Tag: ಪತ್ನಿ

  • ಪ್ರಿಯಕರನ ಜೊತೆ ಸೇರಿ ತಾಳಿ ಕಟ್ಟಿದ ಗಂಡನನ್ನೇ ಮುಗಿಸಿ ಇಬ್ಬರೂ ಜೈಲುಪಾಲಾದ್ರು!

    ಪ್ರಿಯಕರನ ಜೊತೆ ಸೇರಿ ತಾಳಿ ಕಟ್ಟಿದ ಗಂಡನನ್ನೇ ಮುಗಿಸಿ ಇಬ್ಬರೂ ಜೈಲುಪಾಲಾದ್ರು!

    ಚಿಕ್ಕಬಳ್ಳಾಪುರ: ಗಂಡನನ್ನೇ ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

    ಚಿಕ್ಕಬಳ್ಳಾಪುರದ 8ನೇ ವಾರ್ಡಿನಲ್ಲಿ 30 ವರ್ಷದ ಛಾಯಾಕುಮಾರ್ ಎಂಬಾತ ಮನೆಯ ಮುಂದೆ ಕೊಲೆಯಾಗಿ ಹೋಗಿದ್ದನು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪತ್ನಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

    ಕೊಲೆ ಮಾಡಿದ್ದು ಯಾಕೆ?
    ಮೂಲತಃ ಸೂಲಕುಂಟೆ ಗ್ರಾಮದ ಟ್ರಾಕ್ಟರ್ ಚಾಲಕನಾಗಿದ್ದ ಮೃತ ಛಾಯಾಕುಮಾರ್ ಹಾಗೂ ಜಾನಕಿಗೆ ಮದುವೆಯಾಗಿ 4 ವರ್ಷಗಳು ಕಳೆದಿದ್ದು, ಒಂದು ಮಗು ಕೂಡ ಇದೆ. ಆದ್ರೆ ಮಗುವಾದ ಬಳಿಕ ಕುಡಿತದ ದಾಸನಾಗಿದ್ದ ಛಾಯಾಕುಮಾರ್ ಜಾನಕಿ ಮೇಲೆ ಹಲ್ಲೆ ಮಾಡುತ್ತಿದ್ದನು. ವಾರಕ್ಕೊಂದು ಸಲ ಅಥವಾ ಎರಡು ಸಲ ಮಾತ್ರ ಮನೆಗೆ ಬರ್ತಿದ್ದನು. ಬಂದಾಗ ಕುಡಿದ ಅಮಲಿನಲ್ಲಿ ಜಾನಕಿ ಮೇಲೆ ಹಲ್ಲೆ ಮಾಡ್ತಿದ್ದನು ಅಂತ ಪತ್ನಿ ಜಾನಕಿ ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ತಾಳಿ ಕಟ್ಟಿದ ಗಂಡನನ್ನೇ ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದ್ಳಾ ಪತ್ನಿ?

    ಗಂಡನ ಹಲ್ಲೆಯಿಂದಾಗಿ ಬೇಸತ್ತ ಜಾನಕಿ ಮಂಚೇನಹಳ್ಳಿ ಬಳಿಯ ಆರ್ಕುಂದ ಗ್ರಾಮದ ಕುಮಾರ್ ಎಂಬಾತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ. ಗಂಡ ಪದೇ ಪದೇ ಕುಡಿದು ಬಂದು ಹೊಡಿತಾನೆ ಅಂತ ಜಾನಕಿ ಹಾಗೂ ಪ್ರಿಯಕರ ಕುಮಾರ್ ಇಬ್ಬರು ಸೇರಿ ಕೊಲೆ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಅಲ್ಲದೇ ಒಂದು ತಿಂಗಳ ಮೊದಲೇ ಕುಮಾರ್ ಚಾಕುವೊಂದನ್ನು ತಂದು ಜಾನಕಿಗೆ ಕೊಟ್ಟಿದ್ದಾನೆ. ಕೊಲೆಯಾದ ದಿನ ಛಾಯಾಕುಮಾರ್ ಮಧ್ಯರಾತ್ರಿ ಮನೆಗೆ ಬರ್ತಾನೆ ಅನ್ನೋದನ್ನು ಖಾತ್ರಿ ಮಾಡಿಕೊಂಡ ಜಾನಕಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು. ಮಧ್ಯರಾತ್ರಿ ಮನೆಗೆ ಬಂದ ಛಾಯಾಕುಮಾರ್ ಮೇಲೆ ಮುಗಿಬಿದ್ದ ಜಾನಕಿ ಹಾಗೂ ಪ್ರಿಯಕರ ಕುಮಾರ್ ಹಲ್ಲೆ ಮಾಡಿದ್ದಾರೆ. ಈ ವೇಳೆ ಮೂವರ ಮಧ್ಯೆ ನಡೆದ ಜಗಳ ತಾರಕಕ್ಕೇರಿದ್ದು, ಕುಮಾರ್ ಚಾಕುವಿನಿಂದ ಛಾಯಾಕುಮಾರ್ ಕುತ್ತಿಗೆಗೆ ಇರಿದಿದ್ದಾನೆ. ಮನೆಯಲ್ಲಿ ಆರಂಭವಾದ ಜಗಳ ಮನೆಯ ಹೊರಗಡೆಯವರೆಗೂ ನಡೆದು ಕೊನೆಗೆ ಮರಳು ದಿಬ್ಬದ ಮೇಲೆ ಛಾಯಾಕುಮಾರ್ ಕುಸಿದು ಮೃತಪಟ್ಟಿದ್ದಾನೆ.

    ನನಗೇನು ಗೊತ್ತಿಲ್ಲವೆಂದಿದ್ದಳು: ಕೊಲೆ ನಡೆದ ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಛಾಯಕುಮಾರ್ ಪತ್ನಿಯ ಬಳಿಕ ಹೇಳಿಕೆ ಪಡೆದಿದ್ದರು. ಈ ವೇಳೆ ನನಗೆ ಏನು ಗೊತ್ತಿಲ್ಲ ಸರ್ ಅಂತ ಕಥೆ ಕಟ್ಟಿದ್ದಳು. ಆದ್ರೆ ಬಲವಾದ ಅನುಮಾನದ ಮೇಲೆ ಜಾನಕಿಯನ್ನ ವಶಕ್ಕೆ ಪಡೆದು ಪೊಲೀಸರು ಬೆಂಡೆತ್ತಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ.

    ಸದ್ಯ ಚಿಕ್ಕಬಳ್ಳಾಪುರ ಪೊಲೀಸರು ಪಾತಕಿ ಪತ್ನಿ ಜಾನಕಿ ಹಾಗೂ ಪ್ರಿಯಕರ ಕುಮಾರ್ ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

  • ತಾಳಿ ಕಟ್ಟಿದ ಗಂಡನನ್ನೇ ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದ್ಳಾ ಪತ್ನಿ?

    ತಾಳಿ ಕಟ್ಟಿದ ಗಂಡನನ್ನೇ ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದ್ಳಾ ಪತ್ನಿ?

    ಚಿಕ್ಕಬಳ್ಳಾಪುರ: ಪತಿ ಹಾಗೂ ಪತ್ನಿ ನಡುವೆ ನಡೆದ ಜಗಳದಲ್ಲಿ ಪತಿಯೊರ್ವ ಬರ್ಬರವಾಗಿ ಕೊಲೆಗೀಡಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ಎಂಜಿ ರಸ್ತೆಯ 8 ನೇ ವಾರ್ಡ್ ನಲ್ಲಿ ಈ ಘಟನೆ ನಡೆದಿದ್ದು, ಮನೆಯ ಪಕ್ಕದಲ್ಲಿ ಛಾಯಾಕುಮಾರ್ (30) ಎಂಬಾತನ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯ ಬಟ್ಟೆ ಹರಿದಿದ್ದು, ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದೆ. ಅಲ್ಲದೇ ದೇಹವೆಲ್ಲಾ ರಕ್ತದಿಂದ ಕೂಡಿದೆ. ಹೀಗಾಗಿ ಗಲಾಟೆ ನಡೆದು ಕೊಲೆಯಾಗಿರೋದು ದೃಢವಾಗಿದೆ.

    ಮೃತ ವ್ಯಕ್ತಿ ವೃತ್ತಿಯಲ್ಲಿ ಚಾಲಕನಾಗಿದ್ದು, ಪತ್ನಿ ಜಾನಕಿ ಹಾಗೂ ಇತರರು ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೆಯ ಹೊರ ಭಾಗದಲ್ಲಿ ಮೃತದೇಹ ಪತ್ತೆಯಾದ್ರೂ, ಮನೆಯ ಅಕ್ಕಪಕ್ಕ ಸೇರಿದಂತೆ ಮನೆಯ ಒಳಭಾಗದಲ್ಲೂ ರಕ್ತದ ಕಲೆಗಳಿವೆ. ಹೀಗಾಗಿ ಪತ್ನಿ ಜಾನಕಿ ಹಾಗೂ ಛಾಯಾಕುಮಾರ್ ನಡುವೆ ಜಗಳ ನಡೆದು ಗಲಾಟೆಯಲ್ಲಿ ಕೊಲೆ ನಡೆದಿರಬಹುದು ಅಂತ ಮೇಲ್ನೋಟಕ್ಕೆ ತಿಳಿದುಬರ್ತಿದೆ.

    ಜಾನಕಿ ಹಾಗೂ ಛಾಯಾಕುಮಾರ್ ನಡುವೆ ಪದೇ ಪದೇ ಜಗಳ ನಡೆಯುತ್ತಿದ್ದು, ಛಾಯಾಕುಮಾರ್ ಮನೆಗೆ ಬರ್ತಿರಲಿಲ್ಲವಂತೆ. ಹೀಗಾಗಿ ಜಾನಕಿ ಅಕ್ರಮ ಸಂಬಂಧ ಹೊಂದಿರಬಹುದು ಅಂತ ಅಂದಾಜಿಸಲಾಗಿದೆ. ಆದ್ರೆ ಆಕಸ್ಮಿಕವಾಗಿ ಕಳೆದ ರಾತ್ರಿ ಗಂಡ ಮನೆಗೆ ಬಂದಾಗ ಅನೈತಿಕ ಸಂಬಂಧವನ್ನ ಕಣ್ಣಾರೆ ಕಂಡಿರಬಹುದು ಅಥವಾ ಅನೈತಿಕ ಸಂಬಂಧದ ವಿಚಾರವಾಗಿ ಜಗಳ ನಡೆದು ಕೊಲೆಯಾಗಿರಬಹುದು ಅಂತ ಊಹಿಸಲಾಗಿದೆ.

    ಈ ಸಂಬಂಧ ಪತ್ನಿ ಜಾನಕಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಕಾರ್ತಿಕ್ ರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ. ಪತ್ನಿ ಮೇಲೆಯೇ ಅನುಮಾನ ಬಲವಾಗಿದ್ದು, ಸತ್ಯ ಬಾಯ್ಬಿಡಿಸಲು ಪೊಲೀಸರು ಮುಂದಾಗಿದ್ದಾರೆ.

    ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ತವರು ಮನೆಗೆ ಹೋದ ಪತ್ನಿಗೆ ಬುದ್ಧಿ ಕಲಿಸಲು ಹೋಗಿ ಎಡವಟ್ಟು ಮಾಡ್ಕೊಂಡ ಪತಿರಾಯ!

    ತವರು ಮನೆಗೆ ಹೋದ ಪತ್ನಿಗೆ ಬುದ್ಧಿ ಕಲಿಸಲು ಹೋಗಿ ಎಡವಟ್ಟು ಮಾಡ್ಕೊಂಡ ಪತಿರಾಯ!

    ಲಕ್ನೋ: ಅಳಿಯನೊಬ್ಬ ವೇಶ್ಯೆಯನ್ನು ತನ್ನ ಜೊತೆ ಪತ್ನಿಯ ತವರು ಮನೆಗೆ ಕರೆದುಕೊಂಡ ಹೋಗಿ ಒದೆ ತಿಂದ ಘಟನೆ ಬುಧವಾರ ಉತ್ತರ ಪ್ರದೇಶದ ಫಿಲ್‍ಖುವಾದ ಮೊಹಲ್ಲಾ ಸಿದ್ದಿಕಪೂರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೋತ್‍ವಾಲಿದಲ್ಲಿರುವ ಮೊಹೆಲ್ಲಾ ಸಿದ್ದಿಪುರಿ ನಿವಾಸಿಯ ಯುವತಿಗೆ ಮಸೂರಿಯ ಯುವಕನ ಜೊತೆ ಮದುವೆಯಾಗಿತ್ತು. ಇಬ್ಬರ ನಡುವೆ ಒಂದು ಚಿಕ್ಕ ಜಗಳ ನಡೆದಿದೆ. ಇಬ್ಬರ ನಡುವೆ ಆದ ಜಗಳದಿಂದ ಪತ್ನಿ 15 ದಿನಗಳ ಹಿಂದೆ ತನ್ನ ತವರು ಮನೆ ಸೇರಿದ್ದಳು. ಆದರಿಂದ ಪತಿ ತನ್ನ ಪತ್ನಿಯ ತವರು ಮನೆಗೆ ವೇಶ್ಯೆಯನ್ನು ಕರೆದುಕೊಂಡು ಹೋಗಿದ್ದನು ಎಂದು ಹೇಳಲಾಗಿದೆ.

    ತವರು ಮನೆಗೆ ಬಂದಿದ್ದ ಪತ್ನಿಗೆ ಬುದ್ಧಿ ಕಲಿಸಲು ಪತಿ ತನ್ನ ಜೊತೆ ವೇಶ್ಯೆಯನ್ನು ಕರೆದುಕೊಂಡು ಹೋಗಿದ್ದಾನೆ. ಆದರೆ ಪತ್ನಿ ತನ್ನ ಪತಿಯ ಜೊತೆ ವೇಶ್ಯೆಯನ್ನು ನೋಡುತ್ತಿದ್ದಂತೆ ಆತನ ಮೇಲೆ ರೇಗಾಡಿದ್ದಾಳೆ. ಅಲ್ಲದೇ ಆಕೆಯ ತವರು ಮನೆಯವರು ಆತನನ್ನು ಸರಿಯಾಗಿ ಥಳಿಸಿದ್ದಾರೆ. ಥಳಿತಕ್ಕೊಳಕ್ಕಾಗುತ್ತಿದ್ದಂತೆಯೇ ಪತ್ನಿ ಮನೆಯ ನೆರೆಮನೆಯವರು ಬಂದು ಪತಿಯನ್ನು ರಕ್ಷಿಸಿದ್ದಾರೆ.

    ಅಳಿಯ ಕುಡಿದ ನಶೆಯಲ್ಲಿ ತನ್ನ ಮಾವನ ಮನೆಗೆ ವೇಶ್ಯೆಯನ್ನು ಕರೆದುಕೊಂಡು ಹೋಗಿದ್ದನು. ನಶೆಯಲ್ಲಿ ಇದ್ದ ಅಳಿಯನಿಗೆ ತನ್ನ ಪತ್ನಿ ಅಲ್ಲಿ ಇರುವುದನ್ನು ಮರೆತು ಹೋಗಿದ್ದನು. ಪತಿಯ ಜೊತೆ ವೇಶ್ಯೆಯನ್ನು ನೋಡಿ ಪತ್ನಿ ರೇಗಾಡಿ, ಆಕೆಯ ಮನೆಯವರು ಆತನನ್ನು ಕೋಲಿನಿಂದ ಹೊಡೆದಿದ್ದಾರೆ. ಜೊತೆಗೆ ಆ ವೇಶ್ಯೆಗೂ ಕಪಾಳಮೋಕ್ಷ ಮಾಡಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಘಟನೆಯ ಬಳಿಕ ಗ್ರಾಮಸ್ಥರು ಆತನನ್ನು ರಕ್ಷಿಸಿ ಮಸೂರಿಗೆ ಕಳುಹಿಸಿದ್ದರು. ವೇಶ್ಯೆ ಕೂಡ ಸಮಯ ಸಿಕ್ಕದ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾಳೆ. ಪತಿಯ ಈ ವರ್ತನೆಯಿಂದ ಪತ್ನಿ ತನ್ನ ತವರು ಮನೆಯಲ್ಲೇ ಉಳಿದುಕೊಂಡಿದ್ದಾಳೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

  • ಬ್ಲೂಫಿಲಂನಲ್ಲಿರೋದು ನೀನೇ ಅಂತ ಪತ್ನಿಗೆ ಕಾಟ- ಪ್ರಶ್ನೆ ಮಾಡಿದ್ರೆ ದೊಡ್ಡವರು ಗೊತ್ತೆಂದು ಡಿಕೆಶಿ ಆಪ್ತನಿಂದ ಧಮ್ಕಿ!

    ಬ್ಲೂಫಿಲಂನಲ್ಲಿರೋದು ನೀನೇ ಅಂತ ಪತ್ನಿಗೆ ಕಾಟ- ಪ್ರಶ್ನೆ ಮಾಡಿದ್ರೆ ದೊಡ್ಡವರು ಗೊತ್ತೆಂದು ಡಿಕೆಶಿ ಆಪ್ತನಿಂದ ಧಮ್ಕಿ!

    ಬೆಂಗಳೂರು: ಬ್ಲೂಫಿಲಂ ನೋಡಿ ಪತ್ನಿಗೆ ನಿತ್ಯ ಟಾರ್ಚರ್ ಕೊಡುತ್ತಿದ್ದಾನೆಂದು ಇಂಧನ ಸಚಿವ ಡಿ ಕೆ ಶಿವಕುಮಾರ್ ಆಪ್ತನ ಮೇಲೆ ಆರೋಪ ಕೇಳಿ ಬಂದಿದೆ.

    ಚನ್ನಪಟ್ಟಣದಲ್ಲಿ ಡಿಕೆಶಿ ಜೊತೆ ಗುರುತಿಸಿಕೊಂಡಿರುವ ಕಾಂತರಾಜ್, 30 ವರ್ಷಗಳ ಹಿಂದೆ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ. ಪತ್ನಿ ಬೇರೆ ಜಾತಿ ಎಂದು ಮನೆಯವರು ವಿರೋಧಿಸಿದ್ದರಿಂದ ಮತ್ತೊಂದು ಮದುವೆ ಮಾಡಿಸಿಕೊಂಡಿದ್ದಾನೆ.

    ಕಾಂತರಾಜ್ ಮೊದಲ ಪತ್ನಿಯನ್ನು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಪ್ಪನ ಪಾಳ್ಯದಲ್ಲಿ ಇರಿಸಿದ್ದನು. ಇತ್ತ ಇತ್ತೀಚಿಗೆ ಮಂಡ್ಯದಲ್ಲಿ ಬೇರೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ಆ ಬಳಿಕ ವಿನಾಕಾರಾಣ ಟಾರ್ಚರ್ ಕೊಡುತ್ತಿದ್ದಾರೆಂದು ಮೊದಲ ಪತ್ನಿ ಇದೀಗ ಆರೋಪಿಸಿದ್ದಾರೆ.

    ಅಷ್ಟೇ ಅಲ್ಲದೇ ಕಾಂತರಾಜ್ ಬ್ಲೂಫಿಲಂ ನೋಡಿ ನೀಲಿ ಚಿತ್ರದಲ್ಲಿರುವುದು ನೀನೇ ಎಂದು ನಿತ್ಯ ಟಾರ್ಚರ್ ನೀಡುತ್ತಿದ್ದಾನೆ. ಕಾಂತರಾಜ್ ಬೇರೋಬ್ಬಳನ್ನು ನೋಡಿ ನೀಲಿ ಚಿತ್ರದಲ್ಲಿರುವ ಮುಖ ನಿನ್ನ ಮುಖದ ಚಹರೆ ಒಂದೇ ರೀತಿ ಇದೆ ಎಂದು ಕಿರುಕುಳ ನೀಡುತ್ತಿದ್ದಾನೆ ಅಂತ ಅವರು ಆರೋಪಿಸಿದ್ದಾರೆ.

    ನೀನು ನೀಲಿ ಚಿತ್ರದ ದಂಧೆಗೆ ಇಳಿದ್ದಿದ್ದೀಯಾ. ನಿನ್ನ ಸಹವಾಸ ನನಗೆ ಬೇಡ ಎಂದು ಕಾಂತರಾಜ್ ಮೊದಲ ಪತ್ನಿಯನ್ನು ದೂರ ಮಾಡಲು ಮುಂದಾಗಿದ್ದಾನೆ. ಅಷ್ಟೇ ಅಲ್ಲದೇ ಆ ವಿಡಿಯೋವನ್ನು
    ಗೆಳೆಯರೆಲ್ಲರಿಗೂ ಕಳಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾನೆಂದು ಪತ್ನಿ ಆರೋಪಿಸಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪತಿ ಕಾಂತರಾಜು ವಿರುದ್ಧ ದೂರು ನೀಡಿದ್ದಾರೆ.

    ಕಾಂತರಾಜ್ ಎರಡು ಮದುವೆ ಸಾಲದೆಂದು ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದನು. ಮಂಡ್ಯದಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ಪತ್ನಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಸ್ತ್ರೀ ಲೋಲ ಕಾಂತರಾಜ್ ನಡೆ ಬಗ್ಗೆ ಪ್ರಶ್ನಿಸಿದ್ರೆ ಧಮ್ಕಿ ಹಾಕುತ್ತಾನೆ. ನನಗೆ ಸಿಎಂ ಹಾಗೂ ಡಿಕೆಶಿ ಗೊತ್ತು. ಅದೇನ್ ಮಾಡ್ಕೊಳ್ತಿ ಮಾಡ್ಕೋ ಎಂದು ಕಾಂತರಾಜ್ ಬೆದರಿಸುತ್ತಾನೆ ಅಂತ ಅವರು ದೂರಿನಲ್ಲಿ ತಿಳಿಸಿದ್ದಾರೆ.

    ಕಾಂತರಾಜ್ ಚನ್ನಪಟ್ಟಣದಲ್ಲಿ ಕಾಂಗ್ರೆಸ್‍ನ ಸ್ಥಳೀಯ ಮುಖಂಡನಾಗಿ ಗುರುತಿಸಿಕೊಂಡಿದ್ದು, ಸದ್ಯ ಪತಿಯ ನಡೆಯಿಂದ ಮೊದಲ ಪತ್ನಿ ಹಾಗೂ ಇಬ್ಬರು ಮಕ್ಕಳು ಕಂಗಾಲಾಗಿದ್ದಾರೆ.

  • 75 ವರ್ಷದ ಪತಿಯ ತಲೆಗೆ ಪೇವರ್ ಬ್ಲಾಕ್‍ನಲ್ಲಿ ಹೊಡೆದು ಬರ್ಬರವಾಗಿ ಕೊಲೆಗೈದ ಪತ್ನಿ!

    75 ವರ್ಷದ ಪತಿಯ ತಲೆಗೆ ಪೇವರ್ ಬ್ಲಾಕ್‍ನಲ್ಲಿ ಹೊಡೆದು ಬರ್ಬರವಾಗಿ ಕೊಲೆಗೈದ ಪತ್ನಿ!

    ಮುಂಬೈ: ಕೆಲ ವರ್ಷಗಳಿಂದ ಕಿರುಕುಳ ನೀಡುತ್ತಿದ್ದನೆಂದು ಹಾಗೂ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಸಿಟ್ಟುಗೊಂಡ ಪತ್ನಿ ತನ್ನ 75 ವರ್ಷದ ಪತಿಯನ್ನು ನೆಲಕ್ಕೆ ಹಾಕುವ ಪೇವರ್ ಬ್ಲಾಕ್ ನಲ್ಲೇ ಹೊಡೆದು ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ.

    ಈ ಘಟನೆ ಚೆಂಬೂರು ಸ್ಲಮ್ ನಲ್ಲಿ ನಡೆದಿದ್ದು, ಪತಿಯನ್ನು ಕೊಲೆಗೈದ ಬಳಿಕ 65 ವರ್ಷದ ಪತ್ನಿ ಯಾರಿಗೂ ಅನುಮಾನ ಬಾರದೆಂದು ಶವವದೊಂದಿಗೆ ರಾತ್ರಿಯಿಡಿ ಕಳೆದಿದ್ದಾಳೆ.

    ಘಟನೆ ವಿವರ: ಕಳೆದ 40 ವರ್ಷದ ಹಿಂದೆ ಧನ್ನುದೇವಿ, ಛೋಟಾಲ್ ಮೌರ್ಯ ಎಂಬವರನ್ನು ವರಿಸಿದ್ದಳು. ಛೋಟಾಲ್ ಮೌರ್ಯ ಇಬ್ಬರು ಮಹಿಳೆಯರ ಜೊತೆ ಅನೈತಿಕ ಸಂಬಂಧ ಹೊಂದಿರುವುದಾಗಿ ಪತ್ನಿ ಧನ್ನುದೇವಿಗೆ ಸಂಶಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆಕೆ ಪತಿಯನ್ನು ಕೊಲೆಗೈದಿದ್ದಾಳೆ.

    ಚೆಂಬುರಿನ ಕೃಷ್ಣ ಮೆನನ್ ನಗರದಲ್ಲಿ ವೃದ್ಧರೊಬ್ಬರು ಗಂಭೀರಗಾಯಗೊಂಡು ಬಿದ್ದಿರುವುದರ ಮಾಹಿತಿ ಪಡೆದ ತಿಲಕ ನಗರ ಪೊಲೀಸರು ಮೌರ್ಯ ಅವರ ಪತ್ನಿ ಹಾಗೂ ಮೂವರು ಗಂಡುಮಕ್ಕಳೊಂದಿಗೆ ಸ್ಥಳಕ್ಕೆ ದೌಡಾಯಿಸಿ, ಕೂಡಲೇ ಮೌರ್ಯರನ್ನು ರಾಜವಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಮೌರ್ಯ ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಇದೇ ವೇಳೆ ಪತಿ ಹೇಗೆ ಸಾವನ್ನಪ್ಪಿದ್ದಾರೆಂದು ನನಗೆ ತಿಳಿದಿಲ್ಲ ಅಂತ ಪತ್ನಿ ಪೊಲೀಸರಿಗೆ ತಿಳಿಸಿದ್ದಾಳೆ.

    ಇತ್ತ ವೈದ್ಯರು ಮೌರ್ಯ ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ಇದೊಂದು ಕೊಲೆ ಕೇಸಾಗಿದೆ ಅಂತ ರಾಜವಾಡಿ ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಹೀಗಾಗಿ ತಿಲಕನಗರ ಪೊಲೀಸರು ಕೂಡಲೇ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಮೃತರ ಪತ್ನಿ ಹಾಗೂ ಮೂವರು ಮಕ್ಕಳನ್ನು ಕೂಡ ವಿಚಾರಣೆ ನಡೆಸಲಾಗಿದೆ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆ ಚುರುಕುಗೊಳಿಸಿದ್ರು. ಈ ವೇಳೆ ಘಟನೆ ನಡೆದ ವೇಳೆ ಮೌರ್ಯ ಅವರ ಪತ್ನಿ ಬಿಟ್ಟರೆ ಬೇರೆ ಯಾರು ಅವರ ಮನೆಯಲ್ಲಿ ಇರಲಿಲ್ಲ. ಈ ವಿಚಾರನ್ನು ತಿಳಿದುಕೊಂಡ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಿದಾಗ ನಾನೇ ಕೊಲೆ ಮಾಡಿದ್ದೇನೆ ಎಂದು ಪತ್ನಿ ಬಾಯ್ಬಿಟ್ಟಿದ್ದಾಳೆ. ಕೂಡಲೇ ಆಕೆಯ ಮೇಲೆ ಕೇಸ್ ದಾಖಲಿಸಿಕೊಂಡು, ಬಂಧಿಸಲಾಗಿದೆ ಅಂತ ಅವರು ವಿವರಿಸಿದ್ದಾರೆ.

    ಬಂಧಿತ ಮಹಿಳೆಯನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ, ಪತಿ ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ ನನ್ನೊಂದಿಗೆ ಜಗಳವಾಡಿದ್ರು. ಅಲ್ಲದೇ ಕೆಲ ವರ್ಷಗಳಿಂದ ಕಿರುಕುಳ ಕೊಡುತ್ತಿದ್ದರು. ಇದರಿಂದ ಬೇಸತ್ತು ಕೊಲೆ ಮಾಡಲು ನಿರ್ಧರಿಸಿದೆ. ಹೀಗಾಗಿ ನಮಗಮಿಬ್ಬರಿಗೆ ಜಗಳವಾದ ಬಳಿಕ ಅವರು ಮನೆಯ ಹೊರಗಡೆ ಮಲಗಿದ್ದರು. ಈ ವೇಳೆ ನಾನು ಅಲ್ಲೇ ಇದ್ದ ಪೇವರ್ ಬ್ಲಾಕ್ ತೆಗೆದುಕೊಂಡು ಬಂದು ಅವರ ತಲೆಗೆ ಹೊಡೆದಿದ್ದೇನೆ. ಈ ಕುರಿತು ಯಾರಿಗೂ ನನ್ನ ಮೇಲೆ ಸಂಶಯ ಬರಬಾರದೆಂಬ ನಿಟ್ಟಿನಲ್ಲಿ ಬೆಳಗ್ಗಿನವರೆಗೆ ಶವದೊಂದಿಗೆ ಮಲಗಿದ್ದೆ ಎನ್ನುವುದನ್ನು ತಿಳಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • 2ನೇ ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ವಿರೋಧ-ಇಬ್ಬರು ಬೇಡ ಅಂತಾ ವಿಷ ಕುಡಿದ ಪತಿ

    2ನೇ ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ವಿರೋಧ-ಇಬ್ಬರು ಬೇಡ ಅಂತಾ ವಿಷ ಕುಡಿದ ಪತಿ

    ಕೋಲಾರ: ಗಂಡ-ಹೆಂಡತಿ ನಡುವೆ ಜಗಳ ಆಗಿ ಅದು ಪಂಚಾಯ್ತಿವರೆಗೂ ಹೋಗಿದ್ದಕ್ಕೆ ಮನನೊಂದು ಪತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದ ಮಾಲೂರು ಪಟ್ಟಣದ ಜಯ ಕರ್ನಾಟಕ ವೇದಿಕೆ ಕಚೇರಿಯಲ್ಲಿ ನಡೆದಿದೆ.

    ನಾಗರಾಜ್ ರಾವ್ ಆತ್ಮಹತ್ಯೆ ಮಾಡಿಕೊಂಡ ಪತಿ. ನಾಗರಾಜ್ ರಾವ್ ಹಾಗೂ ಎರಡನೇ ಪತ್ನಿ ರುಕ್ಮಿಣಿ (ಹೆಸರು ಬದಲಾಯಿಸಲಾಗಿದೆ) ನಡುವೆ ಜಗಳ ನಡೆದಿದೆ. ನಾಗರಾಜರಾವ್ ಇತ್ತೀಚೆಗೆ ಎರಡನೇ ಮದುವೆಯಾಗಿದ್ದಕ್ಕೆ ಮೊದಲ ಪತ್ನಿ ಶ್ವೇತಾ (ಹೆಸರು ಬದಲಾಯಿಸಲಾಗಿದೆ) ತೀವ್ರ ವಿರೋಧಿಸಿದ್ದರು.

    ಜಯ ಕರ್ನಾಟಕ ವೇದಿಕೆ ತಾಲೂಕು ಅಧ್ಯಕ್ಷ ನಾರಾಯಣ ರೆಡ್ಡಿ ಸಮ್ಮುಖದಲ್ಲಿ ನಡೆದ ಪಂಚಾಯ್ತಿಯಲ್ಲಿ ವಿಷ ಕುಡಿದು ಸಾವನ್ನಪ್ಪಿದ್ದಾರೆ.

    ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗಂಡು ಮಗು ಹೆರಲಿಲ್ಲ ಎಂದು ಪತ್ನಿಗೆ ಬೆಂಕಿಯಿಟ್ಟ ಪತಿ!

    ಗಂಡು ಮಗು ಹೆರಲಿಲ್ಲ ಎಂದು ಪತ್ನಿಗೆ ಬೆಂಕಿಯಿಟ್ಟ ಪತಿ!

    ಬೆಂಗಳೂರು: ಪತ್ನಿ ಗಂಡು ಮಗು ಹೆರಲಿಲ್ಲ ಎಂದು ಗಂಡನೇ ಹೆಂಡತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಆನೇಕಲ್ ಕೊಪ್ಪಗೆಟ್ ಬಳಿ ನಡೆದಿದೆ.

    ವೀಣಾ (27) ಗಂಡನಿಂದ ಕೊಲೆಯಾದ ದುರ್ದೈವಿ. ಮಾರ್ಚ್ ತಿಂಗಳ 28 ರಂದು ತನ್ನ ಮನೆಗೆ ಆಕಸ್ಮಿಕ ಬೆಂಕಿ ಬಿದ್ದು ಪತ್ನಿ ಬೆಂಕಿಗೆ ಸಾವನ್ನಪ್ಪಿದ್ದಾಳೆ ಎಂದು ವೀಣಾಳ ಪತಿ ಶಶಿಕುಮಾರ್ ಕಥೆ ಕಟ್ಟಿದ್ದನು.

    ಆದರೆ ವೀಣಾಳ ಪೋಷಕರು ಮಗಳ ಸಾವು ಕೊಲೆಯೆಂದು ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಶಶಿಕುಮಾರ್ ಗಂಡು ಮಗು ಹೇರಲಿಲ್ಲ ಎಂದು ವೀಣಾಗೆ ಬೆಂಕಿ ಹಚ್ಚಿ ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ.

    ವೀಣಾ ಹಾಗೂ ಶಶಿಕುಮಾರ್ ಮದುವೆಯಾಗಿ 7 ವರ್ಷವಾಗಿದ್ದು, ಇವರಿಗೆ ಸಂಜನಾ ಹಾಗೂ ರುಚಿತಾ ಎಂಬ ಎರಡು ಹೆಣ್ಣುಮಕ್ಕಳಿದ್ದಾರೆ. ಆದರೆ ಗಂಡು ಮಗು ಹೆರಲಿಲ್ಲ ಎಂದು ನಿತ್ಯವೂ ಶಶಿಕುಮಾರ್ ವೀಣಾಗೆ ಕಿರುಕುಳ ನೀಡುತ್ತಿದ್ದ ಎಂದು ವೀಣಾ ಪೋಷಕರು ತಿಳಿಸಿದ್ದಾರೆ.

  • ಮದ್ವೆಯಾಗಿ ಮೂರು ತಿಂಗಳಾದ್ರು ಗುಡ್ ನ್ಯೂಸ್ ನೀಡದಕ್ಕೆ ಸೆಕ್ಸ್ ಫಿಲ್ಮ್ ತೋರಿಸಿ ಡಾಕ್ಟರ್ ಪತಿಯ ಕಿರುಕುಳ

    ಮದ್ವೆಯಾಗಿ ಮೂರು ತಿಂಗಳಾದ್ರು ಗುಡ್ ನ್ಯೂಸ್ ನೀಡದಕ್ಕೆ ಸೆಕ್ಸ್ ಫಿಲ್ಮ್ ತೋರಿಸಿ ಡಾಕ್ಟರ್ ಪತಿಯ ಕಿರುಕುಳ

    ಬೆಂಗಳೂರು: ಮದುವೆಯಾಗಿ ಮೂರು ತಿಂಗಳಾದ್ರೂ ಗರ್ಭಿಣಿಯಾಗಿಲ್ಲ ಅಂತಾ ವೈದ್ಯ ಪತಿಯೊಬ್ಬ ಪತ್ನಿಗೆ ಸೆಕ್ಸ್ ಫಿಲ್ಮ್ ಗಳನ್ನು ತೋರಿಸಿ ಕಿರುಕುಳ ನೀಡಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಂಜುನಾಥ್ ಕಿರುಕುಳ ನೀಡಿದ ವೈದ್ಯ ಪತಿ. ಮಂಜುನಾಥ್ ಮೂರು ವರ್ಷಗಳ ಹಿಂದೆ ಸ್ವಾತಿ (ಹೆಸರು ಬದಲಾಯಿಸಲಾಗಿದೆ) ಎಂಬವರನ್ನು ಮದುವೆ ಆಗಿದ್ದನು. ಆದ್ರೆ ಮದುವೆಯಾಗಿ ಮೂರು ತಿಂಗಳಾದ್ರು ಪತ್ನಿ ಗುಡ್ ನ್ಯೂಸ್ ನೀಡಿಲ್ಲ ಅಂತಾ ಸೆಕ್ಸ್ ಫಿಲ್ಮ್ ತೋರಿಸಿ ಅಸಹಜ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಕಿರುಕುಳ ನೀಡಿದ್ದಾನೆ ಅಂತಾ ಸ್ವಾತಿ ಆರೋಪಿಸಿದ್ದಾರೆ.

    ಸೆಕ್ಸ್ ಫಿಲ್ಮ್ ಗಳಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ರೆ ಮಕ್ಕಳು ಆಗುತ್ತವೆ ಅಂತಾ ಹಿಂಸೆ ನೀಡುತ್ತಿದ್ದನಂತೆ. ಅಸಹಜ ಲೈಂಗಿಕ ಕ್ರಿಯೆಗೆ ಸಹಕರಿಸದೇ ಹೋದ್ರೆ ನಿನ್ನ ಜೊತೆಗಿನ ಲೈಂಗಿಕ ಕ್ರಿಯೆ ವಿಡಿಯೋವನ್ನು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನು. ಇಷ್ಟು ದಿನಗಳಾದ್ರು ಮಕ್ಕಳಾಗದಕ್ಕೆ ಮಾವನ ಜೊತೆ ಮಲಗಬೇಕೆಂದು ಸಹ ಪತಿ ಮಂಜುನಾಥ್ ಬಲವಂತ ಮಾಡುತ್ತಿದ್ದ ಅಂತಾ ಹೇಳಲಾಗುತ್ತಿದೆ. ಇಷ್ಟು ಮಾತ್ರವಲ್ಲದೇ ಮಂಜನಾಥ್ ಸೋದರ ಪಾರೆಸ್ಟರ್ ರಂಗನಾಥ್ ಮತ್ತು ಅತ್ತೆ-ಮಾವ ಸಹ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರೆಂದು ಎಂದು ಸ್ವಾತಿ ದೂರಿನಲ್ಲಿ ದಾಖಲಿಸಿದ್ದಾರೆ.

    ಮೆಜೆಸ್ಟಿಕ್ ನಲ್ಲಿರುವ ನನ್ನ ತಂದೆಯ ಮನೆಯನ್ನು ಮಾರಾಟ ಮಾಡಿ ಹಣ ತಂದುಕೊಡನೇಕೆಂದು ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು. ಪತಿ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಪೊಲೀಸರು ಮಾತ್ರ ಮೂರು ತಿಂಗಳವರೆಗೂ ಎಫ್ ಐಆರ್ ದಾಖಲಿಸಿಕೊಂಡಿಲ್ಲ. ಎಫ್ ಐಆರ್ ದಾಖಲಿಸಿದ್ದನು ಪ್ರಶ್ನೆ ಮಾಡಿದ ನನ್ನ ತಂದೆಯ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಅಂತಾ ಸ್ವಾತಿ ಆರೋಪ ಮಾಡಿದ್ದಾರೆ.

    ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಪತಿಯ ಜೊತೆ ಜಗಳವಾಡಿ ಮಗುವನ್ನು ಎತ್ತಿಕೊಂಡು ಚಲಿಸುತ್ತಿದ್ದ ಬಸ್ಸಿನಿಂದ ಜಿಗಿದ ಮಹಿಳೆ!

    ಪತಿಯ ಜೊತೆ ಜಗಳವಾಡಿ ಮಗುವನ್ನು ಎತ್ತಿಕೊಂಡು ಚಲಿಸುತ್ತಿದ್ದ ಬಸ್ಸಿನಿಂದ ಜಿಗಿದ ಮಹಿಳೆ!

    ಕೊಪ್ಪಳ: ಪತಿ-ಪತ್ನಿ ಜಗಳದ ನಡುವೆ ಕೂಸು ಬಡವವಾದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಎ.ಪಿ.ಎಮ್.ಸಿ. ಬಳಿ ನಡೆದಿದೆ.

    ನೀಲಪ್ಪ ಹಾಗೂ ಸೌಭಾಗ್ಯ ಮಗುವಿನೊಂದಿಗೆ ಗಂಗಾವತಿಯಿಂದ ಹೊರಟಿದ್ದರು. ಬಸ್ ನಲ್ಲಿ ನೀಲಪ್ಪ ಹಾಗೂ ಸೌಭಾಗ್ಯ ಮಧ್ಯೆ ಜಗಳ ನಡೆಯಿತ್ತು. ಸೌಭಾಗ್ಯ ಜಗಳವಾಡಿ ಮಗುವಿನೊಂದಿಗೆ ಬಸ್ಸಿನಿಂದ ಕೆಳಗೆ ಜಿಗಿದಿದ್ದಾಳೆ. ಜಿಗಿದ ನಂತರ ಕೂಡಲೇ ಮಗು ಮೂರ್ಛೆ ಹೋಗಿದ್ದು, ತಂದೆ ನೀಲಪ್ಪ ಮಗುವನ್ನು ಎತ್ತುಕೊಂಡು ಹೋಗಿದ್ದಾರೆ.

    ಒಂದು ವರ್ಷದ ಮಗ ಮಂಜುನಾಥ್ ನೊಂದಿಗೆ ನೀಲಪ್ಪ ಕಾಣೆಯಾಗಿದ್ದು, ಗಾಯಗೊಂಡ ಸೌಭಾಗ್ಯಗೆ ಗಂಗಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಬಗ್ಗೆ ಬಸ್ ಡ್ರೈವರ್ ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಹೊಟ್ಟೆ, ಕಿವಿ, ಕತ್ತು ಕತ್ತರಿಸಿ ಪ್ರಿಯಕರನನ್ನು ಕೊಲೆ ಮಾಡಿದ ಪ್ರೇಯಸಿ!

    ಹೊಟ್ಟೆ, ಕಿವಿ, ಕತ್ತು ಕತ್ತರಿಸಿ ಪ್ರಿಯಕರನನ್ನು ಕೊಲೆ ಮಾಡಿದ ಪ್ರೇಯಸಿ!

    ಬೆಂಗಳೂರು: ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಪ್ರೇಯಸಿಯೇ ಪ್ರಿಯಕರನನ್ನು ಕೊಲೆ ಮಾಡಿದ ಅಚ್ಚರಿಯ ಘಟನೆ ನಗರದ ಪೀಣ್ಯದ ಚಿಕ್ಕಬಿದರಕಲ್ಲುವಿನಲ್ಲಿ ನಡೆದಿದೆ.

    ರಘು (32) ಕೊಲೆಯಾದ ವ್ಯಕ್ತಿ. ಪ್ರೇಯಸಿ ರೂಪಾ ತನ್ನ ಪ್ರಿಯಕರ ರಘುವನ್ನು ಕೊಲೆ ಮಾಡಿದ್ದಾಳೆ. ರಘು ಬುಧವಾರ ರಾತ್ರಿ ರೂಪಾಳ ಮಗಳ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದನು. ಇದ್ದರಿಂದ ಕೋಪಗೊಂಡು ರೂಪಾ ರಘುವನ್ನು ಕೊಲೆ ಮಾಡಿದ್ದಾಳೆ ಅಂತಾ ಹೇಳಲಾಗ್ತಿದೆ.

    ರಘು ಹಾಗೂ ರೂಪಾಳ ಗಂಡ ಪ್ರಭು ಒಂದೇ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ಪ್ರಭು ತಿಪಟೂರಿಗೆ ಜಾತ್ರೆಗೆ ತೆರಳಿದ್ದನು. ಪ್ರಭು ಇಲ್ಲದ ಕಾರಣ ಪ್ರಿಯಕರ ರಘು ರಾತ್ರಿ ರೂಪಾಳ ಮನೆಗೆ ಬಂದಿದ್ದನು. ಈ ವೇಳೆ ರೂಪಾ ಮತ್ತು ರಘು ಮಧ್ಯೆ ಮಗಳ ವಿಚಾರದಲ್ಲಿ ಜಗಳ ನಡೆದಿದ್ದು, ನಂತರ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ರೂಪಾ ತನ್ನ ಪ್ರಿಯಕರ ರಘುವಿನ ಹೊಟ್ಟೆ, ಕಿವಿ ಹಾಗು ಕತು ಕತ್ತರಿಸಿ ಕೊಲೆ ಮಾಡಿದ್ದಾಳೆ.

    ಸದ್ಯ ಪೀಣ್ಯ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸುತ್ತಿದ್ದು, ರೂಪಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.