Tag: ನ್ಯಾಯಾಂಗ

  • ಕಾಗದ ರಹಿತವಾದ ಕೇರಳದ 3 ಕೋರ್ಟ್‌ – ಆ.1ರಿಂದ ಕೇರಳ ಹೈಕೋರ್ಟ್‌ನಲ್ಲೂ ಚಾಲನೆ

    ಕಾಗದ ರಹಿತವಾದ ಕೇರಳದ 3 ಕೋರ್ಟ್‌ – ಆ.1ರಿಂದ ಕೇರಳ ಹೈಕೋರ್ಟ್‌ನಲ್ಲೂ ಚಾಲನೆ

    ತಿರುವನಂತಪುರಂ: ತಂತ್ರಜ್ಞಾನ ಬೆಳೆದಂತೆ ಈಗ ಪ್ರತಿಯೊಬ್ಬರ ಕೈಯಲ್ಲೂ ಟಚ್‌ಸ್ಕ್ರೀನ್‌ ಮೊಬೈಲ್‌ಗಳಿವೆ. ಕಂಪ್ಯೂಟರ್‌ ಬಳಕೆಯೂ ಹೆಚ್ಚಾಗಿದೆ. ಡಿಜಿಟಲೀಕರಣ ಹಾಗೂ ಪರಿಸರ ಕಾಳಜಿ ಪ್ರೋತ್ಸಾಹಕ್ಕೆ ಕೇರಳದ ಮೂರು ಕೋರ್ಟ್‌ಗಳು ಮುಂದಾಗಿದ್ದು, ಕೋರ್ಟ್‌ಗಳಲ್ಲಿ ಕಾಗದ ರಹಿತ ನ್ಯಾಯಾಂಗ ವ್ಯವಸ್ಥೆ ಜಾರಿಗೆ ಮುನ್ನುಡಿ ಬರೆದಿವೆ.

    ಕೇರಳದ 3 ಕೋರ್ಟ್‌ಗಳಲ್ಲಿ ಕಾಗರ ರಹಿತ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಕೇರಳ ಹೈಕೋರ್ಟ್ ಆ.1ರಿಂದ ಇದನ್ನು ಅಳವಡಿಸಿಕೊಂಡಿದೆ. ನ್ಯಾಯಾಂಗ ವ್ಯವಸ್ಥೆಯ ಯಾವುದೇ ಕಾರ್ಯ ಹಾಗೂ ಪ್ರಕ್ರಿಯೆಗಳು ಕಾಗದ ರಹಿತವಾಗಿ ನಡೆಯಲಿವೆ. ಇದನ್ನೂ ಓದಿ: ಇಂದು ಮಾಲ್ಡೀವ್ಸ್ ಅಧ್ಯಕ್ಷರನ್ನು ಭೇಟಿಯಾಗಲಿರುವ ಮೋದಿ

    ಈ ಕ್ರಮ ಪರಿಸರ ಸ್ನೇಹಿಯಾಗಿದೆ. ಸಮಯ ಉಳಿತಾಯ ಮತ್ತು ವೆಚ್ಚ ಕಡಿಮೆಗೊಳಿಸಲು ಸಹಕಾರಿಯಾಗಿದೆ. ದೊಡ್ಡ ದೊಡ್ಡ ಫೈಲ್‌ಗಳನ್ನು ಸಾಗಿಸುವ ಪರಿಪಾಠವೂ ತಪ್ಪುತ್ತದೆ ಎಂದು ಹೈಕೋರ್ಟ್‌ನ ಕ್ರಮವನ್ನು ವಕೀಲರು ಸ್ವಾಗತಿಸಿದ್ದಾರೆ.

    ಈ ಕ್ರಮದ ಬಗ್ಗೆ ಕೆಲವರು ಪ್ರಶ್ನಾರ್ಥಕವಾಗಿ ನೋಡುತ್ತಿದ್ದಾರೆ. ದಶಕಗಳಿಂದ ಪ್ರಕರಣಗಳ ಭೌತಿಕ ಫೈಲ್‌ಗಳಿಂದ ವಾದಿಸುತ್ತಿದ್ದವರಿಗೆ ಹೊಸ ವ್ಯವಸ್ಥೆಯು ಎಷ್ಟು ಸಹಾಯಕವಾಗಬಹುದು ಎಂದು ಕೇಳುತ್ತಿದ್ದಾರೆ. ಇದನ್ನೂ ಓದಿ: ಆಗಸ್ಟ್‌ 2 ವಿಶೇಷ ದಿನ; ನಾನು DP ಬದಲಾಯಿಸಿದ್ದೇನೆ, ನೀವೂ ಬದಲಾಯಿಸಿ – ಜನತೆಗೆ ಮೋದಿ ಕರೆ

    2017 ರಲ್ಲಿ ನಟಿಯೊಬ್ಬರ ಮೇಲಿನ ಹಲ್ಲೆ ಪ್ರಕರಣದಲ್ಲಿ ನಟ ದಿಲೀಪ್ ಅವರ ಪರ ವಾದ ಮಂಡಿಸುತ್ತಿರುವ ವಕೀಲ ಫಿಲಿಪ್ ಟಿ ವರ್ಗೀಸ್, ಹೈಕೋರ್ಟ್‌ ಕ್ರಮವನ್ನು ಸ್ವಾಗತಿಸಿದ್ದಾರೆ. ʻಈ ಕ್ರಮ ಕಾಗದ ಅಥವಾ ಭೌತಿಕ ಫೈಲ್‌ಗಳ ಬಳಕೆಯ ಮೇಲೆ ಸಂಪೂರ್ಣ ನಿಷೇಧವನ್ನು ಅರ್ಥೈಸುವುದಿಲ್ಲ. ಕಂಪ್ಯೂಟರ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಲು ಆಗದವರು ಭೌತಿಕ ಫೈಲ್‌ಗಳನ್ನು ಬಳಸುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಳಿ ದೇವಿ ಕೈಯಲ್ಲಿ ಸಿಗರೇಟು: ಇದು ಹಿಂದೂಗಳ ದೌರ್ಬಲ್ಯ – ಪ್ರಮೋದ್ ಮುತಾಲಿಕ್ ಕಿಡಿ

    ಕಾಳಿ ದೇವಿ ಕೈಯಲ್ಲಿ ಸಿಗರೇಟು: ಇದು ಹಿಂದೂಗಳ ದೌರ್ಬಲ್ಯ – ಪ್ರಮೋದ್ ಮುತಾಲಿಕ್ ಕಿಡಿ

    ಧಾರವಾಡ: ತಮ್ಮದೇ ಸಾಕ್ಷ್ಯಾಚಿತ್ರವೊಂದರಲ್ಲಿ ತಮಿಳುನಾಡಿನ ಕಾಳಿ ದೇವತೆಯ ಕೈಯಲ್ಲಿ ಸಿಗರೇಟು ಇರಿಸಿದ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಖ್ಯಾತ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

    ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಹ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಕಾಳಿ ಕೈಲಿ ಸಿಗರೇಟು ವಿವಾದ : ಲೀನಾ ಮೇಲೆ ಹಲವು ದೂರು ದಾಖಲು

    ಇದಕ್ಕೆ ಕಾರಣ ಹಿಂದೂಗಳ ದೌರ್ಬಲ್ಯ. ಹಿಂದೂ ಸಮಾಜ ಒಗ್ಗಟ್ಟಾಗಿ ಪ್ರತಿಕ್ರಿಯೆ ಮಾಡದೇ ಇರುವುದೇ ಇದಕ್ಕೆ ಕಾರಣ. ಈ ರೀತಿಯ ಘಟನೆ ಇದೇ ಮೊದಲೇನಲ್ಲ. ಈ ಹಿಂದೆಯೂ ಅವಮಾನಕರ ಚಿತ್ರೀಕರಣ ಮಾಡಿದ್ದಾರೆ. ಚಪ್ಪಲಿ, ಬನಿಯನ್, ಶೌಚಾಲಯಗಳಲ್ಲಿ ಅಶ್ಲೀಲವಾಗಿ ಚಿತ್ರೀಕರಿಸಿ ಅವಮಾನ ಮಾಡಿದ್ದಾರೆ. ಮುಂದೆಯೂ ಈ ರೀತಿ ಆಗಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022’ ಸುಂದರಿ ಸಿನಿ ಶೆಟ್ಟಿಯ ಸಂಪೂರ್ಣ ಪರಿಚಯ : ನಮ್ಮೂರು, ನಮ್ಮೂರು ಹುಡುಗಿ

    ಹಿಂದೂಗಳಾದ್ರೆ ಬೇಕಾದ್ದು ಮಾಡಬಹುದಾ?
    ಕಾನೂನು ದುರ್ಬಲವಾಗಿವೆ. ತಕ್ಷಣ ಕ್ರಮ ಕೈಗೊಳ್ಳುವುದಿಲ್ಲ. ಮುಸ್ಲಿಮರಾದರೆ ತಕ್ಷಣ ಕ್ರಮ ತೆಗೆದುಕೊಳ್ಳುತ್ತದೆ. ಒಬ್ಬ ನ್ಯಾಯಮೂರ್ತಿ ಇಡೀ ದೇಶದಲ್ಲಿ ನೂಪುರ್ ಶರ್ಮಾ ಅವರಿಂದ ಗಲಭೆ ಆಗಿದೆ ಎಂದು ಹೇಳುತ್ತಾರೆ. ಹಾಗಾದ್ರೆ ಕಾಳಿಕಾ ಮಾತೆಯ ಕೈಯಲ್ಲಿ ಸಿಗರೇಟ್ ಇಟ್ಟು ಹಿಂದೂ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಅವರಿಂದಲೂ ಗಲಾಟೆ ಆಗುತ್ತದೆ ಎಂದು ಹೇಳಿ, ಒದ್ದು ಒಳಗೆ ಹಾಕೋಕಾಗಲ್ವಾ? ಹಿಂದೂಗಳಾದರೆ ಬೇಕಾದ್ದು ಮಾಡಬಹುದಾ? ಎಂದು ಪ್ರಶ್ನಿಸಿದ್ದಾರೆ.

    https://twitter.com/manu_cm_342/status/1543900026174259200

    ಈ ಬೆಳವಣಿಯಿಂದ ನ್ಯಾಯಾಂಗ ವ್ಯವಸ್ಥೆಯೂ ಕಡೆಗಣನೆಯಾಗುತ್ತಿದೆ. ಎಂ.ಎಫ್.ಹುಸೇನ್ ಹಿಂದೂ ದೇವತೆಗಳನ್ನು ವಿರೂಪಗೊಳಿಸಿದ ಚಿತ್ರೀಕರಣ ಮಾಡಿದ್ದರು. ಆ ಸಂದರ್ಭದಲ್ಲಿಯೂ ಹಿಂದೂ ಸಮಾಜ ನ್ಯಾಯ ಸಮ್ಮತವಾಗಿಯೇ ಹೋರಾಟ ಮಾಡಿತ್ತು. 1 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಇದರಿಂದ ಎಂ.ಎಫ್.ಹುಸೇನ್ ಓಡಿಯೇ ಹೋದ. ಇವತ್ತು ಸ್ವಯಂಪ್ರೇರಿತವಾಗಿ ದಾಖಲಿಸಬೇಕಿತ್ತು. ಸರ್ಕಾರ ಹಾಗೂ ಪೊಲೀಸ್ ಇಲಾಖೆ ದುರ್ಬಲವಾಗಿರುವುದರಿಂದಲೇ ಇದೆಲ್ಲವೂ ಆಗುತ್ತಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯಾ ಪ್ರಕರಣ – ದೆಹಲಿಯಲ್ಲಿ ಗುಂಡು ಹಾರಿಸಿದವನ ಬಂಧನ

    ಹಿಂದೂ ಸಮಾಜದ ಇನ್ಮುಂದೆ ಸಹನೆ ಮಾಡದೇ ತಕ್ಕ ಉತ್ತರ ಕೊಡಬೇಕಾಗುತ್ತದೆ. ಈಗಾಗಲೇ ನಿರ್ದೇಶಕಿ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದೇನೆ. ತಮಿಳುನಾಡಿನಲ್ಲೂ ಪ್ರತಿಭಟನೆ ನಡೆಸಲಾಗುವುದು. ಎಲ್ಲ ಮಾಹಿತಿ ಕಲೆಹಾಕಿ ಹೈಕೋರ್ಟ್ನಲ್ಲಿ ಕೇಸ್ ದಾಖಲು ಮಾಡಲಿದ್ದೇವೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆಗೆ ಮೋದಿ ಕರೆ

    ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆಗೆ ಮೋದಿ ಕರೆ

    ನವದೆಹಲಿ: ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳನ್ನು ಬಳಸಬೇಕು. ಇದು ನ್ಯಾಯಾಂಗ ವ್ಯವಸ್ಥೆ ಮೇಲೆ ಸಾಮಾನ್ಯ ನಾಗರಿಕರಲ್ಲಿ ವಿಶ್ವಾಸ ಹೆಚ್ಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಶಯ ವ್ಯಕ್ತಪಡಿಸಿದ್ದಾರೆ.

    ಜೈಲುಗಳಲ್ಲೇ ಕೊಳೆಯುತ್ತಿರುವ ವಿಚಾರಣಾಧೀನ ಕೈದಿಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ಆದ್ಯತೆ ನೀಡಿ ಕಾನೂನು ಪ್ರಕಾರ, ಮಾನವ ಸಂವೇದನೆಯ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಮತ್ತು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಮೋದಿ ಮನವಿ ಮಾಡಿದರು. ನ್ಯಾಯಾಂಗ ಸುಧಾರಣೆ ಕೇವಲ ನೀತಿ ವಿಷಯವಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿಮಗೆ ಹಿಂದಿ ಬರದಿದ್ದರೆ ದೇಶ ಬಿಟ್ಟು ತೊಲಗಿ: ಯುಪಿ ಸಚಿವ

    MODi

    ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿಯಿದ್ದು, ಈ ಪ್ರಕರಣಗಳನ್ನು ಪರಿಶೀಲಿಸಬಹುದು. ಸಾಧ್ಯವಾದಲ್ಲೆಲ್ಲ ಅಂತಹ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ಹೇಳಿದ್ದಾರೆ.

    “2015 ರಲ್ಲಿ, ನಾವು ಅಪ್ರಸ್ತುತವಾದ ಸುಮಾರು 1,800 ಕಾನೂನುಗಳನ್ನು ಗುರುತಿಸಿದ್ದೇವೆ. ಇವುಗಳಲ್ಲಿ ಕೇಂದ್ರಕ್ಕೆ ಸಂಬಂಧಿಸಿದ 1,450 ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಅಂತಹ 75 ಕಾನೂನುಗಳನ್ನು ಮಾತ್ರ ರಾಜ್ಯಗಳು ರದ್ದುಪಡಿಸಿವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ:  ವಿದ್ಯುತ್ ಸಮಸ್ಯೆಗೆ ಮೋದಿ ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ: ಚಿದಂಬರಂ ವ್ಯಂಗ್ಯ

    court order law

    ನಮ್ಮ ದೇಶದಲ್ಲಿ, ನ್ಯಾಯಾಂಗದ ಪಾತ್ರವು ಸಂವಿಧಾನದ ರಕ್ಷಕನದ್ದಾಗಿದೆ. ಶಾಸಕಾಂಗವು ನಾಗರಿಕರ ಆಶಯಗಳನ್ನು ಪ್ರತಿನಿಧಿಸುತ್ತದೆ. ಇವೆರಡರ ಸಂಗಮವು ದೇಶದಲ್ಲಿ ಪರಿಣಾಮಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಅಯೋಧ್ಯೆ ರಾಮಮಂದಿರ ವಿಚಾರಣೆ – ನ್ಯಾಯಾಧೀಶರಿಗೆ ಕಾಂಗ್ರೆಸ್ ಬೆದರಿಕೆ ಹಾಕಿತ್ತು : ಪ್ರಧಾನಿ ಮೋದಿ

    ಅಯೋಧ್ಯೆ ರಾಮಮಂದಿರ ವಿಚಾರಣೆ – ನ್ಯಾಯಾಧೀಶರಿಗೆ ಕಾಂಗ್ರೆಸ್ ಬೆದರಿಕೆ ಹಾಕಿತ್ತು : ಪ್ರಧಾನಿ ಮೋದಿ

    ಜೈಪುರ: 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಮಮಂದಿರ ವಿವಾದ ಪ್ರಕರಣದ ವಿಚಾರಣೆಯನ್ನು ತಡಮಾಡುವಂತೆ ಕಾಂಗ್ರೆಸ್ ಹೇಳಿತ್ತು. ಅಲ್ಲದೇ ಇದನ್ನು ನಿರಾಕರಿಸಿದ ನ್ಯಾಯಮೂರ್ತಿಗಳಿಗೆ ಮಹಾಭಿಯೋಗ ಮಾಡುವುದಾಗಿ ಬೆದರಿಕೆ ಹಾಕಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ.

    ಮಧ್ಯಪ್ರದೇಶದ ಅಲ್ವಾರ್ ಚುನಾವಣಾ ಪ್ರಚಾರ ಯಾತ್ರೆಯ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷ ರಾಜಕೀಯದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಎಳೆದು ತರಲು ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.

    ಕಾಂಗ್ರೆಸ್ ಪಕ್ಷ ದೇಶದ ನ್ಯಾಯಾಂಗ ವ್ಯವಸ್ಥೆ ಭಯದ ವಾತಾವರಣದಲ್ಲಿ ಉಂಟಾಗುವಂತೆ ಮಾಡುತ್ತಿದೆ. ಅಲ್ಲದೇ ಕಾಂಗ್ರೆಸ್ ನಾಯಕರೊಬ್ಬರು 2019ರ ಚುನಾವಣೆ ಕಾರಣ ನೀಡಿ ಅಯೋಧ್ಯೆ ವಿವಾದದ ವಿಚಾರಣೆಯನ್ನು ಮುಂದೂಡುವಂತೆ ಕೇಳಿದ್ದರು. ಅಲ್ಲದೇ ಇದಕ್ಕೆ ಒಪ್ಪದ ನ್ಯಾಯಮೂರ್ತಿಗಳ ವಿರುದ್ಧ ಮಹಾಭಿಯೋಗದ ಬೆದರಿಕೆ ಹಾಕಿದ್ದರು. ಇಂತಹ ವಿಚಾರಗಳನ್ನು ದೇಶದ ಜನ ಹೇಗೆ ಸ್ವೀಕರಿಸುತ್ತಾರೆ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ:ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗಕ್ಕೆ ಮನಮೋಹನ್ ಸಿಂಗ್ ಸಹಿ ಮಾಡಿಲ್ಲ ಏಕೆ?

    ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅಯೋಧ್ಯೆ ವಿವಾದ ಪ್ರಕರಣವನ್ನು 2019ರ ಚುನಾವಣೆಯ ಕಾರಣ ತ್ವರಿತ ವಿಚಾರಣೆ ನಡೆಸದಂತೆ ಹೇಳಿದ್ದರು. ಅಲ್ಲದೇ ಸುನ್ನಿ ವಕ್ಫ್ ಬೋರ್ಡ್ ಸಲಹೆಯಂತೆ ಈ ಕುರಿತು ನ್ಯಾಯಾಲಯಕ್ಕೆ ತಿಳಿಸಿದ್ದರು ಎಂದು ಆರೋಪಿಸಿದರು. ಇದನ್ನೂ ಓದಿ:ಮುಖ್ಯ ನ್ಯಾಯಮೂರ್ತಿಗಳ ಮಹಾಭಿಯೋಗ ನಡೆಯುವುದು ಹೇಗೆ?

    ಹಿಂದೂ ಸಂಘಟನೆಗಳು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸುಗ್ರೀವಾಜ್ಞೆ ಕೋರಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಶಿವಸೇನೆ ಕೂಡ ಈ ಕುರಿತು ಬೃಹತ್ ಯಾತ್ರೆಯನ್ನು ಕೈಗೊಂಡಿದೆ. ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೋದಿ ನೇತೃತ್ವದ ಸರ್ಕಾರ ಮಂದಿರ ನಿರ್ಮಾಣ ಮಾಡಿಲ್ಲ ಎಂದಾದರೆ, ಅದು ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಪ್ರೀಂ ಜಡ್ಜ್ ಗಳ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದು ನವೆಂಬರ್ ನಲ್ಲೇ ಬಹಿರಂಗವಾಗಿತ್ತು

    ಸುಪ್ರೀಂ ಜಡ್ಜ್ ಗಳ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದು ನವೆಂಬರ್ ನಲ್ಲೇ ಬಹಿರಂಗವಾಗಿತ್ತು

    ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ದೇಶದಲ್ಲೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ನೇರವಾಗಿ ಮುಖ್ಯ ನ್ಯಾಯಾಧೀಶರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಆದರೆ ಈ ಸುದ್ದಿಗೋಷ್ಠಿಗೂ ಮುನ್ನವೇ ನ್ಯಾಯಮೂರ್ತಿಗಳ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು  ಬಹಿರಂಗವಾಗಿತ್ತು.

    ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಎರಡನೇ ನ್ಯಾಯಮೂರ್ತಿಗಳಾದ ಚೆಲಮೇಶ್ವರ್ ಅವರ ನಡುವೆ 2017ರ ನವೆಂಬರ್ ಎರಡನೇ ವಾರದಲ್ಲಿ ಬಹಿರಂಗವಾಗಿಯೇ ಅಸಮಾಧಾನ ಸ್ಫೋಟಗೊಂಡಿತ್ತು.

    ಉತ್ತರ ಪ್ರದೇಶದ ಮೆಡಿಕಲ್ ಕಾಲೇಜು ಹಗರಣದ ಬಗ್ಗೆ ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿ ಒಬ್ಬರ ಪಾತ್ರದ ಬಗ್ಗೆ ವಿಚಾರಣೆ ನಡೆಸಲು ನ್ಯಾ. ಚೆಲಮೇಶ್ವರ್ ಅವರು ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಇಲ್ಲದೆ ಏಕಾಏಕಿ ಸಂವಿಧಾನ ಪೀಠ ರಚಿಸಿದ್ದರು. ಈ ವೇಳೆ ನಿಯಮಗಳ ಪ್ರಕಾರ ನ್ಯಾಯಾಪೀಠ ರಚಿಸಲು ಮುಖ್ಯ ನ್ಯಾಯಮೂರ್ತಿಗಳಿಗೆ ಮಾತ್ರ ಅನುಮತಿ ಇದೆ ಎಂದು ಹಿರಿಯ ವಕೀಲ ದುಶ್ಯಂತ್ ದಾವ್ ಕೂಡಲೇ ಹೇಳಿದರೂ ನ್ಯಾ. ಚೆಲಮೇಶ್ವರ್ ಅವರು 5 ನ್ಯಾಯಾಧೀಶರ ಹೆಸರನ್ನು ಪ್ರಕಟಿಸಿಯೇ ಬಿಟ್ಟಿದ್ದರು.

    ಸಂವಿಧಾನ ಪೀಠ ರಚನೆಯಾಗಿದ್ದನ್ನು ಕಂಡು ಮುಖ್ಯ ನ್ಯಾ. ದೀಪಕ್ ಮಿಶ್ರಾ ಅವರು ಸುಪ್ರೀಂ ಕೋರ್ಟ್‍ನ ಹಿರಿಯ ನ್ಯಾಯಾಧೀಶರರ ಜೊತೆ ತುರ್ತು ಸಭೆ ನಡೆಸಿದ್ದರು. ಈ ವೇಳೆ ಅಲ್ಲಿದ್ದ ಹಿರಿಯ ನ್ಯಾಯಮೂರ್ತಿಗಳು ಸಲಹೆಯ ಬಳಿಕ, “ರೋಸ್ಟರ್ ಪ್ರಕಾರವಾಗಿ ಸಂವಿಧಾನ ಪೀಠ ರಚಿಸಲು ಮತ್ತು ಮತ್ತೊಂದು ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸುವ ಅಧಿಕಾರ ಇರುವುದು ಮುಖ್ಯ ನ್ಯಾಯಾಧೀಶರಿಗೆ” ಎಂದು ಹೇಳಿ ಚೆಲಮೇಶ್ವರ್ ಅವರು ನೀಡಿದ ಆದೇಶವನ್ನು ನ್ಯಾ. ದೀಪಕ್ ಮಿಶ್ರಾ ರದ್ದು ಪಡಿಸಿದ್ದರು. ಈ ಘಟನೆ ನಡೆದ ಬಳಿಕ ಸುಪ್ರೀಂ ನ್ಯಾಯಾಧೀಶರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತು ಬರಲು ಆರಂಭವಾಗಿತ್ತು.

    ನ್ಯಾ.ಭೂಷಣ್ ವಾಕ್ ಔಟ್: ನ್ಯಾ.ಚೆಲಮೇಶ್ವರ್ ಅವರ ನಿರ್ಧಾರದ ಕುರಿತು ಚರ್ಚೆ ನಡೆಯುವ ವೇಳೆ ನ್ಯಾ. ಭೂಷಣ್ ಅವರು ವಾಕ್ ಔಟ್ ನಡೆದ ಘಟನೆಯೂ ನಡೆದಿತ್ತು. ನ್ಯಾ. ಚೆಲಮೇಶ್ವರ್ ಅವರ ನಿರ್ಧಾರ ನಿಯಮ ಬಾಹಿರ ಎಂಬ ವಾದ ಪ್ರತಿವಾದ ನಡೆಯುತ್ತಿದ್ದ ವೇಳೆ ನ್ಯಾ. ಭೂಷಣ್ ಅವರು ಮಧ್ಯ ಪ್ರವೇಶಿಸಿ ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಮುಖ್ಯ ನ್ಯಾಯಾಧೀಶರು ಮಧ್ಯ ಪ್ರವೇಶ ಮಾಡಬಾರದು, ಇಲ್ಲವಾದರೆ ನ್ಯಾಯಾಂಗದ ಘನತೆಗೆ ದಕ್ಕೆ ಉಂಟಾಗುತ್ತದೆ ಎಂದು ಕೋರಿದ್ದರು. ಇದನ್ನೂ ಓದಿ: ದೇಶದಲ್ಲೇ ಫಸ್ಟ್ ಟೈಂ – ಸುಪ್ರೀಂನಲ್ಲಿ ಎಲ್ಲವೂ ಸರಿಯಿಲ್ಲ ಎಂದ ನಾಲ್ವರು ಜಡ್ಜ್ ಗಳು

    ಆದರೆ ನ್ಯಾ.ಭೂಷಣ್ ಅವರ ಕೋರಿಕೆಗೆ ಮುಖ್ಯ ನ್ಯಾ. ದೀಪಕ್ ಮಿಶ್ರಾ ಮನ್ನಣೆ ನೀಡಿರಲಿಲ್ಲ. ಅಷ್ಟೇ ಅಲ್ಲದೇ ನಾನ್ ಸೆನ್ಸ್ ಎಂದು ಹೇಳಿದಾಗ ಕೋಪಗೊಂಡ ಭೂಷಣ್ ಅವರು ನನಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಹೇಳಿ ಕಲಾಪದಿಂದ ಹೊರ ನಡೆದಿದ್ದರು.