ತುಮಕೂರು: ಮದುವೆ ಮಂಟಪದಿಂದಲೇ ವಧು ಓಡಿಹೋದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರನ ಟಿಟಿ ವಾಹನದಲ್ಲಿ ಬಂದಿದ್ದ ವಧು ಅದೇ ಟಿಟಿಯ ಡ್ರೈವರ್ ರಮೇಶ್ ಜೊತೆ ಓಡಿ ಹೋಗಿದ್ದಾಳೆ.
ಮಧ್ಯರಾತ್ರಿಯೇ ತಾವು ಬಂದಿದ್ದ ಟಿಟಿಯಲ್ಲೇ ಇಬ್ಬರೂ ಎಸ್ಕೇಪ್ ಆಗಿದ್ದಾರೆ. ಭಾನುವಾರ ರಾತ್ರಿ ಆರತಕ್ಷತೆಯಲ್ಲಿ ನಗುನಗುತ್ತಾ ಇದ್ದ ವಧು ಬೆಳಗ್ಗೆ ನೋಡಿದ್ರೆ ನಾಪತ್ತೆಯಾಗಿದ್ದಾಳೆ.

ಇಂದು ಬೆಳಗ್ಗೆ 9.30ಕ್ಕೆ ಹಸೆಮಣೆ ಏರಬೇಕಿದ್ದ ಯುವತಿ ನಾಪತ್ತೆಯಾಗಿರೋದನ್ನು ನೋಡಿ ವರನ ಕಡೆಯವರು ಫುಲ್ ಶಾಕ್ ಆಗಿದ್ದರು. ತುಮಕೂರು ಜಿಲ್ಲೆಯ ಯಡಿಯೂರು ದೇವಸ್ಥಾನದಲ್ಲಿ ಮದುವೆ ನಿಗದಿಯಾಗಿತ್ತು. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಯುವತಿಗೆ ಯಡಿಯೂರಿನ ಆಟೋ ಡ್ರೈವರ್ ರಾಮಕೃಷ್ಣನನ್ನು ಇಂದು ಮದುವೆ ಆಗಬೇಕಿತ್ತು. ಹೀಗಾಗಿ ನಿನ್ನೆ ರಾತ್ರಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು.
ಯುವತಿ ಓಡಿಹೋಗಿರೋ ಕಾರಣ ಇದೀಗ ಮದುವೆ ನಿಂತಿದೆ. ಆಕೆ ಯಾಕೆ ಗಾಯಬ್ ಆದ್ಲು ಅಂತಾ ಗೊತ್ತಿಲ್ಲ. ಯುವತಿ ಕಡೆಯವರು ಮದುವೆ ಹೆಸರಲ್ಲಿ ದುಡ್ಡು ತಗೊಂಡು ಮೋಸ ಮಾಡೋದೇ ದಂಧೆ ಮಾಡ್ಕೊಂಡಿದ್ದಾರೆ ಅಂತಾ ವರನ ಕಡೆಯವರು ಆರೋಪಿಸಿದ್ದಾರೆ.
ಆರತಕ್ಷತೆಯಲ್ಲಿದ್ದ ವಧು ರಾತ್ರೋರಾತ್ರಿ ನಾಪತ್ತೆ..! https://t.co/rJVmJfW3y2#Tumakur #Reception #Night #Bride #Escape #Marriage pic.twitter.com/fXNUHl1BG7
— PublicTV (@publictvnews) November 12, 2017




























































