Tag: ನ್ಯೂ ಇಯರ್

  • 2019ರ ಆಗಮನಕ್ಕೆ ಎಂ.ಜಿ, ಬ್ರಿಗೇಡ್ ರೋಡ್ ಸುತ್ತಮುತ್ತ ಫುಲ್ ಅಲರ್ಟ್

    2019ರ ಆಗಮನಕ್ಕೆ ಎಂ.ಜಿ, ಬ್ರಿಗೇಡ್ ರೋಡ್ ಸುತ್ತಮುತ್ತ ಫುಲ್ ಅಲರ್ಟ್

    -ಪ್ರತಿ 3 ಗಂಟೆಗಳಿಗೊಮ್ಮೆ ಡಾಗ್ & ಬಾಂಬ್ ಸ್ಕ್ವಾಡ್ ತಪಾಸಣೆ

    ಬೆಂಗಳೂರು: ಹೊಸ ವರ್ಷ ಆಗಮನದ ಆಚರಣೆಯ ಹಿನ್ನೆಲೆಯಲ್ಲಿ ಎಂ.ಜಿ ರೋಡ್ ಹಾಗೂ ಬ್ರಿಗೇಡ್ ರೋಡ್ ಸುತ್ತಮುತ್ತ ಫುಲ್ ಅಲರ್ಟ್ ಆಗಿದೆ.

    ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕುಂಬ್ಳೆ ಸರ್ಕಲ್, ಕಬ್ಬನ್ ಪಾರ್ಕ್, ಯುಬಿ ಸಿಟಿ, ಲ್ಯಾವೆಲ್ಲೆ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಶ್ವಾನದಳ ಹಾಗೂ ಬಾಂಬ್ ಪತ್ತೆದಳ ತಪಾಸಣೆ ನಡೆಸಲಾಗುತ್ತದೆ.

    ಸ್ಕ್ವಾಡ್ ಎರಡು ತಂಡಗಳಾಗಿ ಪ್ರತಿಯೊಂದು ಜಾಗವನ್ನು ತಪಾಸಣೆ ಮಾಡುತ್ತಿದ್ದಾರೆ. ಮೆಟ್ರೋ ನಿಲ್ದಾಣ, ಫುಟ್ ಪಾತ್, ಪಾರ್ಕಿಂಗ್ ಸ್ಥಳಗಳಲ್ಲಿ ಫುಲ್ ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೇ ಅನುಮಾನಾಸ್ಪದ ವಸ್ತು ಮತ್ತು ವ್ಯಕ್ತಿಗಳು ಕಂಡರೆ ಕೂಡಲೇ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಇಂದು ಮತ್ತು ನಾಳೆ ಎರಡೂ ದಿನ ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ನಿಂದ ತಪಾಸಣೆ ನಡೆಯುತ್ತದೆ. ಸದ್ಯ ಸ್ಕ್ವಾಡ್ ಪ್ರತಿ ಮೂರು ಗಂಟೆಗಳಿಗೊಮ್ಮೆ ತಪಾಸಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಂದಿಗಿರಿಧಾಮದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಗೆ ಬ್ರೇಕ್…!

    ನಂದಿಗಿರಿಧಾಮದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ಗೆ ಬ್ರೇಕ್…!

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದ್ದು, ಡಿಸೆಂಬರ್ 31ರ ಸಂಜೆ 4 ಗಂಟೆಯಿಂದ 2019ರ ಹೊಸ ವರ್ಷದ ಜನವರಿ 1ರ ಬೆಳಗ್ಗೆ 8 ಗಂಟೆಯವರೆಗೂ ನಂದಿಗಿರಿಧಾಮ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

    ಪ್ರತಿ ವರ್ಷದಂತೆ ಈ ವರ್ಷವೂ ಪ್ರವಾಸಿಗರ ಹಿತದೃಷ್ಟಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ. 2019ರ ಜನವರಿ 1ರ ಬೆಳಗ್ಗೆ 8 ಗಂಟೆ ತರುವಾಯ ಪ್ರವಾಸಿಗರಿಗೆ ನಂದಿಗಿರಿಧಾಮ ಪ್ರವೇಶಕ್ಕೆ ಮುಕ್ತ ಅವಕಾಶವಿದೆ. ನಂದಿಗಿರಿಧಾಮದ ಜೊತೆ ಜೊತೆಗೆ ಪ್ರಮುಖ ಪ್ರವಾಸಿ ತಾಣಗಳಾದ ಸ್ಕಂದಗಿರಿ ಬೆಟ್ಟ ಹಾಗೂ ಆವಲಬೆಟ್ಟದಲ್ಲೂ ಸಹ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ತೋಟದ ಮನೆಯಲ್ಲಿ ಗಾಂಜಾ ಗಮ್ಮತ್ತು? ನಶೆಯಲ್ಲಿ ಯುವಕ-ಯುವತಿಯರ ತೇಲಾಟ!

    ಅಂಕು-ಡೊಂಕಿನ ನಂದಿಗಿರಿಧಾಮದ ರಸ್ತೆಯಲ್ಲಿ ಅಪಘಾತಗಳಾಗುವ ಸಂಭವ, ಮದ್ಯ ಸೇವಿಸಿದ ಅಮಲಲ್ಲಿ ಅನಾಹುತಗಳ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಂದಿಗಿರಿಧಾಮದ ಪ್ರವೇಶವನ್ನು ನಿಷೇಧಿಸಲಾಗಿದೆ. ಇದಲ್ಲದೆ ನಂದಿಗಿರಿಧಾಮದಲ್ಲಿನ ವಸತಿ ಗೃಹಗಳ ಬುಕ್ಕಿಂಗ್‍ಗೆ ಸಹ ಅವಕಾಶವಿಲ್ಲವಾಗಿದ್ದು, ಡಿಸೆಂಬರ್ 31ರಂದು ನಂದಿಗಿರಿಧಾಮದ ವಸತಿ ಗೃಹಗಳಲ್ಲೂ ಸಹ ಯಾರೂ ತಂಗುವಂತಿಲ್ಲ. ಇದನ್ನೂ ಓದಿ: ಹಚ್ಚಹಸಿರಿನ ಮಧ್ಯೆ ಹಾಲ್ನೊರೆ ಸೂಸುತ್ತಾ ಜುಳು-ಜುಳು ಹರೀತಿದೆ ಇರ್ಪು ಫಾಲ್ಸ್

    ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಎಸ್‍ಪಿ ಕಾರ್ತಿಕ್ ರೆಡ್ಡಿ, “ಜಿಲ್ಲೆಯಾದ್ಯಾಂತ ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸುವವರೆಗೂ ಕಡಿವಾಣ ಹಾಕಿ ದಂಡ ವಿಧಿಸೋಕೆ ಜಿಲ್ಲೆಯ ಪೊಲೀಸರು ಸಜ್ಜಾಗಿರುತ್ತಾರೆ. ನಿಗದಿಪಡಿಸಿದ ಸಮಯದ ನಂತರವೂ ಮದ್ಯ ಮಾರಾಟ ಮಾಡಿದರೆ ಬಾರ್‍ಗಳ ವಿರುದ್ಧವೂ ಕ್ರಮ ಕೈಗೊಳ್ಳುಲಾಗುವುದು” ಎಂದು ಹೇಳಿದರು. ಇದನ್ನೂ ಓದಿ: ಹೊಸ ವರ್ಷದಂದು ಪ್ರವಾಸಿ ತಾಣ ಮುತ್ತತ್ತಿಗೆ ನೋ ಎಂಟ್ರಿ

    ಇದಲ್ಲದೆ ಹೊಸ ವರ್ಷಾಚರಣೆಗೆ ಪಾರ್ಟಿ ಆಯೋಜನೆ ಮಾಡುವಂತವರು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರಿಂದ ಅನುಮತಿ ಪತ್ರ ಪಡೆದು ಪಾರ್ಟಿ ಆಯೋಜನೆ ಮಾಡಬೇಕಿದ್ದು, ಮದ್ಯ ಸರಬರಾಜು ಸಹ ಮಾಡುತ್ತಿದ್ರೆ ಅದಕ್ಕೂ ಸಂಬಂಧಪಟ್ಟ ಅಬಕಾರಿ ಇಲಾಖೆಯಿಂದ ಅನುಮತಿ ಕಡ್ಡಾಯ ಅಂತ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷಾಚರಣೆಗೆ ಬೆಂಗ್ಳೂರು ಪೊಲೀಸರ ಹೊಸ ಪ್ಲಾನ್

    ಹೊಸ ವರ್ಷಾಚರಣೆಗೆ ಬೆಂಗ್ಳೂರು ಪೊಲೀಸರ ಹೊಸ ಪ್ಲಾನ್

    ಬೆಂಗಳೂರು: ಹೊಸ ವರ್ಷಾಚರಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಈ ಬಾರಿಯ ನ್ಯೂ ಇಯರ್ ಗೆ ಬೆಂಗಳೂರು ಪೊಲೀಸರು ಹೊಸದೊಂದು ಪ್ಲಾನ್ ಮಾಡಿದ್ದಾರೆ.

    ಉದ್ಯಾನ ನಗರಿ ಬೆಂಗಳೂರು, ಹೊಸ ವರ್ಷಚಾರಣೆಯ ಮೋಜು, ಮಸ್ತಿ, ಪಾರ್ಟಿಗೆ ಹೇಗೆ ಫೇಮಸ್ ಆಗಿದೆಯೋ, ನ್ಯೂಯರ್ ವೇಳೆ ನಡೆಯುವ ಅವಘಡಗಳಿಗೂ ಅಷ್ಟೇ ಫೆಮಸ್ ಆಗಿದೆ. ಪೊಲೀಸರು ಎಷ್ಟೇ ಜಾಗೃತಿ ವಹಿಸಿದರು ಕೂಡ ಒಂದಲ್ಲೊಂದು ಅಚಾತುರ್ಯ ನಡೆದು, ರಾಷ್ಟಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗುತ್ತೆ.

    ಕಳೆದ ಎರಡ್ಮೂರು ವರ್ಷಗಳಿಂದ ಯುವತಿಯರ ಜೊತೆ ಅಶ್ಲೀಲ ವರ್ತನೆ, ಲೈಂಗಿಕ ಕಿರುಕುಳ, ಕುಡಿದ ಮತ್ತಿನಲ್ಲಿ ಪುಡಿರೌಡಿಗಳ ದಾಂಧಲೆ ಸೇರಿದಂತೆ ನಗರದಲ್ಲಿ ನಡೆದ ಕೆಲ ಘಟನೆಗಳು ಇದಕ್ಕೆ ಸಾಕ್ಷಿಯಾಗಿದೆ. ಈ ಘಟನೆಯಿಂದ ಎಚ್ಚೆತ್ತಿರುವ ಬೆಂಗಳೂರು ನಗರ ಪೊಲೀಸರು, ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

    ನಗರದ ನೂರು ಅತಿಸೂಕ್ಷ್ಮ ಜಾಗಗಳನ್ನು ಗುರುತಿಸಿರುವ ಪೊಲೀಸರು, ಆ ಏರಿಯಾಗಳಲ್ಲಿ ಡಿಸೆಂಬರ್ 31ರ ರಾತ್ರಿ 12 ಗಂಟೆಗೆ ತಾವೇ ಕೇಕ್ ತಂದು, ಸಾರ್ವಜನಿಕರೊಂದಿಗೆ ಸೇರಿ ಕೇಕ್ ಕಟ್ ಮಾಡಲಿದ್ದಾರೆ. ಆ ಮೂಲಕ ಜನಸ್ನೇಹಿ ವರ್ಷಾಚರಣೆಯನ್ನು ಮಾಡುವುದರ ಜೊತೆಗೆ ಅಪರಾಧ ಚಟುವಟಿಕೆಗಳನ್ನು ತಡೆಯುವುದು, ಇದರ ಜೊತೆಗೆ ಜನರಲ್ಲಿ ನಿರ್ಭೀತ ವಾತಾವರಣ ಸೃಷ್ಟಿ ಮಾಡಿ, ಸಕ್ಸಸ್ ಫುಲ್ ನ್ಯೂ ಇಯರ್ ಮಾಡಲು ಪೊಲೀಸರು ಪ್ಲಾನ್ ಮಾಡಿದ್ದಾರೆ. ಈಗಾಗಲೇ ಈ ಬಗ್ಗೆ ಸಿದ್ಧತೆಗಳು ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಬಕಾರಿ ಇಲಾಖೆಗೆ ಹೊಸ ವರ್ಷದ ಕಿಕ್- ನ್ಯೂ ಇಯರ್ ದಿನ ಬಂದ ಆದಾಯ ಕೇಳಿದ್ರೆ ಶಾಕ್!

    ಅಬಕಾರಿ ಇಲಾಖೆಗೆ ಹೊಸ ವರ್ಷದ ಕಿಕ್- ನ್ಯೂ ಇಯರ್ ದಿನ ಬಂದ ಆದಾಯ ಕೇಳಿದ್ರೆ ಶಾಕ್!

    ಬೆಂಗಳೂರು: 2017 ವರ್ಷದ ಕೊನೆ ದಿನ ಅಬಕಾರಿ ಇಲಾಖೆಗೆ ಅಂದಾಜಿಸಿದಕ್ಕಿಂತಲೂ ಹೆಚ್ಚಿನ ಆದಾಯ ಹರಿದು ಬಂದಿದೆ. ಸುಪ್ರೀಂಕೋರ್ಟ್ ಆದೇಶದ ಹೊಡೆತದಿಂದ ನಷ್ಟದಲ್ಲಿದ್ದ ಅಬಕಾರಿ ಇಲಾಖೆಯನ್ನು ಕುಡುಕರು ಪಾರು ಮಾಡಿದ್ದಾರೆ.

    ಕುಡುಕರೇ ನಮ್ ಆಸ್ತಿ ಅಂತಾ ಹೇಳುತ್ತಾ ಅಬಕಾರಿ ಇಲಾಖೆ ಅಧಿಕಾರಿಗಳು ಈಗ ಮೆಲ್ಲನೆ ನಗು ಬೀರುತ್ತಿದ್ದಾರೆ. ಇದಕ್ಕೆ ಕಾರಣ ಈ ಬಾರಿಯ ಹೊಸ ವರ್ಷ. ಈ ಬಾರಿ ಡಿಸೆಂಬರ್‍ನಲ್ಲಿ 1,400 ಕೋಟಿ ಆದಾಯವನ್ನು ಕುಡುಕರು ಅಬಕಾರಿ ಇಲಾಖೆಯ ಜೇಬಿಗೆ ತುಂಬಿಸಿದ್ದಾರೆ. ಎಲ್ಲರೂ ಸೇರಿ ಪಾರ್ಟಿ ಮಾಡೋಣಾ ಅಂತಾ ಕರ್ನಾಟಕದ ಜನ ಎಣ್ಣೆ ಹೊಡೆದಿದ್ದೇ ಹೊಡೆದಿದ್ದು ಅನಿಸುತ್ತೆ. ಇದ್ರ ಎಫೆಕ್ಟ್‍ಗೆ ಕಳೆದ ವರ್ಷಕ್ಕಿಂತ ಬರೋಬ್ಬರಿ 100 ಕೋಟಿ ಆದಾಯ ಒಂದೇ ದಿನದಲ್ಲಿ ಹೆಚ್ಚಳವಾಗಿದೆ.

    2016ರಲ್ಲಿ ಬಂದ ಆದಾಯ ಹೀಗಿದೆ: ಬೆಂಗಳೂರಿನಲ್ಲಿ 2016ಕ್ಕೆ ಒಟ್ಟು ದೇಶಿಯ ಮದ್ಯ 11.51 ಲಕ್ಷ ಕೇಸ್, ಬಿಯರ್ 7.56 ಲಕ್ಷ ಕೇಸ್ ಮಾರಾಟವಾಗಿತ್ತು. ಒಟ್ಟಾರೆ ರಾಜ್ಯದಲ್ಲಿ ದೇಶೀಯ ಮದ್ಯ ಮತ್ತು ಬಿಯರ್ ತಲಾ 49.2 ಲಕ್ಷ ಕೇಸ್ ನಂತೆ ಮಾರಾಟವಾಗಿದ್ದವು. ಬೆಂಗಳೂರು ನಗರದಿಂದ 325 ಕೋಟಿ ರೂ, ಆದಾಯ ಬಂದರೆ, ಇಡೀ ರಾಜ್ಯದಿಂದ 1300 ಕೋಟಿ ರೂ.ಆದಾಯ ಬಂದಿತ್ತು.

    2017ರ ಆದಾಯ ಹೀಗಿದೆ: ಈ ಬಾರಿ 2017 ಡಿಸೆಂಬರ್ 31ರಂದು ಬೆಂಗಳೂರು ನಗರದಲ್ಲಿ ದೇಶಿಯ ಮದ್ಯ 11.59 ಲಕ್ಷ ಕೇಸ್ ಮಾರಾಟವಾದ್ರೆ, ಬಿಯರ್ 8.74 ಲಕ್ಷ ಕೇಸ್ ಮಾರಾಟವಾಗಿದೆ. ಕೇವಲ ಬೆಂಗಳೂರು ನಗರದಿಂದಲೇ 360 ಕೋಟಿ ಆದಾಯ ಹರಿದು ಬಂದಿದೆ. ಒಟ್ಟಾರೆಯಾಗಿ ಕರ್ನಾಟಕದಲ್ಲಿ 50.17 ಲಕ್ಷ ಕೇಸ್ ದೇಶಿಯ ಮದ್ಯ ಮಾರಾಟವಾಗಿದ್ದು, 53.77 ಲಕ್ಷ ಕೇಸ್ ಮದ್ಯ ಮಾರಾಟವಾಗಿದೆ. ಹಾಗಾಗಿ ಒಟ್ಟು 1400 ಕೋಟಿ ರೂ. ಅಬಕಾರಿ ಇಲಾಖೆಯ ಖಜಾನೆ ಸೇರಿಕೊಂಡಿದೆ.

     

  • 2017ಕ್ಕೆ ಗುಡ್ ಬೈ, 2018ಕ್ಕೆ ಸ್ವಾಗತ!

    2017ಕ್ಕೆ ಗುಡ್ ಬೈ, 2018ಕ್ಕೆ ಸ್ವಾಗತ!

    ಬೆಂಗಳೂರು: ವಿಶ್ವಾದ್ಯಂತ ಜನರು ಹೊಸವರ್ಷ 2018ನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಒಂದಿಷ್ಟು ಸಂತಸ, ಸ್ವಲ್ಪ ಬೇಸರ, ಒಂದಷ್ಟು ನೋವು, ಜೊತೆಗೆ ನಲಿವುಗಳನ್ನು ಕೊಟ್ಟ 2017ಕ್ಕೆ ಮಧ್ಯ ರಾತ್ರಿ 12 ಗಂಟೆಗೆ ವಿದಾಯ ಹೇಳಿದ ಜನರು ಹಲವಾರು ನಿರೀಕ್ಷೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿದರು. ರಾಜ್ಯದಲ್ಲೂ ಹೊಸ ವರ್ಷಾಚರಣೆ ಸಂಭ್ರಮ ಬಲು ಜೋರಾಗಿತ್ತು.

    ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷ ಸ್ವಾಗತಿಸಲು ನಗರದ ಪ್ರಮುಖ ರಸ್ತೆಗಳನ್ನು ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿತ್ತು. ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ಎಂ ಜಿ ರಸ್ತೆಗೆ ಲಕ್ಷಾಂತರ ಮಂದಿ ಆಗಮಿಸಿ ನ್ಯೂ ಇಯರ್ ಸಂಭ್ರಮದಲ್ಲಿ ಮೈ ಮರೆತರು. ಜನರನ್ನು ಸ್ವಾಗತಿಸಲು ಸಂಜೆ 7 ಗಂಟೆಯಿಂದಲೇ ನಗರದ ಪಬ್ ಮತ್ತು ರೆಸ್ಟೋರೆಂಟ್ ಗಳು ಸಿದ್ಧವಾಗಿದ್ದವು.

    ಬೆಂಗಳೂರಿನ ನ್ಯೂಇಯರ್ ಕಿಕ್ ಯಾವ ಮಟ್ಟಕ್ಕಿತ್ತು ಎಂದರೆ ಲಕ್ಷಾಂತರ ಮಂದಿ ‘ನಮ್ಮ ಮೆಟ್ರೋ’ದಲ್ಲಿ ಭಾನುವಾರ ಸಂಜೆ ಸಂಚರಿಸಿದ್ದಾರೆ ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ. ಹೊಸ ವರ್ಷಾಚರಣೆಯ ಭದ್ರತೆಯನ್ನು ವೀಕ್ಷಿಸಲು ಈ ಬಾರಿ ಸ್ವತಃ ಗೃಹ ಸಚಿವರೇ ಫೀಲ್ಡ್ ಗಿಳಿದಿದ್ದರು. ಬ್ರಿಗೇಡ್ ರಸ್ತೆ, ಎಂಜಿ ರಸ್ತೆಗಳಲ್ಲಿ ಸಚಿವ ರಾಮಲಿಂಗಾರೆಡ್ಡಿ ಸ್ವತಃ ಪೊಲೀಸರಿಗೆ ಸೂಚನೆ ನೀಡುತ್ತಿದ್ದರು. ಬ್ರಿಗೇಡ್ ರೋಡ್ ನಲ್ಲಿ ಮಹಿಳೆಯರನ್ನು ರಕ್ಷಣೆ ಮಾಡಲು ಈ ಬಾರಿ ವಿಶೇಷವಾಗಿ ದುರ್ಗಿಯರ ಟೀಂ ಆಗಮಿಸಿತ್ತು. 100 ಜನ ದುರ್ಗಿಯರು ಮಹಿಳೆಯರ ರಕ್ಷಣಾ ಕಾರ್ಯಕ್ಕಿಳಿದಿದ್ದರು.

    ರಾಜ್ಯದ ಇತರೆ ಜಿಲ್ಲೆಗಳಲ್ಲೂ ಹೊಸ ವರ್ಷಾಚರಣೆ ಸಂಭ್ರಮ ಮುಗಿಲು ಮುಟ್ಟಿತ್ತು. ಮೈಸೂರು, ಮಂಗಳೂರು, ರಾಯಚೂರು, ಹುಬ್ಬಳ್ಳಿ, ಉಡುಪಿಯ ವಿವಿಧ ಹೋಟೆಲ್ & ರೆಸ್ಟೋರೆಂಟ್ ಗಳಲ್ಲಿ ನ್ಯೂ ಇಯರ್ ಪಾರ್ಟಿ ಆಯೋಜಿಸಲಾಗಿತ್ತು. ಎಲ್ಲೆಡೆ ಡಿಜೆ ಸದ್ದಿಗೆ ಮನಸೋತ ಯುವಜನತೆ ಹುಚ್ಚೆದ್ದು ಕುಣಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಝಗಮಗಿಸುವ ಬೆಳಕಿನ ನಡುವೆ ಹೆಜ್ಜೆ ಹಾಕುತ್ತಿದ್ದ ಯುವಕ ಯುವತಿಯರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ನ್ಯೂ ಇಯರ್ ಸಂಭ್ರಮ ಮನೆ ಮಾಡಿತ್ತು. ದೆಹಲಿಯ ಇಂಡಿಯಾ ಗೇಟ್ ಬಳಿ ರಾತ್ರಿ 9 ಗಂಟೆಯಿಂದಲೇ ಹೊಸ ವರ್ಷದ ಆಚರಣೆಗೆ ದೆಹಲಿಯ ಜನರು ಸಿದ್ಧವಾಗಿ ನಿಂತಿದ್ದರು. ಮೈ ಕೊರತೆಯುವ ಚಳಿಯನ್ನು ಲೆಕ್ಕಿಸದೇ ಇಂಡಿಯಾ ಗೇಟ್ ಬಳಿ ಸೇರಿರುವ ಯುವಕ ಯುವತಿಯರು ಹೊಸ ವರ್ಷವನ್ನು ಬರ ಮಾಡಿಕೊಂಡರು. ವಾಣಿಜ್ಯ ನಗರಿ ಮುಂಬೈ, ಗೋವಾ, ಉತ್ತರಪ್ರದೇಶ, ನೋಯ್ಡಾದಲ್ಲೂ ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸಿದರು.

  • ಮಾಲ್ಡೀವ್ಸ್ ನಲ್ಲಿ ಡಿಪ್-ವೀರ್ ನ್ಯೂ ಇಯರ್-ಅಂದೇ ಉಂಗುರ ಬದಲಾಯಿಸಿಕೊಳ್ತಾರಾ?!

    ಮಾಲ್ಡೀವ್ಸ್ ನಲ್ಲಿ ಡಿಪ್-ವೀರ್ ನ್ಯೂ ಇಯರ್-ಅಂದೇ ಉಂಗುರ ಬದಲಾಯಿಸಿಕೊಳ್ತಾರಾ?!

    ಮುಂಬೈ: ಇತ್ತೀಚೆಗೆ ಅನುಷ್ಕಾ ಶರ್ಮಾ ತಮ್ಮ ಬಹು ದಿನಗಳ ಗೆಳೆಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಮದುವೆಯಾಗಯವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಬಾಲಿವುಡ್‍ನ ಮತ್ತೊಂದು ರೊಮ್ಯಾಂಟಿಕ್ ಕಪಲ್ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ (ಡಿಪ್‍ವೀರ್) ಹೊಸ ವರ್ಷದ ಆಚರಣೆಯಂದು ಪರಸ್ಪರ ಉಂಗುರ ಬದಲಾಯಿಸಿಕೊಳ್ತಾರೆ ಅಂತಾ ಸುದ್ದಿಯೊಂದು ಹರಿದಾಡುತ್ತಿದೆ.

    2013ರಿಂದ ಪ್ರೇಮ ಪಾಶದಲ್ಲಿ ಸಿಲುಕಿರುವ ಡಿಪ್‍ವೀರ್ ಮಾಲ್ಡೀವ್ಸ್ ನಲ್ಲಿ ಈಗಾಗಲೇ ಖಾಸಗಿ ಬೀಚ್‍ವುಳ್ಳ ರೆಸಾರ್ಟ್ ಬುಕ್ ಮಾಡಿದ್ದು, ಅಲ್ಲಿಯೇ ಹೊಸ ವರ್ಷ ಆಚರಿಸುವುದರ ಜೊತೆಗೆ ಪರಸ್ಪರ ಉಂಗುರವನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಅಂತಾ ಹೇಳಲಾಗುತ್ತಿದೆ. ದೀಪಿಕಾ ಮತ್ತು ರಣ್‍ವೀರ್ ಇದೂವರೆಗೂ ಬಹಿರಂಗವಾಗಿ ಎಲ್ಲಿಯೂ ತಮ್ಮ ಪ್ರೀತಿಯನ್ನು ಹೇಳಿಕೊಂಡಿಲ್ಲ. ಇಬ್ಬರೂ ಸ್ಟಾರ್‍ಗಳು ಖಾಸಗಿ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಆಗಮಿಸುವುದು, ಟ್ವಿಟರ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಮೆಸೇಜ್ ಗಳ ಮೂಲಕ ಲವ್ ಬಗ್ಗೆ ಸುಳಿವನ್ನು ನೀಡಿದ್ದಾರೆ.

    ರಣ್‍ವೀರ್ ಮತ್ತು ದೀಪಿಕಾ ಪಡುಕೋಣೆ ಐತಿಹಾಸಿಕ ಕಥಾನಕವುಳ್ಳ ‘ಪದ್ಮಾವತಿ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದರು. ಚಿತ್ರಕ್ಕೆ ಸೆನ್ಸಾರ್ ನಿಂದ ಅನುಮತಿ ಸಿಗದ ಕಾರಣಕ್ಕೆ ಪದ್ಮಾವತಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಶೂಟಿಂಗ್ ಬ್ಯೂಸಿ ಶೆಡ್ಯೂಲ್ ನಿಂದ ರಿಲೀಫ್ ತೆಗೆದುಕೊಂಡಿರುವ ಸ್ಟಾರ್ ಗಳು ಮಾಲ್ಡೀವ್ಸ್ ನಲ್ಲಿ ನ್ಯೂ ಇಯರ್ ಆಚರಸಲಿದ್ದಾರೆ ಎಂದು ಪತ್ರಿಕೆಯೊಂದು ಪ್ರಕಟಿಸಿದೆ.

    2013ರಲ್ಲಿ ತೆರೆಕಂಡ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗೋಲಿಯೋಂ ಕೀ ರಾಸಲೀಲಾ: ರಾಮ್‍ಲೀಲಾ’ ಸಿನಿಮಾದಿಂದ ಡಿಪ್‍ವೀರ್ ಜೊತೆಯಾಗಿ ನಟಿಸಿದ್ದರು. ನಂತರ ‘ಬಾಜೀರಾವ್ ಮಸ್ತಾನಿ’ ಸಿನಿಮಾದಲ್ಲಿ ಒಂದಾದ ಈ ಜೋಡಿ ಬೆಳ್ಳಿ ಪರದೆಯ ಮೇಲೆ ಮೋಡಿ ಮಾಡಿತ್ತು. ಇನ್ನೂ ದೀಪಿಕಾ ನಟನೆಯ ‘ಫೈಂಡಿಂಗ್ ಫ್ಯಾನಿ’ ಚಿತ್ರದ ಒಂದು ಚಿಕ್ಕ ದೃಶ್ಯವೊಂದರಲ್ಲಿ ದೀಪಿಕಾಳ ಪತಿಯಾಗಿ ರಣ್‍ವೀರ್ ಬಣ್ಣ ಹಚ್ಚಿದ್ದರು. ಒಟ್ಟಾರೆಯಾಗಿ ಈ ಹಾಟ್ ಕಪಲ್ ಪದ್ಮಾವತಿ ಸಿನಿಮಾದಲ್ಲಿ ನಾಲ್ಕನೇ ಬಾರಿ ಜೊತೆಯಾಗಿದ್ದಾರೆ. ಆದ್ರೆ ಪದ್ಮಾವತಿ ಚಿತ್ರದಲ್ಲಿ ರಣ್‍ವೀರ್ ಮತ್ತು ದೀಪಿಕಾ ನಡುವೆ ಯಾವುದೇ ರೊಮ್ಯಾಂಟಿಕ್ ದೃಶ್ಯಗಳಿಲ್ಲ ಅಂತಾ ಚಿತ್ರತಂಡ ಸ್ಪಷ್ಟನೆ ನೀಡಿದೆ.