Tag: ಪಬ್ಲಿಕ್ ಟಿವಿ Shamanth

  • ದೊಡ್ಮನೆಯಲ್ಲಿ ಸ್ಯಾಂಡ್‍ವಿಚ್ ಆಗಿ ಸಾಕಾಗಿದೆ: ಶಮಂತ್

    ದೊಡ್ಮನೆಯಲ್ಲಿ ಸ್ಯಾಂಡ್‍ವಿಚ್ ಆಗಿ ಸಾಕಾಗಿದೆ: ಶಮಂತ್

    ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟ ಹಲವಾರು ಪ್ರತಿಭೆಗಳಲ್ಲಿ ಶಮಂತ್ ಕೂಡ ಒಬ್ಬರು. ಫಸ್ಟ್ ಇನ್ನಿಂಗ್ಸ್‍ನಲ್ಲಿ ಅಷ್ಟೇನೂ ಸದ್ದು ಮಾಡದೇ ಇದ್ದರೂ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಅದರ ಎರಡರಷ್ಟು ಆ್ಯಕ್ಟಿವ್ ಆಗಿರುವುದರ ಜೊತೆಗೆ ಮನೆಯಲ್ಲಿ ತಮ್ಮ ಹಾಡಿನ ಮೂಲಕ ಮೈನ್ ಆಫ್ ದಿ ಆಟ್ರ್ಯಾಕ್ಷನ್ ಆಗುತ್ತಿದ್ದಾರೆ.

    ಕಳೆದ ವಾರ ಕಿಚ್ಚ ಸುದೀಪ್, ಪ್ರಶಾಂತ್ ಹಾಗೂ ಚಕ್ರವರ್ತಿ ಮಧ್ಯೆ ಸಿಲುಕಿಕೊಂಡಿರುವ ಶಮಂತ್‍ರವರ ಪರಿಸ್ಥಿತಿ ಯಾವ ರೀತಿ ಇದೆ ಎಂದು ಹಾಡನ್ನು ಬರೆದು ಮುಂದಿನ ವಾರ ಹೇಳಬೇಕೆಂದು ಸೂಚಿಸಿದ್ದರು. ಅದರಂತೆ ಶಮಂತ್ ವಾರದ ಕಥೆ ಕಿಚ್ಚ ಜೊತೆ ಸಂಚಿಕೆಯಲ್ಲಿ ತಾವು ಬರೆದಿರುವ ಹಾಡನ್ನು ಕಿಚ್ಚನ ಎದುರಿಗೆ ಹಾಡಿ ಮಿಂಚಿದ್ದಾರೆ.

    ಅಯ್ಯಯ್ಯೋ ನೋಡು ದೇವ್ರೆ, ಸಿಕ್ಕಾ ಪಟ್ಟೆ ಕಷ್ಟ ಮಾರ್ರೆ, ಇತ್ತ ಮಳ್ಳ, ಅತ್ತ ಸುಳ್ಳ, ಮಧ್ಯ ನಾನು ಕಳ್ಳ ಅಲ್ಲ. ಅಲ್ಲಿ ಮಳ್ಳಿ, ಇಲ್ಲಿ ಕುಳ್ಳಿ, ನಾನು ಈಗ ಎಲ್ಲಿ ಹೋಗ್ಲಿ, ನನ್ನ ಪಾಡಿಗೆ ನಾನು ಕೂತಿದ್ರು ನನ್ನ ಬುಡಕ್ಕೆ ಬರ್ತಾರೆ. ಇನ್ನೇನು ಕಿರಿಕ್ ಸ್ಟಾರ್ಟ್ ನಾನು ಓಡಬೇಕಿದೆ, ಅಲ್ಲಿದ್ದ ತಪ್ಪಿಗೆ ಸಾಕ್ಷಿ ಹೇಳಬೇಕಾಗಿದೆ. ಅಯ್ಯಪ್ಪ ಸ್ಯಾಂಡ್‍ವಿಚ್ ಬಾಳು ನಂದು ಆಗಿ ಹೋಗಿದೆ, ಸಾಕಾಗೋಗಿದೆ.. ಸಾಕಾಗೋಗಿದೆ.. ಎಂದು ಹಾಡು ಹೇಳಿದ್ದಾರೆ.

    ಹಾಡಿನ ನಂತರ ಲಿರಿಕ್‍ನಲ್ಲಿ ಮಳ್ಳ-ಸುಳ್ಳ ಎಂದು ಬಂತು ಅದು ಯಾರು ಎಂದು ಸುದೀಪ್ ಕೇಳಿದಾಗ, ಹಾಗೆ ಸುಮ್ಮನೆ ಬರೆದೆ ಎಂದು ಶಮಂತ್ ಹೇಳುತ್ತಾರೆ. ಆಗ ಸುದೀಪ್ ಹೋಗ್ಲಿ ಬಿಡಿ ಯಾಕೆ, ಆಮೇಲೆ ನಾನು ನಿಮ್ಮನ್ನು ಸ್ಯಾಂಡ್‍ವಿಚ್ ಮಾಡುವುದು ಎಂದು ರೇಗಿಸುತ್ತಾರೆ.

    ಒಟ್ಟಾರೆ ಶಮಂತ್ ಪ್ರತಿಭೆ ಕಂಡು ಮನೆಮಂದಿ ಜೊತೆ ಕಿಚ್ಚ ಕೂಡ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ವೈಷ್ಣವಿ ಬಗ್ಗೆ ಸುದೀಪ್‍ಗಿದ್ದ ಅಭಿಪ್ರಾಯ ಚೇಂಜ್

  • ಎಷ್ಟು ದಿನ ಫ್ರೆಂಡ್ ನೀವು ನನಗೆ: ಚಕ್ರವರ್ತಿ ವಿರುದ್ಧ ರೊಚ್ಚಿಗೆದ್ದ ಶಮಂತ್

    ಎಷ್ಟು ದಿನ ಫ್ರೆಂಡ್ ನೀವು ನನಗೆ: ಚಕ್ರವರ್ತಿ ವಿರುದ್ಧ ರೊಚ್ಚಿಗೆದ್ದ ಶಮಂತ್

    ಪ್ರತಿವಾರ ಬಿಗ್‍ಬಾಸ್ ಮನೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಗೆ ಮನೆಯ ಎಲ್ಲಾ ಸದಸ್ಯರು ಸೇರಿ ಕಳಪೆ ಬೋರ್ಡ್ ಹಾಕುವುದು ನಿಯಮ. ಅದರಂತೆ ಈ ವಾರ ಮನೆಮಂದಿಯೆಲ್ಲಾ ಒಂದೊಂದು ಕಾರಣಗಳನ್ನು ಹೇಳಿ ಚಕ್ರವರ್ತಿ ಚಂದ್ರಚೂಡ್‍ಗೆ ಕಳಪೆ ಬೋರ್ಡ್ ನೀಡಿದ್ದಾರೆ.

    ಈ ಮಧ್ಯೆ ಇಷ್ಟು ದಿನ ಒಳ್ಳೆಯ ಸ್ನೇಹಿತರಾಗಿದ್ದ ಶಮಂತ್ ಹಾಗೂ ಚಕ್ರವರ್ತಿ ನಡುವೆ ಇದೇ ಮೊದಲ ಬಾರಿಗೆ ಜಗಳ ನಡೆದಿದೆ. ಕಳಪೆ ಬೋರ್ಡ್ ನೀಡಲು ಶಮಂತ್ ನೀಡಿದ್ದ ಕಾರಣವನ್ನು ವಿರೋಧಿಸಿದ ಚಕ್ರವರ್ತಿಯವರು, ಕಳಪೆ ಬೋರ್ಡ್ ಹಾಕುವ ಮುನ್ನವೇ ಶಮಂತ್ ನನಗೆ ಮೊದಲೇ ಹೇಳಿದ್ದರು, ನಿಮಗೆ ಕಳಪೆ ಬೋರ್ಡ್ ನೀಡುತ್ತೇನೆ ಎಂದು ದಿವ್ಯಾ ಅರವಿಂದ್ ಜೊತೆ ಮಾತನಾಡುತ್ತಿರುತ್ತಾರೆ.

    ಈ ವೇಳೆ ಶಮಂತ್, ದಿವ್ಯಾ ಉರುಡುಗರವರನ್ನು ನೀವು ಹಿಡಿದು ಕೊಳ್ಳಬಾರದಾಗಿತ್ತು. ನಿಮ್ಮದು ಮಿಸ್‍ಟೇಕ್ ಇದೆ, ಅದು ಬೇಕು, ಬೇಕು ಎಂದು ನೀವು ಮಾಡಿಲ್ಲ. ಇದೊಂದು ತಪ್ಪು ಬಿಟ್ಟರೆ ಬೇರೆ ಏನು ಇಲ್ಲ ಎಂದು ಹೇಳುತ್ತಾರೆ. ಅಲ್ಲದೇ ಇದೇ ವೇಳೆ ಪ್ರಿಯಾಂಕ ವಿಚಾರವಾಗಿ ಮಾತನಾಡಿದ ಚಕ್ರವರ್ತಿಯವರು, ಸಂದರ್ಭ ಬಂದಾಗ ಕೈ ಎತ್ತಿ ಬಿಡುತ್ತೀಯಾ, ಇದೇನಾ ನೀನು ವಿಶ್ವಾಸಕ್ಕೆ ಕೊಡುವ ಗೌರವ, ಮೋಸ ಮಾಡಿ ಬಿಡುತ್ತೀಯಾ, ಸುಳ್ಳು ಹೇಳಿ ನುಣುಚಿಕೊಂಡು ಬಿಡುತ್ತೀಯಾ, ತಪ್ಪಿಗೆ ತಪ್ಪು ಎಂದು ಹೇಳು, ಸರಿಗೆ ಸರಿ ಅಂತ ಹೇಳು, ನೀನು ಯಾವ ಸ್ನೇಹಿತರಿಗೆ ಬೇಕಾದರೂ ಕತ್ತು ಕುಯ್ದುಬಿಡುತ್ತೀಯಾ ಎಂದು ಬೈಯ್ಯುತ್ತಾರೆ.

    ಇದರಿಂದ ರೊಚ್ಚಿಗೆದ್ದ ಶಮಂತ್, ಯಾವುದಕ್ಕೊ, ಯಾವುದೋ ಪದ ಬಳಸಬೇಡಿ. ನಾನು ಕತ್ತು ಕುಯ್ಯುವ ಕೆಲಸ ಮಾಡಿಲ್ಲ. ನಾನು ಇಷ್ಟು ವಾರ ಕಳಪೆ ಹಾಕಿದವರು ಯಾವತ್ತು ಕೂಡ ನನಗೆ ಕತ್ತು ಕುಯ್ದೆ ಎಂದು ಹೇಳಿಲ್ಲ. ಹೇಳಿದ ಕಾರಣವನ್ನು ಸ್ವೀಕರಿಸಿ, ನನ್ನದೇ ಎಲ್ಲೋ ತಪ್ಪು ಇರಬಹುದು ಎಂದು ಸುಮ್ಮನೇ ಆಗಿದ್ದಾರೆ. ನನ್ನನ್ನು ಕಾರಣ ಕೇಳಿದ್ದಾರೆ, ನಾನು ಕಾರಣ ಹೇಳಿದ್ದೇನೆ ಅಷ್ಟೇ. ಕತ್ತು ಕುಯ್ಯೊದು ನಂಬಿಕೆ ದ್ರೋಹ, ಫ್ರೆಂಡ್ಸ್‍ನ ಕಳೆದುಕೊಳ್ಳುವುದು, ನಿಮಗೆ ಇದೆಲ್ಲದರ ಬಗ್ಗೆ ಮಾತನಾಡಲು ಯಾವುದೇ ಹಕ್ಕಿಲ್ಲ. ಎಷ್ಟು ದಿನ ಫ್ರೆಂಡ್ ನೀವು ನನಗೆ, ನನ್ನ ಬಗ್ಗೆ ಏನು ಗೊತ್ತು ನಿಮಗೆ, ಹೇಗೆ ಕತ್ತು ಕುಯ್ದೆ ಎಂದು ಹೇಳುತ್ತೀರಾ. ಕತ್ತು ಕುಯ್ದನಾ ನಾನು ನಿಮಗೆ, ಸುಮ್ಮನೆ ರಾಂಗ್ ಸ್ಟೇಟ್‍ಮೆಂಟ್ ಮಾಡಿ, ಇಲ್ಲದೇ ಇರುವ ಅನಿಸಿಕೆಯನ್ನು ಸೃಷ್ಟಿಸುವುದನ್ನು ಬಿಡಿ ಮೊದಲು, ನಾನು ಏನು ಬೇಕಾದರೂ ಮಾಡುತ್ತೇನೆ. ನಿಮಗೆ ನನ್ನ ಬಗ್ಗೆ ಸಂಪೂರ್ಣವಾಗಿ ಗೊತ್ತಿಲ್ಲ ಎಂದರೆ ಮಾತನಾಡಬಾರದು, ಮಾತನಾಡಬೇಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ತಂದೆಯ ಭಜನೆ ಹಾಡಿಗೆ ಮನಸೋತ ರಾಧಿಕಾ ಪಂಡಿತ್

  • ಶಮಂತ್ ಒಂದು ದಾರಿಯಲ್ಲಿ ನಡೆದು ಬಿಟ್ರೆ, ನಾನು ಚಾಲೆಂಜ್ ಮಾಡ್ತೇನೆ: ಚಕ್ರವರ್ತಿ

    ಶಮಂತ್ ಒಂದು ದಾರಿಯಲ್ಲಿ ನಡೆದು ಬಿಟ್ರೆ, ನಾನು ಚಾಲೆಂಜ್ ಮಾಡ್ತೇನೆ: ಚಕ್ರವರ್ತಿ

    ಗಮನವನ್ನು ಸೆಳೆಯುತ್ತ ಟಾಸ್ಕ್‌ನಲ್ಲಿ ಸೋತ ನಿಂಗೈತೆ ತಂಡದ ಇಬ್ಬರು ಸದಸ್ಯರು ಇಡೀ ದಿನದಲ್ಲಿ 10 ಜೊತೆ ಬಟ್ಟೆ ಚೇಂಜ್ ಮಾಡಬೇಕೆಂದು ಬಿಗ್‍ಬಾಸ್ ಸೂಚಿಸಿದ್ದರು.

    ಸೂಚನೆಯ ಹಿನ್ನೆಲೆಯಲ್ಲಿ ದಿವ್ಯಾ ಸುರೇಶ್ ಹಾಗೂ ಶಮಂತ್ ಇಬ್ಬರು ಒಂದೇ ತರಹದ ಬಣ್ಣಬಣ್ಣದ ಬಟ್ಟೆಗಳನ್ನು ಧರಿಸಿ ವಿಜಯ ಯಾತ್ರೆ ತಂಡದ ನಾಯಕರಿಗೆ ತೋರಿಸಿ ಅನುಮೋದನೆ ಪಡೆಯುತ್ತಾ, ನಂತರ ಇಬ್ಬರು ಆ ಡ್ರೆಸ್‍ನಲ್ಲಿ ಕ್ಯಾಮೆರಾ ಮುಂದೆ ಪೋಸ್ ನೀಡಿ ಫೋಟೋ ಹಿಡಿಸಿಕೊಂಡಿದ್ದಾರೆ. ಅಲ್ಲದೇ ಶಮಂತ್ ಹಾಗೂ ದಿವ್ಯಾ ಉರುಡುಗ ಬ್ಯಾಕ್ ಟೂ ಬ್ಯಾಕ್ ಮ್ಯಾಚಿಂಗ್ ಡ್ರೆಸ್‍ಗಳನ್ನು ನೋಡಿ ಇಷ್ಟು ದಿನ ಇಷ್ಟು ಚೆಂದದ ಬಟ್ಟೆಗಳನ್ನು ಇಟ್ಟುಕೊಂಡು ಹಾಕಿಕೊಂಡೇ ಇಲ್ಲ ಮನೆ ಮಂದಿಯೆಲ್ಲಾ ಕಾಮೆಂಟ್ ಕೂಡ ಮಾಡುತ್ತಾರೆ.

    ಈ ನಡುವೆ ಎಲ್ಲರೂ ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುವ ವೇಳೆ ಚಕ್ರವರ್ತಿಯವರು, ಒಂದೊಂದು ಜೊತೆ ಬಟ್ಟೆ ಹಾಕಿಕೊಂಡು ನೀನು ಏನೇನು ಮಾಡುತ್ತಿದ್ಯಾ ಅನ್ನುವುದು ಎಂದು ಶಮಂತ್‍ರನ್ನು ಅಣುಕಿಸುತ್ತಾರೆ. ಈ ವೇಳೆ ದಿವ್ಯಾ ಸುರೇಶ್ ಇಬ್ಬರು ಟಾಸ್ಕ್ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಆಗ ಚಕ್ರವರ್ತಿಯವರು ಟಾಸ್ಕ್ ಅಲ್ಲಮ್ಮ, ಇವನು ಇನ್ನೂ ಬೇರೆ, ಬೇರೆ ಮಾಡುತ್ತಿದ್ದಾನೆ. ನಿನ್ನದು ಒಂದೇ ದೃಷ್ಟಿಕೋನ, ಆದರೆ ನಾನು ತಿರುಗಿಸಿ, ತಿರುಗಿಸಿ ನೋಡುತ್ತಿರುತ್ತೇನೆ. ಈ ಹುಡುಗ ಯಾವತ್ತಾದರೂ ಒಂದು ದಾರಿಯಲ್ಲಿ ನಡೆದು ಬಿಟ್ಟರೆ, ನಾನು ಚಾಲೆಂಜ್ ಮಾಡಿ ಬಿಡುತ್ತೇನೆ. ಎರಡು ದೋಣಿ ಮೇಲೆ ಕಾಲಿಡುತ್ತಾನೆ ಎನ್ನುತ್ತಾರೆ.

    ಆಗ ವೈಷ್ಣವಿ ಎರಡೇನಾ? ಅಂದಾಗ ಈ ಮನೆಯಲ್ಲಿ ಮಾಡುತ್ತಾ ಇರುವುದು ಎರಡೆನೇ ಮೂರನೆಯದಕ್ಕೆ ಜಾಗವಿಲ್ಲ ಎಂದು ಚಕ್ರವರ್ತಿಯವರು ಹೇಳುತ್ತಾರೆ. ಆಗ ಶಮಂತ್ ಕೆರಿಯರ್ ಮತ್ತು ಆಫೀಸ್ ಎರಡು ದೋಣಿಯಲ್ಲಿ ಹೋಗುತ್ತಿದೆ. ಆದರೆ ಈಗ ಆಫೀಸ್ ಬಿಟ್ಟು ಕೆರಿಯರ್ ಎಂಬ ಒಂದೇ ದೋಣಿಯಲ್ಲಿ ಹೋಗುತ್ತಿದ್ದೇನೆ ಎನ್ನುತ್ತಾರೆ. ಈ ವೇಳೆ ದಿವ್ಯಾ ಸುರೇಶ್ ಕೊನೆಯದಾಗಿ ನೀನು ಮಾಡುವುದು ನಿನಗೆ ಸರಿ ಎನಿಸಿದರೆ ಬೇರೆಯವರಿಗೆ ಏನು ಹೇಳುವುದು ಬೇಕಾಗಿಲ್ಲ ಎಂದು ಟಾಂಗ್ ನೀಡುತ್ತಾರೆ.

    ನಂತರ ಮೇಕಪ್ ರೂಮಿನಲ್ಲಿ ಕುಳಿತು ದಿವ್ಯಾ ಸುರೇಶ್ ನೀನು ಚಕ್ರವರ್ತಿಯವರು ವೈಯಕ್ತಿವಾಗಿ ಏನಾದರೂ ಮಾತನಾಡಿಕೊಳ್ಳಿ ಅದರಿಂದ ನನಗೆ ತೊಂದರೆಯಾಗುವುದಿಲ್ಲ. ಆದರೆ ನಿನ್ನ ವಿಷಯಕ್ಕೆ ಬೇರೆಯವರನ್ನು ಹೋಲಿಸಿ ಮಾತನಾಡುತ್ತಿದ್ದಾರೆ, ಇನ್ ಡೈರೆಕ್ಟ್ ಆಗಿ ಎರಡು ದೋಣಿ, ಮೂರು ದೋಣಿ ಎನ್ನುವುದು ನನಗೆ ಇಷ್ಟವಾಗುವುದಿಲ್ಲ, ನೀನು ಮಾತನಾಡಬೇಕಾಗಿತ್ತು ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ:ಬಿಗ್‍ಬಾಸ್ ಮನೆಯಲ್ಲಿ ಕೊರೊನಾ ಆತಂಕ

  • ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

    ಶಮಂತ್ ಮೇಲೆ ಚಪ್ಪಲಿ ಎಸೆದ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ ನೀಡಿದ್ದ ಚಿನ್ನದ ಮೊಟ್ಟೆ ಟಾಸ್ಕ್ ವೇಳೆ ಪ್ರಿಯಾಂಕ ತಿಮ್ಮೇಶ್ ತಲೆಯ ಮೇಲೆ ದಿವ್ಯಾ ಸುರೇಶ್ ಮೊಟ್ಟೆ ಒಡೆದು ಗೆಲ್ಲುತ್ತಾರೆ. ಇದರಿಂದ ತಮ್ಮ ಬಳಿ ಇದ್ದ ಸಂಪೂರ್ಣ ಹಣ ಕಳೆದುಕೊಂಡ ಪ್ರಿಯಾಂಕ ತಿಮ್ಮೇಶ್, ಶಮಂತ್‍ರಿಂದಾಗಿ ದಿವ್ಯಾ ಸುರೇಶ್ ಗೆದ್ದರು ಎಂಬ ಕಾರಣಕ್ಕೆ ಶಮಂತ್ ಲಾಕರ್‌ನಲ್ಲಿದ್ದ ಹಣವನ್ನು ಕದಿಯಲು ಮುಂದಾಗುತ್ತಾರೆ.

    ಈ ವೇಳೆ ಲಾಕರ್‍ನಲ್ಲಿದ್ದ ಹಣವನ್ನು ಕಾಪಾಡಿಕೊಳ್ಳಲು ಶಮಂತ್, ಪ್ರಿಯಾಂಕ ತಿಮ್ಮೇಶ್ ಜೊತೆ ಡೀಲ್ ಮಾಡಿಕೊಳ್ಳುತ್ತಾರೆ. ನಾನು ಈಗ ನಿನಗೆ 14 ಸಾವಿರ ರೂ. ನೀಡುತ್ತೇನೆ. ಆದರೆ ಮುಂದಿನ ಟಾಸ್ಕ್‌ನಲ್ಲಿ ನೀನು ಎಷ್ಟೇ ಗೆದ್ದರೂ 25 ಸಾವಿರ ಮೇಲೆ ದಾಟುವುದಿಲ್ಲ. ಆಗ ನಿನ್ನ ಬಳಿ ಇರುವ ಹಣದಲ್ಲಿ ನನಗೆ ಪಾಲು ನೀಡುವುದಾಗಿ ಪ್ರಾಮಿಸ್ ಮಾಡಿದರೆ ಕೊಡುತ್ತೇನೆ ಎನ್ನುತ್ತಾರೆ. ಅದರಂತೆ ಡೀಲ್ ಓಕೆ ಮಾಡಿಕೊಂಡು ಪ್ರಿಯಾಂಕಗೆ ಶಮಂತ್ ಹಣ ನೀಡುತ್ತಾರೆ.

    ನಂತರ ರಾತ್ರಿ ಗಾರ್ಡನ್ ಏರಿಯಾದಲ್ಲಿ ಶಮಂತ್, ಪ್ರಶಾಂತ್, ಚಕ್ರವರ್ತಿ ಕುಳಿತು ಮಾತನಾಡುತ್ತಿರುತ್ತಾರೆ. ಈ ವೇಳೆ ಪ್ರಿಯಾಂಕ ಬಳಿ 14,800ರೂ ಇತ್ತು. ಸದ್ಯ ಅವರ ಲಾಕರ್‌ನಲ್ಲಿ 14,800 ರೂ ಇಟ್ಟಿದ್ದೇನೆ ಅದು ನನಗೆ ಆಮೇಲೆ ವಾಪಸ್ ಬರುತ್ತದೆ ಎಂದು ಹೇಳಿದ್ದಾರೆ. ಆಗ ಚಕ್ರವರ್ತಿಯವರು ನಿನ್ನ ಬಳಿ ಪ್ರಿಯಾಂಕ ಹಣವನ್ನು ಕಿತ್ತುಕೊಂಡು ಹೋಗಿದ್ದಾರಾ ಎಂದಾಗ, ಲಾಕರ್‌ನಲ್ಲಿದ್ದ ಎಲ್ಲವನ್ನು ಎತ್ತಿಕೊಂಡು ಹೋಗಿ ಬಿಟ್ಟಿದ್ದರು ಎಂದು ಶಮಂತ್ ಹೇಳುತ್ತಾರೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಮೊಟ್ಟೆ ಒಡೆದಿರುವುದು ದಿವ್ಯಾ ಸುರೇಶ್, ಹಣ ಕೊಟ್ಟಿರುವುದು ಇವನು, ಇವನೆಷ್ಟು ಮುಟ್ಟಾಳ ಎಂದು ಪ್ರಶಾಂತ್ ಬಳಿ ಮಾತು ಒಪ್ಪಿಸುತ್ತಾ, ಹೊಸ ಚಾಪ್ಟರ್ ಎಂದು ಅಣುಕಿಸುತ್ತಾರೆ.

    ಈ ವೇಳೆ ಶಮಂತ್ ನಗುತ್ತಾ ನಿಮಗೇಕೆ, ನೋಡಿ ನಾನು ಒಂದು ಪ್ರಾಮಿಸ್ ಮೇಲಿನ ನಂಬಿಕೆಯಿಂದ ಹಣ ನೀಡಿದ್ದೇನೆ ಎನ್ನುತ್ತಾರೆ. ಅದಕ್ಕೆ ಚಕ್ರವರ್ತಿಯವರು ನಿನ್ನನ್ನು ನಾನು ಕರೆಸಿ, ನಿನ್ನ ತಲೆಯ ಮೇಲೆ ಮೊಟ್ಟೆ ಹೊಡೆಸಿ, ಇವನಿಗೆ ದುಡ್ಡು ಕೊಟ್ಟು, ಇಷ್ಟೇಲ್ಲಾ ನಾವು ಈ ಹುಡುಗನಿಗೋಸ್ಕರ ಮಾಡಿದರೆ, ಒಂದು ಹುಡುಗಿಗೆ ಹೆದರಿಕೊಂಡು ಹಣ ಕೊಟ್ಟಿದ್ದಾನೆ ಎಂದು ಚಕ್ರವರ್ತಿ ಪ್ರಶಾಂತ್‍ರವರಿಗೆ ಹೇಳುತ್ತಾರೆ.

    ಈ ಮಧ್ಯೆ ಹೆದರಿಕೊಂಡಿರುವ ಪದವನ್ನು ವಾಪಸ್ ತೆಗೆದುಕೊಳ್ಳಿ ಎಂದು ಶಮಂತ್ ಹೇಳುವ ವೇಳೆ ಪ್ರಶಾಂತ್, ಹಾಗದರೆ ಇವನು ಪ್ರಿಯಾಂಕಗೆ ದುಡ್ಡು ನೀಡಿದ್ದಾನಾ ಎಂದು ಚಕ್ರವರ್ತಿಯವರನ್ನು ಪ್ರಶ್ನಿಸುತ್ತಾರೆ. ಬಳಿಕ ಹಣ ಕೊಟ್ಟಿರುವ ವಿಚಾರ ತಿಳಿದು, ಸೋಫಾ ಮೇಲೆ ಮಲಗಿಕೊಂಡು ನಗುತ್ತಾ, ಬಳಿಕ ಎದ್ದು ತಮ್ಮ ಎರಡು ಚಪ್ಪಲಿಗಳನ್ನು ಪ್ರಶಾಂತ್, ಶಮಂತ್ ಮೇಲೆ ಎಸೆದಿದ್ದಾರೆ.

    ನಂತರ ಈಗ ನೀವು ನಗುತ್ತಿದ್ದೀರಾ ಅಲ್ವಾ, ನಾಳೆಯವರೆಗೂ ನನಗೆ ಟೈಮ್ ಕೊಡಿ ಎನ್ನುತ್ತಾರೆ. ಆಗ ಚಕ್ರವರ್ತಿಯವರು, ಮೊಟ್ಟೆ ಹೊಡೆದಿದ್ದು ಡಿಎಸ್, ಜಗಳ ಆಡಿದ್ದು ಡಿಎಸ್, ಇವನಿಗೋಸ್ಕರ ನೀನು ಅಷ್ಟೇಲ್ಲಾ ತ್ಯಾಗ ಮಾಡಿದೆ ಆದರೆ ಇವನು ಪ್ರಿಯಾಂಕಳನ್ನು ಸೇವ್ ಮಾಡುತ್ತಿದ್ದಾನೆ ಎಂದು ಪ್ರಶಾಂತ್‍ಗೆ ಹೇಳುತ್ತಾ ನಕ್ಕಿದ್ದಾರೆ. ಇದನ್ನೂ ಓದಿ:ದಿವ್ಯಾ ಸುರೇಶ್ ಮೇಲೆ ಕೈ ಮಾಡಿದ ಪ್ರಿಯಾಂಕ

  • ನೋಡ್ತಾ ಇದ್ದೀನಿ ನಿನ್ನ ಆಟ ಎಲ್ಲ – ಶಮಂತ್‍ಗೆ ಪ್ರಶಾಂತ್ ಟಾಂಗ್

    ನೋಡ್ತಾ ಇದ್ದೀನಿ ನಿನ್ನ ಆಟ ಎಲ್ಲ – ಶಮಂತ್‍ಗೆ ಪ್ರಶಾಂತ್ ಟಾಂಗ್

    ದೊಡ್ಮನೆಯಲ್ಲಿ ಕಣ್ಮಣಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಶಮಂತ್, ಕಣ್ಮಣಿಗಾಗಿಯೇ ಹಾಡೊಂದನ್ನು ಬರೆದಿದ್ದರು. ಈ ಹಾಡನ್ನು ಕ್ಯಾಮೆರಾ ಮುಂದೆ ದಿವ್ಯಾ ಉರುಡುಗ ಸಾರಥ್ಯದಲ್ಲಿ ಶಮಂತ್ ಹಾಡಿದ್ದರು. ಈ ವೇಳೆ ನನ್ನನ್ನು ಕಡೆಗಣಿಸಿದ್ದಾರೆ ಎಂದು ಪ್ರಶಾಂತ್ ಸಂಬರಗಿ ಶಮಂತ್ ವಿರುದ್ಧ ಬೇಸರಗೊಂಡಿದ್ದಾರೆ.

    ಗಾರ್ಡನ್ ಏರಿಯಾದಲ್ಲಿ ಪ್ರಶಾಂತ್ ಸಂಬರಗಿ ಕುಳಿತುಕೊಂಡಿರುತ್ತಾರೆ. ಈ ವೇಳೆ ಬಾತ್‍ರೂ ಏರಿಯಾದ ಕ್ಯಾಮೆರಾ ಮುಂದೆ ಶಮಂತ್ ಕಣ್ಮಣಿ ಕುರಿತಂತೆ ಹಾಡೊಂದನ್ನು ಹಾಡಿದ್ದು, ದಿವ್ಯಾ ಉರುಡುಗ ಹಾಡಿಗೆ ತಕ್ಕಂತೆ ತಾಳ ಹಾಕಿದ್ದಾರೆ.

    ನಂತರ ಬೇಸರಗೊಂಡಿದ್ದ ಪ್ರಶಾಂತ್‍ರನ್ನು ಗಮನಿಸಿದ ಶಮಂತ್ ಬಾತ್ ರೂ ಏರಿಯಾಗೆ ಕರೆದುಕೊಂಡು ಹೋಗಿ, ದಿವ್ಯಾ ಉರುಡುಗಗೆ ತಾಳ ಹಾಕಲು ಹೇಳಿದ್ದೆ, ಅರವಿಂದ್ ಬ್ರೋ ಬೇಗ ಹಾಡುತ್ತೀಯಾ ನಮಗೆಲ್ಲಾ ನಿದ್ದೆ ಬರುತ್ತಿದೆ ಅಂತ ಹೇಳಿದ್ರು ಹಾಗಾಗಿ ಸಾಂಗ್ ಹಾಡಿದೆ ಅಂತ ಹೇಳುತ್ತಾರೆ.

    ಪ್ರಶಾಂತ್ ಬ್ರೋ ಬನ್ನಿ ಎಂದು ಕರೆಯಬೇಕಾಗಿತ್ತು. ಧ್ವನಿಗಿಂತ ನಮ್ಮ ನಡವಳಿಕೆ ಹೆಚ್ಚಾಗಿ ಮಾತನಾಡುತ್ತದೆ. ನಿನ್ನ ನಡುವಳಿಕೆಯಲ್ಲಿ ಗೊತ್ತಾಗುತ್ತದೆ. ನಿನ್ನ ತೆಲೆಯಲ್ಲಿ ಏನಿದೆ. ನಿನ್ನ ಎದೆಯಲ್ಲಿ ಏನಿದೆ ಎಂದು ಪ್ರಶಾಂತ್ ಹೇಳುತ್ತಾರೆ. ಆಗ ಶಮಂತ್ ನಾನು ಆಗಲಿಂದಲೂ ಯಾಕೆ ಸೈಲೆಂಟ್ ಆಗಿದ್ದೀರಾ ಎಂದು ಕೇಳುತ್ತಲೆ ಇದ್ದೇನೆ. ಈಗ ಹಾಡು ಹೇಳಲು ಕರೆಯಲಿಲ್ಲ ಎಂದು ಇಷ್ಟೊಂದು ಬೇಜಾರ? ಎಂದು ಪ್ರಶ್ನಿಸುತ್ತಾರೆ.

    ಆಗ ಪ್ರಶಾಂತ್ ಹಾಡೊಂದೇ ಅಲ್ಲ, ನೋಡುತ್ತಿದ್ದೇನೆ ನಿನ್ನ ಆಟ ಎನ್ನುತ್ತಾರೆ. ಅಯ್ಯೋ ಬ್ರೋ ಏನು ಆಟಯೆಲ್ಲಾ, ಹೊಸದಾಗಿ ಏನೇನೋ ಅಂದುಕೊಂಡ್ರಾ ಎಂದು ಶಮಂತ್ ಹೇಳುತ್ತಾ, ಕಣ್ಮಣಿಗೆ ಹಾಡನ್ನು ಹೇಳಿದೆ ಅಷ್ಟೇ ಎನ್ನುತ್ತಾರೆ. ಇದಕ್ಕೆ ಪ್ರಶಾಂತ್ ಗೊತ್ತು, ನೀನು ಹಾಡಿನ ಫಸ್ಟ್ ಲೈನ್ ಬರೆಯಬೇಕಾದರೆ ನಾನು ಇದ್ದೆ. ಜಡೆ ಕಟ್ಟುವುದು ಎಲ್ಲೋ, ಹೂವಿನ ಹಾರ ಕಟ್ಟುವುದು ಎಲ್ಲೋ, ಹಾಕುವುದು ಎಲ್ಲೋ ಎಂದು ಹೇಳುತ್ತಾರೆ.

    ಏನೇನೋ ಯೋಚನೆ ಮಾಡುತ್ತೀರಾ ನೀವು ಎಂದು ಶಮಂತ್ ಮತ್ತೆ ಹೇಳುತ್ತಾರೆ. ಆಗ ಪ್ರಶಾಂತ್, ಏನೇನೋ ಯೋಚನೆ ಮಾಡಿ ಹೇಳುತ್ತಿಲ್ಲ. ನಡೆದಿರುವುದನ್ನು ಹೇಳುತ್ತಿದ್ದೇನೆ ಅಷ್ಟೇ. ಕಣ್ಮಣಿಗೆ ಹಾಡು ಹೇಳಲು ಒಂದು ಲೈನ್ ಬೇರೆ ಕೊಟ್ಟಿದ್ದೇನೆ. ಅದರಲ್ಲಿ ನನ್ನ ಇನ್ವಾಲ್‍ಮೆಂಟ್ ಕೂಡ ತೋರಿಸಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ಒಂದು ಸಲ ಮದ್ವೆ ಆದ್ಮೇಲೆ ಯಾವತ್ತು ಮೋಸ ಮಾಡಲ್ಲ: ವೈಷ್ಣವಿ