Tag: ನೈಜರ್‌

  • ಮಸೀದಿ ಮೇಲೆ ಉಗ್ರರಿಂದ ಗುಂಡಿನ ದಾಳಿ – 44 ಸಾವು, 13 ಮಂದಿ ಗಾಯ

    ಮಸೀದಿ ಮೇಲೆ ಉಗ್ರರಿಂದ ಗುಂಡಿನ ದಾಳಿ – 44 ಸಾವು, 13 ಮಂದಿ ಗಾಯ

    ನಿಯಾಮಿ: ಶುಕ್ರವಾರ ಮಸೀದಿಯ (Mosque) ಮೇಲೆ ಇಸ್ಲಾಂ ಉಗ್ರರು (Islamist Militants) ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 44 ಜನರು ಬಲಿಯಾಗಿ 13 ಮಂದಿ ಗಾಯಗೊಂಡ ಘಟನೆ ನೈಋತ್ಯ ನೈಜರ್‌ನಲ್ಲಿ (Niger) ನಡೆದಿದೆ.

    ನೈಜರ್, ಬುರ್ಕಿನಾ ಫಾಸೊ ಮತ್ತು ಮಾಲಿಯ ತ್ರಿ-ಗಡಿ ಪ್ರದೇಶದ ಸಮೀಪದಲ್ಲಿರುವ ಕೊಕೊರೌ ಫೋಂಬಿಟಾ ಗ್ರಾಮದಲ್ಲಿ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಈ ದಾಳಿ ನಡೆದಿದೆ.

    ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆಯಾದ ಇಸ್ಲಾಮಿಕ್‌ ಸ್ಟೇಟ್‌ ಇನ್‌ ದಿ ಗ್ರೇಟರ್‌ ಸಹರಾ(ISGS) ಗುಂಪಿನ ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ದೇಶದ ರಕ್ಷಣಾ ಸಚಿವಾಲಯ ತಿಳಿಸಿದೆ.

    ಭಾರೀ ಶಸ್ತ್ರಸಜ್ಜಿತ ಜಿಹಾದಿಗಳು ಮುಸ್ಲಿಮರ ಪವಿತ್ರ ರಂಜಾನ್ ತಿಂಗಳಲ್ಲಿ ಪ್ರಾರ್ಥನೆಗಾಗಿ ಜನರು ಸೇರಿದ್ದ ವೇಳೆ ಮಸೀದಿಯನ್ನು ಸುತ್ತುವರೆದು ಈ ಹತ್ಯಾಕಾಂಡ ನಡೆಸಿದ್ದಾರೆ. ಮಸೀದಿಯನ್ನು ತೊರೆಯುವ ಮೊದಲು ಹತ್ತಿರದಲ್ಲಿದ್ದ ಮಾರುಕಟ್ಟೆ ಮತ್ತು ಮನೆಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ನೈಜರ್‌ ಸರ್ಕಾರ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.  ಇದನ್ನೂ ಓದಿ: ಕಂತೆ ಕಂತೆ ನೋಟು ಪತ್ತೆಯಾದ ಜಡ್ಜ್‌ ಮೇಲೆ ದಾಖಲಾಗಿತ್ತು ಸಿಬಿಐ ಎಫ್‌ಐಆರ್‌

    2012 ರಲ್ಲಿ ಟುವಾರೆಗ್ ದಂಗೆ ನಡೆದು ಇಸ್ಲಾಮಿಸ್ಟ್ ಉಗ್ರಗಾಮಿಗಳು ಉತ್ತರ ಮಾಲಿಯಲ್ಲಿ ಭೂಪ್ರದೇಶವನ್ನು ವಶಪಡಿಸಿಕೊಂಡ ಬಳಿಕ ಪಶ್ಚಿಮ ಆಫ್ರಿಕಾದ ಸಹೇಲ್ ಪ್ರದೇಶದಲ್ಲಿ ದಂಗೆ ಪ್ರಾರಂಭವಾಯಿತು. ಅಂದಿನಿಂದ ಇದು ನೆರೆಯ ನೈಜರ್ ಮತ್ತು ಬುರ್ಕಿನಾ ಫಾಸೊಗೆ ಮತ್ತು ಇತ್ತೀಚೆಗೆ ಟೋಗೊ ಮತ್ತು ಘಾನಾದಂತಹ ಕರಾವಳಿ ಪಶ್ಚಿಮ ಆಫ್ರಿಕಾದ ದೇಶಗಳ ಉತ್ತರಕ್ಕೆ ಹರಡಿದೆ.

    ಪಟ್ಟಣಗಳು, ಹಳ್ಳಿಗಳು, ಮಿಲಿಟರಿ,ಪೊಲೀಸ್ ಪೋಸ್ಟ್‌ಗಳು ಮತ್ತು ಸೇನಾ ಬೆಂಗಾವಲು ವಾಹನಗಳ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದಾರೆ. ಈ ದಾಳಿಯಿಂದ ಇಲ್ಲಿಯವರೆಗೆ ಲಕ್ಷಾಂತರ ಜನರು ಸಾವನ್ನಪ್ಪಿದ್ದರೆ ಲಕ್ಷಾಂತರ ಮಂದಿ ಸುರಕ್ಷಿತ ಸ್ಥಳಕ್ಕೆ ವಲಸೆ ಹೋಗಿದ್ದಾರೆ.

     

  • ಆಫ್ರಿಕಾದ ನೈಜರ್‌ನಲ್ಲಿ ಕ್ಷಿಪ್ರಕ್ರಾಂತಿ – ಸೇನೆಯಿಂದಲೇ ಅಧ್ಯಕ್ಷ ಅರೆಸ್ಟ್‌

    ಆಫ್ರಿಕಾದ ನೈಜರ್‌ನಲ್ಲಿ ಕ್ಷಿಪ್ರಕ್ರಾಂತಿ – ಸೇನೆಯಿಂದಲೇ ಅಧ್ಯಕ್ಷ ಅರೆಸ್ಟ್‌

    ನಿಯಾಮಿ: ಪಶ್ಚಿಮ ಆಫ್ರಿಕಾದ ದೇಶವಾದ ನೈಜರ್‌ನಲ್ಲಿ (Niger) ಸೇನೆ ಕ್ಷಿಪ್ರಕ್ರಾಂತಿ (Military Coup) ನಡೆಸಿ ಅಧ್ಯಕ್ಷ ಮಹ್ಮದ್ ಬಜೌಮ್‍ರನ್ನು (Mohamed Bazoum) ಅವರನ್ನು ಬಂಧಿಸಿದೆ.

    ಸರ್ಕಾರವನ್ನು ಪತನ ಮಾಡಿದ್ದೇವೆ. ದೇಶದ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಅಮಾನತಿನಲ್ಲಿ ಇಟ್ಟಿದ್ದೇವೆ ಎಂದು‌ ಕರ್ನಲ್ ಮೇಜರ್ ಅಮದೌ ಅಬ್ದ್ರಮಾನೆ ಹೇಳಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳು ಆರ್ಥಿಕತೆಯ ಮೇಲೆ ಹೇಗೆ ಪ್ರಭಾವ ಬೀರುತ್ತೆ?

    ಗಡಿಗಳನ್ನು ಬಂದ್ ಮಾಡಲಾಗಿದೆ. ಇದು ನಮ್ಮ ದೇಶದ ಆಂತರಿಕ ವಿಚಾರ. ಪಶ್ಚಿಮ ದೇಶಗಳು ಮೂಗು ತೂರಿಸುವಂತಿಲ್ಲ ಎಂದು ಸೇನೆ ಎಚ್ಚರಿಕೆ ನೀಡಿದೆ. ನೈಜರ್ ಕ್ಷಿಪ್ರಕ್ರಾಂತಿಯನ್ನು ವಿಶ್ವಸಂಸ್ಥೆ ಖಂಡಿಸಿದೆ.

    ದೂರದರ್ಶನದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಅಮದೌ ಅಬ್ದ್ರಮಾನೆ, ಅಧ್ಯಕ್ಷ ಬಜೌಮ್ ಅವರ ಆಡಳಿತವನ್ನು ಕೊನೆಗೊಳಿಸಲು ಸೇನೆ ನಿರ್ಧರಿಸಿದೆ. ಮುಂದಿನ ಸೂಚನೆ ಬರುವವರೆಗೆ ದೇಶಾದ್ಯಂತ ಕರ್ಫ್ಯೂ ವಿಧಿಸಲಾಗಿದೆ ಎಂದು ಅವರು ಹೇಳಿದರು.  ಇದನ್ನೂ ಓದಿ: ವಿದೇಶಕ್ಕೆ ಭಾರತದ ಬ್ರಹ್ಮೋಸ್‌ – ಶಸ್ತ್ರಾಸ್ತ ರಫ್ತು ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]