ ಹಂದಿಯ ಮೃತದೇಹದ ಕಳೇಬರಗಳನ್ನ ಜೆಸಿಬಿ ಮೂಲಕ ತೆಗೆದು ಮಣ್ಣಿನಲ್ಲಿ ಮುಚ್ಚಿ ಹಾಕುವ ಪ್ರಯತ್ನ ಮಾಡಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ ಜ್ವರ ದೃಢ – 57 ಹಂದಿಗಳನ್ನ ಕೊಲ್ಲಲು ಮುಂದಾದ ಪಶು ಇಲಾಖೆ

    ಇದಲ್ಲದೇ ಮಲಿನವಾಗಿರುವ ಕೆರೆಯ ನೀರನ್ನ ಶುದ್ಧೀಕರಿಸುವ ಸಲುವಾಗಿ ಕ್ಯಾಲ್ಸಿಯಂ ಹೈಪೋಕ್ಲೋರೈಡ್ ಪೌಡರ್ ಸಿಂಪಡಣೆ ಕ್ಲೋರಿನೇಷನ್ ಕಾಯಕ ನಡೆಸಲಾಗುತ್ತಿದೆ.

    Chikkaballapura Virus 2

    ಇನ್ನೂ ಕೆರೆಯ ನೀರು ಮಲಿನವಾಗಿರೋ ಕಾರಣ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದೆ. ಕೆರೆಯ ನೀರನ್ನ ಕುಡಿಯೋ ಜಾನುವಾರುಗಳು, ಪ್ರಾಣಿ ಪಕ್ಷಿಗಳ ಜೀವಕ್ಕೆ ಅಪಾಯ ಕಾದಿಯಾ ಅನ್ನೋ ಆತಂಕ ಎದುರಾಗಿದೆ. ಘಟನೆಯ ನಂತರ ಪೊಲೀಸ್ ಠಾಣೆಯಲ್ಲಿ ಮಾಲೀಕ ವೆಂಕಟರೆಡ್ಡಿ ವಿರುದ್ಧ ದೂರು ದಾಖಲಿಸಲು ಪಶು ಪಾಲನಾ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪಟಾಕಿ ಸ್ಫೋಟ – ಓರ್ವ ಬಾಲಕ ದುರ್ಮರಣ

  • ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ ಜ್ವರ ದೃಢ – 57 ಹಂದಿಗಳನ್ನ ಕೊಲ್ಲಲು ಮುಂದಾದ ಪಶು ಇಲಾಖೆ

    ಚಿಕ್ಕಬಳ್ಳಾಪುರದಲ್ಲಿ ಆಫ್ರಿಕನ್ ಹಂದಿ ಜ್ವರ ದೃಢ – 57 ಹಂದಿಗಳನ್ನ ಕೊಲ್ಲಲು ಮುಂದಾದ ಪಶು ಇಲಾಖೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ (African Swine Fever Virus) ಪ್ರಕರಣ ಪತ್ತೆಯಾಗಿದೆ.

    ಹೆಬ್ಬರಿ ಗ್ರಾಮದ ವೆಂಕಟರೆಡ್ಡಿ ಎಂಬುವವರ ಹಂದಿ ಫಾರಂನಲ್ಲಿ ಈ ಮಾರಕ ವೈರಸ್ ಪತ್ತೆಯಾಗಿದೆ. ಕಳೆದೊಂದು ವಾರದಿಂದ ಫಾರಂ ನಲ್ಲಿನ ಹಲವು ಹಂದಿಗಳು ಧಿಡೀರ್ ಅಂತ ಸಾವನ್ನಪ್ಪುತ್ತಿದ್ದು. ಇದರಿಂದ ಆತಂಕಗೊಂಡ ಮಾಲೀಕ ಪಶುಪಾಲನಾ ಇಲಾಖೆ (Veterinary Department) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಹುಬ್ಬಳ್ಳಿ-ಜೋಧಪುರ್ ನೇರ ರೈಲು ಸಂಚಾರಕ್ಕೆ ಅಸ್ತು – ಟಿಕೆಟ್ ಬುಕಿಂಗ್ ಆರಂಭ

    ಬಳಿಕ ಪಶುಪಾಲನಾ ಇಲಾಖೆ ಅಧಿಕಾರಿಗಳು ಸತ್ತ ಹಂದಿಗಳ ಮಾದರಿಗಳನ್ನ ಲ್ಯಾಬ್‌ನಲ್ಲಿ ಪರೀಕ್ಷಿಸಿದ್ದರು. ಪರೀಕ್ಷೆ ವೇಳೆ ಹಂದಿ ಜ್ವರ ಇರೋದು ದೃಢವಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾಡಳಿತ ಹಾಗೂ ಪಶುಪಾಲನಾ ಇಲಾಖೆ ಹೈಅಲರ್ಟ್ ಆಗಿದ್ದು ಹಂದಿ ಜ್ವರ ಕಡಿವಾಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳೋಕೆ ಮುಂದಾಗಿದೆ. ಫಾರಂ ನಲ್ಲಿ ಉಳಿದ ಹಂದಿಗಳನ್ನ ಕೊಲ್ಲೋಕೆ ತೀರ್ಮಾನಿಸಲಾಗಿದೆ. ಇದನ್ನೂ ಓದಿ: ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು?

    ಏನಿದು ಹಂದಿ ಜ್ವರ?
    ಆಫ್ರಿಕನ್ ಹಂದಿ ಜ್ವರ (ASF) ಎಂಬುದು ವೈರಸ್‌ನಿಂದ ಹಂದಿಗಳಲ್ಲಿ ಉಂಟಾಗುವ ಸಾಂಕ್ರಾಮಿಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. 100% ವರೆಗೆ ಮರಣ ಪ್ರಮಾಣ ಹೊಂದಿದೆ ಎಂದು ತಜ್ಞರು ಹೇಳುತ್ತಾರೆ. ಆದ್ರೆ ಇದು ಮಾನವರಿಗೆ ಹರಡುವುದಿಲ್ಲ. ಈ ರೋಗವು ಹಂದಿ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ.

    ಹೇಗೆ ಹರಡುತ್ತೆ?
    ಆಫ್ರಿಕನ್ ಹಂದಿ ಜ್ವರವು ASFV ಎಂಬ ವೈರಸ್‌ನಿಂದ ಹರಡುತ್ತೆ. ಇದನ್ನೂ ಓದಿ: ಬೆಂಗ್ಳೂರಿನಿಂದ ಒಸಾಕಾ, ನಗೋಯ ನಗರಗಳಿಗೆ ನೇರ ವಿಮಾನ ಸೇವೆ ಕುರಿತು ಚರ್ಚೆ: ಎಂ.ಬಿ ಪಾಟೀಲ್