Tag: ಪಬ್ಲಿಕ್ ಟಿವಿ Raghu

  • ಬಿಗ್‍ಬಾಸ್ ಮನೆಯಿಂದ ರಘು ಔಟ್

    ಬಿಗ್‍ಬಾಸ್ ಮನೆಯಿಂದ ರಘು ಔಟ್

    ಬಿಗ್‍ಬಾಸ್ ಎರಡನೇ ಇನ್ನಿಂಗ್ಸ್‌ನ ಮೂರನೇ ವಾರ ರಘು ಗೌಡರವರು ದೊಡ್ಮನೆಯಿಂದ ಹೊರ ಬಂದಿದ್ದಾರೆ.

    ಬಿಗ್‍ಬಾಸ್ ಮನೆಯ 13ನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟ ರಘು, ಇನ್‍ಸ್ಟಾಗ್ರಾಮ್‍ನಲ್ಲಿ ರಘು ವೈನ್ ಸ್ಟೋರ್ ಎಂಬ ಖಾತೆಯ ಮೂಲಕವೇ ಸಖತ್ ಫೇಮಸ್. ದೊಡ್ಮನೆಯಲ್ಲಿ ಎಲ್ಲ ಸ್ಪರ್ಧಿಗಳೊಂದಿಗೆ ಉತ್ತಮ ಬಾಂಧವ್ಯ ಹಾಗೂ ಗುಡ್ ಮ್ಯಾನರಿಸಮ್ ಹೊಂದಿರುವ ರಘುರವರು, ಈ ವಾರ ಟಾಸ್ಕ್‌ಗಳಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ.

    ಬಿಗ್‍ಬಾಸ್ ಫಸ್ಟ್ ಇನ್ನಿಂಗ್ಸ್‌ನಲ್ಲಿ ಅಷ್ಟಾಗಿ ಆಕ್ಟೀವ್ ಆಗಿರದ ರಘು ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ರೊಚ್ಚು ರಘು ಆಗಿ ಬಂದಿರುವುದಾಗಿ ತಿಳಿಸಿ ಮೊದಲ ವಾರದಿಂದಲೇ ಟಾಸ್ಕ್‌ಗಳಲ್ಲಿ ಚೆನ್ನಾಗಿ ಭಾಗವಹಿಸುವ ಮೂಲಕ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ದೊಡ್ಮನೆಯಲ್ಲಿ ವೈಷ್ಣವಿಯವರ ಬೆಸ್ಟ್ ಫ್ರೆಂಡ್ ಆಗಿರುವ ರಘು ತಮ್ಮ ತುಂಟತನ, ತರ್ಲೆ ಹಾಗೂ ಕಾಮಿಡಿ ಮಾಡುವ ಮೂಲಕ ಮನೆಯ ಸ್ಪರ್ಧಿಗಳಿಗೆ ನಗುವಿನ ಕಚಗುಳಿ ನೀಡುತ್ತಿದ್ದರು.

    ಸದ್ಯ ಈ ವಾರ ಜೋಡಿ ಟಾಸ್ಕ್, ನೋಟು ಮುದ್ರಣಾ ಟಾಸ್ಕ್, ಬಲೂನ್ ಟಾಸ್ಕ್ ಹೀಗೆ ಹಲವಾರು ಟಾಸ್ಕ್‌ಗಳಲ್ಲಿ ಭಾಗವಹಿಸಿ ಸಿಂಪಲ್ ಆಗಿ ಆಟಗಳನ್ನು ಆಡಿದ್ದ ರಘು, ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನ ಮನೆಯಿಂದ ಹೊರಗೆ ಬರುತ್ತಿರುವ ಎರಡನೇ ಸ್ಪರ್ಧಿಯಾಗಿದ್ದಾರೆ. ಈ ಮುನ್ನ ಸ್ಯಾಂಡಲ್‍ವುಡ್ ನಟಿ ನಿಧಿ ಸುಬ್ಬಯ್ಯರವರು ದೊಡ್ಮನೆಯಿಂದ ಹೊರಬಂದಿದ್ದರು. ಇದನ್ನೂ ಓದಿ: 72 ದಿನಗಳ ಹಿಂದೆ ನಾನು ನೋಡಿದ್ದ ಕೆಪಿ ಹೀಗೆ ಇರಲಿಲ್ಲ: ಸುದೀಪ್

  • ನನಗೆ ಆ ಆಘಾತದಿಂದ ಆಚೆ ಬರಲು ಆಗುತ್ತಿಲ್ಲ: ರಘು

    ನನಗೆ ಆ ಆಘಾತದಿಂದ ಆಚೆ ಬರಲು ಆಗುತ್ತಿಲ್ಲ: ರಘು

    ಪ್ರತಿವಾರ ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ಯೆಸ್ ಆರ್ ನೋ ಪ್ರಶ್ನೆಗಳನ್ನು ಮನೆಯ ಸ್ಪರ್ಧಿಗಳನ್ನು ಕೇಳುತ್ತಾರೆ. ಹಾಗೆಯೇ ಈ ವಾರ ಸುದೀಪ್, ಮೊದಲ ಪ್ರಶ್ನೆಯಲ್ಲಿಯೇ ಸ್ನಾನಕ್ಕೆ ಹೋದ ಮೇಲೆ ಇನ್ಮುಂದೆ ಯಾವುದೇ ಕಾರಣಕ್ಕೂ ರಘುರವರು ಬಾಗಿಲು ತೆಗೆಯುವುದಿಲ್ಲ ಎಂದು ಹೇಳುತ್ತಾರೆ.

    ಈ ವೇಳೆ ಮನೆಮಂದಿ ಯೆಸ್ ಎಂದು ಉತ್ತರಿಸಿದ್ದಾರೆ. ಆಗ ಸುದೀಪ್‍ರವರು ಯೆಸ್ ಯಾಕೆ ಎಂದು ಪ್ರಶಾಂತ್ ಸಂಬರ್ಗಿಯವರನ್ನು ಕೇಳಿದಾಗ, ರಘು ಈಗ ಹೆದರಿಕೊಂಡು ಬಿಟ್ಟಿದ್ದಾರೆ. ಸೋಪ್ ಬೇಕು, ಟವೆಲ್ ಬೇಕು ಎಂದು ಏನೂ ಕೇಳುವುದಿಲ್ಲ. ಬಟ್ಟೆ ಹಾಕಿಕೊಂಡು ಆಚೆ ಬರುತ್ತಾರೆ ಎನ್ನುತ್ತಾರೆ. ನಂತರ ಶಮಂತ್ ಇನ್ನು ಏನೂ ಉಳಿದಿಲ್ಲ ಎಂದು ಹೇಳುತ್ತಾರೆ.

    ಆದರೆ ನೋ ಎಂದಿದ್ದ ಚಕ್ರವರ್ತಿಯವರು, ಶೋ ಮುಗಿದ ನಂತರ ಎಲ್ಲಾ ಗೊತ್ತಾಗಿರುತ್ತದೆ. ಏನು ಭಯವಿರುವುದಿಲ್ಲ. ಒಂದು ಸಾರಿ ಆ ರೀತಿ ಆಗುವ ತನಕ ಅಷ್ಟೇ. ರಘು ಈಗ ಯಾವ ಕಾನ್ಫಿಡೆಂಟ್ಸ್ ಲೆವರ್‍ನಲ್ಲಿದ್ದಾರೆ ಎಂದರೆ ರೊಚ್ಚು ರಘು ಆಗಿದ್ದಾರೆ ಎಂದಿದ್ದಾರೆ.

    ಕೊನೆಗೆ ರಘುರವರು ನಾನು ಆ ಆಘಾತದಿಂದ ಆಚೆ ಬರುವುದಕ್ಕೆ ಆಗುತ್ತಿಲ್ಲ ಎಂದಾಗ, ಸುದೀಪ್‍ರವರು ಪ್ರಶಾಂತ್‍ರವರಿಗೂ ಬರಲು ಆಗುತ್ತಿಲ್ಲ ಎನ್ನುತ್ತಾರೆ. ಈ ವೇಳೆ ರಘು ಪ್ರಶಾಂತ್‍ರವರಿಗೆ ಆಘಾತವಾಗಿರುವಂತೆ ನನಗೆ ಒಂದು ಪರ್ಸೆಂಟ್ ಕೂಡ ಕಾಣಿಸುತ್ತಿಲ್ಲ. ಸ್ನಾನಕ್ಕೆ ಹೋಗುವುದಕ್ಕೂ ಮುನ್ನ ಸೋಪ್, ಶ್ಯಾಂಪೂ ಎಲ್ಲ ಇದ್ಯಾ ಎಂದು ಚೆಕ್ ಮಾಡುತ್ತೇನೆ. ಆದರೆ ಅವತ್ತು ಜಗ್‍ನನ್ನು ಮರೆತು ಹೋಗಿದ್ದೆ ಅಷ್ಟೇ ಸರ್. ಬಾಗಿಲು ತೆರೆದು ಸ್ವಲ್ಪ ಕೈ ಆಚೆ ಹಾಕಿದ್ದೆ ಅಷ್ಟೋತ್ತಿಗೆ ಇವರು ಬಂದು ಬಿಟ್ಟರು. ಅದರಲ್ಲೂ ಅಂದು ನನ್ನನ್ನು ಎಳೆದು ಈಚೆ ಎಲ್ಲಿ ಹಾಕಿಬಿಡುತ್ತಾರೋ ಎಂದು ಭಯವಾಗಿತ್ತು ಎಂದು ಹೇಳುತ್ತಾರೆ. ಈ ವೇಳೆ ರಘು ಮಾತು ಕೇಳಿ ಮನೆಮಂದಿಯೆಲ್ಲಾ ಸಿಕ್ಕಾಪಟ್ಟೆ ನಕ್ಕಿದ್ದಾರೆ.

  • ರಘುಗೆ ಹೆಂಡ್ತಿ ಸ್ಥಾನದಲ್ಲಿ ನಿಂತ್ಕೋಳಕ್ಕೆ ತುಂಬಾ ಜನ ಇದ್ದಾರಂತೆ

    ರಘುಗೆ ಹೆಂಡ್ತಿ ಸ್ಥಾನದಲ್ಲಿ ನಿಂತ್ಕೋಳಕ್ಕೆ ತುಂಬಾ ಜನ ಇದ್ದಾರಂತೆ

    ಬಿಗ್‍ಬಾಸ್ ಮನೆಯ ಅಂತಿಮ ದಿನ ಕಣ್ಮಣಿ ರಘುಗೆ ನಾಳೆ ನೀವು ಅಡುಗೆ ಮನೆಯಲ್ಲಿ ಇರುತ್ತೀರಾ ಎಂಬ ಪ್ರಶ್ನೆ ಕೇಳಿದ್ದಾಳೆ. ಆಗ ರಘು ಅಡುಗೆ ಮನೆಯಲ್ಲಿ ಇರುತ್ತೇನೆ ಆದರೆ ಅಡುಗೆ ಮನೆಯಲ್ಲಿ ಇನ್ನೊಬ್ಬರು ಇರುವುದಿಲ್ಲ ಬದಲಾಗಿ ನನ್ನ ಹೆಂಡತಿ ಇರುತ್ತಾಳೆ ಎನ್ನುತ್ತಾರೆ.

    ಈ ವೇಳೆ ಅರವಿಂದ್ ಅದು ನಿನ್ನನ್ನು ಇಂದು ಮನೆಯೊಳಗೆ ಬಿಟ್ಟುಕೊಂಡರೆ ಮಾತ್ರ ಎಂದು ರೇಗಿಸುತ್ತಾರೆ. ನೀವು ನನ್ನ ಹೆಂಡ್ತಿ ಸ್ಪೋರ್ಟಿವ್ ಆಗಿ ಇದ್ದಾಳಾ ಎಂದು ಚೇಕ್ ಮಾಡುತ್ತಿದ್ದೀರಾ. ನಾನು ಮನೆಗೆ ಹೋಗಬೇಕಾ, ಇಲ್ಲ ಅಂದರೆ ಎಲ್ಲಾದರೂ ಹೋಗಬೇಕಾ ಗೊತ್ತಾಗುತ್ತಿಲ್ಲ ಎಂದು ರಘು ಕೇಳಿದಾಗ, ನಾವು ಆರೋಗ್ಯ ಮಾತ್ರ ವಿಚಾರಿಸಿದ್ದು, ಇನ್ನು ಮಿಕ್ಕಿದ್ದು ಗಂಡ-ಹೆಂಡತಿಗೆ ಬಿಟ್ಟಿದ್ದು ಎಂದು ಕಣ್ಮಣಿ ಹೇಳುತ್ತಾಳೆ.

    ಈ ವೇಳೆ ಶುಭಾ ಪೂಂಜಾ ನನಗೆ ತಿಳಿದಿರುವಂತೆ ರಘುನಾ ಇಲ್ಲೇ ಬಿಟ್ಟು ಬಿಡಿ. ಏಕೆಂದರೆ ಅವರನ್ನು ಮನೆಗೆ ಸೇರಿಸುವುದಿಲ್ಲ ಅನಿಸುತ್ತದೆ ಎಂದರೆ ಅರವಿಂದ್ ಪಾಪ ಅವನ ಬಳಿ ಕಾರ್ಡ್ ಕೂಡ ಇಲ್ಲ ಅಂತಿದ್ದ ಎಂದು ರೇಗಿಸುತ್ತಾರೆ. ಆಗ ಕಣ್ಮಣಿ, ನಿಮಗೆ ಈಗಾಗಲೇ ನಿಮ್ಮ ಹೆಂಡತಿ ವಾಯ್ಸ್ ನೋಟ್ ಕಳುಹಿಸಿದ್ದಾರಲ್ಲ ಎಂದು ಕೇಳಿದಾಗ, ಮಜಾ ಮಾಡಿ ನೀನು ಬಾ, ನಿನಗಿದೆ ಎಂದು ಎದುರಿಸಿದಂತೆ ಇತ್ತು. ನಾನು ಅವಳು ಹೇಳಿದ್ದನ್ನು ಸೀರಿಯಸ್ ಆಗಿ ತೆಗೆದುಕೊಂಡು ಮಜಾ ಏನೋ ಮಾಡಿ ಬಿಟ್ಟೆ. ಆದ್ರೆ ಮುಂದೆ ಏನು ಗೊತ್ತಾಗುತ್ತಿಲ್ಲ ಎನ್ನುತ್ತಾರೆ.

    ಹಾಗದರೆ ನಿಮಗೊಂದು ಸಣ್ಣ ಸಿಕ್ರೆಟ್ ಹೇಳಿ ಬಿಡುತ್ತೇನೆ. ಆ ವಾಯ್ಸ್ ನೋಟ್‍ನಲ್ಲಿ ಒಂದೆರಡು ವರ್ಡ್ ನಾವು ಎಡಿಟ್ ಮಾಡಿದ್ದೇವೆ ಎಂದು ಕಣ್ಮಣಿ ರಘುಗೆ ಹೇಳತ್ತಾಳೆ. ಆಗ ರಘು ಏನಂತಾ ಇತ್ತು ಎಂದಾಗ ಕಣ್ಮಣಿ ಹೊರಗೆ ಹೋಗಿ ಲೈವ್‍ನಲ್ಲಿಯೇ ಗೊತ್ತಾಗುತ್ತದೆ ಎಂದಿದ್ದಾಳೆ.

    ನಂತರ ಕಣ್ಮಣಿ ಒಂದು ವೇಳೆ ನಿಮ್ಮ ಹೆಂಡತಿ ನಿಮ್ಮನ್ನು ಮನೆಗೆ ಸೇರಿಸಲಿಲ್ಲ ಅಂದರೆ ಏನು ಮಾಡುತ್ತೀರಾ ಎಂದು ಪ್ರಶ್ನಿಸುತ್ತಾಳೆ. ಆಗ ಶುಭಾ, ಪ್ರಶಾಂತ್ ಎಲ್ಲರು ನಮ್ಮ ಮನೆಗೆ ಬರಬಹುದು ಎಂದು ಹೇಳುತ್ತಿದ್ದಾಗ ರಘು, ಈಗಾಗಲೇ ಇದರ ಬಗ್ಗೆ ಸಾಕಷ್ಟು ಬಾರಿ ಯಾರ ಮನೆಯಲ್ಲಿ ಎಷ್ಟು ದಿನ ಇರಬಹುದು ಎಂದು ಮಾತನಾಡಿದ್ದೇವೆ. ನನಗೆ ಹೆಂಡ್ತಿ ಸ್ಥಾನದಲ್ಲಿ ನಿಂತುಕೊಳ್ಳಲು ಬಹಳಷ್ಟು ಜನ ಇದ್ದಾರೆ ಎಂದು ಹೇಳುತ್ತಾರೆ.

    ಆಗ ಕಣ್ಮಣಿ ರಘು ಶುಭಾ ಮನೆಗೆ ಹೋದರೆ ಏನಾಗುತ್ತದೆ ಎಂದು ಗೊತ್ತು ತಾನೇ ಎಂದು ನೆನಪಿಸುತ್ತಾರೆ. ಈ ವೇಳೆ ರಘು ಪಾತ್ರೆ ತೊಳೆಯುವಂತೆ, ಬಟ್ಟೆ ಒಗೆಯುವಂತೆ ಸನ್ನೆ ಮಾಡಿ ತೋರಿಸುತ್ತಾರೆ.