Tag: ಪಬ್ಲಿಕ್ ಟಿವಿ Airport

  • ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ

    ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ

    ವಿಜಯಪುರ: ವಿಜಯಪುರದ ಮದಬಾವಿ-ಬುರನಾಪೂರ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮೊದಲನೇ ಹಂತದ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಪರಿಶೀಲನೆ ನಡೆಸಿದರು.

    ವಿಜಯಪುರ ನಗರದ ವಿಮಾನ ನಿಲ್ದಾಣದ ಮೊದಲನೇ ಹಂತದಲ್ಲಿ 95.00 ಕೋಟಿ ರೂ. ಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಉತ್ತಮ ದರ್ಜೆಯಲ್ಲಿ ಯಾವುದೇ ಲೋಪವಾಗದೇ ವ್ಯವಸ್ಥಿತವಾಗಿ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.

    ವಿಮಾನ ನಿಲ್ದಾಣದ ರನ್ ವೇ ಉದ್ದವು ಒಟ್ಟು 2,650 ಮೀಟರ ಉದ್ದವಿದ್ದು, 280 ಮೀಟರ ಅಗಲವಿರುತ್ತದೆ. ಅದರಲ್ಲಿ 1,800 ಮೀಟರ ಉದ್ದ 280 ಮೀಟರ್ ಅಗಲಕ್ಕೆ ಫಾರಮೇಶನ್ ಕೆಲಸ ಪ್ರಗತಿಯಲ್ಲಿರುವ ಬಗ್ಗೆ ಪರಿಶೀಲನೆ ನಡೆಸಿದರು. ಹಾಗೆಯೇ ಟ್ಯಾಕ್ಸಿ ವೇ ಉದ್ದವು ಒಟ್ಟು 190.50 ಮೀಟರ್ ಉದ್ದವಿದ್ದು, 26.00 ಮೀಟರ್ ಅಗಲವಿದ್ದು ಮೇಶನ್ ಕೆಲಸ ಪೂರ್ಣಗೊಂಡಿರುತ್ತದೆ. 170×104 ಮೀಟರ್ ಅಳತೆಯ ಏಪ್ರಾನ್ ಕೆಲಸವು ಪ್ರಗತಿಯಲ್ಲಿದ್ದು, ಆಯಸೊಲೇಶನ್‍ಬೇ ಉದ್ದವು ಒಟ್ಟು 190.50 ಮೀಟರ್ ಉದ್ದವಿದ್ದು, 26.00 ಮೀಟರ ಅಗಲವಿದ್ದು ಫಾರಮೇಶನ್ ಕೆಲಸ ಪೂರ್ಣಗೊಂಡಿರುವ ಬಗ್ಗೆ ವೀಕ್ಷಣೆ ನಡೆಸಿದರು. ಇದನ್ನು ಓದಿ: ರಾಜ್ಯಕ್ಕೆ ತಕ್ಷಣ 50 ಸಾವಿರ ಆಂಫೋಟೆರಿಸಿನ್ ಬಿ ಪೂರೈಸಿ: ಈಶ್ವರ್ ಖಂಡ್ರೆ

    ಫೆರಿಫೆರಲ್ ರಸ್ತೆಯ ಉದ್ದವು ಒಟ್ಟು 8,598 ಮೀಟರ ಉದ್ದವಿದ್ದು, 3.75 ಮೀಟರ ಅಗಲ ಹಾಗೂ ಎರಡು ಬದಿಗಳಲ್ಲಿ 2 ಮೀಟರ್ ಅಗಲಕ್ಕೆ ಶೋಲ್ಡರ್ ಅಳವಡಿಸಲಾಗಿದೆ. ಅದರಲ್ಲಿ 6,000 ಮೀಟರ್ ಉದ್ದಕ್ಕೆ ಫಾರಮೇಶನ್ ಕೆಲಸ ಪೂರ್ಣಗೊಂಡಿದ್ದು, ಬಾಕಿ ಕೆಲಸ ಪ್ರಗತಿಯಲ್ಲಿರುತ್ತದೆ.

    ಅದರಂತೆ 1,350 ಮೀಟರ್, ಬಾಕ್ಷ ಕಲ್ವರ್ಟ್ ಉದ್ದವು 300 ಮೀಟರ್ (2.50 x 2 50ಮೀ) ಇದ್ದು, ಅದರಲ್ಲಿ 300 ಮೀಟರ್ ಉದ್ದಕ್ಕೆ ಕೆಳಗಡೆಯ ಕಾಮಗಾರಿಯು ಮುಗಿದಿದ್ದು ಎರಡು ಬದಿಗಳ ಗೋಡೆಗಳನ್ನು 1.50 ಮೀಟರ್ ಎತ್ತರಕ್ಕೆ 250 ಮೀಟರ್ ಉದ್ದದ ಕಾಮಗಾರಿಯು ಸರಳು ಸಹಿತ ಮುಗಿದಿದ್ದು ಬಾಕಿ ಕೆಲಸ ಪ್ರಗತಿಯಲ್ಲಿರುತ್ತದೆ. ಇದನ್ನು ಓದಿ: ಸಂಪುಟದಲ್ಲಿ ಮುನಿರತ್ನಗೆ ಅವಕಾಶ ಸಿಗುತ್ತೆ: ಡಾ.ಸಿ.ಎನ್.ಅಶ್ವತ್ಥನಾರಾಯಣ

    ಚತುಷ್ಪಥ ರಸ್ತೆ ಒಟ್ಟು 715 ಮೀಟರ ಉದ್ದವಿದ್ದು ಅದರಲ್ಲಿ 715 ಮೀಟರ ಉದ್ದ 25 ಮೀಟರ್ ಅಗಲಕ್ಕೆ ಫಾರಮೇಶನ್ ಕೆಲಸ ಪೂರ್ಣಗೊಂಡಿದ್ದು, 1,568 ಮೀಟರ್ ಉದ್ದದ ದ್ವೀಪಥದ ಲೂಪ ರಸ್ತೆಯಿದ್ದು, ಅದರಲ್ಲಿ 1,500 ಮೀಟರ್ ಉದ್ದ 15.00 ಮೀಟರ್ ಅಗಲಕ್ಕೆ ಫಾರಮೇಶನ್ ಕೆಲಸ ಮುಗಿದಿರುತ್ತದೆ.

    4,892 ಮೀಟರ ಉದ್ದದ ಒಳ ರಸ್ತೆಗಳಿದ್ದು 2,462 ಮೀಟರ್ ಫಾರಮೇಶನ್ ಕೆಲಸ ಮುಕ್ತಾಯಗೊಂಡಿದ್ದು ಹಾಗೂ ಬಾಕಿ ಕೆಲಸ ಪ್ರಗತಿ ಹಂತದಲ್ಲಿದೆಯೆಂದು ಸಂಬಂಧಿಸಿದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದನ್ನು ಓದಿ: ಆಶಾ ಕಾರ್ಯಕರ್ತೆ ಮೇಲೆ ಅಂಗಡಿ ಮಾಲೀಕನಿಂದ ಹಲ್ಲೆ

    ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಪ್ರಶಾಂತ್ ಗಿಡದಾಣಪ್ಪಗೋಳ, ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಶ್ರೀ ಎಸ್.ಬಿ. ಪಾಟೀಲ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮುಜುಮದಾರ್, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

  • ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಬಳಿ ಸ್ಫೋಟಕ ವಸ್ತುಗಳು ಪತ್ತೆ

    ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಬಳಿ ಸ್ಫೋಟಕ ವಸ್ತುಗಳು ಪತ್ತೆ

    ಶಿವಮೊಗ್ಗ: ಜಿಲ್ಲೆಯ ಸೋಗಾನೆ ಸಮೀಪ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸುಮಾರು 3,200 ಡಿಟೋನೇಟರ್ ಹಾಗೂ 36 ಬಾಕ್ಸ್ ಜಿಲೆಟಿನ್ ಪೇಸ್ಟ್ ಕಂಡು ಬಂದಿದೆ.

    ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗುತಿತ್ತು. ಆದರೆ ಹುಣಸೋಡು ಬ್ಲಾಸ್ಟ್ ನಂತರ ಜಲ್ಲಿ ಕ್ರಷರ್ ಘಟಕಗಳು ಸ್ಥಗಿತಗೊಂಡಿವೆ. ಈ ಕಾರಣದಿಂದಾಗಿ ಕಾಮಗಾರಿಗೆ ಅಗತ್ಯವಾಗಿ ಬೇಕಾಗಿದ್ದ ಜಲ್ಲಿ ಕೊರತೆ ಉಂಟಾಗಿತ್ತು. ಜೊತೆಗೆ ಜಲ್ಲಿ ಕೊರತೆಯಿಂದಾಗಿ ಕಾಮಗಾರಿ ಸ್ಥಗಿತಗೊಳ್ಳಬಹುದು ಎಂಬ ಆತಂಕ ಕೂಡ ಎದುರಾಗಿತ್ತು. ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಜಲ್ಲಿ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದರು. ಜಲ್ಲಿ ಸಮಸ್ಯೆಯಿಂದ ಕಾಮಗಾರಿ ನಿಲ್ಲಬಾರದು ಎಂಬ ಕಾರಣದಿಂದಾಗಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ 4 ಎಕರೆ ಪ್ರದೇಶದಲ್ಲಿ ಜಲ್ಲಿ ಕ್ವಾರಿ ನಡೆಸಲು ಮುಖ್ಯಮಂತ್ರಿ ಯಡಿಯೂರಪ್ಪ ಅನುಮತಿ ನೀಡಿದ್ದರು.

    ಹೀಗಾಗಿಯೇ ವಿಮಾನ ನಿಲ್ದಾಣ ಕಾಮಗಾರಿಗೆ ಬೇಕಾದ ಜಲ್ಲಿ ಮತ್ತಿತ್ತರ ಸಾಮಾಗ್ರಿಯ ಬಳಕೆಗೆ ಸ್ಫೋಟಿಸುವ ಸಲುವಾಗಿ ಸ್ಫೋಟಕಗಳನ್ನು ಅಧಿಕೃತವಾಗಿಯೇ ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯೋರ್ವ ಪೂರೈಕೆ ಮಾಡಿದ್ದರು. 200 ಕಿ.ಮೀ. ದೂರಕ್ಕಿಂತ ಹೆಚ್ಚು ದೂರದ ಸ್ಥಳಕ್ಕೆ ಸ್ಫೋಟಕ ಸಾಮಾಗ್ರಿ ಸಾಗಾಟ ಮಾಡಬಾರದು ಎಂಬ ನಿಯಮ ಇದೆ. ಆದರೆ ಸ್ಫೋಟಕ ಸರಬರಾಜು ಸಂಬಂಧ ಪರವಾನಗಿ ಇದ್ದರೂ ಹೆಚ್ಚು ದೂರ ಸಾಗಾಟ ಮಾಡಿದ ಪರಿಣಾಮ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಹುಣಸೋಡು ಘಟನೆ ಬಳಿಕ ಜಿಲ್ಲಾಡಳಿತ ಸ್ಫೋಟಕ ವಸ್ತುವನ್ನು ಸ್ಫೋಟಿಸಲು ಅನುಮತಿ ನಿರಾಕರಿಸಿತ್ತು. ಜಿಲ್ಲಾಡಳಿತದಿಂದ ಅನುಮತಿ ದೊರೆಯದ ಕಾರಣ ಸ್ಫೋಟಕ ಸರಬರಾಜುದಾರ ಸ್ಫೋಟಕವನ್ನು ಸ್ಥಳದಲ್ಲೇ ಬಿಟ್ಟು ತೆರಳಿದ್ದಾನೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತುಂಗಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಬೆಂಗಳೂರಿನ ಬಿಡಿಡಿಎಸ್ ಹಾಗೂ ಎಎಸ್‍ಸಿ ತಂಡ ಜಂಟಿ ಪರಿಶೀಲನೆ ನಡೆಸಿ, ನ್ಯಾಯಾಲಯದ ಅನುಮತಿ ಪಡೆದು ಸ್ಫೋಟಕ ನಿಷ್ಕ್ರಿಯಗೊಳಿಸಿದ್ದಾರೆ.