Tag: ಪಬ್ಲಿಕ್ ಟಿವಿ sanchari-vijay

  • ನಟ ಸಂಚಾರಿ ವಿಜಯ್ ಅಗಲಿ 3 ದಿನ – ಕ್ರಿಯಾವಿಧಿ ನೆರವೇರಿಸಿದ ಕುಟುಂಬಸ್ಥರು

    ನಟ ಸಂಚಾರಿ ವಿಜಯ್ ಅಗಲಿ 3 ದಿನ – ಕ್ರಿಯಾವಿಧಿ ನೆರವೇರಿಸಿದ ಕುಟುಂಬಸ್ಥರು

    ಚಿಕ್ಕಮಗಳೂರು: ಅಪಘಾತಕ್ಕೀಡಾಗಿ ಮೂರು ದಿನಗಳ ಹಿಂದೆ ಸಾವನ್ನಪ್ಪಿದ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಮಾಧಿಗೆ ಇಂದು ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಮರಣದ ನಂತರದ ಕ್ರಿಯಾವಿಧಿಗಳನ್ನ ನೆರವೇರಿಸಿದ್ದಾರೆ.

    ವಿಜಯ್ ಸಾವನ್ನಪ್ಪಿ ಇಂದಿಗೆ ಮೂರು ದಿನವಾದ ಹಿನ್ನೆಲೆ ಹಿಂದೂ ಸಂಪ್ರದಾಯದ ವೀರಶೈವ ಪದ್ಧತಿಯಂತೆ ಅವರ ಸಮಾಧಿಗೆ ಹಾಲು-ತುಪ್ಪ ಬಿಟ್ಟಿದ್ದಾರೆ. ವಿಜಯ್ ಸಹೋದರರು, ಕುಟುಂಬಸ್ಥರು, ವಿಜಯ್ ಆಪ್ತಮಿತ್ರ ರಘು ಹಾಗೂ ಸ್ನೇಹಿತರೊಡಗೂಡಿ ಸಮಾಧಿ ಸ್ಥಳಕ್ಕೆ ತೆರಳಿ, ಪೂಜೆ ಸಲ್ಲಿಸಿ ಹಾಲು-ತುಪ್ಪ ಎರೆದಿದ್ದಾರೆ. ಇದೇ ವೇಳೆ, ಸ್ಥಳೀಯರು, ವಿಜಯ್ ಅಭಿಮಾನಿಗಳೂ ದುಃಖ ತಪ್ತರಾಗಿ ಸಮಾಧಿ ಸ್ಥಳದಲ್ಲಿ ನೆರೆದಿದ್ದರು. ವಿಜಯ್ ಅಣ್ಣನ ಚಿಕ್ಕ-ಚಿಕ್ಕ ಮಕ್ಕಳು ಕಣ್ಣೀರಾಕುತ್ತಲೇ ಚಿಕ್ಕಪ್ಪನ ಸಮಾಧಿಗೆ ಹಾಲು-ತುಪ್ಪ ಎರೆದ ದೃಶ್ಯ ನೋಡುಗರ ಕಣ್ಣಲ್ಲಿ ನೀರು ತರಿಸುವಂತಿತ್ತು. ಇದನ್ನೂ ಓದಿ: ಮತ್ತೆ ಹುಟ್ಟಿ ಬಾ ಗೆಳೆಯ ಎಂದ ಸ್ಯಾಂಡಲ್‍ವುಡ್

    ಜೂನ್ 13ರಂದು ಬೈಕ್ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡು ಮೂರು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ್ದ ಸಂಚಾರಿ ವಿಜಯ್, ಜೂನ್ 15ರಂದು ಉಸಿರು ಚೆಲ್ಲಿದರು. ನಂತರ ಕುಪ್ಪೂರು ಶ್ರೀಗಳ ನೇತೃತ್ವದಲ್ಲಿ ಪಂಚನಹಳ್ಳಿಯಲ್ಲಿ ಅವರ ಸ್ನೇಹಿತನ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆದಿತ್ತು. ವಿಜಯ್ ಚಿಕ್ಕಂದಿನಿಂದಲೇ ನಟನೆ ಹಾಗೂ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದರು. ಬಾಲ್ಯದಲ್ಲಿಯೇ ಹೆತ್ತವರನ್ನು ಕಳೆದುಕೊಂಡಿದ್ದ ವಿಜಯ್, ಕೆಲಸ ಮಾಡುತ್ತಲೇ ಓದು ಮುಗಿಸಿ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದರು. ಇದನ್ನೂ ಓದಿ: ಸ್ನೇಹಿತ ರಘು ತೋಟದಲ್ಲೇ ಮಣ್ಣಲ್ಲಿ ಮಣ್ಣಾದ ವಿಜಯ್

    ಅತಿಥಿ ಉಪನ್ಯಾಸಕರಾಗಿ ಪಾಠವನ್ನು ಹೇಳಿಕೊಡುತ್ತಿದ್ದರು. ಕಲಾವಿದ ಕುಟುಂಬದ ಗೀಳು ಹೋಗದ ಕಾರಣ ರಂಗಭೂಮಿ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ್ದರು. ನಾನು ಅವನಲ್ಲ ಅವಳು ಸಿನಿಮಾದಲ್ಲಿ ನಟಿಸುವ ಮೂಲಕ ರಾಷ್ಟ್ರಪತಿ ಪಡೆದು ಸ್ಯಾಂಡಲ್‍ವುಡ್ ನಿಬ್ಬೆರಗಾಗುವಂತೆ ಮಾಡಿದ್ದರು. ದುರಾದೃಷ್ಟವಶತ್, ಬೆಂಗಳೂರಲ್ಲಿ ನಡೆದ ಬೈಕ್ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡು ಮೂರು ದಿನಗಳ ಕಾಲ ಜೀವನ್ಮರದ ಮಧ್ಯೆ ಹೋರಾಡಿ ಕೊನೆಯುಸಿರೆಳೆದಿದ್ದರು. ಅಂಗಾಂಗ ದಾನ ಮಾಡುವ ಮೂಲಕ ಸಮಾಜದ ಕಣ್ಣಿಗೆ ಸಾವಲ್ಲೂ ಸಾರ್ಥಕತೆ ಮೆರೆದ ಆದರ್ಶ ನಟನಾಗಿ ಉಳಿದರು. ಸಂಚಾರಿ ವಿಜಯ್ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಜಿಲ್ಲೆಯ ಕಡೂರಿನ ತಾಲೂಕಿನ ಪಂಚನಹಳ್ಳಿಯಲ್ಲಿ ವಿಜಯ್ ಆಪ್ತಮಿತ್ರ ರಘು ಅವರ ತೋಟದಲ್ಲಿ ವೀರಶೈವ ಸಂಪ್ರದಾಯದಂತೆ ಕುಪ್ಪೂರು ಶ್ರೀಗಳು ನೇತೃತ್ವದಲ್ಲಿ ಅಂತ್ಯಸಂಸ್ಕಾರ ನೆರವೇರಿತ್ತು. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ?

  • ಗೆಳೆಯನ ಜೊತೆಗಿನ ಸುಂದರ ಕ್ಷಣವನ್ನು ಬಿಚ್ಚಿಟ್ಟ ರಿಷಿ

    ಗೆಳೆಯನ ಜೊತೆಗಿನ ಸುಂದರ ಕ್ಷಣವನ್ನು ಬಿಚ್ಚಿಟ್ಟ ರಿಷಿ

    ಬೆಂಗಳೂರು: ಚಂದನವನದ ಉದಯೋನ್ಮುಖ ನಟ ಸಂಚಾರಿ ವಿಜಯ್ ನಿಧರಾಗಿದ್ದರೂ ಅವರ ನೆನಪುಗಳು ಮಾತ್ರ ಇನ್ನೂ ಮಾಸಿಲ್ಲ. ಸದ್ಯ ಸ್ಯಾಂಡಲ್‍ವುಡ್ ನಟ ರಿಷಿ ತಮ್ಮ ಗೆಳೆಯ ವಿಜಯ್ ಜೊತೆ ಕಳೆದ ಒಂದು ಸುಂದರ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

    ಬಾಲ್ಯದಿಂದಲೂ ರಂಗಭೂಮಿ ಕುರಿತಾಗಿ ಅಪಾರ ಆಸಕ್ತಿ ಹೊಂದಿದ್ದ ವಿಜಯ್ ಕುಮಾರ್‍ರವರು 10 ವರ್ಷಗಳ ಕಾಲ ಸಂಚಾರಿ ಥಿಯೇಟರ್‍ನಲ್ಲಿ ನಾಟಕಗಳನ್ನು ಮಾಡಿದ್ದರು. ಈ ಸಮಯದಲ್ಲಿ ನಟ ರಿಷಿ ಕೂಡ ಸಂಚಾರಿ ಥಿಯೇಟರ್ ನಲ್ಲಿ ನಟನಾಭ್ಯಾಸ ಮಾಡುತ್ತಿದ್ದರು. ಹೀಗೆ ರಿಷಿ ಹಾಗೂ ವಿಜಯ್ ನಾಟಕವೊಂದರಲ್ಲಿ ಅಭಿನಯಿಸುತ್ತಿದ್ದ ವೇಳೆ ವೇದಿಕೆ ಮೇಲೆ ಸಂಚಾರಿ ವಿಜಯ್ ಡೈಲಾಂಗ್‍ವೊಂದನ್ನು ಮರೆತಾಗ ಅದನ್ನು ಎಷ್ಟು ಚಾಣಕ್ಷತನದಿಂದ ನಿಭಾಯಿಸಿದರು ಎಂಬುವುದನ್ನು ರಿಷಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ವಿಜಯ್ ಒಬ್ಬ ಪ್ರತಿಭಾವಂತ ನಟ ಎಂಬುವುದು ನಮಗೆಲ್ಲರಿಗೂ ತಿಳಿದಿದೆ. ನಾವು 13 ಮಾರ್ಗೋಸಾ ಮಹಲ್ ನಾಟಕವನ್ನು ಒಟ್ಟಿಗೆ ವೇದಿಕೆ ಮೇಲೆ ನಟಿಸಿದ್ದೆವು. ಈ ವೇಳೆ ನಡೆದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಇದನ್ನೂ ಓದಿ: ಲಾಕ್‍ಡೌನ್ ಮೊದಲು ಮಾತನಾಡಿದ್ದೆ, ಈಗ ಆಘಾತಗೊಂಡಿದ್ದೇನೆ: ಸುದೀಪ್

    ವಿಜಯ್ ಒಮ್ಮೆ ವೇದಿಕೆ ಮೇಲೆ ಅಭಿನಯಿಸುವಾಗ ಡೈಲಾಗ್‍ನ ಸಾಲೊಂದನ್ನು ಮರೆತು ಹೋಗಿದ್ದರು. ಒಂದು ವೇದಿಕೆ ಮೇಲೆ ಡೈಲಾಗ್ ಮೆರೆತಾಗ ಅದರಿಂದ ಆಗುವ ಆಂತರಿಕ ಭಯ ಒಬ್ಬ ಕಲಾವಿದನಿಗೆ ಮಾತ್ರ ತಿಳಿದಿರುತ್ತದೆ. ಆದರೆ ವಿಜಯ್ ಭಯಗೊಳ್ಳವ ಬದಲಿಗೆ, ತಕ್ಷಣವೇ ದೈಹಿಕವಾಗಿ ಪ್ರತಿಕ್ರಿಯಿಸುವ ಮೂಲಕ ಪಾತ್ರವನ್ನು ನಿಭಾಯಿಸಿದರು. ಅವರ ಆ್ಯಕ್ಟಿಂಗ್ ಎಷ್ಟು ಅದ್ಭುತವಾಗಿತ್ತು ಅಂದರೆ ಒಂದು ನಿಮಿಷದವರೆಗೂ ಒಂದು ಪದವನ್ನು ಹೇಳದೇ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಅವರು ಹೇಳಿದ ಒಂದೇ ಒಂದು ಮಾತಿಗೆ ಪ್ರೇಕ್ಷಕರೇ ಅಚ್ಚರಿಗೊಂಡು ಚಪ್ಪಾಳೆ ತಟ್ಟಿದ್ದರು. ಅವರು ಡೈಲಾಗ್‍ನನ್ನು ಮರೆತಿರುವುದರ ಬಗ್ಗೆ ನಮಗೂ ಸುಳಿವು ನೀಡದೇ, ಡೈಲಾಗ್‍ನನ್ನು ಹೆಚ್ಚಾಗಿ ವೈಭವಿಕರಿಸದೇ ತಮ್ಮ ನಟನಕೌಶಲ್ಯದಿಂದ ಅಭಿನಯಿಸುವ ಮೂಲಕ ಚಪ್ಪಾಳೆಗಿಟ್ಟಿಕೊಂಡಿದ್ದರು. ಡೈಲಾಗ್ ಮರೆತ ವೇಳೆ ಅವರು ಆ ಪಾತ್ರವನ್ನು ಸುಧಾರಿಸಿದ ರೀತಿ ನನಗೆ ಇನ್ನೂ ಕೂಡ ನೆನಪಿದೆ. ಇದು ವೇದಿಕೆಯಲ್ಲಿ ನಡೆದ ಒಂದು ಅದ್ಭುತ ಕ್ಷಣವಾಗಿದೆ.

    ನಾನು ಅಂದು ವಿಜಯ್‍ರಿಂದ 2 ವಿಷಯಗಳನ್ನು ಕಲಿತುಕೊಂಡೆ. ಒಂದು ಯೋಜಿಸಿದ ಪ್ರಕಾರ ನಾಟಕಗಳು ಅಭಿನಯಿಸಲು ಆಗದೇ ಇದ್ದಾಗ, ಅದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಸುಧಾರಿಸುವ ಮೂಲಕ ಅಭಿನಯಿಸಬೇಕು. ಮತ್ತೊಂದು ಸಹೋದ್ಯೋಗಿಗಳೊಂದಿಗೆ ಹಾಗೂ ಸಹ ನಟರೊಂದಿಗೆ ಪ್ರೀತಿ ಹಾಗೂ ಗೌರವದಿಂದಿ ನಡೆದುಕೊಳ್ಳಬೇಕು. ಬೇರೆಯವರಿಗೆ ನಾವು ಸಹಾಯ ಮಾಡಿದರೆ ನಮಗೆ ಯಾವುದೋ ರೀತಿ ಸಹಾಯ ದೊರೆಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ? 

    ಪ್ರಸ್ತುತ ಯುವ ನಟರಲ್ಲಿ ಸಂಚಾರಿ ವಿಜಯ್ ಒಬ್ಬ ಶ್ರೇಷ್ಠ ಕಲಾವಿದರಾಗಿದ್ದು, ಅವರು ರಾಷ್ಟ್ರಪ್ರಶಸ್ತಿ ವಿಜೇತರಾದಾಗ ಇಡೀ ಕನ್ನಡ ಚಿತ್ರರಂಗ ಮತ್ತು ಫಿಲ್ಮ್ ಸಕ್ರ್ಯೂಟ್ ಭಾರಿ ಹೆಮ್ಮೆ ಪಟ್ಟಿತು. ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ನಾವು ಯಾವಾಗಲೂ ಹೇಳುತ್ತಿರುತ್ತೇವೆ. ಆದರೆ ಅದು ಅರ್ಧದಲ್ಲಿಯೇ ವ್ಯರ್ಥವಾಗುತ್ತಿರುವುದನ್ನು ಇಂದಿಗೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.

    ಈ ನಷ್ಟವನ್ನು ಭರಿಸಲು ಉತ್ತಮ ಮಾರ್ಗವೆಂದರೆ ಎಲ್ಲರೂ ವ್ಯಕ್ತಿಯನ್ನು ಪ್ರೀತಿಸೋಣ ಮತ್ತು ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಅವರನ್ನು ಗೌರವಿಸೋಣ. ಸದ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಜನ್ರಿಗೆ ಒಳ್ಳೆದು ಮಾಡೋಕೆ ಕಾರ್ ಮಾರಲು ತಯಾರಾಗಿದ್ರು ವಿಜಯ್: ಜಗ್ಗೇಶ್

     

    View this post on Instagram

     

    A post shared by Rishi (@rishi_actor)

  • ಮರಗಳನ್ನು ರಕ್ಷಿಸಲು ಬುದ್ಧಿಮಾಂದ್ಯನಾಗಿ ತೆರೆ ಮೇಲೆ ಬಂದ ವಿಜಯ್

    ಮರಗಳನ್ನು ರಕ್ಷಿಸಲು ಬುದ್ಧಿಮಾಂದ್ಯನಾಗಿ ತೆರೆ ಮೇಲೆ ಬಂದ ವಿಜಯ್

    ಬೆಂಗಳೂರು: ಅಪಘಾತದಿಂದ ಸ್ಯಾಂಡಲ್‍ವುಡ್‍ನ ಉದಯೋನ್ಮುಖ ನಟ ಸಂಚಾರಿ ವಿಜಯ್ ನಿಧನರಾಗಿದ್ದು, ಚಂದನವನಕ್ಕೆ ತುಂಬಲಾರದಷ್ಟು ನಷ್ಟ ಉಂಟಾಗಿದೆ. ಈ ಹೊತ್ತಿನಲ್ಲಿ ಸಂಚಾರಿ ವಿಜಯ್ ಅಭಿನಯಿಸಿರುವ ತಲೆದಂಡ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ.

    ನಾನು ಅವನಲ್ಲ ಅವಳು, ಹರಿವು ಹೀಗೆ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಜನರ ಪ್ರೀತಿ ಗಳಿಸುವುದರ ಜೊತೆಗೆ ಪ್ರಶಂಸೆ ಪಡೆದಿದ್ದ ನಟ ಸಂಚಾರಿ ವಿಜಯ್, ತಲೆದಂಡ ಸಿನಿಮಾದ ಟೀಸರ್‌ನಲ್ಲಿ ಕೂಡ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

    ಸಿನಿಮಾದಲ್ಲಿ ಸಂಚಾರಿ ವಿಜಯ್ ಬುದ್ಧಿ ಮಾಂದ್ಯನ ಪಾತ್ರದಲ್ಲಿ ಅಭಿನಯಿಸಿದ್ದು, ಬುದ್ಧಿವಂತರೂ ಮಾಡುವ ಅನ್ಯಾಯದ ವಿರುದ್ಧ ಬುದ್ಧಿಮಾಂದ್ಯನು ಹೋರಾಡುತ್ತಿರುವ ಕಥಾವಸ್ತುವನ್ನು ಈ ಸಿನಿಮಾ ಹೊಂದಿದೆ. ಟೀಸರ್‌ನಲ್ಲಿ ಮರಗಳನ್ನು ರಕ್ಷಿಸಬೇಕು, ಪರಿಸರ ಉಳಿಸಬೇಕು ಎಂದು ವಿಜಯ್ ಮರಗಳಿಗೆ ಅಡ್ಡಲಾಗಿ ನಿಂತಿರುವುದನ್ನು ನೋಡಬಹುದಾಗಿದೆ. ಟೀಸರ್‌ನಲ್ಲಿ ವಿಜಯ್ ಮುಗ್ಧ ಅಭಿನಯ ನೋಡಿದರೆ ನಿಜಕ್ಕೂ ಎಲ್ಲರ ಮನಕಲಕುವಂತಿದೆ. ಇದನ್ನೂ ಓದಿ: ಸಂಚಾರಿ ವಿಜಯ್ ನೆನಪಿಗೋಸ್ಕರ ಮಂಗಳಮುಖಿಯರಿಗೆ ದಿನಸಿ ಕಿಟ್ ಹಂಚಿದ ಯುವಕ

    ಈಗಾಗಲೇ ನಾನು ಅವನಲ್ಲ ಅವಳು ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಜಯ್ ತಲೆದಂಡ ಸಿನಿಮಾದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿ ಎಲ್ಲರ ಮನ ಗೆಲ್ಲುತ್ತಾರೆ ಎಂಬುವುದಕ್ಕೆ ಯಾವುದೇ ಅನುಮಾನವಿಲ್ಲ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ತಿಪಟೂರಿನಿಂದ ಧರ್ಮಸ್ಥಳಕ್ಕೆ ಸೈಕಲ್ ಪ್ರವಾಸ ಹೋಗ್ತಿದ್ರು ಸಂಚಾರಿ ವಿಜಯ್

    ತಲೆದಂಡ ಮಾತ್ರವಲ್ಲದೇ ಅವಸ್ಥಾಂತರ, ಲಂಕೆ, ಮೋಲೊಬ್ಬ ಮಾಯಾವಿ ಮುಂತಾದ ಸಿನಿಮಾಗಳಲ್ಲಿ ಸಂಚಾರಿ ವಿಜಯ್ ಅಭಿನಯಿಸಿದ್ದರು. ಇನ್ನೂ ಘೋಷಿಸದೇ ಇರುವ ಹಲವಾರು ಪ್ರಾಜೆಕ್ಟ್‍ಗಳು ವಿಜಯ್ ಕೈನಲ್ಲಿದ್ದವು. ಇದನ್ನೂ ಓದಿ: ಸ್ನೇಹಿತ ರಘು ತೋಟದಲ್ಲೇ ಮಣ್ಣಲ್ಲಿ ಮಣ್ಣಾದ ವಿಜಯ್