Tag: ಪಬ್ಲಿಕ್ ಟಿವಿ Biggboss

  • ಹುಡುಗೀರನ್ನು ಪಟಾಯಿಸಲು ಶಮಂತ್‍ಗೆ ಪ್ರಶಾಂತ್ ಕೊಟ್ಟ ಟಿಪ್ಸ್ ಏನು ಗೊತ್ತಾ?

    ಹುಡುಗೀರನ್ನು ಪಟಾಯಿಸಲು ಶಮಂತ್‍ಗೆ ಪ್ರಶಾಂತ್ ಕೊಟ್ಟ ಟಿಪ್ಸ್ ಏನು ಗೊತ್ತಾ?

    ಪ್ರತಿವಾರದಂತೆ ಈ ವಾರ ಕೂಡ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಕಾರ್ಯಕ್ರಮ ನಡೆಯಿತು. ಈ ವೇಳೆ ಬಿಗ್‍ಬಾಸ್ ಮನೆಯಲ್ಲಿ ಹುಡುಗಿಯರನ್ನು ಪಟಾಯಿಸಲು ಏನು ಮಾಡಬೇಕು ಎಂಬ ಟಾಪಿಕ್ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆದಿದೆ.

    ಹೌದು.. ಕಳೆದ ವಾರ ಪ್ರಶಾಂತ್ ಸಂಬರ್ಗಿ ಹುಡುಗಿಯನ್ನು ಪಟಾಯಿಸುವುದು ಹೇಗೆ ಎಂದು ನೀಡಿದ ಕೆಲವು ಟಿಪ್ಸ್‍ಗಳನ್ನು ಶಮಂತ್ ಕಿಚ್ಚನ ಮುಂದೆ ರಿವೀಲ್ ಮಾಡಿದ್ದಾರೆ. ಮೊದಲಿಗೆ ಹುಡುಗಿಯರು ಸಾಫ್ಟ್ ಕಾರ್ನರ್ ಇರುವ ವಿಚಾರವನ್ನು ಪ್ರಸ್ತಾಪಿಸಿ ಅವರ ಮನಸ್ಸನ್ನು ಗೆಲ್ಲಬೇಕು. ಆಗ ಅವರನ್ನು ಹ್ಯಾಂಡಲ್ ಮಾಡಲು ಸುಲಭವಾಗುತ್ತದೆ ಎಂದು ಹೇಳಿದ್ದರು ಎನ್ನುತ್ತಾರೆ.

    ಬಳಿಕ ಪ್ರಶಾಂತ್, ಶಮಂತ್ ಒಮ್ಮೆ ಬಂದು ನನ್ನ ಬಳಿ ದಿವ್ಯಾ ಸುರೇಶ್ ಯಾವಾಗಲೂ ನನ್ನನ್ನು ಕೆಟ್ಟ ದೃಷ್ಟಿಯಲ್ಲಿಯೇ ನೋಡುತ್ತಾಳೆ, ಕೋಪ ಮಾಡಿಕೊಂಡಿರುತ್ತಾಳೆ. ನಾನು ಫ್ರೆಂಡ್ ಆಗ ಬೇಕು ಏನಾದರೂ ಐಡಿಯಾ ಕೊಡು ಎಂದು ಕೇಳಿದ್ದ. ಹಾಗಾಗಿ ದಿವ್ಯಾ ಸುರೇಶ್ ಕ್ವಾಲಿಟಿ ನೋಡಿಕೊಂಡು ಹೇಗೆ ಮಾತನಾಡಬೇಕು, ಹಾಗೇ ಮಾತನಾಡು, ಇರಿಟೆಟ್ ಮಾಡಬೇಡ ಎಂದು ಗೈಡೆನ್ಸ್ ನೀಡಿದ್ದೇನೆ. ಶಮಂತ್ ಫಸ್ಟ್ ಜೋರಾಗಿ ಮಾತನಾಡುವುದನ್ನು ಕಲಿಯಬೇಕು ಹಾಗೂ ಪೀಠಿಕೆ ಹಾಕಿ ಮಾತನಾಡುವುದನ್ನು ಬಿಡಬೇಕು ಎಂದು ಹೇಳಿದ್ದೇನೆ ಅಷ್ಟೇ. ಅದು ಬಿಟ್ಟರೆ ಬೇರೆನೂ ಇಲ್ಲ ಎಂದು ಹೇಳುತ್ತಾರೆ.

    ಆಗ ಶಮಂತ್ ಇಷ್ಟೇ ಹೇಳಿಲ್ಲ. ಮೊದಲಿಗೆ ಟಾರ್ಗೆಟ್ ಇಂಪಾರ್ಟೆಟ್. ಫಸ್ಟ್ ಒಳ್ಳೆಯವರು ಅನಿಸಿಕೊಳ್ಳಬೇಕು ನಂತರ ಫ್ರೆಂಡ್ ಶಿಪ್ ಬೆಳೆಸಿಕೊಳ್ಳಬೇಕು. ನೆಕ್ಸ್ಟ್ ಏನು ಮಾಡಬೇಕೆಂದು ಹೇಳುತ್ತೇನೆ ಎಂದು ಹೇಳಿದ್ದರು ಎನ್ನುತ್ತಾರೆ.

    ನಂತರ ಸುದೀಪ್ ಪ್ರಶಾಂತ್‍ರವರೆ ವಾಟ್ ನೆಕ್ಸ್ಟ್ ಎಂದು ಕೇಳಿದಾಗ, ಕಾಮನ್ ಟಾಪಿಕ್ ಹುಡುಕಿಕೊಂಡು ಮಾತನಾಡಬೇಕು. ಮೊದಲಿಗೆ ಎಜುಕೇಷನ್ ಬ್ಯಾಗ್‍ರೌಂಡ್ ಅಥವಾ ಫ್ಯಾಮಿಲಿ ಬ್ಯಾಗ್ ರೌಂಡ್ ವಿಚಾರವಾಗಿ ಮಾತನಾಡಬೇಕು. ಉದಾಹರಣೆಗೆ ದಿವ್ಯಾ ಸುರೇಶ್‍ಗೆ ಮ್ಯೂಸಿಕ್ ಹಾಗೂ ಸ್ಪೋರ್ಸ್ ಇಷ್ಟ ಹಾಗಾಗಿ ಈ ಟಾಪಿಕ್ ಬಗ್ಗೆ ಮಾತನಾಡು ಇದರಿಂದ ಅವಳಿಗೆ ಹತ್ತಿರವಾಗುತ್ತಿಯಾ ಎಂದು ಶಮಂತ್‍ಗೆ ಹೇಳಿದ್ದೆ ಎಂದು ಹೇಳುತ್ತಾರೆ.

     

    ಒಟ್ಟಾರೆ ಪ್ರಶಾಂತ್ ಶಮಂತ್‍ಗೆ ನೀಡಿದ್ದ ಟಿಪ್ಸ್ ಕೇಳಿ ಮನೆಮಂದಿಯೆಲ್ಲಾ ಅಚ್ಚರಿಯಿಂದ ಎದ್ದು-ಬಿದ್ದು ನಕ್ಕಿದ್ದಾರೆ.

  • ಕಾಮನ ಬಿಲ್ಲಿಗೆ ಬಣ್ಣ ಬಣ್ಣದ ಕಲರ್ ಕಾಗೆ ಹಾರಿಸುವವನು ಪ್ರಶಾಂತ್ ಅಂದಿದ್ಯಾಕೆ ಚಕ್ರವರ್ತಿ

    ಕಾಮನ ಬಿಲ್ಲಿಗೆ ಬಣ್ಣ ಬಣ್ಣದ ಕಲರ್ ಕಾಗೆ ಹಾರಿಸುವವನು ಪ್ರಶಾಂತ್ ಅಂದಿದ್ಯಾಕೆ ಚಕ್ರವರ್ತಿ

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಐದನೇ ವಾರದತ್ತ ಸಾಗುತ್ತಿದೆ. ಸದ್ಯ ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ನಡೆಯಿತು. ಈ ವೇಳೆ ಮನೆಗೆ ಹೊಸದಾಗಿ ಬಂದ ಸದಸ್ಯ ಚಕ್ರವರ್ತಿ ಚಂದ್ರಚೂಡ್ ಕಿಚ್ಚನ ಮುಂದೆ ಪ್ರಶಾಂತ್ ಸಂಬರ್ಗಿಯವರ ಕುರಿತಂತೆ ಸಾಹಿತ್ಯವೊಂದನ್ನು ಬರೆದಿದ್ದಾರೆ.

    ಕಲ್ಲದೇವರನ್ನೇ ಕಡಿದು ದೇವರಾಗಿಸಿದವನು, ಮೊಸಳೆಯ ಸಾಕಿ ಹಸುಳೆಯನ್ನಾಗಿಸಿದವನು, ಕಡಲನೇ ತಂದು ಮಡಿಲಿಗೆ ಸುರಿದವನು. ಕಾಮನ ಬಿಲ್ಲಿಗೆ ಬಣ್ಣ ಬಣ್ಣಗಳ ಕಲರ್ ಕಾಗೆ ಹಾರಿಸಿದವನು ಎಂದು ಚಕ್ರವರ್ತಿ ಚಂದ್ರಚೂಡರವರು ಹೇಳುತ್ತಾರೆ. ಈ ವೇಳೆ ಕಿಚ್ಚ ಸುದೀಪ್ ಪ್ರಶಾಂತ್ ಸಂಬರ್ಗಿಯವರೆ ನಿಮಗೆ ಯಾಕೆ ಈ ಸಾಲುಗಳನ್ನು ಹೇಳಿದರು ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರಶಾಂತ್ ಗೊತ್ತಿಲ್ಲ ಎಂದಾಗ ಸುದೀಪ್ ಹಾಸ್ಯಮಯವಾಗಿ ನಿಮಗೆ ಗೊತ್ತಿಲ್ವಾ ಎನ್ನುತ್ತಾ ನಗುತ್ತಾರೆ.

    ಬಳಿಕ ಸುದೀಪ್ ಚಕ್ರವರ್ತಿವಯರೇ ವಿವರಿಸಿ ಯಾಕೆ ಪ್ರಶಾಂತ್ ಸಂಬರ್ಗಿಯವರ ಮೇಲೆ ಈ ಸಾಹಿತ್ಯ ಬರೆದಿದ್ದೀರಾ ಎಂದು ಹೇಳಿದಾಗ, ಕಲ್ಲದೇವರನ್ನೇ ಕಡಿದು ದೇವರಾಗಿಸಿದವನು ಎಂದರೆ ಕಲ್ಲಾಗಿದ್ದಾಗ ಅದು ಯಾರಿಗೂ ಬೇಡವಾಗಿರುತ್ತದೆ, ಆದರೆ ಅದು ದೇವರಾದಾಗ ಎಲ್ಲರಿಗೂ ಬೇಕಾಗುತ್ತದೆ. ಒಂದು ಬೇಡವಾಗಿರುವುದನ್ನು ಬೇಕಾಗಿಸುವಂತಹ ಶಕ್ತಿ ಪ್ರಶಾಂತ್‍ರವರಿಗೆ ಇದೆ. ಮೊಸಳೆಯ ಸಾಕಿ ಹಸುಳೆಯನ್ನಾಗಿಸಿದವನು ಎಂದರೆ ಮೊಸಳೆ ನೀರಿನಲ್ಲಿದ್ದಾಗ ಯಾರಾದರೂ ಹೋದರೆ, ಒಮ್ಮೆ ಅದು ಹಿಡಿದುಕೊಂಡರೆ ಬಿಡುವುದಿಲ್ಲ. ಆದರೆ ಅದನ್ನು ಮಗುವಿನಂತೆ ಮಾಡಿಸುತ್ತಾನೆ ಎಂದರೆ ಅವನು ನೂರಾರು ಬ್ರಹ್ಮಗಳಿಗೆ ತಂದೆ ಎಂದರ್ಥ.

    ಕಡಲನೇ ತಂದು ಮಡಿಲಿಗೆ ಸುರಿದ ಎಂದರೆ ಈ ಮನುಷ್ಯ ಯಾರಿಗಾದರೂ ಸಂತೋಷ ಕೊಡಲು ಪ್ರಾರಂಭಿಸಿದರೆ, ಅಷ್ಟು ಸಂತೋಷ ಕೊಡುವ ತಾಕತ್ತಿದೆ. ಹಾಗೇಯೇ ಅಷ್ಟೇ ಕಾಟವನ್ನು ಕೂಡ ಕೊಟ್ಟು ಬಿಡುತ್ತಾನೆ. ಕಾಮನ ಬಿಲ್ಲಿಗೆ ಬಣ್ಣ ಬಣ್ಣಗಳ ಕಲರ್ ಕಾಗೆ ಹಾರಿಸಿದವನು ಅಂದರೆ ಕಾಮನ ಬಿಲ್ಲು ಶಾಶ್ವತ ಅಲ್ಲ ಹೀಗೆ ಬಂದು ಹೀಗೆ ಹೋಗುತ್ತದೆ. ಸುಳ್ಳನ್ನೆ ತಂದು, ಸುಳ್ಳನ್ನೇ ಅಡುಗೆ ಮಾಡಿ, ಸುಳ್ಳನ್ನೇ ಬಡಿಸುವಷ್ಟು ಸತ್ಯವಂತ ಅಂತ ನಾನು ಭಾವಿಸಿದ್ದೇನೆ ಎಂದು ವ್ಯಂಗ್ಯಮಯವಾಗಿ ನುಡಿಯುತ್ತಾ, ಪ್ರಶಾಂತ್ ಸಂಬರ್ಗಿಯವರ ಮೇಲೆ ಕವಿತೆ ಬರೆದು ಬಣ್ಣಿಸಿದ್ದಾರೆ.

    ಒಟ್ಟಾರೆ ಚಕ್ರವರ್ತಿಯವರು ಆನ್ ದಿ ಸ್ಪಾರ್ಟ್ ಬರೆದ ಈ ಸಾಹಿತ್ಯ ಕೇಳಿ ಮನೆಯ ಎಲ್ಲಾ ಸದಸ್ಯರು ಎದ್ದು-ಬಿದ್ದು ನಕ್ಕಿದ್ದಾರೆ.

  • ವೈಷ್ಣವಿಯಲ್ಲಿ ಅಮ್ಮನನ್ನು ಕಂಡು ಕಣ್ಣೀರಿಟ್ಟ ರಘು!

    ವೈಷ್ಣವಿಯಲ್ಲಿ ಅಮ್ಮನನ್ನು ಕಂಡು ಕಣ್ಣೀರಿಟ್ಟ ರಘು!

    ಚಿಕ್ಕ ವಯಸ್ಸಿನಿಂದಲೂ ಕಷ್ಟದಲ್ಲಿಯೇ ಬೆಳೆದ ರಘು, ನಿನ್ನೆ ವೈಷ್ಣವಿ ಬಳಿ ತಮ್ಮ ತಾಯಿಯ ಬಗ್ಗೆ ಮಾತನಾಡಿ ನೋವನ್ನು ಹಂಚಿಕೊಂಡಿದ್ದಾರೆ.

    ವೈಲ್ಡ್‍ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟ ಹೊಸ ಸದಸ್ಯ ಚಂದ್ರಚೂಡ ಚಕ್ರವರ್ತಿ, ನಿನ್ನೆ ರಘು ಜೊತೆ ನಿಮ್ಮ ಹೃದಯದಲ್ಲಿ ನಿಮ್ಮ ತಾಯಿಗೆ ಹೇಳಬೇಕಾದ ಬಹಳ ವಿಚಾರವಿದೆ. ಆದರೆ ಅದನ್ನು ಪ್ರಾಮಾಣಿಕವಾಗಿ ಯಾರಾದರೂ ಬಳಿ ಇಲ್ಲಿಯವಗೂ ಹೇಳಿಕೊಂಡಿದ್ದೀರಾ? ನಿಮಗೆ ನಿಮ್ಮ ಒಳಗಿರುವ ನೋವನ್ನು ಕರಗಿಸಿಕೊಳ್ಳಬೇಕು ಎಂಬ ಆಸೆ ಇದ್ಯಾ? ಎಂದು ಪ್ರಶ್ನಿಸುತ್ತಾರೆ.

    ಆಗ ರಘು ಹೌದು ಎಂದಾಗ, ವೈಷ್ಣವಿಯವರ ಕಣ್ಣನ್ನು ನೋಡಿಕೊಂಡು ನಿಮ್ಮ ತಾಯಿಯನ್ನು ಹುಡುಕಿ, ಹಾಗೇನಾದರೂ ನಿಮ್ಮ ತಾಯಿಯ ಭಾವನೆ ಅವರಲ್ಲಿ ಕಂಡರೆ ನಿಮ್ಮ ತಾಯಿ ಬಳಿ ಹೇಳಿಕೊಳ್ಳಬೇಕೆಂದು ಕೊಂಡಿದ್ದನ್ನೆಲ್ಲಾ ಹೇಳಿಕೊಳ್ಳಿ ಎಂದು ತಿಳಿಸುತ್ತಾರೆ.

    ಬಳಿಕ ವೈಷ್ಣವಿ ನೋಡುತ್ತಾ ರಘು, ನಿನ್ನ ಕೋಪ, ಅಸಹಾಯಕತೆ, ಬೇಸರ ನಿನ್ನ ಮನಸ್ಸಿನಲ್ಲಿ ನಡೆಯುತ್ತಿರುವುದು ನನಗೆ ಅರ್ಥವಾಗಬಹುದಿತ್ತೇನೋ ಆದರೆ ನನಗೆ ಅದು ತಿಳಿಯಲಿಲ್ಲ. ನೀನು ತೆಗೆದುಕೊಂಡ ಕೆಲವು ನಿರ್ಧಾರಗಳು ತಪ್ಪಾಗಿದ್ದವು. ಒಂದು ಸಮಯದಲ್ಲಿ ನನ್ನನ್ನು ನೀನು ಬೇಡ ಅಂದೇ, ದರಿದ್ರ, ಅನಿಷ್ಟ ಎಂದೇ ಅದನ್ನು ನಾನು ಅರ್ಥಮಾಡಿಕೊಂಡೆ, ಒಮ್ಮೊಮ್ಮೆ ನೀನು ಸತ್ತಿದ್ದೆ ನನಗೆ ಬೆಸ್ಟ್ ಎಂದು ಕೂಡ ಅನಿಸಿತ್ತು. ಯಾಕೆಂದರೆ ನಾನು 14-15 ವರ್ಷಗಳ ಹಿಂದೆ ನೋಡಿದ ಅಮ್ಮನಂತೆ ನೀನು ಇರಲಿಲ್ಲ. ನೀನು ತುಂಬಾ ಸ್ಟ್ರಾಂಗ್ ಆಗಿದ್ದೆ, ತುಂಬಾ ನಗುತ್ತಿದ್ದೆ, ಎಲ್ಲರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಆದರೆ ಸಾಯುವ ಕೊನೆಯ ಮೂರು ತಿಂಗಳ ಹಿಂದೆ ನೀನು ಯಾಕೆ ಹಾಗೇ ಆದೆ ಎಂದು ನಿನಗೆ ಮಾತ್ರ ಗೊತ್ತು. ಪ್ರತಿ ಬಾರಿ ನೀನು ನನಗೆ ಹುಚ್ಚು ಹಿಡಿದಂತೆ ಆಗುತ್ತಿದೆ. ನನಗೆ ಸಾಯುವುದಕ್ಕೂ ಇಷ್ಟವಾಗುತ್ತಿಲ್ಲ ರೋಡಿಗೆ ಹೋಗುತ್ತೇನೆ ನಾನು ಹುಚ್ಚಿಯಾಗುತ್ತೇನೆ ಎಂದಾಗ ನನಗೆ ಏನು ಮಾಡಬೇಕೆಂದು ಸಹ ಗೊತ್ತಾಗುತ್ತಿರಲಿಲ್ಲ.

    ನನಗೆ ಎಷ್ಟೋ ಬಾರಿ ನಿನ್ನನ್ನು ಸಾಯಿಸಿ ನಾನು ಸಾಯಬೇಕು ಎಂದುಕೊಂಡಿದ್ದೆ. ಆದರೆ ಆ ಧೈರ್ಯ ನನಗೆ ಇರಲಿಲ್ಲ ಎಂದು ಕಣ್ಣೀರಿಟ್ಟರು. ನೀನು ಹುಟ್ಟಿದ ಮೇಲೆ ಹೀಗಾದೆವು ಎಂದರೆ ನಾನೇನು ತಪ್ಪು ಮಾಡಿದ್ದೇ. ನೀನು ಏನು ಮಾಡಿದ್ದರೂ ನಾನು ಪ್ರಾಣಕ್ಕಿಂತ ನಿನ್ನನ್ನು ಇಷ್ಟಪಡುತ್ತಿದ್ದೆ. ಮುಂದೆಯೂ ಹೀಗೆ ಇಷ್ಟ ಪಡುತ್ತೇನೆ. ನೀನು ಏನು ಕಷ್ಟಪಟ್ಟಿದ್ಯೋ ಅದು ಯಾರಿಗೂ ಆಗಬಾರದು ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ನೋವನ್ನು ವೈಷ್ಣವಿ ಬಳಿ ತೋಡಿಕೊಳ್ಳುತ್ತಾರೆ.

    ನಂತರ ವೈಷ್ಣವಿ ನಿಮ್ಮ ತಂದೆ-ತಾಯಿಗೆ ಏನು ನೋವಿತ್ತು ಎಂಬುವುದು ನಮಗೆ ತಿಳಿದಿರುವುದಿಲ್ಲ. ಹಾಗಾಗಿ ಮೊದಲನೇಯದಾಗಿ ನಾವು ಅವರನ್ನು ಗೌರವಿಸಬೇಕು. ಇಂದಿನಿಂದ ನೀವು ಬದಲಾಗಿ ಎಲ್ಲವನ್ನು ಮರೆತು ಚೆನ್ನಾಗಿ ಬದುಕಿ ಎಂದು ಸಮಾಧಾನ ಪಡಿಸುತ್ತಾರೆ.

  • ಮನೆಯ ಎಲ್ಲಾ ಸ್ಪರ್ಧಿಗಳಿಗಿಂತಲೂ ನಿಧಿಗೆ ಸಿಕ್ತು ಹೆಚ್ಚು ಅಂಕ

    ಮನೆಯ ಎಲ್ಲಾ ಸ್ಪರ್ಧಿಗಳಿಗಿಂತಲೂ ನಿಧಿಗೆ ಸಿಕ್ತು ಹೆಚ್ಚು ಅಂಕ

    ಷ್ಟು ದಿನ ಕೇವಲ 17 ಮಂದಿ ಸ್ಪರ್ಧಿಗಳು ಎಂದು ಭಾವಿಸಿದ್ದ ದೊಡ್ಮನೆ ಸದಸ್ಯರಿಗೆ, ಇದೀಗ ಬಿಗ್‍ಬಾಸ್ ವೈಲ್ಡ್‍ಕಾರ್ಡ್ ಸ್ಪರ್ಧಿಯನ್ನು ಕಳುಹಿಸುವ ಮೂಲಕ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ.

    ಪತ್ರಕರ್ತ, ಸಿನಿಮಾ ನಿರ್ದೇಶಕ ಚಂದ್ರಚೂಡ ಚಕ್ರವರ್ತಿ ನಿನ್ನೆ ಬಿಗ್‍ಬಾಸ್ ಮನೆಗೆ ವೈಲ್ಡ್‍ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದು, ಮೊದಲ ದಿನವೇ ಮನೆ ಸದಸ್ಯರ ಹಾವ-ಭಾವ, ಅಭ್ಯಾಸ, ವರ್ತನೆ ಬಗ್ಗೆ ಅಳೆದು ಸುರಿದು ಅಂಕಗಳನ್ನು ನೀಡಿದ್ದಾರೆ.

    ಮೊದಲಿಗೆ ಮನೆಯವರೊಂದಿಗೆ ತಮ್ಮ ಪರಿಚಯ ಮಾಡಿಕೊಂಡ ಚಂದ್ರಚೂಡರವರು, ಬಳಿಕ ಮನೆಯ ಸದಸ್ಯರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ ಅಂಕಗಳನ್ನು ನೀಡಿದರು. ಈ ವೇಳೆ ಮನೆಯ ಎಲ್ಲ ಸದಸ್ಯರಿಗಿಂತಲೂ ನಿಧಿ ಸುಬ್ಬಯ್ಯರಿಗೆ 10ಕ್ಕೆ 6 ಅಂಕಗಳನ್ನು ನೀಡಿದರು.

    ಮನುಷ್ಯ ಸಂದರ್ಭ ಬಂದಾಗ ತನ್ನ ನೋವನ್ನು ಹೇಳಿಕೊಂಡು ಬಿಡುತ್ತಾನೆ. ಇದು ಕನಿಷ್ಟ ಮನುಷ್ಯನ ಗುಣ. ಮನುಷ್ಯನ ಮೂಲ ಗುಣ ನಮ್ಮೊಳಗಿರುವ ನೋವು ಹಾಗೂ ಪ್ರೀತಿಯನ್ನು ಯಾರೊಂದಿಗದರೂ ಹಂಚಿಕೊಳ್ಳಬೇಕು. ಇಲ್ಲಿಯವರೆಗೂ ನಿಧಿ ಒಂದೇ ಒಂದು ಕ್ಷಣ ನೋವಿನ ಮುಖವನ್ನು ನಮ್ಮೊಂದಿಗೆ ತೋರಿಸಿಕೊಂಡಿಲ್ಲ. ಆದರೆ ಅವರ ನೋವು ಏನೆಂಬುವುದು ನನಗೆ ಗೊತ್ತು. ಯಾರನ್ನು ತೋಳಿಗೆ ಸೇರಿಸದೇ.. ಯಾವುದೇ ತೋಳದಲ್ಲಿ, ತೋಳದ ಗುಂಪಿನ ಹಿಂಡಿನಲ್ಲಿ ಒಂದಾಗದೇ.. ಯಾರನ್ನು ಭಾವಬಂಧನಕ್ಕೆ ಒಂದಾಗದೇ.. ಯಾರಿಗೂ ಬಾಹುವನ್ನು ಕೊಡದೇ ತನ್ನಷ್ಟಕ್ಕೆ ತಾನು ತಬ್ಬಿಕೊಂಡಿರುವುದಕ್ಕೆ ಮರಕ್ಕೆ ಮಾತ್ರ ಸಾಧ್ಯ. ಅದೊಂದು ಗುಣಕ್ಕೆ ನಾನು ನಿಧಿ ಸುಬ್ಬಯ್ಯರವರಿಗೆ ಅತೀ ಹೆಚ್ಚು ಅಂಕ ನೀಡುತ್ತೇನೆ ಎಂದು ಹೇಳುತ್ತಾರೆ.

    ಮನೆಯ ಮತ್ತಿತ್ತರ ಸದಸ್ಯರಾದ ರಾಜೀವ್ 1, ಶಂಕರ್ 0, ಮಂಜು 2, ವಿಶ್ವನಾಥ್ ಅರ್ಧ, ಶುಭ ಪೂಂಜಾ 2, ಅರವಿಂದ್ 3, ಶಮಂತ್ ಅರ್ಧ, ದಿವ್ಯಾ ಉರುಡುಗ 2, ವೈಷ್ಣವಿ 3 ಹೀಗೆ ಎಲ್ಲರಿಗೂ ಅಂಕಗಳನ್ನು ನೀಡಿದರು.

    ಒಟ್ಟಾರೆ ಮೊದಲ ದಿನವೇ ತಮ್ಮ ನೇರ ನುಡಿ ಹಾಗೂ ಅಭಿಪ್ರಾಯದ ಮೂಲಕ ಮನೆಯ ಸದಸ್ಯರ ಎದುರು ಹಾಕಿಕೊಳ್ಳುತ್ತಿರುವ ಚಂದ್ರಚೂಡ್ ಚಕ್ರವರ್ತಿ ಬಿಗ್‍ಬಾಸ್ ಮನೆಯಲ್ಲಿ ಇನ್ಮುಂದೆ ಕಿಚ್ಚೆಬ್ಬಿಸುವುದು ನಿಶ್ಚಿತ.

  • ಎಕೋ ವಾಯ್ಸ್ ಮೂಲಕ ವೈಷ್ಣವಿ ಬಗ್ಗೆ ಶಮಂತ್ ಹೇಳಿದ್ದೇನು?

    ಎಕೋ ವಾಯ್ಸ್ ಮೂಲಕ ವೈಷ್ಣವಿ ಬಗ್ಗೆ ಶಮಂತ್ ಹೇಳಿದ್ದೇನು?

    ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ಟ್ಯಾಲೆಂಟೆಡ್ ವ್ಯಕ್ತಿಗಳಲ್ಲಿ ಬ್ರೋ ಗೌಡ ಶಮಂತ್ ಕೂಡ ಒಬ್ಬರು. ದೊಡ್ಮನೆಯಲ್ಲಿ ಹೊಸ ಅಲೆಯನ್ನು ಎಬ್ಬಿಸುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರೂ ತಮ್ಮ ಪ್ರತಿಭೆ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಬರುತ್ತಿದ್ದಾರೆ.

    ಇತ್ತೀಚೆಗೆ ಮನೆಯಲ್ಲಿ ಎಕೋ ವಾಯ್ಸ್ ಪ್ರದರ್ಶನ ನೀಡಿದ್ದ ಶಮಂತ್. ಇದೀಗ ಬಿಗ್‍ಬಾಸ್ ಮನೆಯಲ್ಲಿ ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ. ಅಲ್ಲದೆ ಕಳೆದ ವಾರ, ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕೂಡ ಕಿಚ್ಚ ಸುದೀಪ್ ಶಮಂತ್ ಗೌಡಗೆ ಎಕೋ ವಾಯ್ಸ್ ಪ್ರದರ್ಶಿಸುವಂತೆ ಕೇಳಿದ್ದರು. ಈ ವೇಳೆ ಕಿಚ್ಚನ ಎದುರಿಗೆ ಎಕೋ ವಾಯ್ಸ್ ತರಹ ಮಾತನಾಡಿದ ಶಮಂತ್ ಟ್ಯಾಲೆಂಟ್ ಕಂಡು ಕಿಚ್ಚ ಚಪ್ಪಾಳೆ ತಟ್ಟಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಸದ್ಯ ಬಿಗ್‍ಬಾಸ್ ನೀಡಿರುವ ಗಡಿಗೋಪುರ ಟಾಸ್ಕ್‍ನಲ್ಲಿ ಗೆಲ್ಲಲು ಮನೆಮಂದಿ ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ಅನುಬಂಧ ತಂಡದ ದಿವ್ಯಾ ಸುರೇಶ್ ಹಾಗೂ ಜಾತ್ರೆ ಗ್ಯಾಂಗ್‍ನ ವೈಷ್ಣವಿ ಗೌಡ ಸ್ವಿಮ್ಮಿಂಗ್ ಪೂಲ್‍ನ ಮಧ್ಯೆ ಕುರ್ಚಿ ಮೇಲೆ ನಿಂತು ನೀನಾ ನಾನಾ ಎಂದು ಗೆಲ್ಲಲೇಬೇಕೆಂದು ಪಣತೊಟ್ಟು ಮಧ್ಯರಾತ್ರಿಯೆಲ್ಲ ನಿಂತಿದ್ದರು. ಈ ವೇಳೆ ಇಬ್ಬರು ಸ್ಪರ್ಧಿಗಳಿಗೂ ಶಮಂತ್ ತಮ್ಮ ಎಕೋ ವಾಯ್ಸ್‍ನಲ್ಲಿ ಕಮೆಂಟ್ ಕೊಡುವ ಮೂಲಕ ಪ್ರೋತ್ಸಾಹ ನೀಡಿದ್ದಾರೆ.

    “ವೈಷ್ಣವಿ ಹಾಗೂ ದಿವ್ಯಾ, ನೀರಿನ ಮಧ್ಯದಲ್ಲಿ ಒಂದು ಫ್ಲಾಟ್‍ಫಾರ್ಮ್ ಮೇಲೆ ಕುಳಿತುಕೊಂಡು, ತಮ್ಮ ಶಕ್ತಿ ಯುಕ್ತಿ ಪ್ರದರ್ಶನವನ್ನು ಮಾಡುತ್ತಿದ್ದಾರೆ. ಮಧ್ಯರಾತ್ರಿಯಾಗಲಿ ಬೆಳಗ್ಗೆಯಾಗಲಿ, ಅವರು ನಿಂತೇ ನಿಲ್ತೀವಿ, ಗೆದ್ದೆ ಗೆಲ್ತೀವಿ ಎಂದು ಹಠ ಹಿಡಿದಿದ್ದಾರೆ” ಎಂದು ಹೇಳುವಾಗ, ವೈಷ್ಣವಿ ಬ್ರೋ ಗೌಡ ಕಮೆಂಟ್‍ಗೆ ಸ್ಲೋ ಮೋಷನ್‍ನಲ್ಲಿ ಡ್ಯಾನ್ಸ್ ಮಾಡುತ್ತಿರುತ್ತಾರೆ. ಆಗ ಶಮಂತ್,”ನೃತ್ಯ ಮಾಡಿಕೊಂಡೇ ನಿಲ್ಲುತ್ತೇನೆ ಎಂದು ವೈಷ್ಣವಿ ಗೌಡ ಪಣ ತೊಟ್ಟಿದ್ದಾರೆ ಹಾಗೂ ಪುಲ್‍ಓವರ್‍ನನ್ನು ತೊಟ್ಟಿದ್ದಾರೆ. ಟೋಪಿಯನ್ನು ತೊಟ್ಟಿದ್ದಾರೆ. ಬರೀ ಕಾಲಿನಲ್ಲಿ ನಿಂತಿದ್ದಾರೆ. ಗ್ರೀನ್ ಕಲರ್ ಬಟ್ಟೆಯನ್ನು ಧರಿಸಿದ್ದಾರೆ” ಎಂದು ವೈಷ್ಣವಿಯನ್ನು ಬಣ್ಣಿಸುತ್ತಾರೆ.

    ಹೀಗೆ ಶಮಂತ್ ದಿವ್ಯಾ ಹಾಗೂ ವೈಷ್ಣವಿ ಆಟಕ್ಕೆ ಎಕೋ ವಾಯ್ಸ್ ಮೂಲಕ ಕಮೆಂಟ್ ಮಾಡುತ್ತಾ ಮನರಂಜನೆ ನೀಡಿದರು.

  • ವೈನ್‍ಸ್ಟೋರ್ ರಘುಗೆ ಈ ವಾರದ ಕಿಚ್ಚನ ಚಪ್ಪಾಳೆ

    ವೈನ್‍ಸ್ಟೋರ್ ರಘುಗೆ ಈ ವಾರದ ಕಿಚ್ಚನ ಚಪ್ಪಾಳೆ

    ಬಿಗ್‍ಬಾಸ್ ಮನೆಯಲ್ಲಿ ಪ್ರತಿವಾರ ಅತ್ಯುತ್ತಮವಾಗಿ ಆಟ ಆಡಿದ ಸ್ಪರ್ಧಿಗೆ ಮೆಚ್ಚುಗೆ ವ್ಯಕ್ತಪಡಿಸಲು ಕಿಚ್ಚ ಸುದೀಪ್ ಚಪ್ಪಾಳೆ ಹೊಡೆಯುತ್ತಾರೆ. ಪ್ರತಿವಾರ ಸ್ಪರ್ಧಿಗಳು ಕಿಚ್ಚನ ಚಪ್ಪಾಳೆಗಾಗಿ ಕಾಯುತ್ತಾ ಇರುತ್ತಾರೆ.

    ಅದರಂತೆ ಈ ಬಾರಿ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ರಘುರವರಿಗೆ ಸಿಕ್ಕಿದೆ. ಬಿಗ್‍ಬಾಸ್ ಮನೆಯಲ್ಲಿ ಎಚ್ಚರವಾಗಿರುವುದು ಬಹಳ ಮುಖ್ಯ. ಈ ವಾರ ಈ ವ್ಯಕ್ತಿ ಎಚ್ಚರವಾಗಿದ್ದರು. ಬಿಗ್‍ಬಾಸ್ ಮನೆಯಲ್ಲಿ ಆ ಕ್ಷಣದಲ್ಲಿ ಬದುಕುವುದು ಬಹಳ ಬಹಳ ಮುಖ್ಯ, ಇವರು ಬದುಕಿದರು. ಭಾವನೆಗಳನ್ನು ಬಿಗ್‍ಬಾಸ್ ಮನೆಯಲ್ಲಿ ಇವರು ಈ ಬಾರಿ ಮುಕ್ತವಾಗಿ ಹಂಚಿಕೊಳ್ಳಬೇಕು. ಈ ಮನೆಯಲ್ಲಿ ಇವರು ಅನಿಸಿಕೆಗಳನ್ನು ನೇರವಾಗಿ ಹೇಳಿದರು. ಎಲ್ಲದರ ನಡುವೆ ತಮ್ಮ ತನವನ್ನು ತಾವು ಬಿಟ್ಟು ಕೊಡಬಾರದು, ಇವರು ಬಿಟ್ಟುಕೊಡಲಿಲ್ಲ. ಚೆನ್ನಾಗಿ ಟಾಸ್ಕ್ ಆಡಬೇಕು, ಆದರೆ ಇವರು ಆಡಲಿಲ್ಲ. ಆದರೆ ಪ್ರಯತ್ನ ಪಡುತ್ತಾರೆ.

    ಎರಡು ವಾರದ ಹಿಂದೆ ನಾನು ಹೇಳಿದ್ದನ್ನು ಮಾಡಬಹುದು, ಮಾಡುತ್ತಾರೆ ಎಂಬ ಸೂಚನೆ ಕೂಡ ಕೊಡದೇ, ಒಂದೇ ವಾರದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಈ ವ್ಯಕ್ತಿಗೆ ನಾನು ಪ್ರೋತ್ಸಾಹ ಕೊಟ್ಟೆ ಕೊಡುತ್ತೇನೆ. ಇನ್ನೂ ಚೆನ್ನಾಗಿ ಆಟ ಆಡಬೇಕೆಂದರೆ ಅವರಿಗೆ ಈ ಎನ್‍ಕ್ರೇಜ್‍ಮೆಂಟ್ ಹೋಗಲೇಬೇಕು ಎಂದು ಹೇಳುತ್ತಾ, ಈ ವಾರದ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ರಘುರವರಿಗೆ ಎಂದು ಚಪ್ಪಾಳೆ ತಟ್ಟುತ್ತಾರೆ.

    ಬಳಿಕ ಮಾತನಾಡಿದ ರಘು, ಎರಡು ವಾರಕ್ಕೂ ಮುನ್ನ ಶಂಖದಿಂದಲೇ ತೀರ್ಥ ಬರುವ ರೀತಿ ಆಟೋ ಹೊರಗೆ ಬಂದು ಕಾಯುತ್ತಿದ್ದ ವೇಳೆ ನನಗೆ ಸ್ವಲ್ಪ ಭಯವಾಗಿತ್ತು. ಆದರೆ ಆಗ ಯೋಚಿಸಿದೆ, ನಾನು ಎಲ್ಲರ ವಿರುದ್ಧ ಹೋರಾಡುವುದಕ್ಕಿಂತ ನನ್ನ ವಿರುದ್ಧ ನಾನು ಹೋರಾಡುತ್ತಿದ್ದೆ ಅನಿಸಿತ್ತು. ಆ ನಡವಳಿಕೆ ಇದೀಗ ಬದಲಾಗಿದೆ. ಮೊದಲಿಗೆ ಮಂಜು ಕಂಡರೆ ಭಯಪಡುತ್ತಿದ್ದೆ. ಆದರೆ ಈಗ ಅವರ ಹತ್ತಿರವೇ ಹೋಗಿ, ನಾನು ನಿಮಗೆ ಫೈಟ್ ಕೊಡಬೇಕೆಂಬ ಛಲ ಹಾಗೂ ಆಸೆ ಇದೆ ಎಂದು ಹೇಳುವಷ್ಟು ಧೈರ್ಯ ಬಂದಿದೆ. ಸೋ ಎಲ್ಲರಿಗೂ ನಾನು ಅದೇ ರೀತಿ ಹೇಳುತ್ತೇನೆ ಎಂದು ಹೇಳುತ್ತಾರೆ.

    ಈ ಹಿಂದೆ ಮೊದಲನೇ ವಾರ ಶಂಕರ್, ಎರಡನೇ ವಾರ ಶುಭ ಹಾಗೂ ಮೂರನೇ ವಾರ ಅರವಿಂದ್ ಕಿಚ್ಚನ ಚಪ್ಪಾಳೆ ಗಳಿಸಿದ್ದರು. ಇದೀಗ ನಾಲ್ಕನೇ ವಾರದಲ್ಲಿ ರಘು ಕಿಚ್ಚನ ಮೆಚ್ಚುಗೆಯ ಚಪ್ಪಾಳೆಯನ್ನು ಗಳಿಸಿದ್ದಾರೆ.

    ಒಟ್ಟಾರೆ ಕಿಚ್ಚನ ಚಪ್ಪಾಳೆ ಜೊತೆ ಕೈ ಜೋಡಿಸಿ, ಮನೆಯ ಎಲ್ಲ ಸದಸ್ಯರು ರಘುಗೆ ಚಪ್ಪಾಳೆ ಹೊಡೆಯುವ ಮೂಲಕ ಹರ್ಷವನ್ನು ವ್ಯಕ್ತಪಡಿಸುತ್ತಾರೆ.

  • ನಿಧಿ ಸುಬ್ಬಯ್ಯ ಒಂದು ರೀತಿ ಕ್ಯೂಟ್ ದಡ್ಡಿ ಅಂದಿದ್ಯಾಕೆ ರಘು!

    ನಿಧಿ ಸುಬ್ಬಯ್ಯ ಒಂದು ರೀತಿ ಕ್ಯೂಟ್ ದಡ್ಡಿ ಅಂದಿದ್ಯಾಕೆ ರಘು!

    ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಪ್ರತಿವಾರ ನಡೆಯುವಂತೆ ನಿನ್ನೆ ಕೂಡ ‘ಯೆಸ್’ ಆರ್ ‘ನೋ’ ರೌಂಡ್ಸ್ ನಡೆಯಿತು. ಈ ವೇಳೆ ಮನೆಯ ಸದಸ್ಯರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ ಕಿಚ್ಚ ಕೊನೆಯದಾಗಿ ನಿಧಿ ಸುಬ್ಬಯ್ಯ ಕೆಲವು ಸಲ ದಡ್ಡಿ ಎಂಬ ಪ್ರಶ್ನೆ ಕೇಳುತ್ತಾರೆ.

    ಬಳಿಕ ನೋ ಯಾಕೆ ರಾಜೀವ್‍ರವರೇ ಎಂದು ಕೇಳಿದಾಗ, ನಿಧಿ ಯಾವಾಗಲೂ ನನ್ನ ಭಾವನೆಗಳನ್ನು ಹೇಗೆ ಎಕ್ಸ್‍ಪ್ರೆಸ್ ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳುತ್ತಿರುತ್ತಾರೆ. ಅವರು ಹೇಳಬೇಕೆಂದು ಕೊಂಡ ವಿಚಾರವನ್ನು ಕನ್ನಡದಲ್ಲಿ ಹೇಗೆ ಹೇಳಬೇಕೆಂದು ಗೊತ್ತಾಗದೇ ಯೋಚನೆ ಮಾಡುತ್ತಿರುತ್ತಾರೆ. ಈ ಗ್ಯಾಪ್‍ನಲ್ಲಿ ಕೆಲವೊಂದನ್ನು ಹೇಗೆ ಹೇಳಬೇಕೆಂದು ಗೊತ್ತಾಗದೇ ಹೇಳಿ ಬಿಡುತ್ತಾರೆ. ಆಗ ನಾವು ನಿಧಿ ಕನ್ಫೂಷನ್‍ನಲ್ಲಿ ಹೇಳುತ್ತಿದ್ದಾರೆ ಎಂದು ಕೊಳ್ಳುತ್ತೇವೆ. ಆದರೆ ಅವರಿಗೆ ಏನು ಹೇಳುತ್ತಿದ್ದೇನೆ ಎಂಬ ವಿಚಾರದ ಬಗ್ಗೆ ಅವರಿಗೆ ಬಹಳ ಅರಿವಿರುತ್ತದೆ ಎನ್ನುತ್ತಾರೆ.

    ನಂತರ ಯೆಸ್ ಬೋರ್ಡ್ ತೋರಿಸಿದ್ದ ರಘು, ನಿಧಿ ಕೆಲವು ಸಲ ನನ್ನ ರೀತಿಯೇ ಸ್ಲೋ ಮೋಷನ್. ಏನಾದರೂ ಹೇಳಲು ಸಮಯ ತೆಗೆದುಕೊಳ್ಳುತ್ತಾರೆ. ಯೋಚನೆ ಮಾಡುವ ಸಮಯದ ಮಧ್ಯೆ ಏನಾದರೂ ಹೇಳಿ ಬಿಡುತ್ತಾರೆ. ಅದಕ್ಕೆ ಅವರು ಒಂದು ರೀತಿ ಕ್ಯೂಟ್ ರೀತಿಯ ದಡ್ಡಿ ಎಂದು ಅವರತ್ತಾ ನೋಡುತ್ತಾರೆ. ಈ ವೇಳೆ ಕಿಚ್ಚ ಆಯಿತು ಆದರೆ ನೀವು ಯಾಕೆ ಅವರನ್ನು ಹಾಗೇ ನೋಡುತ್ತಿದ್ದೀರಾ? ನಿಧಿ ನಿಮಗೆ ಗೊತ್ತಾಗ್ತಿದ್ಯಾ ಅವರು ಯಾವ ರೀತಿ ನೋಡುತ್ತಿದ್ದಾರೆ ಎಂದು ಹಾಸ್ಯ ಮಾಡುತ್ತಾರೆ. ಈ ವೇಳೆ ನಿಧಿ ಮುಖ ಮುಚ್ಚಿಕೊಂಡು ನಗುತ್ತಾ ಗೊತ್ತಿಲ್ಲ ಸರ್ ಅವರು ಹೇಗೆ ನೋಡಿದ್ರು ಎನ್ನುತ್ತಾರೆ.

    ನಂತರ ಮಾತನಾಡಿದ ಮಂಜು, ಒಂದೊಂದು ಬಾರಿ ನಿಧಿ ಏನು ಮಾತನಾಡುತ್ತಾರೆ ಎಂಬುವುದು ಅವರಿಗೆ ಗೊತ್ತಾಗುವುದಿಲ್ಲ. ಅಂದರೆ ಅವರಿಗೆ ಎಲ್ಲ ಗೊತ್ತಿದೆ. ಆದರೆ ಆ ಮಾತುಗಳನ್ನು ಹೇಗೆ ಆಡಬೇಕೆಂದು ತಿಳಿದಿರುವುದಿಲ್ಲ. ಥಟ್ ಅಂತ ಮಾತಾನಾಡಿಬಿಡುತ್ತಾರೆ. ಆಗ ಬೇರೆಯವರಿಗೆ ಬೇಸರವಾಗುತ್ತದೆ. 5 ನಿಮಿಷದ ನಂತರ ಹೌದು ನನಗೆ ಗೊತ್ತಾಗಲಿಲ್ಲ ಎಂದು ಅರ್ಥಮಾಡಿಕೊಂಡು ಹೇಳುತ್ತಾರೆ.

    ಇದಕ್ಕೆ ಪ್ರತಿಯುತ್ತರ ನೀಡಿದ ನಿಧಿ, ಹೌದು, ನಾನು ಸಡನ್ ರಿಯಾಕ್ಟ್ ಮಾಡುವುದು, ಓವರ್ ಥಿಂಕ್ ಮಾಡುವುದು ನಿಜ. ನನ್ನ ಪ್ರಕಾರ ಇವರೆಲ್ಲರೂ ನನ್ನ ದಡ್ಡಿ ಅಂದುಕೊಂಡರೆ ಅದು ನನ್ನ ಸ್ಟ್ರೆಂಥ್. ಯಾಕಂದ್ರೆ ನನ್ನ ಆಯ್ಕೆ ಇವರ್ಯಾರಿಗೂ ಇನ್ನೂ ಗೊತ್ತಿಲ್ಲ ಎಂದು ಹೇಳುತ್ತಾರೆ.

  • ದಿವ್ಯಾ ಉರುಡುಗಗೇ ಬಂತು ಅಮ್ಮನಿಂದ ಸಂದೇಶ!

    ದಿವ್ಯಾ ಉರುಡುಗಗೇ ಬಂತು ಅಮ್ಮನಿಂದ ಸಂದೇಶ!

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ನಾಲ್ಕನೇ ವಾರದತ್ತ ಸಾಗುತ್ತಿದೆ. ಸದ್ಯ ನಿನ್ನೆ ವಾರದ ಕಥೆ ಕಿಚ್ಚ ಸುದೀಪ ಜೊತೆ ಸಂಚಿಕೆ ನಡೆಯಿತು.

    ಈ ವೇಳೆ ದಿವ್ಯಾ ಉರುಡುಗಗೆ ಅವರ ತಾಯಿ ವಿಶ್ ಮಾಡಿದ್ದಾರೆ. ಮೊದಲಿಗೆ ‘ಶಿಲೆಗಳು ಸಂಗೀತವ ಹಾಡಿದೆ’ ಎಂಬ ಗೀತೆ ಹಾಡಿದ ಅವರು, ಹಾಯ್ ಪುಟ್ಟಿ ನಾವು ದಿನ ಟಿವಿಯಲ್ಲಿ ನಿನ್ನ ನೋಡಲು ಒಂಬತ್ತುವರೆ ಯಾವಾಗ ಆಗುತ್ತೆ ಎಂದು ಕಾಯ್ತಾ ಕುಳಿತುಕೊಂಡಿರುತ್ತೇವೆ. ಈ ಬಾರಿ ಸಿದ್ಧಪುರ ಮಾರಿಕಾಂಬ ಜಾತ್ರೆ 30ನೇ ತಾರೀಖಿನಿಂದ ಆರಂಭವಾಗುತ್ತಿದ್ದು, ಅದಕ್ಕೆ ನಿನ್ನ ತಮ್ಮ ದರ್ಶನ್, ಅಕ್ಕ ಇಲ್ಲ. ಆದ್ದರಿಂದ ನಾನು ಬರುವುದೇ ಇಲ್ಲ ಎಂದು ಹೇಳುತ್ತಿದ್ದಾನೆ. ಆದರೂ ಕೂಡ ಹೋಗಲೆಬೇಕಾಗಿದೆ. ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೀವಿ. ಸ್ಕೂಲ್‍ನಲ್ಲಿ ನೀನು ಸ್ಪೋಟ್ರ್ಸ್ ನಲ್ಲಿರುವಾಗ ಒಂದು ಬಾರಿಯೂ ನಾವು ಮಿಸ್ ಮಾಡದೇ ಬಂದು ನಿನಗೆ ಸಪೋರ್ಟ್ ಮಾಡುತ್ತಿದ್ದೇವು. ಆ ಹಳೆಯ ನೆನಪುಗಳನ್ನು ನೀನು ಮತ್ತೆ ಬಿಗ್‍ಬಾಸ್ ವೇದಿಕೆಯ ಮೂಲಕ ತರಿಸುತ್ತಿದ್ದಿಯಾ. ನಾವು ಮಾತನಾಡಿದಷ್ಟು ಮಾತು ಮುಂದುವರೆಯುತ್ತಲೇ ಇರುತ್ತದೆ. ಮಾತನಾಡಲು ಬಹಳ ಇದೆ. ಸದ್ಯಕ್ಕೆ ನಿನ್ನನ್ನು ಫಿನಾಲೆನಲ್ಲಿ ನೋಡಬೇಕು ಎಂಬ ಆಸೆ ಇದೆ. ಚೆನ್ನಾಗಿ ಆಡು ಎಂದು ಶುಭ ಹಾರೈಸಿದ್ರು.

    ಈ ವೇಳೆ ದಿವ್ಯಾ ಉರುಡುಗ ಭಾವುಕರಾಗಿ ಅಳುತ್ತಾರೆ. ಅಮ್ಮ-ಮಗಳ ಭಾಂದವ್ಯ ನೋಡಿ ಮನೆಮಂದಿಯೆಲ್ಲಾ ಚಪ್ಪಾಳೆ ತಟ್ಟುತ್ತಾ, ಮೇಕಪ್ ಹೋಗುತ್ತೆ ಎಂದು ಹಾಸ್ಯ ಮಾಡುತ್ತಾ ದಿವ್ಯಾ ಉರುಡುಗಗೆ ಸಮಾಧಾನ ಪಡಿಸಿದರು. ಬಳಿಕ ದಿವ್ಯಾ ಉರುಡುಗ ಕ್ಯಾಮೆರಾ ಮುಂದೆ ಬಂದು ಬಿಗ್‍ಬಾಸ್‍ಗೆ ಖುಷಿಯಿಂದ ಧನ್ಯವಾದ ತಿಳಿಸಿದರು.

    ನಂತರ ಸುದೀಪ್ ಈ ಬಗ್ಗೆ ದಿವ್ಯಾ ಉರುಡುಗಗೆ ಕೇಳಿದಾಗ, ನಮ್ಮ ಅಮ್ಮ ಹಾಡು ಹೇಳುವುದನ್ನು ಎಲ್ಲರಿಗೂ ಕೇಳಿಸಬೇಕು ಎಂಬ ಆಸೆ ಇತ್ತು. ಇಂದು ಮನೆಯವರೆಲ್ಲರೂ ಕೇಳಿಸಿಕೊಂಡರು ನನಗೆ ಸಖತ್ ಖುಷಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

  • ಮಂಜು ಒಲೈಕೆಗೆ ಹಾಡಿನ ಮಳೆ ಸುರಿಸಿದ ದಿವ್ಯಾ

    ಮಂಜು ಒಲೈಕೆಗೆ ಹಾಡಿನ ಮಳೆ ಸುರಿಸಿದ ದಿವ್ಯಾ

    ಬಿಗ್‍ಬಾಸ್ ಮನೆಯ ಪ್ರಣಯ ಪಕ್ಷಿಗಳಂತಿದ್ದ ಲ್ಯಾಗ್ ಮಂಜು ಹಾಗೂ ದಿವ್ಯಾ ಸುರೇಶ್ ಗುರುವಾರ ಪಾತ್ರೆ ತೊಳೆಯುವ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.

    ಇದರಿಂದ ದಿವ್ಯಾ ಮೇಲೆ ಮುನಿಸಿಕೊಂಡಿದ್ದ ಮಂಜುನನ್ನು ಒಲೈಸಿಕೊಳ್ಳಲು ದಿವ್ಯಾ ಸುರೇಶ್ ಹಾಡುಗಳ ಮೂಲಕ ಭಾವನೆಗಳನ್ನು ಹೊರಹಾಕಿದ್ದಾರೆ. ಹೌದು, ಮೊದಲಿಗೆ ‘ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ’ ಎಂದು ದಿವ್ಯಾ ಹಾಡು ಶುರು ಮಾಡುತ್ತಾರೆ. ಇದಕ್ಕೆ ಮಂಜು ‘ಪ್ರೇಮಮಂ ಶರಣಂ ಗಚ್ಛಾಮೀ ಅಲ್ಲಿ ಮೋಸವೋ’ ಎಂದು ಹಾಡುತ್ತಾರೆ. ಬಳಿಕ ದಿವ್ಯಾ ಸುರೇಶ್ ನೀನೆಂದರೆ ನನಗೆ ಇಷ್ಟ ಕಣೋ.. ಎಂದಾಗ ಮಂಜು ಮೆಟ್ಟಲಿ ಹೊಡಿತೀನಿ ಸಮ್ನೆ ಇರು ಎಂದು ಹಾಡುತ್ತಾರೆ. ಇದಕ್ಕೆ ದಿವ್ಯಾ ‘ಏಕೆ ಹೀಗಾಯ್ತೋ ನಾನು ಕಾಣೇನೋ’ ಎಂದು ಹಾಡು ಹೇಳುತ್ತಾರೆ ಈ ವೇಳೆ ರಾಜೀವ್ ಹಾಗೂ ಚಂದ್ರಕಲಾ ಕೂಡ ದಿವ್ಯಾಗೆ ಸಾಥ್ ನೀಡುತ್ತಾರೆ. ನಂತರ ಮಂಜು ‘ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯ ಬರಹ’ ಎಂದು ಕಿಚ್ಚ ಸುದೀಪ್ ಸಿನಿಮಾದ ಹಾಡೊಂದನ್ನು ಹಾಡುತ್ತಾರೆ.

    ಮತ್ತೆ ಮಂಜು ‘ಯಾರೇ ಕೂಗಡಾಲಿ ಊರೇ ಹೋರಾಡಲಿ’ ಮಂಜ ನಿನಗೆ ಸಾಟಿ ಇಲ್ಲ ಎಂದು ತಮ್ಮನ್ನು ತಾವು ಬಣ್ಣಿಸಿಕೊಂಡು ಹಾಡು ಹಾಡುತ್ತಾರೆ. ಇದಕ್ಕೆ ದಿವ್ಯಾ ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೇತಕೆ ಎಲ್ಲರೆದುರು ಮಾನ ಹೋಗಿ ಕೊನೆಗೆ ಮನೆಗೆ ಹೋಗುವೆ ಎಂದು ಹೇಳುತ್ತಾರೆ. ಇದಕ್ಕೆ ಮಂಜು ಓ ಭ್ರಮೆ.. ಎಂಬ ಡೈಲಾಗ್‍ನನ್ನು ಹೇಳುತ್ತಾ.. ಕಣ್ಣೀರಿದು ರಕ್ತ ಕಣ್ಣೀರಿದು ಪರರ ಕಣ್ಣಿರಿನ ಪ್ರತಿಬಿಂಬ ಇದು ಎಂದು ಹಾಡುತ್ತಾರೆ. ಆಗ ದಿವ್ಯಾ ಅಳಬ್ಯಾಡ ಕಣೋ ಸಮ್ಮಕ್ಕಿರು ನನ್ನ ಮುದ್ದಿನ ರಾಜ ಅಂದಾಗ ಮಂಜು ಹಾವಾದ್ರೂ ಕಚ್ಚಾಬಾರ್ದ ಚೇಳಾದ್ರೂ ಕುಕ್ಕಾಬಾರ್ದ ಎಂದು ಬೈಯ್ಯುವಂತೆ ಹಾಡುತ್ತಾರೆ. ಅದಕ್ಕೆ ದಿವ್ಯಾ ಸುರೇಶ್ ಮಂಜುರನ್ನು ಸಮಾಧಾನಗೊಳಿಸಲು ಸಿಟ್ಯಾಕೋ ಸಿಡುಕು ಯಾಕೋ ನನ್ನ ಜಾಣ ಎಂದು ಹಾಡುತ್ತಾರೆ.

    ಹೀಗೆ ಮಂಜುರ ಕೋಪವನ್ನು ತಣ್ಣಗೆ ಮಾಡಲು ದಿವ್ಯಾ ಸುರೇಶ್ ಪದಗಳ ಬದಲಾಗಿ ಹಾಡುಗಳ ಜೋಡಣೆ ಮಾಡಿ ಹಾಡುಗಳನ್ನು ಹಾಡುತ್ತಾರೆ. ಇದಕ್ಕೆ ಪ್ರತಿ ಉತ್ತರವಾಗಿ ಕೂಡ ಕೆಲವೊಂದು ಗೀತೆಗಳನ್ನು ಹೇಳುತ್ತಾರೆ. ಒಟ್ಟಾರೆ ಇವರಿಬ್ಬರ ನಡುವಿನ ನೀನಾ ನಾನಾ ಹಾಡಿನ ಜಟಾಪಟಿ ನೋಡಿ ಮನೆಮಂದಿಯೆಲ್ಲ ಫುಲ್ ಎಂಜಾಯ್ ಮಾಡುತ್ತಾರೆ.

  • ಮಾತುಗಾರ ಮಂಜು ಬಾಯಿಗೆ ಪ್ಲಾಸ್ಟರ್ ಹಾಕಿದ ಬಿಗ್‍ಬಾಸ್!

    ಮಾತುಗಾರ ಮಂಜು ಬಾಯಿಗೆ ಪ್ಲಾಸ್ಟರ್ ಹಾಕಿದ ಬಿಗ್‍ಬಾಸ್!

    ಮಾತು ಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತನ್ನು ನಾವೆಲ್ಲ ಕೇಳಿರಬಹುದು. ಹಾಗೆಯೇ ಬಿಗ್‍ಬಾಸ್ ಮನೆಯಲ್ಲಿ ಹೆಚ್ಚಾಗಿ ಯಾರು ಮಾತನಾಡುತ್ತಾರೆ ಎಂದು ಕೇಳಿದರೆ ಅದು ಮಂಜು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಸದ್ಯ ಬಿಗ್‍ಬಾಸ್.. ದೊಡ್ಮನೆ ಸದಸ್ಯರಿಗೆ ಮಾತುಗಾರ ಎಂಬ ಚಟುವಟಿಕೆಯೊಂದನ್ನು ನೀಡಿದ್ದರು. ಅದರ ಅನುಸಾರ ಮನೆಯ ಎಲ್ಲ ಸದಸ್ಯರು ಇಡೀ ಮನೆಯಲ್ಲಿ ಹೆಚ್ಚಾಗಿ ಮಾತನಾಡುವ ಸದಸ್ಯರನ್ನು ಆರಿಸಿ ಪ್ಲಾಸ್ಟರ್ ಬ್ಯಾಡ್ಜ್‍ನನ್ನು ನೀಡಬೇಕು ಹಾಗೂ ಅತೀ ಕಡಿಮೆ ಮಾತನಾಡುವ ಸದಸ್ಯರಿಗೆ ಮೈಕ್ ಬ್ಯಾಡ್ಜ್ ನನ್ನು ನೀಡಬೇಕು ಎಂದು ಸೂಚಿಸಿದ್ದರು.

    ಈ ಚಟುವಟಿಕೆ ಆರಂಭಿಸಿದ ನಿಧಿ, ಮಂಜು ಮಾತೆಂದರೆ ನನಗೆ ಬಹಳ ಇಷ್ಟ. ಆದರೆ ಒಮ್ಮೊಮ್ಮೆ ಅವರ ಮಾತು ನನಗೆ ತಲೆನೋವು ಬರಿಸುತ್ತದೆ ಅಂತಾರೆ. ಇನ್ನು ನೋವಿಗೆ ಸ್ಪಂದಿಸುವ ಹಾಗೂ ಎಲ್ಲರನ್ನು ಮಾತಿನ ಮೂಲಕ ಆಕರ್ಷಿಸುವ ವ್ಯಕ್ತಿ ಮಂಜು ಎಂದು ಶಂಕರ್ ಹೇಳುತ್ತಾರೆ. ನಂತರ ಪ್ರಶಾಂತ್ ಸಂಬರ್ಗಿ ಮಾತು ಬೆಳ್ಳಿ, ಮೌನ ಚಿನ್ನ ಆದರೆ ಮಾತು ಹೆಚ್ಚಾದರೆ ಗಾರ್ಬೆಜ್ ಎಂದು ಹೇಳಿ ಪ್ಲಾಸ್ಟರ್ ನೀಡುತ್ತಾರೆ. ಮಂಜು ಮಾತನಾಡುವಾಗ ಸ್ವಲ್ಪ ವಾಲ್ಯೂಮ್ ಕಡಿಮೆ ಮಾಡಿಕೊಂಡರೆ ಒಳ್ಳೆಯದು ಅಂತ ಶಮಂತ್ ಹೇಳಿದರೆ, ಅರವಿಂದ್.. ನಿದ್ರೆಯ ಗೋರಕೆಯಲ್ಲಿ ಮಾತನಾಡುವ ವ್ಯಕ್ತಿ ಅಂದರೆ ಅದು ಮಂಜು ಅಂತ ಸೂಚಿಸುತ್ತಾರೆ. ಹೀಗೆ ವೈಷ್ಣವಿ ಸೇರಿದಂತೆ ಮನೆಯ ಬಹುತೇಕ ಮಂದಿ ಮಂಜುರನ್ನು ಮಾತುಗಾರ ಎಂದು ಸೂಚಿಸಿ ಪ್ಲಾಸ್ಟರ್ ನೀಡುತ್ತಾರೆ.

    ಮನೆಯಲ್ಲಿ ಕಡಿಮೆ ಮಾತನಾಡುವ ವ್ಯಕ್ತಿ ಎಂದರೆ ವೈಷ್ಣವಿ ಅವರು ಹೆಚ್ಚಾಗಿ ಮಾತನಾಡಬೇಕು ಎಂದು ದಿವ್ಯಾ ಸುರೇಶ್, ಶಂಕರ್, ಶಮಂತ್, ಶುಭ ಹೀಗೆ ಮನೆಯ ಹೆಚ್ಚಿನ ಮಂದಿ ಸೂಚಿಸುತ್ತಾರೆ.

    ಹೀಗೆ ಮನೆಯಲ್ಲಿ ಹೆಚ್ಚು ಮಾತನಾಡುವ ಸದಸ್ಯ ಮಂಜುಗೆ ಪ್ಲಾಸ್ಟರ್ ಬ್ಯಾಡ್ಜ್ ದೊರೆತ ಹಿನ್ನೆಲೆ ನಿನ್ನೆ ಬಿಗ್‍ಬಾಸ್ ತಮ್ಮ ಮುಂದಿನ ಆದೇಶದವರೆಗೂ ಮಂಜು ಮಾತನಾಡುವಂತಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ತಾವು ಏನೇ ಮಾತನಾಡಬೇಕದರೂ ನೇರವಾಗಿ ಮಾತನಾಡದೇ ವೈಷ್ಣವಿ ಮೂಲಕವೇ ಮಾತನಾಡಬೇಕೆಂದು ಹೇಳಿದರು. ಜೊತೆಗೆ ವೈಷ್ಣವಿಯೊಂದಿಗೆ ಕೂಡ ಪದ ಬಳಕೆ ಮಾಡದೇ ಸನ್ನೆ, ಮೂಕ ಅಭಿನಯ, ನಟನೆಯೊಂದಿಗೆ ಅರ್ಥಮಾಡಿಸಬೇಕು ಎಂದು ತಿಳಿಸಿದರು. ಇದನ್ನು ಕೇಳಿದ ಮನೆಯ ಸದಸ್ಯರು ಹೊಟ್ಟೆ ಬಿರಿಯುಷ್ಟು ನಗುತ್ತಾ ಎಂಜಾಯ್ ಮಾಡಿದರು.

    ಒಟ್ಟಾರೆ ಪಟಾಕಿಯಂತೆ ಯಾವಾಗಲೂ ಮಾತನಾಡುತ್ತಿದ್ದ ಮಂಜು ಬಾಯಿಗೆ ಬಿಗ್‍ಬಾಸ್ ಬೀಗ ಹಾಕಿದ್ದಾರೆ ಎಂದರೆ ತಪ್ಪಾಗಲಾರದು.