Tag: ನೊಯ್ಡಾ

  • ಮಹಿಳೆ ನಿಂದನೆ, ಹಲ್ಲೆ ಆರೋಪ – ಬಿಜೆಪಿ ನಾಯಕ ಅರೆಸ್ಟ್‌

    ಮಹಿಳೆ ನಿಂದನೆ, ಹಲ್ಲೆ ಆರೋಪ – ಬಿಜೆಪಿ ನಾಯಕ ಅರೆಸ್ಟ್‌

    ಲಕ್ನೋ: ಮಹಿಳೆಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆದ ನಂತರ ಪರಾರಿಯಾಗಿದ್ದ ನೊಯ್ಡಾದ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ಅವರನ್ನು ಉತ್ತರ ಪ್ರದೇಶ ಪೊಲೀಸರು ಇಂದು ಮೀರತ್‌ನಲ್ಲಿ ಬಂಧಿಸಿದ್ದಾರೆ.

    ತ್ಯಾಗಿ ಅವರ ವಕೀಲರು ಗ್ರೇಟರ್ ನೋಯ್ಡಾ ನ್ಯಾಯಾಲಯದಲ್ಲಿ ಶರಣಾಗತಿ ಅರ್ಜಿಯನ್ನು ಸಲ್ಲಿಸಿದ್ದರು. ತ್ಯಾಗಿ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂ. ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದರು. ಇದಾದ ಬಳಿಕ ತ್ಯಾಗಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಯುಪಿಯಲ್ಲಿ ಮತ್ತೆ ಜೆಸಿಬಿ ಘರ್ಜನೆ – ಬಿಜೆಪಿ ನಾಯಕನ ಅಕ್ರಮ ಕಟ್ಟಡ ನೆಲಸಮ

    ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ಮಹಿಳೆ ಮೇಲೆ ತ್ಯಾಗಿ ಹಲ್ಲೆ ನಡೆಸಿದ್ದರು. ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಘಟನೆ ಬಳಿಕ ಶ್ರೀಕಾಂತ್ ತ್ಯಾಗಿ ನಾಪತ್ತೆಯಾಗಿದ್ದರು.

    ನಿನ್ನೆ ಪೊಲೀಸ್ ಸಿಬ್ಬಂದಿಯೊಂದಿಗೆ ನೊಯ್ಡಾದ ಸೆಕ್ಟರ್ -93ಬಿನಲ್ಲಿರುವ ಗ್ರಾಂಡ್ ಓಮ್ಯಾಕ್ಸ್ ಸೊಸೈಟಿಗೆ ತಲುಪಿದ ಅಧಿಕಾರಿಗಳು, ನಂತರ ಬಿಜೆಪಿಯ ಕಿಸಾನ್ ಮೋರ್ಚಾದ ಆಪಾದಿತ ಸದಸ್ಯ ಶ್ರೀಕಾಂತ್ ತ್ಯಾಗಿ ಅವರಿಗೆ ಸೇರಿದ್ದ ಅಕ್ರಮ ಕಟ್ಟಡವನ್ನು ಕೆಡವಿದ್ದರು. ಇದನ್ನೂ ಓದಿ: ನಿವಾಸದಲ್ಲಿ ಬಿಜೆಪಿ ಮುಖಂಡನ ಮೃತದೇಹ ಪತ್ತೆ

    Live Tv
    [brid partner=56869869 player=32851 video=960834 autoplay=true]

  • ಮಧ್ಯರಾತ್ರಿ ಓಡಿ ಮನೆ ಸೇರೋ ಯುವಕನಿಗೆ 2.5 ಲಕ್ಷದ ಚೆಕ್ ನೀಡಿದ ಶಾಪರ್ಸ್ ಸ್ಟಾಪ್

    ಮಧ್ಯರಾತ್ರಿ ಓಡಿ ಮನೆ ಸೇರೋ ಯುವಕನಿಗೆ 2.5 ಲಕ್ಷದ ಚೆಕ್ ನೀಡಿದ ಶಾಪರ್ಸ್ ಸ್ಟಾಪ್

    ನೊಯ್ಡಾ: ಸೇನೆ ಸೇರುವ ಉದ್ದೇಶದಿಂದ ಕೆಲಸ ಮುಗಿಸಿ ಪ್ರತಿದಿನ ರಾತ್ರಿ ಓಡಿ ಮನೆ ಸೇರುತ್ತಿದ್ದ ಯುವಕನಿಗೆ ಇದೀಗ ಶಾಪರ್ಸ್ ಸ್ಟಾಪ್ 2.5 ಲಕ್ಷದ ಚೆಕ್ ನೀಡಿದೆ.

    ಹೌದು. ಪ್ರದೀಪ್ ಮೆಹ್ರಾ ತಾಯಿ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದು, ದೆಹಲಿಯ ಆಸ್ಪತ್ರೆಯೊಂದರಲ್ಲಿ ಕಳೆದ 2 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರ ತಿಳಿದ ಶಾಪರ್ಸ್ ಸ್ಟಾಪ್, ಪ್ರದೀಪ್‍ಗೆ 2.5 ಲಕ್ಷ ರೂ ಚೆಕ್ ನೀಡಿದೆ. ಈ ಮೂಲಕ ಪ್ರದೀಪ್ ಕನಸು ನನಸು ಮಾಡಲು ಹಾಗೂ ತಾಯಿಗೆ ಚಿಕಿತ್ಸೆ ನೀಡಲು ಸಹಾಯವಾದಂತಾಗಿದೆ.

    ಚಲನಚಿತ್ರ ನಿರ್ಮಾಪಕ ವಿನೋದ್ ಕಪ್ರಿ, ಪ್ರದೀಪ್ ರಾತ್ರಿ ಓಡುತ್ತಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ಪ್ರದೀಪ್ ಗೆ ಸಹಾಯದ ಮಹಾಪೂರವೇ ಹರಿದಬಂತು. ಇದೀಗ ವಿನೋದ್ ಅವರು ಪ್ರದೀಪ್‍ಗೆ ಚೆಕ್ ನೀಡಿರುವ ಫೋಟೋಗಳನ್ನು ಕೂಡ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಮಧ್ಯರಾತ್ರಿಯ ಓಟಗಾರ ಪ್ರದೀಪ್ ಮೆಹ್ರಾ, ನಿಮ್ಮೆಲ್ಲರ ಪ್ರೀತಿ ಹಾಗೂ ಸಹಕಾರ ಕಂಡು ತುಂಬಾ ಖುಷಿಯಾಗಿದ್ದಾರೆ. ಅಲ್ಲದೆ ತಾಯಿಯ ಚಿಕಿತ್ಸೆ ಹಾಗೂ ಕನಸು ನನಸು ಮಾಡುವ ಸಲುವಾಗಿ ನಿನ್ನೆ ಅವರಿಗೆ ಶಾಪರ್ಸ್ ಸ್ಟಾಪ್ ಕಡೆಯಿಂದ 2.5 ಲಕ್ಷದ ಚೆಕ್ ನೀಡಲಾಗಿದೆ. ದೇವರು ಒಳ್ಳೆದು ಮಾಡಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮೃತಪಟ್ಟ ಮುದ್ದಿನ ಶ್ವಾನದ ಸವಿನೆನಪಿಗಾಗಿ ದೇಗುಲ ನಿರ್ಮಾಣ

    ಪ್ರದೀಪ್ ವೀಡಿಯೋ ವೈರಲ್: ರಾತ್ರಿ ವೇಳೆ ಓಡಿಕೊಂಡು ಹೋಗುತ್ತಿದ್ದ ಪ್ರದೀಪ್ ಮೆಹ್ರಾನನ್ನು ನೋಡಿದ ಚಿತ್ರನಿರ್ಮಾಪಕ ವಿನೋದ್ ಕಪ್ರಿ ವೀಡಿಯೋವನ್ನು ಮಾಡಿದ್ದರು. ಈ ವೇಳೆ ಕಪ್ರಿಯವರು ಯುವಕನ ಬಳಿ, ಮನೆಗೆ ಬಿಡುವುದಾಗಿ ಹೇಳಿದ್ದರು. ಅದಕ್ಕೆ ಇಲ್ಲ ನನ್ನ ಅಭ್ಯಾಸ ತಪ್ಪಿ ಹೋಗುತ್ತದೆ. ನಾನು ಫಿಟ್ ಆಗಿರಲು ಓಡುವುದು ನನಗೆ ಅವಶ್ಯಕ ಎಂದು ಹೇಳಿದ್ದರು. ಇದನ್ನೂ ಓದಿ: ಸೇನೆಗೆ ತಯಾರಿ – ಕೆಲಸ ಮುಗಿಸಿ ಪ್ರತಿದಿನ 10 ಕಿಮೀ ಓಡಿಕೊಂಡೇ ಮನೆಗೆ ಹೋಗ್ತಾನೆ!

    ಅಲ್ಲದೆ ಓಡುತ್ತಲೇ ಕಪ್ರಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದ ಪ್ರದೀಪ್, ಸದ್ಯ ನಾನು ನನ್ನ ಅಣ್ಣನೊಂದಿಗೆ ಇದ್ದೇನೆ. ತಾಯಿಗೆ ಹುಷಾರಿಲ್ಲ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಿದ್ದರು. ಊಟ ಆಗಿದೆಯಾ ಎಂದು ಕೇಳಿದ್ದಕ್ಕೆ, ಇಲ್ಲ ಈಗ ನಾನು ಮನೆಗೆ ಹೋಗಿ ಅಡುಗೆ ಮಾಡಬೇಕು. ಆಗ ಕಪ್ರಿಯವರು, ಬಾ ನನ್ನೊಂದಿಗೆ ಊಟ ಮಾಡು ಎಂದಿದ್ದಕ್ಕೆ ಇಲ್ಲ ನಾನು ಹಾಗೆ ಮಾಡಿದರೆ ಮನೆಯಲ್ಲಿರುವ ನನ್ನ ಅಣ್ಣ ಹಸಿದುಕೊಂಡೇ ಇರಬೇಕಾಗುತ್ತದೆ ಎಂದು ಹೇಳಿದ್ದರು. ಯಾಕೆ ಅವರು ಅಡುಗೆ ಮಾಡುವುದಿಲ್ಲವಾ ಎಂದು ಕಪ್ರಿ ಮರು ಪ್ರಶ್ನೆ ಹಾಕಿದಾಗ, ಇಲ್ಲ ಅವರಿಗೆ ಈಗ ರಾತ್ರಿ ಡ್ಯೂಟಿ ಇದೆ. ನಾನು ಹೋಗಿ ಅಡುಗೆ ಮಾಡಬೇಕು ಎಂದು ಹೇಳಿದ್ದರು.

    ಈ ವೀಡಿಯೋವನ್ನು ಕಪ್ರಿಯವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಶೇರ್ ಮಾಡಿಕೊಂಡಿದ್ದರು. ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೆ ಉತ್ತರಾಖಂಡದ ಅಲ್ಮೋರಾದ ಯುವಕ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದರು. ಸೇನೆಯ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಪ್ರದೀಪ್ ಅವರನ್ನು ‘ಶುದ್ಧ ಚಿನ್ನ’ ಎಂದು ಶ್ಲಾಘಿಸಿದ್ದರು.

  • ನ್ಯಾಯ ಸಿಗಲಿಲ್ಲವೆಂದು ಪೊಲೀಸ್ ಠಾಣೆ ಮುಂದೆಯೇ ಬೆಂಕಿ ಹಚ್ಚಿಕೊಂಡಳು!

    ನ್ಯಾಯ ಸಿಗಲಿಲ್ಲವೆಂದು ಪೊಲೀಸ್ ಠಾಣೆ ಮುಂದೆಯೇ ಬೆಂಕಿ ಹಚ್ಚಿಕೊಂಡಳು!

    ಲಕ್ನೋ: ನ್ಯಾಯ ಸಿಗಲಿಲ್ಲವೆಂದು ಮಹಿಳೆಯೊಬ್ಬಳು ಪೊಲೀಸ್ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡಿರುವ ಘಟನೆ ನೊಯ್ಡಾದಲ್ಲಿ ನಡೆದಿದೆ.

    ತನಗೆ ಲೈಂಗಿಕ ಕಿರುಕುಳ ನೀಡಿದ ಮಾವನ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ನಿರಾಕರಿಸಿದ್ದಾರೆ ಎಂದು ಸಂತ್ರಸ್ತೆಯೊಬ್ಬರು ನಿನ್ನೆ ನೊಯ್ಡಾ 2ನೇ ಹಂತದ ಪೊಲೀಸ್ ಠಾಣೆಯ ಹೊರಗೆ ಬೆಂಕಿ ಹಚ್ಚಿಕೊಂಡಿದ್ದಾರೆ. ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ದೇಹ 40% ಸುಟ್ಟುಹೋಗಿದೆ. ಈ ಹಿನ್ನೆಲೆ ಆಕೆಯನ್ನು ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಇದನ್ನೂ ಓದಿ:  ಪೋಷಕರ ವಿರೋಧದ ನಡುವೆಯೂ ಪ್ರೇಮ ವಿವಾಹ – ನವದಂಪತಿ ಆತ್ಮಹತ್ಯೆ

    ನೊಯ್ಡಾದ ಇಲಾಬಸ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಪೊಲೀಸರು ಸಂತ್ರಸ್ತೆಯ ದೂರನ್ನು ತೆಗೆದುಕೊಳ್ಳಲು ನಿರಕಾರಿಸಿದ್ದರು. ಪರಿಣಾಮ ಮಹಿಳೆ ಈ ರೀತಿ ಕೃತ್ಯಕ್ಕೆ ಕೈಹಾಕಿದ್ದಾಳೆ. ಘಟನೆ ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ತನ್ನ ಆಳಲನ್ನು ಹೇಳಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಏನಿದು ಘಟನೆ?
    ಗೌತಮ್ ಬುಧ್ ನಗರದ ಜಂಟಿ ಪೊಲೀಸ್ ಕಮಿಷನರ್ ಲವ್ ಕುಮಾರ್ ಈ ಕುರಿತು ಮಾತನಾಡಿದ್ದು, ಮಹಿಳೆಯು ಇಲಬಾಸ್ ಗ್ರಾಮದ ನೀರಜ್ ಮತ್ತು ಸುಮಿತ್ ಹೆಸರಿನ ಇಬ್ಬರು ಪುರುಷರ ವಿರುದ್ಧ ಎನ್‍ಎಸ್‍ಇಜೆಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆದರೆ ಅವರು ದೂರು ತೆಗೆದುಕೊಳ್ಳಲು ನಿರಾಕರಿಸಿದ್ದು, ತನ್ನ ವ್ಯಕ್ತಿತ್ವಕ್ಕೆ ಹಾನಿ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಸಂಗೀತ ರೋಚಿಗೆದ್ದಿದ್ದಾಳೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 1,200 ವರ್ಷದಷ್ಟು ಹಳೆಯ ಮಕ್ಕಳ, ವಯಸ್ಕರ ಅವಶೇಷ ಪತ್ತೆ!

    ಈ ವೇಳೆ ಆಕೆಯ ವಿರುದ್ಧವೂ ಪೊಲೀಸರಿಗೆ ದೂರು ಬಂದಿದೆ. ಈ ದೂರಿನಲ್ಲಿ ಸಂಗೀತ ಸಾಕಷ್ಟು ಜನರಿಂದ ಸಾಲ ಪಡೆದಿದ್ದಾರೆ. ಆದರೆ ತೆಗೆದುಕೊಂಡಿದ್ದ ಹಣವನ್ನು ಹಿಂತಿರುಗಿಸುತ್ತಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಸಂಬಂಧ ಭಾನುವಾರ ಎರಡೂ ಕಡೆಯವರನ್ನು ಠಾಣೆಗೆ ಕರೆಸಲಾಗಿತ್ತು. ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ತಿಳಿಸಲಾಗಿತ್ತು. ಆದರೆ ಆಕೆ ಮಂಗಳವಾರ ಪೊಲೀಸ್ ಠಾಣೆಗೆ ಬಂದು ಆತ್ಮಾಹುತಿಗೆ ಯತ್ನಿಸಿದ್ದಾಳೆ ಎಂದು ತಿಳಿಸಿದ್ದಾರೆ. ನೊಯ್ಡಾ ಹಂತ 1ರ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ.

  • ಹೋಟೆಲ್‍ನಲ್ಲಿ ಸೆಕ್ಸ್ ದಂಧೆ- 12 ಯುವತಿ, 10 ಯುವಕರು ಅರೆಸ್ಟ್

    ಹೋಟೆಲ್‍ನಲ್ಲಿ ಸೆಕ್ಸ್ ದಂಧೆ- 12 ಯುವತಿ, 10 ಯುವಕರು ಅರೆಸ್ಟ್

    – ರಾಶಿ ರಾಶಿ ಕಾಂಡೋಮ್, ವಿವಿಧ ಮಾತ್ರೆಗಳು ಪತ್ತೆ

    ನವದೆಹಲಿ: ಹೋಟೆಲ್ ಸೆಕ್ಸ್ ದಂಧೆ ಮೇಲೆ ನೊಯ್ಡಾ ಪೊಲೀಸರು 12 ಯುವತಿಯರು ಸೇರಿದಂತೆ 23 ಜನರನ್ನ ಬಂಧಿಸಿದ್ದಾರೆ. ದಾಳಿ ವೇಳೆ ಕಾಂಡೋಮ್, ವಿವಿಧ ಮಾತ್ರೆಗಳು ಪತ್ತೆಯಾಗಿವೆ.

    ನೋಯ್ಡಾದ ಗೌತಮಬುದ್ಧ ನಗರ ಜಿಲ್ಲೆಯ ಚೀತಿ ಗ್ರಾಮದಲ್ಲಿರುವ ಕ್ರೌನ್ ಪ್ಲಾಜಾ ಹೋಟೆಲ್ ನಲ್ಲಿ ಸೆಕ್ಸ್ ದಂಧೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಶನಿವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸೆಕ್ಸ್ ನಲ್ಲಿ ತೊಡಗಿದ್ದ ಜೋಡಿಗಳನ್ನ ರೆಡ್ ಹ್ಯಾಂಡ್ ಹಿಡಿದಿದ್ದಾರೆ. ಹೋಟೆಲ್ ಮ್ಯಾನೇಜರ್ ಸೇರಿದಂತೆ ಒಟ್ಟು 23 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಗೆಳೆಯನೊಂದಿಗೆ ಸುತ್ತಾಟ, ಸೆಕ್ಸ್ – ಮನೆಗೆ ಬಂದು ರೇಪ್ ಆಯ್ತು ಅಂದ್ಳು!

    ಹೋಟೆಲ್ ನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರ ಮಾಹಿತಿ ಮೇರೆಗೆ ಗ್ರೇಟರ್ ನೊಯ್ದಾದ ಡಿಸಿಪಿ ರಾಜೇಶ್ ಕುಮಾರ್ ನೇ ತೃತ್ವದಲ್ಲಿ ಶನಿವಾರ ತಡರಾತ್ರಿ ಈ ದಾಳಿ ನಡೆಸಲಾಗಿತ್ತು. ಓರ್ವ ಪೇದೆ ಮತ್ತು ಚಾಲಕ ಈ ತಂಡಕ್ಕೆ ಸಹಾಯ ಮಾಡುತ್ತಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತವಾಗಿದ್ದರಿಂದ ಇಬ್ಬರನ್ನ ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ. ಇದನ್ನೂ ಓದಿ:  ಸೆಕ್ಸ್ ವೇಳೆ ಹಂದಿಯಂತೆ ಕಿರುಚಬೇಡ – ಮಹಿಳೆಗೆ ನೆರೆಮನೆಯವರಿಂದ ಪತ್ರ

  • ಚಾಲಕ ಮೂತ್ರವಿಸರ್ಜನೆ ಮಾಡಲೆಂದು ನಿಲ್ಲಿಸಿದ ಬಿಎಂಡಬ್ಲ್ಯೂಕಾರನ್ನೇ ಹೊತ್ತೊಯ್ದರು

    ಚಾಲಕ ಮೂತ್ರವಿಸರ್ಜನೆ ಮಾಡಲೆಂದು ನಿಲ್ಲಿಸಿದ ಬಿಎಂಡಬ್ಲ್ಯೂಕಾರನ್ನೇ ಹೊತ್ತೊಯ್ದರು

    – ಇನ್ನೂ 40 ಲಕ್ಷ ಲೋನ್ ಬಾಕಿ ಇತ್ತು

    ನವದೆಹಲಿ: ಮೂತ್ರವಿಸರ್ಜನೆ ಮಾಡಲೆಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ ದುಬಾರಿ ಬೆಲೆಯ ಕಾರನ್ನೇ ಖದೀಮರು ಹೊತ್ತೊಯ್ದ ಘಟನೆ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

    ಈ ಘಟನೆ ಶನಿವಾರ ರಾತ್ರಿ ನಡೆದಿದೆ. ರಿಷಬ್ ಅರೋರ ಎಂಬ ವ್ಯಾಪಾರಿ ಪಾರ್ಟಿ ಮುಗಿಸಿ ಮದ್ಯದ ಅಮಲಿನಲ್ಲಿ ತನ್ನ ಕಾರಿನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದನು. ಈ ಸಂದರ್ಭದಲ್ಲಿ ಆತನಿಗೆ ದಾರಿ ಮಧ್ಯೆ ಸೂಸು ಬಂದಿದೆ. ಹೀಗಾಗಿ ಕೀ ಬಿಟ್ಟು ತನ್ನ ಕಾರನ್ನು ಸೈಡಿಗೆ ಹಾಕಿ ಹೋಗಿದ್ದಾನೆ.

    ದುಬಾರಿ ಕಾರನ್ನು ದರೋಡೆ ಮಾಡಿದ ವಿಷಯ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಲು ಸ್ಥಳಕ್ಕೆ ದೌಡಾಯಿಸಿದ್ದಾರೆ ಎಂದು ಕೇಂದ್ರ ನೊಯ್ಡಾದ ಪೊಲೀಸ್ ಆಯುಕ್ತ ಹರೀಶ್ ಚಂದರ್ ತಿಳಿಸಿದ್ದಾರೆ.

    ಅರೋರಾ ದಾರಿ ಮಧ್ಯೆ ಕಾರು ನಿಲ್ಲಿಸಿ ಮೂತ್ರವಿಸರ್ಜನೆ ಮಾಡಲು ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲೇ ಇದ್ದ ಖದೀಮರು ಕಾರನ್ನು ಎಗರಿಸಿದ್ದಾರೆ. ಅಲ್ಲದೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಚಂದರ್ ವಿವರಿಸಿದ್ದಾರೆ.

    ಇದೊಂದು ಯೋಜಿತ ಕೃತ್ಯವಾಗಿದೆ. ಕಾರು ಮಾಲೀಕನಿಗೆ ಗೊತ್ತಿರುವವರೇ ಕಳ್ಳತನ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುವುದಾಗಿ ಡಿಸಿಪಿ ಶಂಕೆ ವ್ಯಕ್ತಪಡಿಸಿದ್ದಾರೆ.

    ಪ್ರಕರಣ ಸಂಬಂಧ ದುಷ್ಕರ್ಮಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಕಾರನ್ನು ಆದಷ್ಟು ಬೇಗ ಚಾಲಕನಿಗೆ ಒಪ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಕುಡಿದು ಚಾಲನೆ ಮಾಡಿದ್ದಕ್ಕಾಗಿ ಚಾಲಕನ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ತಿಳಿಸಿದ್ದಾರೆ.

    ಬೈಕಿನಲ್ಲಿ ಬಂದ ಖದೀಮರು ಈ ಕೃತ್ಯ ಎಸಗಿದ್ದಾರೆ. ಅಲ್ಲದೆ ಅವರು ಹಿಂಬದಿಯಿಂದ ಬಂದು ಗನ್ ಇಟ್ಟು ತನಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಅರೋರಾ ಆರೋಪಿಸಿದ್ದಾನೆ.

    ಈ ದುಬಾರಿ ಕಾರು ರಿಷಬ್ ಬಾವನಾದಾಗಿದ್ದು, ಲೋನ್ ಮಾಡಿ ಕಾರು ಖರೀದಿಸಿದ್ದರು. ಅಲ್ಲದೆ ಕಾರಿನ ಇನ್ನೂ 40 ಲಕ್ಷ ಲೋನ್ ಕಟ್ಟಲು ಬಾಕಿಯಿತ್ತು.

  • ಬೆಳಗ್ಗೆ 5 ಗಂಟೆಗೆ ಕರೆ ಮಾಡಿ ಪೊಲೀಸ್ ಅತಿಥಿಯಾದ

    ಬೆಳಗ್ಗೆ 5 ಗಂಟೆಗೆ ಕರೆ ಮಾಡಿ ಪೊಲೀಸ್ ಅತಿಥಿಯಾದ

    ನೊಯ್ಡಾ: ತನ್ನ ಪತ್ನಿಯನ್ನು ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾರೆಂದು ಸುಳ್ಳು ದೂರು ನೀಡಿದ ವ್ಯಕ್ತಿಯೊಬ್ಬ ಪೊಲೀಸ್ ಅತಿಥಿಯಾಗಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.

    ನೊಯ್ಡಾ ಪೇಸ್ 2 ಪೊಲೀಸ್ ಠಾಣೆ ವ್ಯಾಪ್ತಿಯ ಇಲಾಹಾಬಸ್ ನಿವಾಸಿ 30 ವರ್ಷದ ನರೇಶ್ ಸಿಂಗ್ ಬಂಧಿತ ವ್ಯಕ್ತಿ. ಸುಳ್ಳು ದೂರು ನೀಡಿದ ಪ್ರಕರಣದ ಮೇಲೆ ಪೊಲೀಸರು ನರೇಶ್ ನನ್ನು ಬಂಧಿಸಿದ್ದಾರೆ.

    ವ್ಯಕ್ತಿ ಬುಧವಾರ ಬೆಳಗ್ಗೆ 5 ಗಂಟೆಗೆ ಪೊಲೀಸ್ ಕಂಟ್ರೋಲ್ ರೂಂ 100ಕ್ಕೆ ಕರೆ ಮಾಡಿ, ನನ್ನ ಪತ್ನಿಯನ್ನು ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ ಎಂದು ದೂರು ನೀಡಿದ್ದಾನೆ. ಪೊಲೀಸ್ ತಂಡ ತಕ್ಷಣವೇ ಗ್ರಾಮದ ಆತನ ಮನೆಗೆ ಧಾವಿಸಿದ್ದು, ಮನೆಯಲ್ಲಿ ಎಲ್ಲವೂ ಸರಿಯಾಗಿಯೇ ಇದೆ. ಆತನ ಪತ್ನಿಯೂ ಸಹ ಮನೆಯಲ್ಲಿಯೇ ಇದ್ದು, ಚೆನ್ನಾಗಿಯೇ ಇದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ನರೇಶ್ ಸಿಂಗ್‍ನನ್ನು ಐಪಿಸಿ ಸೆಕ್ಷನ್ 107 (ಪಿತೂರಿ ನಡೆಸಿರುವುದು), 116 (ಅಪರಾಧ ನಡೆಯದಿದ್ದರೂ, ಅಪರಾಧಕ್ಕೆ ಪ್ರಚೋದಿಸಿರುವುದು) ಹಾಗೂ ಸೆಕ್ಷನ್ 151 ಕ್ರಿಮಿನಲ್ ಪ್ರೊಸಿಜರ್ ಕೋಡ್ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಮೂವರು ಸೆಕ್ಸ್ ವರ್ಕರ್ ಮೇಲೆ ಒಂಬತ್ತು ಜನರಿಂದ ಗ್ಯಾಂಗ್‍ ರೇಪ್

    ಮೂವರು ಸೆಕ್ಸ್ ವರ್ಕರ್ ಮೇಲೆ ಒಂಬತ್ತು ಜನರಿಂದ ಗ್ಯಾಂಗ್‍ ರೇಪ್

    ನವದೆಹಲಿ: ಮೂವರು ಸೆಕ್ಸ್ ವರ್ಕರ್ ಮೇಲೆ ಒಂಬತ್ತು ಪುರುಷರು ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.

    ಓರ್ವ ಕ್ಯಾಬ್ ಡ್ರೈವರ್ ಸೇರಿದಂತೆ 8 ಜನ ಖಾಸಗಿ ಭದ್ರತಾ ಸಿಬ್ಬಂದಿ ಸೆಕ್ಸ್ ವರ್ಕರ್ ಮೇಲೆ ಅತ್ಯಾಚಾರ ಎಸಗಿದ್ದಾರೆ. ಘಟನೆ ಬೆಳಗ್ಗೆ 5 ಗಂಟೆಗೆ ಬೆಳಕಿಗೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಂಗಳವಾರ ರಾತ್ರಿ ನಾವು ದೆಹಲಿಯ ಲಜಪತ್ ನಗರ ಮೆಟ್ರೋ ನಿಲ್ದಾಣದ ಬಳಿ ಗ್ರಾಹಕರಿಗಾಗಿ ಕಾಯುತ್ತಾ ನಿಂತಿದ್ದೀವಿ. ಈ ವೇಳೆ ಸ್ವಿಫ್ಟ್ ಡಿಸೈರ್ ಓಲಾ ಕ್ಯಾಬ್ ನಲ್ಲಿ ಬಂದ ಚಾಲಕ ನಮ್ಮನ್ನು ಕರೆದ ಎಂದು ದೂರುದಾರೆ ಮತ್ತು ಉಳಿದಿಬ್ಬರು ತಿಳಿಸಿದ್ದಾರೆ.

    ಪ್ರತಿ ಪುರುಷರಿಗೆ 3,000 ಸಾವಿರದಂತೆ ಡೀಲ್ ಕುದರಿಸಿದ್ದು, ಡೀಲ್ ಕುದರಿದ ಮೇಲೆ ನೊಯ್ಡಾದ ಸೆಕ್ಟರ್ 18ರಲ್ಲಿ ಇನ್ನೂ ಇಬ್ಬರು ಸ್ನೇಹಿತರು ಕಾಯುತ್ತಿದ್ದು, ಅಲ್ಲಿಗೆ ಹೋಗೋಣ ಎಂದು ಕರೆದೊಯ್ದಿದ್ದಾರೆ. ಪುರುಷರು ಸಂತ್ರಸ್ತ ಮಹಿಳೆಯರಿಗೆ 3,600 ರೂ. ಮುಂಗಡ ಹಣವನ್ನೂ ಪಾವತಿಸಿದ್ದಾರೆ ಎಂದು ಹಿರಿಯ ಎಸ್‍ಪಿ ವೈಭವ್ ಕೃಷ್ಣ ಅವರು ಮಾಹಿತಿ ನೀಡಿದ್ದಾರೆ.

    ನೊಯ್ಡಾದ ಸೆಕ್ಟರ್ 135ರಲ್ಲಿರುವ ಫಾರ್ಮ್ ಹೌಸ್‍ಗೆ ಮಹಿಳೆಯರನ್ನು ಕರೆದೊಯ್ದಿದ್ದಾರೆ. ಇಬ್ಬರು ಪುರುಷರು ಕಾರ್‍ನಲ್ಲಿರುವವರ ಜೊತೆಗೆ ಇನ್ನೂ 7 ಜನ ಪುರುಷರು ಫಾರ್ಮ್ ಹೌಸ್‍ಗೆ ಬಂದಿದ್ದಾರೆ. ಆಗ ಮಹಿಳೆಯರು ಹಿಂಜರಿಕೆಯಿಂದ ಕ್ಯಾಬ್‍ನಲ್ಲಿದ್ದ ಇಬ್ಬರು ಪುರುಷರಿಗೆ ತಮ್ಮನ್ನು ಮರಳಿ ದೆಹಲಿಗೆ ಬಿಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೊಪ್ಪದ ಪುರುಷರು ತಮ್ಮನ್ನು ಹೊಡೆದಿದ್ದು, ಹಲ್ಲೆ ಮಾಡಿ ಮುಂಗಡವಾಗಿ ಪಾವತಿಸಿದ ಹಣವನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಘಟನೆ ಸಂಬಂಧ ಫಾರ್ಮ್ ಹೌಸ್‍ನ್ನು ಸೀಜ್ ಮಾಡಲಾಗಿದೆ. ಈಗಾಗಲೇ 7 ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನು ಇಬ್ಬರು ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ ಎಂದು ವೈಭವ್ ಕೃಷ್ಣ ಹೇಳಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಜಗಳವಾಡಿ ಪತ್ನಿ ಮಲಗಿದ ನಂತ್ರ 13ರ ಮಗಳನ್ನು ಕರೆದುಕೊಂಡು ಹೋಗಿ ರೇಪ್ ಮಾಡ್ದ!

    ಜಗಳವಾಡಿ ಪತ್ನಿ ಮಲಗಿದ ನಂತ್ರ 13ರ ಮಗಳನ್ನು ಕರೆದುಕೊಂಡು ಹೋಗಿ ರೇಪ್ ಮಾಡ್ದ!

    ನೊಯ್ಡಾ: ಇಲ್ಲಿನ ಗೌತಮ್ ಬುದ್ಧ್ ನಗರದ ದಾದ್ರಿ ಪ್ರದೇಶದಲ್ಲಿ ತನ್ನ 13 ವರ್ಷದ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಕಾಮುಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಪತ್ನಿ ನೀಡಿದ ದೂರಿನಂತೆ ದಾದ್ರಿ ಪೊಲೀಸರು 40 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ.

    ದಂಪತಿ ಮಧ್ಯೆ ಮದುವೆಯಾದಾಗಿಂದಲೂ ಸಣ್ಣ ಪುಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಜಗಳಗಳು ನಡೆಯುತ್ತಿತ್ತು. ಅಂತೆಯೇ ಶನಿವಾರ ರಾತ್ರಿಯೂ ಇವರಿಬ್ಬರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿತ್ತು. ಹೀಗಾಗಿ ಪತ್ನಿ ನಿದ್ರೆಗೆ ಜಾರಿದ ಬಳಿಕ ಪತಿ ತಮ್ಮ 13 ವರ್ಷದ ಮಗಳನ್ನು ಕರೆದುಕೊಂಡು ಮಧ್ಯರಾತ್ರಿ ಹೊರಗೆ ಹೋಗಿದ್ದಾನೆ. ಅಲ್ಲದೇ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ವಿಚಾರವನ್ನು ಸಂತ್ರಸ್ತೆ ತನ್ನ ತಾಯಿ ಬಳಿ ಹೇಳಿಕೊಂಡಿದ್ದಾಳೆ. ಪತಿಯ ನೀಚ ಕೃತ್ಯದಿಂದ ಗಾಬರಿಗೊಂಡ ತಾಯಿ ಕೂಡಲೇ ದಾದ್ರಿ ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧವೇ ದೂರು ದಾಖಲಿಸಿದ್ದಾರೆ.

    ಸದ್ಯ ಆರೋಪಿ ತಂದೆಯ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಇತ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಅಂತ ಅವರು ವಿವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಂಪತಿಯಿಂದ ಗರ್ಭಿಣಿ ಕೊಲೆ- ಚಿನ್ನ, ದುಬಾರಿ ಡ್ರೆಸ್ ಕದ್ದು ಅದೇ ಸೂಟ್‍ಕೇಸ್‍ನಲ್ಲಿ ಶವ ತುಂಬಿ ಬಿಸಾಕಿದ್ರು!

    ದಂಪತಿಯಿಂದ ಗರ್ಭಿಣಿ ಕೊಲೆ- ಚಿನ್ನ, ದುಬಾರಿ ಡ್ರೆಸ್ ಕದ್ದು ಅದೇ ಸೂಟ್‍ಕೇಸ್‍ನಲ್ಲಿ ಶವ ತುಂಬಿ ಬಿಸಾಕಿದ್ರು!

    ನೊಯ್ಡಾ: ಗರ್ಭಿಣಿಯನ್ನು ಕೊಲೆಗೈದು ಚಿನ್ನಾಭರಣ ಹಾಗೂ ದುಬಾರಿ ಬೆಲೆಯ ಬಟ್ಟೆಗಳನ್ನು ಕದ್ದು, ಅದೇ ಸೂಟ್ ಕೇಸ್ ನಲ್ಲಿ ಶವವನ್ನು ತುಂಬಿಸಿ ಎಸೆದ ಅಮಾನವೀಯ ಘಟನೆಯೊಂದು ಗಾಜಿಯಾಬಾದ್ ನಲ್ಲಿ ನಡೆದಿದೆ.

    ಮೃತ ದುರ್ದೈವಿ ಮಹಿಳೆಯನ್ನು ಮಾಲಾ ಎನ್ನಲಾಗಿದ್ದು ಈಕೆಯನ್ನು ಪಕ್ಕದಲ್ಲೇ ನೆಲೆಸಿದ್ದ ಸೌರಭ್ ದಿವಾಕರ್ ಹಾಗೂ ರಿತು ಕೊಲೆ ಮಾಡಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಲಾಗಿದೆ ಅಂತ ಗೌತಮ್ ಬುದ್ದ ನಗರದ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ತಿಳಿಸಿದ್ದಾರೆ.

    ಘಟನೆ ವಿವರ:
    ಕಳೆದ ಗುರುವಾರ ಮೃತ ಮಹಿಳೆ ನೆಲೆಸಿದ್ದ ಬಾಡಿಗೆ ಮನೆಗೆ ಆಕೆಯ ಸಂಬಂಧಿಕರು ಬಂದಿದ್ದರು. ಈ ವೇಳೆ ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರಿಂದ ಮಾಲಾ ತನ್ನ ಬಳಿಯಿದ್ದ ಚಿನ್ನ ಹಾಗೂ ದುಬಾರಿ ಬೆಲೆಯ ಉಡುಪುಗಳನ್ನು ತೋರಿಸಿದ್ದಾರೆ. ಇವೆಲ್ಲವೂ ಪಕ್ಕದ ಮನೆಯಲ್ಲಿದ್ದ ರಿತು ಅವರ ಕಣ್ಣಿಗೂ ಬಿದ್ದಿದೆ. ಆರೋಪಿ ರಿತು ಮನೆಗೆ ಹಿಂದುರುಗಿ ತನ್ನ ಗಂಡ ಸೌರಭ್ ಜೊತೆ ಮಾಲಾ ಬಳಿ ಚಿನ್ನಾಭರಣ ಹಾಗೂ ದುಬಾರಿ ಬೆಲೆಯ ಉಡುಪುಗಳು ಇರುವ ಬಗ್ಗೆ ಹೇಳಿದ್ದಾಳೆ. ಅಲ್ಲದೇ ಮರುದಿನ ಮಾಲಾ ಪತಿ ಶಿವಂ ಕೆಲಸಕ್ಕೆ ಹೋದ ಬಳಿಕ ತನ್ನ ಮನೆಗೆ ಮಾಲಾರನ್ನು ಕರೆಸಿಕೊಂಡಿದ್ದಾಳೆ ಅಂತ ಶರ್ಮಾ ವಿವರಿಸಿದ್ದಾರೆ.

    ಮನೆಗೆ ಕರೆಸಿಕೊಂಡ ಬಳಿಕ ದಂಪತಿ ಮಾಲಾರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಮಾಲಾ ಮದುವೆ ಬಳಿಕ ಚಿನ್ನಾಭರಣ ಹಾಗೂ ಬಟ್ಟೆಗಳನ್ನು ಇಡುತ್ತಿದ್ದ ಸೂಟ್ ಕೇಸ್‍ನಲ್ಲಿ ಮಾಲಾ ಶವವನ್ನು ತುಂಬಿಸಿದ್ದಾರೆ. ಈ ಮೊದಲು ಮಾಲಾ ಅವರ ಸೂಟ್ ಕೇಸ್ ನಲ್ಲಿದ್ದ ಎಲ್ಲಾ ವಸ್ತುಗಳನ್ನು ಹಾಗೂ ಮೊಬೈಲನ್ನು ತೆಗೆದಿಟ್ಟುಕೊಂಡಿದ್ದಾರೆ. ಈ ಎಲ್ಲಾ ಕೃತ್ಯಗಳ ಬಳಿಕ ಅಂದರೆ 9 ಗಂಟೆಯ ನಂತರ ದಂಪತಿ ಶವ ತುಂಬಿದ ಸೂಟ್ ಕೇಸ್ ನ್ನು ತೆಗೆದುಕೊಂಡು ಗಾಜಿಯಾಬಾದ್ ಗೆ ಹೋಗುತ್ತಾರೆ. ಅಲ್ಲಿಂದ ಇಬ್ಬರು ಸೋದರಮಾವನ ಬಳಿಗೆ ಹೋಗುತ್ತಾರೆ. ಹೀಗೆ ಹೋಗುವಾಗ ಇಂದಿರಾಪುರಂ ಎಂಬ ಪ್ರದೇಶದಲ್ಲಿ ತಮ್ಮ ಕೈಲಿದ್ದ ಸೂಟ್ ಕೇಸನ್ನು ಎಸೆದಿದ್ದಾರೆ.

    ಇತ್ತ ಮಾಲಾ ಕಾಣೆಯಾಗಿರುವ ಬಗ್ಗೆ ಬಿಸ್ರಾಖ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತದೆ. ನಾಪತ್ತೆ ಪ್ರಕರಣ ದಾಖಲಾದಂತೆ ಗಾಜಿಯಾ ಬಾದ್ ನಲ್ಲಿ ಸೂಟ್ ಕೇಸ್ ಒಳಗೆ ಮಹಿಳೆಯೊಬ್ಬರ ಶವ ಪತ್ತೆಯಾಗಿರುವುದು ಪೊಲೀಸರಿಗೆ ಮಾಹಿತಿ ದೊರೆಯುತ್ತದೆ. ಹೀಗಾಗಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲಿಸಿದಾಗ ಮಾಲಾ ಶವ ಇರುವುದಾಗಿ ಶಂಕೆ ವ್ಯಕ್ತಪಡಿಸುತ್ತಾರೆ. ಈ ಮಧ್ಯೆ ಮಾಲಾ ಸಂಬಂಧಿಕರು ವರದಕ್ಷಿಣೆಗೋಸ್ಕರ ಪತಿ ಹಾಗೂ ಆತನ ಕುಟುಂಬಸ್ಥರು ಸೇರಿ ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.

    ಒಟ್ಟಿನಲ್ಲಿ ಪ್ರಕರಣ ಸಂಬಂಧ ತನಿಖೆ ನಡೆಸಿದಾಗ, ಮಾಲಾ ಪತಿ ಶಿವಂ ಕೆಲಸಕ್ಕೆ ತೆರಳಿದ ಬಳಿಕ ಕೊಲೆ ಮಾಡಿರುವುದು ಬೆಳಕಿಗೆ ಬರುತ್ತದೆ. ಅಲ್ಲದೇ ಘಟನೆ ನಡೆದ ಬಳಿಕ ಪಕ್ಕದ ಮನೆ ನಿವಾಸಿಗಳಾದ ರೀತು, ಸೌರಭ್ ಮನೆಗೆ ವಾಪಸ್ಸಾಗಿಲ್ಲ. ಇದು ದಂಪತಿ ಮೇಲೆ ಮತ್ತುಷ್ಟು ಸಂಶಯ ಮೂಡಲು ಕಾರಣವಾಯಿತು. ಬಳಿಕ ದಂಪತಿಯನ್ನು ಪೊಲೀಸರು ಬಂಧಿಸಿದಾಗ ಚಿನ್ನಾಭರಣ, ಡ್ರೆಸ್ ಹಾಗೂ ಮೊಬೈಲ್ ಫೋನ್ ಕದ್ದಿರುವುದು ಬೆಳಕಿಗೆ ಬಂದಿದೆ ಅಂತ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ. ಆದ್ರೆ ಕೊಲೆಯಾದ ಮಾಲಾ ಗರ್ಭಿಣಿ ಅಂತ ಹೇಳಲಾಗಿದ್ದು, ಎಷ್ಟು ತಿಂಗಳಾಗಿತ್ತು ಎಂಬುದರ ಬಗ್ಗೆ ವರದಿಯಾಗಿಲ್ಲ.

    ಸದ್ಯ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ), 201(ಸಾಕ್ಷಿ ನಾಶ), 316, 394(ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಅಂತ ಶರ್ಮಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಲ್ ನಲ್ಲೇ ಪ್ರಿಯತಮೆಯನ್ನು ಎಳೆದು ಚೂರಿ ಇರಿದ ಭಗ್ನ ಪ್ರೇಮಿ!

    ಮಾಲ್ ನಲ್ಲೇ ಪ್ರಿಯತಮೆಯನ್ನು ಎಳೆದು ಚೂರಿ ಇರಿದ ಭಗ್ನ ಪ್ರೇಮಿ!

    ನೊಯ್ಡಾ: 18 ವರ್ಷದ ಯುವತಿಯನ್ನು ಭಗ್ನ ಪ್ರೇಮಿಯೊಬ್ಬ ಮಾಲ್ ನಲ್ಲೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಗ್ರೇಟರ್ ನೊಯ್ಡಾದಲ್ಲಿ ಶುಕ್ರವಾರ ನಡೆದಿದೆ.

    ಆರೋಪಿಯನ್ನು ಕುಲ್ ದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಪ್ರಿಯತಮೆಯನ್ನು ಕೊಲೆಗೈದ ಬಳಿಕ ಈತನೂ ಚೂರಿ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಥಿತಿ ಚಿಂತಾನಕವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ.

    ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ಕುಲ್ ದೀಪ್ ನಗರದಲ್ಲಿರೋ ಮಾಲ್ ಗೆ ಬಂದಿದ್ದಾರೆ. ಯವತಿಯೂ ಅದೇ ಮಾಲ್ ನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಸ್ವಲ್ಪ ಸಮಯದ ಬಳಿಕ ಯುವತಿ ಪ್ರಥಮ ಮಹಡಿಯಲ್ಲಿರೋ ಶೌಚಾಲಯದ ಕಡೆ ತೆರಳುತ್ತಿದ್ದಳು. ಈ ವೇಳೆ ಆರೋಪಿ ಆಕೆಯನ್ನು ಎಳೆದಾಡಿ ಹಲವು ಬಾರಿ ಆಕೆಗೆ ಚೂರಿಯಿಂದ ಇರಿದಿದ್ದಾನೆ ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಯುವತಿಯನ್ನು ಕೊಲೆಗೈದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಇದೇ ವೇಳೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪೊಲೀಸರನ್ನು ನೋಡುತ್ತಿದ್ದಂತೆಯೇ ತನಗೆ ತಾನೇ ಚೂರಿಯಿಂದ ಇರಿದುಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತ ಕಸ್ನಾ ಪೊಲೀಸ್ ಠಾಣೆಯ ಶಾಲೆಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

    ಕಳೆದ ಕೆಲ ತಿಂಗಳುಗಳಿಂದ ಆರೋಪಿ ಆಕೆಯನ್ನು ಹಿಂಬಾಲಿಸುತ್ತಿದ್ದನು. ಈ ಹಿನ್ನೆಲೆಯಲ್ಲಿ ಪೋಷಕರು ಆಕೆಗೆ ಓಡಾಡಲು ಆಟೋ ರಿಕ್ಷಾದ ವ್ಯವಸ್ಥೆ ಮಾಡಿದ್ದರು. ಈಕೆ ತನ್ನ ಕುಟುಂಬದೊಂದಿಗೆ ದಾದ್ರಿ ಎಂಬಲ್ಲಿ ನೆಲೆಸಿದ್ದರು.

    ದಾದ್ರಿಯ ಗೌತಮ್ ಪುರಿ ನಿವಾಸಿಯಾಗಿರೋ ಕುಲ್ ದೀಪ್ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ವರದಿಯಾಗಿದೆ.