Tag: ಪಬ್ಲಿಕ್ ಟಿವಿ Biggboss

  • ಅರವಿಂದ್ ಪ್ರಶಾಂತ್ ಮಧ್ಯೆ ಮತ್ತೆ ಹೊತ್ತಿತು ತುಪ್ಪದ ಕಿಡಿ!

    ಅರವಿಂದ್ ಪ್ರಶಾಂತ್ ಮಧ್ಯೆ ಮತ್ತೆ ಹೊತ್ತಿತು ತುಪ್ಪದ ಕಿಡಿ!

    ಬಿಗ್‍ಬಾಸ್ ಮನೆಯಲ್ಲಿ ನಿನ್ನೆ ಯುಗಾದಿ ಹಬ್ಬದ ಸಡಗರ ಸಂಭ್ರಮ ಮನೆಮಾಡಿತ್ತು. ಹಬ್ಬವನ್ನು ವಿಜೃಂಭಣೆಯಾಗಿ ಆಚರಿಸಿದ ಮನೆ ಮಂದಿ ಎಲ್ಲರೂ ಒಟ್ಟಾಗಿ ಕುಳಿತು ಹಬ್ಬದೂಟ ಸವಿದರು. ಈ ವೇಳೆ ಅರವಿಂದ್ ಹಾಗೂ ಪ್ರಶಾಂತ್ ಮಧ್ಯೆ ತುಪ್ಪದ ವಿಚಾರಕ್ಕೆ ಮತ್ತೆ ವಾಗ್ವಾದ ನಡೆದಿದೆ.

    ಊಟ ಮಾಡುವ ವೇಳೆ ವೈಷ್ಣವಿ ಎಲ್ಲರಿಗೂ ಒಂದು ಕಡೆಯಿಂದ ತುಪ್ಪ ಬಡಿಸಿಕೊಂಡು ಬರುತ್ತಿರುತ್ತಾರೆ. ಈ ವೇಳೆ ಅರವಿಂದ್‍ಗೆ ಎರಡು ಬಾರಿ ತುಪ್ಪ ಬಡಿಸಿದ್ಯಾ ಎಂದು ಪ್ರಶಾಂತ್ ಹೇಳುತ್ತಾರೆ.

    ಆಗ ಅರವಿಂದ್ ನೀವು ನನ್ನ ತಟ್ಟೆ ಯಾಕೆ ನೋಡುತ್ತೀರಾ? ನೀವು ಊಟ ಮಾಡಿ, ನಿಮಗೂ ಬೇಕಾದರೆ ಕೇಳಿ ಹಾಕಿಸಿಕೊಳ್ಳಿ. ನನ್ನ ಸುದ್ದಿಗೆ ಯಾಕೆ ಬರುತ್ತೀರಾ, ಅರವಿಂದ್‍ಗೆ ಎರಡು ಬಾರಿ ಹಾಕಿದ್ಯಾ, ನಾಲ್ಕು ಬಾರಿ ಹಾಕಿದ್ಯಾ ಅಂತ ನೀವು ಹಾಕಿಸಿಕೊಳ್ಳಿ ಪ್ರಶಾಂತ್‍ರವರೇ ಎನ್ನುತ್ತಾರೆ. ಈ ವೇಳೆ ಮನೆಯ ಸದಸ್ಯರು ಪರವಾಗಿಲ್ಲ ಇಂದು ಜಗಳ ಬೇಡ ಎಂದು ಸಮಾಧಾನ ಪಡಿಸುತ್ತಾರೆ. ಆಗ ಪ್ರಶಾಂತ್‍ರವರು ಯಾವಾಗಲೂ ನನ್ನ ತಂಟೆಗೆ ಬರುತ್ತಾರೆ. ಯುಗಾದಿಗಾದರೂ ಬಿಟ್ಟು ಬಿಡಿ ಎಂದು ಕೆಂಡಾಕಾರಿದ್ದಾರೆ.

    ನಂತರ ಈ ಬಗ್ಗೆ ಬಾತ್ ರೂಮ್ ಏರಿಯಾದಲ್ಲಿ ಚಕ್ರವರ್ತಿ ಆ ರೀತಿ ಒಪನ್ ಕಮೆಂಟ್ ಮಾಡಬಾರದು ಎಂದು ಅರವಿಂದ್‍ಗೆ ಹೇಳಿದಾಗ, ಅವರೇ ಮಾಡುತ್ತಾರೆ. ನಾವು ಅವರಷ್ಟು ಮಾಡುವುದಿಲ್ಲ. ಅವರು ಮಾಡುವಾಗ ನಾವು ಮುಚ್ಚಿಕೊಂಡು ಇರುವುದಿಲ್ವಾ ಎನ್ನುತ್ತಾರೆ. ಆಗ ಚಕ್ರವರ್ತಿ ನಾನು ಹೇಳುವುದೆಂದರೆ ಎಲ್ಲರ ಎದುರಿಗೆ ಒಪನ್ ಕಮೆಂಟ್ ಮಾಡುವುದು ಸರಿಯಲ್ಲ. ನಾನು ಊಟ ತಿಂಡಿ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುವುದಿಲ್ಲ. ಬಂದರೆ ಆ ವಿಚಾರವನ್ನು ಖಾಸಗಿಯಾಗಿ ಇಡುತ್ತೇನೆ ಎಂದು ಹೇಳುತ್ತಾರೆ.

  • ಬಿಗ್‍ಬಾಸ್ ಮನೆಯಲ್ಲಿ ಸದ್ದು ಮಾಡ್ತಿದೆ ಶಮಂತ್ ಸಾಂಗ್!

    ಬಿಗ್‍ಬಾಸ್ ಮನೆಯಲ್ಲಿ ಸದ್ದು ಮಾಡ್ತಿದೆ ಶಮಂತ್ ಸಾಂಗ್!

    ಬಿಗ್‍ಬಾಸ್ ಮನೆಯಲ್ಲಿ ಶಮಂತ್ ವೀಕ್ ಕಂಟೆಸ್ಟೆಂಟ್ ಎಂದು ಹೇಳುತ್ತಿದ್ದ ಸ್ಪರ್ಧಿಗಳಿಗೆ ಬ್ರೋಗೌಡ ಇದೀಗ ಮನರಂಜನೆ ನೀಡುವ ಮೂಲಕ ಉತ್ತರ ನೀಡುತ್ತಿದ್ದಾರೆ. ಹಲವು ಟ್ಯಾಲೆಂಟ್ ಹೊಂದಿದ್ದರೂ ಇಷ್ಟು ದಿನ ಮೌನವಾಗಿದ್ದ ಶಮಂತ್ ಸದ್ಯ ಬಿಗ್ ಮನೆಯಲ್ಲಿ ಕಳೆದ ವಾರದಿಂದ ತಮ್ಮ ಆಟ ಶುರುಮಾಡಿದ್ದಾರೆ.

    ಹೌದು, ನಿನ್ನೆ ಶಮಂತ್ ಈಜುಕೊಳದ ಬಳಿ ಮನೆ ಸದಸ್ಯರ ಮುಂದೆ ‘ನಾಳೆ ಏನು ಆಯ್ತಾದೆ ಅಂತ ಯಾರಿಗ್ ಗೊತ್ತಾಣ್ಣ,…’ ಎಂದು ಸಾಂಗ್‍ವೊಂದನ್ನು ಹಾಡಿದ್ದಾರೆ. ವಿಶೇಷವೇನಪ್ಪಾ ಅಂದರೆ ಈ ಸಾಂಗ್‍ನ ಮಧ್ಯದಲ್ಲಿ ಅರವಿಂದ್ ಅಂದ್ರೆ ಕ್ಲಾಸೂ, ಪ್ರಶಾಂತ್ ಬಂದ್ರೆ ಕೇಸು, ರಘು ಹಾರ್ಟ್ ಸಿಕ್ಸಟಿನೂ, ರಾಜೀವ್ ಖಾಲಿ ಪ್ರೋಟಿನ್, ದಿವ್ಯಾ ಯೆಸೂ ಬೇಕು, ದಿವ್ಯಾ ಯೂ ಸೇಫು, ಶುಭ ಅಂದ್ರೆ ಜಂಪು, ನಿಧಿ ಬಣ್ಣ ಕೆಂಪು, ಮಂಜು ಎಂರ್ಟಟೈನರೂ, ವಿಶ್ವ ಒಬ್ಬ ಸಿಂಗರ್, ವೈಷು ಅಡುಗೆ ಸೂಪರೂ, ಚಕ್ರಿ ಒಬ್ಬ ರೈಟರೂ ಎಂದು ಮನೆಯ ಎಲ್ಲಾ ಸ್ಪರ್ಧಿಗಳನ್ನು ಬಣ್ಣಿಸಿದ್ದಾರೆ.

    ಅಷ್ಟೇ ಅಲ್ಲದೇ ಸಾಂಗ್‍ನ ಕೊನೆಯ ಸಾಲಿನಲ್ಲಿ ‘ವಿನ್ನರೂ ಯಾರು ಅಂತ ಡಿಸೈಡ್ ಆಗ್ಬೇಡಿ ಪಕ್ಕದಲ್ಲೇ ಕೂತಿರಬಹುದು ಹುಷಾರಾಗಿ..’ ಎಂದು ಚಮಕ್ ಕೂಡುವಂತೆ ಸಾಂಗ್ ಹಾಡಿದ್ದಾರೆ. ಈ ವೇಳೆ ಕೊನೆಯ ಸಾಲನ್ನು ಕೇಳಿ ಅಚ್ಚರಿಯಿಂದ ಮನೆಮಂದಿಯೆಲ್ಲಾ ಜೋರಾಗಿ ಕಿರುಚುತ್ತಾ ಚಪ್ಪಾಳೆಯನ್ನು ತಟ್ಟುತ್ತಾರೆ.

    ಒಟ್ಟಾರೆ ಇಷ್ಟು ದಿನ ಶಮಂತ್ ಆ್ಯಕ್ಟಿವ್ ಆಗಿಲ್ಲ ಎಂದು ಹೇಳಿದವರು ನಿನ್ನೆ ಶಮಂತ್ ಸಾಂಗ್ ಕೇಳಿ ಸೂಪರ್, ಲವ್ಲಿ, ಫೆಂಟಾಸ್ಟಿಕ್ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮನೆಮಂದಿಗಷ್ಟೇ ಅಲ್ಲದೇ ಇಷ್ಟು ದಿನ ಕಾಯುತ್ತಿದ್ದ ವೀಕ್ಷಕರಿಗೂ ಶಮಂತ್ ಮನರಂಜನೆಯ ಕಚಗುಳಿ ನೀಡಿದ್ದಾರೆ ಎಂದೇ ಹೇಳಬಹುದು.

  • ಬಿಗ್‍ಬಾಸ್ ಮನೆಯಲ್ಲಿ ಪ್ರತಿದಿನ ಮೇಕಪ್ ಮಾಡಿಕೊಳ್ತಾರಂತೆ ರಾಜೀವ್

    ಬಿಗ್‍ಬಾಸ್ ಮನೆಯಲ್ಲಿ ಪ್ರತಿದಿನ ಮೇಕಪ್ ಮಾಡಿಕೊಳ್ತಾರಂತೆ ರಾಜೀವ್

    – ನಿಧಿ ಸುಬ್ಬಯ್ಯ ಲಿಪ್‍ಸ್ಟಿಕ್ ಹಾಕ್ತಾರಂತೆ ರಾಜೀವ್

    ಸಾಮಾನ್ಯವಾಗಿ ಹುಡುಗಿಯರು ಮೇಕಪ್ ಮಾಡಿಕೊಳ್ಳುವುದು ಹೊಸ ವಿಷಯವೇನೆಲ್ಲಾ. ದೊಡ್ಮನೆಯಲ್ಲಿ ಪ್ರತಿನಿತ್ಯ ಹುಡುಗಿಯರು ಮೇಕಪ್ ಮಾಡಿಕೊಳ್ಳುತ್ತಾರೆ. ಆದರೆ ವಿಶೇಷ ಅಂದರೆ ಬಿಗ್‍ಬಾಸ್ ಮನೆಯಲ್ಲಿ ಪ್ರತಿದಿನ ರಾಜೀವ್ ಮೇಕಪ್ ಮಾಡಿಕೊಳ್ಳುತ್ತಾರೆ ಎಂದು ಮನೆಯ ಸದಸ್ಯರು ಹೇಳಿದ್ದಾರೆ.

    ಹೌದು, ಪ್ರತಿವಾರ ಮನೆಮಂದಿಯ ಚಲನ-ವಲನಗಳನ್ನು ಗಮನಿಸಿ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಯೆಸ್ ಆರ್ ನೋ ಆಟ ಆಡಿಸುತ್ತಾರೆ. ಸದ್ಯ ನಿನ್ನೆ ಬಿಗ್‍ಬಾಸ್ ಮನೆಯಲ್ಲಿ ಪ್ರತಿದಿನ ಮೇಕಪ್ ಮಾಡಿಕೊಳ್ಳುವ ಸ್ಪರ್ಧಿ ಎಂದರೆ ರಾಜೀವ್ ಎಂದು ಹೇಳಿದ್ದಾರೆ.

    ಈ ವೇಳೆ ಮನೆಯ ಎಲ್ಲಾ ಸದಸ್ಯರು ಯೆಸ್ ಎಂದಿದ್ದಾರೆ. ನಂತರ ಯಾಕೆ ಎಂದು ಸುದೀಪ್ ಕೇಳಿದಾಗ, ನಿಧಿ ಸುಬ್ಬಯ್ಯ, ಬರೀ ಅವರ ಪ್ರೊಡಕ್ಟ್, ಅವರ ಮೇಕಪ್ ಅಷ್ಟೇ ಅಲ್ಲದೇ ನನ್ನ ಪ್ರೊಡಕ್ಟ್ಸ್ ಮತ್ತೆ ಫೇಸ್ ಪ್ಯಾಕ್, ಹೇರ್ ಸ್ಪ್ರೇ, ಇವತ್ತು ನನ್ನ ಲಿಪ್‍ಸ್ಟಿಕ್ ಎರಡು ಮೂರು ಕಲರ್ ತಗೊಂಡು ಹಾಕಿಕೊಂಡಿದ್ದಾರೆ ಎಂದು ಆರೋಪಿಸುತ್ತಾರೆ.

    ನಂತರ ವೈಷ್ಣವಿ, ಅವರು ಬಳಸುವಷ್ಟು ಕ್ರೀಮ್ಸ್ ನಾವು ಕೂಡ ಯೂಸ್ ಮಾಡುವುದಿಲ್ಲ. ಹಾಗೇ ಅದಕ್ಕೆಂದೇ ಒಂದು ಬಾಕ್ಸ್ ಇಟ್ಟು ಒಂದು ಕಡೆ ಡೇ ಕ್ರೀಮ್, ನೈಟ್ ಕ್ರೀಮ್, ಮೋಸ್ಚರೈಸಿಂಗ್ ಕ್ರೀಮ್, ಫೇಸ್ ವಾಶ್ ಹೀಗೆ ಹಲವು ಕ್ರೀಮ್‍ಗಳನ್ನು ಯೂಸ್ ಮಾಡುತ್ತಾರೆ. ಜೊತೆಗೆ ಮೇಕಪ್ ಕೂಡ ಹಾಕಿಕೊಳ್ಳುತ್ತಾರೆ ಎನ್ನುತ್ತಾರೆ.

    ಚಕ್ರವರ್ತಿಯವರು ಕೂಡ ರಾಜೀವ್ ಅವರು ಕನ್ನಡಿಯನ್ನು ಪ್ರೀತಿಸುವಷ್ಟು ಬೇರೆ ಯಾರೂ ಪ್ರೀತಿಸುವುದನ್ನು ನೋಡಿಲ್ಲ ಎಂದಾಗ, ನಂತರ ನಿಧಿ ಕೂಡ ಹೌದು ಸರ್,

    ಆಗ ರಾಜೀವ್ ಶೂಟಿಂಗ್ ಇರಲಿ, ಹೊರಗಿರಲಿ ನಾನು ಮೇಕಪ್ ಮಾಡಿಕೊಂಡಾಗ, ಲೈಟ್ ಆಗಿ ಲಿಪ್‍ಸ್ಟಿಕ್ ಯೂಸ್ ಮಾಡುತ್ತೇನೆ. ಆದರೆ ಇಲ್ಲಿ ನನ್ನ ಮೇಕಪ್ ಕಿಟ್‍ನಲ್ಲಿ ಲಿಪ್‍ಸ್ಟಿಕ್ ಮಿಸ್ ಆಗಿದೆ ಎಂದು ಹೇಳಿದ್ದಾರೆ.

  • ದಿವ್ಯಾ-ಅರವಿಂದ್ ಲವ್ ಸ್ಟೋರಿಗೆ ಶಮಂತ್ ಬಳಿಯಲ್ಲಿದೆ ಸಾಕ್ಷಿ!

    ದಿವ್ಯಾ-ಅರವಿಂದ್ ಲವ್ ಸ್ಟೋರಿಗೆ ಶಮಂತ್ ಬಳಿಯಲ್ಲಿದೆ ಸಾಕ್ಷಿ!

    ಬಿಗ್‍ಬಾಸ್ ಮನೆಯಲ್ಲಿ ಅರವಿಂದ್, ದಿವ್ಯಾ ಲವ್ ಸ್ಟೋರಿ ನಡೆಯುತ್ತಿದೆ ಎಂಬುವುದಕ್ಕೆ ಶಮಂತ್ ಸಾಕ್ಷಿ ಸಮೇತವಾಗಿ ಕಿಚ್ಚ ಸುದೀಪ್ ಎದುರಿಗೆ ಸಾಬೀತು ಪಡಿಸಿದ್ದಾರೆ.

    ಪ್ರತಿವಾರದಂತೆ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ನಿನ್ನೆ ಯೆಸ್ ಆರ್ ನೋ ರೌಂಡ್ಸ್ ನಡೆಯಿತು ಈ ವೇಳೆ ಕಿಚ್ಚ ಸುದೀಪ್ ದಿವ್ಯಾ ಯು ಅವರಿಗೆ ಇತ್ತೀಚೆಗೆ ರಾತ್ರಿ ಹೊತ್ತು ನಿದ್ದೆಯೇ ಬರುತ್ತಿಲ್ಲ ಎಂದು ಪ್ರಶ್ನೆ ಕೇಳುತ್ತಾರೆ.

    ಆಗ ಮನೆಮಂದಿಯೆಲ್ಲಾ ಯೆಸ್ ಎಂದು ಬೋರ್ಡ್ ತೋರಿಸುತ್ತಾರೆ. ಈ ವೇಳೆ ಶಮಂತ್ ಅರವಿಂದ್ ಮಲಗುವವರೆಗೂ ದಿವ್ಯಾ ಮಲಗುವುದಿಲ್ಲ. ಎಂಬುದಕ್ಕೆ ನನ್ನ ಕತ್ತು ಹಿಡಿದುಕೊಂಡಿರುವುದೇ ಸಾಕ್ಷಿ. ನಿನ್ನೆ ಸರಿಯಾಗಿರುವ ಬಟ್ಟೆಗಳನ್ನು ಮತ್ತೆ ಮತ್ತೆ ಮಡಚಿಡುತ್ತಿದ್ದರು. ಅರವಿಂದ್ ಅವರು ಎಲ್ಲಿಯವರೆಗೂ ಮಲಗಲ್ಲವೋ ಅಲ್ಲಿಯವರೆಗೂ ಬಟ್ಟೆ ಮಡಚುತ್ತಲೇ ಇರುತ್ತಿದ್ದರು. ನಾನು ನೋಡುವವರೆಗೂ ನೋಡಿದೆ. ಕೊನೆಗೆ ಕತ್ತು ನೋವು ಬಂತು. ಹಾಗಾಗಿ ಈ ಕಡೆ ತಿರುಗಿಕೊಂಡು ಮಲಗಿಕೊಂಡೆ. ಆದರೆ ಬೆಳಗ್ಗೆ ನೋಡಿದರೆ ಕತ್ತು ಹಿಡಿದುಕೊಂಡಿದೆ ಎಂದು ಹೇಳಿದ್ದಾರೆ.

    ಇನ್ನೂ ಈ ವೇಳೆ ನಿಧಿ ಸುಬ್ಬಯ್ಯ, ಅವನು ನಿದ್ದೆ ಮಾಡಿಕೊಂಡು ಗೊರಕೆ ಹೊಡೆಯುವಾಗ, ದಿವ್ಯಾ ಕೈನಲ್ಲಿ ಹಾರ್ಟ್ ಚಿಹ್ನೆ ಮಾಡಿ ತೋರಿಸುತ್ತಿರುತ್ತಾರೆ. ಆದಾದ ಮೇಲೆ ಬೆಳಗ್ಗೆ ಎದ್ದಿದ ಕೂಡಲೇ ಇಬ್ಬರು ಎಂದು ಒಬ್ಬರಿಗೊಬ್ಬರು ತಬ್ಬಿಕೊಳ್ಳುತ್ತಾರೆ. ಆಗ ದಿವ್ಯಾ ಅರವಿಂದ್‍ನನ್ನು ಫುಲ್ ತಬ್ಬಿಕೊಂಡಿದ್ದರೆ, ಅರವಿಂದ್ ಒಂದು ಕೈನಲ್ಲಿ ತಬ್ಬಿಕೊಂಡು ಮತ್ತೊಂದು ಕೈನಲ್ಲಿ ಮೂಗಿಗೆ ಕೈ ಹಾಕಿಕೊಂಡು ಗೊಣ್ಣೆ ತೆಗೆಯುತ್ತಿರುತ್ತಾನೆ ಎಂದು ಹೇಳುತ್ತಾರೆ.

    ಒಟ್ಟಾರೆ ನಿಧಿ ಶಮಂತ್ ಹಾಗೂ ನಿಧಿ ಸುಬ್ಬಯ್ಯ ಮಾತು ಕೇಳಿ ಮನೆ ಮಂದಿ ಜೊತೆ ಕಿಚ್ಚ ಕೂಡ ಜೋರಾಗಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ.

  • ಗೇಮ್ ಲೆಕ್ಕಾಚಾರ ಅರ್ಥಮಾಡಿಕೊಳ್ಳೋದ್ರಲ್ಲಿ ಶುಭಾ ಪೂಂಜಾ ಪಂಟ್ರಾ?

    ಗೇಮ್ ಲೆಕ್ಕಾಚಾರ ಅರ್ಥಮಾಡಿಕೊಳ್ಳೋದ್ರಲ್ಲಿ ಶುಭಾ ಪೂಂಜಾ ಪಂಟ್ರಾ?

    ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಸದಾ ಲವಲವಿಕೆಯಿಂದ ಮನೆಯಲ್ಲಿ ಇರುವ ಸ್ಪರ್ಧಿ ಎಂದರೆ ಶುಭಾ ಪೂಂಜಾ. ಟಾಸ್ಕ್‌ನಲ್ಲಿ  ಕೆಲವು ಬಾರಿ ಹಿನ್ನಡೆ ಸಾಧಿಸಿದರು. ಮನೆಯ ಎಲ್ಲಾ ಸದಸ್ಯರಿಗೂ ಹಾಗೂ ವೀಕ್ಷಕರಿಗೂ ಮನರಂಜನೆ ನೀಡುವುದರಲ್ಲಿ ಒಂದು ಹೆಜ್ಜೆ ಮುಂದೆಯೇ ಇದ್ದಾರೆ.

    ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್, ಗೇಮ್‍ನ ಲೆಕ್ಕಾಚಾರ ಅರ್ಥಮಾಡಿಕೊಳ್ಳುವುದರಲ್ಲಿ ಶುಭಾ ಪೂಂಜಾ ಎತ್ತಿದ ಕೈ, ಹೀಗಂತಾ ನಿಧಿ ಹಾಗೂ ದಿವ್ಯಾ ಸುರೇಶ್ ಅಂದುಕೊಂಡಿದ್ದಾರೆ. ಅಂದರೆ ಲೆಕ್ಕಾಚಾರ ಹೇಳಬೇಕಾದ್ರೂ ನಿಮ್ಮ ಎಕ್ಸ್‍ಪ್ರೆಷನ್ ಒನ್ ಮಿಲಿಯನ್ ಡಾಲರ್ ವರ್ಥ್. ನನಗೆ ಗೊತ್ತಿತ್ತು, ನಾನು ಹೇಳಿದ್ದೆ ಎನ್ನುತ್ತೀರಾ. ಆಗ ಇನ್ನೊಬ್ಬರು ಇದು ನಿಮಗೆ ಗೊತ್ತಿತ್ತಾ? ಇದೆಲ್ಲಾ ನಡೆತಿದ್ಯಾ ಎಂದಾಗ, ಹೌದು ಎಂದು ತಲೆ ಅಲ್ಲಡಿಸುತ್ತೀರಾ. ಇದಾದ ಬಳಿಕ ನಾವೆಲ್ಲರೂ ಬಿಗ್‍ಬಾಸ್ ಜೊತೆ ಕುಳಿತುಕೊಂಡು ನಾವು ಕರೆಕ್ಟ್ ಹಾ ಅಥವಾ ಅವರಾ ಅಂತಾ ಚರ್ಚೆ ಮಾಡಿದ್ದೇವೆ ಎಂದು ಹಾಸ್ಯ ಮಾಡುತ್ತಾ ಕಿಚ್ಚ ಶುಭ ಕಾಲೆಳೆಯುತ್ತಾರೆ.

    ಪ್ರತಿ ಸೀಸನ್‍ನಲ್ಲಿ ಈ ರೀತಿ ಯಾರಾದರೂ ಒಬ್ಬರು ಸಿಗುತ್ತಾರೆ ಅವರನ್ನು ನಾವು ಅನಾಲಿಸಿಸ್ಟ್ ಎಂದು ಕರೆಯುತ್ತೇವೆ. ನೀವು ದಿವ್ಯಾ ಸುರೇಶ್, ನಿಧಿ ಕುಳಿತುಕೊಂಡು ಮಾತನಾಡುತ್ತಿರುತ್ತೀರಾ. ಇಬ್ಬರು ಮಹಿಳಾ ಕಂಟೆಸ್ಟೆಂಟ್ ಬಂದಿದ್ದಾರೆ ಎಂದರೆ ಈ ವಾರ ಮನೆಯಿಂದ ಹುಡುಗಿಯೇ ಹೊರಹೋಗುವುದು ಎಂದು ಹೇಳುತ್ತೀರಾ, ಈ ವೇಳೆ ಇದು ನಿಮಗೆ ಗೊತ್ತಾ? ಅಂದಾಗ, ಹೌದು ಎಂದು ತಲೆ ಅಲ್ಲಡಿಸುತ್ತೀರಾ.

    ಸೋ ಈ ವಾರ ಯಾರು ಹೋಗುತ್ತಾರೆ ಎಂದು ಕಿಚ್ಚ ಶುಭಾರನ್ನು ಕೇಳುತ್ತಾರೆ. ಆಗ ಅದು ಹಾಗಲ್ಲ ಸರ್ ಎಂದು ಮುಖ ಮಚ್ಚಿಕೊಂಡು ನಗುತ್ತಾ ಶುಭ ಹೇಳುತ್ತಾರೆ. ಇಲ್ಲ ಇಲ್ಲ ಇಬ್ಬರು ಭಕ್ತಾದಿಗಳು ನಿಮ್ಮ ಮಾತನ್ನು ಕೇಳಿ ಆಶ್ರಮ ಕಟ್ಟಿಕೊಂಡಿದ್ದಾರೆ. ಈಗ ಆ ಫೌಂಡೆಷನ್‍ನನ್ನು ಅಲ್ಲಾಡಿಸಬೇಡಿ ಎಂದು ಕಿಚ್ಚ ವ್ಯಂಗ್ಯ ಮಾಡುತ್ತಾರೆ.

    ಆಗ ಶುಭ ಯಾರು ಹೋಗುತ್ತಾರೆ ಎಂದು ನನಗೆ ಗೊತ್ತಿಲ್ಲ. ಹಾಗೇ ಅನಿಸಿತು, ನಮಗೆಲ್ಲಾ ಅಳು ಬಂತು ಎಂದು ಹೇಳುತ್ತಾರೆ. ನಂತರ ಕಿಚ್ಚ ಶಂಕರ್‍ರವರು ಹೋಗಿದ್ದಕ್ಕೆ ಮತ್ತೋರ್ವ ಗಂಡಸರು ಬಂದರು. ಇದೀಗ ಇಬ್ಬರು ಹುಡುಗಿಯರು ಬಂದಿದ್ದಾರೆ. ಹಾಗಾಗಿ ಒಬ್ಬ ಹುಡುಗಿ ಹೋಗುತ್ತಾರೆ ಎಂಬ ಶುಭಾ ಲೆಕ್ಕಾಚಾರವನ್ನು ನೀವು ಸಿರಿಯಸ್ ಆಗಿ ತೆಗೆದುಕೊಂಡ್ರಾ ಎಂದು ನಿಧಿಗೆ ಕಿಚ್ಚ ಕೇಳುತ್ತಾರೆ.

    ಆಗ ನಿಧಿ ನಾನು ಆ ವೇಳೆ ಅತ್ತುಬಿಟ್ಟೆ ಯಾಕೆಂದರೆ ಒಂದು ವೇಳೆ ನಾನು ಎಲಿಮಿನೇಟ್ ಆದರೆ ಎಲ್ಲರನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದರು.

  • ಪ್ರಿಯಾಂಕ ಎಂಟ್ರಿಯಾಗ್ತಿದ್ದಂತೆ ಪಂಚಿಂಗ್ ಡೈಲಾಗ್ ಹೊಡೆದ ಶಮಂತ್!

    ಪ್ರಿಯಾಂಕ ಎಂಟ್ರಿಯಾಗ್ತಿದ್ದಂತೆ ಪಂಚಿಂಗ್ ಡೈಲಾಗ್ ಹೊಡೆದ ಶಮಂತ್!

    ಬಿಗ್‍ಬಾಸ್ ಶೋನಲ್ಲಿ ದಿನೇ ದಿನೆ ಕಾಂಪಿಟೇಷನ್ ಹೆಚ್ಚಾಗುತ್ತಿದೆ. ಕಳೆದ ವಾರ ಬಿಗ್‍ಬಾಸ್ ಮನೆಗೆ ವೈಲ್ಡ್‍ಕಾರ್ಡ್ ಮೂಲಕ ಚಕ್ರವರ್ತಿ ಚಂದ್ರಚೂಡರವರು ಆಗಮಿಸಿದ್ದರು. ಇದೀಗ ದೊಡ್ಮನೆ ಸ್ಪರ್ಧಿಗಳಿಗೆ ಕಾಂಪಿಟೇಷನ್ ನೀಡಲು ಮತ್ತೋರ್ವ ಹೊಸ ಸ್ಪರ್ಧಿ ಎಂಟ್ರಿ ಕೊಟ್ಟಿದ್ದಾರೆ.

    ಇಷ್ಟು ದಿನ ಎಷ್ಟೇ ಟ್ರೈ ಮಾಡಿದರೂ ಒಂದು ಹುಡುಗಿಯೂ ಬೀಳದ ಶಮಂತ್ ಇನ್ನೂ ಸೈಲೆಂಟ್ ಆಗಿದ್ದರೆ ನಡೆಯುವುದಿಲ್ಲ ಎಂದು ನಿನ್ನೆ ಪಂಚಿಂಗ್ ಡೈಲಾಗ್ ಹೊಡೆಯುವ ಮೂಲಕ ವಾಯ್ಸ್ ರೈಸ್ ಮಾಡಿದ್ದಾರೆ. ಹೌದು ಶಮಂತ್, ನಿನ್ನೆ ಮನೆಗೆ ಬಂದ ಪ್ರಿಯಾಂಕಗೆ ಎಲ್ಲರ ಮುಂದೆ ನಿಮ್ಮ ಊಟ ಆಯಿತಾ? ಎಂದು ಕೇಳುತ್ತಾರೆ. ಆಗ ಇಲ್ಲ ಎಂದು ಪ್ರಿಯಾಂಕ ಹೇಳಿದಾಗ, ಡಿಫರೆಂಟ್ ಅಂದರೆ ‘ಚಿಕ್ಕು ಚಿಕನ್’ ಎರಡು ಮನೆಗೆ ಬಂದಿದ್ದಾರೆ ಎಂದು ಡೈಲಾಗ್ ಹೊಡೆದಿದ್ದಾರೆ.

    ಆನ್ ದಿ ಸ್ಪಾರ್ಟ್ ಶಮಂತ್ ಹೊಡೆದ ಪಂಚಿಂಗ್ ಡೈಲಾಗ್ ಕೇಳಿ ಅಚ್ಚರಿಗೊಂಡ ಮನೆಯ ಮಂದಿ ಕಮಾನ್ ಶಮಂತ್, ಕಮಾನ್ ಶಮಂತ್ ಎಂದು ಎದ್ದು ನಿಂತು ಜೋರಾಗಿ ಚಪ್ಪಾಳೆ ಹೊಡೆಯುತ್ತಾ ಹಾಸ್ಯ ಮಾಡಿದ್ದಾರೆ.

    ನಿನ್ನೆ ಬಿಗ್‍ಬಾಸ್ ಮನೆಗೆ ಚಿಕನ್ ಹಿಡಿದುಕೊಂಡು ವೈಲ್ಡ್ ಕಾರ್ಡ್ ಮೂಲಕ ಪ್ರಿಯಾಂಕ ತಿಮ್ಮೇಶ್ ಎಂಟ್ರಿ ನೀಡಿದ್ದಾರೆ. ಮೊದಲಿಗೆ ಬಂದ ಕೂಡಲೇ, ನನ್ನ ಹೆಸರು ಪ್ರಿಯಾಂಕ ತಿಮ್ಮೇಶ್, ನಾನು ಭದ್ರಾವತಿ ಹುಡುಗಿ. ನನ್ನ ವೃತ್ತಿ ಜೀವನ ಆರಂಭವಾಗಿದ್ದು ಪ್ರೀತಿಯಿಂದ ಸಿರಿಯಲ್‍ನಿಂದ ಬಳಿಕ ನಾನು ಮೊದಲ ಬಾರಿಗೆ ಗಣಪ ಸಿನಿಮಾದಲ್ಲಿ ಅಭಿನಯಿಸಿದೆ. ನಂತರ ಪಟಾಕಿ, ಭೀಮ ಸೇನಾ ನಳ ಮಹಾರಾಜ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಶುಗರ್ ಲೇಸ್ ಹಾಗೂ ಅರ್ಜುನ್ ಗೌಡ ನನ್ನ ಮುಂದಿನ ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದೆ ಎಂದು ಮನೆಯ ಸದಸ್ಯರೊಂದಿಗೆ ತಮ್ಮ ಪರಿಚಯ ಮಾಡಿಕೊಂಡರು.

    ನಿಮ್ಮೆಲ್ಲರನ್ನು ಇಷ್ಟು ದಿನ ನಾನು ಟಿವಿಯಲ್ಲಿ ನೋಡುತ್ತಿದ್ದೆ. ಇದೀಗ ಏಕ್ಸೈಟ್ ಆಗಿದ್ದೇನೆ. ಮುಂದೆ ಏನು ಎಂಬುವುದು ನನಗೆ ಗೊತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     

  • ಬಿಗ್‍ಬಾಸ್ ನೀಡಿದ ಟಾಸ್ಕ್ ನಿಂದ್ಲೇ ಹತ್ತಿರವಾಗ್ತಿದ್ದಾರಾ ಅರವಿಂದ್, ದಿವ್ಯಾ?

    ಬಿಗ್‍ಬಾಸ್ ನೀಡಿದ ಟಾಸ್ಕ್ ನಿಂದ್ಲೇ ಹತ್ತಿರವಾಗ್ತಿದ್ದಾರಾ ಅರವಿಂದ್, ದಿವ್ಯಾ?

    – ದಿವ್ಯಾಗೆ ಊಟ ಮಾಡಿಸಿದ ಅರವಿಂದ್

    ಬಿಗ್‍ಬಾಸ್ ನೀಡಿದ ಜೋಡಿ ಟಾಸ್ಕ್ ಮೂಲಕ ಒಂದಾಗಿದ್ದ ಅರವಿಂದ್ ಹಾಗೂ ದಿವ್ಯಾ ಉರುಡುಗ, ಇದೀಗ ಮತ್ತೆ ಬಿಗ್‍ಬಾಸ್ ನೀಡಿದ ಟಾಸ್ಕ್ ಮೂಲಕವೇ ಇನ್ನಷ್ಟು ಹತ್ತಿರವಾಗ್ತಿದ್ದಾರೆ ಅನ್ನೋ ಗುಮಾನಿ ಎದ್ದಿದೆ.

    ನಿನ್ನೆ ಬಿಗ್‍ಬಾಸ್ ಶುಭಾ ಪೂಂಜಾರವರಿಗೆ ಕನ್ಫೆಷನ್ ರೂಮ್‍ಗೆ ಕರೆದು ಒಂದು ಪ್ಲೇಟ್‍ನಲ್ಲಿ ಚಿಕನ್ ನೀಡಿ, ಮುಂದಿನ ಆದೇಶದವರೆಗೂ ಮನೆಯ ಸದಸ್ಯರು ಚಿಕನ್‍ನನ್ನು ಒಬ್ಬೊಬ್ಬರು ಬಜರ್ ಆದ ಬಳಿಕ ವರ್ಗಾಹಿಸಿಕೊಂಡು ಕೆಳಗೆ ಇಡದಂತೆ ನೋಡಿಕೊಳ್ಳಬೇಕು. ಹೀಗೆ ಜಾಗೃತರಾಗಿ ನೋಡಿಕೊಂಡರೆ ಲಕ್ಷುರಿ ಬಜೆಟ್‍ನಲ್ಲಿ ಕಳೆದುಕೊಂಡಿರುವ ಚಿಕನ್‍ನನ್ನು ಹಿಂಪಡೆಯಬಹುದು ಎಂದು ತಿಳಿಸಿದ್ದರು.

    ಅದರಂತೆ ಮೊದಲಿಗೆ ಶುಭಾ ಚಿಕನ್‍ನನ್ನು ಕೈಯಲ್ಲಿ ಇಟ್ಟುಕೊಂಡು ಜೋಪಾನವಾಗಿ ನೋಡಿಕೊಂಡರು. ಬಳಿಕ ಬಜರ್ ಆದನಂತರ ದಿವ್ಯಾ ಉರುಡಗೆ ಚಿಕನ್ ಪ್ಲೇಟ್‍ನನ್ನು ಪಾಸ್ ಮಾಡಿದರು. ಚಿಕನ್ ನೋಡಿ ದಿವ್ಯಾ ಉರುಡಗ ಖುಷಿಖುಷಿಯಿಂದ ಸ್ವೀಕರಿಸಿ ಅರವಿಂದ್ ಪಕ್ಕದಲ್ಲಿ ಕುಳಿತುಕೊಳ್ಳಲು ಬರುತ್ತಾರೆ. ಆಗ ದಿವ್ಯಾ ಕುಳಿತುಕೊಳ್ಳಲು ಮೈಕ್ ಅಡ್ಡ ಬರುತ್ತದೆ ಎಂದು ಅರವಿಂದ್ ದಿವ್ಯಾ ಮೈಕ್‍ನನ್ನು ಪಕ್ಕಕ್ಕೆ ಸರಿಸುತ್ತಾರೆ.

    ನಂತರ ದಿವ್ಯಾ ನನ್ನ ಕೆನ್ನೆ ಮೇಲೆ ಸೊಳ್ಳೆ ಕಚ್ಚುತ್ತಿರುವುದಾಗಿ ತಿಳಿಸಿದಾಗ, ಅರವಿಂದ್ ಕೂಡಲೇ ಎಲ್ಲಿ ಎಂದು ಕೆನ್ನೆ, ಹಣೆ ಹಾಗೂ ಗಲ್ಲದ ಮೇಲೆ ಕೈನಲ್ಲಿ ಸವರುತ್ತಾರೆ. ಬಳಿಕ ಬಾಯಿಯಿಂದ ಗಾಳಿಯನ್ನು ಊದಿ, ಯಾವ ಸೊಳ್ಳೆಯು ಇಲ್ಲ ಎಂದು ಹೇಳುತ್ತಾರೆ. ಇದಾದ ನಂತರ ಮನೆಯಲ್ಲಿ ಎಲ್ಲರೂ ತಮ್ಮ ಪಾಡಿಗೆ ತಾವು ಊಟ ಮಾಡುತ್ತಿರುತ್ತಾರೆ. ಈ ವೇಳೆ ಅರವಿಂದ್ ತಾವು ಊಟ ಮಾಡದೇ ಅನ್ನ, ಸಾಂಬಾರ್ ತಂದು ದಿವ್ಯಾ ಉರುಡುಗಗೆ ಒಂದೊಂದೇ ತುತ್ತು ತಿನ್ನಿಸಿದ್ದಾರೆ.

    ಒಟ್ಟಾರೆ ಈ ಕ್ಯೂಟ್ ಪೇರ್ ಒಬ್ಬರ ಮೇಲೊಬ್ಬರು ಹೊಂದಿರುವ ಕಾಳಜಿ ನೋಡಿ ಫಿದಾ ಆಗಿರುವ ಪ್ರೇಕ್ಷಕರು, ಈ ಜೋಡಿಗೆ ದೃಷ್ಟಿ ತಾಗದಿರಲಿ ಎಂದು ಆಶಿಸುತ್ತಿದ್ದಾರೆ ಎಂದೇ ಹೇಳಬಹುದು.

  • ಟಿ-ಶರ್ಟ್ ಹಾಕಲ್ಲ ಅಂದ್ರೆ ಶುಭಾಗೆ ಬೈಯ್ಯೋದ್ಯಾರು ಗೊತ್ತಾ?

    ಟಿ-ಶರ್ಟ್ ಹಾಕಲ್ಲ ಅಂದ್ರೆ ಶುಭಾಗೆ ಬೈಯ್ಯೋದ್ಯಾರು ಗೊತ್ತಾ?

    ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲಾ ಸ್ಪರ್ಧಿಗಳು ಪ್ರತಿದಿನ ತಮಗೆ ಇಷ್ಟವಾದಂತಹ ಟ್ರೆಂಡಿ ಹಾಗೂ ಡಿಫರೆಂಟ್, ಡ್ರೆಸ್‍ಗಳನ್ನು ಹಾಕಿಕೊಳ್ಳುವ ಮೂಲಕ ಕಂಗೊಳಿಸುತ್ತಿದ್ದಾರೆ. ಸದ್ಯ ಬಿಗ್‍ಬಾಸ್, ಕ್ಯಾಪ್ಟನ್ ಮಂಜು ಸಾರಥ್ಯದಲ್ಲಿ ಮನೆಯ ಸದಸ್ಯರನ್ನು ನಾಲ್ಕು ಗುಂಪುಗಳಾಗಿ ಮಾಡಿ ಟಾಸ್ಕ್ ನೀಡುತ್ತಿದ್ದಾರೆ. ಅಲ್ಲದೆ ಈ ನಾಲ್ಕು ತಂಡದ ಸದಸ್ಯರಿಗೆ ಕೆಂಪು, ಬಿಳಿ, ಪಿಂಕ್ ಹಾಗೂ ಹಸಿರು ಬಣ್ಣದ ಟಿ-ಶರ್ಟ್‍ಗಳನ್ನು ನೀಡಿದ್ದಾರೆ.

    ಹೀಗಾಗಿ ಮನೆಯ ಎಲ್ಲಾ ಸದಸ್ಯರು ಟಿ-ಶರ್ಟ್ ಧರಿಸಿ ಟಾಸ್ಕ್ ಆಡಲು ಮುಂದಾಗಿದ್ದಾರೆ. ಈ ವೇಳೆ ವೈಷ್ಣವಿ ಹಾಗೂ ಶುಭಾ ಪೂಂಜಾ ಕೂಡ ಟಿ-ಶರ್ಟ್ ಧರಿಸಿ ಡ್ರೆಸಿಂಗ್ ಟೇಬಲ್‍ನ ಮೀರರ್ ಮುಂದೆ ನಿಂತು ಮೇಕಪ್ ಮಾಡಿಕೊಳ್ಳುತ್ತಿರುತ್ತಾರೆ. ಆಗ ವೈಷ್ಣವಿ, ಶುಭಾ ಪೂಂಜಾಗೆ ಯಾಕೆ ಟಿ-ಶರ್ಟ್ ಇಷ್ಟ ಇಲ್ವಾ ಅಂತ ಕೇಳ್ತಾರೆ. ಅದಕ್ಕೆ ಶುಭಾ, ಚಿಕ್ಕ ಮಕ್ಕಳಂತೆ ನನಗೆ ಇಷ್ಟ ಇಲ್ಲಾ ವೈಶು, ನನಗೆ ಈ ತರ ಟಿ-ಶಟ್ರ್ಸ್ ಇಷ್ಟ ಆಗಲ್ಲ. ನಾನು ಮನೆಯಲ್ಲೂ ಈ ತರ ಟಿ-ಶಟ್ರ್ಸ್ ಹಾಕಿಕೊಳ್ಳುವುದಿಲ್ಲ ಅಂತಾರೆ. ಅದಕ್ಕೆ ವೈಷ್ಣವಿ ಹಾಗಾದರೆ ಹಾಕಿಕೊಳ್ಳಬೇಡಿ ಬಿಚ್ಚಿಬಿಡಿ. ಗೌನ್ ಹಾಕಿಕೊಳ್ಳಿ ಎಂದು ಹೇಳುತ್ತಾರೆ.

    ಇದಕ್ಕೆ ಶುಭಾ ಇಲ್ಲ,.. ಅವರು ಬೈತಾರೆ, ಹ್ಯಾಸ್ ಇಟ್ ಈಸ್ ಅವರು ನನಗೆ ತುಂಬಾನೇ ಬೈತಿದ್ದಾರೆ ಇತ್ತೀಚಿಗೆ ಅಂತಾ ಹೇಳ್ತಾರೆ. ಆಗ ವೈಷ್ಣವಿ ನಿಮಗೆ ಬೈಯ್ಯಲು ಧೈರ್ಯ ಯಾರಿಗಿದೆ ಹೇಳಿ ಎಂದು ಕೇಳುತ್ತಾರೆ. ಇಲ್ಲ ಬೈತಿದ್ದಾರೆ, ತುಂಬಾ ತುಂಬಾ ಬೈತಿದ್ದಾರೆ, ನಾನು ಏನು ಮಾಡಿದೆ ಎಂದು ಶುಭ ಹೇಳಿದಾಗ, ವೈಷ್ಣವಿ ಮೈಕ್ ಹಾಕಲ್ಲ. ಗ್ಲಾಸ್ ಕದಿತ್ತಿರಾ ಅದಕ್ಕೆ ಬೈಯ್ತಾರೆ ಅಂತಾರೆ. ಇಲ್ಲ ನಾನು ನನ್ನ ಪಾಡಿಗೆ ಆಟ ಆಡ್ತಿದ್ದೀನಿ. ನನಗೆ ಯಾರಾದರೂ ಬೈದರೆ ನನಗೆ ಅರ್ಥನೇ ಆಗುವುದಿಲ್ಲ. ಯಾಕ್ ಬೈಬೇಕು? ನನ್ನ ಪಾಡಿಗೆ ನಾನು ಇದ್ದೇನೆ ಎಂದು ಕ್ಯೂಟ್ ಕ್ಯೂಟ್ ಆಗಿ ಸಣ್ಣ ಮಕ್ಕಳಂತೆ ಶುಭಾ.. ವೈಷ್ಣವಿ ಜೊತೆ ಮಾತನಾಡಿದ್ದಾರೆ.

    ಒಟ್ಟಾರೆ ಮಗುವಿನಂತೆ ಮನಸ್ಸು ಹೊಂದಿರುವ ಶುಭಾ, ನಿಜವಾಗಿಯೂ ಮಗುವಿನಂತೆ ಮುದ್ದು-ಮುದ್ದಾಗಿ ಮಾತನಾಡಿರುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ ಎಂದರೆ ತಪ್ಪಾಗಲಾರದು.

  • ದಿವ್ಯಾ ಸುರೇಶ್‍ರನ್ನೇ ಟಾರ್ಗೆಟ್ ಮಾಡ್ತಿರೋದ್ಯಾಕೆ ಪ್ರಶಾಂತ್?

    ದಿವ್ಯಾ ಸುರೇಶ್‍ರನ್ನೇ ಟಾರ್ಗೆಟ್ ಮಾಡ್ತಿರೋದ್ಯಾಕೆ ಪ್ರಶಾಂತ್?

    ಬಿಗ್‍ಬಾಸ್ ಮನೆಯಲ್ಲಿ ದಿನೇ ದಿನೆ ಕಾಂಪಿಟೇಷನ್ ಹೆಚ್ಚಾಗುತ್ತದೆ. ಸದ್ಯ ನಿನ್ನೆ ಎಲಿಮೀನೆಷನ್ ನಂತರ ಪ್ರಶಾಂತ್ ಸಂಬರ್ಗಿ ಮೈಂಡ್ ಗೇಮ್ ಆಡಲು ಸ್ಟಾರ್ಟ್ ಮಾಡಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ತಾವು ಉಳಿಯಬೇಕಾದರೆ ತಮಗೆ ಕಾಂಪಿಟೇಷನ್ ನೀಡುತ್ತಿರುವ ಸ್ಪರ್ಧಿ ದಿವ್ಯಾ ಸುರೇಶ್‍ರನ್ನು ಸೋಲಿಸಬೇಕೆಂದು ಪ್ರಶಾಂತ್ ನಿನ್ನೆ ಶಮಂತ್ ಜೊತೆ ಕುಳಿತು ಚರ್ಚೆ ನಡೆಸಿದ್ದಾರೆ.

    ಈ ಮನೆಯಲ್ಲಿ ಕಾಂಪಿಟೇಷನ್ ಇರುವುದೆಂದರೆ ನನಗೆ, ನಿನಗೆ, ದಿವ್ಯಾ ಸುರೇಶ್, ಶುಭಾ ಪೂಂಜಾ, ನಿಧಿ, ಅರವಿಂದ್ ಎಂದು ಪ್ರಶಾಂತ್ ಹೇಳುತ್ತಾರೆ. ಆಗ ಶಮಂತ್ ಶುಭ, ನಿಧಿ ಫಿಲ್ಮ್ ಸ್ಟಾರ್ಸ್ ಹಾಗೂ ಅರವಿಂದ್ ಒಳ್ಳೆ ಆಟಗಾರ ಹಾಗಾಗಿ ಈ ವಾರ ಮನೆಯಿಂದ ಈ ಮೂವರು ಹೋಗುವುದಿಲ್ಲ ಅನಿಸುತ್ತದೆ. ಆದರೆ ಮಿಕ್ಕಿರುವ ಡಮ್ಮಿ ಪೀಸ್‍ಗಳೆಂದರೆ ನಾವೇ ಎಂದು ಶಮಂತ್, ಪ್ರಶಾಂತ್‍ಗೆ ಹೇಳುತ್ತಾ ನಗುತ್ತಾರೆ.

    ಆಗ ಪ್ರಶಾಂತ್ ಹೌದು, ಉಳಿದ ಮೂವರಲ್ಲಿ ನಾನು, ನೀನು, ದಿವ್ಯಾ ಸುರೇಶ್ ಬರುತ್ತೇವೆ. ಹಾಗಾಗಿ ಟಾರ್ಗೆಟ್ ಮಾಡಿ ಎಲ್ಲ ಗೇಮ್ ಕೂಡ ಆಡಿ ಅವಳನ್ನೇ ಹೊಡೆಯಬೇಕು. ಇವತ್ತಿಗೆ ಲೈಫ್ ಮುಗಿಯುತ್ತಿದೆ ಇನ್ನೂ ಸಾಯುತ್ತಿದ್ದೇವೆ ಅಂದುಕೊಂಡು ಆಟ ಆಡಬೇಕು. ದಿವ್ಯಾ ಸುರೇಶ್, ಕ್ಯಾಪ್ಟನ್ ಮಂಜು ಅವಳ ಪರವಾಗಿರುತ್ತಾನೆ ಎಂಬ ವಿಶ್ವಾಸ ಹೊಂದಿದ್ದಾಳೆ. ದಿವ್ಯಾ ನಾನು ಡಿಫರೆಂಟ್, ಸ್ಟ್ರಾಂಗ್, ನಾನು ಟಾಸ್ಕ್‍ನಲ್ಲಿ ಪಂಟ್ರು ಎಂದು ಅವಳಿಗೆ ಅವಳೇ ಹೇಳಿಕೊಳ್ಳುತ್ತಾಳೆ. ಹೇಳಬೇಕೆಂದರೆ ಅವಳು ನೋಡುವುದಕ್ಕೆ ಚೆನ್ನಾಗಿದ್ದಾಳೆ, ಸೂಪರ್ ಆಗಿರುವ ಮೇಕಪ್ ಹಾಕುತ್ತಾಳೆ ಅಷ್ಟೇ. ಹಾಗಾಗಿ ನೀನು ಮೊಟಿವೇಟ್ ಮಾಡಿಕೊಂಡು ಈ ವಾರ ಗೇಮ್ ಚೆನ್ನಾಗಿ ಆಡಿದರೆ ಮುಂದಕ್ಕೆ ಹೋಗುತ್ತೇವೆ. ನಾನು ನೀನು ಸೇವ್ ಆಗಬೇಕೆಂದರೆ ನಮ್ಮ ಟಾರ್ಗೆಟ್ ದಿವ್ಯಾ ಸುರೇಶ್‍ರನ್ನು ಮಾಡಿಕೊಳ್ಳಬೇಕು.

    ಡಿಎಸ್ ಗಿಂತ ನಾನು, ಸುಪಿರೀಯರ್, ಟ್ಯಾಲೆಂಟೆಡ್, ಡಿಎಸ್‍ಗಿಂತ ಚೆನ್ನಾಗಿ ಆಟ ಆಡುತ್ತೇನೆ ಅನ್ನುವುದನ್ನು ತಲೆಯಲ್ಲಿ ಇಟ್ಟುಕೊಂಡು ಆಟ ಆಡಬೇಕು ಎನ್ನುತ್ತಾರೆ. ಸದ್ಯ 5 ಜನದಲ್ಲಿರೀಗ ಅವಳೇ ವೀಕೆಸ್ಟ್ ಕಂಟೆಸ್ಟೆಂಟ್. ದಿವ್ಯಾ ಸುರೇಶ್ ಜೊತೆ ಫ್ರೆಂಡ್ ಶಿಪ್ ಮಾಡುವುದನ್ನು ಹೇಳಿಕೊಟ್ಟೆ, ಈಗ ದಿವ್ಯಾ ಸುರೇಶ್‍ನ ಹೊಡೀಬೇಕು ನೀನು ಎಂದು ಪ್ರಶಾಂತ್ ಶಮಂತ್‍ಗೆ ಹೇಳಿದ್ದಾರೆ.

  • ಬಿಗ್‍ಬಾಸ್ ಮನೆಯಲ್ಲಿ ರಿಸರ್ವೇಶನ್ ಇದೆ ಅಂದಿದ್ಯಾಕೆ ಶಮಂತ್!

    ಬಿಗ್‍ಬಾಸ್ ಮನೆಯಲ್ಲಿ ರಿಸರ್ವೇಶನ್ ಇದೆ ಅಂದಿದ್ಯಾಕೆ ಶಮಂತ್!

    ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟ ಬ್ಯಾಚುಲರ್ ಹುಡುಗರಲ್ಲಿ ಬ್ರೋ ಗೌಡ ಶಮಂತ್ ಕೂಡ ಒಬ್ಬರು. ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಾಗಿನಿಂದಲೂ ತಮ್ಮ ಜೋಡಿಹಕ್ಕಿಗಾಗಿ ಹುಡುಕಾಟ ನಡೆಸುತ್ತಿರುವ ಶಮಂತ್‍ಗೆ ಇಲ್ಲಿಯವರೆಗೂ ಒಂದು ಹುಡುಗಿಯೂ ಬೀಳಲಿಲ್ಲ. ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ಶಮಂತ್ ಬಿಗ್‍ಬಾಸ್ ಮನೆಯಲ್ಲಿ ಎಲ್ಲರೂ ರಿಸರ್ವಡ್ ಆಗಿದ್ದಾರೆ ಎಂಬ ಸತ್ಯವನ್ನು ಬಾಯಿಬಿಟ್ಟಿದ್ದಾರೆ.

    ಹೌದು, ನಿನ್ನೆ ಶಮಂತ್ ಬಿಗ್‍ಬಾಸ್ ಮನೆಯಲ್ಲಿ ಎಲ್ಲ ಹುಡುಗಿಯರು ಬುಕ್ಡ್ ಆಗಿದ್ದಾರೆ ಎಂದು ಶಮಂತ್ ಹೇಳಿದ್ದಾರೆ. ಆಗ ಸುದೀಪ್ ರಿಸರ್ವೇಶನ್‍ನಲ್ಲಿ ಎರಡು ರೀತಿಯ ರಿಸರ್ವೇಶನ್ ಇದೆ. ಒಂದು ಹಿಂದಿನ ಕಾಲದಲ್ಲಿ ಬಸ್ ಹತ್ತುವುದಕ್ಕಿಂತ ಮುನ್ನ ಕಿಟಕಿ ಮೂಲಕ ಕರ್ಚೀಫ್ ಹಾಕುತ್ತಿದ್ದರು. ಅಂದರೆ ಅವರು ಹೋಗುವುದರ ಒಳಗಡೆ ಬೇರೆ ಯಾರಾದರೂ ಹೋದರೆ ಕರ್ಚೀಫ್ ತೆಗೆದು ಮತ್ತೊಬ್ಬರು ಕುಳಿತುಕೊಳ್ಳಬಹುದಿತ್ತು. ಮತ್ತೊಂದು ಇಂದಿನ ಕಾಲದ ಆನ್‍ಲೈನ್ ಬುಕ್ಕಿಂಗ್ ಅದು ಪಕ್ಕಾ ರಿಸರ್ವೇಶನ್ ಎಂದು ಹೇಳುತ್ತಾರೆ.

    ಬಳಿಕ ಬಿಗ್‍ಬಾಸ್ ಮನೆಯಲ್ಲಿ ಬುಕ್ಕಿಂಗ್ ಮಾಡಿರುವವರು ಯಾರು ಎಂದು ಕಿಚ್ಚ ಕೇಳಿದಾಗ, ಅರವಿಂದ್ ಹಾಗೂ ಮಂಜು ರಿಸರ್ವ್ ಮಾಡಿದ್ದಾರೆ ಅಂತ ಹೇಳುವ ಮೂಲಕ ಬುಕ್ಕಿಂಗ್ ವಿಚಾರವನ್ನು ಶಮಂತ್ ರಿವೀಲ್ ಮಾಡಿದ್ದಾರೆ. ಅಲ್ಲದೇ ಪ್ರಶಾಂತ್ ಬಳಿ ಟಿಷ್ಯೂ ರಿಸರ್ವೇಶನ್ ಇದೆ ಎಂದು ಕೂಡ ಹೇಳುತ್ತಾರೆ. ಈ ವೇಳೆ ಶಮಂತ್ ಆನ್ ದಿ ಸ್ಪಾಟ್ ಡೈಲಾಂಗ್ ಕೇಳಿದ ಮನೆ ಮಂದಿಯೆಲ್ಲಾ ಹೊಟ್ಟೆ ಹುಣ್ಣಾಗವಂತೆ ನಗುತ್ತಾರೆ.

    ನಂತರ ಸುದೀಪ್ ಯಾವುದಾದರೂ ಒಂದು ಕರ್ಚೀಫ್ ಎತ್ತಿ ಕುರುವ ಯೋಚನೆ ಇದ್ಯಾ ಎಂದಾಗ, ಶಮಂತ್ ಇಲ್ಲಿ ಎಲ್ಲರೂ ಬುಕ್ ಮಾಡಿರುವ ಕಾರಣ ನಾನಿನ್ನು ಯಾವ ಕರ್ಚೀಫ್ ಎತ್ತಿ ಕೂರುವ ಯೋಚನೆ ಇಲ್ಲ. ಪಾಪ ಹುಡುಗರು ಹೇಗೋ ಬದುಕಿಕೊಳ್ಳಲಿ ಎನ್ನುವಂತೆ ಹೇಳುತ್ತಾರೆ.