Tag: ಪಬ್ಲಿಕ್ ಟಿವಿ Biggboss

  • ಅರವಿಂದ್ ದಿವ್ಯಾ ಮದುವೆಗೆ ಸೇತುವೆ ಆಗ್ತಾರಾ ಶುಭಾ!

    ಅರವಿಂದ್ ದಿವ್ಯಾ ಮದುವೆಗೆ ಸೇತುವೆ ಆಗ್ತಾರಾ ಶುಭಾ!

    ಬಿಗ್‍ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ ಆರಂಭವಾದಾಗ ಹೆಚ್ಚು ಸುದ್ದಿ ಮಾಡಿದ ಜೋಡಿ ಅಂದ್ರೆ ಅರವಿಂದ್ ಹಾಗೂ ದಿವ್ಯಾ ಉರುಡುಗ. ಇವರಿಬ್ಬರ ನಡುವಿನ ಆಲೋಚನೆ, ಹೊಂದಾಣಿಕೆ, ಪ್ರೀತಿ ಎಲ್ಲವನ್ನು ನೋಡಿ ದೊಡ್ಮನೆ ಮಂದಿ ಇವರಿಬ್ಬರ ನಡುವೆ ಏನೋ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದರು.

    ಆದರೆ ನಿನ್ನೆ ಶುಭ ಪೂಂಜಾ ದಿವ್ಯಾ ಬಗ್ಗೆ ಅರವಿಂದ್ ಜೊತೆ ಕುಳಿತು ಮಾತನಾಡಿದ್ದಾರೆ. ಈ ವೇಳೆ ಅರವಿಂದ್ ದಿವ್ಯಾ ಬಗ್ಗೆ ತಮ್ಮ ಅಭಿಪ್ರಾಯವನ್ನ ನೇರವಾಗಿ ಶುಭ ಜೊತೆ ಹಂಚಿಕೊಂಡಿದ್ದಾರೆ. ನಿನ್ನೆ ದಿವ್ಯಾ ಉರುಡಗಗೆ ಅರವಿಂದ್‍ನನ್ನು ಮದುವೆ ಆಗ್ತೀನಿ ಅಂದರೆ ನಿಮ್ಮ ಮನೆಯಲ್ಲಿ ಒಪ್ಪಿಕೊಳ್ಳುತ್ತಾರಾ ಎಂದು ಕೇಳಿದ್ದೆ. ಇದಕ್ಕೆ ದಿವ್ಯಾ ಹಾಗೇನಾದರೂ ನಾನು ನಿಜವಾಗಿಯೂ ಇಷ್ಟಪಡುತ್ತಿದ್ದೇನೆ ಅಂದ್ರೆ ನಮ್ಮ ಮನೆಯಲ್ಲಿ ಯಾವುದೇ ಅಭ್ಯಂತರವಿರುವುದಿಲ್ಲ. ಈ ಬಗ್ಗೆ ಮೊದಲಿಗೆ ಅರವಿಂದ್ ಅಭಿಪ್ರಾಯ ಕೇಳಿ ಎಂದು ಹೇಳಿದ್ದಾಳೆ ಎಂದು ಶುಭ ಅರವಿಂದ್‍ಗೆ ಹೇಳುತ್ತಾರೆ.

    ಬಳಿಕ ಶುಭ, ನಾನು ನಿನ್ನನ್ನು ಇದೇ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ನಿಮ್ಮ ಮನೆಯಲ್ಲಿ ದಿವ್ಯಾ ಉರುಡಗರನ್ನು ಮದುವೆಯಾಗ್ತೀನಿ ಎಂದರೆ ಒಪ್ಪಿಕೊಳ್ಳುತ್ತಾರಾ ಎಂದು ಅರವಿಂದ್‍ಗೆ ಕೇಳುತ್ತಾರೆ. ಆಗ ಅರವಿಂದ್ ನಮ್ಮ ಮನೆಯಲ್ಲಿ ನಾನು ಇಷ್ಟಪಡುವುದನ್ನೇ ಅವರು ಬಯಸುತ್ತಾರೆ ಒಪ್ಪಿಕೊಳ್ಳುತ್ತಾರೆ. ನಿನ್ನೆ ಪ್ರಶಾಂತ್ ಅವರು ಕೂಡ ಕೇಳಿದಾಗ, ಹೌದು ಇಲ್ಲಿ ಇರುವವರಲ್ಲಿ ನನಗೆ ಹೊಂದಿಕೊಳ್ಳುವವರು ಎಂದರೆ ದಿವ್ಯಾ, ಇಲ್ಲಿರುವವರಲ್ಲಿ ನಾನು ಬಹಳ ಇಷ್ಟ ಪಡುವ ವ್ಯಕ್ತಿಯೂ ದಿವ್ಯಾ. ಅವಳು ಮಾಡುವ ಕೆಲಸ, ಅವಳು ಇರುವ ರೀತಿ ಎಲ್ಲವೂ ಸರಿಯಾಗಿದೆ. ಅವಳು ನೋಡಲು ಕ್ಯೂಟ್ ಆಗಿ ಕೂಡ ಇದ್ದಾಳೆ. ಮುಂದಿನ ಬಗ್ಗೆ ನಾನು ಇಲ್ಲಿ ಮಾತನಾಡಲು ಆಗುವುದಿಲ್ಲ. ಒಬ್ಬರು ಹೇಗೆ ಏನು ಎಂದು 25 ದಿನಗಳಲ್ಲಿ ನಿರ್ಧರಿಸಲು ಆಗುವುದಿಲ್ಲ. ಹಾಗಾಗಿ ಈಗಲೇ ಅದರ ಬಗ್ಗೆ ಮಾಡನಾಡುವುದು ತಪ್ಪು ಎಂದು ಹೇಳುತ್ತಾರೆ.

    ನಂತರ ಶುಭ ಬಿಗ್‍ಬಾಸ್ ಮನೆಯೊಳಗೆ ಇದ್ದು ನಿಜವಾಗಿಯೂ ನೀವಿಬ್ಬರು ಒಬ್ಬರಿಗೊಬ್ಬರು ಇಷ್ಟಪಟ್ಟರೆ ಹೊರಗಡೆ ಹೋಗಿ ಕೂಡ ನಾಲ್ಕು ತಿಂಗಳು ಸಮಯ ಕಳೆಯಿರಿ. ನಂತರ ನಿಮ್ಮಿಬ್ಬರಿಗೂ ಒಪ್ಪಿಗೆ ಇದ್ದರೆ ಮುಂದುವರೆಸಿಕೊಂಡು ಹೋಗಿ ಎಂದು ಟಿಪ್ಸ್ ನೀಡುತ್ತಾರೆ. ಒಟ್ಟಾರೆ ಬಿಗ್‍ಬಾಸ್ ಮನೆಯಲ್ಲಿ ಸೈಲೆಂಟ್ ಆಗಿ ಅರವಿಂದ್ ದಿವ್ಯಾ ಲವ್‍ಸ್ಟೋರಿ ನಡಿತಿದೆ ಎಂದರೆ ತಪ್ಪಾಗಲಾರದು.

  • ವಿಶ್ವನಾಥ್ ಬೀನ್ ಬ್ಯಾಗ್ ಎಳೆದು ಅರವಿಂದ್‍ಗೆ ಜಾಗ ಕೊಟ್ಟ ದಿವ್ಯಾ!

    ವಿಶ್ವನಾಥ್ ಬೀನ್ ಬ್ಯಾಗ್ ಎಳೆದು ಅರವಿಂದ್‍ಗೆ ಜಾಗ ಕೊಟ್ಟ ದಿವ್ಯಾ!

    – ದಿವ್ಯ ಉರುಡುಗ ಕಾಲೆಳೆದ ಕಿಚ್ಚ

    ಬಿಗ್‍ಬಾಸ್ ಮನೆಯಲ್ಲಿ ಜೋಡಿ ಟಾಸ್ಕ್ ನಂತರ ಎಲ್ಲರ ಗಮನ ಸೆಳೆಯುತ್ತಿರುವ ಜೋಡಿ ಎಂದರೆ ಅರವಿಂದ್ ಹಾಗೂ ದಿವ್ಯಾ ಉರುಡುಗ. ಕಳೆದ ಒಂದು ವಾರದಿಂದ ಬಿಗ್ ಮನೆಯಲ್ಲಿ ಎಲ್ಲೆ ನೋಡಿದ್ರೂ ಈ ಜೋಡಿ ಒಟ್ಟಾಗಿಯೇ ಕಾಣಿಸಿಕೊಳ್ಳುತ್ತಿದೆ. ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ಬೀನ್ ಬ್ಯಾಗ್ ಬಗ್ಗೆಯೇ ಒಂದು ದೊಡ್ಡ ಚರ್ಚೆ ನಡೆದಿದೆ.

    ಹೌದು. ನಾನು ದಿವ್ಯಾ ಉರುಡುಗ ಜೊತೆ ಗಾರ್ಡನ್ ಏರಿಯಾದಲ್ಲಿ ಬೀನ್ ಬ್ಯಾಗ್ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದೆ. ಈ ವೇಳೆ ನಾನು ಕೊಂಚ ರಿಲಾಕ್ಸ್ ಮಾಡಲೆಂದು ಮುಂದಕ್ಕೆ ಬಂದೆ. ಆದರೆ ಮತ್ತೆ ಹಿಂದೆ ತಿರುಗಿ ನೋಡಿದಾಗ ಬೀನ್ ಬ್ಯಾಗ್‍ಗೆ ಇರುವುದಿಲ್ಲ. ಬೀನ್ ಬ್ಯಾಗ್ ಎಲ್ಲಿ ಅಂತ ಹುಡುಕುತ್ತಿದ್ದಾಗ ಅರವಿಂದ್ ಅವರು ಬರುತ್ತಿರುವುದನ್ನು ಕಂಡು ದಿವ್ಯಾ ಉರುಡುಗ ಬೀನ್ ಬ್ಯಾಗ್ ಎಳೆದುಕೊಂಡು ಜಾಗ ಮಾಡಿ ಕೊಟ್ಟಿದ್ದಾರೆ ಎಂದು ತಿಳಿಯಿತು ಅಂತ ವಿಶ್ವನಾಥ್ ಹೇಳಿದ್ದಾರೆ.

    ಈ ವೇಳೆ ದಿವ್ಯಾ ಉರುಡುಗ ಆ ರೀತಿ ಏನೂ ಇಲ್ಲ ಸರ್ ಎಂದು ಸುದೀಪ್‍ಗೆ ಹೇಳುತ್ತಾರೆ. ನಂತರ ಸುದೀಪ್ ಹೌದು ಆ ತರ ಏನೂ ಇಲ್ಲ. ನಮ್ಮ ಕ್ಯಾಮೆರಾ ಮ್ಯಾನ್‍ಗಳಿಗೆ ತಲೆನೇ ಇಲ್ಲ. ಸುಮ್ಮನೆ ಇಲ್ಲದೇ ಇರುವುದನ್ನೆಲ್ಲಾ ತೋರಿಸುತ್ತಿದ್ದಾರೆ. ಮೊದಲ ಬಾರಿ ಬಿಗ್‍ಬಾಸ್‍ನಲ್ಲಿ ಸಿಜಿ(ಗ್ರಾಫಿಕ್ಸ್) ಎಲ್ಲ ನಡೆಯುತ್ತಿದೆ. ಪಾಪ ಅಲ್ಲಿ ಅರವಿಂದ್‍ರವರೇ ಇಲ್ಲ ಕರೆಕ್ಟ್ ಅಲ್ವಾ? ಎಂದು ದಿವ್ಯಾ ಉರುಡುಗ ಕಾಲೆಳೆದರು.

    ಬಳಿಕ ದಿವ್ಯಾ, ಜೋಡಿ ಟಾಸ್ಕ್ ಬಳಿಕ ಅರವಿಂದ್ ಜೊತೆ ವಿಷಯಗಳನ್ನು ಹಂಚಿಕೊಳ್ಳಲು ಹಾಗೂ ಅವರೊಂದಿಗೆ ಕಂಫರ್ಟ್ ಫೀಲ್ ಹೊಂದಿದ್ದೇನೆ. ಅಷ್ಟೇ ಸರ್ ಅದಕ್ಕಿಂತ ಹೆಚ್ಚು ಬೇರೇನೂ ಇಲ್ಲ ಎಂದು ಹೇಳುತ್ತಾರೆ. ಇದಕ್ಕೆ ಸುದೀಪ್ ಕರೆಕ್ಟ್ ಆದರೆ ಬೀನ್ ಬ್ಯಾಗ್ ಏಕೆ ಎಳೆದ್ರಿ ಅಂತ ಪ್ರಶ್ನಿಸಿದ್ದಾರೆ. ಈ ವೇಳೆ ದಿವ್ಯಾ ನನಗೆ ಆ ಘಟನೆ ಬಗ್ಗೆ ನೆನಪೇ ಆಗುತ್ತಿಲ್ಲ ಎಂದು ಹೇಳುತ್ತಾರೆ. ಕೆಲವೊಂದು ವಿಷಯಗಳು ಗೊತ್ತಾಗುವುದೇ ಇಲ್ಲ ಬಿಡಿ. ಇದನ್ನು ಪ್ರತಿ ಮನೆಯಲ್ಲೂ ಮಹಿಳೆಯರು ಕಲಿಯಬೇಕು. ನಾವು ಬರುವುದಕ್ಕಿಂತ ಮುಂಚೆ ಚೇರ್ ರೆಡಿ ಮಾಡಿ ಇಡಿ. ದಿವ್ಯಾ ನೋಡಿ ಕಲಿಯಿರಿ ಎಂದು ವ್ಯಂಗ್ಯ ಮಾಡುತ್ತಾರೆ.

    ಜೊತೆಗೆ ಮಂಜು ತುಲಾಭಾರ ಸಂದರ್ಭದಲ್ಲಿ ಶಮಂತ್ ಬೀನ್ ಬ್ಯಾಗ್ ಯಾಕೆ ಇಟ್ಟರು ಎಂಬ ವಿಚಾರ ನನಗೆ ಈಗ ತಿಳಿಯುತ್ತಿದೆ ಎಂದು ಕಿಚ್ಚ ಹಾಸ್ಯ ಮಾಡಿದರು. ಈ ವೇಳೆ ಮನೆ ಮಂದಿಯೆಲ್ಲಾ ಚಪ್ಪಾಳೆ ತಟ್ಟುತ್ತಾ, ಶಿಳ್ಳೆ ಹೊಡೆದು ಹಾಸ್ಯದ ಹೊನಲಿನಲ್ಲಿ ತೇಲಿದ್ರು.

  • ಬಿಗ್‍ಬಾಸ್ ಮನೆಯಲ್ಲಿ ನಡಿತು ಮಂಜು ತುಲಾಭಾರ!

    ಬಿಗ್‍ಬಾಸ್ ಮನೆಯಲ್ಲಿ ನಡಿತು ಮಂಜು ತುಲಾಭಾರ!

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಾಗಿನಿಂದಲೂ ದೊಡ್ಮನೆಯಲ್ಲಿ ಹಳ್ಳಿಹೈದ ಮಂಜುದೇ ಹವಾ. ದೊಡ್ಮನೆಗೆ ಬಂದ ಕೆಲವೇ ದಿನಗಳಲ್ಲಿ ದಿವ್ಯಾ ಸುರೇಶ್‍ರನ್ನು ಪಟಾಯಿಸಿದ್ದ ಮಂಜು, ಮನೆಮಂದಿ ಮನಸ್ಸನ್ನು ಗೆದ್ದಿದ್ದಾರೆ. ಎಲ್ಲೆ ಹೋದರೂ, ಬಂದರೂ ಮಂಜು ಜಪ ಮಾಡುವ ದೊಡ್ಮನೆ ಸದಸ್ಯರು, ನಿಜಕ್ಕೂ ಮಂಜುರನ್ನು ಎಷ್ಟು ಇಷ್ಟಪಡುತ್ತಾರೆ ಎಂದು ಕಿಚ್ಚ ತುಲಾಭಾರ ಕಾರ್ಯಕ್ರಮ ನಡೆಸಿದ್ದಾರೆ.

    ಅದರ ಅನುಸಾರ ತಕ್ಕಡಿಯ ಒಂದು ಭಾಗದಲ್ಲಿ ಮಂಜು ಕುಳಿತುಕೊಳ್ಳುತ್ತಾರೆ. ಇನ್ನೊಂದು ಭಾಗದಲ್ಲಿ ಮನೆಯ ಸದಸ್ಯರು ಬಹಳ ಇಷ್ಟಪಡುವಂತಹ ವಸ್ತುಗಳನ್ನು ತಂದು ಅದರೊಳಗೆ ಇಡಬೇಕು. ಅದು ವಸ್ತುವಾದರೂ ಸರಿ, ವ್ಯಕ್ತಿಯಾದರೂ ಸರಿ ಮತ್ತೆ ನಿಮಗೆ ವಾಪಸ್ ಸಿಗಲ್ಲ ಅಂತ ಸುದೀಪ್ ಸೂಚಿಸುತ್ತಾರೆ.

    ಅದರಂತೆ ರಾಜೀವ್, ಅರವಿಂದ್ ತಾವು ಇಷ್ಟಪಡುವಂತಹ ಡಂಬಲ್ಸ್ ಹಾಕುತ್ತಾರೆ. ನಿಧಿ ಬೆಲ್ಟ್, ವೈಷ್ಣವಿ ಯೋಗ ಮ್ಯಾಟ್, ವಿಶ್ವನಾಥ್ ಶೂ, ರಘು ಪಫ್ಯೂಮ್, ಶುಭ ಪೂಂಜಾ ಬಾಯಿಲ್ಡ್ ರೈಸ್, ಪ್ರಶಾಂತ್ ಸಂಬರ್ಗಿ ಕಾಫಿ ಕಪ್, ದಿವ್ಯಾ ಉರುಡುಗ ಜಾಕೆಟ್ ಹಾಗೂ ಶೂ, ಗೀತಾ ಡ್ರಸ್, ಶಂಕರ್ ಅಶ್ವತ್ ಕರ್ಪೂರ, ಶಮಂತ್ ಭೀಮ್ ಬ್ಯಾಗ್, ಚಂದ್ರಕಲಾ ಟೀ ಕಪ್ ಇಡುತ್ತಾರೆ. ಆದರೆ ಎಲ್ಲರ ಮಧ್ಯೆ ದಿವ್ಯಾ ಸುರೇಶ್ ಮಾತ್ರ ನಾನು ಶಮಂತ್‍ನನ್ನು ಆ ಸ್ಥಳದಲ್ಲಿ ಕೂರಿಸಲು ಇಷ್ಟಪಡುತ್ತೇನೆ. ನನಗೆ ಅವರೆಂದರೆ ಇಷ್ಟವಿಲ್ಲ ಎಂದು ನೇರವಾಗಿ ನುಡಿಯುತ್ತಾರೆ.

    ಬಳಿಕ ನೀವು ಹಾಕಿರುವ ವಸ್ತುಗಳನ್ನು ಮತ್ತೆ ಉಪಯೋಗಿಸುವಂತಿಲ್ಲ ಎಂದು ಕಿಚ್ಚ ಸೂಚಿಸಿದಾಗ, ಅರವಿಂದ್ ನನಗೆ ಡಂಬಲ್ಸ್ ಎಂದರೆ ಬಹಳ ಇಷ್ಟ. ಒಂದು ದಿನ ಡಂಬಲ್ಸ್ ಇಲ್ಲದೇ ವರ್ಕ್ ಔಟ್ ಮಾಡದಿರಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಹಿಂಪಡೆಯುತ್ತೇನೆ ಎಂದು ಹೇಳುತ್ತಾರೆ. ಶುಭ ಪೂಂಜಾ ಕೂಡ ನನಗೆ ಬಾಯಿಲ್ಡ್ ರೈಸ್ ಅಂದರೆ ಇಷ್ಟ ಹಾಗಾಗಿ ಅದನ್ನು ಹಿಂಪಡೆದು ಅದರ ಬದಲಿಗೆ ಶೂ ಇಡುತ್ತೇನೆ ಎಂದು ಹೇಳುತ್ತಾರೆ.

    ಹೀಗೆ ಮನೆಯ ಸದಸ್ಯರು ಮಂಜುರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುವುದಕ್ಕೆ ತಾವು ಇಷ್ಟಪಡುವಂತಹ ವಸ್ತುಗಳನ್ನು ತಕ್ಕಡಿಯಲ್ಲಿ ಇಡುವ ಮೂಲಕ ತೋರಿಸುತ್ತಾರೆ. ಕೊನೆಗೆ ಸುದೀಪ್ ಅವರು ಮಂಜು ಅವರನ್ನು ತಕ್ಕಡಿಯಿಂದ ನಿದಾನವಾಗಿ ಇಳಿಯುವಂತೆ ಹೇಳಿದ್ದು, ಎಲ್ಲರೂ ಒಟ್ಟಾಗಿ ಕುಳಿತುಕೊಳ್ಳುತ್ತಾರೆ.

  • ಮರು ಸೃಷ್ಟಿಯಾಯ್ತು ದಿವ್ಯಾ ಅರವಿಂದ್ ಲವ್ ಸ್ಟೋರಿ

    ಮರು ಸೃಷ್ಟಿಯಾಯ್ತು ದಿವ್ಯಾ ಅರವಿಂದ್ ಲವ್ ಸ್ಟೋರಿ

    ಬಿಗ್‍ಬಾಸ್ ಮನೆಯಲ್ಲಿ ಇದೀಗ ಹೊಸ ಲವ್ ಸ್ಟೋರಿಯೊಂದು ಭಾರೀ ಸದ್ದು ಮಾಡುತ್ತಿದೆ. ಇಷ್ಟು ದಿನ ಮಂಜು ಹಾಗೂ ದಿವ್ಯಾ ಸುರೇಶ್ ನಡುವಿನ ಪ್ರೇಮ್‍ಕಹಾನಿ ಎಲ್ಲರ ಗಮನ ಸೆಳೆದಿತ್ತು. ಇದೀಗ ಅರವಿಂದ್ ಹಾಗೂ ದಿವ್ಯಾ ಉರುಡುಗ ಮಧ್ಯೆ ಲವ್ವಿಡವ್ವಿ ಶುರುವಾಗಿದೆ ಎಂದು ಮನೆ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

    ಈ ಮಧ್ಯೆ ನಿನ್ನೆ ನಡೆದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್, ದಿವ್ಯಾ ಉರುಡುಗ ಹಾಗೂ ಅರವಿಂದ್ ಕಾಲೆಳೆದಿದ್ದಾರೆ. ಕಳೆದ ವಾರ ಬಿಗ್‍ಬಾಸ್, ಜೋಡಿ ಟಾಸ್ಕ್ ವೊಂದನ್ನು ನೀಡಿ ತಮ್ಮ ಜೋಡಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುವಂತೆ ಮನೆಯ ಸದಸ್ಯರಿಗೆ ಸೂಚಿಸಿದ್ದರು. ಅದು ಒಂದು ರೀತಿ ಹೆಣ್ಣು ಮಕ್ಕಳಿಗೆ ಸ್ವಯಂವರದಂತೆಯೇ ಇತ್ತು. ಅಂದು ಯಾವೆಲ್ಲಾ ಸದಸ್ಯರು ಯಾವ ರೀತಿಯಲ್ಲಿ ತಮ್ಮ ಜೋಡಿಗಳನ್ನು ಆಯ್ಕೆ ಮಾಡಿಕೊಂಡರು ಹಾಗೂ ರಿಜೆಕ್ಟ್ ಮಾಡಿದರು ಎಂಬುದನ್ನು ಚಂದ್ರಕಲಾ ಹಾಗೂ ದಿವ್ಯಾ ಸುರೇಶ್ ಮರುಸೃಷ್ಟಿಸುವಂತೆ ಕಿಚ್ಚ ತಿಳಿಸುತ್ತಾರೆ.

    ನಂತರ ದಿವ್ಯಾ ಸುರೇಶ್ ಕುಳಿತುಕೊಂಡು ದಿವ್ಯಾ ಉರುಡುಗರಂತೆ ನಟಿಸಿದರೆ, ಚಂದ್ರಕಲಾ ಮನೆಯ ಪುರುಷ ಸದಸ್ಯರ ಮಿಮಿಕ್ರಿ ಮಾಡುತ್ತಾರೆ. ರಾಜೀವ್ ನಿಮ್ಮ ಆಯ್ಕೆ ಯಾರು ಎಂದು ಕೇಳಿದಾಗ ಚಂದ್ರಕಲಾ ಶಮಂತ್, ಪ್ರಶಾಂತ್, ಮಂಜು ಮಿಮಿಕ್ರಿ ಮಾಡುತ್ತಾರೆ. ಇದಕ್ಕೆ ದಿವ್ಯಾ ಸುರೇಶ್ ಕುಳಿತುಕೊಂಡು, ದಿವ್ಯಾ ಉರುಡುಗ ಹೇಗೆ ನೋ, ಸಾರಿ ಎಂದು ಹೇಳುವ ಮೂಲಕ ತಲೆ ಬಗ್ಗಿಸಿಕೊಂಡು ಒಬ್ಬೊಬ್ಬರಿಗೂ ಹೇಗೆ ರಿಯಾಕ್ಟ್ ಮಾಡುತ್ತಾರೆ ಎಂದು ತೋರಿಸುತ್ತಾರೆ. ಬಳಿಕ ಅರವಿಂದ್ ಬರುವುದಕ್ಕೂ ಮುನ್ನವೇ ಜೋಡಿಯಾಗಬೇಕಿದ್ದು ತಲೆಯಲ್ಲಿಟ್ಟುಕೊಂಡಿದ್ದ ದಿವ್ಯಾ ಉರುಡುಗ, ಅರವಿಂದ್ ಬಂದ ತಕ್ಷಣ ಯೆಸ್ ಎಂದು ಹೇಗೆ ಓಡಿ ಹೋಗುತ್ತಾರೆ ಎಂದು ದಿವ್ಯಾ ಸುರೇಶ್ ಮಿಮಿಕ್ರಿ ಮಾಡುತ್ತಾರೆ. ಇದನ್ನು ಕಂಡು ಮನೆಮಂದಿ ಜೊತೆ ಕಿಚ್ಚ ಕೂಡ ಸಿಕ್ಕಾಪಟ್ಟೆ ನಗುತ್ತಾರೆ.

    ಈ ಬಗ್ಗೆ ಕಿಚ್ಚ ನೋ ಎಂದಿದ್ದಕ್ಕೆ ಕಾರಣವೇನು ಎಂದು ದಿವ್ಯಾ ಉರುಡುಗಗೆ ಪ್ರಶ್ನಿಸುತ್ತಾರೆ. ಆಗ ದಿವ್ಯಾ, ಬಿಗ್‍ಬಾಸ್ ಟಾಸ್ಕ್ ನೀಡಿದಾಗ ರಘು ಹೊರತು ಪಡಿಸಿ ಎಲ್ಲರು ನನ್ನ ಬಳಿ ಬಂದು ಜೋಡಿಯಾಗುವಂತೆ ಕೇಳಿಕೊಂಡರು. ನಾನು ಮಂಜು ಹಾಗೂ ಅರವಿಂದ್ ಇಬ್ಬರನ್ನು ನೀವು ಯಾರಿಗೆ ಆದ್ಯತೆ ನೀಡುತ್ತೀರಾ ಎಂದು ಕೇಳಿದ್ದೆ. ಈ ವೇಳೆ ಮಂಜು ನನಗೆ ಇಬ್ಬರು ದಿವ್ಯಾರಲ್ಲಿ ಯಾರಾದರೂ ಓಕೆ ಎಂದಿದ್ದರು. ಆದರೆ ಅರವಿಂದ್ ಮಾತ್ರ ನೀನೇ ಎಂದು ಹೇಳುವ ಮೂಲಕ ನನಗೆ ಆದ್ಯತೆ ನೀಡಿದರು. ಹಾಗಾಗಿ ಅರವಿಂದ್‍ಗೆ ಜೋಡಿಯಾಗಿ ಹೋಗಬೇಕು ಎಂದು ನಿರ್ಧರಿಸಿದೆ ಎಂದು ಹೇಳಿದರು.

  • ಚಮಚದಿಂದ ಕಪ್‍ಗೆ ನೀರು ತುಂಬಿಸಿದ ನಿಧಿ ಸುಬ್ಬಯ್ಯ!

    ಚಮಚದಿಂದ ಕಪ್‍ಗೆ ನೀರು ತುಂಬಿಸಿದ ನಿಧಿ ಸುಬ್ಬಯ್ಯ!

    ಕಳೆದ ವಾರ ಬಿಗ್‍ಬಾಸ್ ಮನೆಯ ಸದಸ್ಯರಿಗೆ ಚಂಡೇಶ್ವರ ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನೀಡಿದ್ದರು. ಅದರಂತೆ ಬಜರ್ ಆದ ತಕ್ಷಣ ಪ್ಲಾಸ್ಮದಲ್ಲಿ ಬರುವ ಹೆಸರಿನ ಒಬ್ಬ ಸದಸ್ಯ ಗಾರ್ಡನ್ ಏರಿಯಾಗೆ ಹೋಗಿ, ಪೈಪ್‍ಲೈನ್‍ನಲ್ಲಿ ಬರುವ ಚೆಂಡನ್ನು ಹಿಡಿಯಬೇಕಿತ್ತು. ಆ ಚೆಂಡಿನಲ್ಲಿ ಒಂದು ಲಕ್ಷುರಿ ಐಟಂ ಹೆಸರಿದ್ದು, ಚೆಂಡನ್ನು ಸದಸ್ಯ ಹಿಡಿದರೆ ಅದರಲ್ಲಿರುವ ಐಟಂ ಮನೆಗೆ ದೊರೆಯುತ್ತದೆ. ಇಲ್ಲದಿದ್ದರೆ ಮನೆಯ ಸದಸ್ಯರು ಆ ಐಟಂನ್ನು ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದ್ದರು.

    ಅದರಂತೆ ಒಂದು ವಾರದಿಂದ ಬಜರ್ ಆಗಿದ ತಕ್ಷಣ ಮನೆಯ ಸದಸ್ಯರು ಚೆಂಡನ್ನು ಹಿಡಿಯಲು ಹಲವಾರು ಸರ್ಕಸ್ ನಡೆಸುತ್ತಿದ್ದಾರೆ. ಈ ವಾರ ಕೆಲವು ಸದಸ್ಯರು ಚೆಂಡನ್ನು ಹಿಡಿದಿದ್ದಾರೆ. ಇನ್ನೂ ಕೆಲವರು ಚೆಂಡನ್ನು ಹಿಡಿಯುವಲ್ಲಿ ವಿಫಲರಾಗಿ ಲಕ್ಷುರಿ ಐಟಂ ಕಳೆದುಕೊಂಡಿದ್ದಾರೆ. ಅಂತೆಯೇ ನಿಧಿಸುಬ್ಬಯ್ಯ ಹೆಸರು ಪ್ಲಾಸ್ಮದಲ್ಲಿ ಬರುತ್ತದೆ. ಈ ವೇಳೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನಿಧಿ ವೇಗವಾಗಿ ಗಾರ್ಡನ್ ಏರಿಯಾಗೆ ಓಡಿ ಹೋಗುತ್ತಾರೆ. ಎಷ್ಟೇ ವೇಗವಾಗಿ ಓಡಿದ್ರೂ ನಿಧಿ ಚೆಂಡನ್ನು ಹಿಡಿಯುವಲ್ಲಿ ವಿಫಲರಾಗುತ್ತಾರೆ.

    ಹೀಗಾಗಿ ಬಿಗ್‍ಬಾಸ್ ನಿಧಿಗೆ ವಿಭಿನ್ನವಾದ ಶಿಕ್ಷೆಯನ್ನು ನೀಡಿದ್ದಾರೆ. ಹೌದು ಚೆಂಡನ್ನು ಹಿಡಿಯುವಲ್ಲಿ ವಿಫಲವಾದ ನಿಧಿಗೆ, ಬಿಗ್‍ಬಾಸ್ ಚಮಚವನ್ನು ಬಳಸಿ ಸ್ವೀಮಿಂಗ್ ಪೂಲ್‍ನಲ್ಲಿರುವ ನೀರನ್ನು ಕಪ್ ನಲ್ಲಿರುವ ಕಪ್ಪು ಗುರುತಿನವರೆಗೂ ತುಂಬಿಸುವಂತೆ ಶಿಕ್ಷೆ ನೀಡಿದ್ದರು. ಅದರಂತೆ ಚಮಚ ಹಿಡಿದು ಸ್ವೀಮಿಂಗ್ ಪೂಲ್‍ನಲ್ಲಿರುವ ನೀರನ್ನು ಕಪ್‍ಗೆ ತುಂಬಿಸಲು ನಿಧಿ, ನಿಂತುಕೊಂಡು, ಕುಳಿತುಕೊಂಡು ಹರಸಹಾಸ ಪಡುತ್ತಿರುತ್ತಾರೆ.

    ಈ ವೇಳೆ ಮನೆಯ ಸದಸ್ಯರು ನಿಧಿಗೆ ಪ್ರೋತ್ಸಾಹಿಸುತ್ತಿದ್ದರೆ, ಮಂಜು ಮಾತ್ರ ನೀನು ನೀರು ತುಂಬಿಸಿದ ತಕ್ಷಣ ಮತ್ತೊಮ್ಮೆ ನಿನ್ನ ಹೆಸರು ಬರಬೇಕು. ಮತ್ತೆ ಚೆಂಡು ಹಿಡಿಯಲಾಗದೇ ಅಯ್ಯಯ್ಯೋ ಮತ್ತೆ ನೀರು ತಂಬಿಸಬೇಕಲ್ಲ ಎಂದು ಹೇಳಬೇಕು. ವಾರ ಪೂರ್ತಿ ಇದೇ ಟಾಸ್ಕ್ ನೀಡಬೇಕು. ಹಾಗೇನಾದರೂ ಮಾಡಿದರೆ ನಾನು ಬಹಳ ಖುಷಿ ಪಡುತ್ತೇನೆ ಎಂದು ಹಾಸ್ಯ ಮಾಡುತ್ತಾರೆ.

    ಒಟ್ಟಾರೆಯಾಗಿ ಈ ಟಾಸ್ಕ್ ನೋಡಲು ಸುಲಭವಾಗಿ ಕಂಡರು, ಅದು ಬಹಳ ಕಷ್ಟ ಎಂದು ಹೇಳಬಹುದು.

  • ಬಿಗ್‍ಬಾಸ್ ಮನೆಯಲ್ಲಿ ಮೂಡಿತು ಶಿವನ ಚಿತ್ರ!

    ಬಿಗ್‍ಬಾಸ್ ಮನೆಯಲ್ಲಿ ಮೂಡಿತು ಶಿವನ ಚಿತ್ರ!

    ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟ ಎಲ್ಲರೂ ಒಂದೊಂದು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಒಬ್ಬೊಬ್ಬರು ಒಂದೊಂದು ಟ್ಯಾಲೆಂಟ್ ಹೊಂದಿದ್ದಾರೆ. ಇಷ್ಟು ದಿನ ಲಕ್ಷುರಿ ಟಾಸ್ಕ್, ಕ್ಯಾಪ್ಟನ್ಸಿ ಟಾಸ್ಕ್, ಪಿಸಿಕಲ್ ಟಾಸ್ಕ್ ಹೀಗೆ ಹಲವು ಟಾಸ್ಕ್‍ಗಳನ್ನು ಪ್ರದರ್ಶಿಸಿದ್ದ ದೊಡ್ಮನೆ ಮಂದಿ, ನಿನ್ನೆ ನಲಿ-ಕಲಿ ಎಂಬ ಟಾಸ್ಕ್ ನೀಡಿದ್ದಾರೆ.

    ಈ ಟಾಸ್ಕ್‍ನ ಅನುಸಾರ ಮನೆಯ ಸದಸ್ಯರು ತಮ್ಮ ಜೋಡಿಗಳಿಗೆ ತಿಳಿದಿರುವ ಯಾವುದಾದರೂ ಒಂದು ಕಲೆಯನ್ನು ಹೇಳಿಕೊಡಬೇಕಿತ್ತು. ಅದರಂತೆ ಮನೆಯ ಎಲ್ಲಾ ಸದಸ್ಯರು ಒಂದೊಂದು ಕಲೆಗಳನ್ನು ತಮ್ಮ ಜೋಡಿಗಳಿಗೆ ಕಲಿಸಿ ವೇದಿಕೆ ಮೇಲೆ ಪರ್ಫಾಮ್ ಮಾಡಿದರು.

    ಈ ಮಧ್ಯೆ ಮನೆಯ ಎಲ್ಲಾ ಸದಸ್ಯರ ಪೈಕಿ ಗಮನ ಸೆಳೆದಿದ್ದು ಅಂದರೆ ಶಿವನ ಚಿತ್ರ. ಹೌದು ನಿನ್ನೆ ಮನೆಯ ಸದಸ್ಯರು, ಡ್ಯಾನ್ಸ್, ಸಾಂಗ್, ಡ್ರಾಮಾ ಹೀಗೆ ಹಲವು ರೀತಿಯ ಕಲೆಗಳನ್ನು ಪ್ರದರ್ಶಿಸಲು ನಿರ್ಧರಿಸಿದರೆ, ಅರವಿಂದ್, ದಿವ್ಯಾ ಉರುಡುಗ ಜೋಡಿ ಆಯ್ಕೆ ಮಾಡಿಕೊಂಡಿದ್ದು ಶಿವ.

    ಶ್ರೀ ಮಂಜುನಾಥ ಸಿನಿಮಾದ ಓಂ ಮಹಾಕಾರ ದೀಪಂ ಶಿವ ಓಂ… ಎಂಬ ಹಾಡು ಆರಂಭವಾಗುತ್ತಿದ್ದಂತೆ ಪೆನ್ಸಿಲ್ ಹಿಡಿದು ಅರವಿಂದ್ ಚಿತ್ರ ಬಿಡಿಸಲು ಆರಂಭಿಸುತ್ತಾರೆ. ಈ ವೇಳೆ ದಿವ್ಯಾ ಉರುಡುಗ ಕ್ರಯೋನ್ಸ್ ಮೂಲಕ ಚಿತ್ರಕ್ಕೆ ಶೇಡ್ ಮಾಡುತ್ತಾ, ಬಣ್ಣ ಹಚ್ಚುತ್ತಾ ಬರುತ್ತಾರೆ. ಹಾಡು ಪೂರ್ಣಗೊಳ್ಳುವಷ್ಟರಲ್ಲಿ ಶಿವನ ಚಿತ್ರವನ್ನು ಬರೆದು ಮುಗಿಸುತ್ತಾರೆ. ಈ ವೇಳೆ ಮನೆಯ ಎಲ್ಲಾ ಸದಸ್ಯರು ಎದ್ದು ನಿಂತು ಭಕ್ತಿಯಿಂದ ಶಿವನಿಗೆ ನಮಸ್ಕರಿಸಿ ಹರಹರ ಮಹಾದೇವ್ ಎಂದು ಘೋಷಣೆ ಕೂಗುತ್ತಾರೆ.

    ನಂತರ ಚಿತ್ರ ಕುರಿತಂತೆ ಮಾತನಾಡಿದ ಅರವಿಂದ್ ಮೊದಲಿಗೆ ನಾವು ಈ ಚಿತ್ರವನ್ನು ಒಂದು ಟಿಶ್ಯು ಪೇಪರ್ ಮೇಲೆ ಹೈಲೈನರ್ ಬಳಸಿ ಬರೆಯಲು ಆರಂಭಿಸಿದೆವು. ದಿವ್ಯಾ ಈ ಚಿತ್ರವನ್ನು ಪ್ರೊಫೆಷನಲಿ ನನಗೆ ಬಹಳ ಸುಲಭವಾಗಿ ಹೇಳಿಕೊಟ್ಟರು. ಇದರಿಂದಾಗಿ ನನಗೆ ಶಿವನ ಚಿತ್ರ ಬಿಡಿಸಲು ಸಾಧ್ಯವಾಯಿತು. ಒಳ್ಳೆ ಟೀಚರ್ ಸಿಕ್ಕಿದ್ದರಿಂದ ಒಳ್ಳೆ ರಿಸಲ್ಟ್ ಬಂದಿದೆ ಎಂದು ಹೇಳುತ್ತಾರೆ.

    ಇದಕ್ಕೆ ದಿವ್ಯಾ ಬೈಕ್ ಹ್ಯಾಂಡಲ್ ಹಿಡಿದುಕೊಂಡವರಿಗೆ ಸಡನ್ ಆಗಿ ಕ್ರಯೋನ್ಸ್, ಪೆನ್ಸಿಲ್ ಕೊಟ್ಟರೆ ಬಹಳ ಕಷ್ಟ. ಆದರೂ ಏನೇ ಹೇಳಿಕೊಟ್ಟರು ಅರವಿಂದ್ ಬಹಳ ಸುಲಭವಾಗಿ ಗ್ರಹಿಸಿಕೊಳ್ಳುವ ಶಕ್ತಿ ಹೊಂದಿದ್ದಾರೆ ಎಂದು ಹೇಳುತ್ತಾ, ಕೊನೆಯಲ್ಲಿ ಬಿಡಿಸಿದ ಚಿತ್ರವನ್ನು ದಿವ್ಯಾ ಅರವಿಂದ್‍ಗೆ ಉಡುಗೊರೆಯಾಗಿ ನೀಡಿದರು.

    ಒಟ್ಟಾರೆ ಬಿಗ್‍ಬಾಸ್ ವೇದಿಕೆ ಮನೆಯ ಸದಸ್ಯರಿಗೆ ತಮ್ಮ ಟ್ಯಾಲೆಂಟ್ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು.

  • ಅರವಿಂದ್ ಟಿ-ಶರ್ಟ್ ಬಿಚ್ಚಿ ದಿವ್ಯಾ ಉರುಡಗಗೆ ತೋರಿಸಿದ್ದೇನು?

    ಅರವಿಂದ್ ಟಿ-ಶರ್ಟ್ ಬಿಚ್ಚಿ ದಿವ್ಯಾ ಉರುಡಗಗೆ ತೋರಿಸಿದ್ದೇನು?

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಗದಿಂದಲೂ ಏಕಾಂಗಿಯಾಗಿ ಅಥವಾ ಟಿಂ ಮೂಲಕ ಆಟವಾಡುತ್ತಿದ್ದ ಸ್ಪರ್ಧಿಗಳು, ಈ ವಾರ ಜೋಡಿಗಳಾಗಿ ಆಟವಾಡುತ್ತಿದ್ದಾರೆ. ಇದೀಗ ಮನೆಯ ಎಲ್ಲಾ ಜೋಡಿಗಳ ಪೈಕಿ ಸ್ಟ್ರಾಂಗೆಸ್ಟ್ ಜೋಡಿ ಎಂದರೆ ಅದು ದಿವ್ಯಾ ಉರುಡುಗ ಹಾಗೂ ಅರವಿಂದ್. ಈ ವಾರ ಜೋಡಿಯಾದ ಇವರಿಬ್ಬರ ನಡುವೆ ಇದೀಗ ಬಿಗ್‍ಬಾಸ್ ಮನೆಯಲ್ಲಿ ಸ್ವಲ್ಪ ಪಿಸು ಪಿಸು ಮಾತು ನಡೆಯುತ್ತಿದೆ.

    ನಿನ್ನೆ ದೊಡ್ಮನೆ ಬೆಡ್ ರೂಮ್ ಏರಿಯಾದಲ್ಲಿ ಏಕಾಂಗಿಯಾಗಿ ಕುಳಿತಿದ್ದ ಈ ಜೋಡಿ ಒಬ್ಬರಿಗೊಬ್ಬರು ತಮ್ಮ ದೇಹದಲ್ಲಿರುವ ಮಚ್ಚೆಗಳ ಬಗ್ಗೆ ಚರ್ಚಿಸಿದ್ದಾರೆ. ನಿಮ್ಮ ಕೈನಲ್ಲಿ ಇದೊಂದೆ ಟ್ಯಾಟೂ ಇರುವುದಾ ಎಂದು ದಿವ್ಯಾ ಅರವಿಂದ್‍ಗೆ ಕೇಳುತ್ತಾರೆ. ಈ ವೇಳೆ ಅರಂವಿದ್ ಇಲ್ಲ ಭುಜದ ಮೇಲೆ ಸ್ಟಾರ್ ಟ್ಯಾಟುವೊಂದಿದೆ ಎಂದು ತೋರಿಸುತ್ತಾರೆ. ಅದಕ್ಕೆ ದಿವ್ಯಾ ನಾನು ಕೇವಲ ಒಂದು ಟ್ಯಾಟೂ ಮಾತ್ರ ಹಾಕಿಸಿಕೊಂಡಿದ್ದೇನೆ ಎನ್ನುತ್ತಾರೆ.

    ಬಳಿಕ ನನ್ನ ಎರಡು ಕಿವಿಗಳಲ್ಲಿ ಎರಡು ಹೋಲ್‍ಗಳಿವೆ ಎಂದು ದಿವ್ಯಾ ಹೇಳಿದಾಗ, ಅರವಿಂದ್ ನನ್ನ ಒಂದು ಕಿವಿಯಲ್ಲಿ ಒಂದು ಹೋಲ್ ಮತ್ತೊಂದರಲ್ಲಿ ಎರಡು ಹೋಲ್‍ಗಳಿಗೆ ಎನ್ನುತ್ತಾರೆ. ಮಚ್ಚೆ ಬಗ್ಗೆ ದಿವ್ಯಾ ಪ್ರಶ್ನಿಸಿದಾಗ, ಅರವಿಂದ್ ನನ್ನ ಬೆನ್ನ ಹಿಂದೆ ಒಂದು ಮಚ್ಚೆ ಇದೆ. ನನ್ನ ಮೊಣ ಕೈ ಮೇಲೆ ಹುಟ್ಟಿದ ಮಚ್ಚೆ ಇದೆ ಎಂದು ಹೆಳುತ್ತಾ, ಟಿ-ಶರ್ಟ್ ಬಿಚ್ಚಿ ಅರವಿಂದ್ ದಿವ್ಯಾ ಉರುಡಗೆ ಮಚ್ಚೆ ತೋರಿಸಿದರು. ದಿವ್ಯಾ ಹಾ ಹೌದು ನಿಮಗೆ ಮೇಲೊಂದು ಕೆಳಗೊಂದು ಎರಡು ಮಚ್ಚೆ ಬೆನ್ನ ಹಿಂದೆ ಇದೆ ಎಂದು ಹೇಳುತ್ತಾರೆ. ನಂತರ ದಿವ್ಯಾ ನನ್ನ ಮುಖದ ಮೇಲೊಂದು ಮಚ್ಚೆ, ಕೈಬೆರಳ ಮೇಲೊಂದು, ಭುಜದ ಮೇಲೊಂದು ಮಚ್ಚೆ ಎಂದು ಹೇಳುತ್ತಾರೆ.

    ನಂತರ ನಾನು ನಾಲ್ಕನೇ ತರಗತಿ ಇದ್ದಾಗ ಶಾಟ್‍ಪೂಟ್ ನನ್ನ ಕಾಲಿನ ಮೇಲೆ ಬಿದ್ದು ಕಾಲು ಬೆರಳಿಗೆ ಆಪರೇಷನ್ ಆಗಿದೆ ಎಂದು ದಿವ್ಯಾ ಹೇಳುತ್ತಾರೆ. ಆಗ ಅರವಿಂದ್ ನನ್ನ ದೇಹದಲ್ಲಿ 16 ಸ್ಕ್ರೂ, ಒಂದು ರಾಡ್ ಹಾಗೂ ಒಂದು ಪ್ಲೇಟ್ ಇದೆ ಎಂಬ ವಿಚಾರವನ್ನು ಬಹಿರಂಗ ಪಡಿಸುತ್ತಾರೆ. ಇದನ್ನು ಕೇಳಿ ದಿವ್ಯಾ ಅಚ್ಚರಿಯಿಂದ ನೀವು ಮನುಷ್ಯರ ಅಥವಾ ರೋಬೋಟ್ ಹಾ ಎಂದು ಹೇಳುತ್ತಾ ಹಾಸ್ಯ ಮಾಡಿ ಅದೇ ಒಂದು ಕೆಜಿ ಇದ್ಯಾ ಎಂದು ಪ್ರಶ್ನಿಸುತ್ತಾರೆ.

    ಒಟ್ಟಾರೆ ಇಷ್ಟು ದಿನ ಮಂಜು ದಿವ್ಯಾ ಸುರೇಶ್ ಜೋಡಿ ಸುದ್ದಿಯಾಗಿದ್ದ ದೊಡ್ಮನೆಯಲ್ಲಿ ಇನ್ಮುಂದೆ ಅರವಿಂದ್ ದಿವ್ಯಾ ಸದ್ದು ಮಾಡುವ ಎಲ್ಲಾ ಲಕ್ಷಣಗಳು ಕಾಣಬರುತ್ತಿದೆ ಎಂದರೆ ತಪ್ಪಾಗಲಾರದು.

  • ಪ್ರಶಾಂತ್ ಸಂಬರಗಿಯಿಂದ ದೊಡ್ಮನೆಯಲ್ಲಿ ಬರುತ್ತಾ ಅಪ್ಪಿಕೊಳ್ಳಲು ರೂಲ್ಸ್!

    ಪ್ರಶಾಂತ್ ಸಂಬರಗಿಯಿಂದ ದೊಡ್ಮನೆಯಲ್ಲಿ ಬರುತ್ತಾ ಅಪ್ಪಿಕೊಳ್ಳಲು ರೂಲ್ಸ್!

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಗಲಿಂದಲೂ ಪ್ರತಿ ಸೀಸನ್‍ನಲ್ಲಿ ಕೂಡ ಎಲ್ಲಾ ಸ್ಪರ್ಧಿಗಳು ಒಬ್ಬರಿಗೊಬ್ಬರು ತಬ್ಬಿಕೊಳ್ಳುವುದು ಸಹಜ. ಆದರೆ ಯಾವ ಸೀಸನ್‍ನಲ್ಲಿಯೂ ಸದ್ದು ಮಾಡಿರದ ಅಪ್ಪುಗೆಯ ವಿಚಾರ ಬಿಗ್‍ಬಾಸ್-8 ಆರಂಭಗೊಂಡ ಬಳಿಕ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಪ್ರಶಾಂತ್ ಸಂಬರಗಿಯ ಅಪ್ಪುಗೆ ನಿನ್ನೆ ದೊಡ್ಡ ಸುದ್ದಿಯಾಗಿದೆ.

    ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್, ಪ್ರಶಾಂತ್ ಸಂಬರಗಿಯವರೇ ನೀವು ಎಷ್ಟು ಜನ ಹತ್ತಿರ ತಬ್ಬಿಕೊಂಡು ಮಾತನಾಡಿತ್ತೀರಾ? ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರಶಾಂತ್ ನಾನು ಆಲ್ ಮೋಸ್ಟ್ ಎಲ್ಲರನ್ನು ತಬ್ಬಿಕೊಂಡೆ ಮಾತನಾಡುತ್ತೇನೆ ಎಂದು ಉತ್ತರಿಸುತ್ತಾರೆ. ಇದಕ್ಕೆ ಕಿಚ್ಚ, ನೀವು ತಬ್ಬಿಕೊಳ್ಳುವಾಗ ಕೆಲವರನ್ನು 3-3 ನಿಮಿಷ ತಬ್ಬಿಕೊಳ್ಳುತ್ತೀರಾ, ಕೆಲವರನ್ನು ಸೈಡಿನಿಂದ ತಬ್ಬಿಕೊಳ್ಳುತ್ತೀರಾ, ಮತ್ತೆ ಕೆಲವರನ್ನು ತಬ್ಬಿಕೊಳ್ಳಬೇಕಲ್ಲ ಎಂದು ತಬ್ಬಿಕೊಳ್ಳುತ್ತೀರಾ, ಇನ್ನೂ ಕೆಲವೊಮ್ಮೆ ಒಬ್ಬರನ್ನು ತಬ್ಬಕೊಂಡೆನಲ್ಲ ಎಂದು ಮತ್ತೊಬ್ಬರನ್ನು ತಬ್ಬಿಕೊಳ್ಳುವ ಪರಿಸ್ಥಿತಿಯಿಂದ ಕೂಡ ತಬ್ಬಿಕೊಂಡಿರುವುದನ್ನು ಕೂಡ ನೋಡಿದ್ದೇವೆ. ಆದರೆ ಕೆಲವರನ್ನು ತಬ್ಬಿಕೊಂಡರೆ ನೀವು ಬಿಡುವುದೇ ಇಲ್ಲ. ತಬ್ಬಿಸಿಕೊಳ್ಳುವವರಿಗೆ ಯಾವುದೇ ರೀತಿಯ ಅಭ್ಯಂತರವಿಲ್ಲ. ಇನ್ನೂ ನಮಗೆ ಏಕೆ ತೊಂದರೆ, ನಮಗೆ ಯಾವುದೇ ರೀತಿಯ ಹೊಟ್ಟೆ ಕಿಚ್ಚಿಲ್ಲ. ತಬ್ಬಿಕೊಳ್ಳಿ ಯಾವುದೇ ಸಮಸ್ಯೆ ಇಲ್ಲ. ಆದರೆ ತಬ್ಬಿಕೊಂಡಾಗ ನೀವು ಮಾತನಾಡುತ್ತಿರಲ್ಲ ಅದೇ ಸಮಸ್ಯೆ. ಕಾರಣ ಒಬ್ಬರಿಗೊಬ್ಬರು ತಬ್ಬಿಕೊಂಡಾಗ ಮೈಕ್ ಒತ್ತಿರುತ್ತದೆ. ಏನು ಮಾತನಾಡಿಕೊಳ್ಳುತ್ತೀರಾ ಎಂದು ಕೇಳಿಸುವುದಿಲ್ಲ. ಆಗ ಸಮಸ್ಯೆ ಪ್ರಾರಂಭವಾಗುತ್ತದೆ ಎಂದು ಹಾಸ್ಯಮಯವಾಗಿ ನುಡಿದರು.

    ಇಲ್ಲಿಯವರೆಗೂ ಬಿಗ್‍ಬಾಸ್ 2 ಸೆಕೆಂಡ್‍ಗೂ ಹೆಚ್ಚು ಕಾಲ ತಬ್ಬಿಕೊಳ್ಳುವ ಹಾಗಿಲ್ಲ ಎಂಬ ನಿಯಮವನ್ನು ಜಾರಿಗೊಳಿಸಿಲ್ಲ. ಬಹುಶಃ ಅಂತಹ ನಿಯಮವನ್ನು ತರುವ ಹಾಗೇ ಮಾಡಬೇಡಿ. ಇಷ್ಟು ಸೀಸನ್‍ಗಳಲ್ಲಿ ಆ ರೀತಿಯ ನಿಯಮಗಳು ಇಲ್ಲಿಯವರೆಗೂ ಬಂದಿಲ್ಲ. ಬಹಳ ಜನ ಒಬ್ಬರಿಗೊಬ್ಬರು ತಬ್ಬಿಕೊಂಡಿದ್ದಾರೆ. ಆದರೆ ಈ ರೇಂಜ್‍ಗೆ ಯಾರು ತಬ್ಬಿಕೊಂಡಿಲ್ಲ. ಹೊಸ ನಿಯಮ ತರುವುದು ನನಗೂ ಸಹ ಇಷ್ಟವಿಲ್ಲ. ನೀವು ತಬ್ಬಿಕೊಳ್ಳಿ, ತಬ್ಬಿಸಿಕೊಳ್ಳುವವರು ತಬ್ಬಿಸಿಕೊಳ್ಳಿ. ಆದರೆ ಇಬ್ಬರೂ ಕೂಡ ಮಾತನಾಡಬೇಡಿ. ಮಾತನಾಡಿದರೆ ಅದು ನಮಗೆ ನೀವು ಏನು ಮಾತನಾಡುತ್ತಿದ್ದೀರಾ ಎಂದು ತಿಳಿಯದೇ ಸಮಸ್ಯೆಯಾಗುತ್ತದೆ ಎಂದರು.

    ನನಗೆ ಕೊನೆಯದಾಗಿ ಯಾರನ್ನು ಅಷ್ಟು ಹೊತ್ತು ತಬ್ಬಿಕೊಂಡೇ ಎಂಬ ಬಗ್ಗೆ ತಿಳಿದಿಲ್ಲ. ಆದರೆ ನಿಮ್ಮಲ್ಲಿ ಆ ಕಲೆ ಇದೆ. ಇರಲಿ, ತಬ್ಬಿಕೊಳ್ಳಿ. ಆದರೆ ತಬ್ಬಿಕೊಂಡು ಬಿಟ್ಟ ನಂತರ ಮಾತನಾಡಿ ಎಂದು ಕಿಚ್ಚ ಪ್ರಶಾಂತ್ ಸಂಬರಗಿಗೆ ವ್ಯಂಗ್ಯ ಮಾಡಿದರು.

    ಒಟ್ಟಾರೆ ಕಿಚ್ಚ ಸುದೀಪ್ ಹಾಗೂ ಪ್ರಶಾಂತ್ ಸಂಬರಗಿ ಜೊತೆಗಿನ ಹಾಸ್ಯಮಯ ಮಾತುಕತೆ ನೋಡಿ ಮನೆ ಮಂದಿಯೆಲ್ಲಾ ಫುಲ್ ಎಂಜಾಯ್ ಮಾಡುತ್ತಾ, ಜೋರಾಗಿ ನಗುತ್ತಾ, ಚಪ್ಪಾಳೆ ತಟ್ಟಿದರು.

  • ಜೀವನದಲ್ಲೇ ಇದು ನನ್ನ ಮೊದಲ ಮೆಡಲ್ : ಲ್ಯಾಗ್ ಮಂಜು

    ಜೀವನದಲ್ಲೇ ಇದು ನನ್ನ ಮೊದಲ ಮೆಡಲ್ : ಲ್ಯಾಗ್ ಮಂಜು

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಇನ್ನೇನು 2 ವಾರ ಪೂರ್ಣಗೊಳ್ಳುತ್ತಿದೆ. ಈ ವಾರದ ಅತ್ಯುತ್ತಮ ಮತ್ತು ಕಳಪೆ ಪ್ರದರ್ಶನ ತೋರಿಸಿದ ಸ್ಪರ್ಧಿಗಳನ್ನು ಸ್ವತಃ ಮನೆಯ ಸದಸ್ಯರು ಆಯ್ಕೆ ಮಾಡಿದರು.

    ಬಿಗ್‍ಬಾಸ್, ಮನೆಯ ಸದಸ್ಯರ ಪೈಕಿ ಈ ವಾರ ಉತ್ತಮ ಪ್ರದರ್ಶನ ನೀಡಿದ ಒಬ್ಬ ಸದಸ್ಯನ ಹೆಸರನ್ನು ಮನೆಯ ಎಲ್ಲ ಸದಸ್ಯರು ಚರ್ಚಿಸಿ ಒಮ್ಮತದಿಂದ ನಿರ್ಧರಿಸಬೇಕು ಹಾಗೂ ಮನೆಯವರ ತೀರ್ಮಾನವನ್ನು ಕ್ಯಾಪ್ಟನ್ ರಾಜೀವ್ ಸೂಕ್ತ ಕಾರಣಗಳೊಂದಿಗೆ ಬಿಗ್‍ಬಾಸ್‍ಗೆ ತಿಳಿಸಬೇಕು ಎಂದು ಸೂಚಿಸಿದರು.

    ಅದರಂತೆ ಮೊದಲನೆಯದಾಗಿ ಮಾತನಾಡಿದ ಗೀತಾ, ನಾನು ಲ್ಯಾಗ್ ಮಂಜುರವರ ಹೆಸರನ್ನು ಹೇಳಲು ಇಷ್ಟಪಡುತ್ತೇನೆ. ಎಂಟರ್‍ಟೈನ್‍ಮೆಂಟ್ ವಿಷಯಕ್ಕೆ ಬಂದರೆ ನಮ್ಮೆಲ್ಲರನ್ನು ಬಹಳ ನಗಿಸುತ್ತಾರೆ ಎಂದರು. ದಿವ್ಯಾ ಉರುಡುಗ ಮಂಜುರವರು ಕ್ಯಾಪ್ಟನ್ ಸ್ಥಾನವನ್ನು ಬಹಳ ಚೆನ್ನಾಗಿ ನಿಭಾಯಿಸಿದರು ಹಾಗಾಗಿ ನಾನು ಕೂಡ ಮಂಜುರವರ ಹೆಸರನ್ನು ಸೂಚಿಸುತ್ತೇನೆ ಎಂದರೆ, ವಿಶ್ವನಾಥ್ ಸಹ ಮಂಜು ಹೆಸರನ್ನು ಸೂಚಿಸುತ್ತಾರೆ. ಎಂಟರ್ಟೈನ್ಮೆಂಟ್ ಬಿಗ್‍ಬಾಸ್ ಮನೆಯಲ್ಲಿ ನಾವೆಲ್ಲ ಒಂದು ಕುಟುಂಬದವರ ರೀತಿಯಲ್ಲಿ ಇದ್ದೇವೆ ಎಂದರೆ ಅದಕ್ಕೆ ಕಾರಣ ಮಂಜು ಎಂದು ಚಂದ್ರಕಲಾ ತಿಳಿಸುತ್ತಾರೆ. ಟಾಸ್ಕ್‍ನಲ್ಲಿಯೇ ಆಗಲಿ, ಕೆಲಸದಲ್ಲಿಯೇ ಆಗಲಿ ಒಂದು ಒಳ್ಳೆಯ ಸಪೋರ್ಟಿವ್ ರೋಲ್ ಮಂಜು ಎಂದು ಅರವಿಂದ್ ಕೂಡ ಮಂಜು ಹೆಸರನ್ನು ತೆಗೆದುಕೊಳ್ಳುತ್ತಾರೆ. ದಿವ್ಯಾ ಸುರೇಶ್ ಎಲ್ಲರೊಂದಿಗೆ ಮಾತನಾಡುವ ರೀತಿ, ಟಾಸ್ಕ್ ನನ್ನು ಹಾಗೂ ನಮ್ಮನ್ನೆಲ್ಲ ನಿಭಾಯಿಸುವ ರೀತಿ ಎಲ್ಲವೂ ಒಂದು ಮಟ್ಟಕ್ಕೆ ಮಂಜು ನಿಭಾಯಿಸುತ್ತಾರೆ ಹಾಗಾಗಿ ನಾನು ಕೂಡ ಮಂಜುರವರನ್ನು ಆಯ್ಕೆ ಮಾಡುತ್ತೇನೆ ಎಂದು ನುಡಿದರು.

    ಶುಭ ಪೂಂಜಾ, ಮಂಜು ಅರಂವಿಂದ್‍ರವರ ಹೆಸರನ್ನು ಆಯ್ಕೆ ಮಾಡಿದರೆ, ನಿಧಿ ಸುಬ್ಬಯ್ಯ, ವೈಷ್ಣವಿ ಗೌಡ, ಶಂಕರ್, ಪ್ರಶಾಂತ್ ಸಂಬರಗಿ, ರಘು, ರಾಜೀವ್ ಹೆಸರನ್ನು ಸೂಚಿಸುತ್ತಾರೆ. ಜೊತೆಗೆ ಬ್ರೋ ಗೌಡ ಹಾಗೂ ನಿರ್ಮಲ ಪ್ರಶಾಂತ್ ಸಂಬರಗಿಯವರ ಹೆಸರನ್ನು ಸೂಚಿಸುತ್ತಾರೆ.

    ಒಟ್ಟಾರೆ ಮನೆಯ ಸದಸ್ಯರ ಅಭಿಪ್ರಾಯವನ್ನೆಲ್ಲಾ ಪರಿಶೀಲಿಸಿದ ರಾಜೀವ್ ನಾನು ಕ್ಯಾಪ್ಟನ್ ಆಗಿದ್ದೇನೆ. ನಾನು ನನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದೇನೆ. ಹಾಗಾಗಿ ಮನೆಯನ್ನು ಇನ್ನಷ್ಟು ಖುಷಿಯಾಗಿಡುತ್ತಿರುವ ಮಂಜುರವರಿಗೆ ಈ ವಾರದ ಉತ್ತಮ ಆಟಗಾರರೆಂದು ಆಯ್ಕೆ ಮಾಡುತ್ತೇನೆ ಎಂದು ಹೇಳುತ್ತಾ ಶುಭಾಶಯ ತಿಳಿಸಿ ಮೆಡಲ್ ನೀಡಿದರು.

    ಬಳಿಕ ಮೆಡಲ್ ಸ್ವೀಕರಿಸಿದ ಮಂಜು ನನಗೆ ಬಹಳ ಸಂತಸವಾಗುತ್ತಿದೆ. ಇದು ನನ್ನ ಜೀವನದಲ್ಲಿ ಸಿಗುತ್ತಿರುವ ಮೊದಲ ಮೆಡಲ್. ಎಲ್ಲರಿಗೂ ಧನ್ಯವಾದ ಎಂದು ಹೇಳುತ್ತಾರೆ. ಈ ವೇಳೆ ಮನೆ ಮಧಿ ಜೋರಾಗಿ ಶಿಳ್ಳೆ ಮತ್ತು ಚಪ್ಪಾಳೆಯನ್ನು ಹೊಡೆಯುತ್ತಾರೆ ಎಂದು ಮಂಜುರವರ ಹೆಸರನ್ನು ಘೋಷಿಸುತ್ತಾರೆ.

    ಈ ವಾರ ಕಳಪೆ ಪ್ರದರ್ಶನ ತೋರಿದ ಬ್ರೋ ಗೌಡರನ್ನು ಬಿಗ್‍ಬಾಸ್ ಸೆರೆವಾಸ ಮಾಡಲು ಸೂಚಿಸಿದರು.

  • ಹುಡುಗಿಯನ್ನು ಪಟಾಯಿಸು ನೋಡೋಣ – ಬ್ರೋ ಗೌಡಗೆ ಶುಭಾ ಪೂಂಜಾ ಟಾಸ್ಕ್

    ಹುಡುಗಿಯನ್ನು ಪಟಾಯಿಸು ನೋಡೋಣ – ಬ್ರೋ ಗೌಡಗೆ ಶುಭಾ ಪೂಂಜಾ ಟಾಸ್ಕ್

    ದೊಡ್ಮನೆಗೆ ಎಂಟ್ರಿ ಕೊಟ್ಟ ಕೆಲವು ಬ್ಯಾಚುಲರ್ ಹುಡುಗರಲ್ಲಿ ಬ್ರೋಗೌಡ ಕೂಡ ಒಬ್ಬರು. ಮೊನ್ನೆ ಟಾಸ್ಕ್ ನಲ್ಲಿ ಕಿರುಚಾಡುತ್ತಾ, ಕಿತ್ತಾಡಿ, ಗುದ್ದಾಡಿಕೊಂಡಿದ್ದ ಬಿಗ್‍ಬಾಸ್ ಮಂದಿ ನಿನ್ನೆ ಹಾಸ್ಯದ ಹೊನಲಿನಲ್ಲಿ ತೇಲಿದ್ದಾರೆ.

    ಬಿಗ್‍ಬಾಸ್ ಮನೆಗೆ ಬಂದಾಗನಿಂದ ಮಗುವಿನಂತೆ ಎಲ್ಲರೊಂದಿಗೆ ಬೆರೆತು, ಸಿರಿಯಸ್ ಸಮಯದಲ್ಲಿ ಕೂಡ ಹಾಸ್ಯ ಚಟಾಕಿ ಹರಿಸುವ ನಟಿ ಶುಭಾ ಪೂಂಜಾ ನಿನ್ನೆ ಬ್ರೋ ಗೌಡರ ಕಾಲೆಳೆದಿದ್ದಾರೆ. ನಿನ್ನೆ ಮನೆ ಮಂದಿಯೆಲ್ಲಾ ಒಟ್ಟಾಗಿ ಲೀವಿಂಗ್ ಏರಿಯಾದಲ್ಲಿ ಟೈಪಾಸ್ ಮಾಡುತ್ತಿದ್ದ ವೇಳೆ ಮಂಜು ಸುಮ್ ಸುಮ್ ನೇ ನಗ್ತಾಳೆ ಎಂದು ದಿವ್ಯಾ ಸುರೇಶ್ ನೋಡುತ್ತಾ ಹಾಡು ಹೇಳಿದ್ದಾರೆ. ಇದಕ್ಕೆ ದಿವ್ಯಾ ಮುಖ ತಿರುಗಿಸಿಕೊಂಡು ಬೇರೆ ಕಡೆ ನೋಡುತ್ತಾರೆ. ಅದಕ್ಕೆ ಮಂಜು ನಾನು ಹೇಳಿದೆ ಅಲ್ಲವಾ ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಲು ಅವಳ ಕೈನಲ್ಲಿ ಆಗುವುದಿಲ್ಲ ಎಂದು ಹೇಳುತ್ತಾರೆ.

    ರಾಜೀವ್, ಬ್ರೋ ಗೌಡ ಬರುವವರೆಗೂ ಹೀಗೆ ಹಾಡು ಹೇಳು ಎನ್ನುತ್ತಾರೆ. ಈ ವೇಳೆ ಶುಭಾ ಅವನು ಸುಮ್ನೆ ರೆಡಿಯಾಗಿ ಬೇರೆಯವರಿಗೆ ಹೇಳುವುದಾಯ್ತು. ಇಲ್ಲಿಯವರೆಗೂ ಒಂದು ಹುಡುಗಿಯನ್ನು ಪಟಾಯಿಸುವುದಕ್ಕೆ ಆಗಲಿಲ್ಲ. ಹೊರಗಡೆ ನೋಡಿದರೆ ನನಗೆ ಇಷ್ಟು ಜನ ಹುಡುಗಿಯರು ಬಿದ್ದಿದ್ದರು, ಅಷ್ಟು ಜನ ಹುಡುಗಿಯರು ಬಿದ್ದಿದ್ದಾರೆ ಎಂದು ಬಿಲ್ಡಪ್ ತೆಗೆದುಕೊಳ್ಳುತ್ತಾನೆ. ಹೊರಗಡೆ 22 ಜನ ಹುಡುಗಿಯರು ಬಿದ್ದಿರುವ ಅವನಿಗೆ ಬಿಗ್‍ಬಾಸ್ ಮನೆಯಲ್ಲಿ ಒಬ್ಬರನ್ನು ಕೂಡ ಬೀಳಿಸಲು ಆಗಲಿಲ್ಲ. ಮೊದಲನೇಯದಾಗಿ ಅವನಿಗೆ ಹುಡುಗಿಯರನ್ನು ಬೀಳಿಸುವ ನ್ಯಾಕ್ ಗೊತ್ತಿಲ್ಲ. ನೋಡಿದಾಗಲೆಲ್ಲ ಎಲ್ಲ ಹುಡುಗಿಯರಿಗೂ ಕೆಲಸ ಕೊಡುತ್ತಾನೆ. ಅವನಿಗ್ಯಾರು ಬೀಳುತ್ತಾರೆ? ಎಂದು ನಗೆ ವ್ಯಂಗ್ಯ ಮಾಡಿದರು. ಇದನ್ನು ಕೇಳಿ ಮನೆಯ ಸದಸ್ಯರೆಲ್ಲರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

    ಈ ವೇಳೆ ಲ್ಯಾಂಗ್ ಮಂಜು ನಾನೇದರೂ ಕ್ಯಾಪ್ಟನ್ ಆದರೆ ನನ್ನ ಎರಡು ಕಣ್ಣುಗಳಿಗೆ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಾರೆ. ಇದರಿಂದ ರೊಚ್ಚಿಗೆದ್ದ ಶುಭಾ ಪೂಂಜಾ, ಮಗನೇ ಹಾಗಾದರೆ ನಮ್ಮ ಕೈನಲ್ಲಿ ಕೆಲಸ ಮಾಡಿಸ್ತಿಯಾ ಎಂದು ವಾಟರ್ ಬಾಟಲ್‍ನಿಂದ ಹೊಡೆಯುತ್ತಾರೆ.

    ಬಳಿಕ ಲ.. ಲವರ್ ಬಾಯ್ ಬಾ ಇಲ್ಲಿ ಎಂದು ಬ್ರೋಗೌಡರನ್ನು ಕರೆದ ಶುಭಾ, ನಿನಗೊಂದು ಟಾಸ್ಕ್ ಈ ವೀಕೆಂಡ್ ಒಳಗೆ ಒಬ್ಬರನ್ನಾದರೂ ನೀನು ಬೀಳಿಸಬೇಕು. ಕಮಾನ್ ಶಮಂತ್ ಎದ್ದು ತೊಡೆ ತಟ್ಟುತ್ತಾ ಸವಾಲೆಸೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಬ್ರೋ ಗೌಡ ವೇಟ್ ವೇಟ್. ನಾನು ಈಗಲೇ ಏನು ಹೇಳುವುದಿಲ್ಲ ಎನ್ನುತ್ತಾರೆ.

    ಇದಕ್ಕೆ ಶುಭಾ ನೀನು ಹೆಣ್ಣು ಮಕ್ಕಳನ್ನು ನೋಡಿದಾಗೆಲ್ಲಾ ಕಸ ಗುಡಿಸಿ, ಪಾತ್ರೆ ತೊಳೆಯಿರಿ, ಕ್ಲೀನ್ ಮಾಡಿ ಎಂದರೆ ನಿನಗೆ ಯಾರು ಬೀಳುವುದಿಲ್ಲ ಎಂದು ಹೇಳುವ ಮೂಲಕ ಬ್ರೋ ಗೌಡ ಕಾಲೆಳೆದಿದ್ದಾರೆ.