Tag: ಪತ್ನಿ

  • ಊಟ ತಡವಾಗಿ ತಂದ ಪತ್ನಿಯನ್ನ ಗಡಾರಿಯಿಂದ ಇರಿದು ಕೊಂದೇ ಬಿಟ್ಟ!

    ಊಟ ತಡವಾಗಿ ತಂದ ಪತ್ನಿಯನ್ನ ಗಡಾರಿಯಿಂದ ಇರಿದು ಕೊಂದೇ ಬಿಟ್ಟ!

    ಚಿಕ್ಕಬಳ್ಳಾಪುರ: ಹಳೆಯ ಮನೆಯನ್ನ ಕೆಡವುತ್ತಿದ್ದ ವೇಳೆ ಊಟ ತಡವಾಗಿ ತಂದಿದ್ದಕ್ಕೆ ಕೈಯಲ್ಲಿದ್ದ ಕಬ್ಬಿಣ ಗಡಾರಿಯಿಂದಲೇ ಕುತ್ತಿಗೆಗೆ ಇರಿದು ಗಂಡನೇ ಹೆಂಡತಿಯನ್ನ ಕೊಲೆ ಮಾಡಿರುವ ಭೀಕರ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಎಮ್ ಗುಂಡ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    26 ವರ್ಷದ ಅಮೃತಾ ಕೊಲೆಯಾದ ಮಹಿಳೆ. 30 ವರ್ಷದ ನಾಗರಾಜ್ ಕೊಲೆ ಮಾಡಿದ ಪಾಪಿ ಪತಿ. ಅಮೃತಾಳನ್ನ ಪ್ರೀತಿಸಿ ಮದುವೆಯಾಗಿದ್ದ ನಾಗರಾಜ್ ಪತ್ನಿಯ ಮನೆಯಲ್ಲೇ ವಾಸವಾಗಿದ್ದನು. ಇನ್ನೂ ಇಬ್ಬರ ಸುಖ ದಾಂಪತ್ಯಕ್ಕೆ ಸಾಕ್ಷಿ 6 ವರ್ಷದ ಹೆಣ್ಣು ಮಗಳು ಹಾಗೂ 3 ವರ್ಷದ ಗಂಡು ಮಗನಿದ್ದಾನೆ.

    ಮದುವೆಯಾದ ಹೊಸತರಲ್ಲಿ ಚೆನ್ನಾಗಿಯೇ ಇದ್ದ ನಾಗರಾಜ್ ಸಣ್ಣ ಪುಟ್ಟ ವಿಚಾರಕ್ಕೂ ಪದೇ ಪದೇ ಕ್ಯಾತೆ ತೆಗೆದು ಅಮೃತಾ ಜೊತೆ ಜಗಳ ಮಾಡುತ್ತಿದ್ದನು. ಇಂದು ಸರ್ಕಾರದಿಂದ ನೂತನ ಮನೆ ನಿರ್ಮಾಣಕ್ಕೆ ಹಣ ಮಂಜೂರಾದ ಕಾರಣ ಹಳೆಯ ಮನೆ ಕೆಡವಿ ಅದನ್ನ ಸ್ಬಚ್ಛಗೊಳಿಸಿ ಹೊಸ ಮನೆ ಕಟ್ಟಲು ನಿವೇಶನ ಅಣಿಗೊಳಿಸುತ್ತಿದ್ದನು. ಆದರೆ ಮನೆಯಿಂದ ಪತ್ನಿ ಅಮೃತಾ ಊಟ ತರೋದು ಸ್ವಲ್ಪ ತಡವಾಗಿದೆ.

    ಊಟ ತಡವಾಗಿ ತಂದಿದ್ದು ಯಾಕೆ ಅಮೃತ ನಾಗರಾಜ್ ಜೊತೆ ಜಗಳ ಆರಂಭಿಸಿದ್ದಾನೆ. ಕೊನೆಗೆ ಕೈಯಲ್ಲಿದ್ದ ಗಡಾರಿಯಿಂದಲೇ ಅಮೃತಾರ ಕುತ್ತಿಗೆಗೆ ಇರಿದಿದ್ದಾನೆ. ಅಮೃತಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆ ಬಳಿಕ ಪತಿ ನಾಗರಾಜ್ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ನಾಪತ್ತೆಯಾಗಿರುವ ಆರೋಪಿ ನಾಗರಾಜ್ ನ ಬಲೆಗಾಗಿ ವಿಶೇಷ ಬಲೆ ಬೀಸಿದ್ದಾರೆ.

  • ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ

    ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ

    ಬೆಂಗಳೂರು: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರಿನ ಎಚ್‍ಎಎಲ್ ಬಳಿಯಲ್ಲಿ ಈ ಘಟನೆ ನಡೆದಿದ್ದು, ಅಂಥೋಣಿ ಆತ್ಮಹತ್ಯೆ ಮಾಡಿಕೊಂಡ ಪತಿ.

    ಪತ್ನಿ ಪ್ರಭಾ ಅನೈತಿಕ ಸಂಬಂಧ ಹೊಂದಿದ್ದಳು. ಪತಿ ಅಂಥೋಣಿ ಕೆಲಸಕ್ಕೆಂದು ಹೊರಗಡೆ ಹೋದಾಗ ಪಕ್ಕದ ಮನೆಯವನ ಜೊತೆ ಸಂಬಂಧ ಬೆಳೆಸುತ್ತಿದ್ದಳು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾನೆ.

    ಒಂದು ದಿನ ಇದ್ದಕ್ಕಿದ್ದಂತೆ ಗಂಡ ಮನೆಗೆ ಬಂದಾಗ ರೆಡ್ ಹ್ಯಾಂಡ್ ಆಗಿ ಪ್ರಭಾ ಸಿಕ್ಕಿಬಿದ್ದಿದ್ದಳು. ಹೀಗೆ ಸಿಕ್ಕಿಬಿದ್ದ ಬಳಿಕ ಪತಿ ಅಂಥೋಣಿ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ನಂತ್ರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೆಂಡ್ತಿಗೆ ಪತ್ರ ಬರೆದಿಟ್ಟು ಕಾರಿನೊಳಗೇ ಶೂಟೌಟ್ ಮಾಡ್ಕೊಂಡ..!

    ಹೆಂಡ್ತಿಗೆ ಪತ್ರ ಬರೆದಿಟ್ಟು ಕಾರಿನೊಳಗೇ ಶೂಟೌಟ್ ಮಾಡ್ಕೊಂಡ..!

    ಥಾಣೆ: ಪತ್ನಿಗೆ ಪತ್ರ ಬರೆದಿಟ್ಟು 36 ವರ್ಷದ ವ್ಯಕ್ತಿಯೊಬ್ಬರು ತನ್ನ ಕಾರೊಳಗೆಯೇ ಶೂಟೌಟ್ ಮಾಡ್ಕೊಂಡ ಆಘಾತಕಾರಿ ಘಟನೆಯೊಂದು ಥಾಣೆಯಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ಸಂಜೆ ನಡೆದಿದೆ. ಶೂಟೌಟ್ ಮಾಡ್ಕೊಂಡ ವ್ಯಕ್ತಿಯನ್ನು ಸಂಕೇತ್ ಹನುಮಂತ್ ಜಾಧವ್ ಎಂದು ಗುರುತಿಸಲಾಗಿದ್ದು, ಇವರು ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದರು. ಲೈಸನ್ಸ್ ಹೊಂದಿರುವ ಗನ್ ನಿಂದಲೇ ಜಾಧವ್ ಈ ಕೃತ್ಯ ಎಸಗಿಕೊಂಡಿದ್ದಾರೆ.

    ಏನಿದು ಪ್ರಕರಣ?: ಭಾನುವಾರ ಮಧ್ಯಾಹ್ನದ ಬಳಿಕ ಜಾಧವ್ ಕೆಲಸವಿದೆ ಅಂತ ತನ್ನ ಕಾರು ತೆಗೆದುಕೊಂಡು ಮನೆಯಿಂದ ಹೊರಟಿದ್ದರು. ಅಂತೆಯೇ ಮೀರಾ ರಸ್ತೆಯಿಂದ ನಂಗ್ಲಾ ಚೌಕಿ ಮಧ್ಯೆ ರಸ್ತೆ ಪಕ್ಕ ಜಾಧವ್ ಒಳಗಡೆಯಿಂದ ಲಾಕ್ ಮಾಡಿ ಕಾರು ನಿಲ್ಲಿಸಿದ್ದಾರೆ. ಬಳಿಕ ತನ್ನ ಬಳಿಯಿದ್ದ ಗನ್ ನಿಂದ ಎದೆಗೆ ಗುರಿಯಿಟ್ಟುಕೊಂಡಿದ್ದಾರೆ.

    ರಸ್ತೆ ಬದಿಯಲ್ಲಿ ತುಂಬಾ ಹೊತ್ತು ಕಾರು ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಕಾರಿನ ಹಿಂದಿನ ಗ್ಲಾಸನ್ನು ಒಡೆದಿದ್ದಾರೆ. ಈ ವೇಳೆ ಕಾರಿನ ಒಳಗೆ ಡ್ರೈವರ್ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಅಲ್ಲದೇ ವ್ಯಕ್ತಿಯ ಕೈಯಲ್ಲಿ ಗನ್ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ವ್ಯಕ್ತಿ ತನ್ನ ಕೈಯಿಂದ್ಲೇ ಶೂಟ್ ಮಾಡ್ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಕಂಟ್ರಿವಡಾವಿಲ್ಲ ಠಾಣೆಯ ಪೊಲೀಸರು ಶಂಕಿಸಿದ್ದಾರೆ.

    ಪತ್ರದಲ್ಲೇನಿದೆ?: ಮೃತ ವ್ಯಕ್ತಿ ಕುಳಿತಿದ್ದ ಪಕ್ಕದಲ್ಲಿಯೇ ಡೆತ್ ನೋಟ್ ಬಿದ್ದಿದ್ದು ಅದರಲ್ಲಿ, `ಪ್ರತಿ ದಿನದ ಕೆಲಸದಿಂದ ಬಳಲಿದ್ದೇನೆ.. ಕೆಲಸದ ಒತ್ತಡದಿಂದ ನನ್ನ ಖಾಸಗಿ ಜೀವನಕ್ಕೆ ಸಮಯ ಸಿಗುತ್ತಿಲ್ಲ.. ನಿನ್ನೊಂದಿಗೆ ಕಾಲ ಕಳೆಯಲು ನನಗೂ ಸಮಯವಿಲ್ಲ. ಹೀಗಾಗಿ ತುಂಬಾ ನೊಂದಿದ್ದೇನೆ.. ಅಪಾರ್ಥ ಮಾಡಿಕೊಳ್ಳಬೇಡ.. ಕ್ಷಮಿಸಿಬಿಡು ನನ್ನ ಜೀವನವನ್ನು ಕೊನೆಯಾಗಿಸುತ್ತಿದ್ದೇನೆ’ ಅಂತ ಬರೆದಿದ್ದರು.

    ಥಾಣೆ ಪುರಸಭಾ ಕಾರ್ಪೋರೇಷನ್ ನಲ್ಲಿ ಗುತ್ತಿಗೆದಾರನಾಗಿ ಜಾಧವ್ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು. 8 ವರ್ಷದ ಹಿಂದೆ ಮದುವೆಯಾಗಿರೋ ಜಾಧವ್ ಅವರಿಗೆ 5ವರ್ಷದ ಮಗನಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

  • ಕಟ್ಟಿಕೊಂಡವನು 4 ವರ್ಷದಿಂದ ಮಲಗದ್ದಕ್ಕೆ ಕೊಲೆ ಮಾಡ್ಸಿದ್ಳು!

    ಕಟ್ಟಿಕೊಂಡವನು 4 ವರ್ಷದಿಂದ ಮಲಗದ್ದಕ್ಕೆ ಕೊಲೆ ಮಾಡ್ಸಿದ್ಳು!

    ಬೆಂಗಳೂರು: ಮದುವೆಯಾದ ಗಂಡ ತನ್ನ ಜೊತೆಗೆ 4 ವರ್ಷದಿಂದ ಮಲಗದೇ ಇದ್ದಿದ್ದಕ್ಕೆ ಆತನನ್ನೇ ಕೊಲೆ ಮಾಡಿದ್ದ ಪತ್ನಿ ಈಗ ಅರೆಸ್ಟ್ ಆಗಿದ್ದಾಳೆ.

    ಪತಿ ಮಧುಸೂಧನ್ ಕೊಲೆ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಪತ್ನಿ ನೀಲಾಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಈ ಕೃತ್ಯಕ್ಕೆ ಸಹಕಾರ ನೀಡಿದ ಆರೋಪದಡಿ ಪ್ರದೀಪ್, ರಂಜಿತ್, ಹರಿಪ್ರಸಾದ್ ರನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ನೀಲಾಳಿಗೆ ಪ್ರದೀಪ್ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಗಂಡ ಮಧುಸೂಧನ್ ಮುಗಿಸಿಲು ಪ್ಲಾನ್ ಮಾಡಿದ್ದಳು. ಅದರಂತೆ ಅಕ್ಟೋಬರ್ 12 ರ ರಾತ್ರಿ ಮಧುಸೂಧನ್ ನನ್ನ ಕ್ಯಾಂಟರ್ ನಲ್ಲಿ ಪ್ರದೀಪ್ ಕರೆದೊಯ್ದಿದ್ದ. ದಾರಿ ಮಧ್ಯೆ ಸ್ನೇಹಿತರಾದ ರಂಜಿತ್ ಮತ್ತು ಹರಿಪ್ರಸಾದನನ್ನು ಕ್ಯಾಂಟರ್ ಗೆ ಹತ್ತಿಸಿಕೊಂಡಿದ್ದ ಪ್ರದೀಪ್ ಮಧುಸೂಧನ್ ಗೆ ಚೆನ್ನಾಗಿ ಮದ್ಯ ಕುಡಿಸಿದ್ದ.

    ರಾಜ್ ಕುಮಾರ್ ಸಮಾಧಿ ಬಳಿ ಕ್ಯಾಂಟರ್ ನಿಲ್ಲಿಸಿ ಪ್ರದೀಪ್ ಎಲ್ಲರ ಜೊತೆ ಮಲಗೋಣ ಎಂದು ಹೇಳಿದ್ದಾನೆ. ಮಧುಸೂಧನ್ ಮಲಗುತ್ತಿದ್ದ ಹಾಗೆ ಆರೋಪಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಕೆಂಗೇರಿ ಬಳಿಯ ರಾಜಕಾಲುವೆಗೆ ಶವ ಎಸೆದು ಪರಾರಿಯಾಗಿದ್ದರು.

    ಪ್ರಿಯತಮೆ ನೀಲಾಳಿಗೆ ಪ್ರದೀಪ್ ನಿನ್ನ ಗಂಡನನ್ನು ಕೊಲೆ ಮಾಡಿದ್ದೇವೆ ಎಂದು ಕರೆ ಮಾಡಿ ವಿಚಾರ ತಿಳಿಸಿದ್ದ. ಮರುದಿನ ರಾಜಗೋಪಾಲನಗರ ಪೊಲೀಸ್ ಠಾಣೆಗೆ ಹೋಗಿದ್ದ ನೀಲಾ ಗಂಡ ಕಾಣಿಸುತ್ತಿಲ್ಲ ಎಂದು ನಾಪತ್ತೆ ದೂರು ನೀಡಿದ್ದಳು. ಆರೋಪಿಗಳ ಜಾಡು ಹಿಡಿದ ಪೊಲೀಸರು ಈಗ ನಾಲ್ವರನ್ನು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ನನ್ನ ಗಂಡ ನಾಲ್ಕು ವರ್ಷದಿಂದ ಜೊತೆಯಲ್ಲಿ ಮಲಗುತ್ತಿರಲಿಲ್ಲ. ಹೀಗಾಗಿ ಕೊಲೆ ಮಾಡಿಸಿದ್ದೇನೆ ಎಂದು ನೀಲಾ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.

  • 3ನೇ ಮದ್ವೆಗೆ ಮುಂದಾದ ಪತಿ – ಗಂಡ ಬೇಕು ಅಂತ ಹುಡಕಾಟದಲ್ಲಿ ಇಬ್ಬರು ಹೆಂಡ್ತಿಯರು

    3ನೇ ಮದ್ವೆಗೆ ಮುಂದಾದ ಪತಿ – ಗಂಡ ಬೇಕು ಅಂತ ಹುಡಕಾಟದಲ್ಲಿ ಇಬ್ಬರು ಹೆಂಡ್ತಿಯರು

    ಕೋಲಾರ: ಪತಿ ಮಹಾಶಯನೊಬ್ಬ ಇಬ್ಬರಿಗೆ ಕೈ ಕೊಟ್ಟು ಮೂರನೇ ಮದುವೆಗೆ ಮುಂದಾಗಿದ್ದು, ಗಂಡ ಬೇಕು ಅಂತ ಇಬ್ಬರು ಹೆಂಡತಿಯರು ಹುಡಕಾಟ ನಡೆಸುತ್ತಿರೋ ಘಟನೆ ಕೋಲಾರದಲ್ಲಿ ನಡೆದಿದೆ.

    ಬೆಂಗಳೂರು ಮೂಲದ ದಿವ್ಯಾ ಹಾಗೂ ಚಿತ್ರದುರ್ಗ ಮೂಲದ ಸುಮಾ ಮೋಸ ಹೋದ ಮಹಿಳೆಯರು. ತುಮಕೂರು ಜಿಲ್ಲೆ ಮಧುಗಿರಿ ಮೂಲದ ತಿಮ್ಮರಾಜು ಮೋಸ ಮಾಡಿದ ಪತಿ. 2006ರಲ್ಲಿ ಕೋಲಾರದ ಜಾಲಪ್ಪ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಸೂಪರ್‍ವೈಸರ್ ಆಗಿದ್ದ ವೇಳೆ ತಿಮ್ಮರಾಜುಗೆ ಸುಮಾ ಜೊತೆ ಮದುವೆಯಾಗಿತ್ತು. ಆದ್ರೆ 2016ರಲ್ಲಿ ದಿವ್ಯಾ ಜೊತೆ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ಆಕೆಯನ್ನೂ ಬಿಟ್ಟಿದ್ದಾನೆ.

    ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ತಿಮ್ಮರಾಜು ಕಾರ್ಯ ನಿರ್ವಹಿಸುತ್ತಿದ್ದಾನೆ. ಆದ್ರೆ ಇದೀಗ ಮತ್ತೊಂದು ಮದುವೆಗೆ ಆತ ಮುಂದಾಗಿದ್ದಾನೆ ಎಂದು ಇಬ್ಬರು ಪತ್ನಿಯರು ಆರೋಪ ಮಾಡಿದ್ದಾರೆ. ತಿಮ್ಮರಾಜು ವಿರುದ್ಧ ಇಬ್ಬರು ಪತ್ನಿಯರು ಕಾನೂನು ಹೋರಾಟಕ್ಕೆ ಮುಂದಾಗಿ ಕೋಲಾರ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ನನ್ನ ಜೊತೆ 8 ವರ್ಷ ಸಂಸಾರ ಮಾಡಿ, ಹೆರಿಗೆ ಸಂದರ್ಭದಲ್ಲಿ ತವರು ಮನೆಗೆ ಬಿಟ್ಟು ಹೋದ ಗಂಡ ಇನ್ನೂ ಬಂದಿಲ್ಲ ಎಂದು ಮೊದಲನೇ ಪತ್ನಿ ಸುಮಾ ಹೇಳಿದ್ದಾರೆ.

    ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡ್ತಿದ್ದ ತಿಮ್ಮರಾಜು 8 ತಿಂಗಳಿನಿಂದ ನೆಟ್‍ವರ್ಕ್ ಡಿಟೆಕ್ಟೀವ್ ಏಜೆನ್ಸಿಯಲ್ಲಿ ಕೆಲ ಮಾಡುತ್ತಿದ್ದಾರೆ. ಮದುವೆಯಾದ 15 ದಿನಗಳು ಅನ್ಯೋನ್ಯವಾಗಿದ್ದು, ನಂತರದ ದಿನಗಳಲ್ಲಿ ನನ್ನ ಮೇಲೆ ವಿನಾಕಾರಣ ಅನುಮಾನ ಪಡುತ್ತಿದ್ದರು. ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿ 4-5 ದಿನಗಳಿಗೊಮ್ಮೆ ಮನೆಗೆ ಬರುತ್ತಿದ್ರು. ಬಂದಾಗಲೆಲ್ಲಾ ಮಾನಸಿಕ ದೈಹಿಕ ಹಿಂಸೆ ನೀಡಿ, ತವರು ಮನೆಯಿಂದ ಹಣ ತಂದುಕೊಂಡು ಎಂದು ಕಿರುಕುಳ ನೀಡುತ್ತಿದ್ದರು ಎಂದು ದಿವ್ಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

     

    ಆದ್ರೆ ಈ ಬಗ್ಗೆ ತಿಮ್ಮರಾಜುನನ್ನು ಸಂಪರ್ಕಿಸಿದಾಗ ವಿಭಿನ್ನ ಹೇಳಿಕೆ ನೀಡಿದ್ದಾನೆ. ಸುಮಾಳನ್ನು ನಾನು ಮದುವೆಯೇ ಆಗಿಲ್ಲ. ಅವರ ಮನೆಯಲ್ಲಿ ಬಾಡಿಗೆಗೆ ಇದ್ದೆ ಅಷ್ಟೇ. ದಿವ್ಯಾಳನ್ನು ಮದುವೆಯಾಗಿದ್ದು, ಕೆಲ ಮನಸ್ತಾಪದಿಂದ ದೂರವಾಗಿದ್ದೇನೆ ಎಂದು ಹೇಳಿದ್ದಾನೆ.

     

    ತಿಮ್ಮರಾಜು ಇಬ್ಬರು ಪತ್ನಿಯರಿಗೆ ವಿಚ್ಛೇದನ ನೀಡದೇ ಮೂರನೇ ಮದುವೆಗೆ ಮುಂದಾಗಿದ್ದಾನೆ. ನಮಗಾದ ಅನ್ಯಾಯ ಮತ್ತೊಂದು ಮಹಿಳೆಗೆ ಆಗೋದು ಬೇಡ ಎಂಬುದು ದಿವ್ಯಾ ಹಾಗೂ ಸುಮಾ ಅವರ ಅಳಲಾಗಿದೆ. ಈ ಬಗ್ಗೆ ಈಗಾಗಲೇ ತಿಮ್ಮರಾಜು ವಿರುದ್ಧ ದೂರು ದಾಖಲಾಗಿದ್ದು ಈವರೆಗೆ ಆತನ ಬಂಧನವಾಗಿಲ್ಲ.

  • ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದ ಹೆಂಡ್ತಿ ಮೋಸ ಮಾಡ್ತಿದ್ದಾಳೆಂದು ಶಂಕಿಸಿ ಮುಖಕ್ಕೆ ಆ್ಯಸಿಡ್ ಹಾಕ್ದ!

    ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದ ಹೆಂಡ್ತಿ ಮೋಸ ಮಾಡ್ತಿದ್ದಾಳೆಂದು ಶಂಕಿಸಿ ಮುಖಕ್ಕೆ ಆ್ಯಸಿಡ್ ಹಾಕ್ದ!

    ಮುಂಬೈ: ಮಹಿಳೆಯೊಬ್ಬರು ತೂಕ ಕಡಿಮೆ ಮಾಡಿಕೊಂಡು ಸಣ್ಣ ಆಗ್ಬೇಕು ಅಂತ ಬಯಸಿದ ಕಾರಣ ಆಕೆ ತನಗೆ ಮೋಸ ಮಾಡ್ತಿದ್ದಾಳೆಂದು ಶಂಕಿಸಿ ಪತಿರಾಯ ಆ್ಯಸಿಡ್ ದಾಳಿ ಮಾಡಿರೋ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.

    ಇಲ್ಲಿನ ಮಾಲ್ವಾನಿ ನಿವಾಸಿಯಾದ ರುವಾಬ್ ಆಲಿ ಶೇಕ್(30) ತನ್ನ ಪತ್ನಿ ಝಾಕೀರಾ ಶೇಕ್(26) ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಈ ಘಟನೆ ಗುರುವಾರ ನಡೆದಿದ್ದು, ಘಟನೆಯಲ್ಲಿ ಈಕೆಯ ಇಬ್ಬರು ಮಕ್ಕಳಾದ ಅಫೀಪಾ(7) ಹಾಗೂ ಅತೀಫಾ(5) ಕೂಡ ಗಾಯಗೊಂಡಿದ್ದಾರೆ.

    ಘಟನೆ ವಿವರ: ರುವಾಬ್ ಆಟೋ ಚಾಲಕನಾಗಿದ್ದು, ಝಾಕೀರಾ ಮನೆಯಲ್ಲೇ ಇದ್ದಳು. ಆದ್ರೆ ಮನೆ ಖರ್ಚಿಗೆ ರುವಾಬ್ ಝಾಕೀರಾಳಿಗೆ ಹಣ ನೀಡುತ್ತಿರಲಿಲ್ಲ. ಅಲ್ಲದೇ ರುವಾಬ್ ಮಾಟ, ಮಂತ್ರವನ್ನು ನಂಬುತ್ತಿದ್ದನು. ಅಂದ ಹಾಗೆ ಒರ್ವ ಮಂತ್ರವಾದಿ `ನೀನು ಈ ಮನೆಯಲ್ಲಿ ಈ ಪೂಜೆಯನ್ನು ಮಾಡಿದ್ರೆ ನಿಧಿ ಸಿಗತ್ತೆ ಅಂತ ನಂಬಿಸಿದ್ದ. ಒಟ್ಟಿನಲ್ಲಿ ಗಂಡನ ನಡವಳಿಕೆಗಳಿಂದ ಬೇಸತ್ತ ಝಾಕೀರಾ ಒಂದು ಸೇಲ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು. ರುವಾಬ್ ಹಾಗೂ ಝಾಕೀರ್ 2008ರಲ್ಲಿ ಮದುವೆಯಾಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಚೆನ್ನಾಗಿಯೇ ಇದ್ದ ದಂಪತಿಯ ಮಧ್ಯೆ ಇತ್ತೀಚೆಗೆ ಕ್ಷುಲ್ಲಕ ವಿಚಾರಕ್ಕೆ ಸಂಬಧಿಸಿದಂತೆ ಜಗಳಗಳಾಗುತ್ತಿತ್ತು ಅಂತ ಝಾಕೀರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

    ತೂಕ ಇಳಿಸಲು ಚಿಕಿತ್ಸೆ: ಝಾಕೀರಾ ಡುಮ್ಮಿಯಾಗಿದ್ದಳು. ಹೀಗಾಗಿ ತಾನು ಸ್ವಲ್ಪ ಸಣ್ಣ ಆಗ್ಬೇಕು ಅಂತಾ ತೂಕ ಕಡಿಮೆ ಮಾಡೋ ಚಿಕಿತ್ಸೆ ಪಡೆಯುತ್ತಿದ್ದಳು. ಇತ್ತ ಝಾಕೀರಾ ಸಣ್ಣ ಆಗುತ್ತಿರುವುದನ್ನು ಗಮನಿಸಿದ ಪತಿ ರುವಾಬ್ ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸಲು ಆರಂಭಿಸಿದ್ದನು. ಯಾರಿಗಾಗಿ ನೀನು ಇದನ್ನೆಲ್ಲಾ ಮಾಡ್ತಾ ಇದ್ದೀಯಾ? ಯಾರಿಗೋಸ್ಕ ಸಣ್ಣ ಆಗ್ತಾ ಇದ್ದೀಯಾ? ಏನ್ ನಡೀತಾ ಇದೆ ಇಲ್ಲಿ ಅಂತೆಲ್ಲಾ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾನೆ.

    ನೆರೆಮನೆಯಾತ ಹೇಳಿದ್ದೇನು?: ಗುರುವಾರ ಮುಂಜಾನೆ ನಾನು ಮನೆಯ ಹೊರಗಡೆ ಕುಳಿತಿದ್ದ ಸಂದರ್ಭದಲ್ಲಿ ಜೋರಾಗಿ ಕಿರುಚೋ ಶಬ್ದ ಕೇಳಿಸಿತ್ತು. ಏನಾಯ್ತು ಅನ್ನೋವಷ್ಟರಲ್ಲೇ ಝಾಕೀರಾ ಸಹಾಯ ಮಾಡಿ ಅಂತಾ ಕಿರುಚಿತ್ತಾ ಮನೆಯಿಂದ ಹೊರಗಡೆ ಓಡಿ ಬರುತ್ತಿರುವುದು ಕಂಡಿತು. ಅಲ್ಲೇ ಪಕ್ಕದಲ್ಲೇ ಆಕೆಯ ಸಹೋದರನ ಅಂಗಡಿಯಿತ್ತು. ಆತ ಅದರಲ್ಲೇ ಮಲಗುತ್ತಿದ್ದನು. ಹೀಗಾಗಿ ರಕ್ಷಣೆಗಾಗಿ ಸಹೋದರರನ್ನು ಕರೆಯುತ್ತಾ ಓಡಿ ಬಂದಿದ್ದಳು.

    ಅಂತೆಯೇ ಸಹೋದರನ ಅಂಗಡಿಗೆ ಬಂದ ಝಾಕೀರಾ, ಶಟರ್ ಎಳೆಯುವಂತೆ ಬೇಡಿಕೊಳ್ಳುತ್ತಾಳೆ. ಆ ಕಡೆ ಸಹೋದರನೂ ಏನಾಯ್ತು ಅಂತಾ ಕೇಳಿ ಶಟರ್ ಎಳೆಯಲು ಹೋದ್ರೆ, ಅದನ್ನು ಹೊರಗಡೆಯಿಂದ ಲಾಕ್ ಮಾಡಲಾಗಿತ್ತು. ಹೀಗಾಗಿ ನಾನು ಕೂಡ ಅಲ್ಲಿಗೆ ತೆರಳಿ ಲಾಕ್ ಮುರಿದು ಸಹೋದರ ಹೊರಬರುವಂತೆ ಮಾಡಿದ್ವಿ. ಈ ಸಂದರ್ಭದಲ್ಲಿ ಝಾಕೀರಾ ಮೈ ನನ್ನ ಮೈಗೆ ತಾಗಿತ್ತು. ಪರಿಣಾಮ ಮೈ ಉರಿದ ಅನುಭವವಾಯ್ತು. ತಕ್ಷಣ ನೋಡಿದಾಗ ಆಕೆಯ ಮೇಲೆ ಆ್ಯಸಿಡ್ ದಾಳಿಯಾಗಿರುವುದು ತಿಳಿದುಬಂತು ಅಂತ ನೆರೆಮನೆಯ ಸಲೀಂ ಶೇಕ್ ಎಂಬಾತ ಮಾಧ್ಯಮಕ್ಕೆ ವಿವರಿಸಿದ್ದಾನೆ.

    ಬಳಿಕ ಝಾಕೀರಾ ತನ್ನ ಮೇಲೆ ರುವಾಬ್ ಆ್ಯಸಿಡ್ ದಾಳಿ ಮಾಡಿರುವ ಕುರಿತು ಹೇಳಿದ್ದಾಳೆ. ದಾಳಿ ವೇಳೆ ಅಚಾನಕ್ ಆಗಿ ಮಕ್ಕಳ ಮೇಲೂ ಬಿದ್ದಿದೆ. ಬಳಿಕ ಆತ ಮನೆಯ ಹಿಂದಿನ ಬಾಗಿಲಿನ ಮೂಲಕ ಪರಾರಿಯಾಗಿರುವುದಾಗಿ ವಿವರಿಸಿದ್ದಾಳೆ.

    ರುವಾಬ್ ಮೊದಲೇ ಈ ಯೋಜನೆ ಹಾಕಿದ್ದನು. ದಾಳಿ ಬಳಿಕ ಝಾಕೀರಾ ಸಹೋದರ ಆಸ್ಪತ್ರೆಗೆ ಕೂಡಲೇ ದಾಖಲಿಸಬಾರದೆಂದು ಆಕೆಯ ಸಹೋದರನ ಶಾಪ್ ಗೆ ಹೊರಗಡೆಯಿಂದ ಲಾಕ್ ಮಾಡಿದ್ದಾನೆ. ಘಟನೆಯ ನಂತ್ರ ಕುಟುಂಬಸ್ಥರು, ಝಾಕೀರಾ ಹಾಗೂ ಆಕೆಯ ಮಕ್ಕಳನ್ನು ಚಿಕಿತ್ಸೆಗಾಗಿ ಶತಾಬ್ಧಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಝಾಕೀರಾ ಸಹೋದರಿ ಸೈಮಾ ಮಾಧ್ಯಮಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ.

    ಪೊಲೀಸರಿಗೆ ಶರಣಾದ: ಪತ್ನಿಯ ಮೇಲೆ ಆ್ಯಸಿಡ್ ದಾಳಿ ಮಾಡಿ ಮನೆಯ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದ ರುವಾಬ್ ನೇರವಾಗಿ ಪೊಲೀಸ್ ಠಾಣೆಗೆ ಬಂದು ಪೊಲಿಸರಿಗೆ ಶರಣಾಗಿದ್ದಾನೆ. ರುವಾಬ್ ಬೆಳಗ್ಗೆ ಸುಮಾರು 6 ಗಂಟೆಯ ವೇಳೆ ಪೊಲೀಸ್ ಠಾಣೆ ಬಂದಿದ್ದು, ನನ್ನ ಮೇಲೆ ಪತ್ನಿ ಆ್ಯಸಿಡ್ ದಾಳಿ ಮಾಡಲು ಯತ್ನಿಸಿದ್ದಾಳೆ. ಈ ವೇಳೆ ನಾನು ತಪ್ಪಿಸಿಕೊಂಡಿದ್ದು, ಪರಿಣಾಮ ಅದು ಅವಳ ಹಾಗೂ ಮಕ್ಕಳ ಮೇಲೆ ಬಿದ್ದಿದೆ ಅಂತ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಸದ್ಯ ಝಾಕೀರಾ ಮುಖ ಶೇ.80ರಷ್ಟು ಸುಟ್ಟಿದ್ದು, ಚಿಕಿತ್ಸೆ ಮುಂದುವರೆದಿದೆ. ಮಕ್ಕಳು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಸಿಕೊಂಡ ಬಳಿಕ ಅವರಿಂದ ಹೇಳಿಕೆ ಪಡೆಯುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ರೀಪಿಸ್ ಪಟ್ಟಿಯಿಂದ ಹಲ್ಲೆಗೈದು ಪತ್ನಿಯನ್ನ ಬರ್ಬರವಾಗಿ ಕೊಂದ!

    ರೀಪಿಸ್ ಪಟ್ಟಿಯಿಂದ ಹಲ್ಲೆಗೈದು ಪತ್ನಿಯನ್ನ ಬರ್ಬರವಾಗಿ ಕೊಂದ!

    ಚಾಮರಾಜನಗರ: ವರದಕ್ಷಿಣೆಗಾಗಿ ಹೆಂಡತಿಯನ್ನು ಗಂಡ ಕೊಲೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತಳ್ಳಿ ಗ್ರಾಮದಲ್ಲಿ ಜರುಗಿದೆ.

    ಗ್ರಾಮದ ಮಂಜು ಎಂಬಾತ ತನ್ನ ಪತ್ನಿ ಚಿನ್ನತಾಯಮ್ಮಳನ್ನು ವರದಕ್ಷಿಣೆಗಾಗಿ ಪೀಡಿಸಿ ಕೊಲೆಗೈದಿದ್ದಾನೆ. ರಾತ್ರಿ ಕುಡಿದ ಅಮಲಿನಲ್ಲಿ ಮಂಜು ಚಿನ್ನತಾಯಮ್ಮನನ್ನು ವರದಕ್ಷಿಣೆ ತರುವಂತೆ ಪೀಡಿಸಿ ರೀಪಿಸ್ ಪಟ್ಟಿಯಿಂದ ಹಲ್ಲೆಗೈದಿದ್ದಾನೆ. ಈ ಸಂದರ್ಭದಲ್ಲಿ ಬಲವಾದ ಏಟುಗಳು ಚಿನ್ನತಾಯಮ್ಮಗೆ ಬಿದ್ದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಮದುವೆಯಾಗಿ 16 ವರ್ಷಗಳು ಕಳೆದರೂ ಸಹ ಮಂಜುಗೆ ವರದಕ್ಷಿಣೆ ಆಸೆ ಮಾತ್ರ ತೀರಿರಲಿಲ್ಲ. ಮದುವೆಯಾದಾಗ ಚಿನ್ನತಾಯಮ್ಮ ಅವರ ತಂದೆ-ತಾಯಿ ವರದಕ್ಷಿಣೆ ನೀಡಿದ್ದಾರೆ. ಇದಲ್ಲದೇ ಆಗಾಗ ವರದಕ್ಷಿಣೆ ತರುವಂತೆ ಹೆಂಡತಿಯನ್ನು ಮಂಜು ತವರು ಮನೆಗೆ ಕಳುಹಿಸಿದ ಸಂದರ್ಭದಲ್ಲೂ ಕೂಡ ಸಾಕಷ್ಟು ಹಣವನ್ನು ನೀಡಲಾಗಿದೆ.

    ಚಿನ್ನತಾಯಮ್ಮ ಅವರ ತಂದೆ ತಾಯಿ ಸಾವನ್ನಪ್ಪಿದ ನಂತರವೂ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಮಂಜು ಪೀಡಿಸುತ್ತಿದ್ದ. ಇದೇ ರೀತಿ ರಾತ್ರಿ ಕುಡಿದ ಅಮಲಿನಲ್ಲಿ ಬಂದು ಚಿನ್ನತಾಯಮ್ಮ ಮೇಲೆ ರೀಪಿಸ್ ಪಟ್ಟಿಯಿಂದ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಆಕೆ ಸಾವನ್ನಪ್ಪಿದ್ದಾರೆ.

    ಸದ್ಯ ಆರೋಪಿ ಮಂಜುನನ್ನು ಚಾಮರಾಜನಗರ ಗ್ರಾಮಾಂತರ ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

  • ಪ್ರಿಯಕರನ ಜೊತೆ ಪರಾರಿಯಾಗಿದ್ದಕ್ಕೆ ಪತ್ನಿ ಸೇರಿ ಮೂವರ ಹತ್ಯೆ ಪ್ರಕರಣ: ಪೊಲೀಸರ ಬಳಿ ಸತ್ಯ ಬಾಯ್ಬಿಟ್ಟ ಪತಿ

    ಪ್ರಿಯಕರನ ಜೊತೆ ಪರಾರಿಯಾಗಿದ್ದಕ್ಕೆ ಪತ್ನಿ ಸೇರಿ ಮೂವರ ಹತ್ಯೆ ಪ್ರಕರಣ: ಪೊಲೀಸರ ಬಳಿ ಸತ್ಯ ಬಾಯ್ಬಿಟ್ಟ ಪತಿ

    ಚಿಕ್ಕಬಳ್ಳಾಪುರ: ವಿವಾಹವಾದ ನಂತರವೂ ಪತ್ನಿ ಪ್ರಿಯಕರನ ಜೊತೆ ಪರಾರಿಯಾಗಿದ್ದಕ್ಕೆ, ಬೇಸತ್ತ ಪತಿ ತನ್ನ ಪತ್ನಿ ಸೇರಿ ಆಕೆಯ ಪ್ರಿಯಕರ ಹಾಗೂ ಪ್ರಿಯಕರನ ತಾಯಿಯನ್ನು ಹತ್ಯೆ ಮಾಡಿರೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊನೆಗೂ ಆರೋಪಿ ಪತಿ ವೆಂಕಟರೆಡ್ಡಿ ಕಾಡುಗೋಡಿ ಪೊಲೀಸರ ಬಳಿ ಸತ್ಯ ಬಾಯ್ಬಿಟ್ಟಿದ್ದಾನೆ.

    ಇದನ್ನೂ ಓದಿ: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಮೂವರನ್ನ ಕೊಂದನಾ ಪತಿ? – ಪೊಲೀಸರಿಗೆ ಇನ್ನೂ ಸಿಕ್ತಿಲ್ಲ ಸ್ಪಷ್ಟ ಮಾಹಿತಿ

    ಪತ್ನಿ ಪ್ರೇಮಾಳನ್ನ ತಾನೇ ಕೊಲೆ ಮಾಡಿರುವುದಾಗಿ ಓಪ್ಪಿಕೊಂಡಿದ್ದಾನೆ. ಜುಲೈ 21 ರಂದು ಕಾರಿನಲ್ಲಿ ತನ್ನ ಸಂಬಂಧಿ ಬಾಬು ಹಾಗೂ ಮುಳಬಾಗಿಲು ಮೂಲದ ಸ್ನೇಹಿತ ಸುರೇಶ್ ಜೊತೆ ಸೇರಿ ಕಾರಿನಲ್ಲೇ ಪತ್ನಿ ಪ್ರೇಮಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಪತಿ ವೆಂಕಟರೆಡ್ಡಿ ಪೊಲೀಸರ ಬಳಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ.

    ನಾಪತ್ತೆಯಾಗಿರೋ ಶ್ರೀನಾಥ್ ವಿಚಾರದಲ್ಲಿ ಯಾವುದೇ ಮಾಹಿತಿಯನ್ನ ನೀಡುತ್ತಿಲ್ಲ. ಆದರೆ ಶ್ರೀನಾಥ್ ತಾಯಿ ಭಾಗ್ಯಮ್ಮ ವಿಷ ಕುಡಿಯಲು ಕೂಡ ತಾನೇ ಕಾರಣ ಎಂದು ಒಪ್ಪಿಕೊಂಡಿದ್ದಾನೆ. ಪ್ರೇಮಾ ಹಾಗೂ ಶ್ರೀನಾಥ್ ಪರಾರಿಯಾದ ನಂತರ ತಾನು ಭಾಗ್ಯಮ್ಮಳ ಮನೆಗೆ ಹೋಗಿ ನಿನ್ನ ಮಗ ಎಲ್ಲಿ ಎಂದು ಪದೇ ಪದೇ ಕಿರುಕುಳ ಕೊಟ್ಟಿದ್ದೇನೆ. ಆಗ ಭಾಗ್ಯಮ್ಮ ನನ್ನೇದುರೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಳು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

    ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಕೊಲೆ: ಅಂಬಾಜಿ ದುರ್ಗ ಬೆಟ್ಟದಲ್ಲಿ ಪತ್ತೆಯಾದ ಶವದ ಡಿಎನ್‍ಎ ಪರೀಕ್ಷೆಗೆ ಮುಂದಾದ ಪೊಲೀಸ್ರು!

    ಸದ್ಯ ವೆಂಕಟರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಕಾಡುಗೋಡಿ ಪೊಲೀಸರು ಮತ್ತಷ್ಟು ವಿಚಾರಣೆ ಮುಂದುವರೆಸಿದ್ದಾರೆ.

  • ಸಾಲ ಮಾಡಿಕೊಳ್ಳಬೇಡಿ ಎಂದ ಪತ್ನಿಯನ್ನೇ ಕೊಡಲಿಯಿಂದ ಹೊಡೆದು ಕೊಲೆಗೈದ ಪತಿ

    ಸಾಲ ಮಾಡಿಕೊಳ್ಳಬೇಡಿ ಎಂದ ಪತ್ನಿಯನ್ನೇ ಕೊಡಲಿಯಿಂದ ಹೊಡೆದು ಕೊಲೆಗೈದ ಪತಿ

    ಕಲಬುರಗಿ: ಹೆಚ್ಚಿನ ಸಾಲ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಲೆಗೈದಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದಲ್ಲಿ ನಡೆದಿದೆ.

    30 ವರ್ಷದ ಶಿವಮ್ಮ ಪತಿಯಿಂದಲೇ ಕೊಲೆಯಾದ ಪತ್ನಿ. ಪತಿ ನಾಗಪ್ಪನಿಗೆ ಹೆಚ್ಚಾಗಿ ಸಾಲ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಇದರಿಂದ ನನಗೆ ಪ್ರಶ್ನೆ ಮಾಡುತ್ತೀಯಾ ಎಂದು ನಾಗಪ್ಪ ಮನೆಯಲ್ಲಿದ್ದ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಪರಿಣಾಮ ಶಿವಮ್ಮರ ತಲೆಗೆ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಇತ್ತ ಪತ್ನಿಯನ್ನು ಕೊಲೆಗೈದ ಬಳಿಕ ಗಂಡ ನಾಗಪ್ಪ ತಲೆ ಮರೆಸಿಕೊಂಡಿದ್ದಾನೆ. ಈ ಸಂಬಂಧ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ವಿಶೇಷ ಜಾಲ ಬೀಸಿದ್ದಾರೆ.

    ಇದನ್ನೂ ಓದಿ:  ಪತಿಯನ್ನು ಬಿಟ್ಟುಬರಲು ನಿರಾಕರಿಸಿದ್ದಕ್ಕೆ ಲೈಂಗಿಕ ದೌರ್ಜನ್ಯ- ಗುಪ್ತಾಂಗಕ್ಕೆ ಕಬ್ಬಿಣದ ರಾಡ್‍ನಿಂದ ಹಲ್ಲೆ, ಮಹಿಳೆ ಸಾವು

  • ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಮೂವರನ್ನ ಕೊಂದನಾ ಪತಿ? – ಪೊಲೀಸರಿಗೆ ಇನ್ನೂ ಸಿಕ್ತಿಲ್ಲ ಸ್ಪಷ್ಟ ಮಾಹಿತಿ

    ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಮೂವರನ್ನ ಕೊಂದನಾ ಪತಿ? – ಪೊಲೀಸರಿಗೆ ಇನ್ನೂ ಸಿಕ್ತಿಲ್ಲ ಸ್ಪಷ್ಟ ಮಾಹಿತಿ

    ಬೆಂಗಳೂರು: ಪತ್ನಿಯ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಮರ್ಯಾದಾ ಹತ್ಯೆ ನಡೆದಿದೆಯಾ? ಪತಿಯೇ ತನ್ನ ಹೆಂಡತಿ ಸೇರಿದಂತೆ ಮೂವರನ್ನ ಕೊಲೆ ಮಾಡಿರಬಹುದೆಂಬ ಅನುಮಾನ ಪೊಲೀಸರಿಗೆ ಮೂಡಿದೆ.

    ಘಟನೆಗೆ ಸಂಬಂದಿಸಿದಂತೆ ಪೊಲೀಸರು ಚಿಂತಾಮಣಿ ಮೂಲದವನಾದ ವೆಂಕಟರೆಡ್ಡಿ ಎಂಬಾತನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಏನಿದು ಘಟನೆ?: ಚಿಂತಾಮಣಿ ಮೂಲದ ವೆಂಕಟರೆಡ್ಡಿ ಹಾಗೂ ಪತ್ನಿ ಪ್ರೇಮಾ ಕಾಡುಗೋಡಿಯಲ್ಲಿ ವಾಸವಾಗಿದ್ದನು. ಆದರೆ ಶ್ರೀನಾಥ್ ಎಂಬ ಯುವಕ ಹಾಗೂ ವೆಂಕಟರೆಡ್ಡಿ ಪತ್ನಿ ಪ್ರೇಮಾ ನಡುವೆ ವಿವಾಹ ಪೂರ್ವ ಪ್ರೇಮವಿತ್ತು. ಈ ವಿಚಾರ ತಿಳಿದು ಪತಿ ಎಚ್ಚರಿಕೆ ನೀಡಿದ್ದರೂ ಶ್ರೀನಾಥ್ ಜೊತೆ ಪ್ರೇಮಾ ಪರಾರಿಯಾಗಿದ್ದಳು ಎನ್ನಲಾಗಿದೆ.

    ವೆಂಕಟರೆಡ್ಡಿ ತನ್ನ ಪತ್ನಿ ಕಾಣೆಯಾಗಿದ್ದಾಳೆಂದು ಕಾಡುಗೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಈ ಮಧ್ಯೆ ವೆಂಕಟರೆಡ್ಡಿ ಶ್ರೀನಾಥ್‍ನ ತವರೂರು ಚಿಂತಾಮಣಿ ಬಳಿ ರಾಯಪ್ಪಳ್ಳಿಯ ಮನೆಗೆ ಹೋಗಿ ತಾಯಿ ಭಾಗ್ಯಮ್ಮಗೆ ವಿಷ ಕುಡಿಸಿ ಹತ್ಯೆ ಮಾಡಿದ್ದಾನೆ ಎಂಬ ಆರೋಪವಿದೆ. ಆದ್ರೆ ಚಿಂತಾಮಣಿ ಪೊಲೀಸರು ಆತ್ಮಹತ್ಯೆ ಎಂದು ದೂರು ದಾಖಲಿಸಿಕೊಂಡು ಪ್ರಕರಣ ಕ್ಲೋಸ್ ಮಾಡಿದ್ದಾರೆ ಎನ್ನಲಾಗಿದೆ.

    ತಾಯಿಯ ಸಾವಿನ ವಿಷಯ ತಿಳಿದು ಶ್ರೀನಾಥ್ ಮತ್ತು ಪ್ರೇಮಾ ವಾಪಸ್ ಮತ್ತೆ ಊರಿಗೆ ಬಂದಿದ್ದರು. ನಂತರ ಪೊಲೀಸ್ ಠಾಣೆಯಲ್ಲಿ ವೆಂಕಟರೆಡ್ಡಿ ತನ್ನ ಪತ್ನಿಗೆ ಬುದ್ಧಿವಾದ ಹೇಳಿ ಅವಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದನು. ಅಂತೆಯೇ ಪತ್ನಿ ಪ್ರೇಮಾ ಜು. 17 ರಂದು ವೆಂಕಟರೆಡ್ಡಿ ಜೊತೆ ತೆರಳಿದ್ದಳು. ಇದಾದ ಮೂರು ದಿನದ ಬಳಿಕ ಪ್ರೇಮಾ ಸಾವನ್ನಪ್ಪಿದ್ದಳು. ಇತ್ತ ಪ್ರೇಮಾ ಸಾವಿನ ಬಳಿಕ ಶ್ರೀನಾಥ್ ಕೂಡ ಕಣ್ಮರೆಯಾಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

    ಶ್ರೀನಾಥ್ ಕಾಣೆಯಾದ ಬಗ್ಗೆ ವಿಚಾರಿಸಲು ವೆಂಕಟರೆಡ್ಡಿಯನ್ನು ಠಾಣೆಗೆ ಕರೆಸಿದಾಗ ಪ್ರೇಮಾ ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದ್ದು, ಪೊಲೀಸರಿಗೆ ಅನುಮಾನ ಮೂಡಿಸಿದೆ. ಮಣ್ಣು ಮಾಡುವ ಪದ್ಧತಿ ಇದ್ದರೂ ವೆಂಕಟರೆಡ್ಡಿ ಪ್ರೇಮಾಳನ್ನು ಸುಟ್ಟು ಹಾಕಿದ್ದು, ಹತ್ಯೆ ಮಾಡಿರಬಹುದು. ಪೊಲೀಸರಿಗೆ ಸಾಕ್ಷಿ ಸಿಗಬಾರದೆಂಬ ಕಾರಣಕ್ಕೆ ಪ್ರೇಮಾಳನ್ನು ಸುಟ್ಟಿದ್ದಾನೆ ಎಂದು ಶಂಕಿಸಲಾಗಿದೆ.

    ವೆಂಕಟರೆಡ್ಡಿ ಮರ್ಯಾದೆಗಾಗಿ ಪ್ರೇಮಾಳನ್ನು ಒಂದೆಡೆ ಹತ್ಯೆ ಮಾಡಿ ಸುಟ್ಟು ಹಾಕಿದ್ದಾನೆ ಎಂಬ ಅನುಮಾನವೂ ಮೂಡಿದೆ. ಶ್ರೀನಾಥ್ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ವಿಷಯ ತಿಳಿದ ಮೇಲೆ ವೆಂಕಟರೆಡ್ಡಿಯನ್ನು ಕರೆದು ಅವನ ಪತ್ನಿ ಪ್ರೇಮಾ ಬಗ್ಗೆ ವಿಚಾರಿಸಿದ್ದಾರೆ. ಆಗ ಅವನು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ವೆಂಕಟರೆಡ್ಡಿಯ ಮೇಲೆ ಪೊಲೀಸರಿಗೆ ಅನುಮಾನ ಬಂದು ಅವನನ್ನು ವಶಕ್ಕೆ ಪಡೆದು ಕಳೆದ ಮೂರು ದಿನಗಳಿಂದ ವಿಚಾರಣೆ ನಡೆಸುತ್ತಿದ್ದಾರೆ.

    ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದು, ಇನ್ನು ತನಿಖೆ ವೇಳೆ ಈ ಪ್ರಕರಣದಲ್ಲಿ ಏನೆಲ್ಲಾ ತಿರುವು ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ. ಇಷ್ಟೆಲ್ಲಾ ಘಟನೆ ನಡೆದ ಬಳಿಕವೂ ಶ್ರೀನಾಥ್ ಎಲ್ಲಿದ್ದಾನೆ ಎಂಬ ಬಗ್ಗೆ ಪೊಲೀಸರಿಗೆ ಇದೂವರೆಗೆ ಯಾವುದೇ ಮಾಹಿತಿ ಇಲ್ಲ. ಈತ ಇನ್ನೂ ಬದುಕಿದ್ದಾನಾ ಅಥವಾ ವೆಂಕಟರೆಡ್ಡಿ ಈತನಿಗೆ ಏನಾದ್ರೂ ಮಾಡಿದ್ದಾನಾ ಎಂಬ ಹಾದಿಯಲ್ಲೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.