Tag: ಪತ್ರಿಕಾಗೋಷ್ಠಿ

  • ಸುಳಿವು ಕೊಟ್ಟು ಆ ಪದ ನಾನು ಹೇಳಲ್ಲ – ನಾಚಿ ನೀರಾದ ದ್ರಾವಿಡ್, ಬಿದ್ದುಬಿದ್ದು ನಕ್ಕ ಪತ್ರಕರ್ತರು

    ಸುಳಿವು ಕೊಟ್ಟು ಆ ಪದ ನಾನು ಹೇಳಲ್ಲ – ನಾಚಿ ನೀರಾದ ದ್ರಾವಿಡ್, ಬಿದ್ದುಬಿದ್ದು ನಕ್ಕ ಪತ್ರಕರ್ತರು

    ದುಬೈ: ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಶಿಸ್ತಿನ ಸಿಪಾಯಿ, ಅವರು ಆಟಗಾರರಾಗಿದ್ದಾಗ ಇದ್ದಂತಹ ಬದ್ಧತೆ, ಶಿಸ್ತು ಪ್ರಸ್ತುತ ಕೋಚ್ ಆಗಿ ಕಾರ್ಯನಿರ್ವಹಿಸುವಾಗಲು ಮುಂದುವರಿಸುತ್ತಿದ್ದಾರೆ. ಜೊತೆಗೆ ಆಟಗಾರರಿಗೂ ಈ ಪಾಠ ಮುಂದುವರಿಸಿದ್ದಾರೆ. ಈ ಎಲ್ಲದರ ನಡುವೆ ದ್ರಾವಿಡ್ ಇಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಸ್ಯ ಚಟಾಕಿಯೊಂದನ್ನು ಹಾರಿಸಿ ಆ ಒಂದು ಪದವನ್ನು ನಾನು ಬಳಕೆ ಮಾಡುವುದಿಲ್ಲವೆಂದು ಪತ್ರಕರ್ತರಿಗೆ ಕುತೂಹಲ ಮೂಡಿಸಿದ್ದಾರೆ.

    ಹೌದು ಸದಾ ಗಂಭೀರ ವ್ಯಕ್ತಿತ್ವದ ದ್ರಾವಿಡ್ ಜೊತೆ ಭಾರತ ಹಾಗೂ ಪಾಕಿಸ್ತಾನ ತಂಡಗಳ ಬೌಲಿಂಗ್ ಕುರಿತಾಗಿ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ದ್ರಾವಿಡ್ ಪಾಕಿಸ್ತಾನ ತಂಡದ ಬೌಲಿಂಗ್ ಉತ್ತಮವಾಗಿದೆ. ಭಾರತ ತಂಡ ಕೂಡ ಕಮ್ಮಿ ಏನಿಲ್ಲ. ಎರಡು ತಂಡಗಳು ಕೂಡ ಬಲಿಷ್ಠ ಬೌಲಿಂಗ್ ಶಕ್ತಿಯನ್ನು ಹೊಂದಿದೆ. ಇದನ್ನು ಗಮನಿಸಿದಾಗ ನನಗೆ ಒಂದು ಪದ ನೆನಪಿಗೆ ಬರುತ್ತದೆ ಎಂದು ಆ ಪದ ಬಳಕೆ ಮಾಡಲಾಗದೆ ನಗಲಾರಂಭಿಸಿದರು. ಇದನ್ನೂ ಓದಿ: ಜಡೇಜಾ ಅನುಪಸ್ಥಿತಿಯಲ್ಲಿ ಪಂತ್, ಹೂಡಾ, ಅಕ್ಷರ್ ಪಟೇಲ್ ನಡುವೆ ಪ್ಲೇಯಿಂಗ್ 11 ಪೈಪೋಟಿ

    ಇದನ್ನು ಗಮನಿಸಿದ ಪತ್ರಕರ್ತರು ಯಾವ ಪದ ಎಂದು ಮರು ಪ್ರಶ್ನೆ ಹಾಕಿದರು. ಈ ವೇಳೆ ದ್ರಾವಿಡ್ ಆ ಪದ ನನ್ನ ಬಾಯಲ್ಲಿ ಬರುತ್ತಿದೆ. ಆದರೆ ಇಲ್ಲಿ ಅದನ್ನು ಉಚ್ಚರಿಸಲು ನಾನು ಬಯಸುತ್ತಿಲ್ಲವೆಂದರು. ಆದರೂ ಬಿಡದ ಪರ್ತಕರ್ತರು ಏನದು ಎಂದರು ಈ ವೇಳೆ ಆ ಪದ ಎಸ್ (ಸೆಕ್ಸಿ) ಪದದಿಂದ ಆರಂಭವಾಗುತ್ತದೆ ಎಂದರು. ಇದನ್ನು ಅರ್ಥಮಾಡಿಕೊಂಡ ಪರ್ತಕರ್ತರು ಒಂದು ಕ್ಷಣ ನಗಲಾರಂಭಿಸಿದರು. ಬಳಿಕ ಸೆಕ್ಸಿ ಪದ ಬಳಕೆ ಮಾಡದೇ ಹೇಳಬೇಕೆಂದಿದ್ದ ಮಾತನ್ನು ದ್ರಾವಿಡ್ ಮುಂದುವರಿಸಿದರು. ಇದನ್ನೂ ಓದಿ: ಮುಂದಿನ ಐಪಿಎಲ್‌ಗೂ ಧೋನಿ ಚೆನ್ನೈ ತಂಡ ನಾಯಕ

    Live Tv
    [brid partner=56869869 player=32851 video=960834 autoplay=true]

  • ಸೆಸ್ ಸಂಸ್ಥೆಯಲ್ಲಿರುವವರೆಲ್ಲ RSSನವರು: ಸಿದ್ದರಾಮಯ್ಯ

    ಸೆಸ್ ಸಂಸ್ಥೆಯಲ್ಲಿರುವವರೆಲ್ಲ RSSನವರು: ಸಿದ್ದರಾಮಯ್ಯ

    – ಬಿಜೆಪಿ ಸ್ವಜನ ಪಕ್ಷಪಾತ ಮಾಡಿದೆ

    ಬೆಂಗಳೂರು: ವಿಧಾನಸಭೆಯಲ್ಲಿ ನಿನ್ನೆ ಸರ್ಕಾರ ತಾರತುರಿಯಲ್ಲಿ ಚಾಣಕ್ಯ ವಿ.ವಿ ಬಿಲ್ ಪಾಸ್ ಮಾಡಿಕೊಂಡಿದೆ. ಸೆಸ್ ಎಂಬ ಸಂಸ್ಥೆ ಈ ಯೂನಿವರ್ಸಿಟಿ ನಿರ್ಮಾಣಕ್ಕೆ ಮುಂದಾಗಿದೆ. ಈ ಸಂಸ್ಥೆಯಲ್ಲಿ ಇರುವವರೆಲ್ಲರೂ ಆರ್‍ಎಸ್‍ಎಸ್‍ನವರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಆರ್‌ಎಸ್‌ಎಸ್‌(RSS) ವಿರುದ್ಧ ಗುಡುಗಿದ್ದಾರೆ.

    ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಕಚೇರಿಯಲ್ಲಿ ಈ ಬಗ್ಗೆ ಪತ್ರಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಚಾಣಕ್ಯ ಯೂನಿವರ್ಸಿಟಿಗೆ ಭೂಮಿ ನೀಡಿರುವುದು ಒಂದು ದೊಡ್ಡ ಹಗರಣ. ನಿಬಂಧನೆಗಳನ್ನು ಗಾಳಿಗೆ ತೂರಿ ಭೂಮಿ ನೀಡಲಾಗಿದೆ. ನಾನು ಚಾಣಕ್ಯ ಅವರ ಬಗ್ಗೆ ಹೆಚ್ಚು ಮಾತನಾಡಲ್ಲ. ಅವರು ಏನು ಅಂತ ನಿಮಗೆ ಗೊತ್ತು. ಚಾಣಕ್ಯ ಮನುವಾದಿ ಕುಟುಂಬಕ್ಕೆ ಸೇರಿದವರು. ಈ ಯೂನಿವರ್ಸಿಟಿ ಮನುವಾದಿ ಯುನಿವರ್ಸಿಟಿ. ಚತುರ್ವರ್ಣ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲು ಮುಂದಾಗಿದ್ದಾರೆ. ರೈತರಿಂದ ಜಮೀನು ಕಿತ್ತುಕೊಂಡು ಮನುವಾದಿಗಳಿಗೆ ಕಡಿಮೆ ಬೆಲೆಗೆ ಕೊಡುವ ಮೂಲಕ ಸರ್ಕಾರ ಲೂಟಿ ಮಾಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ:  ಮಸೀದಿಗಳಿಗಾಗಿ ಕೆಡವಿದ ದೇವಸ್ಥಾನಗಳ ಮರು ನಿರ್ಮಾಣ: ಸಂಗೀತ್ ಸೋಮ್

    ಈ ವಿಧೇಯಕ ಮಂಡನೆಗೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ಮಧ್ಯೆ ಸರ್ಕಾರ ಬಿಲ್ ಪಾಸ್ ಮಾಡಿಕೊಂಡಿತ್ತು. ಸರ್ಕಾರದ ಬಿಲ್ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿತ್ತು. ಚಾಣಕ್ಯ ವಿವಿ ಬಿಲ್ ಧ್ವನಿ ಮತದಿಂದ ಪಾಸ್ ಮಾಡಿಕೊಂಡಿದ್ದಾರೆ. ಚರ್ಚೆಗೆ ಅವಕಾಶ ನೀಡದೇ ಪಾಸ್ ಮಾಡಿಕೊಂಡಿದ್ದಾರೆ. ಚಾಣಕ್ಯ ವಿವಿ ಮಾಡುತ್ತಿರುವುದು ಸೆಸ್ ಎಂಬ ಸಂಸ್ಥೆ (ಸೆಂಟರ್ ಫಾರ್ ಎಜುಕೇಶನ್ ಆ್ಯಂಡ್ ಸೋಶಿಯಲ್ ಸ್ಟಡಿ ಸಂಸ್ಥೆ) ಈ ಸಂಸ್ಥೆಯಲ್ಲಿ ಇರುವವರು ಎಲ್ಲರೂ ಆರ್‌ಎಸ್‌ಎಸ್‌ನವರು. ಶ್ರೀಧರ್, ದೀವಾಕರ್ ಶಿವಕುಮಾರ್, ರಾಜೇಂದ್ರ ಸೇರಿದಂತೆ ಅನೇಕರಿದ್ದಾರೆ. ಯಾರು ಕೂಡ ಎಜುಕೇಶನ್ ಸಂಸ್ಥೆ ನಡೆಸುತ್ತಿಲ್ಲ. ಈ ಸೆಸ್ ಸಂಸ್ಥೆಗೆ ಬಿಜೆಪಿ ಸರ್ಕಾರ 2021ರ ಏಪ್ರಿಲ್ 26ರಂದು ಕ್ಯಾಬಿನೆಟ್ ಮೀಟಿಂಗ್‍ನಲ್ಲಿ ಕೆಐಡಿಬಿಗೆ ಸೇರಿದ ಜಮೀನು, ಏರೋಸ್ಪೇಸ್ ಮಾಡೋಕೆ ಮಿಸಲಿಟ್ಟ ಜಮೀನು ನೀಡಲು ನಿರ್ಧರಿಸಿದೆ. ದೇವನಹಳ್ಳಿ ಹತ್ರ ಜಮೀನು ಇದೆ. 116 ಎಕರೆ ಜಮೀನನ್ನು ಸರ್ಕಾರ ಸೆಸ್ ಸಂಸ್ಥೆಗೆ ಕೊಟ್ಟಿದೆ ಎಂದು ಆರೋಪಿಸಿದರು. ಇದನ್ನೂ ಓದಿ: 7.5 ಲಕ್ಷ ಕಿ.ಮೀ. ಓಡಿರುವ ಬಸ್‍ಗಳನ್ನು ಬದಲಿಸುತ್ತೇವೆ: ಶ್ರೀರಾಮುಲು

    ರೈತರಿಗೆ ಒಂದು ಕೋಟಿ ಐವತ್ತುಲಕ್ಷ ರೂಪಾಯಿ ಒಂದು ಎಕರೆಗೆ ಪರಿಹಾರ ಕೊಟ್ಟಿದ್ದಾರೆ. ಸೆಸ್ ಸಂಸ್ಥೆಗೆ ಕೇವಲ ಐವತ್ತು ಕೋಟಿಗೆ ಕೊಟ್ಟಿದ್ದಾರೆ. ಸರ್ಕಾರ ರೈತರಿಗೆ 175 ಕೋಟಿ ಪರಿಹಾರ ಕೊಟ್ಟಿದೆ. ಖರೀದಿ ಬಳಿಕ ಭೂಮಿ ಬೆಲೆ ಜಾಸ್ತಿ ಆಗುತ್ತಿದ್ದು, ಇದೀಗ ಈ ಭೂಮಿ ಬೆಲೆ 300 ರಿಂದ 400 ಕೋಟಿ ರೂಪಾಯಿಗೆ ಬೆಲೆ ಬಾಳುತ್ತದೆ. ಆದರೆ ಸರ್ಕಾರ ಆರ್‌ಎಸ್‌ಎಸ್‌ಗೆ ಸೇರಿದವರಿಗೆ ಬಳುವಳಿಯಾಗಿ ಕೊಟ್ಟಿದೆ. ಇದೊಂದು ದೊಡ್ಡ ಹಗರಣ ಅವರಿಗೆ ಎಜುಕೇಷನ್ ಸಂಸ್ಥೆಗಳು ಇದ್ದು, ಈಗ ನಿಯಮಾವಳಿ ಪ್ರಕಾರ ಮಾಡಿದ್ದರೆ, ನಮ್ಮ ತಕರಾರು ಇಲ್ಲ. ಆದರೆ ನಿಬಂಧನೆಗಳನ್ನು ಗಾಳಿಗೆ ತೂರಿ ಭೂಮಿ ಕೊಟ್ಟಿದ್ದಾರೆ. ಜಮೀನು ಈಗಿನ ಬೆಲೆ ನೋಡಿ ಜಮೀನು ಕೊಡಬೇಕಿತ್ತು. ಕೊರೊನಾ ಸಂದರ್ಭದಲ್ಲಿ ಆತುರವಾಗಿ ಕೊಟ್ಟಿದ್ದಾರೆ. ಇದು ಮನುವಾದಿಗಳ ವಿಶ್ವ ವಿದ್ಯಾಲಯ ಆಗುತ್ತದೆ ಹಾಗಾಗಿ ಯಾವುದೇ ಚರ್ಚೆಯಿಲ್ಲದೆ ಭೂಮಿ ಕೊಟ್ಟಿದ್ದಾರೆ. ಸ್ಪೀಕರ್ ಬಿಲ್ ಪಾಸ್ ಮಾಡಿದ್ದಾರೆ. ಇನ್ನೂ ಹಲವು ಬಿಲ್ ಇತ್ತು ಅದನ್ನು ಬಿಟ್ಟು ಈ ಬಿಲ್ ಪಾಸ್ ಮಾಡಿದ್ದಾರೆ. ಸ್ಪೀಕರ್ ಯಾವುದೇ ರಾಜಕೀಯ ಚಟುವಟಿಕೆಗೆ ಸೇರಿದವರಲ್ಲ. ಒಂದು ಪಕ್ಷದ ಪರವಾಗಿ ನಡೆದು ಕೊಳ್ಳಬಾರದು ಎಂದು ಸ್ಪೀಕರ್ ವಿರುದ್ಧ ವಾಗ್ದಾಳಿ ನಡೆಸಿದರು.

    ಭೂಮಿ ಕೊಟ್ಟು ಸರ್ಕಾರ ಲೂಟಿ ಮಾಡಿದೆ. ಬಿಜೆಪಿ ಸ್ವಜನ ಪಕ್ಷಪಾತ ಮಾಡಿದೆ. ಕೂಡಲೇ ಸರ್ಕಾರ ಬಿಲ್ ರದ್ದು ಮಾಡಬೇಕು. ಕೊರೊನಾ ಎಂದು ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಈ ಸಂದರ್ಭದಲ್ಲಿ ಬಿಲ್ ಪಾಸ್ ಮಾಡಿ ಜನರಿಗೆ ಅನ್ಯಾಯ ಮಾಡಿದ್ದಾರೆ. ಸರ್ಕಾರದ ಈ ಕ್ರಮವನ್ನು ಕಾಂಗ್ರೆಸ್ ತೀರ್ವವಾಗಿ ವಿರೋಧಿಸುತ್ತದೆ. ಚರ್ಚೆಗೆ ಅವಕಾಶ ಕೊಡದೆ ಪಾಸ್ ಮಾಡಿದ್ದಾರೆ. ಸ್ಪೀಕರ್ ಗೆ ನಾನು ಪರಿಪರಿಯಾಗಿ ಬೇಡಿಕೊಂಡೆ ಚರ್ಚೆಗೆ ಅವಕಾಶವನ್ನು ಕೊಡಿ ಎಂದು ಇದೇನು ಜನರಿಗೆ ಸದ್ಯಕ್ಕೆ ಅವಶ್ಯಕತೆ ಇತ್ತಾ? ನಾವು ಲೀಗಲ್ ಆಗಿ ಕೂಡ ಫೈಟ್ ಮಾಡುತ್ತೇವೆ. ಪಕ್ಷದ ವತಿಯಿಂತ ಹೋರಾಟವನ್ನೂ ನಡೆಸುತ್ತೇವೆ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹೆಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್, ರಮೇಶ್ ಕುಮಾರ್, ಕೆ.ಜೆ.ಜಾರ್ಜ್ ಉಪಸ್ಥಿತರಿದ್ದರು.ಇದನ್ನೂ ಓದಿ: ಕೋರ್ಟ್ ಆದೇಶ ನೀಡಿದ್ರೂ ಕೆಲಸಕ್ಕೆ ನೇಮಿಸಿಲ್ಲ – ವಾಟರ್ ಮ್ಯಾನ್ ಆತ್ಮಹತ್ಯೆಗೆ ಯತ್ನ 

  • ಸರ್ಕಾರಿ ಅಧಿಕಾರಿಗಳ ಪತ್ರಿಕಾಗೋಷ್ಠಿ, ಪ್ರಕಟಣೆಗಳಿಗೆ ಬ್ರೇಕ್‌ ಹಾಕಿದ ರಾಜ್ಯ ಸರ್ಕಾರ

    ಸರ್ಕಾರಿ ಅಧಿಕಾರಿಗಳ ಪತ್ರಿಕಾಗೋಷ್ಠಿ, ಪ್ರಕಟಣೆಗಳಿಗೆ ಬ್ರೇಕ್‌ ಹಾಕಿದ ರಾಜ್ಯ ಸರ್ಕಾರ

    – ಮೈಸೂರು ಜಿಲ್ಲೆಯ ಈ ಹಿಂದಿನ ಡಿಸಿ-ಶಾಸಕರ ಕಿತ್ತಾಟ ಪ್ರಕರಣದ ಹಿನ್ನೆಲೆಯಲ್ಲಿ ಸುತ್ತೋಲೆ ಪ್ರಕಟ
    – ವೈಯಕ್ತಿಕ ಸೋಷಿಯಲ್‌ ಮೀಡಿಯಾ handle ಬಳಸುವ ಅಧಿಕಾರಿಗಳಿಗೂ ಎಚ್ಚರಿಕೆ

    ಬೆಂಗಳೂರು: ಸರ್ಕಾರಿ ಅಧಿಕಾರಿಗಳ ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಖಡಕ್‌ ಸುತ್ತೋಲೆ ಹೊರಡಿಸಿದೆ. ಇನ್ಮುಂದೆ ರಾಜ್ಯದ ಅಧಿಕಾರಿಯು ನಂಬಿಕಾರ್ಹ (Bonafide) ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಹೊರತುಪಡಿಸಿ, ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದಕ್ಕೆ ಕಡಿವಾಣ ಹಾಕಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಹತ್ವದ ಸುತ್ತೋಲೆ ಹೊರಡಿಸಿ ಖಡಕ್‌ ಆದೇಶ ನೀಡಿದ್ದಾರೆ.

    ಸುತ್ತೋಲೆ ಯಾಕೆ?: ಶಾಸಕ ಸಾ.ರಾ.ಮಹೇಶ್ ವರ್ಸಸ್ ಐಎಎಸ್ ರೋಹಿಣಿ ಸಿಂಧೂರಿ ಬಹಿರಂಗ ಕಿತ್ತಾಟ ವಿಚಾರ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು. ಇದಲ್ಲದೇ ಈಗ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಸಾ.ರಾ.ಮಹೇಶ್‌ ಅವರು ರೋಹಿಣಿ ಸಿಂಧೂರಿ ಹೆಸರು ಹೇಳದೇ ಮೈಸೂರಿ‌ನ ಹಿಂದಿನ ಡಿಸಿ ಎಂದು ವಿಷಯ ಪ್ರಸ್ತಾಪಿಸಿದ್ದರು.

    ಆ ಬಗ್ಗೆ ಕಟ್ಟುನಿಟ್ಟಾಗಿ ಸೂಚನೆ ಕೊಡಲು ಮುಖ್ಯಕಾರ್ಯದರ್ಶಿಗೆ ಸೂಚಿಸುವುದಾಗಿ ಕಂದಾಯ ಸಚಿವ ಅಶೋಕ್ ಹೇಳಿದ್ದರು. ಈ ಬೆನ್ನಲ್ಲೇ ಮುಖ್ಯಕಾರ್ಯದರ್ಶಿಯಿಂದ ಮಹತ್ವದ ಸುತ್ತೋಲೆ ಹೊರಡಿಸಿ ಖಡಕ್ ಆದೇಶ ಹೊರಡಿಸಿದ್ದಾರೆ.

    ಸುತ್ತೋಲೆಯಲ್ಲೇನಿದೆ?: ಸರ್ಕಾರಿ ಅಧಿಕಾರಿಗಳು ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇಂತಹ ಪ್ರಸಂಗಗಳು ಸರ್ಕಾರದ ಆಡಳಿತ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತವೆ ಹಾಗೂ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡುವಂತದ್ದಾಗಿರುವುದರಿಂದ ಅಧಿಕಾರಿಗಳು ಇಂತಹ ನಡೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಆದುದರಿಂದ ಅಧಿಕಾರಿಯು ನಂಬಿಕಾರ್ಹ (Bonafide) ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದನ್ನು ಹೊರತುಪಡಿಸಿ, ಪತ್ರಿಕಾಗೋಷ್ಠಿ, ಪತ್ರಿಕಾ ಪ್ರಕಟಣೆಗಳ ಮೂಲಕ ಅನಪೇಕ್ಷಿತ ಹೇಳಿಕೆಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

    ನಿಯಮಗಳನ್ನು ಗಮನಕ್ಕೆ ತಂದ ಮುಖ್ಯಕಾರ್ಯದರ್ಶಿ: ಅಖಿಲ ಭಾರತ ಸೇವೆಗಳು (ನಡತೆ) ನಿಯಮಗಳು, 1968ರ ನಿಯಮ 17ರಲ್ಲಿನ ಅವಕಾಶ ಹಾಗೂ ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ನ್ನು‌ ಈ ಸುತ್ತೋಲೆಯಲ್ಲಿ ಮುಖ್ಯಕಾರ್ಯದರ್ಶಿಗಳು ಉಲ್ಲೇಖಿಸಿದ್ದಾರೆ.

    ಏನು ಮಾಡಬಾರದು?: ಕರ್ನಾಟಕ ಸರ್ಕಾರದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಕಾರ್ಯನೀತಿ ಅಥವಾ ಕ್ರಮವನ್ನು ಟೀಕಿಸುವುದು, ಯಾರೇ ಸರ್ಕಾರಿ ನೌಕರನು ಆಕಾಶವಾಣಿ ಪ್ರಸಾರದಲ್ಲಾಗಲಿ ಅಥವಾ ದೂರದರ್ಶನದ ಕಾರ್ಯಕ್ರಮದಲಾಗಲೀ ಅಥವಾ ಯಾವುದೇ ಸಾರ್ವಜನಿಕ ಮಾಧ್ಯಮದಲ್ಲಿ ವಾಸ್ತವ ಹೇಳಿಕ ಅಥವಾ ಅಭಿಪ್ರಾಯ ನೀಡುವುದಾಗಲೀ ಅವನ ಹೆಸರಿನಲ್ಲಿ ಅಥವಾ ಅನಾಮಧೇಯವಾಗಿ ಗುಪ್ತನಾಮದಲ್ಲಿ ಅಥವಾ ಬೇರೊಬ್ಬನ ಹೆಸರಿನಲ್ಲಿ ಪ್ರಕಟಿಸಲಾದ ಇತರ ಯಾವುದೇ ದಸ್ತಾವೇಜಿನಲ್ಲಿ ಅಥವಾ ಪತ್ರಿಕೆಗೆ ಬರೆದ ಯಾವುದೇ ಪತ್ರದಲ್ಲಿ ಅಥವಾ ಯಾವುದೇ ಸಾರ್ವಜನಿಕ ಹೇಳಿಕೆಯಲ್ಲಿ ಮಾಡುವಂತಿಲ್ಲ.

    ಕರ್ನಾಟಕ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಅಥವಾ ಯಾವುದೇ ಇತರ ರಾಜ್ಯ ಸರ್ಕಾರದ ಪ್ರಸ್ತುತ ಅಥವಾ ಇತ್ತೀಚಿನ ಯಾವುದೇ ನೀತಿಯ ಅಥವಾ ಕ್ರಮದ ಬಗ್ಗೆ ಪ್ರತಿಕೂಲ ಟೀಕೆಯ ಪರಿಣಾಮ ಹೊಂದಿರುವಂತಹ ಯಾವುದೇ ಸಂಗತಿಗಳ ನಿರೂಪಣೆಯನ್ನು ಮಾಡತಕ್ಕದ್ದಲ್ಲ ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸತಕ್ಕದಲ್ಲ.

    ಸರ್ಕಾರಿ ನೌಕರರ ಕೃತ್ಯಗಳ ಮತ್ತು ನಡತೆಯ ಸಮರ್ಥನೆಗಾಗಿ ನಿಯಮಿಸಲಾದ ಪ್ರಾಧಿಕಾರದ ಪೂರ್ವಾನುಮೋದನೆ ಪಡೆಯದ ಹೊರತು ಯಾರೇ ಸರ್ಕಾರಿ ನೌಕರನು ಸರ್ಕಾರದ ಯಾವ ಅಧಿಕೃತ ಕೃತ್ಯವು ಪ್ರತಿಕೂಲ ಟೀಕೆಯ ಅಥವಾ ಮಾನಹಾನಿ ಸ್ವರೂಪದ ನಿಂದನೆಯ ವಸ್ತು ವಿಷಯವಾಗಿರುವುದೋ ಆ ಯಾವುದೇ ಅಧಿಕೃತ ಕೃತ್ಯದ ಸಮರ್ಥನೆಗಾಗಿ ಯಾವುದೇ ನ್ಯಾಯಾಲಯಕ್ಕೆ ಅಥವಾ ಪತ್ರಿಕೆಗೆ ಮೊರ ಹೋಗತಕ್ಕದ್ದಲ್ಲ.

    ಎಚ್ಚರ ತಪ್ಪಿದರೆ ಕ್ರಮ ಖಚಿತ: ಮೇಲಿನ ನಿಯಮಗಳಲ್ಲಿನ ಅವಕಾಶಗಳಿಗೆ ವ್ಯತಿರಿಕ್ತವಾಗಿ ಯಾವುದೇ ಅಧಿಕಾರಿ ಸರ್ಕಾರದ ಕಾರ್ಯನೀತಿಗೆ ವ್ಯತಿರಿಕ್ತವಾಗಿ ಅನಪೇಕ್ಷಿತ ವೇದಿಕೆಗಳಲ್ಲಿ ತಮ್ಮದೇ ಆದ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಕೃತ್ಯಗಳಲ್ಲಿ ತೊಡಗುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಈ ಮೂಲಕ ಎಲ್ಲಾ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

    ಸರ್ಕಾರಿ ಯೋಜನೆಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿಯನ್ನು ಪ್ರಸಾರ ಮಾಡುವುದು ಸೇರಿದಂತೆ ಇತರ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವಿದ್ದಲ್ಲಿ ಮಾತ್ರ ಅಧಿಕಾರಿಗಳು ಮಾಧ್ಯಮಗಳನ್ನು ಬಳಸಬಹುದಾಗಿದೆ. ಆದರೆ, ಕುಂದು ಕೊರತೆಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.

    ನಿಮ್ಮ ಖಾತೆ ಬೇಡ, ಸರ್ಕಾರದ ಸೋಷಿಯಲ್‌ ಮೀಡಿಯಾ ಖಾತೆ ಬಳಸಿ!: ಸಾಮಾಜಿಕ ಮಾಧ್ಯಮಗಳನ್ನು ವೇದಿಕೆಗಳನ್ನಾಗಿರಿಸಿಕೊಂಡು ಇಲಾಖೆಯ/ಸರ್ಕಾರದ ಸಾಧನೆಗಳನ್ನು ಅಧಿಕಾರಿಗಳ ವ್ಯಯಕ್ತಿಕ ಸಾಧನಗಳಂಬಂತೆ ಪುದರ್ಶಿಸಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯ ಸಾಧನೆಗಳ ಬಗ್ಗೆ ಅಥವಾ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಬೇಕಾದ ಸಂದರ್ಭದಲ್ಲಿ, ಅಧಿಕಾರಿಗಳು ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸದೇ ಸರ್ಕಾರದ ಆಡಳಿತ ಹೆಸರಿನಲ್ಲಿ ತೆರೆಯಲಾದ ಖಾತೆಗಳನ್ನು (handles) ಮಾತ್ರ ಬಳಸಿಕೊಳ್ಳಬೇಕು ಎಂದು ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರು ಸುತ್ತೋಲೆ ಹೊರಡಿಸಿ ಖಡಕ್ ಆದೇಶ ನೀಡಿದ್ದಾರೆ.

     

  • ಭಾರತದಲ್ಲಿ ಬಡತನ ಇನ್ನೂ ಇರಲು ಕಾಂಗ್ರೆಸ್ ಕಾರಣ : ರಕ್ಷಣಾ ಸಚಿವೆ ಕಿಡಿ

    ಭಾರತದಲ್ಲಿ ಬಡತನ ಇನ್ನೂ ಇರಲು ಕಾಂಗ್ರೆಸ್ ಕಾರಣ : ರಕ್ಷಣಾ ಸಚಿವೆ ಕಿಡಿ

    – ಗರೀಬಿ ಹಠಾವೋ ಆರಂಭಿಸಿದ್ದು ಇಂದಿರಾ ಗಾಂಧಿ
    – ಈಗಲೂ ಕಾಂಗ್ರೆಸ್ಸಿನ ಜನಪ್ರಿಯ ಕಾರ್ಯಕ್ರಮ

    ಉಡುಪಿ: ಗರೀಬಿ ಹಠಾವೋ ಕಾಂಗ್ರೆಸ್ಸಿನ ಜನಪ್ರಿಯ ಕಾರ್ಯಕ್ರಮವಾಗಿದ್ದು ಇಂದಿರಾ ಗಾಂಧಿ 1971ರಲ್ಲಿ ಅಭಿಯಾನವನ್ನು ಆರಂಭಿಸಿದರು. ಇನ್ನೂ ಅದೇ ಘೋಷಣೆಯನ್ನು ರಾಹುಲ್ ಹೇಳುತ್ತಿದ್ದು, ಬಡತನ ಭಾರತದಲ್ಲಿ ಇನ್ನೂ ಇರಲು ಯಾರು ಕಾರಣ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನೆ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಪ್ರಚಾರಕ್ಕೆ ತುಂಬಾ ಕೆಲಸ ಮಾಡುತ್ತೇವೆ. ಪ್ರಿಯಾಂಕಾ ಗಾಂಧಿ ಏನೇ ಆರೋಪ ಮಾಡಲಿ. ಬಿಜೆಪಿ ಟಿ ಶರ್ಟ್, ಆಪ್ ಮೂಲಕ ಮಾರಾಟವಾಗುತ್ತದೆ. ಇದರಲ್ಲಿ ತಪ್ಪೇನಿದೆ? ಇಂತಹದ್ದು ಇನ್ನೂ ಸಾಕಷ್ಟು ಮಾಡುತ್ತೇವೆ ಎಂದು ಪ್ರಿಯಾಂಕ ಗಾಂಧಿಗೆ ಟಾಂಗ್ ಕೊಟ್ಟರು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಜಯ ಪಡೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಕಡು ಬಡವರ ಕುಟುಂಬಕ್ಕೆ ವಾರ್ಷಿಕ 72 ಸಾವಿರ ರೂ. ಆದಾಯ ನೀಡಲಾಗುತ್ತದೆ ಎಂದ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವೆ, ಗರೀಬಿ ಹಠಾವೋ ಆರಂಭಿಸಿದ್ದು ಇಂದಿರಾ ಗಾಂಧಿ, ಅದನ್ನ ರಾಹುಲ್ ಕೂಡ ಹೇಳಿಕೊಂಡು ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನು ಓದಿ:ದೇಶದ 20% ರಷ್ಟು ಬಡವರಿಗೆ ವಾರ್ಷಿಕ 72 ಸಾವಿರ ರೂ.: ರಾಹುಲ್ ಗಾಂಧಿ

    ನಾವು ಐದು ವರ್ಷ ಭ್ರಷ್ಟಾಚಾರ ರಹಿತ ಕೆಲಸ ಮಾಡಿದ್ದೇವೆ. ಮೋದಿ ವಿರುದ್ಧ ಮಹಾಘಟಬಂಧನ್ ಸ್ಥಾಪನೆಯಾಗಿದೆ. ಎನ್‍ಡಿಎ ಜೊತೆ ಘಟಬಂಧನ್ ಹೋಲಿಕೆ ಮಾಡಬೇಡಿ. ನಮ್ಮ ಪ್ರಧಾನಿ ಮೋದಿಗೆ ಸರಿಸಾಟಿ ಯಾರಿದ್ದಾರೆ? ಚೋರ್ ಚೋರ್ ಕರೆಯಲು ನಿಮ್ಮಲ್ಲಿ ಏನಿದೆ ಸಾಕ್ಷಿ? ಜಾಮೀನಿನ ಮೇಲೆ ಹೊರಗಿರುವ ರಾಹುಲ್ ಗಾಂಧಿಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಆಕ್ರೋಶ ಹೊರಹಾಕಿದರು.

    ರಾಹುಲ್‍ಗೆ ಸ್ಮೃತಿ ಭಯ ಶುರುವಾಗಿದೆ, ಅಮೇಥಿ ಕ್ಷೇತ್ರ ಹಿಂದೆಂದು ಕಾಣದ ಅಭಿವೃದ್ಧಿ ಕಂಡಿದೆ. 2014 ರಲ್ಲಿ ಸ್ಮೃತಿ ಇರಾನಿ ಸೋತರೂ ಅಮೇಥಿ ಜೊತೆ ನಿಂತಿದ್ದರು. ಇರಾನಿ ಅಮೇಥಿಯಲ್ಲಿ ಜನರ ನಿರಂತರ ಸಂಪರ್ಕದಲ್ಲಿದ್ದಾರೆ. ರಾಹುಲ್ ಗಾಂಧಿಗೆ ಈ ಬಗ್ಗೆ ಭಯ ಆವರಿಸಿದೆ. ರಾಹುಲ್ ಗೆ ಸೋಲಿನ ಭೀತಿ ಎದುರಾಗಿದೆ. ರಾಹುಲ್ ಗಾಂಧಿ ಬೇರೆ ಕ್ಷೇತ್ರಕ್ಕೆ ಪಲಾಯನ ಮಾಡುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಕುಟುಕಿದರು.

    ಶೋಭಾ ಕರಂದ್ಲಾಜೆಯನ್ನು ಗೆಲ್ಲಿಸಲು ವಿಜಯ ಸಂಕಲ್ಪಯಾತ್ರೆಗೆ ಬಂದಿದ್ದೇನೆ. ಮೋದಿ ಸರ್ಕಾರದ ಯೋಜನೆಗಳನ್ನು ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ತಂದಿದ್ದಾರೆ. ಹೀಗಾಗಿ ಅವರ ಪುನರ್ ಆಯ್ಕೆಗೆ ಸಾಕಷ್ಟು ಕಾರಣಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ರಾಷ್ಟ್ರೀಯ ಹೆದ್ದಾರಿಗಳು, ಸಖಿ ಸೆಂಟರ್, ಕೌಶಲ್ಯಾಭಿವೃದ್ಧಿ ಕೇಂದ್ರ ಉಡುಪಿಯಲ್ಲಿ ಸ್ಥಾಪನೆಯಾಗಿದೆ. ಏಳು ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಭೆಗಳಾಗಿದೆ. ಪ್ರಕರಣ ಕಡೆಗಣಿಸುವ ಮಾತೇ ಇಲ್ಲ. ನೌಕಾಪಡೆ, ಏರ್ ಫೋರ್ಸ್ ಜೊತೆ ಚರ್ಚೆ ಮಾಡಿದ್ದೇನೆ. ಬೆಂಗಳೂರು ಏರ್ ಶೋ ಪ್ರಕರಣ ಕೂಡ ಚರ್ಚೆಯಾಗಿದೆ. ನಾವು ನಮ್ಮ ಕರ್ತವ್ಯದಲ್ಲಿ ಲೋಪ ಎಸಗಿಲ್ಲ. ಚುನಾವಣಾ ಸಂದರ್ಭದಲ್ಲಿ ನಾನು ನೀತಿಸಂಹಿತೆ ಉಲ್ಲಂಘಿಸಲ್ಲ, ಏನೇನು ಮಾಡಿದ್ದೇವೆ ಎಲ್ಲವೂ ಹೇಳಲ್ಲ ಎಂದು ಹೇಳಿದರು.

    ಈ ಪತ್ರಿಕಾಗೋಷ್ಠಿಯಲ್ಲಿ ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಕುಮಾರಸ್ವಾಮಿ, ಲಾಲಾಜಿ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.

  • ಮೋದಿಗೆ ಮುಸ್ಲಿಂ ಹೆಂಡತಿಯರ ಬಗ್ಗೆ ಇರೋ ಚಿಂತೆ ರಾಮ ಮಂದಿರದ ಬಗ್ಗೆ ಇಲ್ಲ : ಸಿಎಂ ಇಬ್ರಾಹಿಂ

    ಮೋದಿಗೆ ಮುಸ್ಲಿಂ ಹೆಂಡತಿಯರ ಬಗ್ಗೆ ಇರೋ ಚಿಂತೆ ರಾಮ ಮಂದಿರದ ಬಗ್ಗೆ ಇಲ್ಲ : ಸಿಎಂ ಇಬ್ರಾಹಿಂ

    ಹುಬ್ಬಳ್ಳಿ:  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಸ್ಲಿಂ ಹೆಂಡತಿಯರ ಬಗ್ಗೆ ಇರುವ ಚಿಂತೆ ರಾಮ ಮಂದಿರದ ಬಗ್ಗೆ ಇಲ್ಲ ಎಂದು ಮಾಜಿ ಕಾಂಗ್ರೆಸ್ ಮುಖಂಡ, ಎಂಎಲ್‍ಸಿ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಇಬ್ರಾಹಿಂ, ರಾಮ ಮಂದಿರ ಸಮಸ್ಯೆಯನ್ನು ಬಗೆ ಹರಿಸುವ ಇಚ್ಛೆ ಬಿಜೆಪಿಗೆ ಇಲ್ಲ. ಇದಕ್ಕೆ 2019ರ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಸೂಕ್ತ ಉತ್ತರ ನೀಡುತ್ತಾರೆ. ಅಲ್ಲದೇ ಸದ್ಯ ನಡೆಯುತ್ತಿರುವ ಉಪಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿಯೂ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದರು.

    ಇದೇ ವೇಳೆ ರಾಮ ಮಂದಿರ ಕಟ್ಟುವುದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದು ತಿಳಿಸಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ನಮ್ಮದೇ ಹವಾ ಸೃಷ್ಟಿಸುತ್ತೇವೆ. ಆದರೆ ನಾನು ಬಿಜೆಪಿ ಪಕ್ಷ ಕೋಮುವಾದಿ ಎಂದು ವಿರೋಧ ಮಾಡುತ್ತಿಲ್ಲ. ಆದರೆ ಕಳೆದ ನಾಲ್ಕುವರೆ ವರ್ಷಗಳ ಆಡಳಿತದಲ್ಲಿ ಅವರು ದೇಶದ ಆರ್ಥಿಕ ನೀತಿಯನ್ನು ಹಾಳು ಮಾಡಿದ್ದಾರೆ. 70 ವರ್ಷಗಳ ಇತಿಹಾಸಲ್ಲಿಯೇ ಕೆಟ್ಟ ಆಡಳಿತ ನೀಡಿದ್ದಾರೆ. ಮೋದಿ ಅವರಿಗೆ ಮುಸ್ಲಿಂ ಹೆಂಡತಿಯರ ಬಗ್ಗೆ ಚಿಂತೆ ಇದೆ ಹೊರತು, ರಾಮ ಮಂದಿರದ ಬಗ್ಗೆ ಕಾಳಜಿ ಇಲ್ಲ. ರಾಮ ಮಂದಿರ ನಿರ್ಮಾಣ ಮಾಡುವುದು ಬಿಜೆಪಿಗೆ ಬೇಡವಾಗಿದೆ. ರಾಮ ಮಂದಿರ ಸಮಸ್ಯೆಯನ್ನ ಜೀವಂತವಾಗಿಡಲು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

    ಅಯೋಧ್ಯೆ ವಿವಾದವನ್ನು ಬಗೆಹರಿಸಬೇಕೆಂಬ ಇಚ್ಛಾಶಕ್ತಿ ಬಿಜೆಪಿಗೆ ಇಲ್ಲ. ಈ ಹಿಂದೆ ಕರ್ನಾಟಕದ ಹುಬ್ಬಳ್ಳಿಯ ಈದ್ಗಾ ಮೈದಾನವನ್ನ ಇಟ್ಟುಕೊಂಡು ಬಿಜೆಪಿಯವರು ಮತಗಳನ್ನ ಕೇಳುತ್ತಿದ್ದರು. ಈಗ ಅಯೋಧ್ಯೆ ವಿವಾದವನ್ನು ಮುಂದಿಟ್ಟು ಬಿಜೆಪಿ ಮತ ಕೇಳುತ್ತಿದೆ. ಈಗಿನ ರಾಜಕೀಯ ಬಹಳ ಕೀಳು ಮಟ್ಟವನ್ನ ತಲುಪಿದೆ. ಬಿಜೆಪಿಯವರು ಹಿಂದೂ ಹಿಂದೂ ಎಂದು ಹೇಳುತ್ತಾರೆ. ಆದರೆ ಗುಡಿ ಮತ್ತು ಮಸೀದಿ ಕಟ್ಟುವುದು ಧರ್ಮ ಅಲ್ಲ. ಧರ್ಮ ಎಂದರೇ ಊಟ ಇಲ್ಲದವರಿಗೆ ಊಟ, ಮನೆ ಇಲ್ಲದವರಿಗೆ ಮನೆ ಕೊಡುವುದು ಎಂದರ್ಥ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

    ಗೋ ಸಂರಕ್ಷಣೆ ಎಂದು ಹೇಳುವ ಬಿಜೆಪಿ ಮುಖಂಡರು ಉತ್ತರ ಪ್ರದೇಶದಲ್ಲಿ ಗೋ ಪೂಜೆ ಮಾಡಿ ಗೋವಾದಲ್ಲಿ ಏನೂ ಮಾಡುತ್ತಿದ್ದಾರೆ? ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದಿಂದ ಗೋ ಮಾಂಸ ರಪ್ತು ಹೆಚ್ಚಾಗಿದೆ. ಈ ಉದ್ಯಮದಲ್ಲಿ ಬಿಜೆಪಿ ನಾಯಕರ ಹೆಸರಿನಲ್ಲಿ ಹಲವಾರು ಕಂಪನಿಗಳು ಇವೆ ಎಂದು ಆರೋಪಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಾಗ್ವಾರ್ ಕಾರ್, ಕೋಟಿ ರೂ. ಆಸ್ತಿ ಇರುವ ಸಂಜನಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ: ರವಿ ಶ್ರೀವತ್ಸ ತಿರುಗೇಟು

    ಜಾಗ್ವಾರ್ ಕಾರ್, ಕೋಟಿ ರೂ. ಆಸ್ತಿ ಇರುವ ಸಂಜನಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ: ರವಿ ಶ್ರೀವತ್ಸ ತಿರುಗೇಟು

    – ಸಂಜನಾ ಕ್ಷಮೆಗೆ ಡೆಡ್‍ಲೈನ್ ಕೊಟ್ಟ ನಿರ್ದೇಶಕ
    – ಗಂಡ ಹೆಂಡತಿ ಮೊದಲ ಸಂಜನಾ ಸಿನಿಮಾವಲ್ಲ
    – ಅ.16ರವರೆಗೂ ಮಾಡಿರುವ ಮೆಸೇಜ್ ಸಾಕ್ಷಿಯಿದೆ
    – ಪ್ರಚಾರಕ್ಕಾಗಿ ನನ್ನ ವಿರುದ್ಧ ಸುಳ್ಳು ಆರೋಪ

    ಬೆಂಗಳೂರು: ಗಂಡ ಹೆಂಡತಿ ಚಿತ್ರದ ಶೂಟಿಂಗ್ ವೇಳೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ನಿರ್ದೇಶಕ ರವಿ ಶ್ರೀವತ್ಸ ಸುದ್ದಿಗೋಷ್ಠಿ ನಡೆಸಿ ಸಂಜನಾಗೆ ತಿರುಗೇಟು ನೀಡಿದ್ದಾರೆ.

    ತನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕೆ ರವಿ ಶ್ರೀವತ್ಸ ಸಂಜನಾಗೆ ಶುಕ್ರವಾರ ಮಧ್ಯಾಹ್ನ 1 ಗಂಟೆಯ ಒಳಗಡೆ ಕ್ಷಮೆ ಕೇಳಬೇಕೆಂದು ಡೆಡ್‍ಲೈನ್ ನೀಡಿದ್ದಾರೆ.

    ಮೊದಲು ಒಂದು ಕಿಸ್‍ಯಿಂದ 10 ಕಿಸ್, 10 ಕಿಸ್‍ಯಿಂದ 30 ಕಿಸ್ ಮಾಡಿಸಿದ್ದರು ಎನ್ನುವ ಸಂಜನಾ ಆರೋಪಕ್ಕೆ, ಕಿಸ್ ದೃಶ್ಯವನ್ನಿಟ್ಟು ನಾನು ಈ ಸಿನಿಮಾ ಮಾಡಿಲ್ಲ. ಈ ಸಿನಿಮಾದಲ್ಲಿ ಸಾಕಷ್ಟು ಕಲಾವಿದರಿದ್ದರು. ಹಿರಿಯ ಪತ್ರಕರ್ತರಾದ ರವಿ ಬೆಳಗೆರೆ ಇದ್ದರು. ಇವರೆಲ್ಲಾ ಇರುವಾಗ ನಾನು ಹೇಗೆ ಕಿಸ್ ಮಾಡಿಸಲಿ. ಸಂಜನಾ ಪತ್ರಿಕೆಯೊಂದರಲ್ಲಿ ನನಗೆ ಮೊದಲು ಕಿಸ್ ಮಾಡುವಾಗ ಸ್ವಲ್ಪ ನರ್ವಸ್ ಆದೆ. ನಂತರ ಕಿಸ್ ಸೀನ್ ಮಾಡುವಾಗ ನನಗೆ ನರ್ವಸ್ ಹೋಯಿತು ಹೇಳಿದ್ದನ್ನು ಈ ವೇಳೆ ರವಿ ಶ್ರೀವತ್ಸ ತಿಳಿಸಿದರು.

    ರವಿ ಶ್ರೀವತ್ಸ ಹೇಳಿದ್ದೇನು?
    ‘ಗಂಡ- ಹೆಂಡತಿ’ ಸಿನಿಮಾಗಾಗಿ ನಾನು ಮೊದಲು ರಕ್ಷಿತಾ ಪ್ರೇಮ್ ಅವರನ್ನು ಅಪ್ರೋಚ್ ಮಾಡಿದ್ದೆ. ಈ ಸಿನಿಮಾಗಾಗಿ ಶೈಲೇಂದ್ರ ಬಾಬು ಅವರು ನಿರ್ಮಾಪಕರಾಗಿದ್ದರು. ಆಗ ಕಲಾವಿದರು ಯಾರು ಎಂದು ಅವರು ಕೇಳಿದ್ದಾಗ ನಾನು ರಕ್ಷಿತಾ ಅವರ ಹೆಸರು ಹೇಳಿದೆ. ನಂತರ ನಾನು ರಕ್ಷಿತಾ ಅವರನ್ನು ಸಂಪರ್ಕಿಸಿದಾಗ ಅವರು ನಾನು ಮದುವೆಯಾಗುತ್ತಿದ್ದೇನೆ. ಈ ರೀತಿಯ ಸಿನಿಮಾ ಮಾಡುವುದು ಸರಿಯಲ್ಲ ಎಂದು ಹೇಳಿ ಈ ಚಿತ್ರಕ್ಕೆ ನಾಯಕಿಯಾಗಲು ನಿರಾಕರಿಸಿದ್ದರು. ನಂತರ ಈ ಸಿನಿಮಾಗಾಗಿ ಹೊಸಬರನ್ನು ಕರೆಸಲು ನಿರ್ಧರಿಸಿದೆ.

    ಹಿಂದಿಯ ‘ಮರ್ಡರ್’ ಸಿನಿಮಾದಲ್ಲೂ ಕೂಡ ಹೊಸಬರು ನಟಿಸಿದ್ದರು. ಹಾಗಾಗಿ ನಾವು ಕನ್ನಡದಲ್ಲೂ ಹೊಸಬರಿಗೆ ಅವಕಾಶ ನೀಡಲು, ಮಲ್ಲಿಕಾ ಶೆರಾವತ್ ಪಾತ್ರಕ್ಕೆ ಸಂಜನಾ ಅವರನ್ನು ಆಯ್ಕೆ ಮಾಡಿದ್ದೇವು. ನಂತರ ನಾವು ಸಂಜನಾ ಅವರನ್ನು ಕತೆ ಹೇಳಿದೆ. ಅಲ್ಲದೇ ಮರ್ಡರ್ ಸಿನಿಮಾದ ಸಿಡಿಯನ್ನು ಹಾಕಿ ಅವರನ್ನು ತೋರಿಸಿ ಈ ರೀತಿಯಲ್ಲೇ ನಾನು ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿದೆ. ಅಲ್ಲದೇ ಈ ಚಿತ್ರದ ಎರಡನೇ ಭಾಗದಲ್ಲಿ ಅವರಿಗೆ ನಾನು ತಾಳಿಯ ಮಹತ್ವದ ಬಗ್ಗೆ ತಿಳಿಸಿದ್ದೆ.

    ನಾನು ಈ ಚಿತ್ರದಲ್ಲಿ ಬೆತ್ತಲೆಯ ಸೀನ್ ತೋರಿಸಿಲ್ಲ. ಆಗ ಅವರು ನನಗೆ 16 ವರ್ಷ ಎಂದು ಹೇಳಿದ್ದರು. ಗಂಡ-ಹೆಂಡತಿ ಸಂಜನಾ ಅವರ ಮೊದಲ ಸಿನಿಮಾ ಅಲ್ಲ. ಈ ಹಿಂದೆ ಅವರು ಜೂನಿಯರ್ ಆರ್ಟಿಸ್ಟ್ ಆಗಿ ನಟನೆ ಮಾಡಿದ್ದರು. ಗಂಡ-ಹೆಂಡತಿ ಸಂಜನಾ ಅವರ 5ನೇ ಸಿನಿಮಾ. ಗಂಡ- ಹೆಂಡತಿ ಸಿನಿಮಾ ಮಾಡುವಾಗ ಈ ಸಿನಿಮಾ ಮರ್ಡರ್ ರಿಮೇಕ್ ಎಂದು ಹೇಳಿದೆ. ಈ ಸಿನಿಮಾಗಾಗಿ ಮಲ್ಲಿಕಾ ಶರವಾತ್ ಪಾತ್ರಕ್ಕಾಗಿ 150ಕ್ಕೂ ಹೆಚ್ಚು ಜನರ ಆಡಿಶನ್ ನಡೆದಿತ್ತು. ಆಡಿಶನ್ ವೇಳೆ ಪಾಸಾದವರಿಗೆ ಇದು ಮರ್ಡರ್ ಸಿನಿಮಾ ರಿಮೇಕ್ ಎಂದು ಹೇಳಿದ್ದಾಗ ಅವರು ಅಭಿನಯಿಸಲ್ಲ ಎಂದು ಹೇಳಿದ್ದರು.

    ಯಾವುದೇ ಮಕ್ಕಳು ಹೊರಗೆ ಬರುತ್ತಾರೆಂದರೆ ತಮ್ಮ ಜೊತೆ ತಂದೆ- ತಾಯಿಯನ್ನು ಕರೆದುಕೊಂಡು ಬರುತ್ತಾರೆ. ಆದರೆ ಸಿನಿಮಾ ಶೂಟಿಂಗ್ ಸಮಯದಲ್ಲಿ ಸಂಜನಾ ಅವರ ತಂದೆ ಬಂದಿರಲಿಲ್ಲ. ನಂತರ ಚಿತ್ರದ ಬಿಡುಗಡೆಯಾದ ಮೊದಲ ದಿನ ಸಂಜನಾ ಅವರ ತಂದೆ ಹಾಜರಾಗಿದ್ದರು. ಆದರೆ ಸಂಜನಾ, ನನ್ನ ತಂದೆ ಸಿನಿಮಾ ನೋಡಲು ಆಗಲಿಲ್ಲ. ನಂತರ ನನ್ನ ತಂದೆ ಸಿನಿಮಾ ನೋಡಿ ತಲೆ ತಗ್ಗಿಸಿ ಚಿತ್ರಮಂದಿರದಿಂದ ಹೊರ ಬಂದರು ಎಂದು ಹೇಳುತ್ತಾರೆ. ಈ 12 ವರ್ಷದಲ್ಲಿ ಅವರ ತಂದೆ ನನಗೆ ಕರೆ ಮಾಡಿ ನನ್ನ ಮಗಳನ್ನು ಯಾಕೆ ಈ ರೀತಿ ಬಳಸಿಕೊಂಡಿದ್ದೀಯಾ ಎಂದು ಇದೂವರೆಗೆ ಕರೆ ಮಾಡಿ ಪ್ರಶ್ನೆ ಮಾಡಿಲ್ಲ.

    ನಾನು ಸೆಕ್ಸ್ ಸಿನಿಮಾ ಮಾಡುವುದ್ದಕ್ಕೆ ಇಲ್ಲಿ ಬಂದಿಲ್ಲ. ನಾನು ಇಲ್ಲಿ ಗಂಡ- ಹೆಂಡತಿಯ ಬಾಂಧವ್ಯವನ್ನು ತೋರಿಸಲು ಪ್ರಯತ್ನಪಟ್ಟಿದ್ದೇನೆ. ನಾನು ಹೆದರಿಸಿ ಕೆಲಸ ಮಾಡಿಲ್ಲ. ಚಿತ್ರದ ಮೊದಲ ದಿನದ ಫೋಟೋಶೂಟ್ ವೇಳೆ ಅವರು ಸಂಜನಾ ಬೋಲ್ಡ್ ಆಗಿ ನಟಿಸಿದ್ದರು. ಈ ವೇಳೆ ಚಿತ್ರದ ಸಹ ನಿರ್ದೇಶಕರು ನನಗೆ ಸಂಜನಾ ಹೇಗೆ ನಟಿಸಿದ್ದಾರೆ ನೋಡಿ ಎಂದು ಹೇಳಿದ್ದರು. ಸಂಜನಾ ಅವರಿಗೆ ಸರಿಯಾಗಿ ಕನ್ನಡ ಬರುತ್ತಿರಲಿಲ್ಲ. ಅವರಿಗೆ ಕನ್ನಡ ಹೇಳಿಕೊಟ್ಟು ಆಕೆಯನ್ನು ತಿದ್ದಿದ್ದೇವೆ.

    ಬ್ಯಾಂಕಾಕ್ ಶೂಟಿಂಗ್ ಬಳಿಕವೂ ಬೆಂಗಳೂರಿನಲ್ಲೂ ಕಿಸ್ಸಿಂಗ್ ದೃಶ್ಯದ ಶೂಟಿಂಗ್ ಮಾಡಿದ್ದಾರೆ ಎನ್ನುವ ಸಂಜನಾ ಆರೋಪಕ್ಕೆ, ಬ್ಯಾಂಕಾಕ್ ಶೂಟಿಂಗ್ ಹೋಗಿದ್ದಾಗ ಸಂಜನಾ ರಾತ್ರಿಯೆಲ್ಲಾ ಶಾಪಿಂಗ್ ಹೋಗುತ್ತಿದ್ದರು. ನಂತರ ಬೆಳಗ್ಗೆ ಬಂದಿದ್ದಾಗ ಅವರ ಕಣ್ಣು ಕೆಂಪಾಗಿತ್ತು. ಅವರು ಈ ಸ್ಥಿತಿಯಲ್ಲಿರುವಾಗ ನಾನು ಅವರಿಂದ ಹೇಗೆ ಕಿಸ್ಸಿಂಗ್ ಸೀನ್ ಮಾಡಿಸಲಿ? ಸಮಯದಲ್ಲೇ ನಾನು ಅವರಿಗೆ ಬೈದಿದ್ದೆ. ಆರಂಭದಲ್ಲಿ ಸಂಜನಾಗೆ ಗಂಡ- ಹೆಂಡತಿ ಸಿನಿಮಾದ ಮೂಲಕ ಪಬ್ಲಿಸಿಟಿ ಬೇಕಿತ್ತು. ಈಗ ಮೀಟೂ ಅಭಿಯಾನದ ಚಿತ್ರದ ವಿರುದ್ಧ ಹೇಳಿಕೆ ನೀಡಿ ಪಬ್ಲಿಸಿಟಿಗೆ ಮುಂದಾಗಿದ್ದಾರೆ.

    ಸಂಜನಾ ಅವರ ಹತ್ತಿರ ಈಗ ಕೋಟಿ ರೂ. ಆಸ್ತಿ ಇದೆ. ಅದಕ್ಕೆಲ್ಲಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ. ಅವರು ಈಗ ಜಾಗ್ವಾರ್ ಕಾರಿನಲ್ಲಿ ಓಡಾಡುತ್ತಾರೆ. ನಾನು ಈಗ ಮಾರುತಿ ಬೆಲೆನೋ ಕಾರಿನಲ್ಲಿ ಓಡಾಡುತ್ತಿದ್ದೇನೆ. ಅವರು ಐಶಾರಾಮಿ ಮನೆಯಲ್ಲಿ ಇರುತ್ತಾರೆ. ನಾನು 8 ಸಾವಿರ ಕೊಟ್ಟು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. ಈಗ ಅವರು ತಮಿಳು, ತೆಲುಗು, ಮಲೆಯಾಳಂ ಎಲ್ಲ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈಗ ಅವರನ್ನು ಗಂಡ- ಹೆಂಡತಿ ಸಂಜನಾ ಎಂದು ಗುರುತಿಸುತ್ತಾರೆ. ಸಂಜನಾ ಅವರಿಗೆ ಕನ್ನಡ ಬಿಟ್ಟರೆ ಬೇರೆ ಚಿತ್ರರಂಗವಿದೆ. ನಮಗೆ ಕನ್ನಡ ಚಿತ್ರರಂಗ ಮಾತ್ರ ಇದೆ. ಈಗ ನನ್ನ ವಿರುದ್ಧ ಆರೋಪಿಸಿದ್ದನ್ನು ನಾಳೆ ಸಂಜನಾ ಬೇರೆ ಚಿತ್ರರಂಗದ ನಿರ್ದೇಶಕರನ್ನು ಮಾಡಬಹುದು.

    ಅಕ್ಟೋಬರ್ 16 ವರೆಗೂ ಸಂಜನಾ ನನಗೆ ಮೆಸೇಜ್ ಮಾಡಿದ್ದಕ್ಕೆ ಸಾಕ್ಷಿಗಳಿದೆ. ನನ್ನ ಹುಟ್ಟುಹಬ್ಬಕ್ಕೆ ನೀವು ಬನ್ನಿ. ಈ ಕಾಸ್ಟ್ಲಿ ಹೋಟೆಲ್‍ಗೆ ನೀವು ಒಬ್ಬರೇ ಬರುತ್ತೀರಾ ಅಥವಾ ನಿಮ್ಮ ಸ್ನೇಹಿತರ ಜೊತೆ ಬರುತ್ತೀರಾ. ನಾನು ಸೀಟ್ ಬುಕ್ ಮಾಡಬೇಕೆಂದು ಹೇಳಿದ್ದರು. ನಂತರ ಸಂಜನಾ ಹಿಂದಿಯ ‘ಜಿಸ್ಮ್’ ಸಿನಿಮಾ ಮಾಡೋಣ ಎಂದು ಹೇಳಿದ್ದರು. ಆಗ ನಾನು ಗಂಡ- ಹೆಂಡತಿ ಸಿನಿಮಾ ಮಾಡಿದೆ ಸಾಕು ಎಂದು ಹೇಳಿದೆ.

    https://www.youtube.com/watch?v=Fngx4OL8iUY

    https://www.youtube.com/watch?v=2YYfQAOr3SM

    https://www.youtube.com/watch?v=EhTC1JWIn1I

    https://www.youtube.com/watch?v=Pr1WxEPsJPc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೀಟೂ ದುರುಪಯೋಗ ಮಾಡಿಕೊಂಡವರಲ್ಲಿ ಸಂಜನಾ ಮೊಟ್ಟ ಮೊದಲಿಗರು: ವಿ. ನಾಗೇಂದ್ರ ಪ್ರಸಾದ್

    ಮೀಟೂ ದುರುಪಯೋಗ ಮಾಡಿಕೊಂಡವರಲ್ಲಿ ಸಂಜನಾ ಮೊಟ್ಟ ಮೊದಲಿಗರು: ವಿ. ನಾಗೇಂದ್ರ ಪ್ರಸಾದ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ತಮ್ಮ ಮೊದಲ ಚಿತ್ರದ ಶೂಟಿಂಗ್ ವೇಳೆ ತಮ್ಮ ಮೇಲೆ ಉಂಟಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದರು. ಈ ಆರೋಪದ ಬಗ್ಗೆ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಅವರು ಸುದ್ದಿಗೋಷ್ಠಿ ನಡೆಸಿ ಮೀಟೂ ದುರುಪಯೋಗ ಮಾಡಿಕೊಂಡವರಲ್ಲಿ ಸಂಜನಾ ಮೊಟ್ಟ ಮೊದಲಿಗರು ಎಂದು ಹೇಳಿ ಕಿಡಿಕಾರಿದ್ದಾರೆ.

    ಮೀಟೂ ಅಭಿಯಾನದ ಮೂಲಕ ಹೊರಬರುತ್ತಿರುವವರ ನಾಯಕಿಯರ ಬಾಯಿಯನ್ನು ಕೆಲವು ಸಂಘ ಬಾಯಿ ಮುಚ್ಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ನಿರ್ದೇಶಕರ ಸಂಘವನ್ನು ಕೂಡ ಉಲ್ಲೇಖ ಮಾಡಲಾಗುತ್ತಿದೆ. ಆದರೆ ನಿರ್ದೇಶಕರ ಸಂಘ ಮೀಟೂ ಅಭಿಯಾನವನ್ನು ಸ್ವಾಗತಿಸುತ್ತದೆ. ಶೋಷಣೆಗೆ ಒಳಗಾಗಿರುವ ಮಹಿಳೆಯ ಧ್ವನಿಯನ್ನು ಅಡಗಿಸಲು ನಾವು ಪ್ರಯತ್ನಿಸುತ್ತಿಲ್ಲ ಎಂದು ಅವರು ಹೇಳಿದರು.

    ಯಾವುದೇ ನಿರ್ದೇಶಕನಿಗೆ ಸಮಸ್ಯೆಯಾದರೆ ಅವರು ನಿರ್ದೇಶಕರ ಸಂಘಕ್ಕೆ ಬಂದು ದೂರು ನೀಡುತ್ತಾರೆ. ಮೀಟೂ ಅಭಿಯಾನ ಮಾಧ್ಯಮಗಳ ಮೂಲಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೇಳುವುದರ ಮೂಲಕ ನಿಮ್ಮ ಸಮಸ್ಯೆಗೆ ಬಗೆಹರಿಯುವುದಿಲ್ಲ. ಆಯಾ ಸಂಘಗಳಿಗೆ ಹೋಗಿ ನಿಮಗೆ ಆದ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿ ಅದು ನಿಮಗೆ ಆಗದಿದ್ದರೆ ಕಾನೂನಿನ ಮೊರೆ ಹೋಗಿ. ಆದರೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೇಳುವುದು ಸರಿಯಲ್ಲ ಎಂದು ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಹೇಳಿದರು.

    ಮೀಟೂ ಅಭಿಯಾನವನ್ನು ದುರುಪಯೋಗ ಮಾಡುವವರಲ್ಲಿ ಮೊಟ್ಟ ಮೊದಲಿಗರು ನಟಿ ಸಂಜನಾ. ಏಕೆಂದರೆ ಅವರು ಮಾಧ್ಯಮಗಳನ್ನು ಕರೆದು ಪತ್ರಿಕಾಗೋಷ್ಠಿ ಕರೆದು 12 ವರ್ಷಗಳ ಹಿಂದೆ ಅವರಿಗೆ ಗುರುತು ನೀಡಿದ ನಿರ್ದೇಶಕರ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಸಂಜನಾ ಮಾತನಾಡಿದ್ದು ತಪ್ಪು ಎಂದು ನಾವು ಹೇಳುತ್ತಿಲ್ಲ. ಆದರೆ ಸಂಜನಾ ನಿರ್ದೇಶಕರ ಮೇಲೆ ಮಾಡಿದ ಆರೋಪಗಳಲ್ಲಿ ಸಾಕಷ್ಟು ಸುಳ್ಳು ಹೇಳಿದ್ದಾರೆ. ಆ ಸುಳ್ಳು ಏನು ಎಂಬುದು ನಾನು ಹೇಳುತ್ತೇನೆ ಎಂದರು.

    ಸಂಜನಾ ಅವರ ವಿಷಯಕ್ಕೂ ಹಾಗೂ ಈ ಪತ್ರಿಕಾಗೋಷ್ಠಿಗೂ ಯಾವುದೇ ಸಂಬಂಧವಿಲ್ಲ. ಸಂಜನಾ ಅವರಿಗೆ ಯಾವುದೇ ಲೈಂಗಿಕ ಕಿರುಕುಳ ನೀಡಿಲ್ಲ. ಇದು ಸಿನಿಮಾ ನಿರ್ದೇಶಕನ ಹಾಗೂ ಕಲಾವಿದನ ನಡುವಿನ ಆರೋಪ. ಒಬ್ಬ ನಿರ್ದೇಶಕ ತನ್ನ ಸಿನಿಮಾ ಚೆನ್ನಾಗಿ ಬರಬೇಕು ಎಂದು ತುಂಬಾ ಶ್ರಮಪಡುತ್ತಾರೆ. ನಿರ್ದೇಶಕರು ಈ ರೀತಿ ಶ್ರಮ ಪಡುವಾಗ ಕಲಾವಿದರಿಗೆ ಹಾಗೂ ತಂತ್ರಜ್ಞನರಿಗೆ ಕಷ್ಟವಾಗುವುದು ಸಹಜ. ಈ ರೀತಿ ಕಷ್ಟಪಟ್ಟಿದ್ದ ಮೇಲೆ ಸಿನಿಮಾ ಯಶಸ್ವಿಯಾದಾಗ ಅಲ್ಲಿ ನಿಜವಾದ ತೃಪ್ತಿ ಸಿಗುತ್ತದೆ. ಆ ಸಿನಿಮಾ ಬಿಡುಗಡೆಯಾದಾಗ ಆ ಚಿತ್ರತಂಡ ಯಶಸ್ಸಿನ ರುಚಿ ಉಂಡಿದೆ. ಅಂದು ಯಶಸ್ಸು ರುಚಿಸಿದ ತಟ್ಟೆಯಲ್ಲಿ ಈಗ ಉಗಳಬಾರದು ಎಂಬುದನ್ನು ಹೇಳುವುದಕ್ಕೆ ಈ ಪತ್ರಿಕಾಗೋಷ್ಠಿ ನಡೆಸಿದ್ದೇವೆ ಎಂದು ನಾಗೇಂದ್ರ ಪ್ರಸಾದ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೀಪಾವಳಿ ಆದ್ಮೇಲೆ ವೇಷದವರು ಬರ್ತಾರೆ, ಆದ್ರೆ ಈ ಬಾರಿ ದಸರೆಗೆ ಬಂದಿದ್ದಾರೆ: ಸಿಟಿ ರವಿ

    ದೀಪಾವಳಿ ಆದ್ಮೇಲೆ ವೇಷದವರು ಬರ್ತಾರೆ, ಆದ್ರೆ ಈ ಬಾರಿ ದಸರೆಗೆ ಬಂದಿದ್ದಾರೆ: ಸಿಟಿ ರವಿ

    ಶಿವಮೊಗ್ಗ: ದೀಪಾವಳಿ ಆದ ಮೇಲೆ ವೇಷದವರು ಬರುತ್ತಾರೆ. ಆದರೆ ವೇಷ ತೊಟ್ಟವರು ಈಗ ದಸರಾ ವೇಳೆಗೆ ಬಂದಿದ್ದಾರೆ ಎಂದು ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

    ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ವೇಳೆ ಮಾತನಾಡಿದ ಅವರು, ಇಂಥ ನೀಚ ಮುಖ್ಯಮಂತ್ರಿಯನ್ನು ನಾನು ಕಂಡಿರಲಿಲ್ಲ. ಈ ನೀಚನನ್ನು ಬೆಳಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದು ಹೇಳಿದ್ದ ದೇವೇಗೌಡರು ಈಗ ಸಿದ್ದರಾಮಯ್ಯ ಜೊತೆ ಕುಳಿತುಕೊಂಡು ಸುದ್ದಿಗೋಷ್ಠಿ ನಡೆಸಿದ್ದಾರೆ. ಈಗ ಈ ಜಂಟಿ ಪತ್ರಿಕಾಗೋಷ್ಠಿ ಸೌಭಾಗ್ಯನೋ ಅಥವಾ ದೌರ್ಭಾಗ್ಯನೋ ಎನ್ನುವುದನ್ನು ಅವರೇ ಹೇಳಬೇಕು ಎಂದರು.

    ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ದೂರ ಇಡುವುದೇ ನನ್ನ ಗುರಿ ಎಂದು ದೇವೇಗೌಡರು ಹೇಳಿದ್ದರು. ದೇವೇಗೌಡರ ಈ ಮಾತಿಗೆ ಸಿದ್ದರಾಮಯ್ಯ ದೇವೇಗೌಡರದು ಧೃತರಾಷ್ಟ್ರ ಆಲಿಂಗನ. ಎಲ್ಲರನ್ನೂ ಮುಗಿಸುತ್ತಾರೆ. ನಾನು ತಪ್ಪಿಸಿಕೊಂಡು ಬಂದು ಸಿಎಂ ಆದೆ ಎಂದಿದ್ದರು. ಈಗ ಈ ಆಲಿಂಗನ ಎಂತಹದ್ದು ಎನ್ನುವುದನ್ನು ಸಿದ್ದರಾಮಯ್ಯನವರೇ ಸ್ಪಷ್ಟ ಪಡಿಸಬೇಕು ಎಂದು ವ್ಯಂಗ್ಯವಾಡಿದರು.

    ಬಿಜೆಪಿ ನೇರವಾಗಿ ಯುದ್ಧ ಮಾಡುತ್ತದೆ. ಯಾರ ಬೆನ್ನಿಗೂ ಚೂರಿ ಹಾಕುವ ಕೆಲಸ ಮಾಡಿಲ್ಲ. ಸೈದ್ಧಾಂತಿಕವಾಗಿ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಯನ್ನು ಬೈದಿದ್ದು ಬಿಟ್ಟರೆ ರಾಜ್ಯದ ಅಭಿವೃದ್ಧಿ ಬಗ್ಗೆ ಒಂದೇ ಒಂದು ಮಾತು ಆಡುತ್ತಿಲ್ಲ. ರಾಜಕೀಯ ಅಂಧಾಕಾರ ಎದುರಾಗುತ್ತದೆ ಎಂಬ ಕಾರಣಕ್ಕೆ ಬಿಜೆಪಿ ಬಗ್ಗೆ ಅಪಾರ ಹೆದರಿಕೆ ಇದೆ. ಹೊಟ್ಟೆ ಒಳಗೆ ವಿಷ ಇದ್ದರೂ ತೋರಿಕೆಗೆ ಒಂದಾಗಿದ್ದೇವೆ ಎಂದು ಜೆಡಿಎಸ್, ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

    ಅವರೊಳಗೆ ಸಹಮತ ಇಲ್ಲದೆ ಏಕತೆಯ ಪ್ರದರ್ಶನ ನಾಟಕೀಯವಾಗಿತ್ತು. ಎರಡೂ ಪಕ್ಷಗಳು ನಮ್ಮ ರಾಜಕೀಯ ವಿರೋಧಿಗಳು ಪರಸ್ಪರ ಮುಗಿಸಲು ಹವಣಿಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಎಷ್ಟು ಕಾಲ ಒಟ್ಟಿಗೆ ಇರಲು ಸಾಧ್ಯ ಎಂದು ಸಿಟಿ ರವಿ ಪ್ರಶ್ನೆ ಮಾಡಿದರು.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
  • ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 3% ಮಳೆ ಕಡಿಮೆ: ಎಷ್ಟು ಪ್ರಮಾಣದಲ್ಲಿ ಬೆಳೆ ಬಿತ್ತನೆಯಾಗಿದೆ?

    ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 3% ಮಳೆ ಕಡಿಮೆ: ಎಷ್ಟು ಪ್ರಮಾಣದಲ್ಲಿ ಬೆಳೆ ಬಿತ್ತನೆಯಾಗಿದೆ?

    ಬೆಂಗಳೂರು: ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 3% ಮಳೆ ಕಡಿಮೆ ಆಗಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ.

    ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಬಾರಿಯೂ ಮಳೆ ಕೊರತೆಯಾಗಿದೆ. ಮುಂಗಾರು ನಲ್ಲಿ ಶೇಕಡಾ 3% ಮಳೆ ಕಡಿಮೆ ಆಗಿದೆ. ವಾಡಿಕೆ ಮಳೆ 1156 ಮಿ.ಮಿ ಆಗಬೇಕಿತ್ತು. ಆದ್ರೆ 6ನೇ ಆಗಸ್ಟ್ ವೇಳೆಗೆ 522 ಮಿ.ಮಿ ಮಳೆಯಾಗಿದೆ ಅಷ್ಟೆ ಅಂತ ಮಾಹಿತಿ ನೀಡಿದರು. ದಕ್ಷಿಣ ಒಳನಾಡಿನ ಜಿಲ್ಲೆಯಲ್ಲಿ ಶೇ 9% ಕಡಿಮೆ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಶೇ 31% ಮಳೆ ಕಡಿಮೆಯಾಗಿದೆ. ಮಲೆನಾಡು, ಕರಾವಳಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ.

    ಬಿತ್ತನೆಯಲ್ಲೂ ಈ ಬಾರಿ ರಾಜ್ಯ ಹಿಂದೆ ಬಿದ್ದಿದೆ. ನಿಗದಿ ಪ್ರಮಾಣಕ್ಕಿಂತ ಬಿತ್ತನೆ ಕಡಿಮೆ. ಮುಂಗಾರಿನಲ್ಲಿ 74.69 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇತ್ತು. ಆದ್ರೆ ಈಗ ಬಿತ್ತನೆ ಆಗಿರೋದು 49.47 ಲಕ್ಷ ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಭತ್ತ 41%, ರಾಗಿ 19%, ತಾಣ ಧಾನ್ಯಗಳು 35%, ಹುರುಳಿ 3%, ಅವರೆ 18%, ನೆಲಗಡಲೆ 44%, ಸೂರ್ಯಕಾಂತಿ 39%, ಹರಳು 27% , ಮಂಡಕ್ಕಿ 26% ಬಿತ್ತನೆ ಕಡಿಮೆಯಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ರಾಯಚೂರು, ಬಳ್ಳಾರಿ, ಕೊಡಗು, ಚಾಮರಾಜನಗರದಲ್ಲಿ 50% ಗಿಂತ ಕಡಿಮೆ ಬಿತ್ತನೆಯಾಗಿದೆ ಅಂತ ತಿಳಿಸಿದರು.

    ಬಿತ್ತನೆ ಬೀಜಕ್ಕೂ ಈ ಬಾರಿ ಬೇಡಿಕೆ ಕಡಿಮೆಯಾಗಿದೆ. ಮುಂಗಾರಿಗೆ 8.60ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಬೇಡಿಕೆ ಇತ್ತು. ಸದಸ್ಯ 7.97 ಲಕ್ಷ ಕ್ವಿಂಟಾಲ್ ಬೀಜ ನಮ್ಮ ಬಳಿ ದಾಸ್ತಾನು ಇದೆ. ಈವರೆಗೂ 3.63 ಲಕ್ಷ ಕ್ವಿಂಟಾಲ್ ಬೀಜ ವಿತರಣೆ ಮಾಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 13 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. ಮಳೆ ಕೊರತೆಯಿಂದಾಗಿ ಪರ್ಯಾಯ ಬೆಳೆಗೆ ಯೋಜನೆ ರೂಪಿಸಲಾಗಿದೆ. ಮಳೆ ಕೊರತೆಯಿಂದಾಗಿ ಈ ವರ್ಷ 2.16 ಲಕ್ಷ ಹೆಕ್ಟೇರ್ ಬೆಳೆ ಬಾಡುತ್ತಿರುವ ವರದಿಯಾಗಿದೆ. ಹೆಚ್ಚಿನ ಮಳೆಯಿಂದಾಗಿ 8 ಜಿಲ್ಲೆಗಳಲ್ಲಿ 6,309 ಹೆಕ್ಟೇರ್ ಪ್ರದೇಶದ ವಿವಿಧ ಬೆಳೆಗಳು ಹಾನಿಗೊಳಗಾಗಿದೆ ಅಂತ ಸಚಿವರು ಮಾಹಿತಿ ನೀಡಿದರು.

    ರೈತರ ಜಮೀನು ಹಾಗೂ ಬೆಳೆಗಳನ್ನ ಅಳತೆ ಮಾಡಲು ರಾಜ್ಯ ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ರೈತರ ಜಮೀನು ಹಾಗೂ ಬೆಳೆಯನ್ನ ಅಳತೆ ಮಾಡಲು ಮೊದಲ ಬಾರಿಗೆ ಡ್ರೋನ್ ಮೂಲಕ ಸರ್ವೆ ಮಾಡಲು ಸರ್ಕಾರ ನಿರ್ಧರಿಸಿದೆ. ಮಳೆ ಕೊರತೆಯಾಗಿರುವ ಜಿಲ್ಲೆಗಳಿಗೆ ಒಂದು ವಾರದಲ್ಲಿ ಭೇಟಿ ಮಾಡುತ್ತೇನೆ. ಈಗಾಗಲೇ ಹಲವು ಜಿಲ್ಲೆಗೆ ಭೇಟಿ ನೀಡಲಾಗಿದೆ. ಉಳಿದ ಜಿಲ್ಲೆಗಳಿಗೆ ಈ ವಾರದಲ್ಲಿ ಭೇಟಿ ನೀಡುತ್ತೇನೆ. ಕೇಂದ್ರದಿಂದ ಬೆಳೆಗಳಿಗೆ ಬರಬೇಕಾದ ಹಣ ಬಿಡುಗಡೆಗೆ ಶೀಘ್ರವೇ ಕೇಂದ್ರದ ಸಚಿವರನ್ನ ಭೇಟಿ ಮಾಡಲಾಗುತ್ತೆ ಅಂತ ತಿಳಿಸಿದರು.

    ಸಾವಯವ ಸಿರಿ ಧಾನ್ಯ ದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಮತ್ತೆ ಸಾವಯವ ಮೇಳಕ್ಕೆ ಮುಂದಾಗಿದೆ. ಸರ್ಕಾರ ಅಂತರಾಷ್ಟ್ರೀಯ ಸಾವಯವ, ಸಿರಿಧಾನ್ಯ ಬೆಳೆ ಆಯೋಜನೆ ಮಾಡಲು ಸಿದ್ಧಮಾಡಿಕೊಂಡಿದೆ. ಜನವರಿಯಲ್ಲಿ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗುತ್ತೆ ಅಂತ ಮಾಹಿತಿ ನೀಡಿದ್ರು.

    ಕೃಷಿ ವಿಶ್ವವಿದ್ಯಾಲಯಗಳಲ್ಲಿ ಬದಲಾವಣೆ ತರಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಮಾಹಿತಿ ನೀಡಿದ ಸಚಿವರು, ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸಮನ್ವಯತೆ ಕೊರತೆ ಇದೆ. ನೇಮಕಾತಿ, ವಿದ್ಯಾರ್ಥಿಗಳ ದಾಖಲಾತಿ, ತರಗತಿ ಕುರಿತು ಕಟ್ಟು ನಿಟ್ಟಿನ ಕ್ರಮ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ. ಬೋಧಕ ಸಿಬ್ಬಂದಿ, ಇನ್ನಿತರ ನೇಮಕಾತಿಗೂ ನಿಯಮಗಳನ್ನ ಜಾರಿಗೆ ತರಲಾಗುತ್ತೆ ಅಂತ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ವೀಕೆಂಡ್ ನಲ್ಲಿ `ಕಿರಿಕ್ ಜೋಡಿ’ ಜಾಲಿ ಬೈಕ್ ರೈಡ್

    ವೀಕೆಂಡ್ ನಲ್ಲಿ `ಕಿರಿಕ್ ಜೋಡಿ’ ಜಾಲಿ ಬೈಕ್ ರೈಡ್

    ಬೆಂಗಳೂರು: ಸಾಮಾನ್ಯವಾಗಿ ಸ್ಟಾರ್ ನಟ-ನಟಿಯರ ಬಳಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಐಶಾರಾಮಿ ಕಾರುಗಳಿರುತ್ತವೆ. ಕಾರ್ ಇದ್ದಾಗ ಬೈಕ್‍ ನಲ್ಲಿ ಸುತ್ತಾಟ ಮಾಡೋದು ತುಂಬಾ ಕಮ್ಮಿ. ಆದರೆ ಈ ವೀಕೆಂಡ್ ನಲ್ಲಿ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಬೈಕ್‍ ನಲ್ಲಿ ಸ್ವಚ್ಛಂದವಾಗಿ ಬೆಂಗಳೂರಿನ ಬೀದಿಬೀದಿಗಳಲ್ಲಿ ಹಾರಾಡಿದೆ.

    ಸ್ಯಾಂಡಲ್ ವುಡ್‍ ನಲ್ಲಿ ಸದ್ಯಕ್ಕಂತೂ ಅಭಿಮಾನಿಗಳ ಹಾಟ್ ಫೆವರೇಟ್ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ. ಇವರು ಎಂಗೇಜ್ಡ್ ಕಪಲ್ ಎನ್ನುವುದು ಸೀಕ್ರೇಟ್ ಆಗಿ ಉಳಿದಿರೋ ವಿಷಯವಂತೂ ಅಲ್ಲ. ಹೀಗಾಗಿ ಸ್ಟಾರ್ ಜೋಡಿ ಈ ವೀಕೆಂಡ್ ನಲ್ಲಿ ಬೈಕ್ ರೈಡ್ ಮಾಡೋಕೆ ಮನಸ್ಸು ಮಾಡಿತ್ತು.

    ಭಾನುವಾರ ಶೂಟಿಂಗ್ ಗೆ ಗೇಟ್‍ಪಾಸ್ ಕೊಟ್ಟು `ಹಾರ್ಲೇ ಡೇವಿಡ್‍ಸನ್ ಬ್ರೇಕ್‍ ಔಟ್’ ಬೈಕ್ ಏರಿ ಔಟ್ ಹೋಗಿತ್ತು ಕಿರಿಕ್ ಜೋಡಿ. ಭಾನುವಾರ ಮಧ್ಯಾಹ್ನ ಬೆಂಗಳೂರಿನ ಬೆಸ್ಟ್ ರೆಸ್ಟೋರೆಂಟ್ ಒಂದರಲ್ಲಿ ಊಟ ಮುಗಿಸಿ ಬೀದಿ ಬೀದಿಗಳಲ್ಲಿ ಸಖತ್ ರೈಡ್ ಮಾಡಿದರು. ಅದೃಷ್ಟವಶಾತ್ ಇಬ್ಬರ ಮುಖ ಹೆಲ್ಮೆಟ್‍ ನಿಂದ ಮುಚ್ಚಿದ್ದೇ ಪುಣ್ಯ ಇಲ್ಲವಾದರೆ ರಸ್ತೆಯಲ್ಲೇ ಅಭಿಮಾನಿಗಳ ಸೆಲ್ಫಿಗಾಗಿ ಕಿರಿಕ್ ಮಾಡುತ್ತಿದ್ದರೋ ಏನೋ?

    ವೀಕೆಂಡ್ ನಲ್ಲಿ ಜಾಲಿ ರೈಡ್ ಹೋಗೋಕೆ ಕಾಯುತ್ತಿದ್ದ ಪ್ರೇಮಪಕ್ಷಿಗಳಿಗೆ ಸಿನಿಮಾ ಕೂಡ ಮುಖ್ಯ. ಈ ವಾರ ರಶ್ಮಿಕಾ ಮಂದಣ್ಣ ಅಭಿನಯದ ಅಂಜನಿಪುತ್ರ ಬಿಡುಗಡೆಯಾಗೋದಕ್ಕೆ ರೆಡಿಯಾಗಿದೆ. ಹೀಗಾಗಿ ಬೆಂಗಳೂರಿನ ಖಾಸಗಿ ಸ್ಟಾರ್ ಹೋಟೆಲ್ ನಲ್ಲಿ ಏರ್ಪಡಿಸಲಾಗಿದ್ದ ದಿಢೀರ್ ಪತ್ರಿಕಾಗೋಷ್ಠಿಗೂ ರಶ್ಮಿಕಾ ಬರಲೇಬೇಕಿತ್ತು. ಹೀಗಾಗಿ ಸ್ಟಾರ್ ಹೊಟೇಲ್ ಗೂ ರಶ್ಮಿಕಾಗೆ ಭಾವೀ ಪತಿ ರಕ್ಷಿತ್ ಶೆಟ್ಟಿ ಬೈಕ್‍ ನಲ್ಲೇ ಡ್ರಾಪ್ ಮಾಡಿದರು.

    ಬೆಂಗಳೂರು ಎಂದರೆ ಹೆವೀ ಟ್ರಾಫಿಕ್. ಕಾರ್ ಏರಿ ಹೊರಟರಂತೂ ಇನ್ನೂ ಹೆಚ್ಚು ಟೈಂ ಬೇಕೇ ಬೇಕು. ಹೀಗಾಗೇ ಭಾನುವಾರವೊಂದೆ ಫ್ರೀ ಇರುವ ರಕ್ಷಿತ್- ರಶ್ಮಿಕಾ ತಾರಾ ಜೋಡಿ ಆಗಾಗ ಬೈಕ್‍ ನಲ್ಲೇ ರೈಡ್ ಹೋಗುತ್ತಾರಂತೆ. ಹೇಳಿ ಕೇಳಿ ರಕ್ಷಿತ್‍ ಗಂತೂ ಬೈಕ್ ಎಂದರೆ ಪ್ರೀತಿ. ಇನ್ನು ಹುಡುಗಿಯರಿಗಂತೂ ಬಿಡಿ ಬೈಕ್‍ ನಲ್ಲಿ ಸುತ್ತಾಡೋದರಲ್ಲಿ ಇರೋ ಖುಷಿನೇ ಬೇರೆ.