Tag: ಪರಾರಿ

  • ಆರತಕ್ಷತೆಯಲ್ಲಿ ನಗ್ತಿದ್ದ ವಧು ಧಾರೆಗೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

    ಆರತಕ್ಷತೆಯಲ್ಲಿ ನಗ್ತಿದ್ದ ವಧು ಧಾರೆಗೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

    ತುಮಕೂರು: ಮದುವೆ ಮಂಟಪದಿಂದಲೇ ವಧು ಓಡಿಹೋದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರನ ಟಿಟಿ ವಾಹನದಲ್ಲಿ ಬಂದಿದ್ದ ವಧು ಅದೇ ಟಿಟಿಯ ಡ್ರೈವರ್ ರಮೇಶ್ ಜೊತೆ ಓಡಿ ಹೋಗಿದ್ದಾಳೆ.

    ಮಧ್ಯರಾತ್ರಿಯೇ ತಾವು ಬಂದಿದ್ದ ಟಿಟಿಯಲ್ಲೇ ಇಬ್ಬರೂ ಎಸ್ಕೇಪ್ ಆಗಿದ್ದಾರೆ. ಭಾನುವಾರ ರಾತ್ರಿ ಆರತಕ್ಷತೆಯಲ್ಲಿ  ನಗುನಗುತ್ತಾ ಇದ್ದ ವಧು  ಬೆಳಗ್ಗೆ ನೋಡಿದ್ರೆ ನಾಪತ್ತೆಯಾಗಿದ್ದಾಳೆ.

    ಇಂದು ಬೆಳಗ್ಗೆ 9.30ಕ್ಕೆ ಹಸೆಮಣೆ ಏರಬೇಕಿದ್ದ ಯುವತಿ ನಾಪತ್ತೆಯಾಗಿರೋದನ್ನು ನೋಡಿ ವರನ ಕಡೆಯವರು ಫುಲ್ ಶಾಕ್ ಆಗಿದ್ದರು. ತುಮಕೂರು ಜಿಲ್ಲೆಯ ಯಡಿಯೂರು ದೇವಸ್ಥಾನದಲ್ಲಿ ಮದುವೆ ನಿಗದಿಯಾಗಿತ್ತು. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಯುವತಿಗೆ ಯಡಿಯೂರಿನ ಆಟೋ ಡ್ರೈವರ್ ರಾಮಕೃಷ್ಣನನ್ನು ಇಂದು ಮದುವೆ ಆಗಬೇಕಿತ್ತು. ಹೀಗಾಗಿ ನಿನ್ನೆ ರಾತ್ರಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು.

    ಯುವತಿ ಓಡಿಹೋಗಿರೋ ಕಾರಣ ಇದೀಗ ಮದುವೆ ನಿಂತಿದೆ. ಆಕೆ ಯಾಕೆ ಗಾಯಬ್ ಆದ್ಲು ಅಂತಾ ಗೊತ್ತಿಲ್ಲ. ಯುವತಿ ಕಡೆಯವರು ಮದುವೆ ಹೆಸರಲ್ಲಿ ದುಡ್ಡು ತಗೊಂಡು ಮೋಸ ಮಾಡೋದೇ ದಂಧೆ ಮಾಡ್ಕೊಂಡಿದ್ದಾರೆ ಅಂತಾ ವರನ ಕಡೆಯವರು ಆರೋಪಿಸಿದ್ದಾರೆ.

     

     

     

     

  • ಕಾರ್ಕಳದ ಮದೀನಾ ಮಸೀದಿಯಿಂದ 32 ವಿದ್ಯಾರ್ಥಿಗಳ ಜೊತೆ ಧರ್ಮಗುರು ಎಸ್ಕೇಪ್!

    ಕಾರ್ಕಳದ ಮದೀನಾ ಮಸೀದಿಯಿಂದ 32 ವಿದ್ಯಾರ್ಥಿಗಳ ಜೊತೆ ಧರ್ಮಗುರು ಎಸ್ಕೇಪ್!

    ಉಡುಪಿ: ವಿದ್ಯಾರ್ಥಿಗಳ ಜೊತೆ ಧರ್ಮಗುರು ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಮದೀನಾ ಮಸೀದಿಯಲ್ಲಿ ನಡೆದಿದೆ.

    ಧಾರ್ಮಿಕ ವಿದ್ಯಾಭ್ಯಾಸಕ್ಕೆ ಬಿಹಾರದಿಂದ ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಮೂವತ್ತೆರಡು ವಿದ್ಯಾರ್ಥಿಗಳು ಬಂದಿದ್ದರು. ಧರ್ಮಗುರು ತೈಯ್ಯಬ್ ಕೂಡಾ ಮೂಲತಃ ಬಿಹಾರ ರಾಜ್ಯದವನು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮದೀನಾ ಮಸೀದಿಯಲ್ಲಿ ಈ ಘಟನೆ ನಡೆದಿದೆ.

    ಬಿಹಾರ ಮೂಲದ ತೈಯ್ಯಬ್ ಐದು ವರ್ಷದ ಹಿಂದೆ ಮದೀನ ಮಸೀದಿಗೆ ಸಹಾಯಕ ಧರ್ಮಗುರುವಾಗಿ ನೇಮಕವಾಗಿದ್ದ. ಕಳೆದ ಐದು ವರ್ಷದಿಂದ ಹಂತ ಹಂತವಾಗಿ ಸುಮಾರು ಮೂವತ್ತು ಮಂದಿ ಬಿಹಾರ ಮೂಲದ ಮಕ್ಕಳನ್ನು ಧಾರ್ಮಿಕ ಶಿಕ್ಷಣಕ್ಕಾಗಿ ಉಡುಪಿಗೆ ಕರೆ ತಂದಿದ್ದ. ಕೆಲ ದಿನಗಳಿಂದ ಮಸೀದಿಯ ಆಡಳಿತ ಮಂಡಳಿ ಮತ್ತು ತೈಯಬ್ ನಡುವೆ ಆಂತರಿಕ ಕಲಹ ಏರ್ಪಟ್ಟಿತ್ತು. ಕಮಿಟಿಯ ಜೊತೆ ವೈಮನಸ್ಸು ನಡೆದಿತ್ತು. ಕಳೆದ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಟೆಂಪೋ ಟ್ರಾವೆಲ್ಲರ್ ಮೂಲಕ 32 ಮಂದಿ ವಿದ್ಯಾರ್ಥಿಗಳನ್ನು ತೈಯ್ಯಬ್ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.

    ಟಿಟಿ ವಾಹನ ಕಾರ್ಕಳದಿಂದ ಹೊರಟು ಕುಂದಾಪುರ ಕಡೆಗೆ ತೆರಳಿತ್ತು ಎಂಬ ಮಾಹಿತಿ ಇದೆ. ಮೂವತ್ತೆರಡು ಮಂದಿ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ಕೊಡುವುದರ ಜೊತೆಗೆ ಪಕ್ಕದಲ್ಲಿರುವ ಸಭಾಂಗಣದ ಮೇಲ್ವಿಚಾರಣೆಯನ್ನು ನೋಡುತ್ತಿದ್ದನು. ಇದರ ಜೊತೆ ಮದೀನಾ ಮಸೀದಿಯಲ್ಲಿ ಐದು ಬಾರಿ ಧ್ವನಿವರ್ಧಕದಲ್ಲಿ ನಮಾಜ್ ಮಾಡುವ ಕೆಲಸಕ್ಕೂ ನೇಮಕಗೊಂಡಿದ್ದ.

    ಮಸೀದಿ ಆಡಳಿತ ಮಂಡಳಿ ಕಾರ್ಕಳ ನಗರ ಠಾಣೆಗೆ ಪ್ರಕರಣವನ್ನು ಗಮನಕ್ಕೆ ತಂದಿದೆ. ತೈಯ್ಯಬ್ ವಿರುದ್ಧ ದೂರು ದಾಖಲಾಗಿದೆ.

  • ಮೊಬೈಲ್ ಕಸಿದು ಪರಾರಿಯಾಗ್ತಿದ್ದ ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

    ಮೊಬೈಲ್ ಕಸಿದು ಪರಾರಿಯಾಗ್ತಿದ್ದ ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು

    ತುಮಕೂರು: ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಯುವಕನೋರ್ವನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

    ತಡರಾತ್ರಿ ತುಮಕೂರು ನಗರದ ಸರಸ್ವತಿಪುರಂನ ನಾಲ್ಕನೇ ಕ್ರಾಸ್ ನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಾಲಿಂಗಯ್ಯ ಎನ್ನುವರ ಕೈಯಿಂದ ಮೊಬೈಲ್ ಕಸಿದುಕೊಂಡ ಯುವನೋರ್ವ ಪರಾರಿಯಾಗಲು ಯತ್ನಿಸಿದ್ದಾನೆ. ಇದೇ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರ ಸಹಾಯದಿಂದ ಮಹಾಲಿಂಗಯ್ಯ ಕಳ್ಳನನ್ನು ಹಿಡಿದು ಥಳಿಸಿದ್ದಾರೆ.

    ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ ಯುವಕ ಮಾದಕ ಸಲ್ಯೂಶನ್ ಸೇವನೆ ಮಾಡಿದ್ದ ಎಂದು ತಿಳಿದುಬಂದಿದೆ. ಈ ಹಿಂದೆಯೂ ಅನೇಕ ಬಾರಿ ಸರಸ್ವತಿಪುರಂನಲ್ಲಿ ಈ ರೀತಿಯ ಘಟನೆ ನಡೆದಿದೆ. ಸ್ಥಳಕ್ಕೆ ಜಯನಗರ ಪೊಲೀಸರು ಆಗಮಿಸಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

  • ಎದುರುಮನೆ ಮಹಿಳೆ ಜೊತೆ ಗಂಡ ನಾಪತ್ತೆ- ಗಂಡ ಎಲ್ಲಿದ್ದಾನೆ ಎಂದು ಹೆಂಡ್ತಿ, ಪತ್ನಿ ಎಲ್ಲಿದ್ದಾಳೆ ಅಂತಾ ಗಂಡ ಹುಡುಕಾಟ

    ಎದುರುಮನೆ ಮಹಿಳೆ ಜೊತೆ ಗಂಡ ನಾಪತ್ತೆ- ಗಂಡ ಎಲ್ಲಿದ್ದಾನೆ ಎಂದು ಹೆಂಡ್ತಿ, ಪತ್ನಿ ಎಲ್ಲಿದ್ದಾಳೆ ಅಂತಾ ಗಂಡ ಹುಡುಕಾಟ

    ಮಡಿಕೇರಿ: ಎದುರು ಮನೆಯ ಮಹಿಳೆಯೊಂದಿಗೆ ಪ್ರೀತಿಯಾಗಿ ಪತ್ನಿಯನ್ನೇ ಬಿಟ್ಟು ಪತಿ ಪರಾರಿಯಾಗಿರೋ ಘಟನೆ ಜಿಲ್ಲೆಯ ಗೋಣಿಕೊಪ್ಪದ ಕುಂದಾ ಎಂಬ ಗ್ರಾಮದಲ್ಲಿ ನಡೆದಿದೆ. ಇತ್ತ ಪತಿಗೋಸ್ಕರ ಹೆಂಡತಿ ಬೀದಿ ಬೀದಿ ಸುತ್ತುತ್ತಿದ್ರೆ, ಮತ್ತೊಂದೆಡೆ ಎದುರು ಮನೆಯ ಮಹಿಳೆಯ ಗಂಡ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಹುಡುಕಾಟ ನಡೆಸುತ್ತಿದ್ದಾರೆ.

    ಪವನಾ ಭಟ್ ಮತ್ತು ಶಶಿಧರ್ ಭಟ್ ದಂಪತಿಗೆ ಮದುವೆಯಾಗಿ 10 ವರ್ಷಗಳಾಗಿವೆ. ಆದರೂ ಎದುರು ಮನೆಯ ಇನ್ನೊಬ್ಬರ ಪತ್ನಿಯ ಜೊತೆ ಪ್ರೀತಿಯಾಗಿ ಆಕೆಯ ಜೊತೆ ಶಶಿಧರ್ ಭಟ್ ಪರಾರಿಯಾಗಿದ್ದಾನೆ. ಪತಿಯ ಹುಡುಕಟದಲ್ಲಿ ಪತ್ನಿ ಪವನಾ ಭಟ್ ಬೀದಿ ಬೀದಿ ಸುತ್ತಾಡುತ್ತಿದ್ದಾರೆ.

    ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗುವಿದೆ. ಈ ಕುಟುಂಬ ಕುಂದಾ ಗ್ರಾಮದಲ್ಲಿ ಪುರೋಹಿತಿಕೆ ಕೆಲಸವನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅದೇ ಗ್ರಾಮದ ಇನ್ನೊಂದು ಜೋಡಿ ಲಸಿಕಾ ಮತ್ತು ನವೀನ್ ನಾಚಪ್ಪ ಬಿಸಿನೆಸ್ ಮಾಡಿಕೊಂಡು ಇದ್ದರು. ಇವರಿಗೆ ಒಂದು ಗಂಡು ಮಗು ಇದೆ. ಈ ಎರಡು ದಂಪತಿ ಎದುರು ಬದರು ಮನೆಯಲ್ಲೇ ವಾಸವಾಗಿದ್ದರಿಂದ ಪರಿಚಯವಾಗಿತ್ತು.

    ಶಿಶಿಧರ್ ಭಟ್ ಹಾಗೂ ಲಸಿಕಾ ಅವರ ಮಧ್ಯ ಪರಿಚಯದಿಂದ ಲವ್ವಿಡವ್ವಿ ಶುರುವಾಗುತ್ತು. ಇದನ್ನು ತಿಳಿದ ಪವನಾ ಗಂಡನೊಂದಿಗೆ ಜಗಳವಾಡಿದ್ದರು. ಇತ್ತ ಲಸಿಕಾಳ ಗಂಡನಿಗೂ ಇವರ ರಹಸ್ಯ ಪ್ರೇಮದ ಬಗ್ಗೆ ತಿಳಿಸಿದ್ದರು. ಆದರೆ ನವೀನ್ ನನ್ನ ಹೆಂಡತಿ ಹಾಗಲ್ಲ ಅಂತಾ ಪವನಾ ಅವರನ್ನೇ ಬೈದು ಕಳುಹಿಸಿದ್ದರು. ಕೊನೆಗೆ ಪತಿಯ ಪರಸ್ತ್ರೀ ಸಂಗಕ್ಕೆ ಬೇಸತ್ತು ಪವನಾ ತವರುಮನೆ ಸೇರಿದ್ದಾರೆ.

    ಪವನಾ ಮನೆ ಬಿಟ್ಟು ಹೋದ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಲಸಿಕಾ ತನ್ನ ಪತಿ, ಮಕ್ಕಳನ್ನು ಬಿಟ್ಟು ಶಶಿಧರ್ ಭಟ್‍ನೊಂದಿಗೆ ಪರಾರಿಯಾಗಿದ್ದಾಳೆ. ಇತ್ತ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಪತಿ ನವೀನ್ ನಾಚಪ್ಪ ಗೋಣಿಕೋಪ್ಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಮಡಕೇರಿಯಲ್ಲಿ ಎಲ್ಲಾ ಕಡೆ ಹುಡುಕಾಡುತ್ತಿದ್ದಾರೆ.

    ಪತಿ ಶಶಿಧರ್ ಭಟ್ ಲಸಿಕಾ ಜೊತೆ ಪರಾರಿಯಾಗಿರುವ ವಿಚಾರ ತಿಳಿದ ಪವನಾ ಕೂಡ ಬೆಂಗಳೂರಿಗೆ ಬಂದಿರಬಹುದು ಎಂಬ ಅನುಮಾನದಿಂದ ಪತಿ ಮುಂಚೆ ಯಾವೆಲ್ಲ ದೇವಾಲಯಗಳಲ್ಲಿ ಪೂಜೆ ಮಾಡುತ್ತಿದ್ದ ಅಲ್ಲೆಲ್ಲಾ ಹೋಗಿ ಬೀದಿಬೀದಿ ಸುತ್ತುತ್ತಾ ಹುಡುಕಾಡುತ್ತಿದ್ದಾರೆ.

  • ಮೊಗ್ಗಿನ ಜಡೆ ವಿಚಾರಕ್ಕೆ ಮುರಿದು ಬಿತ್ತು ಮದುವೆ!

    ಮೊಗ್ಗಿನ ಜಡೆ ವಿಚಾರಕ್ಕೆ ಮುರಿದು ಬಿತ್ತು ಮದುವೆ!

    ಚಿಕ್ಕಬಳ್ಳಾಪುರ: ಮದುವೆಯಲ್ಲಿ ಊಟ ಕಡಿಮೆ ಆಯ್ತು ಎಂದು ಮದುವೆ ಮುರಿದು ಬಿದ್ದ ಘಟನೆ ಈ ಹಿಂದೆ ನಡೆದಿತ್ತು. ಆದರೆ ವಧುವಿನ ಮೊಗ್ಗಿನ ಜಡೆ ಸರಿಯಾಗಿಲ್ಲ ಎಂಬ ಕ್ಷುಲಕ ಕಾರಣಕ್ಕೆ ವಿವಾಹವೇ ಮುರಿದು ಬಿದ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಭೀಮಾಕನಹಳ್ಳಿಯಲ್ಲಿ ಗುರುವಾರದಂದು ನಡೆದಿದೆ.

    ರಾತ್ರಿ ನಡೆದ ಆರಕ್ಷತೆಯಲ್ಲಿ ಪಾಲ್ಗೊಂಡು ಮುಂಜಾನೆ ಮಹೂರ್ತಕ್ಕೆ ಕೈ ಕೊಟ್ಟು ವಧುವಿನ ಜೊತೆಗೆ ಕುಟುಂಬದವರು ಕೂಡ ಪರಾರಿಯಾಗಿದ್ದಾರೆ. ಹೊಸಕೋಟೆ ತಾಲೂಕು ಭೀಮಾಪುರ ಗ್ರಾಮದ ಯುವಕನೊಂದಿಗೆ ವಿಜಯಪುರ ಯುವತಿಯ ಮದುವೆ ನಿಶ್ಚಯವಾಗಿತ್ತು. ಇವರ ಮದುವೆಗೆ ಹೊಸಕೋಟೆಯ ಭೀಮಾಕನಹಳ್ಳಿಯ ಗುಂಡಾಂಜನೇಯಸ್ವಾಮಿ ದೇವಾಲಯದ ಬಳಿ ಇರುವ ನವ ಕೋಟಿ ನಾರಾಯಣ ಕಲ್ಯಾಣ ಮಂಟಪದಲ್ಲಿ ಗುರುವಾರ ಮುಹೂರ್ತ ನಿಗದಿಯಾಗಿತ್ತು.

    ಬುಧವಾರ ರಾತ್ರಿ ಆರತಕ್ಷತೆ ನೆರವೇರಿದ್ದು, ಬೆಳಗ್ಗೆ ಐದು ಗಂಟೆಗೆ ಮುಹೂರ್ತ ನಿಗದಿಯಾಗಿತ್ತು. ಆದರೆ ವರನ ಕಡೆಯವರು ಮೊಗ್ಗಿನ ಜಡೆ ಸರಿ ಇಲ್ಲ, ಬೇರೆ ಬೇರೆ ಹೂಗಳನ್ನು ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು ಎನ್ನಲಾಗಿದೆ. ಈ ನಡುವೆ ಇದಕ್ಕಿದಂತೆ ವಧುವಿನ ಕಡೆಯವರು ವಧುವಿನೊಂದಿಗೆ ಕಾರಿನಲ್ಲಿ ಹೊರಟುಹೋಗಿದ್ದಾರೆ. ಇವರ ಕಡೆಯಿಂದ ಬಂದಿದ್ದ ಕುಟುಂಬಸ್ಥರು, ನೆಂಟರು, ಹಿತೈಷಿಗಳು ಕೂಡ ಮದುವೆ ಮಂಟಪದಿಂದ ಹೊರಟಿದ್ದಾರೆ.

    ಇತ್ತ ಘಟನೆಯಿಂದ ವಿಚಲಿತರಾದ ವರನಿಗೆ ಅದೇ ಕಲ್ಯಾಣ ಮಂಟಪದಲ್ಲಿ ಬೇರೊಂದು ಹುಡುಗಿಯ ಜೊತೆ ಮದುವೆ ಮಾಡಲು ಹುಡುಗಿಗಾಗಿ ಹುಡುಕಾಟ ಕೂಡ ನಡೆಸಿದ್ದಾರೆ. ಆದರೆ ಹುಡುಗಿ ಪರಾರಿಯಾದ ತಕ್ಷಣ ಸಂಭ್ರಮದಲ್ಲಿದ್ದ ಕಲ್ಯಾಣ ಮಂಟಪದಲ್ಲಿ ಮೌನ ಆವರಿಸಿಕೊಂಡಿತ್ತು. ಮುಂದೇನು ಮಾಡಬೇಕೆಂದು ತಿಳಿಯದೆ ಕುಟುಂಬಸ್ಥರು ದಿಕ್ಕು ತೋಚದಂತೆ ಕುಳಿತಿದ್ದಾರೆ.

     

     

  • ಪ್ರವಾಸಿ ಮಂದಿರದಲ್ಲಿ ರಾತ್ರಿ ವೇಳೆ ಅಕ್ರಮ ಚಟುವಟಿಕೆ ಮಾಡುತ್ತಿದ್ದವರ ಮೇಲೆ ದಾಳಿ

    ಪ್ರವಾಸಿ ಮಂದಿರದಲ್ಲಿ ರಾತ್ರಿ ವೇಳೆ ಅಕ್ರಮ ಚಟುವಟಿಕೆ ಮಾಡುತ್ತಿದ್ದವರ ಮೇಲೆ ದಾಳಿ

    ಕೋಲಾರ: ನಗರದ ಹೃದಯ ಭಾಗದಲ್ಲಿರುವ ಪ್ರವಾಸಿ ಮಂದಿರದ ಮೇಲೆ ಮಂಗಳವಾರ ರಾತ್ರಿ ಜಿಲ್ಲಾಧಿಕಾರಿ ಜಿ.ಸತ್ಯವತಿ ನೇತೃತ್ವದ ತಂಡ ದಾಳಿ ನಡೆಸಿದೆ.

    ಪ್ರವಾಸಿ ಮಂದಿರದಲ್ಲಿ ರಾತ್ರಿ ವೇಳೆ ಅಕ್ರಮ ಚಟುವಟಿಕೆಗಳು ನಡೆಯುತ್ತವೆ, ಹಲವಾರು ಜನ ಅಕ್ರಮವಾಗಿ ಆವರಣದಲ್ಲಿ ಕುಳಿತು ಮದ್ಯ ಸೇವನೆ ಮಾಡೋದು ಜೊತೆಗೆ ಕಾರ್ ಗಳನ್ನು ತಂದು ಪಾರ್ಕ್ ಮಾಡಿ, ಕಾರ್ ನಲ್ಲೇ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎನ್ನುವ ಮಾಹಿತಿ ಮೇರೆಗೆ ಡಿಸಿ ಸತ್ಯವತಿ ದಾಳಿ ಮಾಡಿದರು.

    ಇದೇ ವೇಳೆ ಡಿಸಿ ಅಲ್ಲಿಗೆ ಬರುತ್ತಿದ್ದಂತೆ ಅಲ್ಲಿದ್ದ ಜನರೆಲ್ಲಾ ಕುಡಿಯೋದನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಅದರಲ್ಲಿ ಕೆಲವರ ಫೋಟೋಗಳನ್ನು ತೆಗೆದುಕೊಂಡರು. ಈ ವೇಳೆ ಅಲ್ಲಿ ಬಿಟ್ಟು ಓಡಿ ಹೋಗಿದ್ದ ಸುಮಾರು ಎಂಟು ದ್ವಿಚಕ್ರ ವಾಹನಗಳು ಹಾಗೂ ಒಂದು ಕಾರ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

    ಇದೇ ವೇಳೆ ಲೋಕೋಪಯೋಗಿ ಇಲಾಖೆಗೆ ಸೇರಿದ ಪ್ರವಾಸಿ ಮಂದಿರ ಇದಾಗಿರುವ ಕಾರಣ ಸ್ಥಳಕ್ಕೆ ಬಂದ ಮುಖ್ಯ ಎಂಜಿನಿಯರ್ ಮುನಿ ಆಂಜಿನಪ್ಪ ಅವರಿಗೆ ಡಿಸಿ ಜಿ.ಸತ್ಯವತಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೂಡಲೇ ನಿಮ್ಮೆ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದು ಸ್ಥಳದಲ್ಲೇ ಇದೇನು ಐಬಿ ನಾ ಇಲ್ಲಾ ಬಾರ್ ಎಂದು ತರಾಟೆಗೆ ತೆಗೆದುಕೊಂಡರು.

    ಇನ್ನು ಮುಂದೆ ಈ ರೀತಿಯ ಅಕ್ರಮ ಚಟುವಟಿಕೆಗಳು ಬಂದ್ ಆಗಬೇಕು ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ರಸ್ತೆಗಳು ಹಾಳಾಗಿದ್ದು ಕೂಡಲೇ ಅವುಗಳನ್ನು ಸರಿಮಾಡಿ ಎಂದು ಆದೇಶ ಮಾಡಿದರು.

  • ಬಂಧಿಸಲು ಹೋದಾಗ ತಿರುಗಿಬಿದ್ದ ಕೊಲೆ ಆರೋಪಿ – ಪೊಲೀಸರ ಮೇಲೆ ಚಾಕು ಹಿಡಿದು ದಾಳಿ

    ಬಂಧಿಸಲು ಹೋದಾಗ ತಿರುಗಿಬಿದ್ದ ಕೊಲೆ ಆರೋಪಿ – ಪೊಲೀಸರ ಮೇಲೆ ಚಾಕು ಹಿಡಿದು ದಾಳಿ

    ರಾಮನಗರ: ಕೊಲೆ ಪ್ರಕರಣದ ಆರೋಪಿ ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಬೋರೇಗೌಡನ ದೊಡ್ಡಿಯಲ್ಲಿ ನಡೆದಿದೆ.

    ಚಂದ್ರು ಅಲಿಯಾಸ್ ಚಂದ್ರುಕುಮಾರ್ ಪೊಲೀಸರ ಗುಂಡೇಟು ತಿಂದಿರುವ ಕೊಲೆ ಆರೋಪಿ. ತಡರಾತ್ರಿ ಆರೋಪಿ ಬಂಧನಕ್ಕೆ ಕನಕಪುರ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದ ತಂಡ ಬೋರೇಗೌಡನ ದೊಡ್ಡಿಗೆ ತೆರಳಿತ್ತು. ಈ ವೇಳೆ ಪೊಲೀಸರಿಂದ ಪರಾರಿಯಾಗಲು ಆರೋಪಿ ಚಂದ್ರು ಪ್ರಯತ್ನಿಸಿದ್ದಲ್ಲದೇ ಚಾಕುವಿನಿಂದ ಕನಕಪುರ ಟೌನ್ ಪಿಎಸ್‍ಐ ಅನಂತರಾಮು ಅವರ ಎಡಗೈಗೆ ಇರಿದು ಪರಾರಿಯಾಗಲೆತ್ನಿಸಿದ್ದಾನೆ.

    ಈ ವೇಳೆ ಪೊಲೀಸರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದು, ಬಳಿಕ ಪರಾರಿಯಾಗುತ್ತಿದ್ದ ಆರೋಪಿ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಕಳೆದ ಸೆಪ್ಟೆಂಬರ್ 20 ರಂದು ಹುಣಸೂರಿನಲ್ಲಿ ಒಂಟಿ ಮನೆ ವೃದ್ಧೆಯನ್ನು ಕೊಂದು ಆರೋಪಿ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿದ್ದನು. ಈ ಪ್ರಕರಣ ಸಂಬಂಧ ಬಂಧಿಸಲು ಹೋಗಿದ್ದಾಗ ಘಟನೆ ಜರುಗಿದೆ.

    ಈ ಘಟನೆಯಲ್ಲಿ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ಚಂದ್ರು ಹಾಗು ಚಾಕು ಹಿರಿತಕ್ಕೆ ಒಳಗಾಗಿರುವ ಪಿಎಸ್‍ಐ ಅನಂತರಾಮುರನ್ನ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಬಾಮೈದನ ಹೆಂಡ್ತಿ ಜೊತೆ ಓಡಿಹೋದ ಭಾವ- ಹೆಂಡ್ತಿಗಾಗಿ ಊರೂರು ಸುತ್ತುತ್ತಿರೋ ಪತಿ

    ಬಾಮೈದನ ಹೆಂಡ್ತಿ ಜೊತೆ ಓಡಿಹೋದ ಭಾವ- ಹೆಂಡ್ತಿಗಾಗಿ ಊರೂರು ಸುತ್ತುತ್ತಿರೋ ಪತಿ

    ತುಮಕೂರು: ಅವರು ಭಾವ-ಬಾಮೈದ, ಅದಕ್ಕೂ ಹೆಚ್ಚಾಗಿ ಒಳ್ಳೇ ಸ್ನೇಹಿತರಾಗಿದ್ರು. ಆದರೆ ಭಾವನಿಗೆ ಬಾಮೈದನ ಪತ್ನಿ ಮೇಲೆ ಕಣ್ಣು ಬಿದ್ದು, ಕೊನೆಗೆ ಆಕೆಯೊಂದಿಗೆ ಲವ್ವಿಡವ್ವಿ ಶುರುಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಜಂಪೇನಳ್ಳಿ ಗ್ರಾಮದಲ್ಲಿ ನಡೆದಿದೆ.

    ಜಂಪೇನಳ್ಳಿ ನಿವಾಸಿ ಪರಶುರಾಮ ಅವರ ಹೆಂಡತಿ ಓಡಿಹೋಗಿದ್ದಾಳೆ. ತೀವ್ರವಾಗಿ ನೊಂದು ಹೆಂಡ್ತಿ ಬೇಕು ಅಂತ ಪರಶುರಾಮ್ ಊರೂರು ಸುತ್ತುತ್ತಿದ್ದಾರೆ. ಪರಶುರಾಮ್ ಪತ್ನಿ ಮಂಜುಳಾ ತನ್ನ ನಾದಿನಿಯ ಗಂಡ ಶ್ರೀನಿವಾಸ್ ಜೊತೆ ಪರಾರಿಯಾಗಿದ್ದಾಳೆ.

    ಪರಶುರಾಮ್ ಹಾಗೂ ಮಂಜುಳಾ ಮದುವೆಯಾಗಿ 12 ವರ್ಷ ಕಳೆದಿದೆ. ಇವರಿಗೆ ನಾಲ್ಕು ಮಕ್ಕಳೂ ಕೂಡ ಇವೆ. ಆದರೂ ಮಂಜುಳಾ-ಶ್ರೀನಿವಾಸ್ ಲವ್ವಿಡವ್ವಿ ಶುರು ಮಾಡಿಕೊಂಡಿದ್ದರು. ಈ ಅಕ್ರಮ ಸಂಬಂಧ ಪತಿ ಪರಶುರಾಮ್‍ಗೆ ಗೊತ್ತಾಗುತ್ತಿದ್ದಂತೆ ಇಬ್ಬರೂ ಜೊತೆಯಾಗಿ ಪರಾರಿಯಾಗಿದ್ದಾರೆ.

    ಪರಶುರಾಮ್ ಹಾಗೂ ಶ್ರೀನಿವಾಸ್ ಒಳ್ಳೆಯ ಸ್ನೇಹಿತರು. ಇಬ್ಬರೂ ಬಳೆ ವ್ಯಾಪಾರ ಮಾಡಿಕೊಂಡಿದ್ದರು. ಹಾಗಾಗಿ ಪರಶುರಾಮ ತನ್ನ ತಂಗಿ ಗೀತಾಳನ್ನು ಶ್ರೀನಿವಾಸ್‍ಗೆ ಕೊಟ್ಟು ಮದುವೆ ಮಾಡಿದ್ದರು. ಸಹಜವಾಗಿಯೆ ಶ್ರೀನಿವಾಸ್ ಪರಶುರಾಮನ ಮನೆಗೆ ಬಂದು ಹೋಗುತಿದ್ದ. ಪರಶುರಾಮನ ಪತ್ನಿ ಮಂಜುಳಾ ನೋಡಲು ಸುಂದರವಾಗಿದ್ಳು ಅಂತ ತನ್ನ ಹೆಂಡತಿಯನ್ನ ಬಿಟ್ಟು ಅವಳನ್ನು ಹಾರಿಸಿಕೊಂಡು ಹೋಗಿದ್ದಾನೆ ಅಂತ ಮಂಜುಳಾ ತಾಯಿ ರತ್ನಮ್ಮ ಹೇಳಿದ್ದಾರೆ.

    ಮಂಜುಳಾ ತನ್ನ ಇಬ್ಬರು ಮಕ್ಕಳನ್ನು ತನ್ನೊಟ್ಟಿಗೆ ಕರೆದುಕೊಂಡು ಹೋಗಿದ್ದಾಳೆ. ಶ್ರೀನಿವಾಸನ ಪತ್ನಿ ಗೀತಾ ಕೂಡಾ ಗಂಡನ ಹುಡುಕಾಟದಲ್ಲಿ ತೊಡಗಿದ್ದಾರೆ. ಹೆಂಡತಿಯನ್ನ ಹುಡುಕಿಕೊಡಿ ಎಂದು ಪರಶುರಾಮ್ ಪೊಲೀಸರ ಮೊರೆ ಹೋಗಿದ್ದಾರೆ. ಆಕೆ ಓಡಿಹೋದ್ರೂ ಪರವಾಗಿಲ್ಲ, ವಾಪಸ್ ಬಂದು ಮಕ್ಕಳ ಆರೈಕೆ ಮಾಡಿಕೊಂಡು ಇದ್ದರೆ ಸಾಕು ಎಂದು ಪರುಶರಾಮ್ ಹೇಳುತ್ತಿದ್ದಾರೆ.

  • ಪತಿಗಾಗಿ ಮೊದಲ ಪತ್ನಿಯಿಂದ ಎರಡನೇ ಪತ್ನಿಯ ಮನೆ ಮುಂದೆ ಧರಣಿ

    ಪತಿಗಾಗಿ ಮೊದಲ ಪತ್ನಿಯಿಂದ ಎರಡನೇ ಪತ್ನಿಯ ಮನೆ ಮುಂದೆ ಧರಣಿ

    ಕೊಪ್ಪಳ: ಇಬ್ಬರು ಹೆಂಡತಿಯರಿಗೆ ಮುದ್ದಿನ ಗಂಡನಾಗಬೇಕು ಎಂಬ ಕನಸನ್ನು ಹೊಂದಿದ್ದ. ಆದರೆ ಈಗ ಮೊದಲ ಪತ್ನಿ, ಪತಿಯ ವಿರುದ್ಧವೇ ತಿರುಗಿಬಿದ್ದು ನ್ಯಾಯಕ್ಕಾಗಿ ಧರಣಿ ನಡೆಸಿದ್ದಾರೆ.

    ಎರಡನೇ ಮದುವೆಯಾಗಿರುವ ಮಂಜುನಾಥ್ ಮೂಲತಃ ಶಿವಮೊಗ್ಗ ಜಿಲ್ಲೆಯ ಆನವಟ್ಟಿ ನಿವಾಸಿಯಾಗಿದ್ದು, ಕೊಪ್ಪಳದ ತನ್ನ ಸ್ವಂತ ಅಕ್ಕನ ಮನೆಯಲ್ಲೇ ಇದ್ದುಕೊಂಡು ವಿದ್ಯಾಭ್ಯಾಸ ಮಾಡಿ, ತಾನೇ ಸ್ವತಃ ಇಷ್ಟ ಪಟ್ಟು ತನ್ನ ಅಕ್ಕನ ಮಗಳು ವಿಜಯಶ್ರೀಯನ್ನು 2013ರಲ್ಲಿ ಮದುವೆಯಾಗಿದ್ದ

    ಮೊದಲಿನಿಂದಲೂ ಪರಿಚಯವಿದ್ದ ತನ್ನ ಪತ್ನಿಯ ಎದುರು ಮನೆಯ ಶಿಲ್ಪಾಳೊಂದಿಗೆ ಲವ್ವಿ-ಡವ್ವಿ ಅಂತಾ ತಿರುಗಾಡಿ, ಮೊದಲ ಪತ್ನಿ ಮತ್ತು ಕುಟುಂಬಕ್ಕೆ ಸಣ್ಣ ಸುಳಿವೂ ನೀಡದಂತೆ ಅಕ್ಟೋಬರ್ 2016 ರಂದು ರಿಜಿಸ್ಟರ್ ಮದುವೆಯಾಗಿದ್ದಾನೆ.

    ಮಂಜುನಾಥ್ ಕಳೆದ ನಾಲ್ಕು ದಿನದ ಹಿಂದೆ ಶಿಲ್ಪಾರನ್ನು ಮನೆಗೆ ಕರೆದೊಯ್ದು, 2016 ರಲ್ಲಿ ಶಿಲ್ಪಾರ ಕೊರಳಿಗೂ ತಾಳಿಕಟ್ಟಿದೇನೆ. ಇಬ್ಬರೂ ಒಂದೇ ಮನೆಯಲ್ಲಿ ಇರುವಂತೆ ಹೇಳಿದ್ದಾನೆ. ಇದರಿಂದ ಮೊದಲ ಪತ್ನಿ ಆಕ್ಷೇಪ ವ್ಯಕ್ತ ಪಡಿಸಿದ್ದಕ್ಕೆ ಹಲ್ಲೆಮಾಡಿ ಮನೆಯಿಂದ ಹೊರಹಾಕಿದ್ದಾನೆ.

    ನೊಂದ ವಿಜಯಶ್ರೀ ಎರಡನೇ ಮದುವೆಯನ್ನು ಖಂಡಿಸಿ ತನ್ನ ತಾಯಿ ಗೀತಾರೊಂದಿಗೆ, ತನ್ನ ಪತಿ ಮಂಜುನಾಥನ ಫೋಟೋ ಹಿಡಿದು ಶಿಲ್ಪಾ ಮನೆ ಮುಂದೆ ಕಣ್ಣೀರು ಹಾಕುತ್ತಾ ಧರಣಿ ಕುಳಿತಿದ್ದಾರೆ. ಇದರಿಂದ ಕೆರಳಿದ ಶಿಲ್ಪಾ ಮತ್ತು ಅವರ ಕುಟುಂಬ, ವಿಜಯಶ್ರೀ ಹಾಗೂ ಅವರ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ.

    ವಿಜಯಶ್ರೀ ತನ್ನ ಗಂಡ ಎರಡನೇ ಮದುವೆಯಾಗಿ ನನಗೆ ಮೋಸಮಾಡಿದ್ದಾನೆ. ಆಕ್ಷೇಪಿಸಿದ್ದಕ್ಕೆ ನನ್ನ ಮೇಲೆ ದೌರ್ಜನ್ಯವೆಸಗಿ ಮನೆಯಿಂದ ಹೊರಹಾಕಿದ್ದಾನೆ. ನಂತರ ಶಿಲ್ಪಾ ಮನೆಗೆ ಹೋಗಿ ನ್ಯಾಯಕೇಳಿದಕ್ಕೆ, ಅವರ ಕುಟುಂಬವು ನನ್ನ ಮತ್ತು ನನ್ನ ತಾಯಿಯ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಶರ್ಟ್ ಗೆ ಇಂಕ್ ಚೆಲ್ಲಿ ರೈತರ ದುಡ್ಡನ್ನು ಎಗರಿಸಿದ್ರು ಕಳ್ಳರು! ವಿಡಿಯೋ

    ಶರ್ಟ್ ಗೆ ಇಂಕ್ ಚೆಲ್ಲಿ ರೈತರ ದುಡ್ಡನ್ನು ಎಗರಿಸಿದ್ರು ಕಳ್ಳರು! ವಿಡಿಯೋ

    ಮಂಡ್ಯ: ಕಳ್ಳರು ಹಾಡಹಗಲೇ ರೈತರೊಬ್ಬರ 15 ಸಾವಿರ ರೂ. ಹಣವನ್ನು ದೋಚಿದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ.

    ರೈತ ನಿಂಗೇಗೌಡ ಎಂಬುವವರು ವಿಜಯ ಬ್ಯಾಂಕ್‍ನಿಂದ ಹಣ ಡ್ರಾ ಮಾಡಿ ಬರುತ್ತಿದ್ದರು. ಈ ವೇಳೆ ನಿಂಗೇಗೌಡರನ್ನು ಹಿಂಬಾಲಿಸಿದ ಕಳ್ಳರು ಶರ್ಟ್ ಮೇಲೆ ಉಪಾಯವಾಗಿ ಇಂಕ್ ಚೆಲ್ಲಿದ್ದಾರೆ. ನಂತರ ಬಟ್ಟೆಯನ್ನು ಕ್ಲೀನ್ ಮಾಡುವ ನೆಪದಲ್ಲಿ ಬಂದು ನಿಂಗೇಗೌಡರ ಶರ್ಟ್ ನಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

    ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,  ಮಂಗಳವಾರ ಬೆಳಗ್ಗೆ 11:30ರ ಸುಮಾರಿಗೆ ಕೆಆರ್ ಪೇಟೆ ಪಟ್ಟಣದ ಲೋಕೇಶ್ ಬುಕ್ ಹೌಸ್ ಎದುರು ಘಟನೆ ನಡೆದಿದೆ. ಕೆಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=UT32WNCGirk