https://youtu.be/lnz1AwgVEwY
Tag: ಪಬ್ಲಿಕ್ ಸರ್ವೆ
-

ಕರ್ನಾಟಕದಲ್ಲಿ ಈ ಬಾರಿ ಅತಂತ್ರ ಸರ್ಕಾರ!
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಕಣ ಕಾವೇರಿದೆ. ಚುನಾವಣೆಗೆ ಇನ್ನೂ 23 ದಿನಗಳು ಬಾಕಿ ಉಳಿದಿವೆ. ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ತಂತ್ರ-ಪ್ರತಿತಂತ್ರದಲ್ಲಿ ತೊಡಗಿದ್ದಾರೆ. ಪಬ್ಲಿಕ್ಟಿವಿ ಕೂಡ ಮಿನಿ ಸರ್ವೇ ನಡೆಸಿದೆ.
ಈ ಸರ್ವೆ ವೇಳೆ ಹಲವಾರು ಪ್ರಶ್ನಾವಳಿಗಳನ್ನು ಮುಂದಿಟ್ಟು ಅಭಿಪ್ರಾಯ ಸಂಗ್ರಹಿಸಲಾಗಿದೆ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು? ಈಗ ಚುನಾವಣೆ ನಡೆದ್ರೆ ನೀವು ಯಾರಿಗೆ ಮತ ಚಲಾಯಿಸುತ್ತೀರಿ? ಪ್ರತ್ಯೇಕ ಧರ್ಮದ ವಿಚಾರ ಎಲೆಕ್ಷನ್ನಲ್ಲಿ ಪ್ರಮುಖ ಪಾತ್ರ ವಹಿಸುತ್ತಾ? ಹೀಗೆ ನಾನಾ ಪ್ರಶ್ನಾವಳಿಗಳನ್ನು ಮುಂದಿಟ್ಟು ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಪಬ್ಲಿಕ್ ಟಿವಿಯ ಪ್ರಶ್ನಾವಳಿಯೇನು? ಮತದಾರರ ಉತ್ತರವೇನು ಎನ್ನುವುದನ್ನು ಇಲ್ಲಿ ನೀಡಲಾಗಿದೆ.
1. ಲಿಂಗಾಯತ ಧರ್ಮ ವಿಚಾರ ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ವರದಾನನಾ? ತಿರುಗುಬಾಣನಾ?
ಹೌದು. ಕಾಂಗ್ರೆಸ್ ಗೆ ಲಾಭದಾಯಕ – 30.41%
ಇಲ್ಲ. ಕಾಂಗ್ರೆಸ್ ನಷ್ಟ – 19.51%
ಬಿಜೆಪಿಗೆ ನಷ್ಟ – 6.07%
ಬಿಜೆಪಿಗೆ ಲಾಭ – 13.50%
ರಾಜಕೀಯ, ಧರ್ಮದ ಮಿಶ್ರಣ ತಪ್ಪು – 20.49%
ಏನು ಹೇಳಲ್ಲ – 10.02%
2. ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನದಿಂದ ಇತರೆ ಜಾತಿಗಳು ಸಿಟ್ಟಾಗಿದ್ದಾವಾ?
ಹೌದು – 42.44%
ಇಲ್ಲ – 22.35%
ಗೊತ್ತಿಲ್ಲ – 35.21%
3.ಸಿದ್ದರಾಮಯ್ಯ ಸರ್ಕಾರದ ಅನ್ನ ಭಾಗ್ಯ, ಕ್ಷೀರ ಭಾಗ್ಯ ಮುಂತಾದ ಭಾಗ್ಯಗಳು ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜಯದ ಭಾಗ್ಯ ತಂದುಕೊಡುತ್ತಾ?
ಹೌದು. ಖಂಡಿತ – 28.02%
ಸ್ವಲ್ಪ ಅನುಕೂಲ – 36.87%
ಇಲ್ಲ – 27.52%
ಗೊತ್ತಿಲ್ಲ – 7.59%
4.ಕಾಂಗ್ರೆಸ್, ಬಿಜೆಪಿ ಮಠ ಮಂದಿರ ಪಾಲಿಟಿಕ್ಸ್ ಕ್ಲಿಕ್ ಆಗುತ್ತಾ?
ಕಾಂಗ್ರೆಸ್ ಗೆ ಲಾಭ, ಬಿಜೆಪಿಗೆ ನಷ್ಟ – 16.37%
ಕಾಂಗ್ರೆಸ್ ಗೆ ನಷ್ಟ, ಬಿಜೆಪಿಗೆ ಲಾಭ – 22.57%
ಇಬ್ಬರಿಗೂ ಸ್ವಲ್ಪ ಲಾಭ ಆಗಬಹುದು – 32.01%
ಇಬ್ಬರಿಗೂ ನಷ್ಟವಾಗಬಹುದು – 12.01%
ಏನು ಹೇಳಲ್ಲ – 17.04%
5. ಜೆಡಿಎಸ್ ಹಾಗೂ ಬಿಎಸ್ಪಿ ಚುನಾವಣಾ ಮೈತ್ರಿಯಿಂದ ದಲಿತರ ವೋಟು ಡಿವೈಡ್ ಆಗುತ್ತಾ?
ಹೌದು. ಮತ ವಿಭಜನೆ ಆಗುತ್ತೆ – 20.14%
ಇಲ್ಲ. ವ್ಯತ್ಯಾಸ ಆಗಲ್ಲ – 56.50%
ಗೊತ್ತಿಲ್ಲ – 23.36%
6. ಸಿದ್ದರಾಮಯ್ಯ ಸರ್ಕಾರಕ್ಕೆ ನೀವು ಕೋಡೋ ಅಂಕ ಎಷ್ಟು?
ಅತ್ಯುತ್ತಮ – 12.29%
ಉತ್ತಮ – 21.61%
ಸಾಧಾರಣ – 33.74%
ಕಳಪೆ – 17.86%
ಅತಿ ಕಳಪೆ – 14.50%
7.ಈ ಚುನಾವಣೆಯಲ್ಲಿ ನೀವು ಯಾವ ಆಧಾರದ ಮೇಲೆ ಮತ ಹಾಕುತ್ತೀರಿ
ಪಕ್ಷ – 11.18%
ಅಭಿವೃದ್ಧಿ – 3.74%
ಅಭ್ಯರ್ಥಿ – 12.93%
ಜಾತಿ – 18.93%
ಧರ್ಮ – 20.24%
ಸಿಎಂ ಸಿದ್ದರಾಮಯ್ಯ – 7.71%
ನರೇಂದ್ರ ಮೋದಿ – 16.12%
ಕುಮಾರಸ್ವಾಮಿ – 6.15%
ಇತರೆ – 3.00%
8. ಈ ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ?
ಕಾಂಗ್ರೆಸ್ – 30.82%
ಬಿಜೆಪಿ – 29.65%
ಜಿಡಿಎಸ್ – 22.52%
ನೋಟಾ – 5.17%
ಇತರೆ – 11.84%

9. ನಿಮ್ಮ ಪ್ರಕಾರ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು?
ಸಿದ್ದರಾಮಯ್ಯ – 24.66%
ಯಡಿಯೂರಪ್ಪ – 21.65%
ಕುಮಾರಸ್ವಾಮಿ – 20.63%
ಮಲ್ಲಿಕಾರ್ಜುನ ಖರ್ಗೆ – 4.67%
ಜಿ. ಪರಮೇಶ್ವರ್ – 3.86%
ಹೊಸ ಮುಖ – 12.09%
ಏನು ಹೇಳಲ್ಲ – 9.90%
ಇತರೆ – 2.54%
10. ಈ ಬಾರಿ ಸ್ವತಂತ್ರ ಸರ್ಕಾರವೋ, ಸಮ್ಮಿಶ್ರ ಸರ್ಕಾರವೋ?
ಪೂರ್ಣ ಬಹುಮತ ಸರ್ಕಾರ – 39.64%
ಅತಂತ್ರ ಪರಿಸ್ಥಿತಿ – 43.23%
ಗೊತ್ತಿಲ್ಲ -17.13%
11. ಸಮ್ಮಿಶ್ರ ಸರ್ಕಾರವಾದರೆ ನಿಮ್ಮ ಆದ್ಯತೆ ಯಾವುದು?
ಬಿಜೆಪಿ + ಜೆಡಿಎಸ್ – 44.30%
ಕಾಂಗ್ರೆಸ್ + ಜೆಡಿಎಸ್ – 28.73%
ಬಿಜೆಪಿ + ಕಾಂಗ್ರೆಸ್ – 6.74%
ಯಾವುದು ಇಲ್ಲ – 20.23%
12. ಬಿಜೆಪಿಗೆ ಮೋದಿಯೇ ಆಸರೆನಾ ಅಥವಾ ಬಿಎಸ್ವೈ ಆಸರೆನಾ?
ಮೋದಿ ಆಸರೆ
ಹೌದು – 67.20%
ಇಲ್ಲ – 22.36%
ಗೊತ್ತಿಲ್ಲ – 10.44%
ಬಿಎಸ್ವೈ ಆಸರೆ
ಹೌದು – 19.22%
ಇಲ್ಲ – 57.66%
ಗೊತ್ತಿಲ್ಲ – 23.12%
13. ಕಾಂಗ್ರೆಸ್ಗೆ ರಾಹುಲ್ ಆಸರೆನಾ ಅಥವಾ ಸಿದ್ದರಾಮಯ್ಯ ಆಸರೆನಾ?
ರಾಹುಲ್ ಆಸರೆ
ಹೌದು – 24.98%
ಇಲ್ಲ – 52.86%
ಗೊತ್ತಿಲ್ಲ – 22.16%
ಸಿದ್ದರಾಮಯ್ಯ ಆಸರೆ
ಹೌದು – 45.57%
ಇಲ್ಲ – 22.18%
ಗೊತ್ತಿಲ್ಲ – 32.25%
14. ಕಾಂಗ್ರೆಸ್ ಹಿಂದೂ ವಿರೋಧಿ, ಬಿಜೆಪಿ ಹಿಂದೂ ಪರ ಎಂದು ಭಾವಿಸುತ್ತೀರಾ?
ಬಿಜೆಪಿ ಹಿಂದೂಪರ, ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ – 29.54%
ಕಾಂಗ್ರೆಸ್ ಹಿಂದೂ ವಿರೋಧಿ, ಬಿಜೆಪಿ ಹಿಂದೂ ಪರ – 35.73%
ಏನು ಹೇಳಲ್ಲ – 34.73%15. ಪಬ್ಲಿಕ್ ಸರ್ವೆಯ ಅಂತಿಮ ಫಲಿತಾಂಶ?
ಕಾಂಗ್ರೆಸ್ 85-95
ಬಿಜೆಪಿ 75-85
ಜೆಡಿಎಸ್ 40-45
ಇತರೆ 05
-

ಪ್ರಧಾನಿಗೆ `ಮಂದಿ’ ಜೈ ಅಂತಿದ್ದಾರಾ.?ಬೈತಿದ್ದಾರಾ.? ಮೋದಿ ಸರ್ಕಾರ್@ 3
ಬೆಂಗಳೂರು: ಎದುರಾಳಿಗಳನ್ನೆಲ್ಲಾ ನೆಲಕ್ಕೆ ಕೆಡವಿ ಪ್ರಚಂಡ ಬಹುಮತದೊಂದಿಗೆ 2014 ಮೇ 26ರಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರಕ್ಕೆ ಇಂದು ಮೂರು ವರ್ಷದ ಸಂಭ್ರಮ.
ಸಬ್ಕಾ ಸಾಥ್ ಸಬ್ಕಾ ವಿಕಾಸ್ ಮಂತ್ರದೊಂದಿಗೆ, ಭಾರತವನ್ನು ವಿಶ್ವ ಗುರುವಿನ ಸ್ಥಾನಕ್ಕೆ ಏರಿಸುವ ಸಂಕಲ್ಪದೊಂದಿಗೆ, ರಾಜ ಸಿಂಹಾಸನ ಅಲಂಕರಿಸಿದ್ದ ನರೇಂದ್ರ ಮೋದಿ ದರ್ಬಾರ್ ಗೆ ಮೂರು ಸಂವತ್ಸರದ ಸಡಗರ. ನಿಮ್ಮ ಜೊತೆಗಿದ್ದೇವೆ, ವಿಶ್ವಾಸವಿದೆ, ಆಗುತ್ತಿದೆ ವಿಕಾಸ..! ಇದು ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಮೋದಿ ಸರ್ಕಾರ ಹೊರಡಿಸಿರುವ ಘೋಷ ವಾಕ್ಯ.
ನಮ್ಮದು ದಿಟ್ಟ ಹಾಗೂ ದೃಢ ಸರ್ಕಾರ, ನಮ್ಮದು ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ರಹಿತ ರಾಜ್ಯಭಾರ, ನಮ್ಮದು ಪ್ರಜಾ ಕಾಳಜಿವುಳ್ಳ ಆಡಳಿತ, ನಮ್ಮ ಅವಧಿಯಲ್ಲಿ ಭಾರತ ಜಾಗತಿಕ ಮಾನ್ಯತೆ ಹೊಂದುತ್ತಿದೆ, ದೇಶದ ಅಭಿವೃದ್ಧಿ ತೀವ್ರಗತಿಯಲ್ಲಿದೆ, ಪ್ರಜೆಗಳು ಕ್ಷೇಮವಾಗಿದ್ದಾರೆ, ಅಂತೆಲ್ಲಾ ಬೆನ್ನು ತಟ್ಟಿಕೊಳ್ತಿದೆ ಮೋದಿ ಸರ್ಕಾರ.
ಹಾಗಾದ್ರೆ ನಿಜಕ್ಕೂ ನುಡಿದಂತೆ ನಡೆದಿದ್ದಾರಾ ನರೇಂದ್ರ ಮೋದಿ? ಮತದಾರರಿಗೆ ಕೊಟ್ಟ ಮಾತು, ಇಟ್ಟ ವಾಗ್ದಾನ ಈಡೇರಿಸಿದ್ದಾರಾ? ಮೋದಿ ಯುಗದಲ್ಲಿ ದೇಶ ಸರಿ ದಾರಿಯಲ್ಲಿ ಸಾಗಿದ್ಯಾ? ನೋಟು ಬ್ಯಾನ್, ಸರ್ಜಿಕಲ್ ದಾಳಿ, ಕಪ್ಪು ಹಣ ಬೇನಾಮಿ ಆಸ್ತಿಗೆ ಅಂಕುಶ, ಡಿಜಿಟಲ್ ಇಂಡಿಯಾ, ಜನಧನ ಯೋಜನೆ, ನಮಾಮಿ ಗಂಗಾ, ಏಕ ದೇಶ ಏಕ ತೆರಿಗೆ ವ್ಯವಸ್ಥೆ, ಸ್ವಚ್ಛ ಭಾರತ ಅಭಿಯಾನ, ಘರ್ ವಾಪಸಿ, ಗೋರಕ್ಷಣೆ ಮುಂತಾದ ಮೋದಿಯ ಮಹತ್ವದ ನಿರ್ಧಾರಗಳಿಗೆ ಜನರ ಅನಿಸಿಕೆ ಅಭಿಪ್ರಾಯವೇನು? ಈ ಮೂರು ವರ್ಷಗಳಲ್ಲಿ ದೇಶವಾಸಿಗಳ ಆಸೆ ಆಶೋತ್ತರ ತಕ್ಕಮಟ್ಟಿಗಾದರೂ ಈಡೇರಿದ್ಯೇನು? 2019ರ ಚುನಾವಣೆಯಲ್ಲೂ ಮೋದಿ ಅವರೇ ಮರು ಆಯ್ಕೆ ಆಗ್ತಾರೇನು? ಮೋದಿಯ ಅಶ್ವಮೇಧ ಕುದುರೆ ಕಟ್ಟುವ ತಾಕತ್ತು ಯಾರಿಗೂ ಇಲ್ಲವೇನು? ಹೀಗೆ ಈ ಎಲ್ಲಾ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ಹುಡುಕುವ ಪ್ರಯತ್ನ ಮಾಡಿದೆ ನಿಮ್ಮ ಪಬ್ಲಿಕ್ ಟಿವಿ.
ಮೋದಿಯ ವರ್ಚಸ್ಸಿಗೆ ಕನ್ನಡಿ ಹಿಡಿಯಲಿದೆ ಪಬ್ಲಿಕ್ ಟಿವಿ ನಡೆಸಿರುವ ಮೆಗಾ ಸರ್ವೇಯ ಮೆಗಾ ಫಲಿತಾಂಶ. ಇದು ವಿಶ್ವಸನೀಯ, ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತ ಸಮೀಕ್ಷೆ ಎಂಬುದರಲ್ಲಿ ಎರಡು ಮಾತಿಲ್ಲ. ನಂಬಿಕೆಗೆ ಯೋಗ್ಯವಾದ ಸಮೀಕ್ಷೆಗಳ ಸಿದ್ಧ ಸೂತ್ರ ಹಾಗೂ ಶಿಸ್ತಿನ ಮಾನದಂಡವನ್ನು ಅನುಸರಿಸಲಾಗಿದೆ. ಕರ್ನಾಟಕದ ಮೂಲೆ ಮೂಲೆಗೂ ತೆರಳಿ ಜನ ಮನ ಅರಿಯುವ ನಿಯತ್ತಿನ ಪ್ರಯತ್ನ ಮಾಡಿದ್ದೇವೆ.
ನಗರ, ಪಟ್ಟಣ, ಗ್ರಾಮೀಣ ಭಾಗಗಳಲ್ಲಿ ಸರ್ವೇಕ್ಷಣಾ ಕಾರ್ಯ ಮಾಡಿದ್ದೇವೆ. ಸಮಾಜದ ಎಲ್ಲಾ ಸ್ಥರದ ಪ್ರಜೆಗಳನ್ನು ಮಾತನಾಡಿಸಿ 2,500ಕ್ಕೂ ಅಧಿಕ ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದೇವೆ. ಹಾಗಾದ್ರೆ ಜನತಾ ಜನಾರ್ದನರ ಮನದಾಳ ಏನು? ಮೋದಿಯ ಹೊಗಳಿದ್ದಾರಾ ಅಥವಾ ತೆಗಳಿದ್ದಾರಾ? ಪಬ್ಲಿಕ್ ಪರೀಕ್ಷೆಯಲ್ಲಿ ಮೋದಿ ಪಡೆದಿದ್ದು ಫಸ್ಟಾ ಕ್ಲಾಸೋ, ಸೆಕೆಂಡ್ ಕ್ಲಾಸೋ, ಜಸ್ಟ್ ಪಾಸೋ ಅಥವಾ ಫೇಲೋ? ಈ ಎಲ್ಲದಕ್ಕೂ ಅಂಕಿ ಅಂಶಗಳ ಸಮೇತ ಉತ್ತರ ಕೊಡಲಿದೆ ಈ ಸಮೀಕ್ಷೆ.
ಇದನ್ನೂ ಓದಿ: ಈಗ ಕರ್ನಾಟಕದಲ್ಲಿ ಚುನಾವಣೆ ನಡೆದ್ರೆ ಯಾರಿಗೆ ಎಷ್ಟು ಸ್ಥಾನ: ಪಬ್ಲಿಕ್ ಟಿವಿ 2017ರ ಫೆಬ್ರವರಿಯಲ್ಲಿ ನಡೆಸಿದ ಮೆಗಾ ಸರ್ವೇ
1. ಮೋದಿ ಸರ್ಕಾರದ 3 ವರ್ಷಗಳ ಆಡಳಿತದ ಬಗ್ಗೆ ನಿಮ್ಮ ಅಭಿಪ್ರಾಯ?
ಸಮಗ್ರ ಕರ್ನಾಟಕ
ಕಳಪೆ – 10.65%
ಸಾಧಾರಣ – 23.66%
ಉತ್ತಮ – 37.58%
ಅತ್ಯುತ್ತಮ – 28.11%
ಬೆಂಗಳೂರು
ಕಳಪೆ – 4.71%
ಸಾಧಾರಣ – 25.29%
ಉತ್ತಮ – 40%
ಅತ್ಯುತ್ತಮ – 30%
2. ಕಳೆದ ಮೂರು ವರ್ಷಗಳಲ್ಲಿ ಮೋದಿ ಜನಪ್ರಿಯತೆ ಹೇಗಿದೆ?
ಹೆಚ್ಚಾಗಿದೆ – 62.81%
ಕಡಿಮೆಯಾಗಿದೆ – 15.43%
ಯಾವುದೇ ಬದಲಾವಣೆ ಇಲ್ಲ – 21.75%
3. ಮೋದಿ ಸರ್ಕಾರ ಕೈಗೊಂಡ ಅತ್ಯಂತ ಮಹತ್ವದ ನಿರ್ಧಾರ ಯಾವುದು?
ನೋಟ್ಬ್ಯಾನ್ – 40.00%
ಸರ್ಜಿಕಲ್ ದಾಳಿ – 14.21%
ಸ್ವಚ್ಛ ಭಾರತ ಅಭಿಯಾನ – 23.75%
ಮೇಕ್ ಇನ್ ಇಂಡಿಯಾ – 9.03%
ಜನಧನ ಯೋಜನೆ – 5.97%
ಜಿಎಸ್ಟಿ – 7.04%
4. ಕಪ್ಪು ಹಣ ನಿಯಂತ್ರಣಕ್ಕೆ ಮೋದಿ ಕೈಗೊಂಡ ಕ್ರಮಗಳು ಯಶಸ್ವಿಯಾಗಿವ್ಯಾ?
ಹೌದು – 33.80%
ತಕ್ಕ ಮಟ್ಟಿಗೆ – 44.13%
ಇಲ್ಲ – 18.91%
ಗೊತ್ತಿಲ್ಲ – 3.16%
5. ಮೋದಿ ಸರ್ಕಾರದ ಅವಧಿಯಲ್ಲಿ ನಿಮ್ಮ ಜೀವನ ಮಟ್ಟ ಬದಲಾಗಿದ್ಯಾ..?
ಪರವಾಗಿಲ್ಲ – 38.43%
ಚೆನ್ನಾಗಿದೆ – 23.87%
ಏನೂ ಬದಲಾಗಿಲ್ಲ – 27.99%
ಮತ್ತಷ್ಟು ಬಿಗಡಾಯಿಸಿದೆ – 9.71%
6. ಮೋದಿ ಸರ್ಕಾರ ಕಡಿಮೆ ಯಶಸ್ಸು ಕಂಡಿರುವುದು ಯಾವುದರಲ್ಲಿ?
ಭಯೋತ್ಪಾದನೆಗೆ ಕಡಿವಾಣ – 18.03%
ರೈತರ ಪರಿಸ್ಥಿತಿ ಸುಧಾರಣೆ – 28.26%
ಉದ್ಯೋಗ ಸೃಷ್ಟಿ – 14.62%
ಭ್ರಷ್ಟಾಚಾರ ನಿಯಂತ್ರಣ – 22.96%
ಬಡತನ ನಿರ್ಮೂಲನೆ – 16.13%
7. ಮೋದಿಯ ನೋಟ್ ಬ್ಯಾನ್ ಯಜ್ಞಕ್ಕೆ ಏನಂತೀರಿ?
ಸರಿ – 72.99%
ತಪ್ಪು – 17.13%
ಗೊತ್ತಿಲ್ಲ – 9.88%
8. ನೋಟ್ ಬ್ಯಾನ್ನಿಂದ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿದ್ಯಾ?
ಹೌದು – 44.26%
ಇಲ್ಲ – 43.29%
ಗೊತ್ತಿಲ್ಲ – 12.45%
ಬೆಂಗಳೂರು
ಹೌದು – 45.51%
ಇಲ್ಲ – 41.92%
ಗೊತ್ತಿಲ್ಲ – 12.57%9. ಮೋದಿ ಯುಗದಲ್ಲಿ ಜಾಗತಿಕವಾಗಿ ಭಾರತದ ಇಮೇಜ್ ಬದಲಾಗಿದ್ಯಾ?
ಹೌದು – 52.69%
ಪರವಾಗಿಲ್ಲ – 30.07%
ಇಲ್ಲ – 12.65%
ಗೊತ್ತಿಲ್ಲ – 4.59%
10. ಮೋದಿ ಆಡಳಿತದಲ್ಲಿ ಭಾರತ ಸದೃಢವಾಗಿದ್ಯಾ?
ಹೌದು – 66.08%
ಇಲ್ಲ – 20.34%
ಗೊತ್ತಿಲ್ಲ – 13.58%
11. ಪಾಕಿಸ್ತಾನದ ವಿರುದ್ಧ ಮೋದಿ ಸರ್ಕಾರ ಇನ್ನಷ್ಟು ಬಿಗಿ ನಿಲುವು ಹೊಂದಬೇಕಾ?
ಹೌದು – 89.93%
ಇಲ್ಲ – 5.63%
ಗೊತ್ತಿಲ್ಲ – 4.44%12. ಭಾರತ ಯುದ್ಧದ ಮೂಲಕ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಬೇಕಾ?
ಯುದ್ಧ ಬೇಕು – 55.81%
ಯುದ್ಧ ಬೇಡ – 34.54%
ಗೊತ್ತಿಲ್ಲ – 9.65 %
13. ಮೋದಿ ದೇಶವಾಸಿಗಳಿಗೆ ಕೊಟ್ಟ ವಾಗ್ದಾನ ಈಡೇರಿಸಿದ್ದಾರಾ?
ಈಡೇರಿಸಿದ್ದಾರೆ – 24.43%
ಈಡೇರಿಸಿಲ್ಲ – 21.32%
ಪರವಾಗಿಲ್ಲ – 45.71%
ಗೊತ್ತಿಲ್ಲ – 8.54%14. ಈಗ ಚುನಾವಣೆ ನಡೆದರೆ ನಿಮ್ಮ ಮತ ಯಾರಿಗೆ?
ಮೋದಿ – 66.85%
ರಾಹುಲ್ ಗಾಂಧಿ – 10.60%
ಗೊತ್ತಿಲ್ಲ – 22.55%
ಬೆಂಗಳೂರು
ಮೋದಿ – 69.94%
ರಾಹುಲ್ ಗಾಂಧಿ – 3.07%
ಗೊತ್ತಿಲ್ಲ – 26.99%
15. ರಾಜ್ಯದಲ್ಲಿ ಸಿದ್ದರಾಮಯ್ಯ ಮೋದಿ ಇಬ್ಬರಲ್ಲಿ ಯಾರು ಹೆಚ್ಚು ಜನಪ್ರಿಯರು?
ಸಿದ್ದರಾಮಯ್ಯ – 30.18%
ಮೋದಿ – 55.50%
ಗೊತ್ತಿಲ್ಲ – 14.32%
ಬೆಂಗಳೂರು
ಸಿದ್ದರಾಮಯ್ಯ – 26.38%
ಮೋದಿ – 68.56%
ಗೊತ್ತಿಲ್ಲ – 5.06%
16. ಮೋದಿ ಜನಪ್ರಿಯತೆ ರಾಜ್ಯ ಚುನಾವಣೆಯ ಮೇಲೂ ಪರಿಣಾಮ ಬೀರುತ್ತಾ?
ಹೌದು – 57.46%
ಇಲ್ಲ – 29.10%
ಗೊತ್ತಿಲ್ಲ – 13.44%
ಬೆಂಗಳೂರು
ಹೌದು – 68.90%
ಇಲ್ಲ – 17.68%
ಗೊತ್ತಿಲ್ಲ – 13.41%


