Tag: ಪಥ ಸಂಚಲನ

  • Kolara | ಕೋರ್ಟ್ ಅನುಮತಿ ಬಳಿಕ ಆರ್‌ಎಸ್‌ಎಸ್ ಬೃಹತ್ ಪಥ ಸಂಚಲನ

    Kolara | ಕೋರ್ಟ್ ಅನುಮತಿ ಬಳಿಕ ಆರ್‌ಎಸ್‌ಎಸ್ ಬೃಹತ್ ಪಥ ಸಂಚಲನ

    ಕೋಲಾರ: ಕೋರ್ಟ್ ಅನುಮತಿ ಬಳಿಕ ಕೋಲಾರದಲ್ಲಿ ಕೊನೆಗೂ ಆರ್‌ಎಸ್‌ಎಸ್ ಪಥ ಸಂಚನಲ (RSS March Past) ನಡೆಸಿದೆ.

    ಆರ್‌ಎಸ್‌ಎಸ್ ಶತಮಾನೋತ್ಸವ ಹಿನ್ನೆಲೆಯಲ್ಲಿ ವಕ್ಕಲೇರಿಯಿಂದ ಕೋಲಾರ ನಗರದವರೆಗೆ (Kolara City) 16 ಕಿಮೀ ಪಥ ಸಂಚಲನ ನಡೆಯಿತು. ಕೋಲಾರದ ಕ್ಲಾಕ್ ಟವರ್, ಟ್ರಯಾಂಗಲ್ ಸರ್ಕಲ್, ಪಲ್ಲವಿ ಸರ್ಕಲ್‌ನಲ್ಲಿ ಸರ ಸಂಘಚಾಲಕರು ಪಥಸಂಚಲನ ನಡೆಸಿದರು. ಇದನ್ನೂ ಓದಿ: ಕಾಂತರಾಜು ಸಮಿತಿ ವರದಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ, ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆ: ಸಿಎಂ

    ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಆರ್‌ಎಸ್‌ಎಸ್ ಕಾರ್ಯಕರ್ತರು ಬಂದಿದ್ದರು. ಪಥ ಸಂಚಲನ ಹಿನ್ನೆಲೆ ಮಾರ್ಗದುದ್ದಕ್ಕೂ ಸುಮಾರು 1,000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇದಾಜ್ಷೆ ಜಾರಿಗೊಳಿಸಲಾಗಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಣೆ – GRAP-III ನಿರ್ಭಂಧ ತೆರವು

    ಅತ್ತ, ಬೆಳಗಾವಿಯಲ್ಲಿ ಸಂಭಾಜಿ ಮಹಾರಾಜರ ಮೂರ್ತಿ ಲೋಕಾರ್ಪಣೆ ವಿವಾದವಾಗಿದೆ. ಸರ್ಕಾರದಿಂದ ನಿರ್ಮಾಣವಾಗಿರುವ ಮೂರ್ತಿಯನ್ನು ಉಸ್ತುವಾರಿ ಸತೀಶ್ ಜಾರಕಿಹೊಳಿ ಉದ್ಘಾಟನೆಗೆ ಮುಂದಾಗಿದ್ದರು. ಆದರೆ, ಈ ಕ್ಷೇತ್ರ ಬಿಜೆಪಿ ಶಾಸಕ ಅಭಯ್ ಪಾಟೀಲ್, ಬಿಜೆಪಿ ಮೇಯರ್ ಸವಿತಾ ಕಾಂಬಳೆ ನಾವೇ ಲೋಕಾರ್ಪಣೆ ಮಾಡ್ತೇವೆ ಅಂತ ಪಟ್ಟು ಹಿಡಿದು, ಅಧಿಕಾರಿಗಳು ಕಟ್ಟಿದ್ದ ಪರದೆಯನ್ನು ಒತ್ತಾಯಪೂರ್ವಕವಾಗಿ ತೆಗೆದಿದ್ದಾರೆ. ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರನ್ನ ಹುಡುಕಿ ಕೊಡಿ – ಬಿಜೆಪಿ ರಾಜ್ಯಾಧ್ಯಕ್ಷೆ ಮಂಜುಳಾ ಲೇವಡಿ

  • ವಿಡಿಯೋ:  ಆರ್‌ಎಸ್‌ಎಸ್‌ನಂತೆ ದಂಡ ಹಿಡಿದು ಕಾಂಗ್ರೆಸ್ಸಿಗರಿಗೆ ಖಾದರ್ ತರಬೇತಿ

    ವಿಡಿಯೋ: ಆರ್‌ಎಸ್‌ಎಸ್‌ನಂತೆ ದಂಡ ಹಿಡಿದು ಕಾಂಗ್ರೆಸ್ಸಿಗರಿಗೆ ಖಾದರ್ ತರಬೇತಿ

    ಮಂಗಳೂರು: ಆರ್‌ಎಸ್‌ಎಸ್‌ ಮಾದರಿಯಲ್ಲೇ ಕಾಂಗ್ರೆಸ್ಸಿನಿಂದ ಪಥಸಂಚಲನ ತರಬೇತಿ ಮಂಗಳೂರಿನಲ್ಲಿ ನಡೆಯುತ್ತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಚರ್ಚೆಯಾಗುತ್ತಿದೆ.

    ಹೌದು. ಕಾಂಗ್ರೆಸ್ ಕಾರ್ಯಕರ್ತರು ಪಥಸಂಚಲನ ತರಬೇತಿಯನ್ನು ಪಡೆಯುತ್ತಿದ್ದಾರೆ. ಮಾಜಿ ಸಚಿವ ಯು.ಟಿ ಖಾದರ್ ಅವರು ತಮ್ಮ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದಾರೆ. ಈ ಪಥ ಸಂಚಲನ ತರಬೇತಿಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗಿಯಾಗಿದ್ದಾರೆ.

    ತರಬೇತಿ ಯಾಕೆ?
    ಅಕ್ಟೋಬರ್ 2, ಗಾಂಧಿ ಜಯಂತಿ ಕಾರ್ಯಕ್ರಮಕ್ಕಾಗಿ ಕಾಂಗ್ರೆಸ್ ಪಾಳಯದಲ್ಲಿ ಸಿದ್ಧತೆ ಭರದಿಂದ ನಡೆಯುತ್ತಿದ್ದು, ದಕ್ಷಿಣ ಕನ್ನಡದಲ್ಲಿಯೂ ಕಾಂಗ್ರೆಸ್ ಸೇವಾದಳದಿಂದ ಪಥಸಂಚಲನವಿದೆ. ಈ ಕಾರ್ಯಕ್ರಮದ ಪೂರ್ವ ಸಿದ್ಧತೆ ನಡೆಯುತ್ತಿದ್ದು, ಕೋಣಾಜೆ ಪಿಎ ಕಾಲೇಜು ಮೈದಾನದಲ್ಲಿ ಕಾರ್ಯಕರ್ತರು ತರಬೇತಿ ಮಾಡುತ್ತಿದ್ದಾರೆ. ವಿಶೇಷವೆಂದರೆ ಆರ್‌ಎಸ್‌ಎಸ್‌ ಸ್ವಯಂಸೇವಕರು ಬಳಸುತ್ತಿರುವ ದಂಡದಂತೆ ಕಾಂಗ್ರೆಸ್ ಸೇವಾದಳದ ಸ್ವಯಂಸೇವಕರು ದಂಡವನ್ನು ಹಿಡಿದು ಪಥಸಂಚಲನ ನಡೆಸುತ್ತಿದ್ದಾರೆ.