Tag: ಪಬ್ಲಿಕ್ ಟಿವಿ Bigboss

  • ವೈಷ್ಣವಿಗೆ ಚಿನ್ನ ಎಂದ ಶಮಂತ್ !

    ವೈಷ್ಣವಿಗೆ ಚಿನ್ನ ಎಂದ ಶಮಂತ್ !

    ಬಿಗ್‍ಬಾಸ್ ಮನೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಶಮಂತ್ ಇದೀಗ ವೈಷ್ಣವಿಗೆ ಚಿನ್ನ ಎಂದು ಕರೆಯುವ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

    ನಿಧಿ ಹಾಗೂ ವೈಷ್ಣವಿ ಬಾತ್ ರೂಮ್ ಏರಿಯಾದಲ್ಲಿ ನಿಂತು ಮುಖಕ್ಕೆ ಫೇಸ್ ಪ್ಯಾಕ್ ಹಾಗೂ ಕ್ರೀಮ್ ಹಚ್ಚಿಕೊಳ್ಳುತ್ತಿದ್ದ ವೇಳೆ ಶಮಂತ್ ಇಬ್ಬರ ಮಧ್ಯೆ ನಿಂತು ಕುಡಿದವರಂತೆ ನಟಿಸಿದ್ದಾರೆ. ಅಲ್ಲದೇ ನಿಧಿ ಸುಬ್ಬಯ್ಯಗೆ ಫೇಸ್ ಪ್ಯಾಕ್ ಹಾಕಿಕೊಳ್ಳಬೇಕಾದರೆ ಚಿನ್ನ ಹುಷಾರು ಕಣ್ಣಿಗೆ ಹೋಗಿ ಬಿಟ್ಟತ್ತು ಎನ್ನುತ್ತಾರೆ. ಆಗ ವೈಷ್ಣವಿ ಎಷ್ಟು ಕಾಳಜಿ ಎಂದು ಹೇಳಿದಾಗ ಶಮಂತ್ ಚಿನ್ನ ನೀನು ಹಾಗೇ ಮಾತನಾಡಬೇಡ ಎಂದು ಹೇಳುತ್ತಾರೆ.

    ಆಗ ನಿಧಿ ಎಷ್ಟು ಚಿನ್ನ ನಿನಗೆ ಎಂದು ಶಮಂತ್ ಕೇಳುತ್ತಾರೆ. ಆಗ ಶಮಂತ್ ನಿಧಿಗೆ ನೀನು ನನ್ನ ಚಿನ್ನ, ವೈಷ್ಣವಿ ನನ್ನ ರನ್ನ ಎಂದು ಹೇಳುತ್ತಾರೆ. ಈ ವೇಳೆ ವೈಷ್ಣವಿ ನೀನು ಯಾರು ಹಾಗಾದ್ರೆ ಅಂದಾಗ, ನಾನು ಮುನ್ನ. ನೀನು ಹೀಗೆ ಹೆಚ್ಚಿಗೆ ಮಾತನಾಡುತ್ತಿದ್ದರೆ ನಿನಗೆ ಗುನ್ನ ಇಟ್ಟು ಬಿಡುತ್ತೇನೆ ಎಂದು ವೈಷ್ಣವಿಗೆ ಹೇಳುತ್ತಾರೆ.

    ನೀನು 6 ವರ್ಷ ವಿಲನ್‍ನನ್ನು ಮನೆಯಲ್ಲಿಯೇ ಇಟ್ಟುಕೊಂಡು ಕಣ್ಣಾ ಮುಚ್ಚಾಲೆ ಆಟ ಆಡಿದ್ಯಾ? ತಾಕತ್ತು ಇರಬೇಕು ಯಾವಾಗಲೂ, ಒಂದೇ ಒಂದು ಸುಳಿವು ನೀನು ಸಿದ್ದಾರ್ಥ್‍ಗೆ ಕೊಟ್ಟಿದ್ದರೆ ನೀನು ಎಲ್ಲೋ ಹೋಗಿ ಬಿಡುತ್ತಿದ್ದೆ ಎಂದು ವಾಲಾಡುತ್ತಾ ಶಮಂತ್ ವೈಷ್ಣವಿಗೆ ಅಗ್ನಿ ಸಾಕ್ಷಿ ಸಿರಿಯಲ್ ಬಗ್ಗೆ ಮಾತನಾಡುತ್ತಾರೆ.

    ಚಿನ್ನ ಆರುವರೆ ವರ್ಷ ನನ್ನ ಲೈಫ್‍ನಲ್ಲಿ ಅರ್ಧಗಂಟೆ 8 ರಿಂದ 8.30ವರೆಗೂ ನಿನಗೋಸ್ಕರ ಎತ್ತಿಟ್ಟು ಬಿಟ್ಟಿದ್ದೆ. ನಂತರ ಬಾರ್ ಕಡೆಗೆ ಹೋಗುತ್ತಿದ್ದೆ ಎಂದು ಹಾಸ್ಯ ಮಾಡಿದ್ದಾರೆ.

  • ಮಂಜು ಚಪ್ಪಲಿ ಹೊರಗೆಸೆದ ವೈಷ್ಣವಿ!

    ಮಂಜು ಚಪ್ಪಲಿ ಹೊರಗೆಸೆದ ವೈಷ್ಣವಿ!

    ಷ್ಟುದಿನ ಮನೆಯಲ್ಲಿ ಸೈಲೆಂಟ್ ಆಗಿದ್ದ ವೈಷ್ಣವಿ, ಗರ್ಲ್ ಹಾಸ್ಟೆಲ್ ವರ್ಸಸ್ ಬಾಯ್ಸ್ ಹಾಸ್ಟೆಲ್ ಟಾಸ್ಕ್ ನೀಡಿದಾಗಲಿಂದಲೂ ಮನೆಯಲ್ಲಿ ರೌಡಿಯಂತೆ ಅವಾಜ್ ಹಾಕುತ್ತಾ ಮಿಂಚುತ್ತಿದ್ದಾರೆ.

    ನಿನ್ನೆ ರಘು ಬಾಯ್ಸ್ ಹಾಸ್ಟೆಲ್‍ಗೆ ವೈಷ್ಣವಿಯನ್ನು ಎತ್ತಿಕೊಂಡು ಹೋಗಿ ಹಾಕೋಣ. ಎರಡು ಪಾಯಿಂಟ್ ಆದರೂ ಸಿಗುತ್ತದೆ ಎಂದು ಅಣಕಿಸುತ್ತಿರುತ್ತಾರೆ. ಆಗ ವೈಷ್ಣವಿ ಧೈರ್ಯ ಇದ್ದರೆ ಇಲ್ಲಿ ಬಂದು ಮಾತಾಡು ಎಂದು ಅವಾಜ್ ಹಾಕುತ್ತಾರೆ. ಆಗ ರಘು ವೈಷ್ಣವಿ ಚಪ್ಪಲಿಯನ್ನು ಜೋರಾಗಿ ಒದೆಯುತ್ತಾರೆ. ನಂತರ ವೈಷ್ಣವಿಯವರ ಮತ್ತೊಂದು ಕಾಲಿನ ಚಪ್ಪಲಿಯನ್ನು ಶಮಂತ್ ಹಾಗೂ ರಘು ಸೇರಿಕೊಂಡು ಗಾರ್ಡನ್ ಏರಿಯಾದ ಮೇಲಿರುವ ಸ್ಪೀಕರ್‍ವೊಂದರ ಮೇಲೆ ಇಡುತ್ತಾರೆ.

    ನಂತರ ವೈಷ್ಣವಿಯನ್ನು ಎಳೆದುಕೊಂಡು ಹೋಗಲು ಮಂಜು, ರಾಜೀವ್, ಶಮಂತ್, ರಘು ಪ್ರಯತ್ನಿಸುತ್ತಾರೆ. ಈ ವೇಳೆ ಶುಭ ವೈಷ್ಣವಿಯನ್ನು ಸೇವ್ ಮಾಡಲು ಶುಭಾ ಪೂಂಜಾ ಸಖತ್ ಸರ್ಕಸ್ ನಡೆಸುತ್ತಾರೆ. ಆದರೂ ಬಿಡದ ಹುಡುಗರು ವೈಷ್ಣವಿಯನ್ನು ಬಾಯ್ಸ್ ಹಾಸ್ಟೆಲ್ ವಿಭಾಗಕ್ಕೆ ಎಳೆದುಕೊಂಡು ಹೋಗುತ್ತಾರೆ. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ವೈಷ್ಣವಿ ಓಡಿ ಬರುತ್ತಾರೆ. ಮತ್ತೆ ವೈಷ್ಣವಿಯನ್ನು ಎತ್ತಿಕೊಂಡು ಬಿಸಾಕಿ ಬಿಡುತ್ತೇನೆ ಎಂದು ಮಂಜು ಹೇಳುತ್ತಾರೆ.

    ಆಗ ಶುಭ ಮಂಜುರವರ ಒಂದು ಚಪ್ಪಲಿಯನ್ನು ದೂರಕ್ಕೆ ಎಸೆದರೆ ವೈಷ್ಣವಿ ಮತ್ತೊಂದು ಚಪ್ಪಲಿಯನ್ನು ಸ್ಪೀಕರ್ ಮೇಲೆ ಎಸೆಯಲು ಹೋಗಿ ಬಿಗ್ ಮನೆಯ ಕಾಂಪೌಂಡ್‍ನಿಂದ ಹೊರಕ್ಕೆ ಎಸೆಯುತ್ತಾರೆ. ಈ ವೇಳೆ ಇದನ್ನು ಕಂಡು ಮನೆ ಮಂದಿಯೆಲ್ಲಾ ಸೂಪರ್ ಎಂದು ನಗುತ್ತಾ ಚಪ್ಪಾಳೆ ಹೊಡೆಯುತ್ತಾರೆ.

    ಬಳಿಕ ಮಂಜು ಶನಿವಾರ ನೀನು ಹೀಲ್ಸ್ ಚಪ್ಪಲಿ ಹಾಕಿಕೊಳ್ಳುತ್ತೀಯಾ ಅಲ್ವಾ? ಐತೆ ಇರು ಎಂದು ರೇಗಿಸುತ್ತಾರೆ.

  • ಮಾವ ಅನ್ನೋದು ಕೆಟ್ಟ ಪದನಾ- ಪ್ರಶಾಂತ್‍ಗೆ ಕಿಚ್ಚನ ಪ್ರಶ್ನೆ

    ಮಾವ ಅನ್ನೋದು ಕೆಟ್ಟ ಪದನಾ- ಪ್ರಶಾಂತ್‍ಗೆ ಕಿಚ್ಚನ ಪ್ರಶ್ನೆ

    ಬಿಗ್‍ಬಾಸ್ ಕಾರ್ಯಕ್ರಮ ಐದನೇ ವಾರದತ್ತ ಮುನ್ನುಗ್ಗುತ್ತಿದ್ದು, ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ನಡೆಯಿತು. ಈ ವೇಳೆ ಕಿಚ್ಚ ಸುದೀಪ್ ಪ್ರಶಾಂತ್ ಸಂಬರ್ಗಿಯವರಿಗೆ ಮಾವ ಅನ್ನೋದು ಕೆಟ್ಟ ಪದನಾ ಎಂಬ ಪ್ರಶ್ನೆ ಕೇಳಿದ್ದಾರೆ.

    ಕಳೆದ ವಾರ ಪ್ರಶಾಂತ್ ಸಂಬರ್ಗಿಯವರು ಮಂಜುರನ್ನು ನನ್ನನ್ನು ಮಾವ ಎಂದು ಕರೆಯಬೇಡ ಅಂತಾ ಜಗಳ ಮಾಡಿದ್ದರು. ಈ ವೇಳೆ ಮಂಜು ಹಾಗೂ ಪ್ರಶಾಂತ್ ಮಧ್ಯೆ ದೊಡ್ಡ ವಾಗ್ವಾದವೇ ನಡೆದಿತ್ತು. ಸದ್ಯ ನಿನ್ನೆ ಈ ವಿಚಾರವಾಗಿ ಕಿಚ್ಚ ಸುದೀಪ್ ಪ್ರಶಾಂತ್ ಸಂಬರ್ಗಿ ಜೊತೆ ಪ್ರಸ್ತಾಪಿಸಿದ್ದಾರೆ.

    ಪ್ರಶಾಂತ್‍ರವರೇ, ಮಾಜಿ ಮಾವನಾಗಲು ತೀರ್ಮಾನ ಮಾಡಿದ್ದೇಕೆ ಎಂದು ಕಿಚ್ಚ ಕೇಳುತ್ತಾರೆ. ಆಗ ಮುಂದೆ ಮಾವ ಎಂದು ಹಿಂದೆ ನನ್ನನ್ನು ಗೇಲಿ ಮಾಡುತ್ತಾರೆ ಎಂಬ ಮಾತು ನನ್ನ ಕಿವಿಗೆ ಬಿತ್ತು. ಹಾಗಾಗಿ ಎಲ್ಲರ ಬಳಿ ಹೋಗಿ ನನ್ನ ತಂದೆ-ತಾಯಿ ಇಟ್ಟಿರುವ ಹೆಸರಿಟ್ಟು ಕರೆಯಿರಿ ಪ್ರೀತಿ ಜಾಸ್ತಿ ಇದೆ ಅಂತಾ ಕೇಳಿಕೊಂಡೆ ಎಂದು ಹೇಳುತ್ತಾರೆ.

    ಹಿಂದೆಗಡೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ನಿಮಗೆ ಹೇಗೆ ತಿಳಿಯಿತು ಎಂಬ ಪ್ರಶ್ನೆಗೆ, ಹೀಗೆ ಜೆನರಲಿ ಬಂದು ಈ ತರ ಡಬಲ್ ಮಿನಿಂಗ್ ಇದೆ ಎಂದು ಹೇಳಿದರು. ಆಗ ಬೇಡ ಯಾಕೆ ನನ್ನ ಇಮೇಜ್ ಹಾಳು ಮಾಡಿಕೊಳ್ಳಬೇಕು ಎಂದು ಒಬ್ಬೊಬ್ಬರಿಗೂ ಹೋಗಿ ವೈಯಕ್ತಿಕವಾಗಿ ಮನವಿ ಮಾಡಿಕೊಂಡಿದ್ದೇನೆ ಎಂದರು.

    ನಂತರ ಈ ರೀತಿ ಮಾಹಿತಿ ಕೊಟ್ಟವರು ನಾನು ಹೇಳಿದ್ದು ಸುಳ್ಳು ಎಂದು ಕೂಡ ಹೇಳುತ್ತಾರೆ. ಆಗ ನೀವು ಸೀರಿಯಸ್ ಆಗಿ ತೆಗೆದುಕೊಳ್ಳುವ ಮುನ್ನ ಯೋಚನೆ ಮಾಡಬೇಕಾಗಿತ್ತು ಎಂದಾಗ, ನಾನು ಈ ವಿಚಾರವಾಗಿ ಕೇಳಿದಾಗ ನಾನು ಹೇಳಿದ್ದು ಸುಳ್ಳು, ಆದರೆ ಹೊರಗಡೆ ಈ ರೀತಿ ದ್ವಂಧ ಅರ್ಥ ಬರುತ್ತದೆ. ನಿನ್ನ ಹೆಸರಿರುವಾಗ ನೀನು ಯಾಕೆ ಈ ರೀತಿ ಕರೆಸಿಕೊಳ್ಳುತ್ತಿದ್ದಿಯಾ ಎಂದು ಹೇಳಿದರು. ಆಗ ನನಗೂ ಆಚೆ ಇರಲಿ, ಬಿಡಲಿ ನನ್ನ ಹೆಸರಿನಲ್ಲಿ ಕರೆಸಿಕೊಳ್ಳಬೇಕು ಎಂದು ಅನಿಸಿತು ಎಂದು ಹೇಳುತ್ತಾರೆ.

    ಈ ವೇಳೆ ಪ್ರತಿಕ್ರಿಯಿಸಿದ ಮಂಜು, ನಾನು ಒಬ್ಬರನ್ನು ಗೇಲಿ ಮಾಡುತ್ತೇನೆ, ರೇಗಿಸುತ್ತೇನೆ ಎಂದರೆ ತುಂಬಾ ಪ್ರೀತಿಸುತ್ತೇನೆ ಎಂದು ಅರ್ಥ. ಇಲ್ಲಿಗೆ ಬಂದು 40 ದಿನ ಆಗಿದೆ. ಅಂದಿನಿಂದ ನಾನು ಮಾವ ಎಂದು ಕರೆದುಕೊಂಡು ಬರುತ್ತಿದ್ದೇನೆ. ಆದರೆ ಸಡನ್ ಆಗಿ ಹಾಗೇ ಕರೆಯಬೇಡ ಎಂದಾಗ ನಾನು ಆಗುವುದಿಲ್ಲ ಎಂದು ಹೇಳಿದೆ. ಈ ಮಾತನ್ನು ಮುಂಚೆಯೇ ಹೇಳಿದ್ದರೆ ಬಹುಶಃ ಒಪ್ಪಿಕೊಳ್ಳುತ್ತಿದ್ದೆ. ಆದರೆ ಚಕ್ರವರ್ತಿಯವರು ಬಂದ ನಂತರ ಅವರ ಮಾತನ್ನು ಕೇಳಿ ಇವರು ಮಾತನಾಡಿದ್ದು, ನನಗೆ ಇಷ್ಟವಾಗಲಿಲ್ಲ. ಬೇರೆಯವರ ಮಾತು ಕೇಳಿ ನೀವು ಹೇಗೆ ನಿರ್ಧರಿಸುತ್ತೀರಾ ಎನ್ನುವುದು ನನ್ನ ಅಭಿಪ್ರಾಯ ಎನ್ನುತ್ತಾರೆ.

  • ಮಂಜು, ದಿವ್ಯಾ ಸುರೇಶ್ ಸಂಬಂಧದ ಬಗ್ಗೆ ಪ್ರಿಯಾಂಕ ಹೇಳಿದ್ದೇನು ಗೊತ್ತಾ?

    ಮಂಜು, ದಿವ್ಯಾ ಸುರೇಶ್ ಸಂಬಂಧದ ಬಗ್ಗೆ ಪ್ರಿಯಾಂಕ ಹೇಳಿದ್ದೇನು ಗೊತ್ತಾ?

    ಬಿಗ್‍ಬಾಸ್ ಮನೆಯ ಸದಸ್ಯರಿಗೆ ಪ್ರತಿ ನಿತ್ಯ ಒಂದಲ್ಲಾ ಒಂದು ಚುಟುವಟಿಕೆ ನೀಡುತ್ತಿರುತ್ತಾರೆ. ಸದ್ಯ ಹೊರಗಿನಿಂದ ಬಂದ ಸ್ಪರ್ಧಿಗಳು ಮನೆ ಒಳಗಿರುವ ಸದಸ್ಯರನ್ನು ಎಷ್ಟು ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಯಲು, ಪೆಟ್ಟಿಗೆಯೊಂದರಲ್ಲಿ ಕೆಲವು ವಸ್ತುಗಳಿದ್ದು, ಅವುಗಳನ್ನು ಸೂಕ್ತ ಕಾರಣಗಳೊಂದಿಗೆ ಮನೆಯ ಸದಸ್ಯರಿಗೆ ನೀಡುವಂತೆ ಸೂಚಿಸಿದ್ದರು.

    ಅದರಂತೆ ಈ ಚಟುವಟಿಕೆ ವೇಳೆ ಪ್ರಿಯಾಂಕ ತಿಮ್ಮೇಶ್, ಯಾವಾಗಲೂ ದಿವ್ಯಾ ಸುರೇಶ್, ಮಂಜು ಜೊತೆಗೆ ಇರುತ್ತಾರೆ. ಇದು ಒಬ್ಬರಿಗೆ ಮೀಸಲಾಗಿರುವಂತೆ ಕಾಣಿಸುತ್ತದೆ. ಹಾಗಾಗಿ ನೀವು ಎಲ್ಲರ ಜೊತೆಗೂ ಬೆರೆಯಬೇಕು ಎಂದು ಬಕೆಟ್ ನೀಡಿದರು. ಇದಾದ ನಂತರ ದಿವ್ಯಾ ಸುರೇಶ್, ಪ್ರಿಯಾಂಕ ಬಳಿ ಹೋಗಿ, ನಾನು ಮಂಜು ಜೊತೆಗೆ ಇರುತ್ತೇನೆ ಎಂದು ಹೇಳಿದ್ರಲ್ಲಾ, ನಿಮಗೆ ಯಾಕೆ ಹಾಗೆ ಅನಿಸಿತು? ನೀವು ಯಾವ ರೀತಿ ನೋಡುತ್ತಿದ್ದೀರಾ ಎಂಬುವುದನ್ನು ಹೇಳುತ್ತೀರಾ ಎಂದು ಕೇಳುತ್ತಾರೆ.

    ಆಗ ಪ್ರಿಯಾಂಕ ನಾನು ನಿಮ್ಮೆಲ್ಲರನ್ನು ಹೊರಗಿನಿಂದಲೇ ಪರಿಚಯ ಮಾಡಿಕೊಂಡಿದ್ದೇನೆ. ನೀವು ಯಾವಾಗಲೂ ಮಂಜು ಜೊತೆಯಲ್ಲಿಯೇ ಇರುತ್ತೀರಾ ಅದು ತಪ್ಪೋ, ಸರಿಯೋ ನನಗೆ ಗೊತ್ತಿಲ್ಲ. ನೀವು ಬೇರೆಯವರೊಂದಿಗೆ ಬೆರೆಯದೇ ಇರುವುದು ಕಾಣಿಸುತ್ತಿದೆ.

    ನಿಮಗೆ ಅವರ ಜೊತೆಯಲ್ಲಿಯೇ ಮಾತನಾಡಲು, ಕಂಫರ್ಟ್ ಎಂದು ಅನಿಸಿದರೆ, ಪ್ರೀತಿ, ವಿಶ್ವಾಸವಿದ್ದರೆ ಅವರೊಂದಿಗೆಯೇ ಇರಿ ತೊಂದರೆ ಏನು ಇಲ್ಲ. ನಾವು ಸಾವಿರ ತರ ನೋಡಿಕೊಳ್ಳುತ್ತೇವೆ. ಎಲ್ಲರ ದೃಷ್ಟಿ ಒಂದೇ ರೀತಿ ಇರುವುದಿಲ್ಲ. ನಾನು ನನ್ನ ವೀವ್‍ನಲ್ಲಿ ಹೇಳುತ್ತೇನೆ. ನೀವು ನಿಮ್ಮ ವೀವ್‍ನಲ್ಲಿ ಯೋಚನೆ ಮಾಡಿಕೊಳ್ಳಿ ಅಷ್ಟೇ ಎಂದು ಹೇಳುತ್ತಾರೆ.

    ನಂತರ ದಿವ್ಯಾ ಸುರೇಶ್ ಬೇರೆ ರೀತಿ ಏನಾದರೂ ಹೊರಗಡೆ ಬಿಂಬಿಸುತ್ತಿದ್ದಿಯಾ ಎಂದು ಕೇಳಿದಾಗ, ಪ್ರಿಯಾಂಕ ಹಾಗೇ ಏನೆಲ್ಲ. ನೀವಿಬ್ಬರು ಒಳ್ಳೆಯ ಫ್ರೆಂಡ್ಸ್, ಮಂಜು ಅವರು ಕೂಡ ಯಾವತ್ತು ಕೆಟ್ಟ ರೀತಿ ನಡೆದುಕೊಂಡಿಲ್ಲ. ನೀವು ಕೂಡ ಯಾವತ್ತು ಹಾಗೇ ನಡೆದುಕೊಂಡಿಲ್ಲ. ನನಗೆ ನೀವಿಬ್ಬರು ಕಪಲ್ ರೀತಿ ಕಾಣಿಸಿಲ್ಲ. ನೀವಿಬ್ಬರು ಬೆಸ್ಟ್ ಫ್ರೆಂಡ್ಸ್ ರೀತಿ ಇದ್ದೀರಾ ಎಂದು ಪ್ರಿಯಾಂಕ ಅಭಿಪ್ರಾಯ ತಿಳಿಸಿದ್ದಾರೆ.

  • ಮತ್ತೆ ಒಂದಾದ ಮಂಜು-ಪ್ರಶಾಂತ್!

    ಮತ್ತೆ ಒಂದಾದ ಮಂಜು-ಪ್ರಶಾಂತ್!

    ಬಿಗ್‍ಬಾಸ್ ಮನೆಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಕಿತ್ತಾಡಿಕೊಂಡಿದ್ದ ಮಂಜು ಹಾಗೂ ಪ್ರಶಾಂತ್ ನಿನ್ನೆ ಮತ್ತೆ ಒಂದಾಗಿದ್ದಾರೆ.

    ಮೊದಮೊದಲಿಗೆ ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಾಗ ಪ್ರಶಾಂತ್ ಸಂಬರ್ಗಿಯನ್ನು ಮಂಜು ಪವಾಗಡ ಮಾವ ಎಂದು ಕರೆಯಲು ಆರಂಭಿಸಿದರು. ಅಂದಿನಿಂದ ದೊಡ್ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಮಾವ ಎಂದೇ ಫೇಮಸ್ ಆದರು.

    ಆದರೆ ಎರಡು ದಿನಗಳ ಹಿಂದೆ ಪ್ರಶಾಂತ್ ಸಂಬರ್ಗಿ, ನನ್ನನ್ನು ಮಾವ ಎಂದು ಕರೆಯಬೇಡ ಅಂತಾ ಸ್ವಿಮಿಂಗ್ ಪೂಲ್ ಬಳಿ ಮಂಜು ಮೇಲೆ ರೇಗಾಡಿ ಜಗಳ ಮಾಡಿದ್ದರು. ಈ ಮಧ್ಯೆ ಪ್ರಶಾಂತ್ ದಿವ್ಯಾ ಸುರೇಶ್ ಹೆಸರು ಎತ್ತಿದ್ದಕ್ಕೆ ಮಂಜು ಹಾಗೂ ಪ್ರಶಾಂತ್ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಇವರಿಬ್ಬರ ಜಗಳಕ್ಕೆ ಬಿಗ್‍ಮನೆ ಕಾವೇರಿತ್ತು.

    ಇದೀಗ ನಿನ್ನೆ ಮಂಜು ಪ್ರಶಾಂತ್ ಬಳಿ ಹೋಗಿ ಸಾರಿ ಎಂದು ಕೇಳಿದ್ದಾರೆ. ಈ ವೇಳೆ ಪ್ರಶಾಂತ್ ನಾನು ನಿನಗೆ ಮೊದಲಿನಿಂದಲೂ ನಾಲ್ಕು ಬಾರಿ ಮಾವ ಎಂದು ಕರೆಯಬೇಡ ಅಂತ ಹೆಳಿದ್ದೆ. ಅಲ್ಲದೇ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ರಿಕ್ವೆಸ್ಟ್ ಕೂಡ ಮಾಡಿಕೊಂಡಿದ್ದೆ, ಆದರೂ ನೀನು ಹಾಗೆಯೇ ಕರೆಯುತ್ತಿದೆ ಎಂದು ಹೇಳುತ್ತಾರೆ.

    ಈ ವೇಳೆ ಮಂಜು ನಾನು ಮೊದಲಿನಿಂದಲೂ ನಿಮಗೆ ಮಾವ ಎಂದು ಕರೆದು ಅಭ್ಯಾಸ ಆಗಿ ಹೋಯಿತು. ಹಾಗಾಗಿ ನಿಮ್ಮನ್ನು ಹಾಗೇ ಕರೆಯುತ್ತಿದ್ದೆ ಎಂದು ಹೇಳಿದಾಗ ಹೋಗಲಿ ಬಿಡು ಇಬ್ಬರು ಮಾತನಾಡಿದ್ದು, ತಪ್ಪಾಗಿದೆ ಎಂದು ಹೇಳಿ ಹೆಗಲ ಮೇಲೆ ಕೈ ಹಾಕಿಕೊಂಡು ಒಟ್ಟಿಗೆ ಹೋಗುತ್ತಾರೆ.

  • ಮಂಜುರನ್ನು ಸುಳ್ಳುಗಾರ ಎಂದ ದಿವ್ಯಾ ಸುರೇಶ್!

    ಮಂಜುರನ್ನು ಸುಳ್ಳುಗಾರ ಎಂದ ದಿವ್ಯಾ ಸುರೇಶ್!

    -ಮಂಜು ಮಾತನಾಡದ್ದಕ್ಕೆ ಮುನಿಸಿಕೊಂಡ ದಿವ್ಯಾ ಸುರೇಶ್

    ಬಿಗ್‍ಬಾಸ್ ಶೋ ಆರಂಭದಲ್ಲಿಯೇ ಮಂಜು ಎಣೆದ ಬಲೆಗೆ ಬಿದ್ದ ದಿವ್ಯಾ ಸುರೇಶ್, ಇದೀಗ ಎಲ್ಲಿಯೇ ಹೋದರೂ, ಬಂದರೂ ಮಂಜು ಜಪ ಮಾಡುತ್ತಾರೆ. ಹಲವಾರು ಬಾರಿ ಈ ಜೋಡಿ ಕಿತ್ತಾಡಿದರು, ಮುನಿಸಿಕೊಂಡರೂ ನಂತರ ಕೆಲವೇ ಸಮಯದಲ್ಲಿ ಎಲ್ಲವನ್ನು ಮರೆತು ಒಟ್ಟಿಗೆ ಹೊಂದಿಕೊಂಡು ಖುಷಿಖುಷಿಯಾಗಿರುತ್ತಾರೆ. ಸದ್ಯ ನಿನ್ನೆ ದಿವ್ಯಾ ಸುರೇಶ್ ಮಂಜು ನನ್ನೊಂದಿಗೆ ಮಾತನಾಡುತ್ತಿಲ್ಲ ಎಂದು ಮುನಿಸಿಕೊಂಡು ಚಿಕ್ಕಮಕ್ಕಳಂತೆ ನೀನು ನನ್ನ ಜೊತೆ ಮಾತನಾಡುತ್ತಿಲ್ಲ ಎಂದು ಮಂಜು ಬಳಿ ಹೇಳಿಕೊಂಡಿದ್ದಾರೆ.

    ನಾನು ದಿವ್ಯಾ ಉರುಡುಗನ ಕರೆದೆ ಆದರೆ ಅವಳು ವಾಶ್ ರೂಮ್‍ಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದಳು. ನೀನು ಕೂಡ ನನ್ನ ಜೊತೆ ಮಾತನಾಡುತ್ತಿಲ್ಲ. ಅಲ್ಲಿ ನಾನು ಶುಭಾ ನಿಂತಿದ್ದಾಗ ಶುಭಾರನ್ನು ಮಾತ್ರ ಆಚೆ ಹೋಗಲು ಕರೆದೆ ಎಂದಾಗ, ಇಲ್ಲ ನಾನು ಯಾರನ್ನು ಕರೆದಿಲ್ಲ ಎಂದು ಮಂಜು ಹೇಳುತ್ತಾರೆ. ಇದಕ್ಕೆ ದಿವ್ಯಾ ಇಲ್ಲ ನೀನು ಕರೆದೆ ಅಂದಾಗ, ಶುಭಾ ಚಿಕನ್ ಕೊಟ್ಟ ನಂತರ ಕರೆದೆ, ಆ ವೇಳೆ ನೀನು ಪ್ರಶಾಂತ್ ಜೊತೆ ಮಾತನಾಡುತ್ತಿದ್ದೆ. ಹಾಗಾಗಿ ಕರೆಯುವುದು ಬೇಡ ಎಂದು ಸುಮ್ಮನಾದೆ ಅಂತಾರೆ.

    ಆಗ ದಿವ್ಯಾ ಸುರೇಶ್ ಲಯರ್, ಸುಳ್ಳು ಪುರಕ, ಬೇಜಾರಾಗುತ್ತಿದೆ ನನಗೆ ಯಾರು ಮಾತನಾಡಿಸುತ್ತಿಲ್ಲ. ಎಲ್ಲರೂ ಸಿಟ್ಟಿನಲ್ಲಿದ್ದಾರೆ, ನನ್ನ ಪಾಯಿಟ್ಸ್ ಜಾಸ್ತಿ ಇರುವುದರಿಂದ ಸಿಟ್ಟಿನಲ್ಲಿದ್ದಾರೆ ಎಂದು ಹೇಳುತ್ತಾರೆ. ಆಗ ಮಂಜು ಇರಬಹುದು ಅವರಿಗೆ ಜಾಸ್ತಿ ಇದ್ದಾಗ ನೀನು ಸಿಟ್ಟಿನಲ್ಲಿ ಇದ್ದಾ? ಇಲ್ವಾಲ್ಲ ಬಿಡು ತಲೆ ಕೆಡಿಸಿಕೊಳ್ಳಬೇಡ ಎಂದು ಹೇಳುತ್ತಾರೆ.

    ಈ ವೇಳೆ ದಿವ್ಯಾ ನೀನು ಕೂಡ ಮಾತನಾಡುತ್ತಿಲ್ಲ. ಆಚೆ ಕೂಡ ನನ್ನನ್ನು ಕರೆದಿಲ್ಲ. ಅಳು ಬರುತ್ತಿದೆ ಅಂತಾರೆ, ಆಗ ಮಂಜು ಹಾಗೇಲ್ಲ ಏನು ಇಲ್ಲ ಬಾ ಎಂದು ಬೆನ್ನು ತಟ್ಟಿ, ಹೆಗಲ ಮೇಲೆ ಕೈ ಹಾಕಿಕೊಂಡು ಸಮಾಧಾನ ಪಡಿಸುತ್ತಾರೆ. ಸದ್ಯ ಇಬ್ಬರಿಬ್ಬರ ಮಧ್ಯೆ ಇರುವ ಅಂಡರ್‍ಸ್ಟಡಿಂಗ್‍ಗೆ ಜನ ಮನಸೋತಿದ್ದಾರೆ ಎಂದೇ ಹೇಳಬಹುದಾಗಿದೆ.

  • ಚಿಕನ್ ನೋಡಿ ಕುಣಿದು ಕುಪ್ಪಳಿಸಿದ ಶುಭಾ ಪೂಂಜಾ!

    ಚಿಕನ್ ನೋಡಿ ಕುಣಿದು ಕುಪ್ಪಳಿಸಿದ ಶುಭಾ ಪೂಂಜಾ!

    ವಾರ ದೊಡ್ಮನೆ ಸ್ಪರ್ಧಿಗಳು ಲಕ್ಷುರಿ ಬಜೆಟ್ ಟಾಸ್ಕ್‍ನಲ್ಲಿ ನಾನ್ ವೆಜ್ ಕಳೆದುಕೊಂಡು ಬೇಸರದಲ್ಲಿದ್ದರು. ಆದರೆ ಈ ಮಧ್ಯೆ ಬಿಗ್‍ಬಾಸ್ ನಿನ್ನೆ ಶುಭಾ ಪೂಂಜಾರನ್ನು ಕನ್ಫೆಕ್ಷನ್ ರೂಮ್‍ಗೆ ಕರೆದು, ಊಟದಲ್ಲಿ ನೀವು ಏನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀರಾ ಎಂದು ಕೇಳಿದ್ದಾರೆ. ಹೀಗೆ ಕೇಳಿದ ತಕ್ಷಣ ನಿಟ್ಟುಸಿರುಬಿಟ್ಟು ಬಹಳ ಖುಷಿಯಿಂದ ಫಿಶ್ ಫ್ರೈ, ಅಂಜಲ್ ಫಿಶ್ ಫ್ರೈನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದರ ಜೊತೆ ಐಸ್ ಕ್ರೀಮ್ ಕೊಟ್ಟರೆ ಚೆಂದ ಎಂದು ನಗುತ್ತಾ ಬಾಯಿ ಚಪ್ಪರಿಸಿಕೊಂಡು ಹೇಳುತ್ತಾರೆ.

    ಚಂಡೇಶ್ವರ ಶಿಕ್ಷೆಯಾಗಿ ನಿಮಗೆ ಚಿಕನ್ ಕಳೆದುಕೊಂಡಾಗ ಏನು ಅನಿಸಿತು ಎಂದು ಬಿಗ್‍ಬಾಸ್ ಕೇಳಿದಾಗ, ತುಂಬಾ ಬೇಜಾರ್ ಆಯ್ತು ಬಿಗ್‍ಬಾಸ್ ಪ್ರತಿದಿನ ಅನ್ನ-ಸಾಂಬಾರ್ ತಿನ್ನುತ್ತಿದ್ದೇವೆ. ಕನಿಷ್ಟಪಕ್ಷ ಚಿಕನ್ ಸಾಂಬರ್ ಆದರೂ ಬರುತ್ತಿತ್ತು ಈಗ ಅದು ಹೋಯಿತು ಎಂದು ಶುಭ ಅಲವತ್ತುಕೊಂಡಿದ್ದಾರೆ.

    ಬಳಿಕ ನೀವು ಚಿಕನ್ ಕಳೆದುಕೊಂಡಾಗ ಬಹಳಷ್ಟು ಸಲ ಚಿಕನ್ ಬೇಕು ಎಂದಿದ್ದನ್ನು ಬಿಗ್‍ಬಾಸ್ ಗಮನಿಸಿದ್ದಾರೆ. ಹಾಗಾಗಿ ನಿಮಗೆ ಬಿಗ್‍ಬಾಸ್, ಇದೀಗ ಚಿಕನ್ ನೀಡಲು ಇಚ್ಛಿಸುತ್ತಾರೆ ಎನ್ನುತ್ತಾರೆ. ಇದನ್ನು ಕೇಳಿದ ತಕ್ಷಣ ಶುಭ ಸಂತಸದಿಂದ ಸೋಫಾದ ಮೇಲೆಯೇ ಕುಣಿದು ಕುಪ್ಪಳಿಸಿ ಬಿಗ್‍ಬಾಸ್‍ಗೆ ಧನ್ಯವಾದ ತಿಳಿಸುತ್ತಾರೆ.

    ನಂತರ ನಿಮ್ಮ ಮುಂದೆ ಇರುವ ತಟ್ಟೆಯನ್ನು ತೆರೆದು ನೋಡಿ ಎಂದಾಗ ಶುಭ ತಟ್ಟೆಯನ್ನು ಓಪನ್ ಮಾಡಿ ನೋಡುತ್ತಾರೆ. ಈ ವೇಳೆ ತಟ್ಟೆ ತುಂಬಾ ಚಿಕನ್ ತುಂಬಿರುವುದನ್ನು ನೋಡಿ ಶುಭಾ ಅಚ್ಚರಿಗೊಂಡು ಕಿರುಚಾಡುತ್ತಾ ಫುಲ್ ಖುಷ್ ಆಗ್ತಾರೆ.

    ಆದರೆ ಕೊನೆಗೆ ಬಿಗ್‍ಬಾಸ್, ನೀವು ಈ ಚಿಕನ್‍ನನ್ನು ನಿಮ್ಮ ಬಳಿಯೇ ಇಟ್ಟುಕೊಂಡಿರಬೇಕು. ಯಾವುದೇ ಕಾರಣಕ್ಕೂ ತಿನ್ನುವಂತಿಲ್ಲ ಹಾಗೂ ಕೆಳಗೆ ಇಡುವಂತಿಲ್ಲ ಎಂದು ಟ್ವಿಸ್ಟ್ ಕೊಡುತ್ತಾರೆ. ಮುಂದಿನ ಆದೇಶದವರೆಗೂ ಮನೆಯ ಎಲ್ಲಾ ಸ್ಪರ್ಧಿಗಳು ಒಬ್ಬೊಬ್ಬರಾಗಿ ಚಿಕನನ್ನು ವರ್ಗಾಯಿಸಿಕೊಂಡು ತಿನ್ನದಂತೆ ಹಾಗೂ ಕೆಳಗಿಡದಂತೆ ನೋಡಿಕೊಳ್ಳಬೇಕು. ಹೀಗೆ ನೋಡಿಕೊಂಡರೆ ನಾಳೆ ಚಿಕನ್ ಕಳುಹಿಸಿಕೊಡಲಾಗುತ್ತದೆ ಎಂದು ಹೇಳುತ್ತಾರೆ.

    ಒಟ್ಟಾರೆ ಚಿಕನ್ ನೀಡಿದನ್ನು ನೋಡಿ ಸ್ವರ್ಗವೇ ಸಿಕ್ಕಿದಂತೆ ಆನಂದಿಸಿದ ಶುಭಾ ಪೂಂಜಾರಿಗೆ, ಚಿಕನ್ ತಿನ್ನದೇ ನೋಡಿಕೊಳ್ಳುವಂತೆ ಬಿಗ್‍ಬಾಸ್ ಟ್ವಿಸ್ಟ್ ನೀಡುವ ಮೂಲಕ ನಿರಾಸೆ ಮೂಡಿಸಿದ್ದರೆ ಎಂದರೆ ತಪ್ಪಾಗಲಾರದು.

  • ಬಿಗ್‍ಬಾಸ್ ಮನೆಗೆ ಬಂತು ನಾಯಿಮರಿ!

    ಬಿಗ್‍ಬಾಸ್ ಮನೆಗೆ ಬಂತು ನಾಯಿಮರಿ!

    ಇಷ್ಟು ದಿನ ಸ್ಪರ್ಧಿಗಳಷ್ಟೇ ಇದ್ದ ಬಿಗ್‍ಬಾಸ್ ಮನೆಗೆ ನಿನ್ನೆ ನಾಯಿ ಮರಿಯೊಂದು ಎಂಟ್ರಿ ನೀಡಿತ್ತು. ಬಿಗ್‍ಬಾಸ್ ಕಾರ್ಯಕ್ರಮ ಶುರುವಾದಾಗಿನಿಂದಲೂ ವಿವಿಧ  ಟಾಸ್ಕ್‌ಗಳನ್ನು ನೀಡಿದ್ದ ಬಿಗ್‍ಬಾಸ್, ನಿನ್ನೆ ಮನೆಯ ಸದಸ್ಯರಿಗೆ ವಿಭಿನ್ನವಾದ ಟಾಸ್ಕ್ ನೀಡಿದ್ದಾರೆ.

    ಯೆಸ್, ನಿನ್ನೆ ಮನೆಯ ಸದಸ್ಯರಿಗೆ ಬಿಗ್‍ಬಾಸ್ ಕೃತಕ ನಾಯಿಮರಿಯೊಂದನ್ನು ಕಳುಹಿಸಿದ್ದರು. ಆ ನಾಯಿಯನ್ನು ಮನೆಯ ಸದಸ್ಯರು ಪ್ರೀತಿಯಿಂದ ನೋಡಿಕೊಳ್ಳಬೇಕಾಗಿತ್ತು. ಆ ನಾಯಿಮರಿಗೆ ಕೋಪಬಂದಾಗ ಬೋಗಳುತ್ತದೆ. ಬೇಸರವಾದಾಗ ಅಳುತ್ತದೆ. ಹಾಗಾಗಿ ಅದಕ್ಕೆ ಕೋಪ ಹಾಗೂ ಅಳು ಬರದಂತೆ ನೋಡಿಕೊಳ್ಳಬೇಕು ಹಾಗೂ ಸದಸ್ಯರು ಬಜರ್ ಆದ ನಂತರ ಒಬ್ಬೊಬ್ಬರಾಗಿ ನಾಯಿಮರಿಯನ್ನು ವರ್ಗಾಯಿಸಿ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದರು.

    ಅದರಂತೆ ಮೊದಲಿಗೆ ದಿವ್ಯಾ ಸುರೇಶ್ ಎತ್ತಿಕೊಂಡು ಕುಣಿದಾಡುತ್ತಾ ನೋಡಿಕೊಳ್ಳುತ್ತಾರೆ. ಜೊತೆಗೆ ನಾಯಿ ಮರಿಯೊಂದಿಗೆ ಗಾರ್ಡನ್ ಏರಿಯಾದಲ್ಲಿ ಕುಳಿತುಕೊಂಡು ಮಾತನಾಡುತ್ತಾರೆ. ಬಳಿಕ ದಿವ್ಯಾ ಸುರೇಶ್, ಶುಭಾಗೆ ನಾಯಿ ಮರಿಯನ್ನು ವರ್ಗಾಯಿಸುತ್ತಾರೆ. ಆಗ ಶುಭ ನಾಯಿಮರಿಯೊಂದಿಗೆ ಮಾತನಾಡುತ್ತಾ ಆಟ ಆಡಿಸುತ್ತಾರೆ. ನಂತರ ಕಿಚನ್ ಏರಿಯಾಗೆ ಹೋಗಿ ನಾಯಿಮರಿ ವೈಷ್ಣವಿ ಅಕ್ಕ ಚಿಕನ್ ಕೊಡಿ ಎಂದು ನಾಯಿ ತರ ಮುದ್ದು-ಮುದ್ದಾಗಿ ಮಾತನಾಡುತ್ತಾರೆ. ಆಗ ಎಲ್ಲರೂ… ನಾಯಿಮರಿಗೆ ಚಿಕನ್ ಬೇಕಾ ಅಥವಾ ನಿನಗೆ ಬೇಕಾ ಎಂದು ದಿವ್ಯಾ ಉರುಡುಗ, ವೈಷ್ಣವಿ ಶುಭಾರನ್ನು ಕೇಳುತ್ತಾರೆ.

    ನಂತರ ಶುಭಾಯಿಂದ ನಾಯಿಮರಿಯನ್ನು ವೈಷ್ಣವಿ ಸ್ವೀಕರಿಸಿ ಆಟ ಆಡಿಸುತ್ತಿರುತ್ತಾರೆ. ಈ ವೇಳೆ ರಘು ಕೂಡ ನಾಯಿ ಜೊತೆ ಆಟವಾಡುತ್ತಾರೆ. ಆಗ ಮಂಜು ಕೂಡ ಆಟವಾಡಲು ಹೋದಾಗ ನಾಯಿಮರಿ ಬೋಗಳುತ್ತದೆ. ಈ ವೇಳೆ ಮಂಜು, ಥೂ ನಿನ್ನ ಜನ್ಮಕ್ಕೆ ಬೆಂಕಿ ಇಕ್ಕ, ಇಷ್ಟು ಕಷ್ಟಪಟ್ಟು ಆಟ ಆಡಿಸಲು ಬಂದರೆ ಬೋಗಳುತ್ತಿಯಾ? ಎಂದು ಬೈಯ್ಯುತ್ತಾರೆ. ಇದನ್ನು ಕಂಡು ಮನೆಯ ಸದಸ್ಯರೆಲ್ಲ ಎರ್ರಾಬಿರ್ರಿ ನಗ್ತಾರೆ.

  • ಗಂಡ ಹೆಂಡ್ತಿ ಸಮಸ್ಯೆಗೆ ಸಲ್ಯೂಷನ್ ಕೊಟ್ಟ ವೈಷ್ಣವಿ!

    ಗಂಡ ಹೆಂಡ್ತಿ ಸಮಸ್ಯೆಗೆ ಸಲ್ಯೂಷನ್ ಕೊಟ್ಟ ವೈಷ್ಣವಿ!

    ಬಿಗ್‍ಬಾಸ್ ಮನೆಯ ಪ್ರಣಯ ಪಕ್ಷಿಗಳಂತೆ ಇರುವ ಮಂಜು ಹಾಗೂ ದಿವ್ಯಾ ಸುರೇಶ್ ನಿನ್ನೆ ಗಂಡ ಹೆಂಡ್ತಿಯಂತೆ ಸಂಧಾನಕ್ಕಾಗಿ ವೈಷ್ಣವಿ ಬಳಿ ಹೋಗಿದ್ದಾರೆ. ಸದ್ಯ ಇವರಿಬ್ಬರ ಕೋಳಿ ಜಗಳ ಬಿಡಿಸಲು ವೈಷ್ಣವಿ ಮಧ್ಯೆ ಪ್ರವೇಶಿಸಿದ್ದು, ನಿನ್ನೆ ಇಬ್ಬರಿಗೂ ತಿಳಿ ಹೇಳಿ ಸಂಧಾನ ಮಾಡಿದ್ದಾರೆ.

    ಮಂಜು ಇತ್ತೀಚೆಗೆ ದಿವ್ಯಾ ನನ್ನ ಮೇಲೆ ಸುಮ್ನೆ ಸುಮ್ನೆ ಸಿಟ್ಟು ಮಾಡಿಕೊಳ್ಳುತ್ತಾಳೆ ಎಂದು ಆರೋಪಿಸುತ್ತಾರೆ. ಆಗ ವೈಷ್ಣವಿ ಹೆಣ್ಣು ಅಂದ ಮೇಲೆ ಮುಂಗೋಪ ಸಹಜ ಅನುಸರಿಸಿಕೊಂಡು ಹೋಗುವ ಭಾವನೆನೇ ಇಲ್ವಾ ನಿಮಗೆ ಎಂದು ಪ್ರಶ್ನಿಸುತ್ತಾರೆ. ನಾನು ಅನುಸರಿಸಿಕೊಂಡು ಹೋಗುತ್ತೇನೆ ಆದ್ರೆ ಕೋಪಕ್ಕೆ ಕಾರಣವೇನು ಎಂದಾಗ ಅದು ಪ್ರೀತಿ, ಪ್ರೀತಿ ಹೆಚ್ಚಾದರೆ ಒಂದು ಸ್ವಲ್ಪ ಮೂಗಿನ ತುದಿ ಕೋಪವಿದ್ದೆ ಇರುತ್ತದೆ ಎಂದು ವೈಷ್ಣವಿ ಹೇಳುತ್ತಾರೆ. ಬಳಿಕ ಮಂಜು, ಮೂಗಿನ ತುದಿ ಅಲ್ಲ ದಿವ್ಯಾ ಮೂಗಿನ ಪೂರ್ತಿ ಸಿಟ್ಟಿರುತ್ತದೆ ಎನ್ನುತ್ತಾರೆ.

    ಇದಕ್ಕೆ ದಿವ್ಯಾ ಸುರೇಶ್ ನನಗೆ ಮಂಜು ಜೊತೆ ಅನುಸರಿಸಿಕೊಂಡು ಹೋಗಲು ಆಗುತ್ತಿಲ್ಲ. ಸುಮ್ನೆ ಸುಮ್ನೆ ಅಣುಗಿಸುವುದು, ಕೋಪದಲ್ಲಿರುವಾಗ ಬೇಕು ಬೇಕು ಎಂದು ಕೋಪವನ್ನು ಮತ್ತಷ್ಟು ಏರಿಸುವುದು ಎಂದು ಕಂಪ್ಲೇಟ್ ಮಾಡುತ್ತಾರೆ. ಆಗ ಮಂಜು ರೇಗಿಸುವುದು ಎಂದರೆ ಪ್ರೀತಿ ಅಲ್ಲವಾ ಅಂತಾರೆ? ಅದಕ್ಕೆ ವೈಷ್ಣವಿ ಕೋಪ ಎಂದರೂ ಪ್ರೀತಿ ಅಲ್ವಾ.. ಜೀವನ ಅಂದ ಮೇಲೆ ಏಳು ಬೀಳು, ಕಷ್ಟ ಸುಖ, ದುಃಖ ಎಲ್ಲಾ ಇದ್ದೆ ಇರುತ್ತದೆ. ಎಲ್ಲವನ್ನು ಅನುಸರಿಸಿಕೊಂಡು ಹೋಗಬೇಕು ಎಂದು ಹೇಳುತ್ತಾರೆ.

    ನಂತರ ಮಂಜು ಗೇಮ್ಸ್‍ನಲ್ಲಿ ಒಂದು ಬಾರಿ ಮೇಲಿರುತ್ತಾರೆ ಮತ್ತೊಂದು ಬಾರಿ ಕೆಳಗಿರುತ್ತಾರೆ. ಹಾಗಾಗಿ ಅಡ್ಜೆಸ್ಟ್ ಮಾಡಿಕೊಂಡು ಹೋಗ್ಬೇಕು. ಓಕೆ ಇಂದು ಊಟದ ಬಳಿಕ ನಾಳೆ ತನಕ ಟೈಂ ಕೊಟ್ಟರೆ ಪ್ರೀತಿ ಹಂಚಿಕೊಳ್ಳುತ್ತೇವೆ ಎನ್ನುತ್ತಾರೆ. ಇದಕ್ಕೆ ವೈಷ್ಣವಿ ನಾಳೆ ಏನು, ಹೇಗೆ, ಏನಾಗುತ್ತದೆ ಎಂಬುವುದನ್ನು ನನಗೆ ಬಂದು ಹೇಳಿ ಎಂದು ಹಾಸ್ಯ ಮಾಡುತ್ತಾ, ನೀವಿಬ್ಬರು ಒಂದು ರೀತಿಯ ಐಡಿಯಲ್ ಕಪಲ್. ನಿಮ್ಮನ್ನು ನೋಡಿದರೆ ಪ್ರತಿಯೊಬ್ಬರು ಹೀಗೆ ಬದುಕಬೇಕು ಅನಿಸುತ್ತದೆ ಅಂತಹ ಕಪಲ್ ನೀವು. ಸೋ ಬಿಟ್ಟುಕೊಡಬಿಡಿ ಎನ್ನುತ್ತಾರೆ.

    ಹಾಗದರೆ ನಿಮ್ಮ ತನಕ ಈ ವಿಚಾರ ಬಂದಿದ್ದು ತಪ್ಪಾ? ಗಂಡ ಹೆಂಡತಿ ಜಗಳ ಇಲ್ಲಿಯತನಕ ಬರಬಾರದಿತ್ತು ಎಂದು ಹೇಳುತ್ತಿದ್ದಿರಾ? ಎಂದು ಕೇಳುತ್ತಾರೆ. ನಮ್ಮ ಶೋಗೆ ಬಂದು ಹೀಗೆಲ್ಲಾ ಮಾತನಾಡಬೇಡಪ್ಪಾ. ನೀವು ಬಂದ್ರಲ್ಲಾ ಅದಕ್ಕೆ ಗೌರವ ನೀಡುತ್ತೇವೆ ಅಂತಾರೆ ವೈಷ್ಣವಿ.

    ಬಳಿಕ ಮಂಜು ನಮ್ಮ ‘ಪ್ರೀತಿ ಯಾರಿಗೆ ಕಮ್ಮಿ’ ಎಂದು ದಿವ್ಯಾ ನೋಡುತ್ತಾ ಹಾಡು ಆಡುತ್ತಾರೆ. ಆಗ ದಿವ್ಯಾ ನಿನ್ನ ಪ್ರೀತಿ ಎಲ್ಲರಿಗೂ ಜಾಸ್ತಿನೇ ನೀಡುತ್ತಿದ್ದಿಯಾ ಅದಕ್ಕೆ ಸಮಸ್ಯೆ ಆಗಿರುವುದು ಎಂದಾಗ, ವೈಷ್ಣವಿ ಕೂಡ ಹೌದಪ್ಪಾ ಹೆಂಡತಿ ಬಿಟ್ಟು ಎಲ್ಲರಿಗೂ ಪ್ರೀತಿ ಕೊಟ್ಟರೆ ಹೇಗೆ? ದಿವ್ಯಾಗೆ ನಿನ್ನ ಜೀವನದಲ್ಲಿ ಯಾವ ಸ್ಥಾನ ಕೊಟ್ಟಿದ್ಯಾ? ಎಂದು ಪ್ರಶ್ನಿಸುತ್ತಾರೆ. ದಿವ್ಯಾಗೆ ಪ್ರಥಮ ಸ್ಥಾನ ಕೊಟ್ಟಿದ್ದೇನೆ. ದಿವ್ಯಾ ಪೊಸೆಸಿವ್ ನೆಸ್ ನನಗೆ ಇಷ್ಟ. ಆದರೆ ಅತೀ ಆದರೆ ಕಷ್ಟ ಎಂದು ಮಂಜು ಹೇಳುತ್ತಾರೆ.

    ಕೊನೆಯದಾಗಿ ವೈಷ್ಣವಿ ಇಂತಹ ಇಷ್ಟು ಚೆಂದದ ಹೆಂಡ್ತಿ ನಿಮ್ಮ ಜೀವನದಲ್ಲಿ ಹುಡುಕಿದರೂ ಸಿಗುವುದಿಲ್ಲ ಬರೆದಿಟ್ಟುಕೊಳ್ಳಿ ಎಂದು ಹೇಳಿ ಈ ನಾಟಕವನ್ನು ಹಾಸ್ಯಮಯವಾಗಿ ಮುಗಿಸಿದ್ದಾರೆ.