Tag: ಪಬ್ಲಿಕ್ ಟಿವಿ Prashant Sambargi

  • ಪ್ರಶಾಂತ್‍ಗೆ ಬಂತು ಪುತ್ರನಿಂದ ಕರೆ!

    ಪ್ರಶಾಂತ್‍ಗೆ ಬಂತು ಪುತ್ರನಿಂದ ಕರೆ!

    ನೆಯಿಂದ ದೂರ ಇರುವ ದೊಡ್ಮನೆ ಸ್ಪರ್ಧಿಗಳು ತಮ್ಮ ಮನೆಯವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಎಷ್ಟೋ ಬಾರಿ ಮನೆಯವರೊಂದಿಗೆ ಮಾತನಾಡಬೇಕು ಅಂತಾ ಅಂದುಕೊಂಡರೂ ಕೂಡ ಆಗದೇ ಬಿಗ್‍ಬಾಸ್ ಮನೆಯಲ್ಲಿ ಅತ್ತಿರುವುದನ್ನು ನಾವು ನೋಡಿರಬಹುದು. ಕನಿಷ್ಠ ಪಕ್ಷ ಮನೆಯವರ ಧ್ವನಿ ಕೇಳಿದರೆ ಸಾಕಪ್ಪಾ ಎಂದು ಪರದಾಡುತ್ತಿರುತ್ತಾರೆ.

    ಈ ಮಧ್ಯೆ ಬೇರೆ ಸ್ಫರ್ಧಿಗಳಿಗೆ ಹೋಲಿಸಿದರೆ, ಪ್ರಶಾಂತ್ ಸಂಬರಗಿಗೆ ಎರಡೆರಡು ಬಾರಿ ಮನೆಯವರ ಧ್ವನಿ ಕೇಳುವ ಭಾಗ್ಯ ಬಿಗ್‍ಬಾಸ್ ಮನೆಯಲ್ಲಿ ಒಲಿದು ಬಂದಿದೆ. ಹೌದು, ಬಿಗ್‍ಬಾಸ್ ನೀಡಿದ್ದ ಕ್ಯಾಪ್ಟನ್ಸಿ  ಟಾಸ್ಕ್‌ನಲ್ಲಿ ಗೆದ್ದ ಪ್ರಶಾಂತ್ ಸಂಬರ್ಗಿ ಇದೀಗ 2ನೇ ಬಾರಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆದ ಹಿನ್ನೆಲೆ ನಿನ್ನೆ ಪ್ರಶಾಂತ್ ಸಂಬರಗಿಗೆ ಪುತ್ರ ವಾಯ್ಸ್ ರೆಕಾರ್ಡ್ ಕಳುಹಿಸುವ ಮೂಲಕ ವಿಶ್ ಮಾಡಿದ್ದಾರೆ.

    ಹಾಯ್, ಪಪ್ಪಾ ಆದಿ ಮಾತನಾಡುತ್ತಿದ್ದೇನೆ. 2ನೇ ಬಾರಿ ಕ್ಯಾಪ್ಟನ್ ಆಗಿದ್ದಕ್ಕೆ ಬಹಳ ಖುಷಿಯಾಗಿದೆ. ನಿಮ್ಮ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಆಟ ಎಲ್ಲಾ ಚೆನ್ನಾಗಿ ಆಡಿಕೊಂಡು ಬಾ.. ಬಿಗ್‍ಬಾಸ್‍ಗೆ ಹೋಗಲು ಒಂದು ಬಾರಿ ನಿನಗೆ ಅವಕಾಶ ಸಿಕ್ಕಿದೆ. ನೀನು ಅದನ್ನು ಉಪಯೋಗಿಸಿಕೋ, ನಿನ್ನ ಕೈಲಾದಷ್ಟು ಸಾಮಾಥ್ರ್ಯ ಬಳಸಿ ಆಟ ಆಡು. ನೀನು ಬೇರೆಯವರು ಏನು ಹೇಳುತ್ತಾರೋ ಎಂಬ ಬಗ್ಗೆ ಯೋಚಿಸಲು ಹೋಗಬೇಡ. ನೀನು ನಿನಗೇನು ಅನಿಸುತ್ತದೆಯೋ ಆ ನಿರ್ಧಾರಗಳನ್ನು ತೆಗೆದುಕೋ. ನನಗೆ ಗೊತ್ತಿದೆ ನಿನ್ನ ನಿರ್ಧಾರಗಳು ಯಾವಾಗಲೂ ಸರಿಯಾಗಿಯೇ ಇರುತ್ತದೆ ಅಂತಾ ಎಂದಿದ್ದಾರೆ.

    ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ನಿಕ್ಕು ನನ್ನ ಪ್ರತಿ ದಿನ ಪಪ್ಪಾ ಯಾವಾಗ ಬರುತ್ತಾರೆ ಎಂದು ಕೇಳುತ್ತಿರುತ್ತಾನೆ. ನಾನು ಪಪ್ಪಾ ಬಿಗ್‍ಬಾಸ್ ಗೆದ್ದೆ ಬರುತ್ತಾರೆ ಎಂದು ಹೇಳುತ್ತಿರುತ್ತೇನೆ. ಅವನು ಪ್ರತಿ ದಿನ ಟಿವಿಯಲ್ಲಿ ನಿನ್ನ ನೋಡಿ ಪಪ್ಪಾ, ಪಪ್ಪಾ ಎನ್ನುತ್ತಿರುತ್ತಾನೆ. ವಿ ಮಿಸ್ ಯೂ, ವಿ ವೇರಿ ಪ್ರೌಡ್ ಆಫ್ ಯೂ, ಎನರ್ಜಿಯಿಂದ ಆಟವಾಡು, ಲವ್ ಯೂ, ಆಲ್ ದಿ ಬೆಸ್ಟ್ ಎಂದು ಪ್ರಶಾಂತ್‍ಗೆ ಅವರ ಮಗ ಆದಿತ್ಯ ವಿಶ್ ಮಾಡಿದ್ದಾರೆ.

  • ದೊಡ್ಮನೆ ಸ್ಪರ್ಧಿಗಳ ಬಗ್ಗೆ ಕಮೆಂಟ್ ಪಾಸ್ ಮಾಡಿದ ಪ್ರಶಾಂತ್!

    ದೊಡ್ಮನೆ ಸ್ಪರ್ಧಿಗಳ ಬಗ್ಗೆ ಕಮೆಂಟ್ ಪಾಸ್ ಮಾಡಿದ ಪ್ರಶಾಂತ್!

    ಬಿಗ್‍ಬಾಸ್ ಮನೆಯಲ್ಲಿ 36 ಗಂಟೆಗಳ ಕಾಲ ಊಟ ಮಾಡುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿರುವ ಪ್ರಶಾಂತ್ ಸಂಬರ್ಗಿ ಮನೆಯ ಸದಸ್ಯರ ಬಗ್ಗೆ ಕಮೆಂಟ್ ಮಾಡಿದ್ದಾರೆ. ಸ್ನೇಹಿತ ಚಕ್ರವರ್ತಿ ಚಂದ್ರಚೂಡ್ ಜೊತೆ ಲಿವಿಂಗ್ ಏರಿಯಾದಲ್ಲಿ ಕುಳಿತು ಪ್ರಶಾಂತ್ ಮಾತನಾಡುತ್ತಿರುತ್ತಾರೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಮನೆಯ ಸ್ಪರ್ಧಿಗಳ ಹೆಸರನ್ನು ಒಂದೊಂದಾಗಿ ಹೇಳಿಕೊಂಡು ಹೋಗುತ್ತಾರೆ. ಇದಕ್ಕೆ ಪ್ರತಿಯಾಗಿ ಪ್ರಶಾಂತ್ ಸಂಬರಗಿ ಉತ್ತರಿಸುತ್ತಾ ಹೋಗಿದ್ದಾರೆ.

    ಮೊದಲಿಗೆ ದಿವ್ಯಾ ಸುರೇಶ್ ಎಂದು ಚಕ್ರವರ್ತಿ ಹೇಳಿದಾಗ, ಗ್ಯಾಲರಿಯಲ್ಲಿ ಆಡುತ್ತಿದ್ದಾಳೆ ಮಂಜು ಶಿಷ್ಯೆ, ನಾನು ಡಿಫರೆಂಟ್, ನಾನು ಕಾನ್ಫಿಡೆಂಟ್ ಅಂತ ತೋರಿಸುವ ಭರದಲ್ಲಿ ನೀಚ ಸ್ವಭಾವ ಎಕ್ಸ್‍ಪೋಸ್ ಆಗುತ್ತಿದೆ. ಗೆಲ್ಲವುದೊಂದೇ ಗುರಿ, ಮಾರ್ಗ ಯಾವುದು ಬೇಕಾದರೂ ಆಗಬಹುದು ಎಂದು ಆಟ ಆಡುತ್ತಿದ್ದಾಳೆ ಅಂತ ಪ್ರಶಾಂತ್ ಹೇಳುತ್ತಾರೆ.

    ನಂತರ ಡಿಯು ಎಂದಾಗ, ಪ್ರಶಾಂತ್ ಅರವಿಂದನ ಮಡಿಲಿನಲ್ಲಿ ಅವನ ಜೊತೆಗೆ ನಾನು ಸಾಗುವೆ ಎನ್ನುತ್ತಾರೆ. ಮಂಜು ಪಾವಗಡ ಹೆಸರು ಬಂದಾಗ, ದುಷ್ಟ, ಅಹಂಕಾರಿ, ಹಾಸ್ಯ ಬಿಟ್ಟು ಎಲ್ಲ ಮಾಡುತ್ತಿದ್ದಾನೆ. ಇನ್ನೂ ರಘು ಉಸರವಳ್ಳಿ. ಪ್ರಿಯಾಂಕ, ಸುಂದರವಾಗಿದ್ದಿನಿ ಎಂಬ ಜಂಬ, ನಾನು ಡಿಫರೆಂಟ್ ಆಗಿದ್ದೇನೆ ಎಂದು ತೋರಿಸಿಕೊಳ್ಳಲು ಹೊರಟಿದ್ದಾರೆ. ಲೋ ಬುದ್ಧಿ, ಲೋ ಹೈಕ್ಯೂ ಇರುವುದರಿಂದ ನಿರ್ಧಾರಗಳು ಕರೆಕ್ಟ್ ಅಂದುಕೊಂಡು ಫೆಲ್ ಆಗುತ್ತಿರುವ ಹುಡುಗಿ ಎನ್ನುತ್ತಾರೆ.

    ಟ್ಯಾಲೆಂಟೆಂಡ್, ಕಂಪೆಷನೆಟ್, ಎಕ್ಸ್ ಪ್ರೆಸ್ ಮಾಡದೇ ಇರುವಂತಹ ಹುಡುಗ ಎಂದು ಶಮಂತ್‍ಗೆ ಹೇಳುತ್ತಾರೆ. ಚಕ್ರವರ್ತಿಯವರು ಅವರ ಹೆಸರನ್ನೇ ಸೂಚಿಸಿದಾಗ ಅತೀ ಬುದ್ಧಿವಂತಿಕೆ ಮಾತಿನ ಚಾತುರ್ಯದಿಂದ ಗೆಲ್ಲಬಹುದು ಎಂದು ತಿಳಿದು ಎಲ್ಲರನ್ನು ದುಷ್ಮನ್ ಮಾಡಿಕೊಳ್ಳುತ್ತಿರುವ ವ್ಯಕ್ತಿ ಎಂದು ಪ್ರಶಾಂತ್ ಅಭಿಪ್ರಾಯ ತಿಳಿಸುತ್ತಾರೆ.

    ಹಾಗಾದರೆ ಪ್ರಶಾಂತ್ ಸಂಬರ್ಗಿ ಎಂದು ಚಕ್ರವರ್ತಿ ಕೇಳಿದಾಗ, ಶಕ್ತಿ, ಯುಕ್ತಿಗಿಂತ ಮನುಷ್ಯತ್ವ ಮೇಲೂ ಅಂತ ಆಡುತ್ತಿರುವ ಎಮೋಷನಲ್ ಫೂಲ್ ಎಂದು ತಮಗೆ ತಾವೇ ಪ್ರಶಾಂತ್ ಹೇಳಿದ್ದಾರೆ.