Tag: ಪಬ್ಲಿಕ್ ಟಿವಿ Covid patient

  • ಅಂಬುಲೆನ್ಸ್‌ಗಾಗಿ ಕಾದು 23 ವರ್ಷದ ಕೋವಿಡ್-19 ಸೋಂಕಿತ ಸ್ಥಳದಲ್ಲೇ ಸಾವು

    ಅಂಬುಲೆನ್ಸ್‌ಗಾಗಿ ಕಾದು 23 ವರ್ಷದ ಕೋವಿಡ್-19 ಸೋಂಕಿತ ಸ್ಥಳದಲ್ಲೇ ಸಾವು

    ಮಡಿಕೇರಿ: ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವ ಇಂದು ಅಸ್ಪತ್ರೆಯ ಅಂಬುಲೆನ್ಸ್‌ಗಾಗಿ ಕಾದು ನಡು ರಸ್ತೆಯಲ್ಲೆ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಜೆಗುಂಡಿ ಗ್ರಾಮದಲ್ಲಿ ನಡೆದಿದೆ.

    ಮೃತ ಯುವಕ ಮನು(23) ಎಂದು ಗುರುತಿಸಲಾಗಿದ್ದು, ಈತ ಬಜೆಗುಂಡಿ ಗ್ರಾಮದ ನಿವಾಸಿ. ಎರಡು ಮೂರು ದಿನಗಳಿಂದ ಶೀತ ಜ್ವರದಿಂದ ಬಳಲುತ್ತಿದ್ದ ಮನು ಮಂಗಳವಾರ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಕೊಟ್ಟು ಮನೆಗೆ ತೆರಳಿದ್ದಾನೆ.

    ಬುಧವಾರ ಜ್ವರದಿಂದ ಬಳಲಿ ನಿತ್ರಾಣಗೊಂಡು ಮಧ್ಯಾಹ್ನ 12.30ಕ್ಕೆ ಅಂಬುಲೆನ್ಸ್‍ಗೆ ಕರೆ ಮಾಡಿದ್ದಾನೆ. ನಂತರ ಬಜೆ ಗುಂಡಿ ಗ್ರಾಮದ ರಸ್ತೆಯ ಪಕ್ಕಕ್ಕೆ ಬಂದು ಬಿದ್ದಿದ್ದಾರೆ. ಅಂಬುಲೆನ್ಸ್ ಬರುವ ತನಕ ರಸ್ತೆಯಲ್ಲೇ ಬಿದ್ದು ನರಳಿದ್ದಾರೆ. ಸತತವಾಗಿ ಗಂಟೆಗಟ್ಟಲೇ ಅಂಬುಲೆನ್ಸ್‌ಗಾಗಿ ಕಾದರೂ ಸ್ಥಳಕ್ಕೆ ಅಂಬುಲೆನ್ಸ್ ಬಂದಿರಲ್ಲಿಲ್ಲ. ಹಲವಾರು ಬಾರಿ ಅಸ್ಪತ್ರೆಗೆ ಕರೆ ಮಾಡುವ ವೇಳೆಯಲ್ಲಿ ಈಗ ಬರುವುದು ಆಗಾ ಬರುವುದಾಗಿ ತಿಳಿಸಿದ್ದಾರೆ.

    ಅದರೂ ಮೂರು ಗಂಟೆಗಳ ಕಾಲ ತಡವಾಗಿ ಅಂಬುಲೆನ್ಸ್ ಬಂದಿದೆ. ಇನ್ನೂ ಮಗ ಬಿದ್ದಿದ್ದ ಸ್ಥಳಕ್ಕೆ ತಾಯಿ ಗೌರಿ, ಆಶಾ ಕಾರ್ಯಕರ್ತೆ ಹಾಗೂ ಆರೋಗ್ಯ ಸಿಬ್ಬಂದಿ ಬಂದು ಆತನನ್ನು ಅಂಬುಲೆನ್ಸ್ ಒಳಗೆ ಮಲಗಿಸಿದ್ದಾರೆ. ಅದರೆ ಅನಾರೋಗ್ಯದಿಂದ ಬಳಲಿದ್ದ ಯುವಕ ದಾರಿ ಮಧ್ಯೆ ಮೃತಪಟ್ಟಿದ್ದಾನೆ.

  • ಕೋವಿಡ್ ರೋಗಿಯ ಆಕ್ಸಿಜನ್ ತೆಗೆದು ಕೊಂದ ವಾರ್ಡ್‍ಬಾಯ್

    ಕೋವಿಡ್ ರೋಗಿಯ ಆಕ್ಸಿಜನ್ ತೆಗೆದು ಕೊಂದ ವಾರ್ಡ್‍ಬಾಯ್

    ಭೋಪಾಲ್: ವಾರ್ಡ್ ಬಾಯ್ ಆಕ್ಸಿಜನ್ ಮಾಸ್ಕ್ ತೆಗೆದ ನಂತರ ಕೊರೊನಾ ರೋಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಶಿರೋಪುರದಲ್ಲಿ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದ ಮೂಲಕ ಬೆಳಕಿಗೆ ಬಂದಿದೆ.

    ಮೃತಪಟ್ಟ ವ್ಯಕ್ತಿಯನ್ನು ಸುರೇಂದ್ರ ಶರ್ಮಾ ಎಂದು ಗುರುತಿಸಲಾಗಿದ್ದು, ಕೊರೊನಾ ಚಿಕಿತ್ಸೆಗಾಗಿ ಶಿವಪುರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಡರಾತ್ರಿ ವಾರ್ಡ್‍ಬಾಯ್ ಆಕ್ಸಿಜನ್ ಮಾಸ್ಕ್ ತೆರೆದ ಪರಿಣಾಮ ರೋಗಿ ಮೃತಪಟ್ಟಿದ್ದಾರೆ.

    ಆಸ್ಪತ್ರೆಯ ನಿರ್ವಹಣಾ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಸುರೇಂದ್ರ ಶರ್ಮಾ ಮೃತಪಟ್ಟಿರುವುದಾಗಿ ಮೃತರ ಮಗ ದೀಪಕ್ ಶರ್ಮಾ ಹಾಗೂ ಅವರ ಕುಟುಂಬದವರು ಆರೋಪಿಸಿದ್ದಾರೆ. ವಾರ್ಡ್‍ಬಾಯ್ ಒಳಗೆ ಬರುವ ಮುನ್ನ ಸುರೇಂದ್ರ ಕುಮಾರ್ ಜೊತೆ ಅವರ ಮಗ ದೀಪಕ್ ಶರ್ಮಾ ಇದ್ದರು.

    ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ದೀಪಕ್ ಶರ್ಮಾ, ಹಲವು ದಿನಗಳಿಂದ ನನ್ನ ತಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿರವಾಗಿತ್ತು ಹಾಗೂ ಸುಧಾರಿಸುತ್ತಿತ್ತು. ಆದರೆ ಬೆಳಗ್ಗೆ ಅವರ ಆಕ್ಸಿಜನ್ ಮಾಸ್ಕ್‍ನನ್ನು ವಾರ್ಡ್ ಬಾಯ್ ತೆಗೆದುಹಾಕಿದ್ದರಿಂದ ಉಸಿರಾಡಲು ಆಗದೇ ಒದ್ದಾಡಿ ಮೃತಪಟ್ಟಿದ್ದಾರೆ . ನಾನು ನರ್ಸ್ ಹಾಗೂ ವೈದ್ಯರಿಗೆ ಮತ್ತೆ ಆಕ್ಸಿಜನ್ ನೀಡುವಂತೆ ಕೇಳಿದೆ, ಆದರೆ ಅವರು ನಿರಾಕರಿಸಿದರು. ಆದಾದ ಸ್ವಲ್ಪ ಹೊತ್ತಿನಲ್ಲಿಯೇ ನನ್ನ ತಂದೆ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದ್ದಾರೆ.

    ಈ ಕುರಿತಂತೆ ಇದೀಗ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಧರ್ಯವರ್ದನ್ ಶರ್ಮಾ 48 ಗಂಟೆಗಳ ಒಳಗೆ ತನಿಖೆ ನಡಿಸಿ ವರದಿ ಸಲ್ಲಿಸಲು ಮೂರು ತಂಡಗಳನ್ನು ರಚಿಸಿದ್ದಾರೆ. ಅಲ್ಲದೇ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ಅರ್ಜುನ್ ಲಾಲ್ ಶರ್ಮಾ ಆರೋಪಿಗಳ ವಿರುದ್ಧ ಕಠೀಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.