Tag: ಪಬ್ಲಿಕ್ ಟಿವಿ Shubha

  • ಎಲಿಮಿನೇಷನ್ ನಂತರ ಶುಭಾ ಮನದಾಳದ ಮಾತು

    ಎಲಿಮಿನೇಷನ್ ನಂತರ ಶುಭಾ ಮನದಾಳದ ಮಾತು

    ಬಿಗ್‍ಬಾಸ್ ಮನೆಯಿಂದ ಹೊರಬಂದ ಶುಭಾ ಪೂಂಜಾ ಬಿಗ್‍ಬಾಸ್ ನನ್ನ ಜೀವನದ ಬೆಸ್ಟ್ ಡಿಷಿಶನ್ ಎಂದು ಹೇಳಿದ್ದಾರೆ.

    ಭಾನುವಾರ ವೇದಿಕೆ ಮೇಲೆ ಮಾತನಾಡಿದ ಶುಭಾ, 7 ಸೀಸನ್‍ನಲ್ಲಿಯೂ ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಬರುತ್ತೀರಾ ಎಂದು ಕೇಳಿದ್ದರು. ಆದರೆ 8ನೇ ಸೀಸನ್ ಬಂದಿದ್ದು, ನನಗೆ ಲಾಭ ಎನಿಸಿತು. ನಾನು ಮನೆಯಲ್ಲಿ ಕೂಡ ಬಹಳ ಎಂಟರ್ ಟೈನರ್, ಹಾಗೆಯೇ ಬಿಗ್‍ಬಾಸ್ ಮನೆಯಲ್ಲಿಯೂ ನಾನು ಲೈವ್‍ಲೀ ಯಾಗಿರಬೇಕು, ಎಂಟರ್ ಟೈನರ್ ಆಗಿರಬೇಕು, ಜನರನ್ನು, ಮನೆಯಲ್ಲಿರುವವರು ನಗಿಸಬೇಕು ಅಂದುಕೊಂಡಿದ್ದೆ. ನಾನು ಮನೆಯಲ್ಲಿ ಇರುವ ಕೊನೆಯ ಕ್ಷಣದವರೆಗೂ ಎಂಟರ್ ಟೈನ್ ಮಾಡಬೇಕು ಅಂದುಕೊಂಡಿದ್ದೆ. ಆ ಗುರಿ ತಲುಪಿದ್ದೇನೆ ಅಂದುಕೊಂಡಿದ್ದೇನೆ. ಇನ್ನೂ ಲೈಫ್‍ನಲ್ಲಿ ನಾನು ಬಹಳ ಏರುಪೇರು ನೋಡಿದ್ದರಿಂದ, ಯಾವುದಕ್ಕೂ ತುಂಬಾ ಉದ್ರೇಕಕ್ಕೆ ಒಳಗಾಗದೇ ಇರುವ ಚಿಕ್ಕಜೀವನವನ್ನು ಖುಷಿಯಾಗಿ ನಡೆಸಬೇಕು ಎಂದಿದ್ದಾರೆ.

    ನನಗೆ ಇಷ್ಟ ಆಗುವಂತಹವರನ್ನು ನಾನು ಎಂದೂ ಹೆಸರಿಟ್ಟು ಕರೆಯುವುದಿಲ್ಲ. ಅವರಿಗೆ ಒಂದು ಅಡ್ಡ ಹೆಸರನ್ನು ಇಟ್ಟೆ ಇಡುತ್ತೇನೆ. ಮಂಜುಗೆ ಚಂಪೂ, ರಾಜೀವ್‍ಗೆ ಗುಡ್ಡು, ಡಿಯುಗೆ ಬಿಟ್ಟು ಹೀಗೆ ಅಡ್ಡ ಹೆಸರಿನಲ್ಲಿ ನಾನು ಕರೆಯುವವರು ಯಾವಾಗಲೂ ನನ್ನ ಹೃದಯದಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ.

    ನಂತರ ಬಿಗ್‍ಬಾಸ್ ಮನೆಯಲ್ಲಿ ಜರ್ನಿ ವೀಡಿಯೋ ನೋಡಿ ಭಾವುಕರಾದ ಶುಭಾ, ಬಿಗ್‍ಬಾಸ್ ನನ್ನ ಜೀವನದಲ್ಲಿ ತೆಗೆದುಕೊಂಡು ಬೆಸ್ಟ್ ಡಿಷಿಶನ್. ನಾನು ಬಿಗ್‍ಬಾಸ್ ಮನೆಯಲ್ಲಿ ಬಹಳ ಎಂಜಾಯ್ ಮಾಡಿದ್ದೇನೆ. ಬಿಗ್‍ಬಾಸ್ ನನಗೆ ಮರೆಯಲಾದ ನೆನಪು ಎಂದಿದ್ದಾರೆ. ಜೊತೆಗೆ ಫೈನಲ್‍ನಲ್ಲಿ ಅರವಿಂದ್ ಹಾಗೂ ಮಂಜು ಪ್ರತಿ ಸ್ಪರ್ಧಿಗಳಾಗಿರುತ್ತಾರೆ. ಅದರಲ್ಲಿ ಮಂಜು ವಿನ್ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬಿಗ್‍ಬಾಸ್ ನಂತರ ಏನು ಎಂಬ ಸುದೀಪ್ ಪ್ರಶ್ನೆಗೆ, ಶುಭಾ 6 ತಿಂಗಳು ಫಿಯಾನ್ಸೆ ನನಗೆ ಸಪೋರ್ಟ್ ಮಾಡಿ ಬಿಗ್‍ಬಾಸ್ ಮನೆಗೆ ಕಳುಹಿಸಿ 6 ತಿಂಗಳ ಕಾಲ ಕಾದಿದ್ದಾರೆ. ಅವರೇ ನನಗೆ ಬಿಗ್‍ಬಾಸ್ ಮನೆಗೆ ಹೋಗು ಎಂದಿದ್ದರು. ನನಗೋಸ್ಕರ ಫಸ್ಟ್ ಇನ್ನಿಂಗ್ಸ್ ಕಾದು ಮತ್ತೆ ಸೆಕೆಂಡ್ ಇನ್ನಿಂಗ್ಸ್ ಕಾದಿದ್ದಾರೆ. ಈಗ ಮದುವೆಯಾಗುವುದಾಗಿ ತಿಳಿಸಿದ್ದಾರೆ.

    ಬಳಿಕ ಸುದೀಪ್ ಹಾಗೂ ಬಿಗ್‍ಬಾಸ್ ವೇದಿಕೆಗೆ ಧನ್ಯವಾದ ತಿಳಿಸುತ್ತಾ ಶುಭಾ ವಿದಾಯ ಹೇಳಿದರು. ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಶಮಂತ್ ಔಟ್

  • ಶುಭಾಗೆ ಸೋಮಾರಿ ಸುಬ್ಬಿ ಅಂದ ದೊಡ್ಮನೆ ಸ್ಪರ್ಧಿಗಳು

    ಶುಭಾಗೆ ಸೋಮಾರಿ ಸುಬ್ಬಿ ಅಂದ ದೊಡ್ಮನೆ ಸ್ಪರ್ಧಿಗಳು

    ವಾರ ದೊಡ್ಮನೆ ಮಂದಿಗೆ ಕಣ್ಮಣಿ ಅವಾರ್ಡ್ ನೀಡುವ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮನೆಯ ಎಲ್ಲಾ ಸ್ಪರ್ಧಿಗಳಿಗೂ ಕಾಮಿಡಿ ಪ್ರಶ್ನೆಗಳನ್ನು ಕೇಳುವ ಮೂಲಕ ಎಲ್ಲರಿಗೂ ಅವಾರ್ಡ್ ನೀಡುತ್ತಾ ಬಂದಿದೆ.

    ಸದ್ಯ ಕಣ್ಮಣಿ ಈ ಮನೆಯಲ್ಲಿ ಸೋಮಾರಿ ಸುಬ್ಬಿ ಯಾರು ಎಂಬ ಪ್ರಶ್ನೆ ಕೇಳಿದೆ. ಈ ವೇಳೆ ಶುಭಾ ಪೂಂಜಾ ಸ್ವತಃ ತಾವೇ ಎಂದು ಹೇಳುತ್ತಾ ಎರಡು ಕೈಗಳನ್ನು ಮೇಲಕ್ಕೆ ಎತ್ತುತ್ತಾರೆ. ಆಗ ಮನೆಯ ಸ್ಪರ್ಧಿಗಳು ಕೂಡ ಶುಭಾ ಕಡೆ ಬೆರಳು ಮಾಡಿದ್ದಾರೆ. ಇದರಲ್ಲಿ ಶುಭಾಗೆ ಕಾಂಪಿಟೇಷನ್ ನೀಡಲು ಯಾರಿಂದಲೂ ಸಾಧ್ಯವಿಲ್ಲ. ಸೋಮಾರಿ ಸುಬ್ಬಿ ಶುಭಾ. ಇದಕ್ಕೆ ವೋಟು ಇಲ್ಲ. ಅಭಿಪ್ರಾಯವಿಲ್ಲ, ಏನು ಇಲ್ಲ. ಒಂದೇ ಬಾರಿಗೆ ಸುಗ್ರಿವಾಜ್ಞೆ, ಶುಭಾಗೆ ಪ್ರತಿ ಸ್ಪರ್ಧಿಯೇ ಇಲ್ಲ ಎನ್ನುತ್ತಾರೆ.

    ನಂತರ ರಘು ಕೂಡ, ಇವರೆಷ್ಟು ಸೋಮಾರಿ ಎಂದರೆ ಟ್ರೋಫಿನೂ ಯಾರಾದರೂ ಎತ್ತಿಕೊಂಡು ಬಂದು ಕೊಡಿ ಅಂದಾಗ ಯಾವುದೇ ಟಾಸ್ಕ್ ಕೊಟ್ಟರೂ ಇದು ಯಾಕೆ ಕೊಡಬೇಕಾಗಿತ್ತು. ಮೈಕ್ ಸರಿ ಮಾಡಿಕೊಳ್ಳಿ ಎಂದರೆ ಯಾಕೆ ಹಾಗೆ ಕೂಗಾಡುತ್ತೀರಾ ಬಿಗ್‍ಬಾಸ್, ಏನು ಗಂಟು ಹೋಗುತ್ತಾ ಎಂದು ಕೇಳುತ್ತಾರೆ. ಕೆಲಸದ ತಂಟೆಗೆ ಬರುವುದಿಲ್ಲ. ಅಡುಗೆ ಹೀಗೆ ಎಲ್ಲದರನ್ನು ನೆಗೆಲೆಟ್ ತೋರಿಸುತ್ತಾರೆ ಎಂದು ಮಂಜು ಹೇಳುತ್ತಾರೆ.

    ಪ್ರಶಾಂತ್ ಕೂಡ ಬೆಳಗ್ಗೆ ಎದ್ದು ಕುಳಿತುಕೊಂಡ ನಂತರ ಟೀ ಮಾಡಿಕೊಳ್ಳುವುದರಿಂದ ಹಿಡಿದು, ಟೀ ಕಪ್ ಕೊಡುವವರೆಗೂ ಹುಡುಕಿಕೊಂಡು ಹೋಗಿ ಕೊಡಬೇಕು. ಒಳ್ಳೆ ರಾಣಿ ತರಹ ಇರುತ್ತಾರೆ, ಅವರದು ಹೊರಗಡೆಯೂ ರಾಣಿ ಜೀವನ, ಬಿಗ್‍ಬಾಸ್ ಮನೆಯಲ್ಲಿಯೂ ರಾಣಿ ಜೀವನ ಎಂದು ಹಾಸ್ಯ ಮಾಡುತ್ತಾರೆ.

    ಈ ವೇಳೆ ನಿಧಿ ಸುಬ್ಬಯ್ಯ ಕೂಡ ಶುಭಾ ಹಾಗೂ ನಾನು ಇಬ್ಬರು ಒಂದು ವೇಳೆ ಬಾತ್ ರೂಮ್ ಡಿಪಾರ್ಟ್‍ಮೆಂಟ್‍ನಲ್ಲಿ ಒಟ್ಟಿಗೆ ಇದ್ದರೆ, ನಾನು ಇವತ್ತು ಬಾತ್ ರೂಮ್ ಕ್ಲೀನ್ ಮಾಡುತ್ತೇನೆ ಎಂದು ನಾಲ್ಕು ಜನರನ್ನು ಕರೆದುಕೊಂಡು ಬಂದು ತೋರಿಸುತ್ತಾರೆ. ಕ್ಲೀನ್ ಮಾಡಿದ ನಂತರ ಹೇಗಿದೆ ಕ್ಲೀನಿಂಗ್ ಎಂದು ಕೇಳಿ ಹೋದ ಬಳಿಕ, ನಾನು ಮತ್ತೊಮ್ಮೆ ಬಾತ್ ರೂಮ್ ಕ್ಲೀನ್ ಮಾಡುತ್ತೇನೆ. ಅಡುಗೆ ಮನೆಯಲ್ಲಿಯೂ ಹಾಗೆ ಗಲೀಜು ಮಾಡುತ್ತಾಳೆ. ಅವಳ ಬೆಡ್ ಹಾಗೂ ಬಟ್ಟೆ ಕ್ಲೀನ್ ಮಾಡಿಕೊಳ್ಳಲು ಹೇಳಿದರೂ ನಿನಗೇನು ಪ್ರಾಬ್ಲಂ ನಿನ್ನ ಬೆಡ್ ಸೈಡ್ ಕ್ಲೀನ್ ಇದ್ಯಾಲ್ಲಾ ಹೋಗಿ ಮಲಗಿಕೋ ಅಂತಾಳೆ ಎಂದು ರೇಗಿಸುತ್ತಾರೆ.

    ಇಂದು ಬೆಳಗ್ಗೆ ಎದ್ದು ಬ್ರಶ್ ಮಾಡುವಾಗ ಕೂಡ ಶುಭಾ ಸೋಫಾ ಮೇಲೆ ಕುಳಿತುಕೊಂಡು ಮಾಡುತ್ತಿದ್ದರು ಎಂದು ಅರವಿಂದ್ ಹೇಳುತ್ತಾ, ಮಿಮಕ್ರಿ ಮಾಡುತ್ತಾ ತೋರಿಸುತ್ತಾರೆ. ಅದನ್ನು ನೋಡಿ ಮನೆ ಮಂದಿಯೆಲ್ಲಾ ಜೋರಾಗಿ ನಗುತ್ತಾರೆ.