Tag: ಪಕೋಡಾ

  • ಪಕೋಡಾ, ಬೋಂಡ-ಬಜ್ಜಿ ಮಾರಿ ಬದುಕು ಕಟ್ಟಿಕೊಂಡ ಮಂಡ್ಯದ ಯುವ ಎಂಜಿನಿಯರ್

    ಪಕೋಡಾ, ಬೋಂಡ-ಬಜ್ಜಿ ಮಾರಿ ಬದುಕು ಕಟ್ಟಿಕೊಂಡ ಮಂಡ್ಯದ ಯುವ ಎಂಜಿನಿಯರ್

    ಮಂಡ್ಯ: ಇತ್ತೀಚೆಗಷ್ಟೆ ಪ್ರಧಾನಿ ಮೋದಿ ಪಕೋಡಾ ಮಾರುವುದು ಕೂಡ ಒಂದು ಉದ್ಯೋಗ ಎಂಬ ಹೇಳಿಕೆ ನೀಡಿದ್ರು. ಈ ಹೇಳಿಕೆ ವಿಪಕ್ಷಗಳಿಗೆ ಪ್ರಧಾನಿ ವಿರುದ್ದ ಟೀಕೆಗೆ ಅಸ್ತ್ರವಾಗಿತ್ತು. ಆದ್ರೆ ಪರ ವಿರೋಧದ ಹಂಗಿಲ್ಲದೆ ಎಂಜಿನಿಯರ್ ಒಬ್ಬರು ಬೋಂಡ-ಬಜ್ಜಿ ಮಾರುತ್ತ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

    ಮಂಡ್ಯ ಜಿಲ್ಲೆಯಲ್ಲಿ ಎಂಜಿನಿಯರಿಂಗ್ ಮುಗಿಸಿದ ಯುವಕ ವೆಂಕಟೇಶ್ (ಮನು) ಬಜ್ಜಿ-ಬೋಂಡಾ ಮಾರಿ ಜೀವನ ನಡೆಸುತ್ತಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ನಿವಾಸಿಯಾಗಿರುವ ವೆಂಕಟೇಶ್ ಬಿಇ ಮೆಕಾನಿಕಲ್ ಓದಿದ್ದಾರೆ. ಇಂದು ಯಾವುದೇ ಸಂಕೋಚವಿಲ್ಲದೇ ಕೆ.ಆರ್.ಪೇಟೆ ಪಟ್ಟಣದ ರಸ್ತೆ ಬದಿ ತಳ್ಳುವ ಗಾಡಿಯಲ್ಲಿ ಪಕೋಡಾ, ಬೋಂಡಾ, ಬಜ್ಜಿ ಮಾರುತ್ತಿದ್ದಾರೆ.

    ವೆಂಕಟೇಶ್ ಪ್ರಥಮ ದರ್ಜೆಯ ಅಂಕ ಪಡೆದು ಎಂಜಿನಿಯರಿಂಗ್ ಮುಗಿಸಿದ್ದಾರೆ. ಖಾಸಗಿ ಕಂಪನಿಯವರು ತನ್ನ ಓದಿಗೆ ಬೆಲೆ ಕೊಡದಿದ್ದಾಗ, ತನ್ನ ತಂದೆಗೆ ಜೀವನ ಕೊಟ್ಟ ಈ ಉದ್ಯಮವನ್ನು ಮುಂದುವರಿಸಿದ್ದಾರೆ. ಎಂಜಿನಿಯರಿಂಗ್ ಮುಗಿಸಿದ ಹೊಸದರಲ್ಲಿ ಒಂದೆರಡು ಕಂಪನಿಗಳಿಲ್ಲಿ ಕೆಲಸ ಕೂಡ ಮಾಡಿದ್ದಾರೆ. ಜೊತೆಗೆ ಶ್ರವಣಬೆಳಗೊಳದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಇಂದು ಪ್ರತಿದಿನ ಬಜ್ಜಿ ಬೋಂಡಾ ಮಾರುವ ಮೂಲಕವೇ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾರೆ.

  • ರಾಜ್ಯಸಭೆಯ ಮೊದಲ ಭಾಷಣದಲ್ಲೇ ಪಕೋಡಾ ವಿಚಾರ ಎತ್ತಿ ಕೈ ವಿರುದ್ಧ ಶಾ ವಾಗ್ದಾಳಿ

    ರಾಜ್ಯಸಭೆಯ ಮೊದಲ ಭಾಷಣದಲ್ಲೇ ಪಕೋಡಾ ವಿಚಾರ ಎತ್ತಿ ಕೈ ವಿರುದ್ಧ ಶಾ ವಾಗ್ದಾಳಿ

    ನವದೆಹಲಿ: ರಾಜ್ಯಸಭೆಯ ಮೊದಲ ಭಾಷಣದಲ್ಲೇ ಪಕೋಡಾವನ್ನು ಮಾರಾಟ ಮಾಡಿ ಮೋದಿ ಹೇಳಿಕೆಯನ್ನು ಟೀಕಿಸುತ್ತಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

    ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಯಾವುದೇ ಒಬ್ಬ ವ್ಯಕ್ತಿ ನಿರುದ್ಯೋಗಿಯಾಗಿ ಇರುವುದಕ್ಕಿಂತ ಕಾರ್ಮಿಕನಾಗಿ ಅಥವಾ ಪಕೋಡಾ ವ್ಯಾಪಾರಿ ಆಗುವುದು ಉತ್ತಮ. ಪಕೋಡಾ ಮಾರಾಟ ಮಾಡಲು ಯಾವುದೇ ಮುಜುಗರ ಪಡಬೇಕಿಲ್ಲ ಎಂದರು.

    ದೇಶದ ಯುವ ಜನತೆಗೆ ಹೊಸ ಉದ್ಯೋಗ ಸೃಷ್ಟಿ ಮಾಡಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಈ ಹಿಂದಿನ ಹಲವು ಸರ್ಕಾರಗಳು ಬಡತನ ನಿರ್ಮೂಲನೆ ಎಂಬ ಘೋಷಣೆಗಳನ್ನು ಇಟ್ಟು ಅಧಿಕಾರ ವಹಿಸಿಕೊಂಡರೂ ಯಶಸ್ವಿಯಾಗಿರಲಿಲ್ಲ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ಜಾರಿಗೆ ಬರುತ್ತಿದೆ. ಉದ್ಯೋಗ ಸೃಷ್ಟಿಯ ಬಗ್ಗೆ ನಮ್ಮ ಸರ್ಕಾರ ಜಾಗೃತವಾಗಿದೆ. ಆದರೆ ಒಮ್ಮಿದೊಮ್ಮೆಗೆ ಬದಲಾವಣೆ ಮಾಡಲು ಸಾಧ್ಯವೇ? ವಿರೋಧಿಗಳ ಟೀಕೆಗಳನ್ನು ಕೇಳಲು ನಮಗೆ ಸಂತಸವಾಗುತ್ತಿದೆ ಎಂದು ಹೇಳಿ ತರಾಟೆಗೆ ತೆಗೆದುಕೊಂಡರು.

    ಕಾಂಗ್ರೆಸ್ 60 ವಷಗಳ ಅಧಿಕಾರ ಅವಧಿಯಲ್ಲಿ ಉದ್ಯೋಗ ಸೃಷ್ಟಿಗೆ ನೀಡಿದ ಕೊಡುಗೆ ಏನು ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ನಾವು ಈಗಾಗಲೇ ಉದ್ಯೋಗ ಸೃಷ್ಟಿಯ ಬಗ್ಗೆ ಕಾರ್ಯಪ್ರವೃತ್ತವಾಗಿದ್ದೇವೆ. ಸರ್ಕಾರದ ಸ್ಮಾರ್ಟ್ ಆಫ್ ಇಂಡಿಯಾ, ಮುದ್ರಾ ಯೋಜನಾ ಮುಂತಾದ ಯೋಜನೆಗಳು ಪ್ರಗತಿಯಲ್ಲಿದೆ ಎಂದರು.

    2014 ರಲ್ಲಿ ದೇಶದ ಜನರು ಶಕ್ತಿಶಾಲಿ ಸರ್ಕಾರಕ್ಕೆ ಮತ ಹಾಕುವ ಮೂಲಕ ಐತಿಹಾಸಿಕ ನಿರ್ಣಯ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಿ ಅಭಿವೃದ್ಧಿ, ಶಾಂತಿಯನ್ನು ಬಯಸಿದ್ದಾರೆ. ಸರ್ಕಾರ ರಚನೆ ಮಾಡಲು ಸಂಪೂರ್ಣ ಬಹುಮತವಿದ್ದರೂ ಬಿಜೆಪಿ ಎನ್‍ಡಿಎ ಒಕ್ಕೂಟದ ಮಿತ್ರ ಪಕ್ಷಗಳ ಮೂಲಕ ಸರ್ಕಾರ ರಚನೆ ಮಾಡಿದೆ ಎಂದರು.

    ಅಮಿತ್ ಶಾ ಮೊದಲ ಭಾಷಣ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದ್ದು, ಟ್ವಿಟ್ಟರ್ ನಲ್ಲಿ ಭಾರತದಲ್ಲಿ #ShahSpeaksInRajyaSabha ಹ್ಯಾಶ್ ಟ್ಯಾಗ್ ನಂಬರ್ ಒನ್ ಟ್ರೆಂಡಿಂಗ್ ಟಾಪಿಕ್ ಆಗಿತ್ತು.

    ಕೆಲ ದಿನಗಳ ಹಿಂದೆ ಖಾಸಗಿ ಮಾಧ್ಯಮದ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಅವರು ಪಕೋಡಾ ಮಾರಾಟ ಮಾಡುವುದು ಒಂದು ಸ್ವಯಂ ಉದ್ಯೋಗವಾಗಿದ್ದು, ಪಕೋಡಾ ಮಾರಾಟ ಮಾಡುವ ವ್ಯಕ್ತಿ ಪ್ರತಿದಿನ ಸಂಜೆ 200 ರೂ. ಗಳಿಸುತ್ತಾರೆ ಎಂದಿದ್ದರು. ಮೋದಿ ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿ ದೇಶಾದ್ಯಂತ ಪ್ರತಿಭಟನೆಯನ್ನು ನಡೆಸಿತ್ತು.

    ಬೆಂಗಳೂರಿನ ಆರಮನೆ ಮೈಧಾನದಲ್ಲಿ ಭಾನುವಾರ ನಡೆದ ಪರಿವರ್ತನಾ ಯಾತ್ರೆ ವೇಳೆಯು ಪ್ರಧಾನಿಗಳ ವಿರುದ್ಧ ಪ್ರತಿಭಟನೆ ನಡೆಸಿತ್ತು. ವಿಶ್ವವಿದ್ಯಾಲಯ ಘಟಿಕೋತ್ಸವದ ದಿನ ವಿದ್ಯಾರ್ಥಿಗಳು ಧರಿಸುವ ಗೌನ್ ಹಾಕಿಕೊಂಡಿದ್ದ ವಿದ್ಯಾರ್ಥಿಗಳು ಪಕೋಡಾ ಮಾರಾಟ ಮಾಡಿ ಪ್ರತಿಭಟನೆ ನಡೆಸಿದ್ದರು.

  • ಮೋದಿ ಉದ್ಯೋಗ ಸೃಷ್ಟಿ ನೀತಿಯನ್ನು ಟೀಕಿಸಿದವರಿಗೆ ಬಜೆಟ್‍ನಲ್ಲಿ ಜೇಟ್ಲಿ ಉತ್ತರಿಸಿದ್ದು ಹೀಗೆ

    ಮೋದಿ ಉದ್ಯೋಗ ಸೃಷ್ಟಿ ನೀತಿಯನ್ನು ಟೀಕಿಸಿದವರಿಗೆ ಬಜೆಟ್‍ನಲ್ಲಿ ಜೇಟ್ಲಿ ಉತ್ತರಿಸಿದ್ದು ಹೀಗೆ

    ನವದೆಹಲಿ: ಈ ಹಣಕಾಸು ವರ್ಷದಲ್ಲಿ 70 ಲಕ್ಷ ಹೊಸ ಉದ್ಯೋಗ ಸೃಷ್ಟಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ಉದ್ಯಮಶೀಲರಿಗೆ ಹಣಕಾಸು ನೆರವು ನೀಡಲು ಆರಂಭಿಸಿರುವ ಮುದ್ರಾ ಯೋಜನೆಗೆ 3 ಲಕ್ಷ ಕೋಟಿ ರೂ. ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮ(ಎಂಎಸ್‍ಎಂಇ) ಗಳಿಗೆ ಪ್ರೋತ್ಸಾಹ ನೀಡಲು 3794 ಕೋಟಿ ರೂಗಳ ಅನುದಾನ ಬಜೆಟ್ ನಲ್ಲಿ ಸಿಕ್ಕಿದೆ.

    ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಯೋಗ ಸೃಷ್ಟಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡುತ್ತಾ, ಪಕೋಡಾ ಮಾಡಿ ಮಾರುವುದು ಕೂಡ ಒಂದು ಉದ್ಯೋಗವೇ ಎಂದು ಹೇಳಿದ್ದರು.

    ಪ್ರಧಾನಿಯವರ ಈ ಹೇಳಿಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರಿನ ಎಂಎಸ್‍ಸಿ, ಎಂಎ ಹಾಗೂ ಎಂಜಿನೀಯರಿಂಗ್ ವಿದ್ಯಾರ್ಥಿಗಳು ನಗರದ ಬಿಜೆಪಿ ಕಚೇರಿಯೆದುರು ಪಕೋಡ ಮಾಡಿ ಅದನ್ನು 10 ರೂ.ಗೆ ಮಾರುವುದರ ಮೂಲಕ ಪ್ರತಿಭಟನೆ ನಡೆಸಿದ್ದರು.

    ಉದ್ಯೋಗ ಕೊಡುತ್ತೇವೆ ಎಂದಿದ್ದ ಪ್ರಧಾನಿ ಮೋದಿ ಪಕೋಡ ಮಾರುವಂತೆ ಹೇಳಿದ್ದರು. ಆದರೆ ಪಕೋಡಾ ಮಾರುವ ಉದ್ಯೋಗ ಸೃಷ್ಟಿ ಮಾಡಿದ್ದು ನರೇಂದ್ರ ಮೋದಿಯಲ್ಲ, ಉದ್ಯೋಗ ಸೃಷ್ಟಿಸಿ ಎಂದರೆ ಪಕೋಡಾ ಮಾರಾಟದ ಉದಾಹರಣೆ ನೀಡಿದ್ದರು.

    ಆ ಬಳಿಕ ಆಮ್ ಆದ್ಮಿ ಪಾರ್ಟಿ ವತಿಯಿಂದಲೂ ಕೆಲಸ ಸಿಕ್ಕಿಲ್ವಾ..? ಬಜ್ಜಿ ವಡಾ ಪಕೋಡಾ ಮಾರು 200 ರೂ. ಸಂಪಾದಿಸು, ಅದೇ ನಿನ್ನ ಉದ್ಯೋಗ ಅಂತ ಬೋರ್ಡ್ ಹಾಕೋ ಮೂಲಕ ಮೋದಿ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದನ್ನು ಓದಿ: ಮೋದಿ ವಿರುದ್ಧ ಉದ್ಯೋಗ ಸೃಷ್ಟಿಗಾಗಿ Msc, MA, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ `ಪಕೋಡ’ ಪ್ರತಿಭಟನೆ

    https://www.youtube.com/watch?v=LqnbGiE0F3Q