Tag: ಪತ್ನಿ

  • ಪತ್ನಿಯ ಕೂದಲು ಕತ್ತರಿಸಿ, ಸಿಗರೇಟ್‍ನಿಂದ ಸುಟ್ಟು, ಚಾಕುವಿನಿಂದ ಹಲ್ಲೆಗೈದ!

    ಪತ್ನಿಯ ಕೂದಲು ಕತ್ತರಿಸಿ, ಸಿಗರೇಟ್‍ನಿಂದ ಸುಟ್ಟು, ಚಾಕುವಿನಿಂದ ಹಲ್ಲೆಗೈದ!

    ಬೆಳಗಾವಿ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೂದಲು ಕತ್ತರಿಸಿ, ಸಿಗರೇಟ್ ನಿಂದ ಸುಟ್ಟು ವಿಕೃತಿ ಮೆರೆದ ಘಟನೆಯೊಂದು ಬೆಳಕಿಗೆ ಬಂದಿದೆ.

    20 ವರ್ಷದ ಕಾವೇರಿ ವಾಲಿ ಎಂಬ ಮಹಿಳೆಯ ಮೇಲೆ ಪತಿ ಅರ್ಜುನ ಬಾಗರಾಯ್ ಈ ಕೃತ್ಯ ಎಸಗಿದ್ದಾನೆ. ಈತ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದ ನಿವಾಸಿಯಾಗಿದ್ದು, ಬೆಂಗಳೂರಿನ ಲೋಕಾಯುಕ್ತ ಕಚೇರಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ.

    ಕಳೆದ 6 ತಿಂಗಳಿಂದ ಬೆಂಗಳೂರಿನಲ್ಲಿ ದಂಪತಿ ನೆಲೆಸಿದ್ದರು. ಪ್ರತಿ ನಿತ್ಯವೂ ಮದ್ಯದ ಅಮಲಿನಲ್ಲಿ ಬಂದು ಪತಿ ತನ್ನ ವಿಕೃತಿ ಮೆರೆಯುತ್ತಾನೆ ಎನ್ನಲಾಗಿದೆ. ಪತ್ನಿಯ ತಲೆ ಕೂದಲು ಕತ್ತರಿಸಿ, ಸಿಗರೇಟ್ ನಿಂದ ಸುಟ್ಟು, ಚಾಕುವಿನಿಂದ ಹಲ್ಲೆಮಾಡಿ ಚಿತ್ರಹಿಂಸೆ ನೀಡಿದ್ದಾನೆ. ಅಲ್ಲದೇ ವರದಕ್ಷಿಣೆ ತರುವಂತೆ ನಿತ್ಯವೂ ಹಿಂಸೆ ನೀಡುತ್ತಿದ್ದಾನೆಂದು ಪತ್ನಿ ಕಾವೇರಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಸದ್ಯ ಪತಿಯ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪೊಲೀಸರಿಗೆ ಹೆದರಿ ಪತಿ ಅತ್ಮಹತ್ಯೆ

    ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪೊಲೀಸರಿಗೆ ಹೆದರಿ ಪತಿ ಅತ್ಮಹತ್ಯೆ

    ಬೆಂಗಳೂರು: ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಪತಿ ಪೊಲೀಸರಿಗೆ ಹೆದರಿ ಅತ್ಮಹತ್ಯೆಗೆ ಶರಣಾಗಿರೋ ಘಟನರ ಬೆಂಗಳೂರಿನ ಕೋಗಿಲು ಗ್ರಾಮದ ಶ್ರೀನಿವಾಸ್ ನಗರದಲ್ಲಿ ನಡೆದಿದೆ.

    ಯಲಹಂಕದಲ್ಲಿ ಪತ್ನಿಯೊಂದಿಗೆ ಜಗಳವಾಡಿದ್ದ ನಾಗರಾಜ್ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ದೇವಿಕಾರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ನಾಗರಾಜ್ ವಿರುದ್ದ 307ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

    ಆದ್ರೆ ಪತ್ನಿ ಸಾವನ್ನಪ್ಪಿದ್ದಾಳೆಂದು ಭಾವಿಸಿದ ಪತಿ ನಾಗರಾಜ್, ಪೊಲೀಸರ ಭಯದಿಂದ ಕೋಗಿಲು ಗ್ರಾಮದ ಶ್ರೀನಿವಾಸ್ ನಗರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

  • ಗಂಡನಿಗೆ ಅದು ಬೇಕು, ಇದು ಬೇಕು-ಕೊನೆಗೆ ಡಾಕ್ಟರ್ ಹೇಳಿದ್ದೇ ನಿಜ ಆಯ್ತು

    ಗಂಡನಿಗೆ ಅದು ಬೇಕು, ಇದು ಬೇಕು-ಕೊನೆಗೆ ಡಾಕ್ಟರ್ ಹೇಳಿದ್ದೇ ನಿಜ ಆಯ್ತು

    ಬೆಂಗಳೂರು: ಗಂಡನಿಗೆ ಸೆಕ್ಸ್ ಮಾಡಲು ಹೆಂಡತಿಯೂ ಬೇಕು ಮತ್ತು ಪರ ಪುರುಷರು ಬೇಕು. ಅಂತಹ ಪತಿಯ ವಿರುದ್ಧ ಗೃಹಿಣಿಯೊಬ್ಬರು ವನಿತಾ ಸಹಾಯವಾಣಿಗೆ ದೂರು ನೀಡಿ, ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

    ನಗರದ ಬಾಣಸವಾಡಿಯ ನಿವಾಸಿಯಾದ ಮಹಿಳೆ ಕೆಲವು ದಿನಗಳ ಹಿಂದೆ ಗುಪ್ತಾಂಗಕ್ಕೆ ಸಂಬಂಧಪಟ್ಟಂತೆ ಸಮಸ್ಯೆ ಕಾಣಿಸಿಕೊಂಡಿತ್ತು. ಯಾಕೆ ಹೀಗೆ ಆಗುತ್ತಿದೆ ಎಂದು ಡಾಕ್ಟರ್ ಬಳಿ ಹೋದಾಗ ವೈದ್ಯರು ಗಂಡನ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಕೊನೆಗೆ ಡಾಕ್ಟರ್ ಹೇಳಿದ್ದೇ ನಿಜವಾಗಿದೆ.

    ಇದನ್ನೂ ಓದಿ: ಹೋಮೊ ಸೆಕ್ಸ್ ಗೆ ಬಂದವನನ್ನು ಕೊಲೆ ಮಾಡಿದ್ದ ಜೇಬುಗಳ್ಳ ಅರೆಸ್ಟ್!

    ಡಾಕ್ಟರ್ ಹೇಳಿದ್ದೇನು?: ಆಸ್ಪತ್ರೆಯಿಂದ ಮನೆಗೆ ಬಂದ ಮಹಿಳೆ ಅನುಮಾನಗೊಂಡು ಗಂಡನನ್ನು ಫಾಲೋ ಮಾಡಿದ್ದಾರೆ. ಬಳಿಕ ಗಂಡನ ಲ್ಯಾಪ್ ಟ್ಯಾಪ್ ಪರಿಶೀಲಿಸಿದಾಗ ಆತನ ಕಾಮಪುರಾಣ ಬೆಳಕಿಗೆ ಬಂದಿದೆ. ಇದನ್ನು ಸಹಿಲಾರದ ಪತ್ನಿ ಗಂಡನನ್ನು ಪ್ರಶ್ನಿಸಿದ್ರೆ ನಾನು ಗಂಡಸರೊಂದಿಗೆ ಲೈಂಗಿಕ ಸಂಪರ್ಕ ಹೊಂದುತ್ತೇನೆ. ನಿನ್ನೊಂದಿಗೂ ಅದನ್ನೇ ಮಾಡ್ತೀನಿ ಅಂತ ಹೇಳಿದ್ದಾನೆ.

    ಇದನ್ನೂ ಓದಿ: ಹುಡುಗರೇ ಬೀ ಕೇರ್‍ಫುಲ್.. ಫೇಸ್‍ಬುಕ್‍ನಲ್ಲಿದೆ ಹೋಮೊ ಸೆಕ್ಸ್ ಪೇಜ್!

    ಗಂಡನೊಂದಿಗೆ ಸಂಸಾರ ಮಾಡ್ಬೇಕು ಅಂದುಕೊಂಡ್ರೆ ಆತ ಬೇರೊಬ್ಬ ಪುರಷನೊಂದಿಗೆ ಸಂಪರ್ಕ ಬೆಳಸಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಈಗ ಗಂಡನೊಂದಿಗೆ ಬಾಳಲು ಸಾಧ್ಯವಿಲ್ಲವೆಮದು ದೂರ ಉಳಿಯಲು ಕಾನೂನು ಹೋರಾಟ ಮಾಡುತ್ತಿದ್ದಾರೆ.

    ಇದನ್ನೂ ಓದಿ:  ಮಗನಿಗೆ ಸೆಕ್ಸ್ ಪಾಠ ಹೇಳಿಕೊಡಲು ಕಾಲ್ ಗರ್ಲ್ ನೇಮಿಸಿದ್ಳು ತಾಯಿ!

     

  • ಮಾಜಿ ಪತಿ ಈ ಒಂದು ಮಾತು ಹೇಳಿದ್ದಕ್ಕೆ ಮಾಲ್‍ನಲ್ಲೆ ಬಟ್ಟೆ ಕಳಚಿ ಬೆತ್ತಲಾದ ಮಹಿಳೆ!

    ಮಾಜಿ ಪತಿ ಈ ಒಂದು ಮಾತು ಹೇಳಿದ್ದಕ್ಕೆ ಮಾಲ್‍ನಲ್ಲೆ ಬಟ್ಟೆ ಕಳಚಿ ಬೆತ್ತಲಾದ ಮಹಿಳೆ!

    ಬೀಜಿಂಗ್: ಮಾಜಿ ಪತಿಯೊಂದಿಗೆ ವಾಗ್ವಾದ ನಡೆದು ಮಹಿಳೆ ತನ್ನ ಬಟ್ಟೆಗಳನ್ನ ಕಳಚಿ ಬೆತ್ತಲಾದ ವಿಚಿತ್ರ ಘಟನೆ ಚೀನಾದ ಜಿಯಾಂಗ್ಸು ನಲ್ಲಿ ನಡೆದಿದೆ.

    ಜಿಯಾಂಗ್ಸುನಲ್ಲಿ ವುಕ್ಸಿಯ ಮಾಲ್‍ನಲ್ಲಿ ಮಹಿಳೆ ಹಾಗೂ ಆಕೆಯ ಮಾಜಿ ಪತಿ ಅನಿರೀಕ್ಷಿತವಾಗಿ ಭೇಟಿಯಾಗಿದ್ದಾರೆ. ಭೇಟಿ ವೇಳೆ ಇಬ್ಬರ ಮಧ್ಯೆ ಶಾಪಿಂಗ್ ಮಾಲ್‍ ನಲ್ಲೆ ವಾಗ್ವಾದ ನಡೆದಿದೆ. ಇದೇ ವೇಳೆ ಮಾಜಿ ಪತಿ, ನೀನು ಬಳಸುತ್ತಿರುವ ಮೊಬೈಲ್ ಫೋನ್ ನಾನು ಕೊಡಿಸಿದ್ದು ಎಂದು ಹೇಳಿದ್ದಾನೆ. ಆಗ ಕುಪಿತಗೊಂಡ ಮಹಿಳೆ ಮೊಬೈಲ್ ಫೋನನ್ನು ನೆಲದ ಮೇಲೆ ಎಸೆದಿದ್ದಾಳೆ.

    ಇಷ್ಟಕ್ಕೆ ಸುಮ್ಮನಾಗದ ಮಾಜಿ ಪತಿರಾಯ ನೀನು ಹಾಕಿರುವ ಬಟ್ಟೆ ನನ್ನ ಹಣದಿಂದ ಖರೀದಿಸಿರುವುದು ಎಂದು ಛೇಡಿಸಿದ್ದಾನೆ. ಆಗ ಕೋಪಗೊಂಡ ಮಹಿಳೆ ಎಲ್ಲರ ಎದುರೇ ಮಾಲ್‍ನಲ್ಲೆ ಬಟ್ಟೆಯನ್ನೆಲ್ಲ ಬಿಚ್ಚಿ ನಿರ್ವಸ್ತ್ರಳಾಗಿದ್ದಾಳೆ. ಮಾಜಿ ಪತ್ನಿಯ ವರ್ತನೆ ಕಂಡು ದಂಗಾದ ಆತ ಆಕೆಯನ್ನು ತಡೆಯಲು ಯತ್ನಿಸಿದನಾದ್ರೂ ಯಾವುದೇ ಪ್ರಯೋಜನವಾಗಲಿಲ್ಲ.

    ತದನಂತರ ಮಹಿಳೆ ಪೂರ್ಣ ನಗ್ನಳಾಗಿ ನಿಂತುರುವುದನ್ನ ಕಾಣಬಹುದು. ಕೊನೆಗೆ ಅಲ್ಲಿದ್ದ ಕೆಲವರು ಆ ಮಹಿಳೆಯ ಸಹಾಯಕ್ಕೆ ಮುಂದಾಗಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.youtube.com/watch?v=QZ1uG7sTDT0

  • ಕುತ್ತಿಗೆಗೆ ಹಗ್ಗ ಬಿಗಿದು ಪತ್ನಿಯ ಕೊಲೆಗೈದ ಪತಿ!- ಮುಂಜಾನೆ ಎದ್ದು ಅಮ್ಮನ ಕುತ್ತಿಗೆಯಲ್ಲಿ ಹಗ್ಗ ನೋಡಿ ಬೆಚ್ಚಿಬಿದ್ರು ಮಕ್ಕಳು

    ಕುತ್ತಿಗೆಗೆ ಹಗ್ಗ ಬಿಗಿದು ಪತ್ನಿಯ ಕೊಲೆಗೈದ ಪತಿ!- ಮುಂಜಾನೆ ಎದ್ದು ಅಮ್ಮನ ಕುತ್ತಿಗೆಯಲ್ಲಿ ಹಗ್ಗ ನೋಡಿ ಬೆಚ್ಚಿಬಿದ್ರು ಮಕ್ಕಳು

    ಬೆಂಗಳೂರು: ಪತಿಯೇ ಪತ್ನಿಯ ಕುತ್ತಿಗೆಗೆ ಹಗ್ಗ ಬಿಗಿದು ಬರ್ಬರವಾಗಿ ಹತ್ಯೆಗೈದ ಘಟನೆಯೊಂದು ನಡೆದಿದ್ದು, ಇಂದು ಮುಂಜಾನೆ ಬೆಳಕಿಗೆ ಬಂದಿದೆ.

    ಈ ಘಟನೆ ಶ್ರೀರಾಂಪುರದಲ್ಲಿ ನಡೆದಿದ್ದು, 45 ವರ್ಷದ ಜಾನಕಿ ತನ್ನ ಪತಿ ಚಂದ್ರಶೇಖರ್ ಎಂಬಾತನಿಂದಲೇ ಕೊಲೆಯಾಗಿದ್ದಾರೆ. ಈ ದಂಪತಿಗೆ 2 ಹೆಣ್ಣು, 4 ಗಂಡು ಮಕ್ಕಳಿದ್ದಾರೆ.

    ಬೆಳಕಿಗೆ ಬಂದಿದ್ದು ಹೇಗೆ?: ಇಂದು ಮುಂಜಾನೆ ಸುಮಾರು 4 ಗಂಟೆ ಸುಮಾರಿಗೆ ಹಸಿವಿನಿಂದ ಮಗು ಎದ್ದಿದೆ. ಎದ್ದ ವೇಳೆ ತಾಯಿಯ ಬಳಿ ತೆರಳಿ ಕರೆದು ಎಬ್ಬಿಸತೊಡಗಿದೆ. ಆದ್ರೆ ತಾಯಿ ಏಳದ ಹಿನ್ನಲೆ ಕಂದಮ್ಮ ತನ್ನ ಅಕ್ಕನ ಬಳಿ ತೆರಳಿದೆ. ಅಕ್ಕ ಎದ್ದು ತಾಯಿ ಬಳಿ ತೆರಳಿದಾಗ ಕತ್ತಿಗೆ ಹಗ್ಗ ಸುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಹಗ್ಗ ತೆಗೆದು ತಾಯಿಯನ್ನು ಎಬ್ಬಿಸಲು ಮುಂದಾದ ಮಕ್ಕಳಿಗೆ ತಾಯಿ ಮೃತಪಟ್ಟಿರುವುದು ಅರಿವಿಗೆ ಬಂದಿದೆ. ಮಕ್ಕಳು ಕೂಡಲೇ ತಮ್ಮ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ.

    ಚಂದ್ರಶೇಖರ್ ಹಾಗೂ ಜ್ಯೋತಿ ಮದುವೆಯಾಗಿ 15 ವರ್ಷಗಳಾಗಿವೆ. ಕಳೆದ ನಾಲ್ಕು ವರ್ಷದಿಂದ ಇಬ್ಬರ ನಡುವೆ ಜಗಳವಾಗಿ ಕೊರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಇಬ್ಬರು ದೂರವಾಗಿದ್ದವರು ಕೆಲದಿನಗಳ ಹಿಂದೆ ಒಟ್ಟಿಗೆ ಇದ್ದರು. ಸೋಮವಾರ ತಡರಾತ್ರಿ ನಡೆದ ಕ್ಷುಲ್ಲಕ ವಿಚಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಆರೋಪಿ ಚಂದ್ರಶೇಖರ್‍ಗೆ ಮತ್ತೊಂದು ಮಹಿಳೆ ಜೊತೆ ಅನೈತಿಕ ಸಂಬಂಧವಿರುವ ಬಗ್ಗೆಯೂ ಆರೋಪ ಕೇಳಿಬರುತ್ತಿದೆ.

    ಸದ್ಯ ಮೃತ ಜಾನಕಿ ಶವವನ್ನು ಕೆಸಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ- ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಪತಿ

    ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ- ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಪತಿ

    ಬೆಂಗಳೂರು: ವರದಕ್ಷಿಣೆಗಾಗಿ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಯಶವಂತಪುರದ ತ್ರಿವೇಣಿ ನಗರದಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಹೆಬ್ಬಾಳದ ನಿವಾಸಿಗಳಾದ ಸುನಂದ ಮತ್ತು ಶಂಕರ್ ದಂಪತಿಯ ಮಗಳು ಚಂದ್ರಿಕಾ ಎಂಬಾಕೆಯನ್ನು ರಾಜೇಶ್ ಎಂಬಾತನ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆ ಆದಾಗಿನಿಂದಲೂ ರಾಜೇಶ್ ವರದಕ್ಷಿಣೆ ತರುವಂತೆ ಪತ್ನಿಗೆ ನಿತ್ಯವೂ ಕಿರುಕುಳ ಹಾಗೂ ಚಿತ್ರ ಹಿಂಸೆ ನೀಡುತ್ತಿದ್ದನು.

    ನಿನ್ನೆ ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಅಂತಾ ಚಂದ್ರಿಕಾ ಪೋಷಕರು ಆರೋಪಿಸುತ್ತಿದ್ದಾರೆ.

    ಸದ್ಯ ಚಂದ್ರಕಾರ ಮೃತದೇಹ ಖಾಸಗಿ ಆಸ್ಪತ್ರೆಯೊಂದರಲ್ಲಿ ಇರಿಸಲಾಗಿದೆ. ಮೃತ ಚಂದ್ರಿಕಾಗೆ ಒಂದು ವರ್ಷದ ಗಂಡು ಮಗು ಇದೆ. ಗಂಡು ಮಗುವನ್ನು ಲೆಕ್ಕಿಸದೇ ಗಂಡ, ಅತ್ತೆ, ಮಾವ ಸೇರಿ ಕೊಲೆ ಮಾಡಿದ್ದಾರೆಂದು ಪೋಷಕರ ಆರೋಪಿಸುತ್ತಿದ್ದಾರೆ. ಅಲ್ಲದೇ 25 ಲಕ್ಷ ವರದಕ್ಷಿಣೆ ತರುವಂತೆ ಪತಿ ರಾಜೇಶ್ ಕಿರುಕುಳ ನೀಡ್ತಾ ಇದ್ದ ಅಂತ ಪೋಷಕರು ದೂರಿದ್ದಾರೆ.

  • ಕೊಡಗಿನ ಹಾಕಿ ಆಟಗಾರನನ್ನು 7 ಬಾರಿ ಚಾಕುವಿನಿಂದ ಇರಿದು ಕೊಲೆಗೈದ 2ನೇ ಪತ್ನಿ!

    ಕೊಡಗಿನ ಹಾಕಿ ಆಟಗಾರನನ್ನು 7 ಬಾರಿ ಚಾಕುವಿನಿಂದ ಇರಿದು ಕೊಲೆಗೈದ 2ನೇ ಪತ್ನಿ!

    ಮುಂಬೈ: ಕೊಡಗು ಮೂಲದ ಮಾಜಿ ಹಾಕಿ ಆಟಗಾರ ಅಪೈಯ್ಯ ಚೆನಂದ ಅವರ ಪತ್ನಿಯಿಂದಲೇ ಕೊಲೆಗೀಡಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.

    ಕುಟುಂಬ ಕಲಹದಿಂದಾಗಿ 45 ವರ್ಷದ ಪತ್ನಿ ಅಮಿತಾ ಏಳು ಬಾರಿ ಚಾಕುವಿನಿಂದ ಇರಿದು 52 ವರ್ಷದ ಅಪೈಯ್ಯ ಅವರನ್ನು ಕೊಲೆಮಾಡಿದ್ದಾರೆ. ನಂತರ ತಾನೂ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅಪೈಯ್ಯ ಮಲಾಡದ ಕಚ್‍ಪಡ ಪ್ರದೇಶದ ಪ್ಲುಶ್ ಸೊಸೈಟಿಯ 27ನೇ ಮಹಡಿಯಲ್ಲಿ ತನ್ನ 23 ವರ್ಷದ ಮಗ ಗಣಪತಿ, 15 ವರ್ಷದ ಮಗಳು ಮತ್ತು ಪತ್ನಿಯೊಂದಿಗೆ ನೆಲೆಸಿದ್ದರು.

    ಪಾರ್ಟಿ ಮಾಡುತ್ತಿದ್ದರು:
    ಶನಿವಾರ ಮಧ್ಯಾಹ್ನ ಮಕ್ಕಳು ಹೊರಗೆ ಹೋಗಿದ್ದಾಗ, ಮನೆಯಲ್ಲಿ ಅಪೈಯ್ಯ ತನ್ನ ಪತ್ನಿಯೊಂದಿಗೆ ಮದ್ಯಪಾನ ಸೇವಿಸುತ್ತಾ ಕಾಲಕಳೆದಿದ್ದಾರೆ. ಆ ವೇಳೆಯಲ್ಲಿ ಯಾವುದೋ ವಿಷಯಕ್ಕೆ ದಂಪತಿಗಳಿಬ್ಬರು ವಾದಕ್ಕಿಳಿದಿದ್ದಾರೆ. ಇದು ವಿಕೋಪಕ್ಕೆ ಹೋಗಿ ಕೋಪಗೊಂಡ ಅಮಿತಾ ಅಡುಗೆ ಮನೆಗೆ ತೆರಳಿ, ಚಾಕು ತಂದು ಗಂಡನಿಗೆ ಏಳು ಬಾರಿ ಇರಿದು ಕೊಲೆಮಾಡಿ ನಂತರ ತಾನು ಇರಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಬಗ್ಗೆ ಅಪೈಯ್ಯ ಮಗ ಗಣಪತಿ ಮಲಾಡ್ ಪೊಲೀಸ್ ಸ್ಟೇಷನ್‍ಗೆ ಹೋಗಿ ತಾಯಿ ಅಮಿತಾ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಅಪೈಯ್ಯರ ಮಗ ಹಾಗೂ ಮಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅಮಿತಾ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ ಮೇಲೆ ಅವರನ್ನು ಬಂಧಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಅಮಿತಾ 2ನೇ ಪತ್ನಿ:
    ಅಮಿತಾ ಅವರು ಅಪೈಯ್ಯ ಎರಡನೇ ಪತ್ನಿಯಾಗಿದ್ದು, ಮಗ ಗಣಪತಿ ಅಪ್ಪಯ್ಯರ ಮೊದಲ ಪತ್ನಿಯ ಮಗನಾಗಿದ್ದಾರೆ. ಈ ವಿಚಾರಕ್ಕೆ ದಂಪತಿಗಳು ಆಗಾಗ ಜಗಳವಾಡುತ್ತಿದ್ದರು. ಮುಂಗೋಪಿಯಾಗಿದ್ದ ಅಮಿತಾ ಅವರ ದುಡುಕಿನಿಂದಲೇ ಕೊಲೆ ಮಾಡಿದ್ದಾರೆ ಎಂದು ನೆರೆಹೊರೆಯವರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಅಪೈಯ್ಯ ಚೆನಂದ್ ಏರ್ ಇಂಡಿಯಾ ಪರ ಆಟವಾಡಿದ್ದಾರೆ. ಟಾಟಾ ಮತ್ತು ಬಾಂಬೆ ಹಾಕಿ ತಂಡಗಳಲ್ಲಿ ಹಲವಾರು ಬಾರಿ ಭಾಗವಹಿಸಿದ್ದಾರೆ. ಭಾರತದ ಹಾಕಿ ತಂಡದ ಮಾಜಿ ಕೋಚ್ ಮತ್ತು ಅಪ್ಪಯ್ಯ ಜೊತೆ ಸ್ಪರ್ಧಿಸಿದ್ದ ಕ್ಲಾರೆನ್ಸ್ ಲೊಬೊ ಈ ಬಗ್ಗೆ ಪ್ರತಿಕ್ರಿಯಿಸಿ, ಈ ಘಟನೆಯಿಂದ ನನಗೆ ಶಾಕ್ ಆಗಿದೆ. ಅವರು ಶಕ್ತಿಯುತ ಆಟಗಾರರಾಗಿದ್ದು ಮೈದಾನದಲ್ಲಿ ಆಕರ್ಷಕ ಪ್ರದರ್ಶನ ತೋರುತ್ತಿದ್ದರು ಎಂದು ನೆನಪು ಮಾಡಿಕೊಂಡರು.

  • ಮಂಗಳೂರು: ಪತ್ನಿಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆಗೈದ ಪತಿ!

    ಮಂಗಳೂರು: ಪತ್ನಿಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆಗೈದ ಪತಿ!

    ಮಂಗಳೂರು: ಪತ್ನಿಯ ಶೀಲ ಶಂಕಿಸಿದ ಪತಿ ಮಹಾಶಯನೊಬ್ಬ ಆಕೆಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ.

    ಬ್ಲೋಸಮ್ ಲೋಬೋ (31) ಕೊಲೆಯಾದ ಮಹಿಳೆಯಾಗಿದ್ದು, ಗಂಡ ವಿಲಿಯಮ್ ಲೋಬೋ (35) ಎಂಬಾತನೇ ಈ ಕೃತ್ಯ ಎಸಗಿದ್ದಾನೆ.

    ಪತ್ನಿಗೆ ಅನೈತಿಕ ಸಂಬಂಧವಿರುವ ಬಗ್ಗೆ ಹಲವು ಬಾರಿ ಕಂಡಿದ್ದ ಪತಿ ವಿಲಿಯಮ್ ಈ ಬಗ್ಗೆ ಪತ್ನಿ ಮೇಲೆ ಕೋಪದಿಂದಿದ್ದ. ಶುಕ್ರವಾರವೂ ಇದೇ ವಿಚಾರದ ಬಗ್ಗೆ ಪತ್ನಿ ಜೊತೆ ಪತಿ ವಿಲಿಯಮ್ ಕೇಳಿದ್ದಾನೆ. ಆದ್ರೆ ಆಕೆಯ ಪ್ರತಿಕ್ರಿಯೆಯಿಂದ ಮತ್ತಷ್ಟು ಕೋಪಗೊಂಡ ವಿಲಿಯಮ್ ತಡರಾತ್ರಿ ಆಕೆಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.

    ಸದ್ಯ ಮಹಿಳೆಯ ಶವವನ್ನು ವೆಲ್ ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಆರೋಪಿ ಗಂಡನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ, ಘಟನೆ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.