Tag: ಪಬ್ಲಿಕ್ ಟಿವಿ Bigg Boss

  • ಲವ್ ಲೆಟರ್ ಬರೆಯುವುದಕ್ಕೆ ಬಂಡಲ್ ಶೀಟ್ ಬೇಕೆಂದ ಬಾಯ್ಸ್!

    ಲವ್ ಲೆಟರ್ ಬರೆಯುವುದಕ್ಕೆ ಬಂಡಲ್ ಶೀಟ್ ಬೇಕೆಂದ ಬಾಯ್ಸ್!

    ಬಿಗ್‍ಬಾಸ್ ಮನೆಯಲ್ಲಿ ಈ ವಾರ ಬಾಯ್ಸ್ ಹಾಸ್ಟೆಲ್ ಹಾಗೂ ಗಲ್ರ್ಸ್ ಹಾಸ್ಟೆಲ್ ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. ನಂತರ ಬಾಯ್ಸ್ ಹಾಸ್ಟೆಲ್ ಹುಡುಗರು ಗರ್ಲ್ಸ್ ಹಾಸ್ಟೆಲ್ ಹುಡುಗಿಯರಿಗೆ ಪತ್ರ ಬರೆದು ನೀಡಬೇಕು. ಹಾಗೆಯೇ ಹುಡುಗಿಯರು ಅದನ್ನು ಸಂಗ್ರಹಿಸಿಟ್ಟಿಕೊಳ್ಳಬೇಕು. ಕೊನೆಯಲ್ಲಿ ಅತೀ ಹೆಚ್ಚು ಪತ್ರಗಳನ್ನು ಬರೆದ ಹುಡುಗ, ಅತೀ ಹೆಚ್ಚು ಪತ್ರಗಳನ್ನು ಸಂಗ್ರಹಿಸಿಟ್ಟಿಕೊಂಡ ಹುಡುಗಿ ಹಾಗೂ ಅತೀ ಹೆಚ್ಚು ಪತ್ರಗಳನ್ನು ವಶಪಡಿಸಿಕೊಂಡ ವಾರ್ಡನ್ ಈ ವಾರ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುತ್ತಾರೆ ಎಂದು ಬಿಗ್‍ಬಾಸ್ ಸೂಚಿಸಿದ್ದರು.

    ಅದರಂತೆ ಬಾಯ್ಸ್ ಹಾಸ್ಟೆಲ್‍ನ ಹುಡುಗರು ಗರ್ಲ್ಸ್ ಹಾಸ್ಟೆಲ್ ಹುಡುಗಿಯರಿಗೆ ಪತ್ರಗಳನ್ನು ಬರೆದಿದ್ದರು. ಆ ಪತ್ರಗಳನ್ನು ಹುಡುಗಿಯರು ಓದಿ ಬಚ್ಚಿಟ್ಟಿದ್ದರು. ಆದರೆ ಅದೇಗೋ ವಾರ್ಡನ್ ಆಗಿರುವ ನಿಧಿ ಸುಬ್ಬಯ್ಯ ಪತ್ರಗಳನ್ನೆಲ್ಲಾ ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ. ಇದೀಗ ಪತ್ರ ಬರೆಯಲು ಶೀಟ್‍ಗಳಿಲ್ಲದೆ ಬಾಯ್ಸ್ ಪರದಾಡುತ್ತಿದ್ದಾರೆ.

    ಹೀಗಾಗಿ ನಿನ್ನೆ ಕ್ಯಾಮೆರಾ ಮುಂದೆ ಬಾಯ್ಸ್ ಹಾಸ್ಟೆಲ್ ಹುಡುಗರು, ನಮಸ್ತೆ ಬಿಗ್‍ಬಾಸ್, ನಮಗೆ ಏ ಫೋರ್ ಶೀಟ್ ಒಂದೊಂದು ಬಂಡಲ್‍ಬೇಕು. ನಾವು ಲವ್ ಲೆಟರ್ ಬರೆಯಬೇಕು. ಎಲ್ಲ ಲವ್ ಲೆಟರ್ ನಿಧಿ ಸುಬ್ಬಯ್ಯ ಸೀಜ್ ಮಾಡಿದ್ದಾರೆ. ನಾವೆಲ್ಲಾ 3 ದಿನಗಳಿಂದ ಕವಿಗಳಾಗಿ ಬಿಟ್ಟಿದ್ದೇವೆ. ನಮ್ಮೆಲ್ಲರಿಗೂ ಒಂದೊಂದು ಬಂಡಲ್ ಶೀಟ್ ಬೇಕು. ಬಹುಶಃ ಫಿನಾಲೆ ಆಗುವವರೆಗೂ ಲವ್ ಲೆಟರ್ ಕಂಟಿನ್ಯೂ ಆಗುತ್ತಲೇ ಇರಬೇಕು ಬಿಗ್‍ಬಾಸ್. ದಯವಿಟ್ಟು ಇವತ್ತಿಗೆ ಹತ್ತು-ಹತ್ತು ಲೆಟರ್ ಆದರೂ ಕಳುಹಿಸಿಕೊಡಿ. ನಾವು ವಾರ್ಡನ್‍ಗಳ ರಕ್ತ ಕುಡಿಬೇಕು. ಹಾಗೆ ನಮಗೆ ಕಣ್ಣಿನಲ್ಲಿ ರಕ್ತ ಬರಿಸಿದ್ದಾರೆ. ನಮ್ಮ ಪ್ರೇಮ ಪ್ರವಾಹಕ್ಕೆ ಸಪೋರ್ಟ್ ಮಾಡಿ ಬಿಗ್‍ಬಾಸ್. ಒಂದು ಬಾರಿ ಅವರ ಹತ್ತಿರ ಇರುವ  ಲೆಟರ್‌ಗಳನ್ನು ಕಿತ್ತುಕೊಳ್ಳಬಹುದು ಎಂದು ನೀವು ಹೇಳಿದರೆ ಮೂರು ನಿಮಿಷಕ್ಕೆ ಮ್ಯಾಜಿಕ್ ಆಗುತ್ತದೆ ಎಂದು ಹಾಸ್ಯ ಮಾಡುತ್ತಾರೆ.

    ಈ ವೇಳೆ ನಿಧಿ ಅಡ್ಡ ಬಂದು ಕ್ಯಾಮೆರಾ ಮುಂದೆ ಬಿಗ್‍ಬಾಸ್ ಇವರೆಲ್ಲಾ ಫುಲ್ ಉರಿದುಕೊಂಡು ಬಿಟ್ಟಿದ್ದಾರೆ ಎನ್ನುತ್ತಾರೆ. ಆಗ ಎಲ್ಲರೂ ಉದಾಹರಣೆಗೆ ನಿಧಿ ಸುಬ್ಬಯ್ಯರವರೇ ಉರಿದುಕೊಂಡಿದ್ದಾರೆ ನೋಡಿ ಬಿಗ್‍ಬಾಸ್ ಎಂದು ಹೇಳುತ್ತಾರೆ.

  • ಬಿಗ್‍ಬಾಸ್ ಮನೆಯಲ್ಲಿ ರಂಗೇರ್ತು ರಂಗು ರಂಗಿನ ಹೋಳಿ ಹಬ್ಬ!

    ಬಿಗ್‍ಬಾಸ್ ಮನೆಯಲ್ಲಿ ರಂಗೇರ್ತು ರಂಗು ರಂಗಿನ ಹೋಳಿ ಹಬ್ಬ!

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಗನಿಂದಲೂ ಮನೆಕೆಲಸ, ಟಾಸ್ಕ್ ಗಳಲ್ಲಿ ಬ್ಯುಸಿಯಾಗಿದ್ದ ಮಂದಿ ನಿನ್ನೆ ಬಣ್ಣದೋಕುಳಿಯಲ್ಲಿ ಮಿಂದಿದ್ದಾರೆ.

    ಬೆಳಗ್ಗೆ ಎದ್ದೆ ಎಳುತ್ತಿದ್ದಂತೆಯೇ ನಟ ಶಿವರಾಜ್‍ಕುಮಾರ್ ಅಭಿನಯದ ಪ್ರೀತ್ಸೆ ಸಿನಿಮಾದ ‘ಹೋಳಿ’ ಸಾಂಗ್ ಪ್ಲೇ ಮಾಡುವುದರ ಮೂಲಕ ಮನೆಮಂದಿಗೆ ಬಿಗ್‍ಬಾಸ್ ವಿಶ್ ಮಾಡಿದ್ದಾರೆ. ಹಾಡು ಪ್ರಾರಂಭವಾಗುತ್ತಿದ್ದಂತೆಯೇ ಮೈ ಮುರಿದುಕೊಂಡು ಎಂದ ಮನೆಯ ಮಂದಿ ಗಾರ್ಡನ್ ಏರಿಯಾಗೆ ಬಂದಾಗ ಅಲ್ಲಿದ್ದ ಹೋಳಿಯನ್ನು ನೋಡಿ ಫುಲ್ ಖುಷ್ ಆಗುತ್ತಾರೆ.

    ಬಳಿಕ ಫ್ರೆಶ್ ಆಪ್ ಆಗಿ ಬಟ್ಟೆ ಬದಲಾಯಿಸಿಕೊಂಡು ಬಂದ ಮನೆಮಂದಿ ಗಾರ್ಡನ್ ಏರಿಯಾದ ಮೇಜಿನ ಮೇಲೆ ಇರಿಸಿದ್ದ ಬಣ್ಣಗಳನ್ನು ಎತ್ತಿಕೊಂಡು ಒಬ್ಬರಿಗೊಬ್ಬರು ಹಚ್ಚಿಕೊಳ್ಳುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಈ ವೇಳೆ ಬಿಗ್‍ಬಾಸ್ ಮನೆ ಮಂದಿಗಾಗಿ  ಪ್ರೇಮ್ ಅಭಿನಯದ ಡಿಕೆ ಸಿನಿಮಾದ ‘ಸೆಸಮ್ಮ’ ಸಾಂಗ್‍ನನ್ನು ಪ್ಲೇ ಮಾಡುತ್ತಾರೆ. ಹಾಡಿಗೆ ಶುಭ ಹಾಗೂ ಮಂಜು ಮಸ್ತ್ ಮಸ್ತ್ ಸ್ಟೆಪ್ ಹಾಕಿದರೆ, ರಾಜೀವ್, ವಿಶ್ವನಾಥ್, ರಘು ಸೇರಿದಂತೆ ಮತ್ತೆ ಕೆಲವರು ನೆಲದ ಮೇಲೆ ಉರುಳಾಡಿ ಸಖತ್ ಡ್ಯಾನ್ಸ್ ಮಾಡಿದ್ದಾರೆ.

    ಕೊನೆಗೆ ಹಾಡು ಮುಕ್ತಾಯವಾಗುತ್ತಿದ್ದಂತೆಯೇ ಮನೆಯ ಮಂದಿ ಕ್ಯಾಮೆರಾ ಮುಂದೆ ನಿಂತು ಸಮಸ್ತ ನಾಡಿನ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಶುಭಾಶಯ ತಿಳಿಸಿದ್ದಾರೆ.

    ಒಟ್ಟಾರೆ ಇಷ್ಟು ದಿನ ಹೊರಗಡೆ ಹೋಳಿ ಹಬ್ಬ ಆಚರಿಸುತ್ತಿದ್ದ ಮಂದಿ, ಇದೀಗ ಬಿಗ್‍ಬಾಸ್ ಮನೆಯಲ್ಲಿ ಬಣ್ಣದ ಆಟ ಆಡುವ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ.

  • ಜೀವನವೇ ಚಿತ್ತಲ್ ಪತ್ತಲು ಎಂದಿದ್ಯಾಕೆ ರಘು!

    ಜೀವನವೇ ಚಿತ್ತಲ್ ಪತ್ತಲು ಎಂದಿದ್ಯಾಕೆ ರಘು!

    ರಘು ವೈನ್‍ಸ್ಟೋರ್ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಹಾಸ್ಯ ಮಾಡುವ ಮೂಲಕ ಫೇಮಸ್ ಆಗಿರುವ ರಘು. ನಿನ್ನೆ ಬಿಗ್‍ಬಾಸ್ ಮನೆಯಲ್ಲಿ ಯುವರಾಜರಾಗಿ ಮಿಂಚಿದ್ದಾರೆ. ಬಿಗ್‍ಬಾಸ್ ನಿನ್ನೆ ನೀಡಿದ್ದ ಟಾಸ್ಕ್‍ನಲ್ಲಿ ವಿಶ್ವನಾಥ್ ರಾಜನಾಗಿ, ವೈಷ್ಣವಿ ಗೌಡ ಹಾಗೂ ನಿಧಿ ಸುಬ್ಬಯ್ಯ ವೈಭೋಗದ ಅರಸಿಯರಾಗಿ ಅಭಿನಯಿಸಿದ್ದರು. ಈ ವೇಳೆ ಮಹಾರಾಜ ವಿಶ್ವನಾಥ್‍ಗೆ ಪುತ್ರನಾಗಿ ರಘು ನಟಿಸಿದ್ದು, ಎಲ್ಲರಿಗೂ ಮನರಂಜನೆ ನೀಡಿದ್ದಾರೆ.

    ನಿನ್ನೆ ಮನೆಯ ಸದಸ್ಯರೆಲ್ಲರೂ ಒಂದೊಂದು ರೀತಿಯ ಪಾತ್ರ ನಿರ್ವಹಿಸಿದರು. ಈ ವೇಳೆ ವೈಷ್ಣವಿ ಗೌಡ ಬಸವಣ್ಣನವರ ವಚನಕ್ಕೆ ಅಭಿನಯ ಮಾಡಿದರೆ, ನಿಧಿ ಪಂಚರಂಗಿ ಸಿನಿಮಾದ ಗೀತೆಯನ್ನು ಹೇಳಿದರು. ನಂತರ ಬಂದ ರಘು ನಾನು ಚಿಕ್ಕವನಾಗಿದ್ದಾಗ ವಿದ್ಯಾಭ್ಯಾಸಕ್ಕೆಂದು ನನ್ನ ತಂದೆ-ತಾಯಂದಿರು ನನ್ನನ್ನು ಹೊರದೇಶಕ್ಕೆ ಕಳುಹಿಸಿದ್ದರು. ಅಲ್ಲಿ ನಾನು ಈ ಕಲೆಯನ್ನು ಕಲಿತುಕೊಂಡು ಬಂದಿದ್ದೇನೆ. ಅಲ್ಲಿಗೆ ಹೋದ ಮೇಲೆ ನನ್ನ ಜೀವನ ಹಾಳಾಗಿ ಹೋಗಿ, ಚಿತ್ತಲ್ ಪತ್ತಲ್ ಆಗೋಯ್ತು. ಅದರ ಬಗ್ಗೆ ನಾನು ಬರೆದಿರುವ ಈ ಚಿಕ್ಕ ಹಾಡನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತೇನೆ ಎಂದು ಹೇಳಿದರು.

    ನಂತರ, ಕೂತು ಕೇಳಿ ನೋಡಿ ಈ ಕ್ಯಾಂಡಿಡೆಟ್ ಸ್ಟೋರಿ ಎಂದು ರಘು ಹಾಡು ಹೇಳಲು ಆರಂಭಿಸಿದರು. ಈ ವೇಳೆ ಮನೆಯ ಸದಸ್ಯರು ಹಾಡಿಗೆ ಚಪ್ಪಾಳೆ ತಟ್ಟಿದರೆ, ಶಮಂತ್ ಹಾಡಿಗೆ ತಾಳಹಾಕಿದರು. ಅಲ್ಲದೆ ಮಹಾರಾಜ ವಿಶ್ವನಾಥ್, ನಿಧಿ ಸುಬ್ಬಯ್ಯ, ವೈಷ್ಣವಿ, ರಘು ಜೊತೆ ಹಾಡಿಗೆ ಹೆಜ್ಜೆ ಹಾಕಿದರು. ಕೊನೆಗೆ ರಘು ಚಿತ್ತಲ್ ಪತ್ತಲು ಜೀವನವೇ ಚಿತ್ತಲ್ ಪತ್ತಲು.. ಎಂದು ಹಾಡನ್ನು ಮುಕ್ತಾಯಗೊಳಿಸುತ್ತಾರೆ.

    ಬಳಿಕ ಹಾಡು ಮುಗಿದ ನಂತರ ಮನೆಯ ಸದಸ್ಯರೆಲ್ಲರೂ ಶಿಳ್ಳೆ ಹಾಡು ಚಪ್ಪಾಳೆ ಹೊಡೆಯುವ ಮೂಲಕ ಸಂತಸ ವ್ಯಕ್ತಪಡಿಸುತ್ತಾರೆ.

  • ಕಳಪೆ ಬೋರ್ಡ್ ನೀಡಿದ್ದಕ್ಕೆ ಜೈಲಿನಲ್ಲಿ ಪ್ರಶಾಂತ್ ಪ್ರತಿಭಟನೆ!

    ಕಳಪೆ ಬೋರ್ಡ್ ನೀಡಿದ್ದಕ್ಕೆ ಜೈಲಿನಲ್ಲಿ ಪ್ರಶಾಂತ್ ಪ್ರತಿಭಟನೆ!

    ಪ್ರತಿವಾರದಂತೆ ಈ ವಾರ ಕೂಡ ಬಿಗ್‍ಬಾಸ್ ಮನೆಯಲ್ಲಿ ಒಬ್ಬ ಕಳಪೆ ಪ್ರದರ್ಶನ ನೀಡಿದ ವ್ಯಕ್ತಿ ಹಾಗೂ ಒಬ್ಬ ಅತ್ಯುತ್ತಮ ಸದಸ್ಯನನ್ನು ಆರಿಸುವಂತೆ ಮನೆಯ ಸದಸ್ಯರಿಗೆ ತಿಳಿಸಲಾಯಿತು.

    ಅದರಂತೆ ಮಂಜು, ನಾನು ಪ್ರಶಾಂತ್ ಸಂಬರ್ಗಿಯವರ ಹೆಸರನ್ನು ಸೂಚಿಸಲು ಇಷ್ಟ ಪಡುತ್ತೇನೆ. ಮನೆಯ ಕೆಲಸ ಸರಿಯಾಗಿ ಮಾಡುವುದಿಲ್ಲ. ಅದಕ್ಕಿಂತಲೂ ನನಗೆ ದುಬಾರಿ ಮತ್ತೊಂದನ್ನು ಹಾಡಿದ್ದಾರೆ. ಒಂದು ಟಾಸ್ಕ್‍ನಲ್ಲಿ ಗ್ರೂಪ್ ಅಂತ ಬಂದಾಗ ಏನೇ ತಪ್ಪು ಮಾಡಿದ್ದರು ಒಪ್ಪಿಕೊಳ್ಳಬೇಕು, ಇಲ್ಲ ನಿಧಾನವಾಗಿ ಬಿಡಿಸಿ ಹೇಳಬೇಕೆಂದು ಹೇಳಿದರು. ನಂತರ ರಘು ನಾನು ಪ್ರಶಾಂತ್ ಎಂದು ಹೇಳುತ್ತೇನೆ. ಕಾರಣ ಕೆಲವೊಂದು ಅನಾವಶ್ಯಕ ಕಮೆಂಟ್‍ಗಳು ಕ್ಯಾಪ್ಟನ್ ಮಾತಿಗೆ ವಿರೋಧ ವ್ಯಕ್ತಪಡಿಸುವುದು ಇನ್ನಿತರ ವಿಚಾರಗಳು ಹಿಡಿಸಲಿಲ್ಲ ಎನ್ನುತ್ತಾರೆ. ಅಲ್ಲದೆ ನಿಧಿ ಸುಬ್ಬಯ್ಯ ಅವರ ಗ್ರೂಪ್‍ನಲ್ಲಿದ್ದಾಗ ನಾನು 2-3 ಭಾರೀ ಡಿಮೊಟಿವೇಟ್ ಆಗಲು ಕಾರಣ ಅವರು, ಡಿ ಮೋಟಿವೇಟ್ ಮಾಡುವುದು ಅವರ ಶಕ್ತಿ ಎಂದು ಕೊಳ್ಳುತ್ತೇನೆ ಎಂದು ಪ್ರಶಾಂತ್ ಹೆಸರನ್ನು ಹೇಳುತ್ತಾರೆ.

    ಈ ವೇಳೆ ಮಾತನಾಡಿದ ಪ್ರಶಾಂತ್ ಸಂಬರ್ಗಿ ಮಂಜು ಹಾಗೂ ನಿಧಿ ಆಯ್ಕೆ ಪೂರ್ವ ನಿಯೋಜಿತ, ಬುಧವಾರ ಮಂಜು ನನಗೆ ಈ ವಾರ ಕಳಪೆ ಬೋರ್ಡ್ ನಿನಗೆ ಹಾಕುತ್ತೇನೆ ಎಂದು ಮೊದಲೇ ಹೇಳಿದ್ದರು. ಅಲ್ಲದೆ ನಿಧಿ ಕೂಡ ಸ್ವಿಮಿಂಗ್ ಪೂಲ್ ಬಳಿ ಕಾಯ್ತಿರು ಈ ವಾರ ಕಳಪೆ ಬೋರ್ಡ್ ಹಾಕುತ್ತೇನೆ ಎಂದು ಹೇಳಿರುವುದಾಗಿ ಆರೋಪಿಸಿದರು. ನಂತರ ನಿಧಿ ಹಾಗೂ ಮಂಜು ನಾವು ಈ ಮನೆಯಲ್ಲಿ ಎಲ್ಲರಿಗೂ ಈ ರೀತಿ ಹಾಸ್ಯ ಮಾಡಲು ಹೇಳುತ್ತೇವೆ ಆದರೆ ಯಾವುದೇ ರೀತಿಯ ಪೂರ್ವ ನಿಯೋಜಿತ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸುತ್ತಾರೆ.

    ಹೀಗೆ ವೈಷ್ಣವಿ ಗೌಡ, ದಿವ್ಯಾ ಉರುಡುಗ, ಶಂಕರ್, ಶಮಂತ್ ಹಾಗೂ ಕ್ಯಾಪ್ಟನ್ ವಿಶ್ವನಾಥ್ ಕೂಡ ಪ್ರಶಾಂತ್ ಸಂಬರ್ಗಿಯವರನ್ನು ಈ ವಾರದ ಕಳಪೆ ಪ್ರದರ್ಶನ ತೋರಿದ ಸದಸ್ಯ ಎಂದು ಸೂಚಿಸಿ ಕಳಪೆ ಬೋರ್ಡ್ ನೀಡುತ್ತಾರೆ.

    ಬಳಿಕ ಕಳಪೆ ಬೋರ್ಡ್ ಧರಿಸಿ ಜೈಲು ಸೇರಿದ ಪ್ರಶಾಂತ್, ಮನೆಯ ಗುಂಪುಗಾರಿಕೆಯನ್ನು ಖಂಡಿಸಿ ನಾನು 24 ಗಂಟೆಗಳ ಕಾಲ ಮೌನವಾಗಿದ್ದು, ಯಾವುದೇ ಆಹಾರವನ್ನು ಸೇವಿಸುವುದಿಲ್ಲ ಎಂದು ಪ್ರಶಾಂತ್ ಸಂಬರ್ಗಿ ಇದೀಗ ಪ್ರತಿಭಟನೆ ನಡೆಸುತ್ತಿದ್ದಾರೆ.

  • ಬಿಗ್‍ಬಾಸ್ ಮನೆಯಲ್ಲಿ ಆಲ್ಟರ್‌ನೇಟ್ ಮೂವಿ ರಹಸ್ಯ ಬಿಚ್ಚಿಟ್ಟ ರಾಜೀವ್!

    ಬಿಗ್‍ಬಾಸ್ ಮನೆಯಲ್ಲಿ ಆಲ್ಟರ್‌ನೇಟ್ ಮೂವಿ ರಹಸ್ಯ ಬಿಚ್ಚಿಟ್ಟ ರಾಜೀವ್!

    ಬಿಗ್‍ಬಾಸ್ ಮನೆಯ ಸದಸ್ಯರಿಗೆ ನಿನ್ನೆ ‘ಗುಟ್ಟೊಂದು ಹೇಳುವೇ’ ಎಂಬ ಚಟುವಟಿಕೆಯೊಂದನ್ನು ಬಿಗ್‍ಬಾಸ್ ನೀಡಿದ್ದರು. ಅದರಂತೆ ಮನೆಯ ಸದಸ್ಯರು ತಮ್ಮ ಜೀವನದಲ್ಲಿ ಇದುವರೆಗೂ ಯಾರಿಗೂ ಹೇಳಿರದ, ಹೊರಜಗತ್ತಿಗೆ ಗೊತ್ತಿಲ್ಲದ ಗುಟ್ಟೊಂದನ್ನು ಹೇಳಬೇಕೆಂದು ತಿಳಿಸಿದ್ದರು. ಈ ವೇಳೆ ಕೆಲವು ಮನೆಯ ಸದಸ್ಯರು ತಮ್ಮ ಜೀವನದ ಕಹಿ ಘಟನೆಯನ್ನು ಹಂಚಿಕೊಂಡರೆ, ಇನ್ನೂ ಕೆಲವರು ಸಿಹಿ ಘಟನೆಗಳನ್ನು ಹಂಚಿಕೊಂಡರು. ಆದರೆ ಎಲ್ಲರ ಮಧ್ಯೆ ರಾಜೀವ್ ಮಾತ್ರ ಹಾಸ್ಯಮಯ ಘಟನೆಯೊಂದನ್ನು ದೊಡ್ಮನೆಯಲ್ಲಿ ರಿವೀಲ್ ಮಾಡಿದ್ದಾರೆ.

    ಹೌದು, ಕ್ರಿಕೆಟಿಗ ರಾಜೀವ್ ಹಾಗೂ ಅವರ 16 ಮಂದಿ ಸ್ನೇಹಿತರು ಒಮ್ಮೆ ಆಲ್ಟರ್‌ನೇಟ್ ಮೂವಿ ನೋಡಲು ಪ್ಲಾನ್ ಮಾಡಿದ್ದರಂತೆ. ಅದರಂತೆ ಲೋಕೇಶ್ ರಾವ್ ಎಂಬ ಸ್ನೇಹಿತನೊಬ್ಬನ ತಂದೆಗೆ ನೈಟ್ ಶಿಫ್ಟ್ ಕೆಲಸ ಇದ್ದಿದ್ದರಿಂದ ಎಲ್ಲರೂ ಅವರ ಮನೆಯಲ್ಲಿ ಆಲ್ಟರ್‌ನೇಟ್ ಮೂವಿ ನೋಡಲು ಹೋಗಿದ್ದರಂತೆ. ಈ ವೇಳೆ ಒಂದು ಸಿಡಿ ಚೆನ್ನಾಗಿಲ್ಲ ಅದನ್ನು ಬದಲಾಯಿಸಿಕೊಂಡು ಬರುತ್ತೇನೆ ಎಂದು ಲೋಕೇಶ್ ಸಿಡಿ ಅಂಗಡಿಗೆ ಹೋದ. ಆಗ 10 ನಿಮಿಷದ ಬಳಿಕ ಲೋಕೇಶ್ ತಂದೆ ಬಾಗಿಲು ತೆರೆದು ಮನೆಗೆ ಎಂಟ್ರಿ ಕೊಟ್ಟರು. ಇದನ್ನು ಕಂಡು ಅವರ ತಂದೆ ಏನು ಮಾತನಾಡದೇ ಸಿದಾ ರೂಮ್‍ಗೆ ಹೋಗಿ ಬಾಗಿಲು ಹಾಕಿಕೊಂಡರು. ನಾವೆಲ್ಲರೂ ಗಾಬರಿಯಿಂದ ಅಲ್ಲಿಂದ ಪರಾರಿಯಾದ್ವಿ. ಬಳಿಕ ಲೋಕೇಶ್ ಮನೆಗೆ ಹೋಗಿದ್ದಾನೆ. ಆಗಲೂ ಕೂಡ ಅವರ ಮನೆಯಲ್ಲಿ ಏನೂ ನಡೆದಿಲ್ಲ.

    ನಾವೆಲ್ಲ ಅವನು ಗ್ರೌಂಡ್‍ಗೆ ಬರುವುದನ್ನೇ ಕಾಯುತ್ತಿದ್ದೆವು. ಸ್ವಲ್ಪ ಸಮಯದ ಬಳಿಕ ಬಂದ ಲೋಕೇಶ್‍ಗೆ ಮನೆಯಲ್ಲಿ ಏನು ನಡೆದಿದೆ ಎಂಬ ವಿಚಾರವನ್ನೆಲ್ಲಾ ವಿವರಿಸಿದೆವು. ಆಗ ಅವನಿಗೆ ನಡೆದ ವಿಚಾರ ತಿಳಿಯಿತು. ಆದರೆ ಒಂದು ವಾರದ ಬಳಿಕ ಈ ಕೋಪ ತೀರಿಸಿಕೊಳ್ಳಲು ಅವರ ತಂದೆ, ಯಾವುದೋ ಬೇರೆ ವಿಚಾರಕ್ಕೆ ಮೊಟ್ಟೆಕಡ್ಡಿ ಪೊರಕೆ ಕಿತ್ತು ಹೋಗುವಂತೆ ಅವರ ಅಮ್ಮನ ಕೈನಲ್ಲಿ ಲೋಕೇಶ್‍ಗೆ ಹೊಡೆಸಿದ್ದಾರೆ. ಅದು ಹೇಗೆಂದರೆ ಅವನನ್ನು ಕೇಳು ಒಂದು ವಾರದ ಹಿಂದೆ ಏನು ಮಾಡಿದ್ದಾನೆ ಎಂದು ಹೇಳುತ್ತಾ ಹೊಡೆಸಿದ್ದಾರೆ. ಈ ವಿಚಾರವನ್ನು ಅವನು ಅವರಮ್ಮನಿಗೂ ಹೇಳಲು ಆಗುತ್ತಿಲ್ಲ. ಅವರಪ್ಪಗೆ ಕೂಡ ಅವರಮ್ಮನ ಹತ್ತಿರ ಹೇಳಲು ಆಗುತ್ತಿಲ್ಲ. ಮನೆಯಲ್ಲಿ ಹೊಡೆಯುತ್ತಿರುವ ವಿಚಾರವನ್ನು ಲೋಕೆಶ್‍ಗೆ ನಮ್ಮ ಬಳಿ ಕೂಡ ಹೇಳಿಕೊಳ್ಳಲು ಆಗುತ್ತಿಲ್ಲ ಎಂದು ಹೇಳುತ್ತಾ ಎಲ್ಲರೂ ನಕ್ಕಿದ್ವಿ.

    ಹೀಗೆ ರಾಜೀವ್ ಹೇಳಿದ ಕಾಮಿಡಿ ಸ್ಟೋರಿ ಕೇಳಿ ಮನೆಯ ಸದಸ್ಯರು ಎದ್ದುಬಿದ್ದು ನಗುತ್ತಾ ಸಖತ್ ಎಂಜಾಯ್ ಮಾಡಿದ್ರು.

  • ರಾಜೀವ್ ತಲೆಗೂದಲ ಮೇಲೆ ಬಿತ್ತು ಲ್ಯಾಗ್ ಮಂಜು ಕಣ್ಣು!

    ರಾಜೀವ್ ತಲೆಗೂದಲ ಮೇಲೆ ಬಿತ್ತು ಲ್ಯಾಗ್ ಮಂಜು ಕಣ್ಣು!

    ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಮನೆಯ ಸದಸ್ಯರಿಗೆ, ಪಿಸಿಕಲ್ ಟಾಸ್ಕ್, ಕ್ವೀಜ್ ಹೀಗೆ ಹಲವು ರೀತಿಯ ಟಾಸ್ಕ್‍ಗಳನ್ನು ನೀಡಿರುವುದನ್ನು ನೋಡಿದ್ದೇವೆ. ಅಲ್ಲದೆ ಈ ಹಿಂದಿನ ಸೀಸನ್‍ಗಳಲ್ಲಿ ಕೂದಲಿನ ಮೇಲೆ ಪ್ರೀತಿ ಇಟ್ಟುಕೊಂಡಿದ್ದ ಕೆಲ ಸದಸ್ಯರ ಹೇರ್ ಕಟ್ ಮಾಡಿಸಿರುವುದನ್ನು ನೋಡಿದ್ದೇವೆ. ಸದ್ಯ ಬಿಗ್‍ಬಾಸ್ ಸೀಸನ್-8ರಲ್ಲಿ ಮನೆಯ ಎಲ್ಲಾ ಪುರುಷ ಸದಸ್ಯರಲ್ಲಿ ಹೆಚ್ಚು ತಲೆಕೂದಲು ಹೊಂದಿರುವವರು ಎಂದರೆ ರಾಜೀವ್.

    ಲಾಂಗ್ ಹೇರ್ ಬೆಳೆಸಿಕೊಂಡು ಸಖತ್ ಸ್ಟೈಲಿಶ್ ಆಗಿ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟವರು ರಾಜೀವ್. ಕೂದಲು ಬಗ್ಗೆ ಅದೇನೋ ಒಂದು ರೀತಿಯ ಪ್ರೀತಿ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ನಿನ್ನೆ ರಾಜೀವ್ ಜುಟ್ಟು ಬಿಟ್ಟುಕೊಂಡು ಮನೆಯಲ್ಲಿ ಓಡಾಡುತ್ತಿರುತ್ತಾರೆ. ಇದನ್ನು ನೋಡಿ ಮಂಜು ಬಿಗ್‍ಬಾಸ್‍ಗೆ ಪರೋಕ್ಷವಾಗಿ ರಾಜೀವ್ ಕೂದಲಿಗೆ ಕತ್ತರಿ ಹಾಕಿಸುವಂತೆ ಕ್ಲೂ ನೀಡಿದ್ದಾರೆ.

    ಅಣ್ಣ ಈ ಟೈಮ್‍ನಲ್ಲಿ ಕೂದಲು ಜಾಸ್ತಿ ಇರಬಾರದು. ಯಾಕೆಂದರೆ ನಾವು ತಿನ್ನುವ ಊಟವನ್ನೆಲ್ಲಾ ಕೂದಲೇ ಹೆಚ್ಚಾಗಿ ತಿನ್ನುತ್ತದೆ ಎನ್ನುತ್ತಾರೆ. ಆಗ ರಾಜೀವ್ ಹೋದರೆ ಹೋಗಲಿ ಬಿಡು ಎಂದು ಹೇಳುತ್ತಾರೆ. ಈ ವೇಳೆ ಮಂಜು ಬಿಗ್‍ಬಾಸ್ ನಾನು ನಿಮಗೊಂದು ರಿಕ್ವೆಸ್ಟ್ ಮಾಡುತ್ತೇನೆ. ನಮ್ಮಣ್ಣ ಬಹಳ ಸಣ್ಣ ಆಗುತ್ತಿದ್ದಾರೆ. ಆಗ ರಾಜೀವ್ ಮಂಜು ಬೇಡ ಏನು ಹೇಳಬೇಡ ಪ್ಲೀಸ್ ಸುಮ್ಮನಿದ್ದು ಬಿಡು, ಕೂದಲು ಬಗ್ಗೆ ಏನು ಮಾಡಬೇಡ. ಬಿಗ್‍ಬಾಸ್ ಜೊತೆ ಯಾಕೋ ಜಗಳ ಮಾಡುತ್ತಿದ್ದೀಯಾ ಎಂದು ತಲೆ ಮೇಲೆ ಕೈ ಹಿಡಿದುಕೊಳ್ಳುತ್ತಾರೆ. ಅದಕ್ಕೆ ಮಂಜು ಇಲ್ಲ ಅಣ್ಣ ಬರೀ ಹೇಳಿದ್ದಷ್ಟೇ ಎನ್ನುತ್ತಾ, ಚೆನ್ನಾಗಿರುವುದಿಲ್ಲ ಬಿಗ್‍ಬಾಸ್ ನಮ್ಮ ಅಣ್ಣನ ಕೂದಲಿಗೆ ಏನಾದರೂ ಮಾಡಿದರೇ ಎಂದು ಕೈ ಸನ್ನೆ ಮೂಲಕ ಕತ್ತರಿಸುವಂತೆ ಕ್ಯಾಮೆರಾ ಮುಂದೆ ಹಾಸ್ಯಮಯವಾಗಿ ಅವಾಜ್ ಹಾಕುತ್ತಾರೆ.

    ಈ ವೇಳೆ ಮನೆ ಮಂದಿಯೆಲ್ಲಾ ರಾಜೀವ್ ನಿಮ್ಮ ಕೂದಲು ಕತ್ತರಿಸಲೆಂದು ಮಂಜು ಬಿಗ್‍ಬಾಸ್‍ಗೆ ಫಿಟ್ಟಿಂಗ್ ಹಾಕಿಕೊಡುತ್ತಿದ್ದಾರೆ ಎಂದು ಹೇಳುತ್ತಾರೆ. ಅಲ್ಲದೆ ಇತ್ತೀಚೆಗಷ್ಟೇ ರಾಜೀವ್ ಮಡದಿ ಕ್ಯಾಪ್ಟನ್ ಆದಾಗ ವಾಯ್ಸ್ ರೆಕಾರ್ಡರ್ ಕಳಿಸುವ ಮೂಲಕ ವಿಶ್ ಮಾಡಿದ್ದರು. ಈ ವೇಳೆ ನೀವು ಕೂದಲನ್ನು ಕೆಳಗೆ ಕಟ್ಟುತ್ತಿದ್ದೀರಾ, ಅದು ನಿಮಗೆ ಚೆನ್ನಾಗಿ ಕಾಣಿಸುತ್ತಿಲ್ಲ. ಮನೆಯಲ್ಲಿ ಹೇಗೆ ಕೂದಲನ್ನು ಮೇಲೆ ಕಟ್ಟುತ್ತಿದ್ರೋ ಹಾಗೇ ಬಿಗ್‍ಬಾಸ್ ಮನೆಯಲ್ಲಿ ಕೂಡ ಕೂದಲನ್ನು ಮೇಲಕ್ಕೆ ಕಟ್ಟಿಕೊಳ್ಳಿ ಎಂದು ತಿಳಿಸಿದ್ದರು.

    ಈ ಹಿಂದೆ ಬಿಗ್‍ಬಾಸ್ ಸೀಸನ್-3ರಲ್ಲಿ ನಟ ಚಂದನ್‍ರವರ ಹೇರ್ ಟ್ರೀಮ್ ಮಾಡಿಸಲಾಗಿತ್ತು. ಅಲ್ಲದೆ ಬಿಗ್‍ಬಾಸ್ ಸೀಸನ್-7ರಲ್ಲಿ ಬಿಗ್‍ಬಿಸ್ ದೀಪಿಕಾ ದಾಸ್‍ಗೆ ಶೈನಿ ಶೆಟ್ಟಿ ಗಡ್ಡ ತೆಗೆಸುವಂತೆ ಟಾಸ್ಕ್ ನೀಡಿದ್ದರು.

  • ಮಂಜು ತ್ಯಾಗದಿಂದ ದೊಡ್ಮನೆ ಮಂದಿಗೆ ಸಿಕ್ತು ಬೆಡ್ ರೂಮ್!

    ಮಂಜು ತ್ಯಾಗದಿಂದ ದೊಡ್ಮನೆ ಮಂದಿಗೆ ಸಿಕ್ತು ಬೆಡ್ ರೂಮ್!

    ಕಳೆದ ಒಂದು ವಾರದಿಂದ ಚಳಿ ಹಾಗೂ ಸೊಳ್ಳೆ ಕಾಟದಿಂದ ಹೊರಗೆ ನಿದ್ರೆ ಮಾಡಲು ಆಗದೇ ಕಷ್ಟ ಪಡುತ್ತಿರುವ ಬಿಗ್‍ಬಾಸ್ ಸ್ಪರ್ಧಿಗಳು ಬೆಡ್ ರೂಮ್‍ನನ್ನು ಹಿಂದಿರುಗಿಸುವಂತೆ ಬಿಗ್‍ಬಾಸ್‍ಗೆ ಎಷ್ಟೋ ಬಾರಿ ಮನವಿ ಮಾಡಿದ್ದರು. ಆದರೂ ಕೂಡ ಬಿಗ್‍ಬಾಸ್ ಮನಕರಗಲಿಲ್ಲ. ಆದರೆ ನಿನ್ನೆ ಜೋಡಿ ಟಾಸ್ಕ್ ವೊಂದರಲ್ಲಿ ಗೆದ್ದ ಮಂಜುವಿನಿಂದ ಇದೀಗ ದೊಡ್ಮನೆ ಮಂದಿಗೆ ಬೆಡ್ ರೂಮ್ ದೊರೆತಿದೆ.

    ಹೌದು ನಿನ್ನೆ ಬಿಗ್‍ಬಾಸ್ ಸದಸ್ಯರಿ ಮಸ್ತ್ ಮಸ್ತ್ ಮೊಟ್ಟೆ ಬಂತು ಎಂಬ ಟಾಸ್ಕ್ ನೀಡಿದ್ದರು. ಅದರ ಅನುಸಾರ ಪ್ರತಿ ಜೋಡಿಯ ಒಬ್ಬ ಸದಸ್ಯ ಗಾರ್ಡನ್ ಏರಿಯಾದಲ್ಲಿ ಚಿನ್ನ, ಬೆಳ್ಳಿ, ಬಿಳಿ ಮೊಟ್ಟೆಯನ್ನು ಕ್ಯಾಚ್ ಹಿಡಿದು ಬುಟ್ಟಿಯೊಂದಕ್ಕೆ ಹಾಕಬೇಕಾಗಿತ್ತು. ಮತ್ತೋರ್ವ ಸದಸ್ಯ ಮೊಟ್ಟೆಯನ್ನು ಒಂದು ಬುಟ್ಟಿಯಿಂದ ಮತ್ತೊಂದು ಬುಟ್ಟಿಗೆ ವರ್ಗಾಯಿಸಬೇಕಿತ್ತು.

    ಅದರಂತೆ ಈ ಟಾಸ್ಕ್‍ನಲ್ಲಿ ಎಲ್ಲಾ ಜೋಡಿಗಳನ್ನು ಹಿಂದಿಕ್ಕಿ ಲ್ಯಾಗ್ ಮಂಜು ಹಾಗೂ ಗೀತಾ 6 ಗೋಲ್ಡನ್ ಮೊಟ್ಟೆ ಹಾಗೂ 4 ಸಿಲ್ವರ್ ಮೊಟ್ಟೆ ಗಳಿಸುವ ಮೂಲಕ 800 ಅಂಕ ಪಡೆದು ವಿಜೇತರಾಗುತ್ತಾರೆ. ಆಟದಲ್ಲಿ ಗೆದ್ದ ಮಂಜು ಹಾಗೂ ಗೀತಾಗೆ ಬಿಗ್‍ಬಾಸ್ ರಿಚಾರ್ಜ್ ಯಂತ್ರವನ್ನು ಕಳುಹಿಸುತ್ತಾರೆ. ಬಳಿಕ ಬಿಗ್‍ಬಾಸ್ ನಿಮಗೆ ಸಿಕ್ಕಿರುವ ರಿಚಾರ್ಜ್ ಯಂತ್ರ ವಿಶೇಷವಾದದ್ದೂ ಇದು ನಿಮ್ಮ ಬಳಿಯೇ ಇರುತ್ತದೆ. ಅದನ್ನು ಯಾರು ಕದಿಯುವಂತಿಲ್ಲ. ಒಂದು ವೇಳೆ ವಿಶೇಷ ಯಂತ್ರವನ್ನು ಹಿಂದಿರುಗಿಸಿದರೆ ಬೆಡ್‍ರೂಮ್‍ನನ್ನು ಮನೆಯ ಸದಸ್ಯರಿಗಾಗಿ ಬಿಗ್‍ಬಾಸ್ ಹಿಂದಿರುಗಿಸುತ್ತಾರೆ ಎಂದು ಘೋಷಿಸುತ್ತಾರೆ.

    ಈ ವೇಳೆ ಮಂಜು ಹಾಗೂ ಗೀತಾ ಹಿಂದೆ-ಮುಂದೆ ಯೋಚಿಸದೇ ಯಂತ್ರವನ್ನು ಬಿಗ್‍ಬಾಸ್‍ಗೆ ಹಿಂದಿರುಗಿಸಿ ಮನೆ ಮಂದಿಗೆ ಬೆಡ್ ರೂಮ್ ಹಿಂದಿರುಗಿಸಿ ಕೊಡಿಸುತ್ತಾರೆ. ಇದರಿಂದ ಫುಲ್ ಖುಷ್ ಆದ ಬಿಗ್ ಬಾಸ್ ಮಂದಿ ಮಂಜುವಿಗೆ ಜೈಕಾರ ಹಾಕಿ ಅಪ್ಪಿ ಮುದ್ದಾಡುತ್ತಾರೆ. ಅದರಲ್ಲೂ ಬೆಡ್ ರೂಮ್ ಇಲ್ಲದೆ ಕಂಗೆಟ್ಟಿದ್ದ ಶುಭ ಪೂಂಜಾ ಮಂಜು ಮೇಲೆ ಹಾರಿ, ಮನೆ ಪೂರ್ತಿ ಕುಣಿದಾಡುತ್ತಾ ಮಂಜುವಿಗೆ ಧನ್ಯವಾದ ತಿಳಿಸಿ ಸಂತಸ ವ್ಯಕ್ತಪಡಿಸಿದರು. ಉಳಿದವರು ಜೋರಾದ ಚಪ್ಪಾಳೆ ಹಾಗೂ ಶಿಳ್ಳೆ ಹೊಡೆಯುವ ಮೂಲಕ ಕೃತಜ್ಞತೆ ಸಲ್ಲಿಸಿದರು.

    ಒಟ್ಟಾರೆ ಬೆಡ್‍ರೂಮ್ ಇರದೇ ಪರದಾಡುತ್ತಾ ದಿಕ್ಕಾಪಾಲಾಗಿದ್ದ ದೊಡ್ಮನೆ ಮಂದಿಗೆ ಮತ್ತೆ ಬೆಡ್ ರೂಮ್ ದೊರಕಿಸಿ ಕೊಡುವ ಮೂಲಕ ಮಂಜು ಎಲ್ಲರಿಗೂ ಹೀರೋ ಆಗಿದ್ದಾರೆ.

  • ಟಾಸ್ಕ್ ಗೆದ್ದು ಪಿಜ್ಜಾ ಸವಿದ ಬಿಗ್‍ಬಾಸ್ ಮನೆಯ ಮಹಿಳೆಯರು

    ಟಾಸ್ಕ್ ಗೆದ್ದು ಪಿಜ್ಜಾ ಸವಿದ ಬಿಗ್‍ಬಾಸ್ ಮನೆಯ ಮಹಿಳೆಯರು

    ಸದಾ ಫಿಸಿಕಲ್ ಟಾಸ್ಕ್ ಕೊಡುತ್ತಿದ್ದ ಬಿಗ್‍ಬಾಸ್ ನಿನ್ನೆ ಮನೆ ಸದಸ್ಯರಿಗೆ ಹಾಸ್ಯಮಯ ಚಟುವಟಿಕೆಯೊಂದನ್ನು ನೀಡಿದರು. ಅದುವೇ ನಗುವುದೋ, ಅಳುವುದೋ ನೀವೇ ಹೇಳಿ. ಇದರ ಅನುಸಾರ ಮನೆಯ ಪುರುಷರೆಲ್ಲರೂ ಮನೆಯಲ್ಲಿರುವ ನಾಲ್ಕು ಮಹಿಳೆಯರ ಪ್ರತಿಕ್ರಿಯೆಯನ್ನು ಪಡೆಯಬೇಕಿತ್ತು. ಅಂದರೆ ಒಂದು ನಗಿಸಬೇಕು, ಇಲ್ಲ ಅಳಿಸಬೇಕು. ನೀಡುವ ನಿಗದಿತ ಅವಧಿಯೊಳಗೆ ನಾಲ್ಕು ಮಹಿಳಾ ಸದಸ್ಯರನ್ನು ನಗಿಸಿದರೆ ಅಥವಾ ಅಳಿಸಿದರೆ ಪುರುಷರು ವಿಜೇತರಾಗುತ್ತಾರೆ. ಒಂದು ವೇಳೆ ಮಹಿಳಾ ಸದಸ್ಯರ ತಂಡದಲ್ಲಿ ಒಬ್ಬ ಸದಸ್ಯ ನಗದೇ ಅಥವಾ ಅಳದೇ ಉಳಿದರು ಮಹಿಳೆಯರ ತಂಡ ಗೆಲ್ಲುತ್ತದೆ ಹಾಗೂ ಗೆಲ್ಲುವ ತಂಡಕ್ಕೆ ವಿಶೇಷವಾಗಿ ಪಿಜ್ಜಾ ನೀಡಲಾಗುತ್ತದೆ ಎಂದು ತಿಳಿಸಿದರು. ಇದನ್ನು ಕೇಳಿ ಮನೆ ಮಂದಿಯೆಲ್ಲಾ ಫುಲ್ ಖುಷ್ ಆಗುತ್ತಾರೆ.

    ಗೆಲ್ಲಲೇ ಬೇಕೆಂದು ನಿರ್ಧರಿಸಿದ ಪುರುಷರು ದಿವ್ಯಾ ಸುರೇಶ್, ದಿವ್ಯಾ ಉರುಡುಗ, ಶುಭ ಪೂಂಜಾ, ನಿಧಿ ಸುಬ್ಬರನ್ನು ಟಾರ್ಗೆಟ್ ಮಾಡಿ ನಗಿಸಲು ಪ್ಲಾನ್ ಮಾಡುತ್ತಾರೆ. ನಂತರ ಮಹಿಳಾ ಸದಸ್ಯರು ಊಟ ಮಾಡಲು ಡೈನಿಂಗ್ ಹಾಲ್‍ನಲ್ಲಿ ಕುಳಿತಿರುವ ವೇಳೆ ಲ್ಯಾಗ್ ಮಂಜು ದಿವ್ಯಾ ಉರುಡುಗರನ್ನು ನಗಿಸಲು ಪ್ರಾರಂಭಿಸುತ್ತಾರೆ. ಈ ವೇಳೆ ದಿವ್ಯಾ ಉರುಡುಗ ಊಟದಿಂದ ಎದ್ದು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಾರೆ. ಆದರೂ ಹಠ ಬಿಡದ ಮಂಜು ವಾಶ್ ರೂಮ್‍ಗೆ ತಲುಪಿದ ದಿವ್ಯಾ ಉರುಡುಗರನ್ನು ಬೆನ್ನು ಬೇಡದೇ ಕಾಡುತ್ತಾರೆ. ಈ ವೇಳೆ ದಿವ್ಯಾ ಉರುಡುಗ ಒಬ್ಬೊಬ್ಬರೇ ಮಾತನಾಡಿಕೊಳ್ಳುತ್ತಾ, ಮಂಜು ಬಟ್ಟೆ ಒಗೆಯಲು ಏಕೆ ಬಿಡುತ್ತಿಲ್ಲ ನೀನು ಎಂದು ಪ್ರಶ್ನಿಸುತ್ತಾರೆ. ದಿವ್ಯಾ ಕೈ ಹಿಡಿದು ಎಳೆದು ನಗಿಸಲು ಪ್ರಯತ್ನಿಸುತ್ತಾರೆ. ಆದರೂ ದಿವ್ಯಾ ದೃತಿಗೆಡದೇ ಆಟದ ಮೇಲೆ ಗಮನ ಹರಿಸಲೇಬೇಕೆಂದು ನಗುವನ್ನು ಕಂಟ್ರೋಲ್ ಮಾಡಿಕೊಳ್ಳುತ್ತಾರೆ.

    ನಂತರ ಬಾತ್ ರೂಮ್‍ನಿಂದ ಹೊರ ಬರುತ್ತಿದ್ದ ದಿವ್ಯಾ ಸುರೇಶ್ ಬೆನ್ನತ್ತಿದ ಲ್ಯಾಗ್ ಮಂಜು, ಆಕೆಯನ್ನು ನಗಿಸಲು ಪ್ರಯತ್ನಿಸುತ್ತಾರೆ. ಈ ವೇಳೆ ದಿವ್ಯಾ ನನ್ನ ಬಾಯಲ್ಲಿ ನೀರಿದೆ ನಾನು ಉಗುಳಿ ಬಿಡುತ್ತೇನೆ, ನನ್ನ ಕೈ ಬಿಡು ಎಂದು ಸನ್ನೆ ಮಾಡುವ ಮೂಲಕ ತಿಳಿಸುತ್ತಾರೆ. ಆಗ ಮಂಜು ಆಗಿದ್ದೆಲ್ಲಾ ಆಗಿಲಿ ನೀನು ಉಗುಳಿದರು ಪರವಾಗಿಲ್ಲ ಎಂದು ಹೇಳುವ ಮೂಲಕ ನಗಿಸಲು ಮುಂದಾಗುತ್ತಾರೆ. ಆದರೂ ನಗಬಾರದೆಂದು ದಿವ್ಯಾ ಬಾಯಿಯಲ್ಲಿದ್ದ ನೀರನ್ನು ಉಗುಳದೇ ಹಾಗೇಯೇ ಮೈನ್‍ಟೈನ್ ಮಾಡುತ್ತಾರೆ. ನಗಿಸಲೇ ಬೇಕೆಂದು ಹಠ ಬಿಡದ ಮಂಜು ದಿವ್ಯಾರ ಕೈ ಹಿಡಿದು ಎಳೆದಾಡುತ್ತಾರೆ. ಈ ವೇಳೆ ಕೊನೆಗೂ ದಿವ್ಯಾ ಕೊಂಚ ನಗೆ ಬೀರಿಬಿಡುತ್ತಾರೆ. ಇದನ್ನು ಗಮನಿಸಿದ ಬಿಗ್‍ಬಾಸ್ ದಿವ್ಯಾ ಸುರೇಶ್ ಔಟ್ ಎಂದು ಘೋಷಿಸುತ್ತಾರೆ.

    ಬಳಿಕ ಉಳಿದ ಮಹಿಳೆಯರ ಬೆನ್ನಟ್ಟಿದ ಪುರುಷ ಸದಸ್ಯರು ಎಷ್ಟೇ ಪ್ರಯತ್ನಿಸಿದರು ಮಹಿಳೆಯರು ನಗದೇ ಟಾಸ್ಕ್ ಕಂಪ್ಲೀಟ್ ಮಾಡಿ ವಿಜಯ ಶಾಲಿಯಾಗುತ್ತಾರೆ. ಹೀಗಾಗಿ ಬಿಗ್‍ಬಾಸ್ ಮನೆಯ ಮಹಿಳಾ ಸದಸ್ಯರಿಗೆ ಸವಿಯಲು ಪಿಜ್ಜಾ ಕಳುಹಿಸಿಕೊಡುತ್ತಾರೆ. ಎಷ್ಟೋ ದಿನಗಳಿಂದ ಪಿಜ್ಜಾ ನೋಡದ ಮಹಿಳೆಯರು ನಿನ್ನೆ ಪಿಜ್ಜಾ ತಿಂದು ಸಖತ್ ಎಂಜಾಯ್ ಮಾಡುತ್ತಾರೆ.

  • ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳ ಈಜು-ಮೋಜು ಮಸ್ತಿ!

    ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳ ಈಜು-ಮೋಜು ಮಸ್ತಿ!

    ಬೆಂಗಳೂರು: ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಧನುಶ್ರೀ ಗೌಡ ಮನೆಯಿಂದ ಹೊರಗೆ ಹೋದ ಬಳಿಕ ಬಿಗ್‍ಬಾಸ್ ಸ್ಪರ್ಧಿಗಳ ಮೋಜು-ಮಸ್ತಿ ಹಾಗೆಯೇ ಮುಂದುವರೆದಿದೆ.

    ಸದ್ಯ ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಸೋಮವಾರಕ್ಕೆ 9ನೇ ದಿನವಾಗಿದ್ದು, ಎಲಿಮಿನೆಷನ್‍ನಿಂದ ಟೆನ್ಷನ್‍ನಿಂದ ಬಿಡುಗಡೆಗೊಂಡಿದ್ದ ದೊಡ್ಮನೆ ಮಂದಿಗೆ ನಿನ್ನೆ ಬಿಗ್‍ಬಾಸ್ ಟಾಸ್ಕ್‍ವೊಂದನ್ನು ನೀಡಿದ್ದರು. ಅದುವೇ ಈಜು ಮೋಜು. ಇದರ ಅನುಸಾರ ಚಟುವಟಿಕೆ ಆರಂಭದಲ್ಲಿ ಒಂದು ಹಾಡು ಪ್ಲೇ ಆಗುತ್ತದೆ. ಆ ಹಾಡು ಮುಗಿದ ತಕ್ಷಣವೇ ಶಮಂತ್(ಬ್ರೋ ಗೌಡ) ಸ್ವಿಮ್ಮಿಂಗ್ ಪೂಲ್‍ಗೆ ಹಾರಬೇಕು. ಮತ್ತೊಮ್ಮೆ ಹಾಡು ಶುರುವಾದಾಗ ಪೂಲ್‍ಗೆ ಬೀಳಿಸಲು ಒಬ್ಬ ಸದಸ್ಯನನ್ನು ಹಿಡಿಯಬೇಕು ಹಾಗೂ ಹಾಡು ನಿಂತ ತಕ್ಷಣ ತನ್ನೊಡನೆ ಪೂಲ್‍ಗೆ ಬೀಳಿಸಬೇಕು. ಮುಂದಿನ ಹಾಡಿಗೆ ಇಬ್ಬರು ಸೇರಿ ಮೂರನೇ ಅವರನ್ನು ಬೀಳಿಸಬೇಕು. ಹೀಗೆ ಒಂದೊಂದು ಹಾಡು ಮುಗಿಯುತ್ತಿದ್ದಂತೆ, ಒಬ್ಬೊಬ್ಬ ಸದಸ್ಯರನ್ನು ಪೂಲ್‍ಗೆ ಬೀಳಿಸುತ್ತಾ ಸಾಗಬೇಕು ಎಂದು ಸೂಚಿಸಿದರು.

    ಅದರಂತೆ ಮೊದಲನೆಯದಾಗಿ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ನೆನೆಪಿರಲಿ ಸಿನಿಮಾದ ಕುರಕ್ಕು ಕಳ್ಳಿಕೆರೆ ಸಾಂಗ್ ಪ್ಲೇ ಆಗುತ್ತದೆ. ಆಗ ಬ್ರೋ ಗೌಡ ಸ್ವಿಮಿಂಗ್ ಪೂಲ್‍ಗೆ ಹಾರಿದರು. ಬಳಿಕ ಬ್ರೋ ಗೌಡ ಓಡುತ್ತಾ ಬಂದು ಲ್ಯಾಗ್ ಮಂಜುರನ್ನು ಔಟ್ ಮಾಡುತ್ತಾರೆ. ನಂತರ ಇಬ್ಬರು ಪೂಲ್‍ಗೆ ಹಾರಿ ವಾಪಸ್ಸ್ ಬಂದು ಲ್ಯಾಂಗ್ ಮಂಜು, ಯಶ್ ಅಭಿನಯದ ಅಣ್ತಮ್ಮ ಸಾಂಗ್ ಪ್ಲೇ ಮಾಡಿದಾಗ ಓಡಿ ಹೋಗಿ ದಿವ್ಯಾ ಸುರೇಶ್‍ರನ್ನು ಔಟ್ ಮಾಡುತ್ತಾರೆ. ಬಳಿಕ ದಿವ್ಯಾರನ್ನು ಎತ್ತಿಕೊಂಡು ಇಬ್ಬರು ಈಜು ಕೊಳಕ್ಕೆ ಹಾರುತ್ತಾರೆ.

    ನಂತರ ಔಟಾಗಿದ್ದ ರಾಜೀವ್ ಹಾಗೂ ಅರವಿಂದ್ ಕಿಚ್ಚ ಸುದೀಪ್ ಅಭಿನಯದ ರನ್ನ ಸಿನಿಮಾದ ಥಿತಲಿ ಥಿತಲಿ ಸಾಂಗ್ ಪ್ಲೇ ಆದಾಗ ದಿವ್ಯಾ ಉರುಡುಗರನ್ನು ಟಾರ್ಗೆಟ್ ಮಾಡಿ ಔಟ್ ಮಾಡಿ ಸ್ವಿಮ್ಮಿಂಗ್ ಪೂಲ್‍ಗೆ ಎಸೆಯುತ್ತಾರೆ.

    ಇದೇ ವೇಳೆ ಸ್ವಿಮಿಂಗ್ ಪೂಲ್‍ನಲ್ಲಿ ಲ್ಯಾಗ್ ಮಂಜು ದಿವ್ಯಾ ಉರುಡುಗಗೊಂದು ಸಿಕ್ರೇಟ್ ಹೇಳುತ್ತೇನೆ. ಅವರಿಗೆ ಧಮ್ ಇದ್ದರೆ ಎಲ್ಲರ ಮುಂದೆ ಹೇಳಲಿ ಎಂದು ಚಾಲೆಂಜ್ ಮಾಡುತ್ತಾರೆ ಬಳಿಕ ಮಂಜು ಹೇಳಿದ ಸಿಕ್ರೆಟ್ ಕೇಳಿ ದಿವ್ಯಾ ನಾಚುತ್ತಾ ನಸುನಗೆ ಬೀರುತ್ತಾರೆ. ನನ್ನ ಮೀಟರ್ ಬಗ್ಗೆ ಮಾತನಾಡಬೇಡಿ ಐ ಲವ್ ಯು ಎಂದು ಲ್ಯಾಗ್ ಮಂಜುಗೆ ಎಲ್ಲರ ಸಮ್ಮುಖದಲ್ಲಿ ದಿವ್ಯಾ ಉರುಡುಗ ಹೇಳುತ್ತಾರೆ. ಅದಕ್ಕೆ ಮಂಜು ಥ್ಯಾಂಕ್ಯು ಐ ಲವ್ ಯು ಟೂ ಎಂದು ಹಾಸ್ಯಮಯವಾಗಿ ಅಣುಗಿಸುತ್ತಾ ಮುಗುಳು ನಗೆ ಬೀರುತ್ತಾರೆ.

    ಒಟ್ಟಾರೆ ಟಾಸ್ಕ್ ಮೂಲಕ ಮನೆಮಂದಿಯೆಲ್ಲಾ ಒಬ್ಬೊಬ್ಬರಾಗಿ ಈಜು ಕೊಳಕ್ಕೆ ಹಾರುವ ಮೂಲಕ ಸಖತ್ ಎಂಜಾಯ್ ಮಾಡಿದರು.