Tag: ಪಬ್ಲಿಕ್ ಟಿವಿ Sa. Ra. Mahesh

  • ಸಾರಾ ಚೌಟ್ರಿ ಹಳ್ಳದ ಮೇಲೂ ಕಟ್ಟಿಲ್ಲ, ನಾಲೆಯ ಮೇಲೂ ಕಟ್ಟಿಲ್ಲ: ಪ್ರಾದೇಶಿಕ ಆಯುಕ್ತರ ವರದಿಯಲ್ಲಿ ಬಹಿರಂಗ

    ಸಾರಾ ಚೌಟ್ರಿ ಹಳ್ಳದ ಮೇಲೂ ಕಟ್ಟಿಲ್ಲ, ನಾಲೆಯ ಮೇಲೂ ಕಟ್ಟಿಲ್ಲ: ಪ್ರಾದೇಶಿಕ ಆಯುಕ್ತರ ವರದಿಯಲ್ಲಿ ಬಹಿರಂಗ

    ಮೈಸೂರು : ಸಾರಾ ಚೌಟ್ರಿಯನ್ನು ಹಳ್ಳದ ಮೇಲೂ ಕಟ್ಟಿಲ್ಲ, ನಾಲೆಯ ಮೇಲೂ ಕಟ್ಟಿಲ್ಲ ಎಂದು ಪ್ರಾದೇಶಿಕ ಆಯುಕ್ತರ ವರದಿಯಲ್ಲಿ ಬಹಿರಂಗವಾಗಿದೆ.

    ನಿರ್ಗಮಿತ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಶಾಸಕ ಸಾರಾ ಮಹೇಶ್ ವಿರುದ್ದ ಸಾರಾ ಚೌಟ್ರಿ ವಿಚಾರದಲ್ಲಿ ಮಾಡಿದ್ದ ಆರೋಪ ಬಗ್ಗೆ ಶಾಸಕ ಸಾರಾ ಮಹೇಶ್ ತನಿಖೆಗೆ ಆಗ್ರಹಿಸಿದ್ದರು. ಪ್ರಾದೇಶಿಕ ಆಯುಕ್ತರು ಕಂದಾಯ ಅಧಿಕಾರಿಗಳು ಸಮಿತಿ ರಚಿಸಿ ಸಾರಾ ಚೌಟ್ರಿ ಸರ್ವೆಗೆ ಕಳಿಸಿದ್ದರು. ಇಂದು ಸರ್ವೆ ವರದಿ ಬಹಿರಂಗಗೊಂಡಿದೆ.

    ಈ ಹಿನ್ನೆಲೆ ಇಂದು ಮೈಸೂರಿನಲ್ಲಿ ಶಾಸಕ ಸಾರಾ ಮಹೇಶ್ ತುರ್ತು ಸುದ್ದಿಗೋಷ್ಠಿ ನಡೆಸಿ ರೋಹಿಣಿ ಸಿಂಧೂರಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಮೈಸೂರಲ್ಲಿ ರಾಜಕಾಲುವೆ ಇಲ್ಲ. ಪೂರ್ಣಯ ನಾಲೆ ಮಾತ್ರ ಇರೋದು. ರಾಜಕಾಲುವೆ ಇಲ್ಲದ ಮೇಲೆ ರಾಜಕಾಲುವೆ ಮೇಲೆ ಎಲ್ಲಿಂದ ಚೌಟ್ರಿ ಕಟ್ಟೋದು? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರೋಹಿಣಿ ಸಿಂಧೂರಿಯನ್ನು ಮೈಸೂರಿನ ಭೂ ಅಕ್ರಮದ ವಿಶೇಷ ತನಿಖಾಧಿಕಾರಿಯಾಗಿ ನೇಮಿಸಿ: ವಿಶ್ವನಾಥ್ ಆಗ್ರಹ

    ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿಯವರು ಕೋರ್ಟ್‍ನಲ್ಲಿ ಚೌಟ್ರಿ ಬಗ್ಗೆ ಆದೇಶ ಮಾಡಿದ್ದರೆ ಕೋರ್ಟ್‍ನಲ್ಲಿ ಅದನ್ನು ಪ್ರಶ್ನೆ ಮಾಡುತ್ತಿದೆ. ಆದರೆ ಮಾಧ್ಯಮಗಳಲ್ಲಿ ಈ ಆರೋಪ ಮಾಡಿದರು. ಹೀಗಾಗಿ ಪ್ರಾದೇಶಿಕ ಆಯುಕ್ತರ ಬಳಿ ನ್ಯಾಯ ಕೇಳಿದ್ದೆ. ಚೌಟ್ರಿ ನಿರ್ಮಾಣದ ಜಾಗವನ್ನು 20 ವರ್ಷಗಳ ಹಿಂದೆ ಖರೀದಿಸಿದ್ದೆ. ಚೌಟ್ರಿಯ ಜಾಗದ 6 ಸಾವಿರ ಅಡಿ ರಿಂಗ್ ರಸ್ತೆಗೆ ಹೋಗಿದೆ. ನಾನು ಅದಕ್ಕೆ ಪರಿಹಾರ ಪಡೆದಿಲ್ಲ. ಚೌಟ್ರಿಯನ್ನು ಯಾವುದೇ ಭೂಮಿ ಒತ್ತುವರಿ ಮಾಡಿ ನಿರ್ಮಿಸಿಲ್ಲ. ಹಳ್ಳದ ಭೂಮಿಯ ಮೇಲೂ ಚೌಟ್ರಿ ನಿರ್ಮಾಣವಾಗಿಲ್ಲ. ರಾಜಕಾಲುವೆಯ ಮೇಲೂ ನಿರ್ಮಾಣವಾಗಿಲ್ಲ. ಹಳ್ಳದ ಭೂಮಿಯಿಂದ 70 – 75 ಮೀಟರ್ ದೂರದಲ್ಲಿ ಚೌಟ್ರಿ ನಿರ್ಮಾಣವಾಗಿದೆ ಎಂದು ವರದಿಯಲ್ಲಿ ನಮೂದಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ರಾಜಕಾಲುವೆ ಮೇಲೆ ಕಲ್ಯಾಣ ಮಂಟಪವಿದ್ದರೆ ರಾಜಕೀಯ ನಿವೃತ್ತಿ: ಸಾರಾ ಮಹೇಶ್

    ರೋಹಿಣಿ ಸಿಂಧೂರಿ ತಮ್ಮ ಪತಿಯ ಆಸ್ತಿ ವಿವರವನ್ನೆ ಸರ್ಕಾರಕ್ಕೆ ಕೊಟ್ಟಿಲ್ಲ. ತಾನು ಸರ್ಕಾರಿ ಅಧಿಕಾರಿ ಎಂಬುದನ್ನು ಮರೆತು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದರು. ನಿಮಗೆ ಮನಃಸಾಕ್ಷಿ ಇದ್ದರೆ ಆತ್ಮಸಾಕ್ಷಿ ಇದ್ದರೆ ತಾಯಿ ಹೃದಯವಿದ್ದರೆ, ಆತ್ಮಸಾಕ್ಷಿ ಜೊತೆ ಮಾತಾಡಿ ನೀವು ಮಾಡಿದ್ದು ಸರಿನಾ ಕೇಳಿಕೊಳ್ಳಿ. ನನ್ನ ಜೀವನದಲ್ಲೇ ಇಂತಹ ಅಧಿಕಾರಿ ನೋಡಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ:  ಸಾರಾ ಮಹೇಶ್ ಕಲ್ಯಾಣಮಂಟಪ ವಿವಾದ – ಸರ್ವೇ ಕಾರ್ಯ ಆರಂಭ

  • ಸಾರಾ ಮಹೇಶ್ ಕಲ್ಯಾಣಮಂಟಪ ವಿವಾದ – ಸರ್ವೇ ಕಾರ್ಯ ಆರಂಭ

    ಸಾರಾ ಮಹೇಶ್ ಕಲ್ಯಾಣಮಂಟಪ ವಿವಾದ – ಸರ್ವೇ ಕಾರ್ಯ ಆರಂಭ

    ಮೈಸೂರು: ಶಾಸಕ ಸಾರಾ ಮಹೇಶ್ ಒಡೆತನದ ಸಾರಾ ಕಲ್ಯಾಣ ಮಂಟಪದ ಜಾಗದ ಸರ್ವೆ ಇಂದು ಆರಂಭವಾಗಿದೆ.

    ಮೈಸೂರು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿಯವರು ಶಾಸಕ ಸಾರಾ ಮಹೇಶ್ ಒಡೆತನದ ಸಾರಾ ಕಲ್ಯಾಣ ಮಂಟಪ ರಾಜಕಾಲುವೆ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಆರೋಪದ ಬಗ್ಗೆ ತನಿಖೆಯಾಗಲಿ ಎಂದು ಸ್ವತಃ ಸಾರಾ ಮಹೇಶ್ ಹೋರಾಟ ಮಾಡಿದ್ದರು. ಹೀಗಾಗಿ, ಪ್ರಾದೇಶಿಕ ಆಯುಕ್ತರು ತನಿಖಾ ತಂಡ ರಚಿಸಿದ್ದರು. ಇದರಂತೆ ಕಂದಾಯ ಇಲಾಖೆಯಿಂದ ಸರ್ವೇ ಕಾರ್ಯ ಶುರುವಾಗಿದ್ದು ವೆಂಕಟರಾಜು ಹಾಗೂ ತಹಶಿಲ್ದಾರ್ ರಕ್ಷಿತ್ ನೇತೃತ್ವದ ತಂಡದಿಂದ ಸರ್ವೇ ಕಾರ್ಯ ನಡೆಯುತ್ತಿದೆ. ಕಲ್ಯಾಣಮಂಟಪದ ಸುತ್ತ ಮುತ್ತ ಅಳತೆ ಮಾಡಲಾಗಿದೆ.

    ಕೆಲವು ದಿನಗಳ ಹಿಂದೆ ಸಾರಾ ಮಹೇಶ್ ಹಾಗೂ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ನಡುವಿನ ಭೂ ಅವ್ಯವಹಾರದ ಆರೋಪಗಳ ಸುರಿಮಳೆ ಸುರಿದಿತ್ತು. ಈ ವೇಳೆ ಸಾರಾ ಮಹೇಶ್ ಒಡೆತನದ ಸಾರಾ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಆರೋಪಿಸಿದ್ದರು. ಹೀಗಾಗಿ ಸಾರಾ ಮಹೇಶ್ ಏಕಾಂಗಿಯಾಗಿ ಮೈಸೂರಿನ ಪ್ರಾದೇಶಿಕ ಕಚೇರಿ ಮುಂಭಾಗ ಪ್ರತಿಭಟನೆ ಆರಂಭಿಸಿದ್ದರು. ಇದನ್ನೂ ಓದಿ: ರಾಜಕಾಲುವೆ ಮೇಲೆ ಕಲ್ಯಾಣ ಮಂಟಪವಿದ್ದರೆ ರಾಜಕೀಯ ನಿವೃತ್ತಿ: ಸಾರಾ ಮಹೇಶ್

    ನನ್ನ ಒಡೆತನದಲ್ಲಿರುವ ಸಾ.ರಾ. ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣ ಆಗಿಲ್ಲ. ಉನ್ನತ ಮಟ್ಟದ ಅಧಿಕಾರಿಗಳು ಜಾಗದ ಸರ್ವೇ ಮಾಡಲಿ. ರಾಜಕಾಲುವೆ ಮೇಲೆ ನಿರ್ಮಾಣ ಆಗಿದ್ದರೆ ಅದನ್ನು ಸಾರ್ವಜನಿಕರ ಬಳಕೆಗಾಗಿ ರಾಜ್ಯಪಾಲರಿಗೆ ಹಸ್ತಾಂತರ ಮಾಡುತ್ತೇನೆ. ಮಾತ್ರವಲ್ಲ ನಾನು ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಹೊಂದುತ್ತೇನೆ. ಒಂದು ವೇಳೆ ಅವರು ಮಾಡಿರುವ ಆರೋಪ ಸುಳ್ಳಾದರೆ ಐಎಎಸ್ ಹುದ್ದೆಯಿಂದ ಅಮಾನತು ಮಾಡಬೇಕು. ಮಕ್ಕಳನ್ನು ಆಡಿಸಿಕೊಂಡು, ಅಡುಗೆ ಮಾಡಿಕೊಂಡು ಇರಲು ಆಂಧ್ರಕ್ಕೆ ಕಳುಹಿಸಬೇಕು ಎಂದು ಕಿಡಿಕಾರಿದ್ದರು.

    ಈ ಬಗ್ಗೆ ಪ್ರಾದೇಶಿಕ ಆಯುಕ್ತ ಪ್ರಕಾಶ್ ತನಿಖೆ ನಡೆಸಿ ವರದಿ ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ಶಾಸಕ ಸಾರಾ ಮಹೇಶ್ ಕಲ್ಯಾಣ ಮಂಟಪದ ಜಾಗದ ಸರ್ವೆ ಪ್ರಾರಂಭಗೊಳಿಸಲಾಗಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿಯನ್ನು ಮೈಸೂರಿನ ಭೂ ಅಕ್ರಮದ ವಿಶೇಷ ತನಿಖಾಧಿಕಾರಿಯಾಗಿ ನೇಮಿಸಿ: ವಿಶ್ವನಾಥ್ ಆಗ್ರಹ