Tag: ಪಬ್ಲಿಕ್ ಟಿವಿ Bride

  • ಸಿಂಧೂರದ ಮಹತ್ವವೇನು..? – ಮದುವೆ ವೇಳೆ ವಧು ಧರಿಸಬಹುದಾದ ಡಿಸೈನ್‍ಗಳು ಇಲ್ಲಿವೆ

    ಸಿಂಧೂರದ ಮಹತ್ವವೇನು..? – ಮದುವೆ ವೇಳೆ ವಧು ಧರಿಸಬಹುದಾದ ಡಿಸೈನ್‍ಗಳು ಇಲ್ಲಿವೆ

    ಸಿಂಧೂರ ನಮ್ಮ ದೇಹದ ಏಳು ಚಕ್ರಗಳಲ್ಲಿ ಒಂದಾದ ಅಗ್ಯ ಚಕ್ರವಾಗಿದೆ. ಸಿಂಧೂರ ನಮ್ಮ ಮನಸ್ಸಿನ ಜೊತೆಗೆ ಹೆಚ್ಚಿನ ಸಂಪರ್ಕ ಹೊಂದಿದ್ದು, ಬುದ್ಧಿ ಮತ್ತು ಜ್ಞಾನವನ್ನು ಹೆಚ್ಚಾಗಿ ಕೇಂದ್ರೀಕರಿಸುತ್ತದೆ. ಸಿಂಧೂರಕ್ಕೆ ಅದರದ್ದೇ ಆದ ಶಕ್ತಿ ಮತ್ತು ಮಹತ್ವವಿದೆ. ಸುಳ್ಳು ಮತ್ತು ಪಕ್ಷಪಾತಕ್ಕಿಂತ ಹೆಚ್ಚಾಗಿ ಸತ್ಯಾಧಾರಿತ ವಿಚಾರಗಳನ್ನು ನೋಡಲು ಸಹಾಯಕವಾಗಿದೆ. ವಧುವಿನ ಹಣೆಯ ಮೇಲೆ ಕೆಂಪು ಬಣ್ಣದ ಸಿಂಧೂರ ಭಾರತೀಯ ನಾರಿಯ ಸಮೃದ್ಧಿ, ಪ್ರೀತಿ ಮತ್ತು ಸಹಾನುಭೂತಿಯನ್ನು ಸೂಚಿಸುತ್ತದೆ.

    ಸಿಂಧೂರವನ್ನು ನೀವು ಪ್ರತಿದಿನ ಇಟ್ಟುಕೊಳ್ಳಬೇಕೋ ಅಥವಾ ಬೇಡವೋ ಎಂಬುವುದು ನಿಮ್ಮ ವೈಯಕ್ತಿಕ ಆಯ್ಕೆ. ಆದರೆ ವಧುವಿಗೆ ಕಂಪ್ಲೀಟ್ ಲುಕ್ ನೀಡುವುದರ ಜೊತೆಗೆ ಸುಂದರವಾಗಿ ಕಾಣಿಸುವಂತೆ ಮಾಡುವುದು ಮಾತ್ರ ಸಿಂಧೂರ. ಸಿಂಧೂರ ಕುರಿತಂತೆ ಕೆಲವೊಂದು ಡಿಸೈನ್‍ಗಳ ಮಾಹಿತಿ ಈ ಕೆಳಗಿನಂತಿದೆ.

    ಬೋಲ್ಡ್ ಮತ್ತು ಬ್ಯೂಟಿಫುಲ್ ಸಿಂಧೂರ:
    ಮದುವೆಯ ದಿನ ವಧುವಿಗೆ ಸಾಂಪ್ರದಾಯಿಕ ಲುಕ್ ನೀಡುವ ಸಿಂಧೂರಗಳಲ್ಲಿ ಇದು ಕೂಡ ಒಂದು. ಈ ಸಿಂಧೂರ ವಧುವಿಗೆ ಸುಂದರವಾದ ಲುಕ್ ನೀಡುತ್ತದೆ. ನಿಮ್ಮ ಹಣೆ ಚಿಕ್ಕದಾಗಿದ್ದರೆ ಚಿಂತಿಸಬೇಡಿ, ವಾಸ್ತವವಾಗಿ ಈ ಸಿಂಧೂರ ನಿಮ್ಮ ಹಣೆಯ ಮೇಲೆ ದೊಡ್ಡದಾಗಿ ಮತ್ತು ಸರಿಯಾಗಿ ಕಾಣಿಸುವಂತೆ ಮಾಡುತ್ತದೆ ಮತ್ತು ನಿಮಗೆ ಗ್ರಾಂಡ್ ಲುಕ್ ನೀಡುತ್ತದೆ.

    ಸಿಂಧೂರದ ಸಣ್ಣ ಡಿಸೈನ್:
    ಅನೇಕ ವಧುಗಳು ಸಾಮಾನ್ಯವಾಗಿ ಮದುವೆಯ ಸಮಯದಲ್ಲಿ ಸಣ್ಣದಾಗಿರುವ ಸಿಂಧೂರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲಿಯೂ ಇಳಿಮುಖವಾಗಿ ಹಣೆಯನ್ನು ಹೊಂದಿರುವವರಿಗೆ ಮಾಂಗ್ ಟಿಕ್ಕಾ ಬಹಳ ಚೆನ್ನಾಗಿ ಸೂಟ್ ಆಗುತ್ತದೆ. ಇದು ನಿಮ್ಮ ಮುಖವನ್ನು ವಿಕಾರಗೊಳಿಸದೇ ಅಂದವನ್ನು ಹೆಚ್ಚಿಸುತ್ತದೆ. ಈ ಸಿಂಧೂರವನ್ನು ನೀವು ಯಾವುದೇ ಕಾರ್ಯಕ್ರಮಗಳಲ್ಲಿ ಕೂಡ ಧರಿಸಬಹುದು.

    ಸ್ಟಡ್/ ಸ್ಟೋನ್ ಸಿಂಧೂರ:
    ಸ್ಟಡ್ ಮತ್ತು ಸ್ಟೋನ್ ಸಿಂಧೂರಗಳ ಡಿಸೈನ್ ಗ್ಲಾಮರ್ ಲುಕ್ ನೀಡುತ್ತದೆ. ಸ್ಟೋನ್ ಸಿಂಧೂರಗಳು ವಿವಿಧ ಆಕಾರ ಮತ್ತು ಗಾತ್ರದಲ್ಲಿ ಸಿಗುತ್ತದೆ. ನಿಮ್ಮ ವಿಶೇಷ ದಿನಗಳಲ್ಲಿ ಈ ಸಿಂಧೂರವನ್ನು ಧರಿಸುವುದರಿಂದ ನಿಮಗೆ ಹೆಚ್ಚು ಸ್ಫೂರ್ತಿ ಮತ್ತು ಉತ್ಸಾಹ ತುಂಬುತ್ತದೆ.

    ಸ್ಟೋನ್ ಆವೃತ್ತಿಯ ಸಿಂಧೂರ:
    ಸ್ಟೋನ್ ಮೂಲಕ ಆವೃತ್ತಿಗೊಳಿಸಿರುವ ಅನೇಕ ಆಕಾರದಲ್ಲಿ ಸಿಂಧೂರಗಳಿದೆ. ಸಿಂಧೂರದ ಸುತ್ತ ವೃತ್ತಾಕಾರದಲ್ಲಿ ಸಣ್ಣ, ಸಣ್ಣ ಸ್ಟೋನ್‍ಗಳನ್ನು ಅಳವಡಿಸಲಾಗಿದ್ದು, ಸಿಂಧೂರ ಎದ್ದು ಕಾಣಿಸುವುದರ ಜೊತೆಗೆ ನಿಮಗೆ ಅದ್ಭುತ ಲುಕ್ ನೀಡುತ್ತದೆ.

    ಮಹಾರಾಷ್ಟ್ರ ಸಿಂಧೂರ:
    ಭಾರತದ ಪ್ರತಿಯೊಂದು ರಾಜ್ಯವು ತನ್ನದೇ ಆದ ಸಂಸ್ಕøತಿ ಮತ್ತು ಸಂಪ್ರದಾಯವನ್ನು ಹೊಂದಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ವಿವಾಹದ ಪದ್ಧತಿಗಳಿದೆ. ಹಲವಾರು ರಾಜ್ಯಗಳಲ್ಲಿ ಮಹಾರಾಷ್ಟ್ರ ಕೂಡ ಒಂದು. ಮಹಾರಾಷ್ಟ್ರದ ಕಡೆ ಮದುವೆಯ ವೇಳೆ ವಧುವಿಗೆ ಚಂದ್ರನ ಆಕಾರದ ಸಿಂಧೂರ(ಚಂದ್ರ ಕೋರ್ ಬಿಂದಿ)ವನ್ನು ಇಡಲಾಗುತ್ತದೆ. ಇದನ್ನು ವಧು ಮಾತ್ರವಲ್ಲದೇ ಮಹಾರಾಷ್ಟ್ರದಲ್ಲಿರುವ ಮಹಿಳೆಯರು ಸರ್ವೇ ಸಾಮಾನ್ಯವಾಗಿ ಪ್ರತಿನಿತ್ಯ ಇಟ್ಟುಕೊಳ್ಳುತ್ತಾರೆ. ಇದನ್ನೂ ಓದಿ:ಬೆಳಗ್ಗೆ ಎದ್ದು ಬೆಚ್ಚಗಿನ ನೀರು ಕುಡಿಯಿರಿ- ಆರೋಗ್ಯ ಕಾಪಾಡಿಕೊಳ್ಳಿ

  • ಪತಿಯ ಮನೆಯ ಬಾಗಿಲಲ್ಲಿಯೇ ವಧುವಿನಿಂದ ವರನಿಗೆ ಕಪಾಳ ಮೋಕ್ಷ

    ಪತಿಯ ಮನೆಯ ಬಾಗಿಲಲ್ಲಿಯೇ ವಧುವಿನಿಂದ ವರನಿಗೆ ಕಪಾಳ ಮೋಕ್ಷ

    ಲಕ್ನೋ: ಹೊಸದಾಗಿ ಮದುವೆಯಾದ ವಧು ವರನಿಗೆ ಕಪಾಳ ಮೋಕ್ಷ ಮಾಡಿ ತವರು ಮನೆಗೆ ಹಿಂದಿರುಗಿದ ಘಟನೆ ಉತ್ತರ ಪ್ರದೇಶದ ಜೌನ್‍ಪುರ ಜೆಲ್ಲೆಯ ಖುತಾಹನ್ ಬ್ಲಾಕ್‍ನ ಲವಾಯೆನ್ ಗ್ರಾಮದಲ್ಲಿ ನಡೆದಿದೆ.

    ಮದುವೆ ಮಂಟಪದಿಂದ ಕಾರಿನಲ್ಲಿ ನವಜೋಡಿ ವರನ ಮನೆಗೆ ಬಂದಿದ್ದಾರೆ. ಕಾರಿನಲ್ಲಿ ಬರುತ್ತಿರುವ ವಧುವನ್ನು ಸ್ವಾಗತಿಸಲು ವರನ ಕುಟುಂಬದವರು ತಯಾರಿ ನಡೆಸುತ್ತಿದ್ದರು. ಈ ವೇಳೆ ಕಾರಿನಲ್ಲಿ ವರನೊಟ್ಟಿಗೆ ಬಂದ ವಧು ಕಾರಿನಿಂದ ಇಳಿದ ತಕ್ಷಣ ವರನ ಕಪಾಳಕ್ಕೆ ಹೊಡೆದಿದ್ದಾಳೆ. ನಂತರ ಮನೆಯೊಳಗೆ ಮದುವೆಯಲ್ಲಿ ಧರಿಸಿದ್ದ ಲೆಹೆಂಗಾವನ್ನು ಬದಲಾಯಿಸಿ, ಕ್ಯಾಶುಯಲ್ ವೇರ್ ಧರಿಸಿ ತವರ ಮನೆಗೆ ಮರಳಿದ್ದಾಳೆ.

    ಮದುವೆ ಸಮಾರಂಭದ ನಂತರ ವರನ ಕುಟುಂಬವನ್ನು ವಧುವನ್ನು ಮನೆಗೆ ಬರಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದ ವೇಳೆ ಈ ಘಟನೆ ಜರುಗಿದ್ದು, ವಧು ತವರು ಮನೆಗೆ ಮರಳುತ್ತಿದ್ದಂತೆ ಈ ಸುದ್ದಿ ಊರಿಗೆಲ್ಲಾ ಹಬ್ಬಿದೆ.

    ಈ ಕುರಿತಂತೆ ವಿಚಾರಣೆ ವೇಳೆ ವರ ಮತ್ತೊಬ್ಬರನ್ನು ಪ್ರೀತಿ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು, ಇದನ್ನು ತಿಳಿದು ವಧು ದ್ರೋಹ ಮಾಡಿದ್ದಕ್ಕೆ ಸಿಟ್ಟಾಗಿ ವರನ ಕಪಾಳಕ್ಕೆ ಹೊಡೆದಿದ್ದಾಳೆ.

    ವರ ಹಾಗೂ ವಧುವಿನ ಕುಟುಂಬದವರು ಈ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗದೇ ಇದ್ದಾಗ ಪ್ರಕರಣ ಪೊಲೀಸ್ ಠಾಣಾ ಮೆಟ್ಟಿಲೇರಿದ್ದು, ಪೊಲೀಸರು ಇಬ್ಬರನ್ನು ಪ್ರತ್ಯೇಕವಾಗಿರುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಪಾನಮತ್ತ ವ್ಯಕ್ತಿಯ ಕಿತಾಪತಿ – ಮಹಿಳೆಯರ ಮುಂದೆ ಬೆತ್ತಲೆ ಪ್ರದರ್ಶನ

  • ಬಿಡಿಸಿ ಸೀಟ್ ಗೆದ್ದು, ಸರ್ಟಿಫಿಕೇಟ್ ಸ್ವೀಕರಿಸಿಲು ಮಂಟಪ ಬಿಟ್ಟು ಹೋದ ವಧು

    ಬಿಡಿಸಿ ಸೀಟ್ ಗೆದ್ದು, ಸರ್ಟಿಫಿಕೇಟ್ ಸ್ವೀಕರಿಸಿಲು ಮಂಟಪ ಬಿಟ್ಟು ಹೋದ ವಧು

    ಲಕ್ನೋ: ಉತ್ತರ ಪ್ರದೇಶದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಬ್ಲಾಕ್ ಡೆವಲಪ್‍ಮೆಂಟ್ ಕೌನ್ಸಿಲ್ ಸ್ಥಾನವನ್ನು ಗೆದ್ದಿರುವ ವಿಚಾರ ತಿಳಿದ ವಧು, ಮದುವೆ ಸಮಾರಂಭವನ್ನು ಅರ್ಧದಲ್ಲಿಯೇ ಬಿಟ್ಟು, ಮತ ಎಣಿಕೆ ಕೇಂದ್ರಕ್ಕೆ ಧಾವಿಸಿ ತನ್ನ ವಿಜೇತ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ.

    ಈ ಘಟನೆ ಭಾನುವಾರ ನಡೆದಿದ್ದು, ಪೂನಂ ಶರ್ಮಾ(28) ಎಂಬವರು ಹೂವಿನ ಹಾರವನ್ನು ವರನೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದ ವೇಳೆ ಈ ಸಿಹಿ ಸುದ್ದಿ ತಿಳಿದುಬಂದಿದೆ. ವಿಶೇಷವೆಂದರೆ ಪೂನಂ ಅವರ ವಿವಾಹವನ್ನು ಮೇ 2ರಂದು ನಿಗದಿ ಪಡಿಸಲಾಗಿತ್ತು ಮತ್ತು ಪಂಚಾಯತ್ ಚುನಾಣೆಯ ಎಣಿಕೆಯನ್ನೂ ಕೂಡ ಮೇ 2 ರಂದೇ ನಿಗದಿ ಪಡಿಸಲಾಗಿತ್ತು.

    ಪೂನಂ ಶರ್ಮಾ ಮದುವೆ ಮಂಟಪದಿಂದ 20 ಕಿ.ಮೀ ದೂರದಲ್ಲಿರುವ ಎಣಿಕೆ ಕೇಂದ್ರಕ್ಕೆ ಭಾನುವಾರ ರಾತ್ರಿ 9.30ಕ್ಕೆ ತಲುಪಿ ಪ್ರಮಾಣಪತ್ರವನ್ನು ಸ್ವೀಕರಿಸಿದರು. ಈ ವೇಳೆ ಅವರು ವಧುವಿನ ಉಡುಪು ಗುಲಾಬಿ ಬಣ್ಣದ ಮಾಸ್ಕ್ ಧರಿಸಿರುವುದನ್ನು ಕಂಡು ಅಲ್ಲಿದ್ದವರು ಕಂಡು ಬೆರಗಾದರು. ಅಲ್ಲದೆ ಪ್ರಮಾಣ ಪತ್ರವನ್ನು ಅಧಿಕಾರಿಗಳಿಂದ ಸ್ವೀಕರಿಸುತ್ತಿರುವ ಫೋಟೋವನ್ನು ಸೆರೆ ಹಿಡಿಯಲಾಗಿದೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ನಾನು ಈಗ ಬಿಡಿಸಿ ಸದಸ್ಯೆಯಾಗಿರುವುದು ನನ್ನ ಮದುವೆಗೆ ಸಿಕ್ಕ ಅತ್ಯುತ್ತಮ ಉಡುಗೊರೆಯಾಗಿದೆ. ಈ ಕ್ಷಣವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ವರ್ಮಾಲಾ ಮೊದಲು ನಾನು 31 ಮತಗಳಿಂದ ಚುನಾವಣೆಯಲ್ಲಿ ಗೆದ್ದಿದ್ದೇನೆ. ನನ್ನ ಸೋದರ ಅಳಿಯಂದಿರು ನನಗೆ ಪ್ರಮಾಣಪತ್ರವನ್ನು ಸ್ವೀಕರಿಸಲು ಮದುವೆ ಮಂಟಪದಿಂದ ಹೊರಗಡೆ ಹೋಗಲು ಅವಕಾಶ ಮಾಡಿಕೊಟ್ಟರು. ನನ್ನ ಗೆಲುವಿನಿಂದ ಹಳ್ಳಿಯವರೆಲ್ಲ ಸಂತಸದಿಂದ ಇದ್ದಾರೆ ಎಂದು ಹೇಳಿದರು.

    ನಂತರ ಗೆದ್ದ ಬ್ಯಾಡ್ಜ್‌ನೊಂದಿಗೆ ಎಣಿಕೆ ಕೇಂದ್ರದಿಂದ ಪೂನಂ ಶರ್ಮಾ ಮಂಟಪಕ್ಕೆ ಹಿಂದಿರುಗಿದರು. ನಂತರ ಉಳಿದ ಮದುವೆಯ ಶಾಸ್ತ್ರಗಳನ್ನು ಮುಂದುವರೆಸಲಾಯಿತು.

  • ತವರು ಮನೆಗೆ ವಿಶಿಷ್ಟವಾಗಿ ವಿದಾಯ ಹೇಳಿದ ವಧು!

    ತವರು ಮನೆಗೆ ವಿಶಿಷ್ಟವಾಗಿ ವಿದಾಯ ಹೇಳಿದ ವಧು!

    ನವದೆಹಲಿ: ಹೆಣ್ಣು ಮಕ್ಕಳು ಯಾವಾಗಲೂ ಅಡುಗೆ ಮನೆಗೆ ಮಾತ್ರ ಸೀಮಿತ ಎಂದು ಹೇಳುತ್ತಿದ್ದ ಮಾತು ಬದಲಾಗಿದೆ. ಇತ್ತೀಚೆಗೆ ಮದುವೆಯಾದ ಯುವತಿ ತನ್ನ ತವರು ಮನೆಯಿಂದ ಗಂಡನ ಮನೆಗೆ ಹೋಗುವ ವೇಳೆ ಕಾರಿನ ಚಾಲಕ ಸೀಟಿನಲ್ಲಿ ಕುಳಿತು ಕಾರು ಚಾಲಯಿಸಿದ್ದಾಳೆ.

    ಆಧುನಿಕ ಜಗತ್ತಿನ ಹೆಣ್ಣು ಮಕ್ಕಳು ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವ ಶಕ್ತಿಯನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಮದುವೆ ಸಮಯದಲ್ಲಿ ವಧು ನಾಚುತ್ತಾ ತಲೆ ಬಾಗಿಸಿಕೊಂಡಿರುವುದನ್ನು ನಾವು ನೋಡಿರುತ್ತೇವೆ. ಅದರಲ್ಲೂ ತವರು ಮನೆ ಬಿಟ್ಟು ಹೋಗುವಾಗ ಅಳುತ್ತಾ ಗಂಡನ ಮನೆಗೆ ಹೋಗುತ್ತಾರೆ. ಆದರೆ ಇದೀಗ ಕಾಲ ಬದಲಾಗಿದೆ ಎಂದರೇ ತಪ್ಪಾಗಲಾರದು.

    ಹೌದು ವೀಡಿಯೋಯೊಂದರಲ್ಲಿ ಆಗಷ್ಟೇ ಮದುವೆಯಾದ ಸ್ನೇಹಾ ಸಿಂಘಿ ಎಂಬ ವಧು, ತನ್ನ ತವರು ಮನೆಗೆ ವಿದಾಯ ಹೇಳಿ ಗಂಡನ ಮನೆಗೆ ಹೊರಡಲು ಕಾರಿನ ಚಾಲಕನ ಸೀಟಿನಲ್ಲಿ ಡ್ರೈವ್ ಮಾಡಲು ಕುಳಿತುಕೊಳ್ಳುತ್ತಾಳೆ. ಈ ವೇಳೆ ವರ ಡ್ರೈವ್ ಮಾಡದೇ ವಧುವಿನ ಪಕ್ಕದಲ್ಲಿ ಕುಳಿತುಕೊಂಡರೆ, ಉಳಿದವರು ಹಿಂಬದಿಯ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ. ನಂತರ ಸ್ನೇಹ ಎಲ್ಲರಿಗೂ ಕೈ ಬೀಸಿ ನಗುತ್ತಾ ಬೈ ಹೇಳಿ ಕಾರು ಚಲಾಯಿಸುವ ಮೂಲಕ ವಿಶಿಷ್ಟವಾಗಿ ವಿದಾಯ ಹೇಳುತ್ತಾರೆ.

     

    View this post on Instagram

     

    A post shared by Sneha Singhi Upadhaya (@snehasinghi1)

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದ್ದು, ಈ ವರೆಗೂ 2 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.

  • ಮೊದಲ ರಾತ್ರಿಯೇ ವರ ಕಂಡ ಕನಸು ಭಗ್ನ- ಪೊಲೀಸ್ ಠಾಣೆಯಲ್ಲಿ ದೂರು

    ಮೊದಲ ರಾತ್ರಿಯೇ ವರ ಕಂಡ ಕನಸು ಭಗ್ನ- ಪೊಲೀಸ್ ಠಾಣೆಯಲ್ಲಿ ದೂರು

    – ದೇವಾಲಯದಲ್ಲಿ ಮದ್ವೆಯಾಗಿದ್ದ ಜೋಡಿ

    ಲಕ್ನೋ: ವರನಿಗೆ ರಾಡ್‍ನಿಂದ ಹಲ್ಲೆ ನಡೆಸಿ ನಗದು ಹಾಗೂ ಆಭರಣವನ್ನು ದೋಚಿಕೊಂಡು ವಧು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ವಧು ಹರಿದ್ವಾರ ನಿವಾಸಿಯಾಗಿದ್ದು, ವರ ಬಿಜ್ನೋರ್ ಕುಂದಾ ಖುರ್ದ್ ಗ್ರಾಮದವನಾಗಿದ್ದಾನೆ. ಮಾರ್ಚ್ 15ರಂದು ಇಬ್ಬರು ದೇವಾಲಯವೊಂದರಲ್ಲಿ ವಿವಾಹವಾದರು. ಮದುವೆ ಬಳಿಕ ವಧುವನ್ನು ಮನೆಗೆ ಕರೆದೊಯ್ದ ವರ ಇನ್ನು ಮುಂದೆ ಲೈಫ್‍ನಲ್ಲಿ ಸೆಟೆಲ್ಡ್ ಆದೇ ಎಂದು ಭಾವಿಸಿಸಿದ್ದನು. ಆದರೆ ಮದುವೆಯಾದ ಮೊದಲ ರಾತ್ರಿಯೇ ಆತನ ಕನಸುಗಳು ನುಚ್ಚುನೂರಾಗಿದೆ. ಮೊದಲ ರಾತ್ರಿಯೇ ವಧು ಕಬ್ಬಿಣದ ರಾಡ್‍ನಿಂದ ವರನ ಮೇಲೆ ಹಲ್ಲೆ ನಡೆಸಿ ಆತನನ್ನು ಗಂಭೀರವಾಗಿ ಗಾಯಗೊಳಿಸಿದ್ದಾಳೆ.

    ಘಟನೆ ಕುರಿತಂತೆ ಪ್ರತಿಕ್ರಿಯಿಸಿ ವರ, ಕಳ್ಳತನ ಮಾಡಲೆಂದು ವಧು ಮೊದಲೇ ಯೋಜಿಸಿಕೊಂಡು ಮದುವೆಯಾಗಿದ್ದಾಳೆ ಎಂದು ಹೇಳಿದ್ದಾನೆ. ನಿಜವಾಗಲೂ ಏನಾಯಿತು ಎಂದು ತಿಳಿಯುತ್ತಿಲ್ಲ. ಇದ್ದಕ್ಕಿದ್ದಂತೆ ನನ್ನ ಪತ್ನಿ ರಾಡ್‍ನಿಂದ ಹೊಡೆಯಲು ಆರಂಭಿಸಿದಳು. ಇದರಿಂದ ನಾನು ಪ್ರಜ್ಞೆ ತಪ್ಪಿ ಬಿದ್ದೆ. ನಂತರ ಆಕೆ 20,000 ರೂ ನಗದು ಹಾಗೂ 2 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾಳೆ ಎಂಬ ವಿಚಾರ ತಿಳಿದುಬಂದಿದೆ ಎಂದು ಹೇಳಿದನು.

    ಸದ್ಯ ಘಟನೆ ಕುರಿತಂತೆ ವರನ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ವಧುದಕ್ಷಿಣೆ ಬದಲಾಗಿ 46,000 ರೂ. ಮೌಲ್ಯದ ಪುಸ್ತಕಕ್ಕೆ ಬೇಡಿಕೆ ಇಟ್ಟ ವಧು!

    ವಧುದಕ್ಷಿಣೆ ಬದಲಾಗಿ 46,000 ರೂ. ಮೌಲ್ಯದ ಪುಸ್ತಕಕ್ಕೆ ಬೇಡಿಕೆ ಇಟ್ಟ ವಧು!

    ಇಸ್ಲಾಮಾಬಾದ್: ಪಾಕಿಸ್ತಾನದ ಮದುಮಗಳು ವಧುದಕ್ಷಿಣೆ ರೂಪದಲ್ಲಿ ನೀಡುವ ಹಣ ಹಾಗೂ ಆಭರಣಗಳ ಬದಲಾಗಿ ಪಿಕೆಆರ್ 1,00,000(46,600 ರೂ.) ಮೌಲ್ಯದ ಪುಸ್ತಕ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಪಾಕಿಸ್ತಾನದ ಮರ್ದಾನ್ ನಗರದ ನೈಲಾ ಶಮಾಲ್ ಎಂಬವರು ತಮ್ಮ ವಿವಾಹದಲ್ಲಿ ಈ ರೀತಿಯ ಬೇಡಿಕೆ ಇಡಲು ಹಲವಾರು ಉದಾಹರಣೆಗಳನ್ನು ನೀಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ನೈಲಾ, ಹಣ ಹಾಗೂ ಆಭರಣದ ಬದಲಾಗಿ ಪುಸ್ತಕ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ವೀಡಿಯೋದಲ್ಲಿ ನೈಲಾ ಮದುಮಗಳ ವಸ್ತ್ರ ಧರಿಸಿರುವುದನ್ನು ಕಾಣಬಹುದಾಗಿದೆ. ನಾನು ಹಕ್ ಮೆಹರ್ ಪಿಕೆಆರ್ 1,00,000 ಮೌಲ್ಯದ ಪುಸ್ತಕಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದೇನೆ. ಇದಕ್ಕೆ ಕಾರಣ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಹಾಗೂ ನಾವು ದುಬಾರಿ ಉಡುಗೊರೆಗಳನ್ನು ಖರೀದಿಸಲು ಆಗುತ್ತಿಲ್ಲ. ಮತ್ತೊಂದು ನಮ್ಮ ಸಮಾಜದಲ್ಲಿರುವ ತಪ್ಪಾದ ಪದ್ಧತಿಗಳನ್ನು ತೊಡೆದು ಹಾಕುವುದಾಗಿದೆ ಎಂದು ಹೇಳಿದ್ದಾರೆ.

    ನಾನು ಓರ್ವ ಬರಹಗಾತಿಯಾಗಿದ್ದು ಪುಸ್ತಕಗಳಿಗೆ ಬೆಲೆ ನೀಡಲಿಲ್ಲ ಎಂದರೆ ಇನ್ನೂ ಸಾಮಾನ್ಯ ಜನರು ಹೇಗೆ ಪುಸ್ತಕಗಳಿಗೆ ಬೆಲೆ ಕೊಡುತ್ತಾರೆ ಎಂದು ಪ್ರಶ್ನಿಸಿದರು. ಈ ರೀತಿಯಾದಂತಹ ಬೇಡಿಕೆ ಇಡಲು ಮುಖ್ಯ ಕಾರಣ, ನಾನು ಹಕ್ ಮೆಹರ್ ನಲ್ಲಿ ಪುಸ್ತಕಗಳಿಗೆ ಬೆಲೆ ಕೊಟ್ಟು, ಇತರರಿಗೂ ಸಲಹೆ ನೀಡುವುದಾಗಿದೆ ಎಂದು ನುಡಿದರು.

    ಸದ್ಯ ಈ ವೀಡಿಯೋವನ್ನು ನೈಲಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ವಧು ಮತ್ತು ವರ ಇಬ್ಬರೂ ಬರಹಗಾರರು ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.