Tag: ಪತ್ನಿ

  • ಕುಡಿಯಲು ಹಣ ನೀಡದ ಕಾರಣ ಪತ್ನಿ, ಮಗಳನ್ನು ಮಚ್ಚಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ

    ಕುಡಿಯಲು ಹಣ ನೀಡದ ಕಾರಣ ಪತ್ನಿ, ಮಗಳನ್ನು ಮಚ್ಚಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ

    ವಿಜಯಪುರ: ಕುಡಿಯಲು ಹಣ ನೀಡದ ಕಾರಣ ಪತಿಯೊಬ್ಬ ತನ್ನ ಪತ್ನಿ ಹಾಗೂ ಮಗಳನ್ನು ಮಚ್ಚಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.

    ರಾಜೇಸಾಬ್ ಲಿಂಗಸೂರ(38) ಹಲ್ಲೆ ಮಾಡಿದ ಪಾಪಿ ಪತಿ. ಪತ್ನಿ ಶಮೀಮಾ ಬಾನು(29) ಹಾಗೂ ಮಗಳು ಅಮೀನಾ(6) ಗೆ ಗಂಭೀರ ಗಾಯಗಳಾಗಿದ್ದು, ಶಮೀಮಾಬಾನು ಬಲಗೈ ಹಾಗೂ ಕಿವಿ ಕಟ್ ಆಗಿದೆ. ಇನ್ನೂ ಮಗಳು ಅಮೀನಾಳ ಬಲಗೈ ಬೆರಳುಗಳು ತುಂಡಾಗಿದೆ.

    ಕಲಕೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಬಳಿಕ ಪಾಪಿ ಪತಿ ರಾಜೇಸಾಬ್ ಲಿಂಗಸೂರ ಪರಾರಿಯಾಗಿದ್ದಾನೆ.

    ಈ ಬಗ್ಗೆ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮದುವೆ ಆಗಿ ಎರಡು ಮಕ್ಕಳಾದ ಮೇಲೆ ನಾನು ಗಂಡಸಲ್ಲ ಎಂದ ಪಾದ್ರಿ

    ಮದುವೆ ಆಗಿ ಎರಡು ಮಕ್ಕಳಾದ ಮೇಲೆ ನಾನು ಗಂಡಸಲ್ಲ ಎಂದ ಪಾದ್ರಿ

    ಬೆಂಗಳೂರು: ಚರ್ಚ್ ಪಾದ್ರಿಯೊಬ್ಬ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದು, ಮದುವೆ ಆಗಿ ಎರಡು ಮಕ್ಕಳಾದ ಮೇಲೆ ನಾನು ಗಂಡಸಲ್ಲ ಎಂದು ಹೇಳಿಕೊಳ್ಳುತ್ತಿರೋ ಪ್ರಕರಣವೊಂದು ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ಬೆಳಕಿಗೆ ಬಂದಿದೆ.

    ರುಬೆನ್ ಜೋಶ್ವ, ಕಮ್ಮನಹಳ್ಳಿಯ ಜೀಸಸ್ ಪವರ್ ಫುಲ್ ಚರ್ಚ್ ನ ಪಾದ್ರಿ. ಈತ ಮೇರಿ ಮಿಲ್ಕಾ ಎಂಬಾಕೆಯ ಜೊತೆ 2009ರಲ್ಲಿ ಮದುವೆ ಆಗಿದ್ದ. ಸದ್ಯ ಪಾದ್ರಿ ರುಬೇನ್ ಜೋಶ್ವ ಹಾಗೂ ಮೇರಿ ಮಿಲ್ಕಾ ದಂಪತಿಗೆ 6 ವರ್ಷದ ಹೆಣ್ಣು ಹಾಗೂ 4 ವರ್ಷದ ಗಂಡು ಮಗುವಿದೆ.

    ಮದುವೆಯಾಗಿ ಎರಡು ಮಕ್ಕಳಾದ ನಂತರ ಪಾದ್ರಿ, ನಾನು ಗಂಡಸಲ್ಲ. ಹಾಗಿದ್ದ ಮೇಲೆ ನನಗೆ ಮಕ್ಕಳಾಗಲು ಹೇಗೆ ಸಾಧ್ಯ ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದಾನೆ. ಆರೋಪಿ ಪಾದ್ರಿ ವಿರುದ್ಧ ಪತ್ನಿ ಮೇರಿ ಮಿಲ್ಕಾ ಇದೇ ತಿಂಗಳ 9ರಂದು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಶನಿವಾರ ವನಿತಾ ಸಹಾಯವಾಣಿಗೂ ದೂರು ನೀಡಿದ್ದಾರೆ.

    ಪೊಲೀಸರಿಗೆ ಪತ್ನಿ ದೂರು ನೀಡಲು ಮುಂದಾದಾಗ ಪಾದ್ರಿ ಡೋಂಟ್ ಕೇರ್ ಎಂದು ಹೇಳಿದ್ದಾನೆ. ಪತ್ನಿ ಮಾಧ್ಯಮಗಳ ಮುಂದೆ ಬರುತ್ತಾರೆ ಎಂದಾಗ ತಡರಾತ್ರಿ ಮನೆಗೆ ಇತರೆ ಪಾದ್ರಿಗಳ ಜೊತೆ ಬಂದು ರುಬೇನ್ ತನ್ನ ಪತ್ನಿ ಮೇರಿಗೆ, ಈ ವಿಚಾರ ಹೊರಗಡೆ ಗೊತ್ತಾದ್ರೆ ನಮ್ಮ ಧರ್ಮದ ಮರ್ಯಾದೆ ಹೋಗುತ್ತೆ ಎಂದು ಧಮ್ಕಿ ಹಾಕಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

    ದೂರಿನಲ್ಲೇನಿದೆ?: ಈ ಹಿಂದೆ ನನ್ನ ಗಂಡ ಹೊಡೆಯುವುದು ಹಾಗೂ ಬೈಯೋದು ಮಾಡುತ್ತಿದ್ದನು. ನಂತರ ಈ ಬಗ್ಗೆ ನಾನು ಫೆಬ್ರವರಿ 27, 2018ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಆಗ ಪೊಲೀಸರು ನನ್ನ ಗಂಡನನ್ನು ಪೊಲೀಸ್ ಠಾಣೆಗೆ ಕರೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಆದರೂ ಸಹ ನನ್ನ ಗಂಡ ಇದೇ ತಿಂಗಳು 7ರಂದು ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆದಿದ್ದಾರೆ. ಹಾಗಾಗಿ ನನ್ನ ಗಂಡನನ್ನು ಕರೆಸಿ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೇರಿ ದೂರಿನಲ್ಲಿ ದಾಖಲಿಸಿದ್ದಾರೆ.

  • ಮಕ್ಕಳಿಲ್ಲದ ಕಾರಣ ಪತ್ನಿಗೆ ಚಿತ್ರಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ ಪತಿ!

    ಮಕ್ಕಳಿಲ್ಲದ ಕಾರಣ ಪತ್ನಿಗೆ ಚಿತ್ರಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ ಪತಿ!

    ಬೆಂಗಳೂರು: ಮಕ್ಕಳಿಲ್ಲದ ಕಾರಣ ಗಂಡನೊಬ್ಬ ತನ್ನ ಪತ್ನಿಗೆ ಚಿತ್ರಹಿಂಸೆ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಶಿವಕುಮಾರ್ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿ ಪತಿ. ಎರಡು ವರ್ಷದ ಹಿಂದೆ ಉಮಾದೇವಿ ಹಾಗೂ ಶಿವಕುಮಾರ್ ವಿವಾಹವಾಗಿತ್ತು. ಆದರೆ ಮದುವೆಯಾಗಿ ಎರಡು ವರ್ಷವಾದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಮೂರು ತಿಂಗಳ ಹಿಂದೆ ಇದೇ ವಿಚಾರಕ್ಕೆ ಗಲಾಟೆ ನಡೆದು ಹಲ್ಲೆ ಮಾಡಿದ್ದನು ಎಂದು ಹೇಳಲಾಗಿದೆ.

    ಈ ಹಿಂದೆ ಶಿವಕುಮಾರ್ ಕೆಂಗೇರಿ ಬ್ರಿಜ್ಡ್ ಬಳಿ ಉಮಾದೇವಿಯನ್ನು ತಳ್ಳಿದ್ದ. ಆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಮಾದೇವಿಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಮತ್ತೆ ಉಮಾದೇವಿಯನ್ನ ಗಂಡನ ಮನೆಗೆ ಕಳುಹಿಸಲಾಗಿತ್ತು. ಆದರೆ ಶಿವಕುಮಾರ್ ಮತ್ತೆ ತನ್ನ ಪತ್ನಿಯ ಮೇಲೆ ವಿಕೃತಿ ಮೆರದಿದ್ದಾನೆ.

    ಸದ್ಯ ಗಾಯಾಳು ಉಮಾದೇವಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಮಾದೇವಿಗೆ ಅತ್ತೆ-ಮಾವ ಕೂಡ ಕಿರುಕುಳ ನೀಡುತ್ತಿದ್ದರು. ಶಿವಕುಮಾರ್ ಗೆ ಇನ್ನೊಂದು ಮದುವೆ ಮಾಡಲು ಪ್ಲಾನ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

    ಈ ಬಗ್ಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಿನ್ನದ ಓಲೆ ಕೊಡಲಿಲ್ಲವೆಂದು ಪತ್ನಿಯ ಗುಪ್ತಾಂಗವನ್ನು ಕತ್ತರಿಸಿದ ಪತಿ!

    ಚಿನ್ನದ ಓಲೆ ಕೊಡಲಿಲ್ಲವೆಂದು ಪತ್ನಿಯ ಗುಪ್ತಾಂಗವನ್ನು ಕತ್ತರಿಸಿದ ಪತಿ!

    ಇಸ್ಲಾಮಾಬಾದ್: ಪತಿಯೊಬ್ಬ ತನ್ನ ಪತ್ನಿ ಚಿನ್ನದ ಓಲೆ ಕೊಡಲಿಲ್ಲವೆಂದು ಆಕೆಯ ಗುಪ್ತಾಂಗವನ್ನು ಕತ್ತರಿಸಿದ ಘಟನೆ ಪಾಕಿಸ್ತಾನದ ಡೇರಾ ಘಾಸಿಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಈ ದಂಪತಿಗೆ ಮಕ್ಕಳಿರಲಿಲ್ಲ. ಈ ಕಾರಣಕ್ಕೆ ಆಗಾಗ ಇವರ ಮಧ್ಯೆ ಜಗಳವಾಗುತ್ತಿತ್ತು. ಆದರೆ ಮಂಗಳವಾರ ಪತಿ ತನ್ನ ಪತ್ನಿಯನ್ನು ಚಿನ್ನದ ಓಲೆಯನ್ನು ಕೇಳಿದ್ದಾನೆ. ಆದರೆ ಆಕೆ ಕೊಡಲು ನಿರಾಕರಿಸಿದ್ದಾಳೆ. ಇದ್ದರಿಂದ ರೊಚ್ಚಿಗೆದ್ದ ಪತಿ ಆಕೆಯನ್ನು ರೂಮಿನಲ್ಲಿ ಕೂಡಿ ಹಾಕಿ ಹೊಡೆಯಲು ಶುರು ಮಾಡಿದ್ದಾನೆ.

     

    ಪತಿಯ ಹೊಡೆತದಿಂದ ಮಹಿಳೆ ಜೋರಾಗಿ ಅಳುತ್ತಾ, ಕಿರುಚಾಡಲು ಶುರು ಮಾಡಿದ್ದಾಳೆ. ಆಗ ರೂಮಿನ ಹತ್ತಿರದಲ್ಲೇ ಇದ್ದ ಮಹಿಳೆಯ ತಂದೆ ಹಾಗೂ ಆಕೆಯ ಚಿಕ್ಕಪ್ಪ ರೂಮಿನ ಹತ್ತಿರ ಓಡಿ ಬಂದಿದ್ದಾರೆ. ಮಹಿಳೆಯ ತಂದೆ ಹಾಗೂ ಆಕೆಯ ಸಂಬಂಧಿಕರು ಬಾಗಿಲು ತಟ್ಟಿದ್ದರು ಆತ ರೂಮಿನ ಬಾಗಿಲನ್ನು ತೆಗೆಯಲಿಲ್ಲ. ನಂತರ ಎಲ್ಲರೂ ಸೇರಿ ಬಾಗಿಲನ್ನು ಹೊಡೆದಿದ್ದಾರೆ.

    ಎಲ್ಲರೂ ರೂಮಿನೊಳಗೆ ಹೋಗಿ ನೋಡಿದ್ದಾಗ ಮಹಿಳೆ ರಕ್ತಸ್ತ್ರಾವದಿಂದ ಪ್ರಜ್ಞೆ ತಪ್ಪಿದ್ದು, ಪತಿ ಆಕೆಯ ಗುಪ್ತಾಂಗವನ್ನೇ ಕತ್ತರಿಸಿದ್ದನು. ನಂತರ ಸಂಬಂಧಿಕರು ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಪೊಲೀಸರಿಗೆ ಕರೆ ಮಾಡಿದ್ದರು. ವಿಚಾರಣೆ ವೇಳೆ ಕ್ರೂರಿ ಪತಿ ತನ್ನ ಪತ್ನಿಯ ಗುಪ್ತಾಂಗವನ್ನು ಕತ್ತರಿಸಿದ್ದಾನೆಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

    ಮಹಿಳೆಯ ಕುಟುಂಬಸ್ಥರ ಪ್ರಕಾರ ಈ ಹಿಂದೆ ಪತಿ ತನ್ನ ಪತ್ನಿಯ ಮೇಲೆ ಹಲವು ಬಾರಿ ಹಲ್ಲೆ ನಡೆಸಿದ್ದಾನೆ. ಆಕೆಗೆ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಆತ ಆಗಾಗ ತನ್ನ ಪತ್ನಿಯ ಜೊತೆ ಜಗಳವಾಡುತ್ತುದ್ದನು ಎಂದು ತಿಳಿಸಿದ್ದಾರೆ.

  • ಪತ್ನಿ ಕುತ್ತಿಗೆಗೆ ಚಾಕುವಿನಿಂದ ಇರಿದು ಬಾಗಿಲು ಹಾಕಿಕೊಂಡು ಹೋದ ಪತಿ!

    ಪತ್ನಿ ಕುತ್ತಿಗೆಗೆ ಚಾಕುವಿನಿಂದ ಇರಿದು ಬಾಗಿಲು ಹಾಕಿಕೊಂಡು ಹೋದ ಪತಿ!

    ಬೆಂಗಳೂರು: ಪತ್ನಿ ಕುತ್ತಿಗೆಗೆ ಚಾಕು ಇರಿದು ಪತಿ ಬಾಗಿಲು ಹಾಕಿಕೊಂಡು ಹೋದ ಘಟನೆ ಬೆಂಗಳೂರಿನ ಚೋಳೂರುಪಾಳ್ಯದ ಮಂಜುನಾಥನಗರದಲ್ಲಿ ನಡೆದಿದೆ.

    ಮಂಜುನಾಥ್ ಚಾಕು ಇರಿದ ಆರೋಪಿ. ಸೋಮವಾರ ತಡರಾತ್ರಿ ಮಂಜುನಾಥ್ ತನ್ನ ಪತ್ನಿ ವೇದಕುಮಾರಿಗೆ ಚಾಕುವಿನಿಂದ ಇರಿದಿದ್ದನು. ಕುತ್ತಿಗೆಗೆ ಚಾಕುವಿನಿಂದ ಇರಿದು ಬಾಗಿಲು ಹಾಕಿಕೊಂಡು ಹೋಗಿದ್ದಾನೆ. ಅಷ್ಟೇ ಅಲ್ಲದೇ ಮಂಜುನಾಥ್ ಪ್ರತಿದಿನ ಕುಡಿದು ಮನೆಗೆ ಹೋಗುತ್ತಿದ್ದನು.

    ಮಂಜುನಾಥ್ ಸೋಮವಾರ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡು ಚಾಕುವಿನಿಂದ ಇರಿದಿದ್ದಾನೆ. ವೇದಕುಮಾರಿಯ ನರಳಾಟ ಕೇಳಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸದ್ಯ ವೇದಕುಮಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸದ್ಯ ಈ ಪ್ರಕರಣ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿ ಮೇಲೆ ಪತಿಯಿಂದ ಲೈಂಗಿಕ ದೌರ್ಜನ್ಯ!

    ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿ ಮೇಲೆ ಪತಿಯಿಂದ ಲೈಂಗಿಕ ದೌರ್ಜನ್ಯ!

    ಬೆಂಗಳೂರು: ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ಪತಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ದೇವ್‍ಕುಮಾರ್ ವಿರುದ್ಧ 28 ವರ್ಷದ ಪತ್ನಿ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದಾರೆ. ಮದುವೆಯಾದ ನಂತರವೂ ಬೇರೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದು, ಈಗ ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    2009 ರಲ್ಲಿ ದೇವ್‍ಕುಮಾರ್ ಜೊತೆ ನನ್ನ ಮದುವೆಯಾಗಿದ್ದು, ಮದುವೆ ಸಂದರ್ಭದಲ್ಲಿ ನನ್ನ ಮನೆಯವರು ಪತಿಗೆ 2,20,000 ರೂ. ನಗದು, 15 ಗ್ರಾಂ ಚಿನ್ನ, 12 ಗ್ರಾಂನ ಬ್ರೇಸ್‍ಲೈಟ್, 8 ಗ್ರಾಂ ಉಂಗುರ, 4 ಗ್ರಾಂ ಡಾಲರ್ ಕೊಟ್ಟಿದ್ದರು. ನನ್ನ ಗಂಡ ಗೊರಗುಂಟೆಪಾಳ್ಯದಲ್ಲಿ ಮೆಕಾನಿಕ್ ಕೆಲಸ ಮಾಡಿಕೊಂಡಿದ್ದರು. ಮದುವೆಯಾದಾಗಿನಿಂದ ನಾನು ಮತ್ತು ನನ್ನ ಪತಿ ನನ್ನ ತವರು ಮನೆಯಲ್ಲೇ ವಾಸಿಸುತ್ತೀದ್ದೇವೆ. ನನ್ನ ಗಂಡ ನಮ್ಮ ಮನೆಯ ಯಾವುದೇ ಖರ್ಚು ವೆಚ್ಚವನ್ನೂ ಕೊಡುತ್ತಿರಲಿಲ್ಲ. ಮನೆಯ ಬಾಡಿಗೆ ಸಹ ಕಟ್ಟುತ್ತಿರಲಿಲ್ಲ. ಎಲ್ಲವನ್ನು ನನ್ನ ತಾಯಿ ನೋಡಿಕೊಳ್ಳುತ್ತಿದ್ದರು. ಅತ ದುಡಿಯುತ್ತಿದ್ದ ಹಣವನ್ನು ಮನೆಗೆ ಕೊಡದೇ ಎಲ್ಲವನ್ನೂ ಬೇರೆ ಹೆಂಗಸರಿಗೆ ಖರ್ಚು ಮಾಡುತ್ತಿದ್ದ.

    ಹೀಗಿರುವಾಗ ನನ್ನ ವಿವಾಹವಾದ 4 ವರ್ಷಗಳ ನಂತರ ನನ್ನ ಪತಿ ಬೇರೆ ಹೆಂಗಸಿನ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದನು. ಇದಾದ ನಂತರ ನನಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ. ಫೆಬ್ರವರಿ 13ರಂದು ನಾನು ಮತ್ತು ನನ್ನ ತಾಯಿ ಅಜ್ಜಿಯ ಮನೆಗೆ ಹೋದ ಸಂದರ್ಭದಲ್ಲಿ ನನ್ನ ಗಂಡ ಮಹಿಳೆಗೆ ಅಸಭ್ಯ ಸಂದೇಶಗಳನ್ನು ಕಳುಹಿಸಿ, ಆಕೆಯ ಜೊತೆ ಅಸಭ್ಯವಾಗಿ ಮಾತನಾಡುತ್ತಿದ್ದ.

    ಈ ವಿಷಯ ನನಗೆ ತಿಳಿದು ಆತನಲ್ಲಿ ಪ್ರಶ್ನಿಸಿದ್ದಾಗ ನಾನು ಇರುವುದೇ ಹೀಗೆ, ನನ್ನ ಜೀವನದ ಶೈಲಿಯೇ ಹೀಗೆ. ನೀನು ನಿನ್ನ ತಾಯಿಗೆ ಹೇಳಿ ನನಗೆ 1 ಲಕ್ಷ ರೂ. ಹಾಗೂ ಚಿನ್ನಾಭರಣವನ್ನು ಕೊಡಿಸು ಇಲ್ಲವಾದ್ದಲ್ಲಿ ಆ ಮಹಿಳೆಯನ್ನು ನಾನು ಮದುವೆಯಾಗುತ್ತೇನೆ. ನಿನ್ನ ಹಾಗೂ ನಿನ್ನ ತಾಯಿಯನ್ನು ನಾನು ಮುಗಿಸಿಬೀಡುತ್ತೇನೆಂದು ಬೆದರಿಕೆ ಹಾಕಿದ್ದಾನೆ. ನನಗೆ ಅವಾಚ್ಯ ಶಬ್ಧಗಳಿಂದ ಬೈದು, ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ, ಹೆಚ್ಚಿನ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • ಲವ್ವರ್ ಜೊತೆ ಮದ್ವೆಯಾಗುವಂತೆ ಪತ್ನಿಗೆ ಹೇಳಿ ಪತಿ ಆತ್ಮಹತ್ಯೆ!

    ಲವ್ವರ್ ಜೊತೆ ಮದ್ವೆಯಾಗುವಂತೆ ಪತ್ನಿಗೆ ಹೇಳಿ ಪತಿ ಆತ್ಮಹತ್ಯೆ!

    ಹೈದರಾಬಾದ್: ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಶಮೀರ್‍ಪೆಟ್ ನಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು 24 ವರ್ಷದ ಕೆ ಆಚಾರ್ಯ ಎಂದು ಗುರುತಿಸಲಾಗಿದ್ದು, ಇವರು ಯದಾದ್ರಿ ಭೊಂಗಿರ್ ಜಿಲ್ಲೆಯ ಅಲೈರ್ ಮಂಡಲ್ ನಿವಾಸಿ. ಆತ್ಮಹತ್ಯೆಗೂ ಮುನ್ನ ಆಚಾರ್ಯ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತನ್ನ ಹೆಂಡತಿಯನ್ನು ಆಕೆಯ ಪ್ರಿಯತಮನ ಜೊತೆ ಮದುವೆ ಮಾಡಿಸಿ ಅಂತ ಹೆತ್ತವರಿಗೆ ಹೇಳಿದ್ದಾರೆ.

    ಏನಿದು ಘಟನೆ?:
    ಎರಡು ವರ್ಷದ ಹಿಂದೆ ಆಚಾರ್ಯ ಅವರು ಉಷಾ ರಾಣಿ ಎಂಬಾಕೆಯನ್ನು ವರಿಸಿದ್ದರು. ದಂಪತಿಗೆ ಈಗಾಗಲೇ 1 ವರ್ಷದ ಮಗುವೂ ಇದೆ. ಕಳೆದ ವರ್ಷವಷ್ಟೇ ಆಚಾರ್ಯ ತನ್ನ ಪತ್ನಿ ಹಾಗೂ ಮಗುವಿನ ಜೊತೆ ಶಮೀರ್ ಪೆಟ್ ನ ತುರ್ಕಪಲ್ಲಿ ಎಂಬಲ್ಲಿ ಬಂದು ನೆಲೆಸಿದ್ದರು. ಅಲ್ಲದೇ ಸ್ಥಳೀಯ ಕಾರ್ಖಾನೆಯೊಂದರಲ್ಲಿ ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿದ್ದರು.

    ಬುಧವಾರ ತಂದೆ ಕೆ ಸತ್ಯನಾರಾಯಣ್ ಅವರ ಮೊಬೈಲ್ ಗೆ ಆಚಾರ್ಯ ಮೆಸೇಜ್ ಮಾಡಿದ್ದಾರೆ. ಅದರಲ್ಲಿ ನೆರೆಯಮನೆಯ ಶ್ರೀಕಾಂತ್ ಎಂಬಾತನಿಂದಾಗಿ ಆತ್ಮಹತ್ಯೆಗೆ ಶರಣಾಗುವುದಾಗಿ ತಿಳಿಸಿದ್ದಾರೆ. ಕೂಡಲೇ ಸತ್ಯನಾರಾಯಣ್ ಅವರು ಮಗನಿಗೆ ಕರೆ ಮಾಡಿದ್ದಾರೆ. ಆದ್ರೆ ಆಚಾರ್ಯ ಅದಾಗಲೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದ ಆತಂಕಗೊಂಡ ಹೆತ್ತವರು ಆಚಾರ್ಯ ಮನೆಗೆ ದೌಡಾಯಿಸಿದ್ದಾರೆ. ಈ ವೇಳೆ ಮಗ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವುದು ಕಂಡುಬಂದಿದೆ.

    ಘಟನೆಯ ಬಳಿಕ ಸ್ಥಳೀಯರು ಜಮಾಯಿಸಿದ್ದು, ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣಕ್ಕೆ ಪೊಲೀಸರು ಸ್ಥಳಕ್ಕೆ ಬಂದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ರವಾನಿಸಿದ್ರು. ಈ ಸಂಬಂಧ ಇನ್ಸ್ ಪೆಕ್ಟರ್ ಡಿ ಭಾಸ್ಕರ್ ರೆಡ್ಡಿ ಪ್ರತಿಯಿಸಿದ್ದು, ಆಚಾರ್ಯ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಮ್ಮ ಪತ್ನಿಗೆ ಶ್ರೀಕಾಂತ್ ಎಂಬಾತನ ಜೊತೆ ಅನೈತಿಕ ಸಂಬಂಧವಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ನನ್ನಂತಹ ಮಗ ಯಾವ ತಂದೆ-ತಾಯಿಗೂ ಹುಟ್ಟಬಾರದು. ಜೀವನದಲ್ಲಿ ಸೋತಿದ್ದೇನೆ ಅಂತ ತಂದೆ-ತಾಯಿ ಬಳಿ ಕ್ಷಮೆ ಕೇಳಿದ್ದಾರೆ. ಹಾಗೆಯೇ ಶ್ರೀಕಾಂತ್ ಜೊತೆ ಪತ್ನಿ ಉಷಾಳಿಗೆ ಮದುವೆ ಮಾಡಿಕೊಡಿ. ಇದು ನನ್ನ ಕೊನೆಯ ಆಸೆ ಆಗಿದೆ. ಅವಳ ಹೆತ್ತವರು ಈ ಬಗ್ಗೆ ಏನೂ ಹೇಳಲಾರರು ಅಂತ ಬರೆದಿರುವುದಾಗಿ ತಿಳಿಸಿದ್ದಾರೆ.

    ಸದ್ಯ ಆಚಾರ್ಯ ತಂದೆಯ ದೂರಿನಂತೆ ಪೊಲೀಸರು ಶಂಕಾಸ್ಪದ ಸಾವು ಅಂತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಆಚಾರ್ಯ ಮೃತದೇಹವನ್ನು ಗುರುವಾರ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

  • ಫೇಸ್ ಬುಕ್ ಮೂಲಕ ತ್ರಿವಳಿ ತಲಾಖ್ ನೀಡಿದ ಪತಿ

    ಫೇಸ್ ಬುಕ್ ಮೂಲಕ ತ್ರಿವಳಿ ತಲಾಖ್ ನೀಡಿದ ಪತಿ

    ಗಾಂಧಿನಗರ: ಫೇಸ್‍ಬುಕ್ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ಗುಜರಾತ್ ರಾಜ್‍ಕೋಟ್ ನ ಧೋರಾಜಿ ಪ್ರದೇಶದಲ್ಲಿ ನಡೆದಿದೆ.

    ಕಾನೂನತ್ಮಾಕವಾಗಿ ತ್ರಿವಳಿ ತಲಾಕ್ ನೀಡುವುದನ್ನು ನಿಷೇಧಿಸಿದ್ದರೂ ರಫೀಕ್ ಹನ್ ಎಂಬ ವ್ಯಕ್ತಿ ತನ್ನ ಪತ್ನಿ ಸರಬಾನೊ ಅವರಿಗೆ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಮೂಲಕ ತಲಾಕ್ ನೀಡಿದ್ದಾನೆ.

    ಪತಿಯಿಂದ ತಲಾಖ್ ಸಂದೇಶ ಪಡೆದ ಪತ್ನಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರೂ ಈವರೆಗೂ ಅಧಿಕಾರಿಗಳು ವ್ಯಕ್ತಿಯ ವಿರುದ್ಧ ಲಿಖಿತ ದೂರು ದಾಖಲಿಸಿಕೊಂಡಿಲ್ಲ ಎಂದು ಸ್ಥಳಿಯ ಮಾಧ್ಯಮವೊಂದು ವರದಿ ಮಾಡಿದೆ.

    ಅಂದಹಾಗೇ ಈ ದಂಪತಿಗೆ 2015 ರಲ್ಲಿ ಮದುವೆಯಾಗಿದ್ದರು. ಬಳಿಕ ಇಬ್ಬರ ಸಂಬಂಧದಲ್ಲಿ ಬಿರುಕು ಉಂಟಾಗಿ ಒಂದು ವರ್ಷದ ನಂತರ ಪತ್ನಿ ಸರಬಾನೊ ತವರು ಸೇರಿದ್ದರು. ಇಬ್ಬರ ದಾಂಪತ್ಯ ಜೀವನ ಸುಧಾರಿಸಲು ಆಕೆಯ ಪೋಷಕರು ರಫೀಕ್‍ನ ಜೊತೆ ಮಾತುಕತೆ ನಡೆಸಿದ್ದರು ಸಮಸ್ಯೆ ಬಗೆಹರಿಸಲು ವಿಫಲಾಗಿದ್ದರು. ಬಳಿಕ ಸರಬಾನೊ ಕೌಟುಂಬಿಕ ನ್ಯಾಯಾಲಯದಲ್ಲಿ ಪತಿಯಿಂದ ಜೀವನಾಂಶ ನೀಡಲು ಅರ್ಜಿ ಸಲ್ಲಿದ್ದರು.

    ಕೋರ್ಟ್ ಸರಬಾನೊಗೆ ಅರ್ಜಿ ವಿಚಾರಣೆ ನಡೆಸಿ ಮಾಸಿಕ ಮೂರು ಸಾವಿರ ರೂ. ನೀಡುವಂತೆ ರಫೀಕ್‍ಗೆ ಆದೇಶಿಸಿತ್ತು. ಆದರೆ ಕೆಲ ಕಾಲ ಜೀವನಾಂಶ ನೀಡಿದ ರಫೀಕ್ ಕಳೆದ ಐದು ತಿಂಗಳಿಂದ ಯಾವುದೇ ಹಣ ನೀಡಿರಲಿಲ್ಲ. ಹೀಗಾಗಿ ಕೋರ್ಟ್‍ಗೆ ಹಾಜರಾಗುವಂತೆ ರಫೀಕ್‍ಗೆ ವಾರಂಟ್ ನೀಡಲಾಗಿತ್ತು. ಅದರಂತೆ ಹಾಜರಾದ ಆತ ಸರಿಯಾದ ರೀತಿಯಲ್ಲಿ ಜೀವನಾಂಶ ಪಾವತಿಸುವುದಾಗಿ ನ್ಯಾಯಾಲಯದಲ್ಲಿ ಭರವಸೆ ನೀಡಿದ್ದ.

    ಆದರೆ ಫೆಬ್ರವರಿ 25 ರಂದೆ ರಫೀಕ್ ತನ್ನ ಪತ್ನಿಯ ಫೋಟೋವನು ಫೇಸ್‍ಬುಕ್ ನಲ್ಲಿ ಫೋಸ್ಟ್ ಮಾಡಿ ನಾನು ಇಂದು ನನ್ನ ಪತ್ನಿಗೆ ವಿಚ್ಛೇದನ ನೀಡಿದ್ದೇನೆ, ತಲಾಖ್, ತಲಾಖ್, ತಲಾಖ್ ಎಂದು ಬರೆದುಕೊಂಡಿದ್ದ. ಇದನ್ನು ಗಮನಿಸಿದ ಪತ್ನಿ ಪೊಲೀಸ್ ಠಾಣೆಗೆ ತೆರಳಿ ದೂರನ್ನು ಸಲ್ಲಿಸಿದ್ದರು. ಆದರೆ ಸರಬಾನೊ ಅವರ ದೂರು ಪಡೆದ ಪೊಲೀಸರು ರಫೀಕ್ ವಿರುದ್ಧ ಎಫ್‍ಐಆರ್ ದಾಖಲಿಸದೆ ನಿರ್ಲಕ್ಷ ವಹಿಸಿದ್ದರು. ಇದರ ವಿರುದ್ಧ ಮತ್ತೆ ಸರಬಾನೊ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸರಬಾನೊ ಪರ ವಕೀಲ ಕಾರ್ತಿಕೇಯ ಪರೇಖ್, ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಗಮನ ಸೆಳೆಯಲು ತೀರ್ಮಾನಿಸಿದ್ದು, ಸಾಮಾಜಿಕ ಜಾಲತಾಣದ ಮೂಲಕ ರಫೀಕ್ ನೀಡಿರುವ ತಲಾಖ್ ಕಾನೂನು ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.

  • ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ- ಕೊಲ್ಕತ್ತಾ ಪೊಲೀಸ್ ಠಾಣೆಯಲ್ಲಿ ಪತ್ನಿ ಹಸೀನ್ ಜಹಾನ್ ದೂರು

    ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ- ಕೊಲ್ಕತ್ತಾ ಪೊಲೀಸ್ ಠಾಣೆಯಲ್ಲಿ ಪತ್ನಿ ಹಸೀನ್ ಜಹಾನ್ ದೂರು

    ನವದೆಹಲಿ: ಟೀಂ ಇಂಡಿಯಾ ಕ್ರಿಕೆಟರ್ ಶಮಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬರ್ತಿದೆ. ಮ್ಯಾಚ್ ಫಿಕ್ಸಿಂಗ್‍ನಲ್ಲಿ ಪಾಲ್ಗೊಳ್ಳುವ ಮೂಲಕ ಶಮಿ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಅಂತ ಸ್ವತಃ ಶಮಿ ಪತ್ನಿ ಹಸೀನ್ ಜಹಾನ್ ಆರೋಪ ಮಾಡಿದ್ದಾರೆ.

    ಶಮಿ ನನಗೆ ದ್ರೋಹ ಎಸಗಿದಂತೆ ದೇಶಕ್ಕೂ ದ್ರೋಹ ಎಸಗಬಹುದು. ಪಾಕಿಸ್ತಾನದ ಅಲಿಶಾ ಎಂಬ ಯುವತಿಯಿಂದ ಶಮಿ ಹಣ ಸ್ವೀಕರಿಸಿದ್ದಾನೆ. ಇಂಗ್ಲೆಂಡ್‍ನ ಮಹಮ್ಮದ್ ಭಾಯ್ ಮೂಲಕ ಶಮಿಗೆ ಫಿಕ್ಸಿಂಗ್ ಹಣ ಸಿಕ್ಕಿದೆ. ಮ್ಯಾಚ್ ಫಿಕ್ಸಿಂಗ್ ಸಂಬಂಧ ನನ್ನ ಬಳಿ ಎಲ್ಲಾ ಸಾಕ್ಷ್ಯ ಇದೆ. ಇನ್ನಷ್ಟು ಸಾಕ್ಷ್ಯ ಬೇಕಿದ್ರೆ ದುಬೈಗೆ ತೆರಳಿ ತನಿಖೆ ಮಾಡಿ ಅಂತಾ ಶಮಿ ಪತ್ನಿ ಆರೋಪ ಮಾಡಿದ್ದಾರೆ.

    ಈ ಬಗ್ಗೆ ಶಮಿ ಹಾಗೂ ಆತನ ಕುಟುಂಬದ ವಿರುದ್ಧ ಹಸೀನ್ ಕೊಲ್ಕತ್ತಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ಪತ್ನಿಗೆ ಕಿರುಕುಳ, ಅಕ್ರಮ ಸಂಬಂಧ ಆರೋಪ ನಿರಾಕರಿಸಿದ ಮಹಮದ್ ಶಮಿ

    ಪತಿ ಶಮಿಗೆ ಇಬ್ಬರೊಂದಿಗೆ ಅಕ್ರಮ ಸಂಬಂಧ ಇದೆ ಅಂತಾ ಹಸೀನ್ ಜಹಾನ್ ಬುಧವಾರದಂದು ದೂರಿದ್ದರು. ಇದಕ್ಕೆ ಸಂಬಂಧಿಸಿದಂತೆ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗೆ ಲಾಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ಕೂಡ ದಾಖಲಿಸಿದ್ದಾರೆ. ಈ ಕುರಿತು ಶಮಿ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ತನ್ನ ಗೌರವಕ್ಕೆ ಧಕ್ಕೆ ತರಲು ಈ ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಿದ್ದರು.

  • ಮಹಿಳಾ ದಿನಾಚರಣೆಯಂದು ಮಡದಿಯನ್ನು ಹೂವಿನ ಪಲಕ್ಕಿಯಲ್ಲಿ ಮೆರವಣಿಗೆ ಮಾಡಿದ ಮಾಜಿ ಸಚಿವ ಜನಾರ್ದನರೆಡ್ಡಿ!

    ಮಹಿಳಾ ದಿನಾಚರಣೆಯಂದು ಮಡದಿಯನ್ನು ಹೂವಿನ ಪಲಕ್ಕಿಯಲ್ಲಿ ಮೆರವಣಿಗೆ ಮಾಡಿದ ಮಾಜಿ ಸಚಿವ ಜನಾರ್ದನರೆಡ್ಡಿ!

    ಬಳ್ಳಾರಿ: ವಿಶ್ವ ಮಹಿಳಾ ದಿನಾಚರಣೆ ದೇಶದೆಲ್ಲೆಡೆ ವಿಭಿನ್ನವಾಗಿ ವಿಶಿಷ್ಟವಾಗಿ ಆಚರಣೆ ಮಾಡಿದರೆ, ಮಾಜಿ ಸಚಿವ ಜನಾರ್ದನರೆಡ್ಡಿ ತಮ್ಮ ಮೆಚ್ಚಿನ ಮಡದಿಯನ್ನು ಹೂವಿನಿಂದ ಅಲಂಕಾರ ಮಾಡಿದ ಸಾರೋಟದಲ್ಲಿ ಕೂರಿಸಿ ಸವಾರಿ ಮಾಡಿದ್ದಾರೆ.

    ಮಹಿಳಾ ದಿನಾಚರಣೆಯಂದು ಸಾಧನೆ ಮಾಡಿದ ಮಹಿಳೆಯರಿಗೆ, ತಾಯಂದಿರಿಗೆ ಸನ್ಮಾನ ಮಾಡಿ ಪ್ರೀತಿಯ ಕಾಣಿಕೆಯನ್ನ ನೀಡ್ತಾರೆ. ಆದ್ರೆ ಸಚಿವರು ತಮ್ಮ ಸಾಧನೆಗೆ ಬೆಂಬಲವಾಗಿದ್ದ ಪತ್ನಿ ಲಕ್ಷ್ಮಿ ಅರುಣಾರನ್ನು ಹೂ ಅಲಂಕಾರ ಮಾಡಿದ ಸೈಕಲ್ ಸಾರೋಟದಲ್ಲಿ ಕೂರಿಸಿ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಣೆ ಮಾಡಿದರು.

    ಪತ್ನಿಯನ್ನು ಹೂ ಅಲಂಕಾರದ ಸಾರೋಟದಲ್ಲಿ ಕೂರಿಸಿ ತಾವೂ ಸವಾರಿ ಮಾಡುತ್ತಿರುವ ಫೋಟೋಗಳನ್ನು ಜನಾರ್ದನ ರೆಡ್ಡಿ ತಮ್ಮ ಫೇಸ್‍ಬುಕ್ ಪೇಜ್ ನಲ್ಲಿ ಹಾಕಿ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಮಡದಿಯೊಂದಿಗೆ ಮಹಿಳಾ ದಿನಾಚರಣೆ ಆಚರಿಸಿಕೊಂಡ ಸಚಿವರ ಫೇಸ್ ಬುಕ್ ಪೋಸ್ಟ್ ಹಲವರು ಶೇರ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.