Tag: ಪಬ್ಲಿಕ್ ಟಿವಿ Crocodile

  • ಕಾಳಿ ನದಿಯಿಂದ ಗ್ರಾಮಕ್ಕೆ ಬಂತು ಮೊಸಳೆ – ಆತಂಕದಲ್ಲಿ ಗ್ರಾಮಸ್ಥರು

    ಕಾಳಿ ನದಿಯಿಂದ ಗ್ರಾಮಕ್ಕೆ ಬಂತು ಮೊಸಳೆ – ಆತಂಕದಲ್ಲಿ ಗ್ರಾಮಸ್ಥರು

    ಕಾರವಾರ: ಆಹಾರ ಅರಸಿ ನದಿ ಭಾಗದಿಂದ ಮೊಸಳೆಯೊಂದು ಗ್ರಾಮಕ್ಕೆ ನುಗ್ಗಿದ ಘಟನೆ ದಾಂಡೇಲಿಯ ಕೊಗಿಲಬನ ಗ್ರಾಮದ ರಸ್ತೆಯಲ್ಲಿ ಇಂದು ನಡೆದಿದೆ.

    ಕಾಳಿ ನದಿಯಿಂದ ಆಹಾರ ಅರಸಿ ನದಿ ದಡಕ್ಕೆ ಬಂದ ಬೃಹದಾಕಾರದ ಮೊಸಳೆಯು ದಾಂಡೇಲಿಯ ಕಾಳಿ ನದಿ ಪಕ್ಕದಲ್ಲೇ ಇರುವ ಕೊಗಿಲಬನ ಗ್ರಾಮಕ್ಕೆ ನುಗ್ಗಿ ರಸ್ತೆಯಲ್ಲಿ ಸಂಚರಿಸಿದೆ.

    ಬೆಳಂಬೆಳಗ್ಗೆ ಗ್ರಾಮದಲ್ಲಿ ಓಡಾಡಿದ ಮೊಸಳೆಯನ್ನು ನೋಡಿದ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಗ್ರಾಮದ ರಸ್ತೆಯಲ್ಲಿ ವಾಕ್ ಮಾಡಿದ ಮೊಸಳೆ ಅರಣ್ಯಾಧಿಕಾರಿಗಳು ಬರುವುದರೊಳಗೆ ಗ್ರಾಮವನ್ನು ದಾಟಿ ಕಾಡಿನ ಹಾದಿ ಮೂಲಕ ಮತ್ತೆ ನದಿಗೆ ಸೇರಿಕೊಂಡಿದೆ.

    ದಾಂಡೇಲಿಯ ಕಾಳಿ ನದಿಯಲ್ಲಿ ಸಾವಿರಾರು ಮೊಸಳೆಗಳು ವಾಸವಾಗಿವೆ. ಆದರೆ ನದಿಯನ್ನು ಬಿಟ್ಟು ಗ್ರಾಮಕ್ಕೆ ಇದೇ ಮೊದಲ ಬಾರಿ ಮೊಸಳೆ ಆಗಮಿಸಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.

    ಈ ಹಿಂದೆ ನದಿ ಭಾಗದಲ್ಲಿ ಮೊಸಳೆಗಳು ಮನುಷ್ಯನ ಮೇಲೆ ಎರಗಿ ಸಾವುಗಳಾದ ಘಟನೆ ಸಹ ಈ ಭಾಗದಲ್ಲಿ ನಡೆದಿದೆ. ದಾಂಡೇಲಿಯ ಕಾಗದ ಕಾರ್ಖಾನೆ ಬಳಿ ನದಿ ತಡದಲ್ಲಿ ಅತೀ ಹೆಚ್ಚು ಮೊಸಳೆಗಳು ವಾಸಿಸುತ್ತಿವೆ. ಕಾರ್ಖಾನೆಯ ತ್ಯಾಜ್ಯಗಳೇ ಇವುಗಳಿಗೆ ಆಹಾರವಾಗಿದ್ದು ಲಾಕ್‍ಡೌನ್‍ನಿಂದ ಜನರ ಓಡಾಟ ಸಹ ಈ ಪ್ರದೇಶಗಳಲ್ಲಿ ಇಳಿಮುಖವಾಗಿತ್ತು. ಹೀಗಾಗಿ ಆಹಾರ ಅರಸಿ ಮೊಸಳೆಗಳು ನದಿ ದಡದಿಂದ ಸುತ್ತಮುತ್ತ ಓಡಾಟ ನಡೆಸುತಿದ್ದು, ಇಂದು ಗ್ರಾಮಕ್ಕೆ ಮೊಸಳೆ ನುಗ್ಗಿದ್ದರಿಂದ ಇದೀಗ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಇದನ್ನೂ ಓದಿ:ಅಯೋಧ್ಯೆಯಲ್ಲಿ ರಾಮಮಂದಿರ ಅಡಿಪಾಯ ಕಾಮಗಾರಿ ವೀಕ್ಷಿಸಿದ ಪೇಜಾವರಶ್ರೀ

  • ನೀರು ಕುಡಿಯಲು ಹೋದ ಹಸು ಮೊಸಳೆ ದಾಳಿಗೆ ಬಲಿ

    ನೀರು ಕುಡಿಯಲು ಹೋದ ಹಸು ಮೊಸಳೆ ದಾಳಿಗೆ ಬಲಿ

    ರಾಯಚೂರು: ತಾಲೂಕಿನ ಡೊಂಗರಾಂಪೂರ ಬಳಿ ಕೃಷ್ಣಾ ನದಿ ದಡದಲ್ಲಿ ಮೊಸಳೆ ದಾಳಿಗೆ ಹಸು ಬಲಿಯಾಗಿರುವ ಘಟನೆ ನಡೆದಿದೆ.

    ನೀರು ಕುಡಿಯಲು ಹೋದ ಹಸುವನ್ನು ಎಳೆದೊಯ್ದು ಮೊಸಳೆ ತಿಂದು ಹಾಕಿದೆ. ರೈತ ಆಂಜನೇಯ ಎಂಬವರಿಗೆ ಸೇರಿದ ಹಸು ಮೊಸಳೆ ದಾಳಿಗೆ ಬಲಿಯಾಗಿದೆ. ನದಿ ಪಕ್ಕದಲ್ಲೇ ಜಮೀನು ಇದ್ದಿದ್ದರಿಂದ ರೈತ ಆಂಜನೇಯ ನಿನ್ನೆ ಸಂಜೆ ಹಸುವನ್ನ ನೀರು ಕುಡಿಯಲು ಬಿಟ್ಟಿದ್ದ, ಮೊಸಳೆ ದಾಳಿಗೆ ಹಸು ಬಲಿಯಾಗಿದ್ದು, ಇಂದು ಬೆಳಗ್ಗೆ ನದಿಯಲ್ಲಿ ತೇಲಾಡುತ್ತಿದ್ದಾಗ ರೈತರು ಗಮನಿಸಿದ್ದಾರೆ. ತೆಪ್ಪದ ಮೂಲಕ ಹೋಗಿ ತೇಲಾಡುತ್ತಿದ್ದ ಹಸು ಎಳೆದು ತಂದಿದ್ದಾರೆ. ಹಸುವಿನ ಮೈಮೇಲಿನ ಗಾಯಗಳಿಂದ ಮೊಸಳೆ ದಾಳಿ ಮಾಡಿರುವುದು ಖಚಿತವಾಗಿದೆ.

    ಈ ಹಿಂದೆ ಇದೇ ಸ್ಥಳದಲ್ಲಿ ಐದು ವರ್ಷದ ಬಾಲಕನನ್ನ ಮೊಸಳೆ ಎಳೆದುಕೊಂಡು ಹೋಗಿತ್ತು. ಹೀಗಾಗಿ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನ ಮೊಸಳೆ ದಾಳಿಗೆ ಹೆದರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ- ಶಿರಸಿಯಲ್ಲಿ ಮತ್ತೆ ಭೂ ಕುಸಿತ

  • ಮೊಸಳೆ ಬಾಯಿಂದ ಜಸ್ಟ್ ಮಿಸ್ ಆಯ್ತು ಕೋಳಿ – ವೀಡಿಯೋ ವೈರಲ್

    ಮೊಸಳೆ ಬಾಯಿಂದ ಜಸ್ಟ್ ಮಿಸ್ ಆಯ್ತು ಕೋಳಿ – ವೀಡಿಯೋ ವೈರಲ್

    ನಾವು ಪ್ರಾಣಿಗಳು ಮಾಡುವ ಅವಿವೇಕತನ, ಚೇಷ್ಟೆ ಹೀಗೆ ಹಲವು ರೀತಿಯ ಹಾಸ್ಯಮಯವಾದ ವೀಡಿಯೋಗಳನ್ನು ನೋಡಿರುತ್ತೇವೆ. ಆದರೆ ಕೋಳಿಯೊಂದು ಮೊಸಳೆ ಮೇಲೆ ಆರಾಮವಾಗಿ ಕುಳಿತುಕೊಂಡು ನದಿ ದಾಟುವುದರ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

    ಹೌದು, ವೈರಲ್ ಆಗಿರುವ 10 ಸೆಕೆಂಡ್ ವೀಡಿಯೋದಲ್ಲಿ ಕೋಳಿಯು ಮೊಸಳೆಯ ತಲೆ ಮೇಲೆ ಕುಳಿತು ನದಿಯನ್ನು ದಾಟಿದೆ. ಮೊಸಳೆಯು ಕೋಳಿಯನ್ನು ತನ್ನ ತಲೆಯ ಇರಿಸಿಕೊಂಡು ನಿಧಾನವಾಗಿ ಸಮಾಧಾನದಿಂದ ಯಾವುದೇ ತೊಂದರೆಯಾಗದಂತೆ ನದಿಯ ದಡಕ್ಕೆ ಹೋಗುತ್ತದೆ. ಈ ವೇಳೆ ನದಿಯ ಅಂಚಿಗೆ ತಲುಪಿದ ನಂತರ ಕೋಳಿ ಮೊಸಳೆಯ ತಲೆ ಮೇಲಿಂದ ಕೆಳಗೆ ಇಳಿಯುತ್ತಿದ್ದಂತೆ ಮೊಸಳೆ ತನ್ನ ಬೃಹತ್ ಬಾಯಿಯನ್ನು ತೆರೆದು ಕೋಳಿಯನ್ನು ತಿನ್ನಲು ಹೋಗುತ್ತದೆ. ಆದರೆ ಚಾಣಾಕ್ಷ ಕೋಳಿ ಮೊಸಳೆ ಮೇಲಿಂದ ಇಳಿಯುತ್ತಿದ್ದಂತೆಯೇ ಮೊಸಳೆಗೆ ಹೆದರಿ ವೇಗವಾಗಿ ಓಡಿ ಹೋಗುತ್ತದೆ.

    ಈ ವೀಡಿಯೋವನ್ನು ಐಪಿಎಸ್ ಅಧಿಕಾರಿ ದೀಪಂಶು ಕಬ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘2020 ರಿಂದ 2021.. ಮತ್ತೆ 2021ರ ಆರಂಭ.. ಹಾಗೇ ಸುಮ್ಮನೆ’ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ 13.4 ಸಾವಿರ ವಿವ್ಸ್ ಪಡೆದುಕೊಂಡಿದ್ದು, ಹಲವಾರು ಕಮೆಂಟ್‍ಗಳು ಹರಿದು ಬಂದಿದೆ.

    ಅದರಲ್ಲಿ ಕೆಲವರು ಮೊಸಳೆ ಕೋಳಿಯನ್ನು ತಿಂದು ಬಿಡುತ್ತದೆ ಎಂದುಕೊಂಡಿದ್ದೇವು ಎಂದು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ವೀಡಿಯೋ ಕೊನೆಯ ಭಾಗ ನೋಡಿ ಭಯಭೀತರಾದೆವು ಎಂದು ಕಮೆಂಟ್ ಮಾಡಿದ್ದಾರೆ.