Tag: ಪಮೇಲಾ ಗೋಸ್ವಾಮಿ

  • ಡ್ರಗ್ಸ್ ದಂಧೆ – ಅಜ್ಞಾತ ಸ್ಥಳಕ್ಕೆ ತೆರಳ್ತಿದ್ದ ಬಿಜೆಪಿ ಮುಖಂಡನ ಬಂಧನ

    ಡ್ರಗ್ಸ್ ದಂಧೆ – ಅಜ್ಞಾತ ಸ್ಥಳಕ್ಕೆ ತೆರಳ್ತಿದ್ದ ಬಿಜೆಪಿ ಮುಖಂಡನ ಬಂಧನ

    – ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಮುಖಂಡನ ಪುತ್ರರು ಅರೆಸ್ಟ್

    ಕೋಲ್ಕತ್ತಾ: ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಮತ್ತು ಇಬ್ಬರು ಪುತ್ರರನ್ನು ಪಶ್ಚಿಮ ಬಂಗಾಳ ಪೊಲೀಸರು ಮಂಗಳವಾರ ರಾತ್ರಿ ಪುರ್ಬಾ ಬರ್ಧಮಾನ್ ಜಿಲ್ಲೆಯ ಗಲ್ಸಿಯಲ್ಲಿ ಬಂಧಿಸಿದ್ದಾರೆ.

    ಇತ್ತೀಚೆಗೆ ಕೊಕೇನ್ ಸಾಗಿಸುತ್ತಿದ್ದ ವೇಳೆ ಬಂಧಿಸಲಾಗಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ವಿಚಾರಣೆ ವೇಳೆ ರಾಕೇಶ್ ಸಿಂಗ್ ಹೆಸರು ಬಹಿರಂಗಪಡಿಸಿದ್ದರು. ಈ ವಿಚಾರವಾಗಿ ಬಿಜೆಪಿ ಮುಖಂಡ ರಾಕೇಶ್ ಸಿಂಗ್ ನನ್ನು ಬಂಧಿಸಲಾಗಿದೆ.

    ಬಂದರು ಪ್ರದೇಶದಲ್ಲಿರುವ ಬಿಜೆಪಿ ರಾಜ್ಯ ಸಮಿತಿ ಮುಖಂಡನ ಮನೆ ಪ್ರವೇಶಿಸದಂತೆ ಸಿಬ್ಬಂದಿಯನ್ನು ರಾಕೇಶ್ ಸಿಂಗ್ ಪುತ್ರರು ತಡೆದಿದ್ದರು. ಮನೆ ಶೋಧಕಾರ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಇಬ್ಬರು ಪುತ್ರರನ್ನು ನಾರ್ಕೋಟಿಕ್ಸ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

    ರಾಕೇಶ್ ಸಿಂಗ್‍ಗಾಗಿ ಹುಡುಕಾಟ ಮಾಡುತ್ತಿದ್ದೇವು. ಆದರೆ ಸಿಂಗ್ ವಾಹನವನ್ನು ಬದಲಿಸಿ ಪ್ರಯಾಣ ಮಾಡುತ್ತಿದ್ದಾರೆ ಎನ್ನುವ ಸುಳಿವು ಸಿಕ್ಕಿತ್ತು. ಕೋಲ್ಕತ್ತಾ ಪೊಲೀಸರು ನೀಡಿದ ಮಾಹಿತಿಗೆ ಅನುಸಾರವಾಗಿ ಗಲ್ಸಿ ರಾಷ್ಟ್ರೀಯ ಹೆದ್ದಾರಿ ಟೋಲ್ ನಾಕಾದಲ್ಲಿ ರಾಕೇಶ್ ಸಿಂಗ್‍ನನ್ನು ಬಂಧಿಸಲಾಗಿದೆ. ಸಿಂಗ್‍ಗೆ ಭದ್ರತೆ ನೀಡಿದ್ದ ಸಿಐಎಸ್‍ಎಫ್ ಸಿಬ್ಬಂದಿಯ ಜತೆ ಕಾರಿನಲ್ಲಿ ಆರೋಪಿ ಅಜ್ಞಾತ ಸ್ಥಳಕ್ಕೆ ಹೋಗುತ್ತಿದ್ದರು ಎನ್ನಲಾಗುತ್ತಿದೆ. ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಂತೆ ತೋರುತ್ತಿತ್ತು ಎಂದು ಉನ್ನತ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಬಿಜೆಪಿ ಮುಖಂಡ ಗೋಸ್ವಾಮಿ, ಸ್ನೇಹಿತ ಪ್ರಬೀರ್ ಕುಮಾರ್ ಡೇ ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ 90 ಗ್ರಾಂ ಕೊಕೇನ್ ಪತ್ತೆಯಾಗಿದೆ ಎಂದು ಆರೋಪಿಸಿದ ನಂತರ ಈ ಪ್ರಕರಣದಲ್ಲಿ ಸಿಂಗ್ ಹೆಸರು ಕೇಳಿಬಂದಿತ್ತು. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರ ರೂಪಿಸಲಾಗಿದೆ, ಇದೆಲ್ಲಾ ಸಿಂಗ್ ಕೈವಾಡವೆಂದು ಗೋಸ್ವಾಮಿ ಹೇಳಿದ್ದರು. ಇದಾದ ನಂತರ ಪೊಲೀಸರು ಬದ್ರ್ವಾನ್ ನಲ್ಲಿ ರಾಕೇಶ್ ಸಿಂಗ್ ಅವರನ್ನು ಬಂಧಿಸಿದ್ದಾರೆ.

    ಡ್ರಗ್ಸ್ ಪ್ರಕರಣದಲ್ಲಿ ತಮ್ಮ ಪಾತ್ರವಿದೆ ಎನ್ನುವ ಬಗ್ಗೆ ವಿಚಾರಣೆಗೆ ಪೊಲೀಸರು ನೋಟೀಸ್ ನೀಡಿದ್ದನ್ನು ಪ್ರಶ್ನಿಸಿ ರಾಕೇಶ್ ಸಿಂಗ್ ಕೋಲ್ಕತ್ತಾ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು ಆ ಅರ್ಜಿ ವಜಾ ಆಗಿತ್ತು. ಸಿಂಗ್ ಪರ ವಕೀಲರು ತಮ್ಮ ಕಕ್ಷಿದಾರರು ಬಿಜೆಪಿ ಸೇರಿದ ಮೇಲೆ ಅವರ ವಿರುದ್ಧ 26 ಪ್ರಕರಣಗಳು ದಾಖಲಾಗಿದೆ, ಇದೊಂದು ರಾಜಕೀಯ ಷಡ್ಯಂತ್ರ ಎಂದು ಹೇಳಿದ್ದಾರೆ.

  • ಫೆ.25ರವರೆಗೆ ಬಿಜೆಪಿ ನಾಯಕಿ ಪಮೇಲಾ ಗೋಸ್ವಾಮಿ ಪೊಲೀಸ್ ಕಸ್ಟಡಿಗೆ

    ಫೆ.25ರವರೆಗೆ ಬಿಜೆಪಿ ನಾಯಕಿ ಪಮೇಲಾ ಗೋಸ್ವಾಮಿ ಪೊಲೀಸ್ ಕಸ್ಟಡಿಗೆ

    – ಕೊಕೇನ್ ಪ್ರಕರಣದಲ್ಲಿ ತಡರಾತ್ರಿ ಅರೆಸ್ಟ್

    ಕೋಲ್ಕತ್ತಾ: ಕೊಕೇನ್ ಪ್ರಕರಣದಲ್ಲಿ ಬಂಧನದಲ್ಲಿರುವ ಪಶ್ಚಿಮ ಬಂಗಾಳದ ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿಯನ್ನ ಎನ್‍ಡಿಪಿಎಸ್ ನ್ಯಾಯಾಲಯ 5 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಶುಕ್ರವಾರ ರಾತ್ರಿ ಪಮೇಲಾ ಗೋಸ್ವಾಮಿ ಬಂಧನಕ್ಕೊಳಗಾಗಿದ್ದು, ಕಾರಿನಲ್ಲಿ 100 ಗ್ರಾಂ ಕೊಕೇನ್ ಪತ್ತೆಯಾಗಿತ್ತು.

    ನ್ಯಾಯಾಲಯದಲ್ಲಿ ಪಮೇಲಾ ಗೋಸ್ವಾಮಿ ತಮ್ಮನ್ನು ಉದ್ದೇಶಪೂರ್ವಕವಾಗಿ ಈ ಜಾಲದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಿಐಡಿ ತನಿಖೆಯ ಅಗತ್ಯವಿದೆ, ರಾಕೇಶ್ ಸಿಶಂಗ್ ಎಂಬಾತ ಕೊಕೇನ್ ನನ್ನ ಬಳಿಯಲ್ಲಿರಿಸಿರುವ ಖಚಿತ ಮಾಹಿತಿ ನನಗೆ ಲಭ್ಯವಾಗಿದೆ. ಈ ಸಂಬಂಧ ಐದು ದಿನಗಳ ಹಿಂದೆ ನಾನು ಆಡಿಯೋ ರೆಕಾರ್ಡ್ ಸಹ ಮಾಡಿದ್ದೇನೆ ಎಂದು ಪಮೇಲಾ ವಿಚಾರಣೆ ವೇಳೆ ಹೇಳಿದ್ದಾರೆ.

    ನನ್ನ ವಿರುದ್ಧದ ಈ ಮೋಸದ ಜಾಲ ಬಹುದಿನಗಳಿಂದ ರಚಿಸಲಾಗಿದೆ. ನ್ಯೂ ಅಲಿಪುರ ಪೊಲೀಸ್ ಠಾಣೆ ಸಹ ಈ ಮೋಸದಾಟದ ಒಂದು ಭಾಗವಾಗಿರುವ ಸಾಧ್ಯತೆಗಳಿವೆ. ಪ್ರಕರಣದ ತನಿಖೆ ಡಿಟೆಕ್ಟಿವ್ ಡಿಪಾರ್ಟ್ ಮೆಂಟ್ (ಡಿಡಿ) ಅಥವಾ ಸಿಐಡಿ ನಡೆಸಬೇಕಿದೆ. ಸತ್ಯಕ್ಕೆ ಗೆಲವು ಸಿಗಲಿದೆ ಎಂದು ಹೇಳಿದ್ದು, ನ್ಯಾಯಾಲಯದಿಂದ ಹೊರ ಬಂದ ಬಳಿಕವೂ ಸಿಐಡಿ ತನಿಖೆಗೆ ಒತ್ತಾಯಿಸಿದ್ದಾರೆ.

    ಪಾಮೇಲಾ ನಮ್ಮ ವಿರುದ್ಧ ಆರೋಪಗಳನ್ನ ಮಾಡುತ್ತಿರುವ ಉದ್ದೇಶ ನಮಗೆ ಗೊತ್ತಿಲ್ಲ. ಫೇಸ್‍ಬುಕ್ ನಲ್ಲಿ ಭಾರತಿ ಘೋಷ್, ಸ್ವಪ್ನಾ ದಾಸಗುಪ್ತಾ ಸೇರಿದಂತೆ ದೊಡ್ಡ ನಾಯಕರ ವಿರುದ್ಧವೂ ಆರೋಪ ಹೊರಿಸಿದ್ದಾರೆ. ಸ್ವತಃ ಪಮೇಲಾ ವಿರುದ್ಧವೇ ಅವರ ತಂದೆ ದೂರು ದಾಖಲಿಸಿದ್ದರು. ನಾನು ಎಲ್ಲ ತನಿಖೆಗೂ ಸಿದ್ಧನಿದ್ದೇನೆಂದು ರಾಕೇಶ್ ಸಿಂಗ್ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

    ಕಾನೂನಿನ ಮುಂದೆ ಎಲ್ಲರೂ ಒಂದೇ: ಇನ್ನು ಪಮೇಲಾ ಬಂಧನದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ, ಕಾನೂನಿನ ಮುಂದೆ ಎಲ್ಲರೂ ಒಂದೇ. ತನಿಖೆಯಿಂದ ಸತ್ಯ ಗೊತ್ತಾಗಲಿದೆ. ಈ ಕುರಿತು ಪಶ್ಚಿಮ ಬಂಗಾಳದ ರಾಜ್ಯಾಧ್ಯಕ್ಷ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.