Tag: ನ್ಯುಮೋನಿಯಾ

  • ಒಡಿಶಾದ ಬುಡಕಟ್ಟು ಸಮುದಾಯದ ಮೊದಲ ಸಿಎಂ ಆಗಿದ್ದ ಹೇಮಾನಂದ ಬಿಸ್ವಾಲ್ ನಿಧನ

    ಒಡಿಶಾದ ಬುಡಕಟ್ಟು ಸಮುದಾಯದ ಮೊದಲ ಸಿಎಂ ಆಗಿದ್ದ ಹೇಮಾನಂದ ಬಿಸ್ವಾಲ್ ನಿಧನ

    ಭುವನೇಶ್ವರ: ಒಡಿಶಾದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಹೇಮಾನಂದ ಬಿಸ್ವಾಲ್(82) ನಿಧನರಾಗಿದ್ದಾರೆ.

    ನ್ಯುಮೋನಿಯಾದಿಂದ ಬಳಲುತ್ತಿದ್ದ ಹೇಮಾನಂದ ಬಿಸ್ವಾಲ್ ಅವರು ಶುಕ್ರವಾರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಅವರ ಪುತ್ರಿ ಸುನೀತಾ ತಿಳಿಸಿದ್ದು, ಸಬಿತಾ, ಸಂಜುಕ್ಯ, ಮಂಜಿಯುಲತಾ, ಸುನೀತಾ ಮತ್ತು ಅನಿತಾ ಎಂಬ ಐವರು ಪುತ್ರಿಯರನ್ನು ಬಿಸ್ವಾಲ್ ಅಗಲಿದ್ದಾರೆ.

    Hemananda Biswal

    ಹೇಮಾನಂದ ಬಿಸ್ವಾಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು, ಮಾಜಿ ಒಡಿಶಾ ಸಿಎಂ ಹೇಮೇಂದ್ರ ಬಿಸ್ವಾಲ್ ಅವರ ನಿಧನದ ಸುದ್ದಿ ಆಘಾತವನ್ನುಂಟು ಮಾಡಿದೆ. ಅವರು ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರು ಮತ್ತು ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಬೆಂಬಲಿಗರೊಂದಿಗೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.  ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ ಕಲಬುರಗಿಯ ಐವರು ವಿದ್ಯಾರ್ಥಿಗಳು

    ಬಿಸ್ವಾಲ್ ಅವರು ಸುಂದರ್‌ಗಢ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು ಮತ್ತು ಝಾರ್ಸುಗುಡ ಜಿಲ್ಲೆಯಿಂದ ಆರು ಬಾರಿ ಶಾಸಕರಾಗಿದ್ದರು. ಜೊತೆಗೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರು ಮೊದಲ ಬಾರಿಗೆ 1989ರ ಡಿಸೆಂಬರ್ 7ರಿಂದ 1990ರ ಮಾರ್ಚ್ 5 ರವರೆಗೆ ಮತ್ತು 1999ರ ಡಿಸೆಂಬರ್ 6 ರಿಂದ 2000ರ ಮಾರ್ಚ್ 5ರವರೆಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಅಲ್ಲದೇ ಅವರು ಒಡಿಶಾದ ಮೊದಲ ಬುಡಕಟ್ಟು ಮುಖ್ಯಮಂತ್ರಿಯಾಗಿದ್ದರು.

     ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಹೇಮಾನಂದ ಬಿಸ್ವಾಲ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಅವರು ಕಾಂಗ್ರೆಸ್ ಪಕ್ಷದ ಧೀಮಂತ ನಾಯಕರಾಗಿದ್ದರು ಮತ್ತು ಶ್ರೇಷ್ಠ ಬುಡಕಟ್ಟು ನಾಯಕರಾಗಿ ಸ್ಮರಿಸಲ್ಪಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಭಾರತೀಯರನ್ನು ಕರೆತರಲು ರೊಮೇನಿಯಾಗೆ ವಿಮಾನ – ಏರ್ ಇಂಡಿಯಾ ಯೋಜನೆ

  • ಹಿಂದೂ ಮಗುವಿನ ರಕ್ಷಣೆಗೆ ಉಪವಾಸ ಕೈಬಿಟ್ಟ ಮುಸ್ಲಿಂ ವ್ಯಕ್ತಿ

    ಹಿಂದೂ ಮಗುವಿನ ರಕ್ಷಣೆಗೆ ಉಪವಾಸ ಕೈಬಿಟ್ಟ ಮುಸ್ಲಿಂ ವ್ಯಕ್ತಿ

    – ಲಾಕ್‍ಡೌನ್ ನಡ್ವೆಯೇ ಆಸ್ಪತ್ರೆಗೆ ತೆರಳಿ ರಕ್ತದಾನ

    ರಾಂಚಿ: ಸದ್ಯ ಭಾರತ ದೇಶ ಕೊರೊನಾ ವೈರಸ್ ಎಂಬ ಮಹಾಮಾರಿಯನ್ನು ಎದುರಿಸುತ್ತಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಲವಾರು ಮಾನವೀಯ ಕಾರ್ಯಗಳು ನಡೆಯುತ್ತಿದ್ದು, ನಮ್ಮ ಕಣ್ಣ ಮುಂದಿವೆ. ಹಾಗೆಯೇ ಜಾತಿ-ಧರ್ಮ ನಂತರ ಮಾನವೀಯತೆ ಮೊದಲು ಎಂಬಂತೆ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಮಗುವಿನ ಪ್ರಾಣ ರಕ್ಷಣೆಗೆ ನಿಂತಿದ್ದು, ಇದೀಗ ಮಾದಿರಿಯಾಗುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    8 ವರ್ಷದ ನಿಖಿಲ್ ಎಂಬ ಬಾಲಕ ನ್ಯುಮೋನಿಯಾದಿಂದ ಬಳಲುತ್ತಿದ್ದು, ರಕ್ತಕ್ಕಾಗಿ ಪೋಷಕರು ಪರದಾಡುತ್ತಿದ್ದರು. ಇವರ ಪರದಾಟವನ್ನು ಗಮನಿಸಿದ ಸಲೀಂ ಅನ್ಸಾರ್ ಸಹಾಯ ಮಾಡುವ ಮೂಲಕ ನಿಖಿಲ್ ಗೆ ದೇವರಾಗಿ ಬಂದಿದ್ದಾರೆ.

    ಅನ್ಸಾರ್ ಅವರು ನಿಖಿಲ್ ರಕ್ಷಣೆಗಾಗಿ ನಿಂತಿದ್ದು, ಬಾಲಕನಿಗೆ ರಕ್ತದಾನ ಮಾಡಿದ್ದಾರೆ. ರಂಜಾನ್ ಹಬ್ಬದ ಪ್ರಯುಕ್ತ 1 ತಿಂಗಳ ಕಾಲ ಅನ್ಸಾರಿ ಅವರು ಉಪವಾಸ ಕೈಗೊಂಡಿದ್ದರು. ಆದರೆ ಇದೀಗ ಬಾಲಕನ ರಕ್ಷಣೆಗಾಗಿ ಉಪವಾಸವನ್ನೇ ಕೈಬಿಟ್ಟಿದ್ದಾರೆ.

    ಜಾರ್ಖಂಡ್ ಜಿಲ್ಲೆಯ ಹಜರಿಬಾಘ್ ನಲ್ಲಿರುವ ಆಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಈತನ ಸ್ಥಿತಿ ಚಿಂತಾಜನಕವಾಗಿದ್ದು, ಎ ಪಾಸಿಟಿವ್ ರಕ್ತದ ಅವಶ್ಯತೆ ಇದೆ.

    ಆದರೆ ಸುತ್ತಮುತ್ತ ಸದ್ಯ ಯಾರೂ ರಕ್ತ ಕೊಡಲು ಮುಂದೆ ಬರದಿದ್ದರಿಂದ ನಿಖಿಲ್ ಪೋಷಕರು ಚಿಂತಾಕ್ರಾಂತರಾಗಿದ್ದರು. ಇದರಿಂದ ನೊಂದ ಪೋಷಕರು ಗ್ರಾಮದ ಜನರಿಗೆ ರಕ್ತದಾನದ ಅವಶ್ಯಕತೆ ಇರೋ ಬಗ್ಗೆ ಒಂದು ಸಂದೇಶವನ್ನು ಕಳುಹಿಸಿದ್ದಾರೆ. ಈ ವೇಳೆ ಗಿರಿಧ್ ಜಿಲ್ಲೆಯ ಬಗೋದರ್ ಬ್ಲಾಕ್ ನಿವಾಸಿ ಅನ್ಸಾರ್ ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾರೆ.

    ದುರಂತ ಅಂದರೆ ಕೊರೊನಾ ವೈರಸ್ ಹರಡುವ ಭೀತಿಯಿಂದ ಲಾಕ್ ಡೌನ್ ಮಾಡಲಾಗಿದ್ದರ ಪರಿಣಾಮ ಅನ್ಸಾರ್ ಅವರಿಗೆ ರಕ್ತದಾನ ಮಾಡಲು ಹೊರಬರಲು ಸಾಧ್ಯವಾಗಲಿಲ್ಲ. ಕೊನೆಗೆ ವೈದ್ಯರ ಸಹಕಾರದಿಂದ ಹೇಗೋ ಹೊರ ಬಂದರೂ, ಪೊಲೀಸರು ಬಿಡದೆ ಕಾಡಿ-ಬೇಡಿ ಕೊನೆಗೂ ಆಸ್ಪತ್ರೆ ತಲುಪಿದರು.

    ಹೀಗೆ ಆಸ್ಪತ್ರೆ ತಲುಪಿದ ಅನ್ಸಾರ್ ಅವರಿಗೆ ಡಾಕ್ಟರ್ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ನೀವು ರಕ್ತದಾನ ಮಾಡಲು ತಯಾರಿದ್ದರೆ ನಿಮ್ಮ ಉಪವಾಸವನ್ನು ಕೈಬಿಡಬೇಕು ಎಂದು ಹೇಳಿದ್ದಾರೆ. ಯಾಕಂದರೆ ರಕ್ತದಾನ ಮಾಡಿದ ಬಳಿಕ ಏನಾದರೂ ಸ್ಪಲ್ಪ ತಿನ್ನಲೇಬೇಕಾಗುತ್ತದೆ. ಉಪವಾಸ ಇದ್ದರೆ ಇದು ಕಷ್ಟ ಸಾಧ್ಯ ಎಂದು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆಯಂತೆ ಅನ್ಸಾರ್ ಅವರು ಉಪವಾಸ ಕೈಬಿಟ್ಟು ಬಾಲಕನಿನಾಗಿ ಮಾನವೀಯತೆ ಮೆರೆದಿದ್ದಾರೆ.

    ನಾನು ಕುಸಮ್ರಝಾ ಗ್ರೂಪ್ ನ ಉಪಾಧ್ಯಕ್ಷನಾಗಿದ್ದು, ಯಾರಿಗೆ ರಕ್ತದ ಅವಶ್ಯಕತೆ ಇದೆಯೋ ಅವರಿಗೆ ದಾನ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಅನ್ಸಾರ್ ತಿಳಿಸಿದ್ದಾರೆ.