Tag: ಪತ್ನಿ

  • ಅಪ್ಪ, ಮಗ ಬಿರಿಯಾನಿ ತಿಂದಿದಕ್ಕೆ ಮನೆ ಬಿಟ್ಟು ಹೋದ ಪತ್ನಿ

    ಅಪ್ಪ, ಮಗ ಬಿರಿಯಾನಿ ತಿಂದಿದಕ್ಕೆ ಮನೆ ಬಿಟ್ಟು ಹೋದ ಪತ್ನಿ

    ಬೆಂಗಳೂರು: ಅಪ್ಪ ಹಾಗೂ ಮಗ ಬಿರಿಯಾನಿ ತಿಂದಿದಕ್ಕೆ ಪತ್ನಿ ಮನೆ ಬಿಟ್ಟು ಹೋದ ಘಟನೆಯೊಂದು ಬೆಂಗಳೂರಿನ ಕಮ್ಮಗೊಂಡನಹಳ್ಳಿಯಲ್ಲಿ ನಡೆದಿದೆ.

    ಅನಿತಾ ಸರ್ಕಾರ್ (ಹೆಸರು ಬದಲಾಯಿಸಲಾಗಿದೆ) ಮನೆ ಬಿಟ್ಟು ಹೋದ ಗರ್ಭಿಣಿ. ಪತಿ ರಾಜು ಮನೆಗೆ ಬಿರಿಯಾನಿ ತಂದು ತನ್ನ ಮಗ ಆದರ್ಶ್ ಜೊತೆ ತಿನ್ನುತ್ತಿದ್ದರು. ಆದರೆ ಬಿರಿಯಾನಿ ವಾಸನೆ ಆಗಲ್ಲ ಎಂದು ಅನಿತಾ ಜಗಳವಾಡಿದ್ದಾಳೆ. ಪತಿ ಜೊತೆ ಜಗಳವಾಡಿದ ನಂತರ ನಾನು ಇನ್ಮುಂದೆ ಅಡುಗೆ ಮಾಡೋದಿಲ್ಲ ಎಂದು ಅನಿತಾ ಹೇಳಿದಳು.

    ನಂತರ ಪತಿ ರಾಜು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಅನಿತಾ ಮನೆ ಬಿಟ್ಟು ಹೋಗಿದ್ದಾರೆ. ಸದ್ಯ ಈ ಬಗ್ಗೆ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    7 ವರ್ಷಗಳ ಹಿಂದೆ ಅನಿತಾ ಜೊತೆ ಮದುವೆಯಾಗಿದೆ. ನಾನು ಹಾಗೂ ಅನಿತಾ ಬೇರೆ ಮನೆ ಮಾಡಿಕೊಂಡು ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದೀವಿ. ಆದರೆ ಆಕೆ ನನಗೆ ಹುಷಾರಿಲ್ಲ ಎಂದು ಹೇಳಿದಳು ಆಗ ನಾನು 300 ರೂ. ಕೊಟ್ಟು ಆಸ್ಪತ್ರೆ ಬಳಿ ಬಿಟ್ಟು ಬಂದೆ. ಆದರೆ ಅನಿತಾ ವಾಪಸ್ ಮನೆಗೆ ಬರಲಿಲ್ಲ. ನಂತರ ಸಂಜೆ 4 ಹಂಟೆಗೆ ನಾನು ಅನಿತಾಗೆ ಫೋನ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಬಳಿಕ ನಾನು ಆಕೆಯ ತಂದೆ, ತಾಯಿ ಹಾಗೂ ಸಂಬಂಧಿಕರನ್ನು ವಿಚಾರಿಸಿದೆ. ಅಲ್ಲದೇ ಆಕೆಯನ್ನು ಹುಡುಕಿದೆ. ಆದರೆ ಅನಿತಾ ಎಲ್ಲೂ ಪತ್ತೆಯಾಗದಿದ್ದಾಗ ರಾತ್ರಿ 10.15 ಕ್ಕೆ ಠಾಣೆಗೆ ಬಂದು ಪತ್ನಿಯನ್ನು ಹುಡುಕಿ ಕೊಡುವುದಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿಯ ಶೀಲ ಶಂಕಿಸಿ ಬರ್ಬರ ಕೊಲೆ – ತಂದೆಯ ಜೊತೆ ತಾಯಿ ಹೆಣ ಮೂಟೆಕಟ್ಟಿದ ಪುತ್ರ

    ಪತ್ನಿಯ ಶೀಲ ಶಂಕಿಸಿ ಬರ್ಬರ ಕೊಲೆ – ತಂದೆಯ ಜೊತೆ ತಾಯಿ ಹೆಣ ಮೂಟೆಕಟ್ಟಿದ ಪುತ್ರ

    ಬೆಂಗಳೂರು: ಪತ್ನಿಯ ಶೀಲ ಶಂಕಿಸಿದ ಪತಿರಾಯ ಚಾಕುವಿನಿಂದ ಬರ್ಬರವಾಗಿ ಪತ್ನಿಯನ್ನ ಇರಿದು ಕೊಲೆಗೈದಂತಹ ಘಟನೆ ಬುಧವಾರ ತಡರಾತ್ರಿ ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಉತ್ತರ ಪ್ರದೇಶ ಮೂಲದ ಪ್ರೀತಿ ಕೊಲೆಯಾದಾ ಮಹಿಳೆ. ಇಪ್ಪತ್ತು ವರ್ಷದ ಹಿಂದೆ ಪ್ರೀತಿ, ಇರೇನ್ ಎಂಬಾತನನ್ನ ಮದ್ವೆಯಾಗಿದ್ದರು. ಎಂಟು ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ದಂಪತಿ ಮಧ್ಯೆ ಆಗಾಗ್ಗೆ ಗಲಾಟೆ ನಡೀತಿತ್ತು. ಪತ್ನಿಗೆ ಅನೈತಿಕ ಸಂಬಂಧ ಇರೋದಾಗಿ ಅನುಮಾನಿಸಿ ಪದೇ ಪದೇ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಬುಧವಾರ ಮದ್ಯಾಹ್ನ ಸುಮಾರು 2 ಗಂಟೆಗೆ ಪತ್ನಿ ಜೊತೆ ಇರೇನ್ ಗಲಾಟೆಗಿಳಿದಿದ್ದ, ಮಾತಿಗೆ ಮಾತು ಬೆಳೆದು ಇರೇನ್ ಚಾಕುವಿನಿಂದ ಪ್ರೀತಿಯ ಕತ್ತಿನ ಭಾಗಕ್ಕೆ ಎರಡು ಬಾರಿ ಇರಿದಿದ್ದಾನೆ.

    ಗಂಭೀರವಾಗಿ ಗಾಯಗೊಂಡ ಪ್ರೀತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಪ್ರೀತಿಯ 18 ವರ್ಷದ ಮಗ ಕಾಲೇಜು ಮುಗಿಸಿ ಮನೆಗೆ ಬರ್ತಿದ್ದಂತೆ ಕೊಲೆ ನಡೆದಿರೋದು ಗೊತ್ತಾಗಿದೆ. ಈ ವೇಳೆ ತಂದೆ ಇರೇನ್ ಜೊತೆ ಸೇರಿ ಮಗರಾಯ ತಾಯಿಯ ಹೆಣವನ್ನ ಬಾಡಿಗೆ ಮನೆಯಿಂದ ಮೂಟೆಕಟ್ಟಿ ಹೊತ್ತೊಯ್ಯಲು ಮುಂದಾಗಿದ್ದರು. ಇದನ್ನ ಗಮನಿಸಿದ ಅಕ್ಕಪಕ್ಕದ ಮನೆಯವರು ರಾಜಾಜಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯನಿರತರಾದ ಪೊಲೀಸರು ಇದೀಗ ಆರೋಪಿ ಇರೇನ್ ಹಾಗೂ ಆತನ ಮಗನನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟ್ರೋಲ್ ಮಾಡಿದವರಿಗೆ ಎಫ್‍ಬಿ ಲೈವ್ ಮೂಲಕ ಖಡಕ್ ಉತ್ತರಕೊಟ್ಟ ಸಮೀರಾಚಾರ್ಯ

    ಟ್ರೋಲ್ ಮಾಡಿದವರಿಗೆ ಎಫ್‍ಬಿ ಲೈವ್ ಮೂಲಕ ಖಡಕ್ ಉತ್ತರಕೊಟ್ಟ ಸಮೀರಾಚಾರ್ಯ

    ಬೆಂಗಳೂರು: ಇತ್ತೀಚೆಗೆ ‘ಕನ್ನಡದ ಕೋಟ್ಯಧಿಪತಿ’ ಯಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸಮೀರಾಚಾರ್ಯ ತಮ್ಮ ಪತ್ನಿ ಶ್ರಾವಣಿಯವರಿಗೆ ಹೇಳಿದ ಮಾತಿನ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದರು. ಈಗ ಸ್ವತಃ ಸಮೀರಾಚಾರ್ಯ ಅವರೇ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

    ಈ ಬಗ್ಗೆ ಫೇಸ್‍ಬುಕ್ ನಲ್ಲಿ ಒಂದು ವಿಡಿಯೋ ಮಾಡಿ ನಡೆದ ಘಟನೆಗಳ ಬಗ್ಗೆ ವಿವರ ನೀಡಿ ಸ್ಪಷ್ಟನೆ ಕೊಟ್ಟಿದ್ದಾರೆ. “ಬಹಳ ದಿನದಿಂದ ನನ್ನನ್ನು ಎಲ್ಲರೂ ನೆನೆಸಿಕೊಳ್ಳುತ್ತಿದ್ದೀರಿ. ಫೇಸ್ ಬುಕ್ ಪೇಜ್ ನಲ್ಲಿ ಬಹಳ ಜನರು ವಿಸಿಟ್ ಮಾಡುತ್ತಿದ್ದಾರೆ. ಆದ್ದರಿಂದ ಇತ್ತೀಚೆಗೆ ಸಮೀರಾಚಾರ್ಯ ಫುಲ್ ವೈರಲ್ ಆಗಿದ್ದಾರೆ. ಆದರೆ ಇಷ್ಟು ದಿನ ಸಮೀರಾಚಾರ್ಯ ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದರು ಯಾಕೆ ವೈರಲ್ ಆಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

    ಒಳ್ಳೆಯ ಕೆಲಸ
    ಪಾಠ – ಪ್ರವಚನ ಮಾಡುತ್ತಿದ್ದರೂ ಅದನ್ನು ಯಾರು ಶೇರ್ ಮಾಡಲಿಲ್ಲ. ಪ್ರತಿಯೊಂದು ಹಳ್ಳಿ ಹಳ್ಳಿಗೆ ಹೋಗಿ ನಮ್ಮ ದೇಶದ ಸಂಸ್ಕೃತಿಯನ್ನು ಹೇಳಿದ್ದರು ಅದನ್ನು ಯಾರು ಶೇರ್ ಮಾಡಿಲ್ಲ. ಪ್ರತಿ ಶನಿವಾರ, ಭಾನುವಾರ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣವನ್ನು ಉಚಿತವಾಗಿ ಕೊಡುತ್ತಿದ್ದರು ಅದನ್ನು ಯಾರು ವೈರಲ್ ಮಾಡಿಲ್ಲ. ಇನ್ನು ಸ್ಕೂಲ್ ತೆಗೆದು ರೈತರ ಮತ್ತು ಸೈನಿಕರ ಮಕ್ಕಳಿಗೆ ಶಿಕ್ಷಣ ಕೊಡಬೇಕು ಅಂತ ಹೊರಟರು. ಅದನ್ನು ಯಾರು ಅಷ್ಟು ವೈರಲ್ ಮಾಡಲಿಲ್ಲ ಎಂದು ಸಮೀರಾಚಾರ್ಯ ಹೇಳಿದ್ದಾರೆ.

    ಇತ್ತೀಚೆಗೆ `ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಗಂಡ ಹೆಂಡತಿ ಮಾತನಾಡಿ, ಆ ಕಾರ್ಯಕ್ರಮದ ವಾತಾವರಣಕ್ಕೆ ನಗು ತುಂಬಿ, ಎಲ್ಲರನ್ನು ನಗಿಸಲು ಪ್ರಯತ್ನ ಮಾಡಿದ್ದರು. ಅದೇ ಈಗ ಸಮೀರಾಚಾರ್ಯರಿಗೆ ಮುಳುವಾಯ್ತು ಅನ್ನಿಸುತ್ತದೆ. ಸಮೀರಾಚಾರ್ಯ ತಮ್ಮ ಹೆಂಡತಿನ ಬೈದರು ಎಂದು ಎಷ್ಟೋ ಜನ ಹೇಳುತ್ತಿದ್ದಾರೆ. ಅವರಿಗೆ ನಾನು ಉತ್ತರ ಕೊಡಬೇಕಿದೆ ಎಂದು ಹೇಳಿ ಕೋಟ್ಯಧಿಪತಿ, ಬಿಗ್‍ಬಾಸ್ ಕೆಲವು ದೃಶ್ಯಗಳನ್ನು ತೋರಿಸಿದ್ದಾರೆ.

    ಕೋಟ್ಯಧಿಪತಿ:
    ಕೋಟ್ಯಧಿಪತಿ ಕಾರ್ಯಕ್ರಮದಲ್ಲಿಯೇ ಜಯಶ್ರೀ ಮೇಡಂ ಒಂದು ಪ್ರಶ್ನೆ ಕೇಳಿದ್ದರು. `ಮದುವೆ ಆದ ಮೇಲೆ ಗಂಡಂದಿರು ಹೆಂಡತಿಯ ಮೇಲೆ ಪ್ರೀತಿ ಕಡಿಮೆ ಮಾಡುತ್ತಾರೆ ಯಾಕೆ?, ಅದು ಎಲ್ಲಿಗೆ ಹೋಗುತ್ತದೆ?’ ಎಂದು ಕೇಳಿದ್ದರು. ಅದಕ್ಕೆ ನಾನು `ಪ್ರೀತಿ ಎಲ್ಲಿಯೂ ಹೋಗುವುದಿಲ್ಲ. ನಾನು ಎಲ್ಲಿ ಹೋದರು ನನ್ನ ಪ್ರೀತಿ ನನ್ನ ಜೊತೆಗೆ ಬರುತ್ತದೆ’ ಅಂತ ನನ್ನ ಹೆಂಡತಿಯನ್ನು ತೋರಿಸಿ ಹೇಳಿದ್ದೆ ಎಂದು ಸಮೀರಾಚಾರ್ಯ ಹೇಳಿದ್ದಾರೆ.

    ಬಿಗ್‍ಬಾಸ್
    `ಬಿಗ್ ಬಾಸ್’ ನಲ್ಲಿ ಕಾರ್ಯಕ್ರಮದಲ್ಲಿ ಇರುವಾಗ ಹೆಂಡತಿಯ ಧ್ವನಿ ಕೇಳಿ ಕಣ್ಣೀರು ಹಾಕಿದ್ದೇನೆ. ಬಳಿಕ ಅವರು `ಬಿಗ್ ಬಾಸ್’ ಮನೆಯೊಳಗೆ ಬಂದು ಹಾರ ಹಾಕಿ ಹೋಗಿದ್ದರು. ನಂತರ ಆ ಹಾರದಿಂದ ಬಿದ್ದ ಹೂವನ್ನು ಒಂದೊಂದೆ ಆರಿಸಿ ತೆಗೆದು ಇಟ್ಟುಕೊಂಡಿದ್ದೆ. ಹೀಗಿದ್ದಾಗ ಹೆಂಡತಿಯನ್ನು ಅಷ್ಟು ಜನರ ಮುಂದೆ ಬೈಯುವುದಕ್ಕೆ ಸಾಧ್ಯ ಆಗುತ್ತದೆಯಾ. ಒಂದು ವೇಳೆ ಬೈದರೆ ಮನೆ ಮುಟ್ಟಲಿಕ್ಕೆ ಆಗುತ್ತಾ ನೀವೇ ಹೇಳಿ. ಬೈದರು ಅಂತ ಹೇಗೆ ವಿಚಾರ ಮಾಡುತ್ತೀರಿ ಎಂದು ಹೇಳಿದ್ದಾರೆ.

    ಬಿಗ್ ಬಾಸ್ ನಲ್ಲಿ ನನ್ನ ಹೆಂಡತಿಯ ಪತ್ರ ಬಂದಿದ್ದು, ಅದನ್ನು ಸುಟ್ಟು ಹಾಕಿದ್ದಾರೆ. ಅದು ನನಗೆ ಸಿಕ್ಕಿಲ್ಲ ಎಂದು ನೀರಿಗೆ ಹಾರಿದ್ದೆ. ಅದನ್ನು ಟ್ರೋಲ್ ಮಾಡಿದ್ದರು, ನಾನು ನನ್ನ ಹೆಂಡತಿಯನ್ನು ಪ್ರೀತಿ ಮಾಡಿದ್ರು ಟ್ರೋಲ್ ಮಾಡಿತ್ತೀರಿ, ಏನಾದರೂ ಹೇಳಿದರು ಟ್ರೋಲ್ ಮಾಡುತ್ತೀರಿ. ಹೀಗಿರುವಾಗ ನಾನು ನನ್ನ ಹೆಂಡತಿಯನ್ನು ಪ್ರೀತಿ ಮಾಡುತ್ತೇನೆ ಎಂದು ನಿಮಗೆ ಸಾಬೀತು ಮಾಡಬೇಕಾಗಿಲ್ಲ ಎಂದ್ರು.

    ಸ್ಪಷ್ಟನೆ
    ಈಗ ತುಂಬಾ ಜನರು ಸಮೀರಾಚಾರ್ಯ ಅವರು ಹೆಂಡತಿಗೆ ಹೇಳಿದ ಮಾತು ತಪ್ಪು ಅಂತ ಹೇಳಿದ್ದಾರೆ. ಕನ್ನಡದ ಕೋಟ್ಯಧಿಪತಿಯ ಸಂಪೂರ್ಣ ವಿಡಿಯೋ ನೋಡಿಕೊಂಡು ಬನ್ನಿ. ಅಲ್ಲಿದ್ದವರೆಲ್ಲರೂ ನಗುತ್ತಿದ್ದರು. ಜನರು, ಕ್ಯಾಮೆರಾ ಮ್ಯಾನ್, ಸ್ಪರ್ಧಿಗಳು ಎಲ್ಲರೂ ತಮಾಷೆಯಲ್ಲಿ ಇದ್ದೇವು. ನಾನು ಉತ್ತರಿಸಿದ ಪ್ರತಿ ಉತ್ತರ ನಗುವ ಹಾಗೆ ಇತ್ತು. ನನ್ನ ಹೆಂಡತಿ, ರಮೇಶ್ ಸರ್ ಎಲ್ಲರೂ ನಗುತ್ತಿದ್ದಾರೆ. ನಾನು ಅದನ್ನು ತಮಾಷೆಯಾಗಿ ಹೇಳಿದ್ದೆ. ಆಕೆಗೆ ಅನಮಾನ, ಬೇಸರ ಮಾಡಬೇಕು ಎಂದು ಹೇಳಿಲ್ಲ. ನೀವು ಅದನ್ನು ಇಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡು ಟ್ರೋಲ್ ಮಾಡಿದ್ದೀರಿ. ಅದು ತಮಾಷೆಯಷ್ಟೆ ಎಂದು ಸಮೀರಾಚಾರ್ಯ ಸ್ಪಷ್ಟ ಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿ ಗೆಲುವು ಸಾಧಿಸಿದಕ್ಕೆ ಪತಿಗೆ 2 ಬಿಂದಿಗೆ ಹಾಲು ಸುರಿದು ಅಭಿಷೇಕ: ವಿಡಿಯೋ

    ಪತ್ನಿ ಗೆಲುವು ಸಾಧಿಸಿದಕ್ಕೆ ಪತಿಗೆ 2 ಬಿಂದಿಗೆ ಹಾಲು ಸುರಿದು ಅಭಿಷೇಕ: ವಿಡಿಯೋ

    ಮೈಸೂರು: ಸಾಂಸ್ಕೃತಿಕ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಅಂದಾಭಿಮಾನ ಪ್ರದರ್ಶಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ನಿ ಗೆಲುವು ಸಾಧಿಸಿದ ಕಾರಣ ಪತಿಗೆ ಕಾರ್ಯಕರ್ತರು 2 ಬಿಂದಿಗೆ ಹಾಲು ಸುರಿದು ಅಭಿಷೇಕ ಮಾಡಿದ್ದಾರೆ.

    ಮಹಾನಗರ ಪಾಲಿಕೆ 36ನೇ ವಾರ್ಡ್ ಸದಸ್ಯೆಯಾಗಿ ರುಕ್ಮಿಣಿ ಆಯ್ಕೆಯಾಗಿದ್ದಾರೆ. ರುಕ್ಷ್ಮಿಣಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಪತಿ ಮಾದೇಗೌಡರಿಗೆ ಅಭಿಮಾನಿಗಳು 2 ಬಿಂದಿಗೆ ಹಾಲಿನಲ್ಲಿ ಅಭಿಷೇಕ ಮಾಡಿದ್ದಾರೆ. ಮಾದೇಗೌಡ ಕೂಡ ಶ್ರೀರಾಂಪುರ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದಾರೆ. ಯರಗನಹಳ್ಳಿ ವಾರ್ಡ್‍ನ ಕೃಷ್ಣ ದೇವಸ್ಥಾನದ ಬಳಿ ಹಾಲಿನ ಅಭಿಷೇಕ ಮಾಡಿದ್ದಾರೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ನೋಡಿ ಎಲ್ಲರೂ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಜನ ಕುಡಿಯುವ ಹಾಲನ್ನು ಅಭಿಷೇಕ ಮಾಡಿಕೊಂಡಿರುವುದು ನಾಚಿಕೆಗೇಡಿನ ವಿಷಯ. ಅಧಿಕಾರ ಸಿಕ್ಕ ತಕ್ಷಣ ಈ ರೀತಿ ಮಾಡುವುದು ಸರಿಯಲ್ಲ. ಅಭಿಮಾನಿಗಳು ಈ ರೀತಿ ಮಾಡುವುದನ್ನು ಅವರು ತಡೆಯಬಹುದು. ಆದರೆ ಅವರು ತಮ್ಮ ಕಾರ್ಯಕರ್ತರಿಗೆ ಬುದ್ಧಿ ಮಾತನ್ನು ಹೇಳಲಿಲ್ಲ ಎಂದು ಜನರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=bZRpM8QJCOo

  • 80 ಸಾವಿರ ರೂ. ಮೌಲ್ಯದ ನಾಣ್ಯಗಳೊಂದಿಗೆ ನ್ಯಾಯಾಲಯಕ್ಕೆ ಬಂದ

    80 ಸಾವಿರ ರೂ. ಮೌಲ್ಯದ ನಾಣ್ಯಗಳೊಂದಿಗೆ ನ್ಯಾಯಾಲಯಕ್ಕೆ ಬಂದ

    ಗಾಂಧಿನಗರ: ವ್ಯಕ್ತಿಯೊಬ್ಬ ಬರೋಬ್ಬರಿ 80 ಸಾವಿರ ರೂ. ಮೌಲ್ಯದ ನಾಣ್ಯಗಳನ್ನು ನ್ಯಾಯಾಲಯಕ್ಕೆ ತಂದ ಅಪರೂಪದ ಘಟನೆಯೊಂದು ಗುಜರಾತ ರಾಜ್ಯದ ನಾಡಿಯಾದ್ ನಲ್ಲಿ ನಡೆದಿದೆ.

    ಜಯೇಶ್ ನಾಣ್ಯಗಳನ್ನು ನ್ಯಾಯಾಲಯಕ್ಕೆ ತಂದ ವ್ಯಕ್ತಿ. ಜಯೇಶ್ ಮತ್ತು ಪತ್ನಿ ನಡುವೆ ಹಲವು ದಿನಗಳಿಂದ ವಿಚ್ಚೇಧನ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ನಾಡಿಯಾದ್ ಕೌಟುಂಬಿಕ ನ್ಯಾಯಾಲಯ ಜಯೇಶ್, ಪತ್ನಿಗೆ ಜೀವನಾಂಶವಾಗಿ 1 ಲಕ್ಷದ 6 ಸಾವಿರ ರೂ. ನೀಡಬೇಕೆಂದು ಆದೇಶಿಸಿತ್ತು. ಒಟ್ಟು ಎರಡು ಕಂತುಗಳಲ್ಲಿ ಪತ್ನಿಗೆ ಜೀವನಾಂಶ ನೀಡಬೇಕೆಂದು ನ್ಯಾಯಾಲಯ ಅದೇಶವನ್ನು ಹೊರಡಿಸಿತ್ತು. ಮೊದಲ ಕಂತಾಗಿ 26 ಸಾವಿರ ರೂ. ನೀಡಿ ಜಯೇಶ್ ಹಿಂದಿರುಗಿದ್ದರು.

    ಗುರುವಾರ ಒಂದು ಮೂಟೆ ಸಹಿತ ಬಂದ ಜಯೇಶ್ 80 ಸಾವಿರ ರೂ.ಯನ್ನು ನಾಣ್ಯಗಳ ರೂಪದಲ್ಲಿ ನೀಡಿದ್ದಾರೆ. ಕೂಡಲೇ ವಕೀಲರು ಹೀಗೆ ಚಿಲ್ಲರೆಯಲ್ಲಿ ತಂದ್ರೆ ಹೇಗೆ ಅಂತ ಪ್ರಶ್ನಿಸಿದ್ದಕ್ಕೆ, ನಾನೊಬ್ಬ ಸಣ್ಣ ತರಕಾರಿ ವ್ಯಾಪಾರಸ್ಥನಾಗಿದ್ದು ಎಲ್ಲರೂ ನನಗೆ ಚಿಲ್ಲರೆ ಹಣವನ್ನು ನೀಡುತ್ತಾರೆ ಅಂತಾ ಹೇಳಿದ್ದಾರೆ.

     

    ಪ್ರಕರಣ ನ್ಯಾಯಾಲಯಕ್ಕೆ ಸಂಬಂಧಿಸಿದಾಗಿದ್ದರಿಂದ ತಂದ ಚಿಲ್ಲರೆ ಹಣವನ್ನು ಎಣಿಸುವುದು ವಕೀಲರಿಗೆ ಅನಿವಾರ್ಯವಾಗಿತ್ತು. ನಾಣ್ಯಗಳನ್ನು ಎಣಿಕೆ ಮಾಡಲು ವಕೀಲರು ಬರೋಬ್ಬರಿ 3 ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಜಯೇಶ್ ಚಲಾಲಿ ಎಂಬ ಗ್ರಾಮದಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದು, ಪ್ರತಿನಿತ್ಯ ತನ್ನ ಉಳಿತಾಯವನ್ನು ನಾಣ್ಯಗಳ ರೂಪದಲ್ಲಿಯೇ ಸಂಗ್ರಹ ಮಾಡುತ್ತಿದ್ದರು. ನ್ಯಾಯಾಲಯ ದಿಢೀರ್ ಅಂತಾ ಹಣ ಕೇಳಿದ್ದರಿಂದ ಯಾರು ಸಹ ನಾಣ್ಯಗಳ ಬದಲಾಗಿ ನೋಟುಗಳನ್ನು ನೀಡಲು ಹಿಂದೇಟು ಹಾಕಿದ್ದರು ಎಂದು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ.

    ಜಕಾರ್ತದಲ್ಲಿ ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿಗೆ ನೀಡಬೇಕಾಗಿದ್ದ 7 ಲಕ್ಷ ರೂ. ಜೀವನಾಂಶದ ಹಣವನ್ನು ನಾಣ್ಯಗಳ ರೂಪದಲ್ಲಿ ನೀಡಿ ಸುದ್ದಿಯಾಗಿದ್ದರು. ಬರೋಬ್ಬರಿ 860 ಕೆ.ಜಿ. ತೂಕವುಳ್ಳ 12 ಮೂಟೆಗಳನ್ನು ನೀಡಲಾಗಿತ್ತು. `ನನ್ನ ಕಕ್ಷಿದಾರರನ್ನು ಅವಮಾನಿಸಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ’ ಎಂದು ವಿಚ್ಛೇದಿತ ಮಹಿಳೆಯ ಪರ ವಕೀಲ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡ್ವಿ ಸ್ಸುಲಾರ್ಟೊ ಪರ ವಕೀಲ, ನನ್ನ ಕಕ್ಷಿದಾರ ಕೆಳ ದರ್ಜೆಯ ನಾಗರಿಕ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತನ್ನ ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಸಂಗ್ರಹಿಸಿದ್ದು, ಅವರೆಲ್ಲರೂ ಚಿಲ್ಲರೆ ಹಣ ನೀಡಿದ್ದರಿಂದ ಅದನ್ನು ಕೋರ್ಟ್ ಗೆ ಒಪ್ಪಿಸಿದ್ದಾರೆ ಎಂದಿದ್ದರು.

    ನಾನು ಬಡತನದಲ್ಲಿ ಇದ್ದೇನೆ ಎನ್ನುವಂತೆ ಅವಮಾನ ಮಾಡಲು ಡ್ವಿ ಸ್ಸುಲಾರ್ಟೊ ಚಿಲ್ಲರೆ ಹಣವನ್ನು ನೀಡುತ್ತಿದ್ದಾರೆ ಎಂದು ವಿಚ್ಛೇದಿತ ಮಹಿಳೆ ಆರೋಪಿಸಿದ್ದಾರೆ. ಕೊನೆಗೆ ಚಿಲ್ಲರೆ ಹಣವನ್ನು ಏಣಿಕೆ ಮಾಡುವಂತೆ ನ್ಯಾಯಾಲಯವು ತನ್ನ ಸಿಬ್ಬಂದಿಗೆ ಸೂಚನೆ ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿ ಸಾವು-ಅತ್ತೆ ಮನೆಗೆ ವಿಷಯ ತಿಳಿಸಿ ಪತಿ ಎಸ್ಕೇಪ್

    ಪತ್ನಿ ಸಾವು-ಅತ್ತೆ ಮನೆಗೆ ವಿಷಯ ತಿಳಿಸಿ ಪತಿ ಎಸ್ಕೇಪ್

    ರಾಮನಗರ: ಗೃಹಿಣಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕನಕಪುರದ ಎಂಜಿ ರಸ್ತೆಯಲ್ಲಿ ನಡೆದಿದೆ.

    ಪೂಜಾ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ. ಮೂರು ವರ್ಷಗಳ ಹಿಂದೆ ಕನಕಪುರದ ಎಂಜಿ ರಸ್ತೆಯ ನಿವಾಸಿ ಚೇತನ್ ಎಂಬವರ ಜೊತೆ ಪೂಜಾರ ಮದುವೆ ಆಗಿತ್ತು. ಆದರೆ ಇತ್ತೀಚೆಗೆ ಮನೆಯಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಪೂಜಾ, ಪತಿ ಮನೆಯವರ ಕಿರುಕುಳದ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ್ದರು.

    ರಾತ್ರಿ ವೇಳೆ ಮತ್ತೆ ಪೂಜಾ ಮತ್ತು ಪತಿಯ ನಡುವೆ ಜಗಳ ನಡೆದಿದೆ. ಬೆಳಗ್ಗೆ ಪೂಜಾ ಸಾವನ್ನಪ್ಪಿರುವುದಾಗಿ ಚೇತನ್ ತನ್ನ ಅತ್ತೆ ಮನೆಯವರಿಗೆ ತಿಳಿಸಿ ನಾಪತ್ತೆಯಾಗಿದ್ದಾನೆ. ಘಟನೆ ಸಂಬಂಧ ಸ್ಥಳಕ್ಕೆ ಬಂದ ಮೃತ ಪೂಜಾಳ ಪೋಷಕರು ಪೂಜಾಳ ಪತಿ ಚೇತನ್ ಹಾಗೂ ಆತನ ಪೋಷಕರ ವಿರುದ್ಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿಯನ್ನು ಕೊಂದು ಹಸು ಮೇಲೆ ದೂರು ಹಾಕಿದ್ದ ಪತಿ ಅರೆಸ್ಟ್

    ಪತ್ನಿಯನ್ನು ಕೊಂದು ಹಸು ಮೇಲೆ ದೂರು ಹಾಕಿದ್ದ ಪತಿ ಅರೆಸ್ಟ್

    ಚಿಕ್ಕಬಳ್ಳಾಪುರ: ಪತ್ನಿಯನ್ನು ಗೋಡೆಗೆ ಗುದ್ದಿ ಕೊಂದು ಬಳಿಕ ಹಸು ತಿವಿದು ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಹೊರಟ್ಟಿದ್ದ ಪತಿಮಹಾಶಯನನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೊಂಡರೆಡ್ಡಿಹಳ್ಳಿಯಲ್ಲಿ ನಡೆದಿದೆ. ರತ್ನಮ್ಮ(42) ಪತಿಯಿಂದಲೇ ಹತ್ಯೆಯಾದ ದುರ್ದೈವಿ ಪತ್ನಿ.

    ಘಟನೆ ವಿವರ:
    ಗ್ರಾಮದ ಸೂರಪ್ಪರೆಡ್ಡಿ ತೋಟದಿಂದ ಊಟಕ್ಕೆ ಅಂತ ಮನೆಗೆ ಬಂದಿದ್ದನು. ಈ ವೇಳೆ ಪತ್ನಿ ರತ್ನಮ್ಮ ಮೊಬೈಲ್ ನಲ್ಲಿ ಮಾತನಾಡುತ್ತಿದ್ದನ್ನು ಕಂಡು ಗಲಾಟೆ ಮಾಡಿದ್ದಾನೆ. ಈ ಜಗಳ ತಾರಕಕ್ಕೇರಿ ರತ್ನಮ್ಮಳಿಗೆ ಕಪಾಳಮೋಕ್ಷ ಮಾಡಿ, ನಂತ್ರ ಆಕೆಯ ತಲೆಯನ್ನ ಹಿಡಿದು ಗೋಡೆಗೆ ಗುದ್ದಿದ್ದಾನೆ. ಪರಿಣಾಮ ಕುಸಿದುಬಿದ್ದ ರತ್ನಮ್ಮಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತದನಂತರ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಆದ್ರೆ ಅಷ್ಟರಲ್ಲೇ ರತ್ನಮ್ಮ ಮೃತಪಟ್ಟಿದ್ದಳು.

    ಇದರಿಂದ ಭಯಬೀತಗೊಂಡ ಸೂರಪ್ಪರೆಡ್ಡಿ, ಮನೆ ಬಳಿ ಹಸು ತಲೆಗೆ ತಿವಿದು ಸಾವನ್ನಪ್ಪಿದ್ದಾಳೆ ಅಂತ ಸಂಬಂಧಿಕರೆಲ್ಲರಿಗೂ ಹೇಳಿ ಅಂತ್ಯಕ್ರಿಯೆಗೆ ಅಣಿ ಮಾಡಿದ್ದಾನೆ. ಆದರೆ ಅಕ್ಕನ ಸಾವಿನ ಬಗ್ಗೆ ಅನುಮಾನಗೊಂಡ ರತ್ನಮ್ಮಳ ತಮ್ಮ ಮಹೇಶ್ ಈ ಬಗ್ಗೆ ಗುಡಿಬಂಡೆ ಪೊಲೀಸರಿಗೆ ದೂರು ನೀಡಿದ್ದನು. ದೂರು ಸ್ವೀಕರಿಸಿದ್ದ ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ ಸೂರಪ್ಪರೆಡ್ಡಿ ನಡೆದ ಘಟನೆಯನ್ನು ಬಾಯ್ಬಿಟ್ಟಿದ್ದಾನೆ.

    ಸದ್ಯ ಪ್ರಕರಣ ಸಂಬಂಧಪಟ್ಟಂತೆ ಸೂರಪ್ಪ ರೆಡ್ಡಿಯನ್ನ ಬಂಧಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇವಸ್ಥಾನಕ್ಕೆ ಬಂದಿದ್ದ ಮಹಿಳೆಗೆ ಪಾಗಲ್ ಪ್ರೇಮಿಯಿಂದ ಚೂರಿ ಇರಿತ!

    ದೇವಸ್ಥಾನಕ್ಕೆ ಬಂದಿದ್ದ ಮಹಿಳೆಗೆ ಪಾಗಲ್ ಪ್ರೇಮಿಯಿಂದ ಚೂರಿ ಇರಿತ!

    ಬೆಂಗಳೂರು: ಪತಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಗೆ ಪಾಗಲ್ ಪ್ರೇಮಿಯೊಬ್ಬ ಯದ್ವಾತದ್ವಾ ಚಾಕುವಿನಿಂದ ಇರಿದ ಘಟನೆ ನಡೆದಿದೆ.

    ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಶಿವಗಂಗೆ ಗ್ರಾಮದಲ್ಲಿ ಘಟನೆ ಇಂದು ಮಧ್ಯಾಹ್ನ 2.30ರ ಸುಮಾರಿಗೆ ನಡೆದಿದ್ದು, ಪಾಗಲ್ ಪ್ರೇಮಿಯನ್ನು ಕಂಬಾಳು ಮೂಲದ ಶಶಿ ಎಂದು ಗುರುತಿಸಲಾಗಿದೆ.

    ಏನಿದು ಘಟನೆ?
    29 ವರ್ಷದ ರತ್ನ ಇಂದು ತನ್ನ ಗಂಡನ ಜೊತೆ ಶಿವಗಂಗೆ ದೇವಾಲಯಕ್ಕೆ ಬಂದಿದ್ದರು. ದೇವಸ್ಥಾನದೊಳಗೆ ಪೂಜೆ ನಡೆಯುತ್ತಿತ್ತು. ಬಂದಿರುವ ಭಕ್ತರೆಲ್ಲರು ಪೂಜೆಯಲ್ಲಿ ಮಗ್ನರಾಗಿದ್ದರು. ಈ ವೇಳೆ ರತ್ನ ಪತಿ ದೇವರಿಗೆ ಮುಡಿ ಕೊಡೋದಕ್ಕೆ ಒಳಗೆ ಹೋಗಿದ್ದರು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಆರೋಪಿ ಶಶಿ ಏಕಾಏಕಿ ಬಂದು ಚಾಕುವಿನಿಂದ 5, 6 ಬಾರಿ ರತ್ನರಿಗೆ ಇರಿದಿದ್ದಾನೆ. ಪರಿಣಾಮ ರತ್ನರಿಗೆ ಗಂಭೀರ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಅಂತ ಪ್ರತ್ಯಕ್ಷದರ್ಶಿಯೊಬ್ಬರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಚಾಕುವಿನಿಂದ ಇರಿದಿದ್ದು ಯಾಕೆ?
    ಆರೋಪಿ ಶಶಿ ಕಳೆದ ಮೂರು ವರ್ಷದ ಹಿಂದೆ ರತ್ನರನ್ನು ಪ್ರೀತಿಸುತ್ತಿದ್ದನು. ಆದ್ರೆ ಈತನ ಪ್ರೀತಿಯನ್ನು ರತ್ನ ನಿರಾಕರಿಸಿದ್ದರು. ಅಲ್ಲದೇ ಅವರಿಗೆ ಬೇರೆ ಮದುವೆ ಕೂಡ ಆಗಿತ್ತು. ಇದರಿಂದ ಸಿಟ್ಟುಗೊಂಡಿದ್ದ ಶಶಿ, ರತ್ನ ಅವರು ದೇವಸ್ಥಾನಕ್ಕೆ ಬಂದಿರುವುದನ್ನು ಗಮನಿಸಿ ಹೊಸ ಚಾಕುವಿನೊಂದಿಗೆ ಬಂದು  ಇರಿದಿದ್ದಾನೆ.

    ಘಟನೆಯ ಬಳಿಕ ಗಂಭೀರ ಸ್ಥೀತಿಯಲ್ಲಿದ್ದ ಮಹಿಳೆಯನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಪ್ ಡೇಟ್:
    ಪಾಗಲ್ ಪ್ರೇಮಿಯಿಂದ ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರದಕ್ಷಿಣೆಯಲ್ಲಿ ಕೊಲೆಯಾಗಿದ್ದ ಮಹಿಳೆ ಇನ್ನೊಬ್ಬನ ಜೊತೆ ಜೀವಂತವಾಗಿ ಪ್ರತ್ಯಕ್ಷ!

    ವರದಕ್ಷಿಣೆಯಲ್ಲಿ ಕೊಲೆಯಾಗಿದ್ದ ಮಹಿಳೆ ಇನ್ನೊಬ್ಬನ ಜೊತೆ ಜೀವಂತವಾಗಿ ಪ್ರತ್ಯಕ್ಷ!

    ಲಕ್ನೋ: ವರದಕ್ಷಿಣೆ ಕಿರುಕುಳದಿಂದ ಕೊಲೆಗೀಡಾಗಿದ್ದ ಮಹಿಳೆಯೊಬ್ಬಳು ಮತ್ತೊಬ್ಬನನ್ನು ಮದುವೆಯಾಗಿರುವ ಪ್ರಕರಣವೊಂದು ಉತ್ತರಪ್ರದೇಶದ ಫಾಜೀಯಾಬಾದ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ರೂಬಿ ಹಾಗೂ ಆಕೆಯ ಇನ್ನೊಬ್ಬ ಪತಿ ರಾವುನನ್ನು ಸಫ್ದರ್ಜಂಗ್ ಪೊಲೀಸರು ಬಂಧಿಸಿದ್ದಾರೆ. ರೂಭಿಯು ಬಾರಾಬಂಕಿಯ ನಿವಾಸಿಯಾಗಿದ್ದು, ಅದೇ ಪ್ರದೇಶದ ನಿವಾಸಿಯಾಗಿದ್ದ ರಾಹುಲ್ ಎಂಬಾತನನ್ನು 2016ರ ಜನವರಿಯಲ್ಲಿ ಮದುವೆಯಾಗಿದ್ದಳು. 2017ರ ಜೂನ್ ನಲ್ಲಿ ರೂಬಿ ತಂದೆ ಹರಿಪ್ರಸಾದ್ ನನ್ನ ಮಗಳನ್ನು ಪತಿ ರಾಹುಲ್, ಆಕೆಯ ಮಾವ ರಾಮಹರ್ಷ ಹಾಗೂ ಅತ್ತೆ ಬಾರ್ಕಿ ವರದಕ್ಷಿಣೆ ಕಿರುಕುಳ ನೀಡಿ ಕೊಂದುಹಾಕಿದ್ದಾರೆ ಎಂದು ದೂರು ನೀಡಿದ್ದರು.

    ಈ ಕುರಿತು ತನಿಖೆ ಆರಂಭಿಸಿದ ಸಫ್ದರ್ಜಂಗ್ ಪೊಲೀಸ್ ಠಾಣೆಯ ಪೊಲೀಸರು ಕೊಲೆ ಆರೋಪ ಸಾಬೀತು ಮಾಡುವಂತಹ ಯಾವುದೇ ಸಾಕ್ಷ್ಯಗಳು ಸಿಗದೇ ಕಾರಣ ದೂರನ್ನು ದಾಖಲಿಸಿಕೊಳ್ಳಲಿಲ್ಲ. ಪೊಲೀಸರು ದೂರು ದಾಖಲಿಕೊಳ್ಳದ್ದಕ್ಕೆ ಹರಿಪ್ರಸಾದ್‍ರವರು ಕೋರ್ಟ್ ಮೊರೆ ಹೋಗಿದ್ದರು. 2018ರ ಜುಲೈ ತಿಂಗಳಲ್ಲಿ ಕೋರ್ಟ್ ಪ್ರಕರಣವನ್ನು ದಾಖಲಿಸಿಕೊಳ್ಳುವಂತೆ ಆದೇಶ ನೀಡಿತ್ತು.

    ಈ ಕುರಿತು ತನಿಖೆ ಕೈಗೊಂಡ ಪೊಲೀಸರಿಗೆ ಮಹಿಳೆಯ ಫೇಸ್ಬುಕ್ ಹಾಗೂ ಆಕೆಯ ದೂರವಾಣಿ ಕರೆಗಳ ಮೇಲೆ ಅನುಮಾನ ಬಂದು, ತೀವ್ರ ತನಿಖೆ ನಡೆಸಿದಾಗ, ಆಕೆಯು ದೆಹಲಿಯಲ್ಲಿ ಮತ್ತೊಬ್ಬನೊಂದಿಗೆ ಮದುವೆಯಾಗಿ ಜೀವನ ನಡೆಸುತ್ತಿರುವ ವಿಚಾರ ತಿಳಿದು ಬಂದಿದೆ. ಕೂಡಲೇ ದೆಹಲಿಗೆ ತೆರಳಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಬಾರಾಬಂಕಿ ಜಿಲ್ಲಾ ವರಿಷ್ಠಾಧಿಕಾರಿ ವಿ.ಪಿ.ಶ್ರೀವಾತ್ಸವ್, ಕೊಲೆಯಾದ ಮಹಿಳೆಯ ಮೃತದೇಹ ಸಿಗದ ಕಾರಣ, ದೂರನ್ನು ದಾಖಲಿಸಿಕೊಂಡಿರಲಿಲಲ್ಲ. ಕೋರ್ಟ್ ಆದೇಶದ ಬಳಿಕ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಗಿಳಿದಾಗ, ಆಕೆಯು ಜೀವಂತವಾಗಿದ್ದಾಳೆಂದು ತಿಳಿದು ಬಂತು. ಕೂಡಲೇ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಆಕೆಯು ತನ್ನ ಪ್ರಿಯಕರನೊಂದಿಗೆ ಮದುವೆಯಾಗಲು ಈ ರೀತಿಯ ನಾಟಕವಾಡಿರುವುದಾಗಿ  ಒಪ್ಪಿಕೊಂಡಿದ್ದಾಳೆಂದು ತಿಳಿಸಿದ್ದಾರೆ.

    ನ್ಯಾಯಾಲಯದ ದಿಕ್ಕು ತಪ್ಪಿಸಿದ ರೂಭಿ, ಪತಿ ರಾಹುಲ್ ಹಾಗೂ ತಂದೆ ಹರಿಪ್ರಸಾದ್ ವಿರುದ್ಧ ಐಪಿಸಿ ಸೆಕ್ಷನ್ 182ರ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿ ಪೊಲೀಸರು ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಂಡನಿಗಾಗಿ ರಣಚಂಡಿಯರಾದ ಮಹಿಳೆಯರು – ಎರಡನೇ ಹೆಂಡ್ತಿ ಮನೆಗೆ ನುಗ್ಗಿ ಮೊದಲ ಹೆಂಡ್ತಿ ಅಬ್ಬರ

    ಗಂಡನಿಗಾಗಿ ರಣಚಂಡಿಯರಾದ ಮಹಿಳೆಯರು – ಎರಡನೇ ಹೆಂಡ್ತಿ ಮನೆಗೆ ನುಗ್ಗಿ ಮೊದಲ ಹೆಂಡ್ತಿ ಅಬ್ಬರ

    ದಾವಣಗೆರೆ: ಗಂಡನಿಗಾಗಿ ಇಬ್ಬರು ಮಹಿಳೆಯರಿಬ್ಬರು ಮಾರಾಮಾರಿ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಹೊರವಲಯದ ಮನೆಯೊಂದರಲ್ಲಿ ನಡೆದಿದೆ.

    ವಸಂತ್ ಕುಮಾರ್ ಇಬ್ಬರನ್ನು ಮದುವೆಯಾದ ಪತಿ. ಭಾಗ್ಯ ಹಾಗೂ ರೇಖಾ ತನ್ನ ಗಂಡನಿಗಾಗಿ ಮಾರಾಮಾರಿ ನಡೆಸಿದ್ದಾರೆ. ವಸಂತ್ ಹಾಗೂ ಭಾಗ್ಯ ಹರಪ್ಪನಹಳ್ಳಿ ತಾಲೂಕಿನ ಪುಣಬಘಟ್ಟದ ನಿವಾಸಿಗಳಾಗಿದ್ದು, 9 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ವಸಂತ್ ಹಾಗೂ ಭಾಗ್ಯ ಅವರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ.

    ಬೆಂಗಳೂರಿನಲ್ಲಿ ಕೆಲಸ ಮಾಡುವುದಾಗಿ ಹೇಳಿ ಹೋಗಿದ್ದ ವಸಂತ್ ರೇಖಾ ಅವರನ್ನು ಮದುವೆಯಾಗಿದ್ದಾನೆ. ಮೂರು ವರ್ಷಗಳಾದ್ರು ವಸಂತ್ ಮನೆಗೆ ಬಾರದೇ ಇದ್ದಾಗ ಭಾಗ್ಯಗೆ ಅನುಮಾನ ಶುರುವಾಗತೊಡಗಿದೆ. ನಂತರ ಮದುವೆಯಾದ ವಿಚಾರ ತಿಳಿದ ಭಾಗ್ಯ ಏಕಾಏಕಿ ಎರಡನೇ ಹೆಂಡತಿಯ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಸದ್ಯ ಪೊಲೀಸರು ಮಧ್ಯಸ್ಥಿಕೆ ವಹಿಸಿ ಗಲಾಟೆ ತಿಳಿಗೊಳಿಸಿದ್ದಾರೆ.

    ಭಾಗ್ಯ ಹೇಳಿದ್ದು ಏನು?
    ವಸಂತ್ ಸರ್ವೆ ಮಾಡುವುದಾಗಿ ಹೇಳಿ ಬೆಂಗಳೂರಿಗೆ ಹೋಗಿದ್ದರು. ಅಲ್ಲದೇ 6 ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದರು. ಮನೆಗೆ ಬಂದ ವೇಳೆ ಅವರು ನನ್ನ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ನನ್ನ ಬಗ್ಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ನನಗೆ ತುಂಬಾ ಬೇಸರವಾಗುತ್ತಿತ್ತು. ಈ ವೇಳೆ ಅವರಿಗೆ ಫೋನ್ ಕರೆಗಳು ಬರುತ್ತಿತ್ತು. ಫೋನ್ ಕರೆ ಬರುತ್ತಿದ್ದಾಗ ಅವರು ಮನೆ ಹೊರಗೆ ಹೋಗಿ ಮಾತನಾಡುತ್ತಿದ್ದರು. ಆ ಮಹಿಳೆ ಜೊತೆ ಫೋನಿನಲ್ಲಿ ಮಾತನಾಡುವಾಗ ಸ್ವತಃ ನಾನೇ ಕೇಳಿಸಿಕೊಂಡಿದ್ದೆ. ಆ ಮಹಿಳೆ ಮನೆಗೆ ಯಾವಾಗ ಬರುತ್ತೀಯಾ ಎಂದು ಕೇಳುತ್ತಿದ್ದಾಗ ತಕ್ಷಣ ನನ್ನ ಪತಿ ಬೈಕಿನಲ್ಲಿ ಆಕೆ ಮನೆಗೆ ಹೋಗುತ್ತಿದ್ದರು.

    ಕೆಲವು ದಿನಗಳ ಹಿಂದೆ ವಸಂತ್ ಹರಿಹರದಲ್ಲಿ ಮನೆ ಮಾಡಿದ್ದಾರೆ ಎಂಬ ಸುದ್ದಿ ನನಗೆ ಬಂತು. ಆದರೆ ಹರಿಹರದಲ್ಲಿ ಎಲ್ಲಿ ಮನೆ ಮಾಡಿದ್ದಾರೆ ಎಂಬುದು ನನಗೆ ತಿಳಿದಿರಲಿಲ್ಲ. ನಾನು ಹಾಸ್ಟೆಲ್‍ನಲ್ಲಿದ್ದಾಗ ವಸಂತ್ ನನ್ನ ಮಕ್ಕಳಿಗೆ ಹೊಡೆದು ಆಕೆಯ ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ನನ್ನ ಮಕ್ಕಳು ಹಿಂತಿರುಗಿ ಬಂದಾಗ ನನ್ನ ಪತಿ ನನ್ನ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಾನು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಆದರೆ ವಸಂತ್ ನನ್ನ ಶೀಲ ಸರಿಯಿಲ್ಲ ಎಂದು ಹೇಳಿ ನನ್ನ ವಿರುದ್ಧವೇ ದೂರು ನೀಡಿದ್ದಾರೆ. ಅಲ್ಲದೇ ನನ್ನ ಮಗಳನ್ನು ಮಡಿಕೇರಿಯಲ್ಲಿ ಅವರ ಪೋಷಕರ ಜೊತೆ ಇರಿಸಿ, ನನ್ನ ಮಗನನ್ನು ಆತನ ದೊಡ್ಡಪ್ಪನ ಮನೆಯಲ್ಲಿ ಇರಿಸಿದ್ದಾರೆ.

    ಮತ್ತೊಂದು ಮದುವೆ:
    ನಾನು ಊರಿನಲ್ಲಿದ್ದಾಗ ನನ್ನ ಪತಿ ಆಗಾಗ ಬೆಂಗಳೂರಿಗೆ ಹೋಗುತ್ತಿದ್ದರು. ಮದುವೆಯಾಗಿ ನನ್ನ ಪತಿ ನನ್ನ ಜೊತೆ 4 ವರ್ಷ ಮಾತ್ರ ಜೀವನ ನಡೆಸಿದ್ದಾರೆ. ನನಗೆ ಆ ಮಹಿಳೆಯ ಪರಿಚಯವಿಲ್ಲ. ನಾನು ಆಕೆಯ ಮನೆಯನ್ನು ಹುಡುಕಿ ಆಕೆಯ ಮನೆಗೆ ಹೋದೆ. ಈ ವೇಳೆ ಆ ಮನೆಯಲ್ಲಿ ಆಕೆಯನ್ನು ನೋಡಿ ನಾನು ರೊಚ್ಚಿಗೆದ್ದೆ. ನಾನು ಆಕೆಯ ಮನೆಗೆ ಹೋಗಿದ್ದಾಗ ನನ್ನ ಪತಿ ಟೀ ಕುಡಿಯಲು ಹೊರಗೆ ಹೋಗಿದ್ದರು. ಈ ಮೊದಲು ವಿಡಿಯೋ ಕಾಲ್‍ನಲ್ಲಿ ನನ್ನ ಪತಿ ಆ ಮನೆಯನ್ನು ತೋರಿಸಿದ್ದರು. ಅಷ್ಟೇ ಅಲ್ಲದೇ ನಾನು ಮತ್ತೊಂದು ಮದುವೆಯಾಗಿದ್ದೇನೆ ಎಂದು ಹೇಳಿದ್ದರೂ ಮಹಿಳೆಯ ಫೋಟೋವನ್ನು ತೋರಿಸಿರಲಿಲ್ಲ.

    ವಸಂತ್ ನನ್ನ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ. ಆಗ ನಾನು ಅವರನ್ನು ಪ್ರಶ್ನಿಸಿದೆ. ನಾನು ಇರುವುದು ನಿಮಗೆ ಇಷ್ಟವಿಲ್ಲವೇ? ಯಾರೋ ಫೋನ್ ಮಾಡಿದರೆ ನೀವು ಹೊರಟು ಹೋಗುತ್ತೀರಿ. ನನ್ನ ಜೊತೆ ಜೀವನ ನಡೆಸಲು ನಿಮಗೆ ಇಷ್ಟ ಇಲ್ಲವೇ ಎಂದು ಕೇಳಿದ್ದಾಗ ಅವರು, ನಾನು ಮತ್ತೊಂದು ಮದುವೆ ಆಗುತ್ತೇನೆ ಎಂದು ಆಗಾಗ ಹೇಳುತ್ತಿದ್ದರು. ಆದರೆ ನಾನು ಅದನ್ನು ನಂಬಲಿಲ್ಲ. ನನಗೆ ಎರಡು ಮಕ್ಕಳಿದ್ದಾರೆ ನಮ್ಮನ್ನು ಬಿಟ್ಟು ಎಲ್ಲಿ ಹೋಗುತ್ತಾನೆ ಎಂದು ನಾನು ಸುಮ್ಮನಿದ್ದೆ. ಮಕ್ಕಳಿಗೆ ತಂದೆಯನ್ನು ಕಂಡರೆ ತುಂಬಾ ಪ್ರೀತಿ. ಹಾಗಾಗಿ ವಸಂತ್ ನನ್ನ ಮಕ್ಕಳನ್ನು ಕರೆದುಕೊಂಡು ಹೋಗಿ ಅವರ ಪೋಷಕರ ಜೊತೆ ಹಾಗೂ ದೊಡ್ಡಪ್ಪನ ಮನೆಗೆ ಕಳಿಸಿಕೊಟ್ಟಿದ್ದರು.

    ಅತ್ತೆ ಮಗಳೆಂದು ಹೇಳಿ ಮೋಸ:
    ವಸಂತ್ ನನ್ನನ್ನು 4 ವರ್ಷ ಬಿಟ್ಟು ಹೋಗಿದ್ದಾಗ ನನಗೆ ಜೀವನ ನಡೆಸಲು ಆಗದೇ ಹಾಸ್ಟೆಲ್ ಸೇರಿದೆ. ನಾನು ಒಬ್ಬಳು ಅನಾಥೆಯಾಗಿದ್ದು, ಅನಾಥಶ್ರಾಮದಲ್ಲಿ ಬೆಳೆದಿದ್ದೆ. ನನ್ನನ್ನು ಅನಾಥಶ್ರಾಮದಿಂದ ಕರೆದುಕೊಂಡು ಹೋಗಿ ನನ್ನನ್ನು ತನ್ನ ಅತ್ತೆ ಮಗಳು ಎಂದು ಹೇಳಿಕೊಳ್ಳುತ್ತಿದ್ದನು. ನಂತರ 1 ವರ್ಷ ನನ್ನ ಜೊತೆ ಜೀವನ ನಡೆಸಿ ನಂತರ ನನ್ನನ್ನು ಮದುವೆಯಾಗಲ್ಲ ಎಂದು ತಿಳಿಸಿದ್ದನು. ಆಗ ನಾನು ನನ್ನನ್ನು ಅತ್ತೆ ಮಗಳು ಎಂದು ಊರಿಗೆಲ್ಲಾ ಪರಿಚಯ ಮಾಡಿಸಿ ಈಗ ಮೋಸ ಮಾಡಿದರೆ ನನ್ನ ಜೀವನದ ಗತಿಯೇನು ಎಂದು ಕೇಳಿದೆ. ಆಗ ಅವರ ಪೋಷಕರು ಅನಾಥೆಯನ್ನು ಯಾಕೆ ಮದುವೆಯಾಗುತ್ತೀಯಾ. ನಮಗೆ ನೀನು ಒಬ್ಬನೇ ಮಗ. ಬೇರೆಯವರ ಜೊತೆ ನಿನ್ನನ್ನು ಮದುವೆ ಮಾಡಿಸಿದರೆ, ಅವರು ವರದಕ್ಷಿಣೆಯಾಗಿ ನಮಗೆ 5 ಎಕ್ರೆ ಹೊಲ ಕೂಡ ನೀಡುತ್ತಿದ್ದರು ಎಂದು ಒತ್ತಡ ಹಾಕುತ್ತಿದ್ದರು. ಆಗ ವಸಂತ್ ತನ್ನ ಪೋಷಕರ ಮಾತು ಕೇಳಿ ನನ್ನನ್ನು ಬಿಟ್ಟು ಹೋಗಿದ್ದಾರೆ.

    ನನಗೆ ಎಲ್ಲೂ ನೆಲೆ ಸಿಗಲಿಲ್ಲ. ನಂತರ ನಾನು ಅರಸಿಕೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಆಗ ಪೊಲೀಸರು ವಸಂತ್‍ನನ್ನು ರೆಡ್ ಹ್ಯಾಂಡಾಗಿ ಹಿಡಿದು ಪಂಚಾಯ್ತಿ ನಡೆಸಿ ಮದುವೆ ಮಾಡಿಸಿದ್ದರು. ಮದುವೆಯಾದ ಬಳಿಕ ವಸಂತ್ ಅವರ ತಂದೆ-ತಾಯಿ ನಮ್ಮನ್ನು ಮನೆಗೆ ಸೇರಿಸಲಿಲ್ಲ ಎಂದು ಭಾಗ್ಯ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    https://www.youtube.com/watch?v=Gsv6SrXkQO4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv