Tag: ಪತ್ನಿ

  • ಅತಿ ವೇಗದ ಚಾಲನೆಗೆ ಟೆಕ್ಕಿ ಬಲಿ, ಕೋಮಾಕ್ಕೆ ಜಾರಿದ ಪತ್ನಿ!

    ಅತಿ ವೇಗದ ಚಾಲನೆಗೆ ಟೆಕ್ಕಿ ಬಲಿ, ಕೋಮಾಕ್ಕೆ ಜಾರಿದ ಪತ್ನಿ!

    ಹೈದರಾಬಾದ್: ಬೈಕ್ ಗಳೆರೆಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಟೆಕ್ಕಿ ದುರ್ಮರಣಕ್ಕೀಡಾಗಿದ್ದು, ಪತ್ನಿ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬಂಜಾರಾ ಹಿಲ್ಸ್ ನ ಇಂದಿರಾ ನಗರದಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಮೃತ ದುರ್ದೈವಿಯನ್ನು 33 ವರ್ಷದ ಜಿ. ರಾಜೇಂದ್ರ ಪ್ರಸಾದ್ ಎಂದು ಗುರುತಿಸಲಾಗಿದೆ. ಇವರು ಸಾಫ್ಟ್ ವೇರ್ ಎಂಜಿನಿಯರ್ ಆಗಿ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಇವರ ಪತ್ನಿ 30 ವರ್ಷದ ಭುವನ ಹಾಗೂ ಇನ್ನೊಬ್ಬ ಬೈಕ್ ಸವಾರ 32 ವರ್ಷದ ವಿಜಯ್ ಮುದಿರಾಜ್ ಗಂಭೀರ ಗಾಯಗೊಂಡಿದ್ದಾರೆ.

    ಘಟನೆ ವಿವರ:
    ಪ್ರಸಾದ್ ಹಾಗೂ ಭುವನ ಭಾನುವಾರ ಬೆಳಗ್ಗೆ ಕೃಷ್ಣ ನಗರದಲ್ಲಿರೋ ಆಂಜನೇಯ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಪೂಜೆ ಮುಗಿಸಿ ಮನೆಗೆ ವಾಸಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಗ್ರೀನ್ ಬವಾರ್ಚಿ ಎಂಬಲ್ಲಿ ಅಡ್ಡ ರಸ್ತೆಯಾಗಿ ಹೋಗಲೆಂದು ತನ್ನ ಪಲ್ಸರ್ ಬೈಕ್ ಟರ್ನ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಇನ್ನೊಂದು ಬಂದಿಯಿಂದ ಬಂದ ಬೈಕ್, ವೇಗವಾಗಿ ಬಂದು ಪ್ರಸಾದ್ ಬೈಕ್ ಗೆ ಗುದ್ದಿದೆ.

    ಪ್ರಸಾದ್ ಬೈಕಿಗೆ ಇನ್ನೊಂದು ಬೈಕ್ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಪ್ರಸಾದ್ ಹಾಗೂ ಭುವನ ಹಾಗೂ ಇನ್ನೊಂದು ಬೈಕ್ ಸವಾರ ಕೆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಪ್ರಸಾದ್ ತಲೆಯಿಂದ ಹೆಲ್ಮೆಟ್ ಹಾರಿದೆ. ಹೀಗಾಗಿ ರಸ್ತೆಗೆ ತಲೆ ಹೊಡೆದಿದ್ದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಇನ್ನು ಭುವನ ಹಾಗೂ ಮತ್ತೊಬ್ಬ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಭುವನ ಅವರು ಕೋಮಾದಲ್ಲಿದ್ದಾರೆ. ಬೈಕ್ ಸವಾರ ಮುದಿರಾಜ್ ನನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೂ ಕೂಡ ಕೋಮಾದಲ್ಲಿದ್ದಾರೆ ಅಂತ ಬಂಜಾರಾ ಹಿಲ್ಸ್ ಇನ್ಸ್ ಪೆಕ್ಟರ್ ಕೆ ಶ್ರೀನಿವಾಸ್ ತಿಳಿಸಿದ್ದಾರೆ.

    ಘಟನೆ ನಡೆದ ಸ್ಥಳ ಇಳಿಜಾರು ಪ್ರದೇಶವಾಗಿದ್ದರಿಂದ ಮುದಿರಾಜ್ ತನ್ನ ಬೈಕನ್ನು ವೇಗವಾಗಿ ಚಲಾಯಿಸಿದ ಪರಿಣಾಮ, ಬೈಕ್ ನಿಯಂತ್ರಣಕ್ಕೆ ತರಲು ಸಾಧ್ಯವಾಗದೆ ಈ ಅವಘಡ ಸಂಭವಿಸಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ಸದ್ಯ ಘಟನೆ ಸಂಬಂಧ ಐಪಿಸಿ ಸೆಕ್ಷನ್ 304 ಹಾಗೂ 338ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

  • ಕೇಳಿದಾಗ ಉಪಹಾರ ಕೊಟ್ಟಿಲ್ಲವೆಂದು ಮಕ್ಕಳ ಮುಂದೆಯೇ ಪತ್ನಿಯನ್ನ ಬರ್ಬರವಾಗಿ ಕೊಲೆಗೈದ!

    ಕೇಳಿದಾಗ ಉಪಹಾರ ಕೊಟ್ಟಿಲ್ಲವೆಂದು ಮಕ್ಕಳ ಮುಂದೆಯೇ ಪತ್ನಿಯನ್ನ ಬರ್ಬರವಾಗಿ ಕೊಲೆಗೈದ!

    ಲಕ್ನೋ: ಸಮಯಕ್ಕೆ ಸರಿಯಾಗಿ ಬೆಳಗಿನ ತಿಂಡಿ ಮಾಡಿಕೊಟ್ಟಿಲ್ಲವೆಂದು ಸಿಟ್ಟಿಗೆದ್ದ ಪತಿಮಹಾಶಯನೊಬ್ಬ ಪತ್ನಿ ಧರಿಸಿದ್ದ ಸ್ಕಾರ್ಫ್ ನಿಂದಲೇ ಆಕೆಯ ಕುತ್ತಿಗೆ ಬಿಗಿದು ಕೊಲೆಗೈದ ಘಟನೆ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ.

    ಪತಿ 32 ವರ್ಷದ ಮುಕೇಶ್ ಕುಮಾರ್, ತನ್ನ ಪತ್ನಿ 28 ವರ್ಷದ ರೇಖಾರನ್ನು ಕೊಲೆಗೈದಿದ್ದಾನೆ. ಈ ದಂಪತಿ 7 ವರ್ಷದ ಮಗ ಹಾಗೂ 5 ವರ್ಷದ ಮಗಳೊಂದಿಗೆ ಕುಲೇಸ್ರಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಘಟನೆ ನಡೆದ ಕೂಡಲೇ ನೆರೆಮನೆಯವರು ಮಹಿಳೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ ಆಕೆ ಅದಾಗಲೇ ಮೃತಪಟ್ಟಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.

    ಘಟನೆ ವಿವರ:
    ಮುಕೇಶ್ ಕುಮಾರ್ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಈತನ ಪತ್ನಿ ಮನೆಯಲ್ಲೇ ಇದ್ದು, ಮುಕೇಶ್ ಪ್ರತೀ ದಿನ ಆಕೆಯೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದನು. ಆದ್ರೆ ಶನಿವಾರ ಇವರಿಬ್ಬರ ಮಧ್ಯೆ ಉಪಹಾರದ ವಿಚಾರವಾಗಿ ಗಲಾಟೆ ನಡೆದಿದೆ. ಸಮಯಕ್ಕೆ ಸರಿಯಾಗಿ ಬೆಳಗ್ಗಿನ ತಿಂಡಿ ಮಾಡಿಕೊಟ್ಟಿಲ್ಲವೆಂದು ಪತಿ ತಗಾದೆ ತೆಗೆದಿದ್ದಾನೆ. ಈ ವಿಚಾರವಾಗಿ ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ.

    ಪರಿಣಾಮ ಗಂಡನ ಮನೆ ಬಿಟ್ಟು ತವರು ಮನೆಗೆ ತೆರಳಲು ಪತ್ನಿ ನಿರ್ಧರಿಸಿದ್ದರು. ಅಲ್ಲದೇ ತವರು ಮನೆಗೆ ಹೋಗಲೆಂದು ಬ್ಯಾಗ್ ಪ್ಯಾಕ್ ಮಾಡಿ ಹೊರಡಲು ಸಿದ್ಧರಾದ್ರು. ಈ ವೇಳೆ ಆಕೆಯನ್ನು ಮಕ್ಕಳು ಹಾಗೂ ಪತಿ ತಡೆದಿದ್ದಾರೆ. ಪತ್ನಿಯ ವರ್ತನೆಯಿಂದ ಸಿಟ್ಟುಗೊಂಡ ಪತಿ ಮುಕೇಶ್ ಆಕೆ ಧರಿಸಿದ್ದ ಸ್ಕಾರ್ಫ್ ಅನ್ನು ಕುತ್ತಿಗೆಗೆ ಬಿಗಿಯಾಗಿ ಸುತ್ತಿದ್ದಾನೆ. ಪರಿಣಾಮ ರೇಖಾ ಕುಸಿದುಬಿದ್ದಿದ್ದಾರೆ. ಇಬ್ಬರು ಪುಟ್ಟ ಮಕ್ಕಳ ಎದುರೇ ಪತ್ನಿಯನ್ನು ಪತಿ ಕೊಲೆಗೈದಿದ್ದಾನೆ. ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಘಟನೆಯಿಂದ ಭಯಭೀತರಾದ ಮಕ್ಕಳು ಜೋರಾಗಿ ಕಿರುಚಿಕೊಂಡಿದ್ದಾರೆ. ಹೀಗಾಗಿ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ನೆರೆಮನೆಯವರು ಮಹಿಳೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅದಾಗಲೇ ರೇಖಾ ಮೃತಪಟ್ಟಿದ್ದರು ಅಂತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ

    ಪ್ರಕರಣದ ಬಳಿಕ ತನಿಖೆಗೆ ಪೊಲೀಸರ ತಂಡವೊಂದು ಕುಲೆಸ್ರಾ ಗ್ರಾಮಕ್ಕೆ ತೆರಳಿ, ಮನೆಯಲ್ಲಿ ಆರೋಪಿಯನ್ನು ಹುಡುಕಾಡಿದ್ದಾರೆ. ಆದ್ರೆ ಮುಕೇಶ್ ತಲೆಮರೆಸಿಕೊಂಡಿದ್ದಾನೆ. ತನಿಖೆ ಮುಂದುವರಿಸಿದ ಪೊಲೀಸರು ಭಾನುವಾರ ಬೆಳಗ್ಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ ಯತ್ನ) ಪ್ರಕರಣ ದಾಖಲಿಸಲಾಗಿದೆ ಅಂತ ಪೊಲೀಸ್ ಅಧಿಕಾರಿ ತೋಮಸ್ ಹೇಳಿದ್ದಾರೆ.

  • ಪತಿಗೆ ಚಾಕು ಇರಿದು ತಾನೂ ಚುಚ್ಚಿಕೊಂಡ್ಳು!

    ಪತಿಗೆ ಚಾಕು ಇರಿದು ತಾನೂ ಚುಚ್ಚಿಕೊಂಡ್ಳು!

    ಗದಗ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯೊಬ್ಬಳು ಪತಿಗೆ ಚೂರಿ ಇರಿದು ಬಳಿಕ ತಾನೂ ಚುಚ್ಚಿಕೊಂಡಿರುವ ಘಟನೆ ಗದಗ ನಗರದ ಒಕ್ಕಲಗೇರಿ ಓಣಿಯಲ್ಲಿ ನಡೆದಿದೆ.

    ಪತ್ನಿ ಶ್ರೀದೇವಿಯಿಂದ ಈ ಕೃತ್ಯ ನಡೆದಿದ್ದು, ಪತಿ ಶ್ರೀಕಾಂತನ ಹೊಟ್ಟೆಗೆ ತೀವ್ರವಾಗಿ ಗಾಯವಾಗಿದೆ. ಸದ್ಯ ಅವರನ್ನು ಗದಗ ನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀದೇವಿ ತಾನೂ ಸಹ ಚಾಕು ಚುಚ್ಚಿಕೊಂಡಿದ್ದರಿಂದ ಆಕೆಗೂ ಸಣ್ಣಪುಟ್ಟ ಗಾಯಗಳಾಗಿದೆ.

    ಗಲಾಟೆ ನಡೆಯುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಸಮಯಕ್ಕೆ ಸರಿಯಾಗಿ ಇಬ್ಬರ ಜಗಳ ಬಿಡಿಸಿದ್ದು, ಹೆಚ್ಚಿನ ಅನಾಹುತವಾಗದಂತೆ ತಡೆದಂತಾಗಿದೆ. ತನ್ನ ಪತ್ನಿ ನನ್ನ ಮೇಲೆ ವಿನಾಕಾರಣ ಅನುಮಾನ ಪಡುತ್ತಿದ್ದಳು. ಅದಕ್ಕೆ ಈ ರೀತಿಯಾಗಿ ಮಾಡಿರುವುದು ಎಂದು ಸ್ವತಃ ಶ್ರೀಕಾಂತನೇ ಆರೋಪಿಸುತ್ತಿದ್ದಾನೆ.

    ಶ್ರೀದೇವಿ ಇತ್ತೀಚೆಗೆ ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದಳು ಅನ್ನೋ ಆರೋಪವೂ ಕೇಳಿಬಂದಿದೆ. ಈ ಘಟನೆ ಗದಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ರಾಡ್‍ನಿಂದ ತಲೆಗೆ ಹೊಡೆದು ಪತಿಯಿಂದ ಪತ್ನಿಯ ಬರ್ಬರ ಕೊಲೆ!

    ರಾಡ್‍ನಿಂದ ತಲೆಗೆ ಹೊಡೆದು ಪತಿಯಿಂದ ಪತ್ನಿಯ ಬರ್ಬರ ಕೊಲೆ!

    ಬೆಂಗಳೂರು: ರಾಡ್‍ನಿಂದ ತಲೆಯ ಭಾಗಕ್ಕೆ ಹೊಡೆದು ಗೃಹಿಣಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಕುರುಬರಹಳ್ಳಿಯ 12 ನೇ ಕ್ರಾಸ್ ನಲ್ಲಿ ನಡೆದಿದೆ.

    ಪತಿಯೇ ಪತ್ನಿಯನ್ನ ಕೊಲೆಗೈದಿದ್ದಾನೆ ಎಂದು ಶಂಕಿಸಲಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರಬಹುದು ಎನ್ನಲಾಗಿದೆ. ಇತ್ತೀಚಗೆ ದಂಪತಿ ಕುರುಬರಹಳ್ಳಿಯ ಬಾಡಿಗೆ ಮನೆಗೆ ಬಂದಿದ್ದರು.

    ಸದ್ಯ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗಂಡನಿಗಾಗಿ ನಡುರಸ್ತೆಯಲ್ಲಿಯೇ ಮಹಿಳೆಯರ ಡಿಶುಂ ಡಿಶುಂ-ಇಬ್ಬರ ಜಗಳದಲ್ಲಿ ಸುಸ್ತಾದ ಪತಿರಾಯ

    ಗಂಡನಿಗಾಗಿ ನಡುರಸ್ತೆಯಲ್ಲಿಯೇ ಮಹಿಳೆಯರ ಡಿಶುಂ ಡಿಶುಂ-ಇಬ್ಬರ ಜಗಳದಲ್ಲಿ ಸುಸ್ತಾದ ಪತಿರಾಯ

    ಬೀಜಿಂಗ್: ಇಬ್ಬರೂ ಮಹಿಳೆಯರು ತಮ್ಮ ಗಂಡನಿಗಾಗಿ ಕೂದಲು ಹಿಡಿದುಕೊಂಡು ಹೊಡೆದಾಡಿಕೊಂಡ ಘಟನೆ ಚೀನಾದ ಹ್ಯಾಂಝ್ಹೊಂಗ್ ನಲ್ಲಿ ನಡೆದಿದೆ. ಇಬ್ಬರೂ ಪತ್ನಿಯರು ಹೊಡೆದಾಡಿಕೊಳ್ಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಈ ಹಿಂದೆಯೂ ನಾನು ನನ್ನ ಕುಟುಂಬ ಮತ್ತು ಗಂಡನಿಂದ ದೂರ ಹೋಗು ಅಂತಾ ಎಚ್ಚರಿಕೆ ನೀಡಿದ್ದೆ ಎಂದು ಜೋರು ಜೋರಾಗಿ ಕಿರುಚುತ್ತಾ ಕೂದಲು ಹಿಡಿದು ಎಳೆದಾಡಿದ್ದಾರೆ. ಈ ಘಟನೆ ನಗರದ ನಡುರಸ್ತೆಯಲ್ಲೆ ನಡೆದಿದ್ದು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಎಲ್ಲ ದೃಶ್ಯಗಳನ್ನು ಸೆರೆಹಿಡಿದುಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ: ಬರಿಗಾಲಿನಲ್ಲಿರುವ ಮಹಿಳೆ ತನ್ನ ಪತಿಯ ಗರ್ಲ್ ಫ್ರೆಂಡ್‍ಳನ್ನು ಮಾರುಕಟ್ಟೆಯಲ್ಲಿ ಭೇಟಿಯಾಗಿದ್ದಾಳೆ. ಕೂಡಲೇ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಪತಿಯ ಗರ್ಲ್ ಫ್ರೆಂಡ್ ಹೈ ಹೀಲ್ ಸ್ಯಾಂಡಲ್ ಹಾಕಿದ್ದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ರೂ ಆಗಿಲ್ಲ. ಕೂಡಲೇ ಮಹಿಳೆ ಪತಿಯ ಗರ್ಲ್ ಫ್ರೆಂಡ್ ಕೂದಲು ಹಿಡಿದು ಎಳೆದಾಡಿದ್ದಾರೆ.

    ಈ ವೇಳೆ ಸ್ಥಳಕ್ಕಾಗಮಿಸಿದ ಪತಿ ತನ್ನ ಪತ್ನಿಗೆ ಆಕೆಯ ಹಲ್ಲೆ ಮಾಡಬೇಡವೆಂದು ಆದೇಶಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಮತ್ತೊಬ್ಬ ಮಹಿಳೆ `ಏ ನೀನು ಮಾಡಿದ್ದು ತಪ್ಪು’ ಅಂತಾ ಬೈದಿದ್ದಾರೆ. ಕೊನೆಗೆ ಇಬ್ಬರ ಜಗಳವನ್ನು ಬಿಡಿಸಲು ಪತಿ ಸುಸ್ತಾಗಿದ್ದಾನೆ. ಕೊನೆಗೆ ಮಹಿಳೆ ಮೊದಲು ನನಗೆ ವಿಚ್ಛೇದನ ನೀಡಿ ಆನಂತರ ಮಾತನಾಡು ಅಂತಾ ಹೇಳಿ ಹೊರಟು ಹೋಗಿದ್ದಾಳೆ.

  • ಪತ್ನಿ ಕುತ್ತಿಗೆಗೆ ಚಾಕು ಇರಿದು ಪತಿ ಪರಾರಿ!

    ಪತ್ನಿ ಕುತ್ತಿಗೆಗೆ ಚಾಕು ಇರಿದು ಪತಿ ಪರಾರಿ!

    ಬೀದರ್: ಪತಿಯೇ ಪತ್ನಿಗೆ ಚಾಕು ಇರಿದ ಘಟನೆಯೊಂದು ಬೀದರ್ ನಗರದ ವಿದ್ಯಾ ಕಾಲೋನಿಯಲ್ಲಿ ನಡೆದಿದೆ.

    ಆರೋಪಿ ಪತಿ ಪತ್ನಿ ಮಹಾದೇವಿಯ ಕುತ್ತಿಗೆಗೆ ಚಾಕು ಇರಿದಿದ್ದಾನೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡು ಪತ್ನಿ ಕುಸಿದು ಬಿದ್ದಿದ್ದಾರೆ. ಬಳಿಕ ಪತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸದ್ಯ ಗಾಯಾಳು ಪತ್ನಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಸ್ಥಳಕ್ಕೆ ದೌಡಾಯಿಸಿದ ಬೀದರ್ ಪೊಲೀಸರು, ಇದೊಂದು ಕೌಟುಂಬಿಕ ಕಲಹದಿಂದಾಗಿ ಪತಿ ಈ ಕೃತ್ಯ ಎಸಗಿರಬಹುದೆಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

    ಘಟನೆ ಸಂಬಂಧ ಬೀದರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಾಲ್ ಟ್ಯಾಂಪರಿಂಗ್ ಬಳಿಕ ಮಗುವನ್ನು ಕಳೆದುಕೊಂಡ ವಾರ್ನರ್ ದಂಪತಿ

    ಬಾಲ್ ಟ್ಯಾಂಪರಿಂಗ್ ಬಳಿಕ ಮಗುವನ್ನು ಕಳೆದುಕೊಂಡ ವಾರ್ನರ್ ದಂಪತಿ

    ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಆಸೀಸ್ ಆಟಗಾರ ವಾರ್ನರ್ ನಿಷೇಧಕ್ಕೆ ಒಳಗಾಗಿದ್ದರು. ಆದರೆ ಈ ವೇಳೆ ವಾರ್ನರ್ ಕುಟುಂಬದಲ್ಲಿ ನಡೆದ ಕಹಿ ಘಟನೆಯನ್ನು ವಾರ್ನರ್ ಪತ್ನಿ ಬಹಿರಂಗ ಪಡಿಸಿದ್ದಾರೆ.

    ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಜೀವನ ಕಹಿ ಘಟನೆಯ ಕುರಿತು ಮಾತನಾಡಿರುವ ವಾರ್ನರ್ ಪತ್ನಿ ಕ್ಯಾಂಡಿಸ್ ವಾರ್ನರ್, ಆಸೀಸ್ ತಂಡದ ಉಪನಾಯಕನ ಸ್ಥಾನಕ್ಕೆ ಪತಿ ರಾಜೀನಾಮೆ ನೀಡಿದ್ದು, ಬಳಿಕ ನಿಷೇಧಕ್ಕೆ ಒಳಗಾಗಿದ್ದು ತಮ್ಮಲ್ಲಿ ಹೆಚ್ಚಿನ ಮಾನಸಿಕ ಒತ್ತಡಕ್ಕೆ ಕಾರಣವಾಗಿತ್ತು. ಈ ವೇಳೆ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದ ನಾವು ಮಗುವನ್ನು ಕಳೆದು ಕೊಂಡೆವು ಎಂದು ತಿಳಿಸಿದ್ದಾರೆ.

    ವಾರ್ನರ್ ನಿಷೇಧಕ್ಕೊಳಗಾದ ವೇಳೆ ನಾನು ಗರ್ಭಿಣಿಯಾಗಿದ್ದೆ. ಘಟನೆಯ ನಂತರ ಮಾಧ್ಯಮ ವರದಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪತಿಯ ಬಗ್ಗೆ ಕಠಿಣ ಬರಹಗಳು ಪ್ರಕಟವಾಗುತ್ತಿದ್ದವು. ಈ ಸಂದರ್ಭದಲ್ಲಿ ತೀವ್ರ ಒತ್ತಡಕ್ಕೆ ಒಳಗಾದ ಪರಿಣಾಮ ಅಧಿಕ ರಕ್ತಸ್ರಾವವಾಗಿ ಗರ್ಭಪಾತವಾಯಿತು. ಈ ಕುರಿತು ಪತಿಗೆ ಮಾಹಿತಿ ನೀಡಿದೆ. ಆಗಾಗಲೇ ತನಗೆ ಗರ್ಭಪಾತವಾಗಿದ್ದು ಖಚಿತವಾಗಿತ್ತು ಎಂದು ತನ್ನ ನೋವಿನ ವಿಚಾರವನ್ನು ಬಹಿರಂಗ ಪಡಿಸಿದರು.

    ತಮ್ಮ ಜೀವನದ ಆ ಕಹಿ ಘಟನೆಗಳನ್ನು ಮರೆಯಲು ಸಾಧ್ಯವಿಲ್ಲ. ಮೂರನೇ ಮಗುವಿನ ಕುರಿತು ನಾವು ಎಷ್ಟು ಸಂತೋಷವಾಗಿದ್ದೆವೂ ಅದಕ್ಕಿಂತ ಹೆಚ್ಚು ದುಃಖವನ್ನು ನಾವು ಅನುಭವಿಸಿದ್ದೇವೆ. ದಕ್ಷಿಣ ಆಫ್ರಿಕಾ ಪ್ರವಾಸ ನಿಜಕ್ಕೂ ಭಯಾನಕವಾಗಿತ್ತು ಎಂದು ಹೇಳಿ ಭಾವುಕರಾದರು.

    ಡೇವಿಡ್ ವಾರ್ನರ್ ಹಾಗೂ ಕ್ಯಾಂಡಿಸ್ ದಂಪತಿಗೆ ಈಗಾಗಲೇ ಮೂರು ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ನಮಗೆ ಮೂರನೇ ಮಗುವಿನ ಆಗಮನದ ಕುರಿತು ವೈದ್ಯರು ಮಾಹಿತಿ ನೀಡಿದ್ದರು ಎಂದು ಕ್ಯಾಂಡಿಸ್ ವಾರ್ನರ್ ತಿಳಿಸಿದರು.

  • ವರದಕ್ಷಿಣೆಗಾಗಿ ಸೊಸೆಗೆ ಬೆಂಕಿ ಹಚ್ಚಿ ಕೊಂದ್ರು!

    ವರದಕ್ಷಿಣೆಗಾಗಿ ಸೊಸೆಗೆ ಬೆಂಕಿ ಹಚ್ಚಿ ಕೊಂದ್ರು!

    ಮುಂಬೈ: ವರದಕ್ಷಿಣೆಗಾಗಿ ಮಹಿಳೆಯನ್ನು ಪತಿ ಕುಟುಂಬಸ್ಥರು ಸಜೀವ ದಹಿಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯ ಮದನಪುರ ತಾಲೂಕಿನ ಮುಹಲಾನ್ ಗ್ರಾಮದಲ್ಲಿ ನಡೆದಿದೆ.

    24 ವರ್ಷದ ಚಂಚಲಾ ದೇವಿ ಸಾವನ್ನಪ್ಪಿದ ಮಹಿಳೆ. ಮಂಗಳವಾರ ಮಧ್ಯರಾತ್ರಿ ಚಂಚಲಾರ ಕೊಲೆಯಾಗಿದ್ದು, ಕುಟುಂಬಸ್ಥರು ಮಹಿಳೆಯ ಪೋಷಕರಿಗೂ ಮಾಹಿತಿ ನೀಡದೇ ಬುಧವಾರ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.

    ಚಂಚಲಾ ಸಾವಿನ ಸುದ್ದಿ ತಿಳಿದ ಗ್ರಾಮಕ್ಕೆ ಆಗಮಿಸಿದ ಪೋಷಕರು ಆಕೆಯ ಪತಿ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಚಂಚಲಾ ಮಾವ ಕುಮಾರ್ ಬಲಿ ಸಿಂಗ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

    ಚಂಚಲಾ ಪೋಷಕರು ಮೂಲತಃ ಜಾರ್ಖಂಡ್ ರಾಜ್ಯದ ಹುಸೇನಾಬಾದ್ ನಗರದ ನಿವಾಸಿಗಳು. ಮದುವೆ ಬಳಿಕ ಚಂಚಲಾಗೆ ಪತಿ ನೀರಜ್ ಸಿಂಗ್, ಮಾವ ಬಲಿ ಸಿಂಗ್ ಸೇರಿದಂತೆ ಇತರೆ ಕುಟುಂಬಸ್ಥರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಚಂಚಲಾ ತಂದೆ ಸುನಿಲ್ ಸಿಂಗ್ ಆರೋಪಿಸಿದ್ದಾರೆ.

    ಕೆಲವು ತಿಂಗಳ ಹಿಂದೆ ಗ್ರಾಮದಲ್ಲಿ ಜಮೀನು ಮಾರಿ ಬಂಗಾರದ ಚೈನ್ ತಂದುಕೊಡಲಾಗಿತ್ತು. ಆದ್ರೂ ಕೆಲವು ದಿನಗಳಿಂದ ಚಂಚಲಾಳನ್ನು ಕೊಲೆ ಮಾಡುತ್ತೇವೆ ಅಂತಾ ಧಮ್ಕಿ ಹಾಕುತ್ತಿದ್ದರು. ಸದ್ಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಅಂತಾ ಸಿನಿಲ್ ಸಿಂಗ್ ಹೇಳಿದ್ದಾರೆ.

  • ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಮೇಲೆ ಪೇದೆಯಿಂದ ಹಲ್ಲೆ!

    ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಮೇಲೆ ಪೇದೆಯಿಂದ ಹಲ್ಲೆ!

    ಗಾಂಧಿನಗರ: ಭಾರತ ತಂಡದ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಪತ್ನಿ ರೀವಾ ಮೇಲೆ ಪೊಲೀಸ್ ಪೇದೆಯೊಬ್ಬರು ಹಲ್ಲೆ ನಡೆಸಿದ ಘಟನೆ ಸೋಮವಾರ ಗುಜರಾತ್‍ನ ಜಾಮ್‍ನಗರದಲ್ಲಿ ನಡೆದಿದೆ.

    ಪೇದೆ ಸಂಜಯ್ ಅಹಿರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಜರಾತ್‍ನ ಸಾರು ಸೆಕ್ಷನ್ ರಸ್ತೆಯಲ್ಲಿ ರೀವಾ ಜಡೇಜಾ ಚಲಾಯಿಸುತ್ತಿದ್ದ ಕಾರು ಪೇದೆಯ ಬೈಕಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕೋಪಗೊಂಡ ಪೇದೆ ರೀವಾ ಜಡೇಜಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಸ್‍ಐ ಪ್ರದೀಪ್ ಸೇಜುಲ್ ತಿಳಿಸಿದ್ದಾರೆ.

    ರೀವಾ ತನ್ನ ಕಾರಿನಿಂದ ಪೇದೆ ಬೈಕಿಗೆ ಡಿಕ್ಕಿ ಹೊಡೆದ ಕಾರಣ ಆತ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಸದ್ಯ ನಾವು ರೀವಾಗೆ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದೇವೆ ಹಾಗೂ ಆ ಪೇದೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರದೀಪ್ ಸೇಜುಲ್ ಹೇಳಿದ್ದಾರೆ.

    ಪೇದೆ ಸಂಜಯ್ ಅಹಿರ್ ರೀವಾ ಜಡೇಜಾ ಅವರ ಜೊತೆ ಕ್ರೂರವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಪೇದೆ ರೀವಾ ಅವರ ತಲೆ ಕೂದಲನ್ನು ಎಳೆದು ದಯೆ ತೋರಿಸದೇ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ರೀವಾ ಅವರನ್ನು ಆ ಪೇದೆಯಿಂದ ರಕ್ಷಿಸಲಾಗಿದೆ ಎಂದು ಘಟನೆ ಸ್ಥಳದಲ್ಲಿದ್ದ ವಿಜಯ್‍ಸಿನ್ ಚೌಧ ಮಾಧ್ಯಮಕ್ಕೆ ತಿಳಿಸಿದ್ದಾರೆ. ಸದ್ಯ ಪೇದೆ ಸಂಜಯ್ ಅಹಿರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಪತ್ನಿಯೊಂದಿಗೆ ಅನೈತಿಕ ಸಂಬಂಧ – ಸ್ನೇಹಿತನನ್ನೇ ಕಲ್ಲಿನಿಂದ ಹೊಡೆದು ಕೊಲೆಗೈದ!

    ಪತ್ನಿಯೊಂದಿಗೆ ಅನೈತಿಕ ಸಂಬಂಧ – ಸ್ನೇಹಿತನನ್ನೇ ಕಲ್ಲಿನಿಂದ ಹೊಡೆದು ಕೊಲೆಗೈದ!

    ಹಾಸನ: ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯ ಮೇಲೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ.

    ನಗರದ ಕಾಟೀಹಳ್ಳಿ ಮಧು (32) ಕೊಲೆಯಾದ ವ್ಯಕ್ತಿಯಾಗಿದ್ದು, ಆರೋಪಿಗಳಾದ ಹಾಸನದ ವಲ್ಲಾಭಾಯಿ ರಸ್ತೆಯ ಲೋಕೇಶ (38), ದಿಲೀಪ (27) ಹಾಗೂ ಮದನ (35) ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಕಳೆದ 8 ದಿನಗಳ ಹಿಂದೆ ಮಧು ಎಂಬಾತನ ಶವ ನಗರದ ಸಂತೆಪೇಟೆ ಬಳಿ ಪತ್ತೆಯಾಗಿತ್ತು. ಈ ಕುರಿತು ಸ್ಥಳಿಯರಿಂದ ಮಾಹಿತಿ ಪಡೆದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು.

    ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
    ಪೊಲೀಸರು ಮೃತ ಮಧು ಫೋನ್ ನ ಕಾಲ್ ಲಿಸ್ಟ್ ಪರಿಶೀಲನೆ ನಡೆಸಿ ವೇಳೆ ಕೊನೆಯ ಕರೆ ಆರೋಪಿ ಲೋಕೇಶ್ ನಿಂದ ಬಂದಿತ್ತು. ಬಳಿಕ ಅನುಮಾನದ ಮೇಲೆ ಲೋಕೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ.

    ಕೊಲೆ ಮಾಡಿದ್ದು ಯಾಕೆ?
    ಆರೋಪಿ ಲೋಕೇಶ್ ಅತ್ಯಾಚಾರ ಪ್ರಕರಣವೊಂದರಲ್ಲಿ 7 ವರ್ಷ ಜೈಲು ಶಿಕ್ಷೆ ಅನುಭವಿಸಿ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ. ಬಿಡುಗಡೆಯಾದ ನಂತರ ತನ್ನ ಪತ್ನಿಗೆ ಮಧು ನಿರಂತರವಾಗಿ ಕರೆ ಮಾಡುತ್ತಿದ್ದ ವಿಚಾರ ಗೊತ್ತಾಗಿದೆ. ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದರಿಂದಲೇ ಮಧು ಕರೆ ಮಾಡುತ್ತಿದ್ದಾನೆ ಎನ್ನುವ ಅನುಮಾನ ಲೋಕೇಶನಿಗೆ ಬಂದಿದೆ. ಹೀಗಾಗಿ ಸ್ನೇಹಿತರ ಜೊತೆಗೂಡಿ ಮಧು ತಲೆ ಮೇಲೆ ಬಿಯರ್ ಬಾಟಲ್ ನಿಂದ ಹೊಡೆದು, ಬಳಿಕ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.

    ಸದ್ಯ ಆರೋಪಿಗಳನ್ನು ಬಂಧಿಸಿರುವ ಹಾಸನ ನಗರ ಠಾಣೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.