Tag: ನ್ಯಾಯಾಧೀಶೆ

  • ತೃತೀಯ ಲಿಂಗಿಗಳಿಗೆ ಕಾನೂನು ಹಕ್ಕು ನೀಡಲಾಗಿದೆ ಆದ್ರೆ ಇನ್ನೂ ಸ್ಥಾನ ನೀಡಿಲ್ಲ: ದೇಶದ ಮೊದಲ ಟ್ರಾನ್ಸ್‌ಜೆಂಡರ್ ಜಡ್ಜ್

    ತೃತೀಯ ಲಿಂಗಿಗಳಿಗೆ ಕಾನೂನು ಹಕ್ಕು ನೀಡಲಾಗಿದೆ ಆದ್ರೆ ಇನ್ನೂ ಸ್ಥಾನ ನೀಡಿಲ್ಲ: ದೇಶದ ಮೊದಲ ಟ್ರಾನ್ಸ್‌ಜೆಂಡರ್ ಜಡ್ಜ್

    ಭೋಪಾಲ್: ಸಮಾಜದಲ್ಲಿ ತೃತೀಯಲಿಂಗಿಗಳಿಗೆ ಕಾನೂನು ಬದ್ಧ ಹಕ್ಕುಗಳನ್ನು ನೀಡಲಾಗಿದೆ. ಆದರೆ ಇನ್ನೂ ಅವರು ಏನನ್ನಾದರೂ ಸಾಧಿಸಲು ಸ್ಥಳ ಪಡೆಯಲು ಸಾಧ್ಯವಾಗಿಲ್ಲ ಎಂದು ಮೊದಲ ತೃತೀಯ ಲಿಂಗಿ ಸಮುದಾಯದ ನ್ಯಾಯಾಧೀಶರಾದ (Transgender Judge) ಜೋಯಿತಾ ಮೊಂಡಲ್ (Joyita Mondal) ತಿಳಿಸಿದರು.

    ಇಂದೋರ್‌ಗೆ ಭೇಟಿ ನೀಡಿದ ಅವರು, ತೃತೀಯ ಲಿಂಗಿಗಳು ಸಮಾನತೆಯನ್ನು ಪಡೆಯಲು ಸರ್ಕಾರವು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಇದರಿಂದಾಗಿ ಸಮಾಜದ ಇತರ ಜನರಿಗೂ ನಮ್ಮ ಬಗ್ಗೆ ಸೂಕ್ಷ್ಮತೆ ಬರುತ್ತದೆ ಎಂದ ಅವರು, ಸುಪ್ರೀಂಕೋರ್ಟ್ ತೃತೀಯ ಲಿಂಗಿಗಳಿಗೆ ಸಮಾನ ಹಕ್ಕು ಸಿಗುತ್ತದೆ ಎಂದು ಹೇಳಿದೆ. ಆದರೆ ಇದಕ್ಕಾಗಿ ಮಂಡಳಿ ರಚನೆಯಾಗಬೇಕು ಎಂದು ಒತ್ತಾಯಿಸಿದರು.

    ಕಳೆದ 8 ವರ್ಷಗಳಲ್ಲಿ ತೃತೀಯಲಿಂಗಿಗಳಿಗಾಗಿ ಸರ್ಕಾರ ಏನನ್ನೂ ಮಾಡಿಲ್ಲ. ಆಸ್ಪತ್ರೆಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ನಮಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: 2024ರ ಅಂತ್ಯದ ವೇಳೆಗೆ ದೇಶದ ರಸ್ತೆ ಅಮೆರಿಕದ ರಸ್ತೆಗಳಂತೆ ಆಗುತ್ತವೆ: ಗಡ್ಕರಿ

    ತೃತೀಯಲಿಂಗಿ ಮತ್ತು ಅವರ ವಾರಸುದಾರನ ವಿವಾಹದ ಕುರಿತು ಪ್ರತಿಕ್ರಿಯಿಸಿದ ಅವರು, ವಯಸ್ಸಾದಂತೆ, ತೃತೀಯಲಿಂಗಿಗಳ ಬೆಂಬಲಕ್ಕಾಗಿ ಯಾರಾದರೂ ಇರುವುದು ಅವಶ್ಯಕ. ಇದಕ್ಕಾಗಿ ಅವರ ಉತ್ತರಾಧಿಕಾರಿಗಾಗಿ ಮಕ್ಕಳನ್ನು ದತ್ತು ಪಡೆಯುವುದು ಅವಶ್ಯಕ. ಆದ್ದರಿಂದ ಮನಸ್ಸು ಒತ್ತಡದಲ್ಲಿದ್ದಾಗ ಮಗು ನಿಮ್ಮೊಂದಿಗಿದ್ದರೆ, ಎಲ್ಲಾ ಒತ್ತಡವು ಕಡಿಮೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಚೀನಾ ಯುದ್ಧ ತಯಾರಿ ನಡೆಸುತ್ತಿದೆ – ನಮ್ಮ ಕೇಂದ್ರ ಸರ್ಕಾರ ನಿದ್ರಿಸುತ್ತಿದೆ: ರಾಹುಲ್ ಗಾಂಧಿ

    Live Tv
    [brid partner=56869869 player=32851 video=960834 autoplay=true]

  • ಪಾಕ್‌ ಸುಪ್ರೀಂ ಕೋರ್ಟ್‌ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಆಯೆಷಾ ಮಲಿಕ್‌ ಪ್ರಮಾಣ ವಚನ

    ಪಾಕ್‌ ಸುಪ್ರೀಂ ಕೋರ್ಟ್‌ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಆಯೆಷಾ ಮಲಿಕ್‌ ಪ್ರಮಾಣ ವಚನ

    ಇಸ್ಲಾಮಾಬಾದ್: ಪಾಕಿಸ್ತಾನ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶರಾಗಿ ಆಯೆಷಾ ಮಲಿಕ್‌ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ಕಾನೂನನ್ನು ಮಹಿಳಾ ವಿರೋದ್ಧ ಪ್ರಯೋಜಿಸಲಾಗುತ್ತದೆ ಎಂಬ ಆರೋಪ ಹೊತ್ತಿರುವ ರಾಷ್ಟ್ರದಲ್ಲಿ ಈ ಬೆಳವಣಿಗೆ ನಿಜಕ್ಕೂ ಹೆಗ್ಗುರುತಾಗಿದೆ ಎಂದು ವಿಶ್ಲೇಷಿಸಲಾಗಿದೆ. ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಮಲಿಕ್‌ ಪಾಲ್ಗೊಂಡು ಪ್ರಮಾಣ ವಚನ ಸ್ವೀಕರಿಸಿದರು. ಪಾಕಿಸ್ತಾನದ ಅತ್ಯುನ್ನತ ನ್ಯಾಯಾಲಯದಲ್ಲಿ 16 ಪುರುಷ ನ್ಯಾಯಾಧೀಶರ ನಡುವೆ ಒಬ್ಬರೇ ಮಹಿಳಾ ನ್ಯಾಯಾಧೀಶೆಯಾಗಿ ಮಲಿಕ್‌ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಆಯಿಷಾ ಮಲಿಕ್ ನೇಮಕ

    ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದು ಐತಿಹಾಸಿಕ ಕ್ಷಣವಾಗಿದೆ. ಪ್ರಗತಿಯ ಪ್ರಮುಖ ಹೆಜ್ಜೆ ಇದಾಗಿದೆ ಎಂದು ವಕೀಲೆ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ನಿಗತ್‌ ದಾದ್‌ ಅಭಿಪ್ರಾಯಪಟ್ಟಿದ್ದಾರೆ.

    ಹಾರ್ವರ್ಡ್‌ ಯೂನಿವರ್ಸಿಟಿಯಲ್ಲಿ ಉನ್ನತ ಶಿಕ್ಷಣ ಪೂರೈಸಿರುವ ಮಲಿಕ್‌ ಅವರು, ಕಳೆದೆರಡು ದಶಕಗಳಿಂದ ಲಾಹೋರ್‌ನ ಹೈಕೋರ್ಟ್‌ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಕೊರೊನಾ ಸಾಂಕ್ರಾಮಿಕ ನಿರ್ಣಾಯಕ ಹಂತದಲ್ಲಿದೆ: WHO ಮುಖ್ಯಸ್ಥ

    ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯವನ್ನು ಪಡೆಯಲು ಪಾಕಿಸ್ತಾನದಲ್ಲಿ ಮಹಿಳೆಯರು ಹೆಚ್ಚು ಹೆಣಗಾಡುತ್ತಾರೆ. ಇಂತಹ ಸಂದರ್ಭದಲ್ಲಿ ಮಹಿಳೆಯೊಬ್ಬರು ಆ ದೇಶದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶೆಯಾಗಿರುವುದು ಮಹಿಳೆಯರಲ್ಲಿ ಆಶಾಭಾವನೆ ಮೂಡಿಸಿದೆ.

    PAK

    ಮಲಿಕ್‌ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿನ ಎಲ್ಲಾ ಅಡೆತಡೆಗಳನ್ನು ಮುರಿದಿದ್ದಾರೆ. ವ್ಯವಸ್ಥೆಯಲ್ಲಿ ಇತರ ಮಹಿಳೆಯರು ಮುಂದುವರಿಯಲು ಇದು ಅನುವು ಮಾಡಿಕೊಟ್ಟಂತಾಗಿದೆ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಖದಿಜಾ ಸಿದ್ದಿಕಿ ತಿಳಿಸಿದ್ದಾರೆ.

    ಮಲಿಕ್‌ ಅವರು ಸುಪ್ರೀಂ ಕೋರ್ಟ್‌ಗೆ ನಾಮನಿರ್ದೇಶನಗೊಂಡಾಗ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನದ ಬಾರ್‌ ಕೌನ್ಸಿಲ್‌, ಮಲಿಕ್‌ ಅವರ ನಾಮನಿರ್ದೇಶನವನ್ನು ವಿರೋಧಿಸಿ ಮುಷ್ಕರ ನಡೆಸಿತ್ತು. ಇದನ್ನೂ ಓದಿ: ಅಖಿಲೇಶ್ ಆಡಳಿತದಲ್ಲಿ ಗಲಭೆ, ಗೂಂಡಾಗಿರಿ, ವಲಸೆ ಹೆಚ್ಚಿತ್ತು: ಕೇಶವ್ ಪ್ರಸಾದ್ ಮೌರ್ಯ

  • ಒಂದೇ ವರ್ಷದಲ್ಲಿ ನ್ಯಾಯಾಧೀಶೆಯಿಂದ 5 ಸಾವಿರ ಪ್ರಕರಣ ಇತ್ಯರ್ಥ

    ಒಂದೇ ವರ್ಷದಲ್ಲಿ ನ್ಯಾಯಾಧೀಶೆಯಿಂದ 5 ಸಾವಿರ ಪ್ರಕರಣ ಇತ್ಯರ್ಥ

    ಚೆನ್ನೈ: ವರ್ಷಾನು ವರ್ಷಗಳೇ ಕಳೆದರೂ ಬೆಟ್ಟದಷ್ಟು ಪ್ರಕರಣಗಳು ಕೋರ್ಟಿನಲ್ಲಿಯೇ ಒದ್ದಾಡುತ್ತಿರುತ್ತದೆ. ಹೀಗಿರುವಾಗ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶೆಯಾಗಿದ್ದ ವಿಜಯ ತಹಿಲ್‍ರಮಣಿ ಅವರು ಕೇವಲ ಒಂದು ವರ್ಷದಲ್ಲಿ ಸುಮಾರು 5 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ.

    ವಿಜಯ ತಹಿಲ್‍ರಮಣಿ ಅವರು ತಮ್ಮ ಸೇವಾವಧಿ ವೇಳೆ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ ಎಂದು ತಿಳಿದು ಬಂದಿದ್ದು, ನ್ಯಾಯಾಧೀಶೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ದೇಶದಲ್ಲಿನ 25 ಹೈ ಕೋರ್ಟ್‌ಗಳಲ್ಲಿ ಇನ್ನೂ 43 ಲಕ್ಷ ಪ್ರಕರಣಗಳು ಹಾಗೇ ಇತ್ಯರ್ಥಗೊಳ್ಳದೆ ಬಾಕಿ ಉಳಿದಿದೆ. 8 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ದಶಕಕ್ಕೂ ಹೆಚ್ಚು ಕಾಲದಿಂದ ಕೋರ್ಟಿನಲ್ಲಿಯೇ ನಡೆಯುತ್ತಿದೆ. ಹಾಗೆಯೇ ಜೂನ್ 1ರ ಮಾಹಿತಿ ಪ್ರಕಾರ, ಸುಪ್ರೀಂ ಕೋರ್ಟಿನಲ್ಲೇ ಬರೋಬ್ಬರಿ 1,58,669 ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿದೆ. ಹೀಗಿರುವಾಗ ವಿಜಯ ತಹಿಲ್‍ರಮಣಿ ಅವರು 1 ವರ್ಷದಲ್ಲಿ 5 ಸಾವಿರ ಪ್ರಕರಣಕ್ಕೆ ತೀರ್ಪು ಕೊಟ್ಟು ಭೇಷ್ ಎನಿಸಿಕೊಂಡಿದ್ದಾರೆ.

    ಮೇಘಾಲಯಕ್ಕೆ ವರ್ಗಾವಣೆಯಾದ ಬಳಿಕ ವಿಜಯ ತಹಿಲ್‍ರಮಣಿ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಮಹಾರಾಷ್ಟ್ರ ಮೂಲದವರಾದ ವಿಜಯ ಅವರು ಸದ್ಯ ಚೆನ್ನೈ ವಾತಾವರಣ ಚೆನ್ನಾಗಿದೆ. ಇಲ್ಲಿಯೇ ನಾನು ಇರುತ್ತೇನೆ. ಇಲ್ಲಿನ ವಾತಾವರಣ ನನಗೆ ತುಂಬಾ ಹಿಡಿಸಿದೆ. ನನ್ನ ಕುಟುಂಬಕ್ಕೂ ಚೆನ್ನೈ ಇಷ್ಟವಾಗಿದೆ. ಆದ್ದರಿಂದ ಮುಂಬೈಗೆ ಹಿಂತಿರುಗಿ ಹೋಗುವ ಬದಲು ಇಲ್ಲಿಯೇ ಇರುತ್ತೇವೆ ಎಂದಿದ್ದಾರೆ.

  • ರಸ್ತೆಗೆ ಇಳಿದು ಸವಾರರಿಗೆ ದಂಡ ಹಾಕಿದ್ರು ನ್ಯಾಯಾಧೀಶೆ!

    ರಸ್ತೆಗೆ ಇಳಿದು ಸವಾರರಿಗೆ ದಂಡ ಹಾಕಿದ್ರು ನ್ಯಾಯಾಧೀಶೆ!

    ದಾವಣಗೆರೆ: ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡುವ ಸವಾರರನ್ನು ಪೊಲೀಸರು ಹಿಡಿದು ಜಾಗೃತಿ ಮೂಡಿಸಿ ದಂಡ ಹಾಕುವುದು ಸರ್ವೆ ಸಾಮಾನ್ಯ. ಆದರೆ ಹರಪ್ಪನಹಳ್ಳಿ ತಾಲೂಕಿನಲ್ಲಿ ಹೆಲ್ಮೆಟ್ ಜಾಗೃತಿ ಮೂಡಿಸಲು ನ್ಯಾಯಾಧೀಶೆಯೊಬ್ಬರು ರಸ್ತೆಗಿಳಿದು ಹೆಲ್ಮೆಟ್ ರಹಿತ ಸವಾರರಿಗೆ ಜಾಗೃತಿ ಮೂಡಿಸಿದ್ದಾರೆ.

    ಕಳೆದ 15 ದಿನಗಳಿಂದ ಸಂಚಾರ ಪೊಲೀಸರು ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕೇವಲ ಕಾರ್ಯಕ್ರಮ ಮಾಡಿ ಭಾಷಣ ಮಾಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿದ ಹರಪನಹಳ್ಳಿ ನ್ಯಾಯಾಲಯದ ನ್ಯಾಯಾಧೀಶೆ ಮಂಜುಳಾ ಉಂಡಿ ಶಿವಪ್ಪ ತಾವೇ ರಸ್ತೆಗೆ ಇಳಿದು ಬೈಕ್ ಸವಾರರಿಗೆ ಸ್ವತಃ ದಂಡ ವಿಧಿಸಿದರು.

    ಪೊಲೀಸರನ್ನು ಸ್ಥಳಕ್ಕೆ ಕರೆಸಿ ವಾಹನ ಸವಾರರಿಗೆ ದಂಡ ಹಾಕಿದ ಅವರು ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುವಂತೆ ಬೈಕ್ ಸವಾರರಿಗೆ ಮನವಿ ಮಾಡಿದರು. ನ್ಯಾಯಾಧೀಶೆಯ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ನ್ಯಾಯಾಧೀಶೆಯನ್ನೇ ಅಪಹರಣಗೈಯಲು ಯತ್ನಿಸಿದ ಕ್ಯಾಬ್ ಡ್ರೈವರ್!

    ನ್ಯಾಯಾಧೀಶೆಯನ್ನೇ ಅಪಹರಣಗೈಯಲು ಯತ್ನಿಸಿದ ಕ್ಯಾಬ್ ಡ್ರೈವರ್!

    ನವದೆಹಲಿ: ಮಹಿಳೆಯರ ಜೊತೆ ಕ್ಯಾಬ್ ಡ್ರೈವರ್ ಗಳು ಅಸಭ್ಯವಾಗಿ ವರ್ತಿಸಿ ಸಿಕ್ಕಿಬಿದ್ದ ಘಟನೆಗಳನ್ನು ಕೇಳಿದ್ದೀರಿ. ಆದ್ರೆ ಇದೀಗ ಕ್ಯಾಬ್ ಡ್ರೈವರೊಬ್ಬ ನ್ಯಾಯಾಧೀಶೆಯನ್ನೇ ಅಪಹರಣ ಮಾಡಲು ಯತ್ನಿಸಿದ ಘಟನೆ ನಡೆದಿದೆ.

    ಘಟನೆಗೆ ಸಂಬಂಧಿಸಿದಂತೆ ಸದ್ಯ ಕ್ಯಾಬ್ ಡ್ರೈವರ್ ನನ್ನು ಬಂಧಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಕರ್ಕರ್ ಡೂಮ ಕೋರ್ಟ್ ಗೆ ಕ್ಯಾಬ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಡ್ರೈವರ್ ಮಾರ್ಗ ಬದಲಿಸಿ ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಹಪುರ್ ಕಡೆ ಕ್ಯಾಬ್ ಚಲಾಯಿಸಲು ಮುಂದಾದ. ಈ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ನಾನು ನನ್ನ ಸಹೋದ್ಯೋಗಿಗಳಿಗೆ ಹಾಗೂ ಪೊಲೀಸರಿಗೆ ಮಾಹಿತಿ ರವಾನಿಸಿದೆ ಅಂತ ನ್ಯಾಯಾಧೀಶೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಮಹಿಳೆ ಎದುರೆ ಹಸ್ತಮೈಥುನ ಮಾಡಿಕೊಂಡ ಉಬರ್ ಕ್ಯಾಬ್ ಡ್ರೈವರ್ ಅರೆಸ್ಟ್

    ಸ್ವಲ್ಪ ಮುಂದಕ್ಕೆ ತನ್ನ ವಾಹನ ಚಲಾಯಿಸಿದ ಚಾಲಕ ಬಳಿಕ ದೆಹಲಿಯತ್ತ ಸಂಚರಿಸಲು ಯೂಟರ್ನ್ ತೆಗೆದುಕೊಂಡ. ಕೂಡಲೇ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಘಾಜಿಪುರ್ ಟೋಲ್ ಪಲಾಜಾದ ಬಳಿ ಕ್ಯಾಬ್ ಡ್ರೈರ್ ನನ್ನು ಬಂಧಿಸಿದ್ದಾರೆ.

    ಚಾಲಕ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.