Tag: ನೇಪಾಳಿ

  • ಬೆಂಗ್ಳೂರಲ್ಲಿ ನೇಪಾಳಿಗಳನ್ನ ಮನೆ ಕೆಲಸಕ್ಕೆ ಸೇರಿಸಿಕೊಳ್ಳೊ ಮುನ್ನ ಎಚ್ಚರ – ಪೊಲೀಸರ ಸಲಹೆ

    ಬೆಂಗ್ಳೂರಲ್ಲಿ ನೇಪಾಳಿಗಳನ್ನ ಮನೆ ಕೆಲಸಕ್ಕೆ ಸೇರಿಸಿಕೊಳ್ಳೊ ಮುನ್ನ ಎಚ್ಚರ – ಪೊಲೀಸರ ಸಲಹೆ

    ಬೆಂಗಳೂರು: ಮನೆ ಕೆಲಸಕ್ಕೆ ನೇಪಾಳ ಮೂಲದ ಜನರನ್ನ (Nepalese) ನೇಮಿಸಿಕೊಂಡಿದ್ದೀರಾ, ಹಾಗಾದ್ರೆ ಹುಷಾರಾಗಿರಿ. ಬೆಂಗಳೂರು ಪೊಲೀಸರೇ (Bengaluru Police) ಈ ಮಾತು ಹೇಳ್ತಿದ್ದಾರೆ.

    ಹೌದು. ಕಡಿಮೆ ಸಂಬಳ, ಹೇಳಿದಷ್ಟು ಕೆಲಸ ಮಾಡ್ತಾರೆ. ಯಾವುದೇ ಕಿರಿಕ್ ಇರಲ್ಲ, ಅವರ ಪಾಡಿಗೆ ಕೆಲಸ ಮಾಡ್ಕೊಂಡು ಹೋಗ್ತಾರೆ. ಇದು ನೇಪಾಳ ಮೂಲದ ಕೆಲಸಗಾರರ ಮೇಲೆ ಜನರಿಗೆ ಇರುವ ಅಭಿಪ್ರಾಯ. ಆದ್ರೆ ಪೊಲೀಸರ ಅಂಕಿ ಅಂಶ, ಕ್ರೈಂ ಸ್ಟೋರಿಗಳು, ಹೇಳೋದೆ ಬೇರೆ. ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿ ಎಂದು ಹೆಸರು ಉಲ್ಟಾ ಹಾಕಿದ ರಶ್ಮಿಕಾ ಮಂದಣ್ಣ

    ಈ ವರ್ಷದ 11 ತಿಂಗಳಲ್ಲಿ ಬರೋಬ್ಬರಿ 30ಕ್ಕೂ ಹೆಚ್ಚು ಶ್ರೀಮಂತರ ಮನೆಗಳಲ್ಲಿ ಕಳ್ಳತನವಾಗಿದೆ. ಅವುಗಳಲ್ಲಿ ಬಹುತೇಕ ಮನೆಗಳಲ್ಲಿ ಕಳ್ಳತನ ಮಾಡಿರೋದು ನೇಪಾಳಿ (Nepalese) ಮೂಲದವರೇ ಅನ್ನೋದು ಒಪ್ಪಿಕೊಳ್ಳಲೇಬೇಕಾದ ಸತ್ಯ ಸಂಗತಿ. ತುಂಬಾ ನಂಬಿಕಸ್ಥರಂತೆ ವರ್ತಿಸೋ ನೇಪಾಳಿ ಮೂಲದ ಕೆಲವರು, ಬೆಳಗಾಗೊ ಹೊತ್ತಿಗೆ ಮನೆಯನ್ನೆಲ್ಲಾ ಗುಡಿಸಿ ಗುಂಡಾತರ ಮಾಡಿ ಎಸ್ಕೇಪ್ ಆಗಿರ್ತಾರೆ. ದರೋಡೆ ವಿಚಾರ ಪೊಲೀಸರ ಕಿವಿ ತಲುಪೋ ಹೊತ್ತಿಗೆ ಆರೋಪಿಗಳು ಅರಾಮಾಗಿ ನೇಪಾಳ ಬಾರ್ಡರ್ ಕ್ರಾಸ್ ಆಗಿರ್ತಾರೆ. ಹಾಗಾಗಿ ನೇಪಾಳಕ್ಕೆ ಹೋದ ಕಳ್ಳರು, ಕದ್ದ ಐಟಂ ವಾಪಸ್ ಸಿಗೋದು ಬಹುತೇಕ ಡೌಟು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯಾರೂ ಯಾರನ್ನು ಮುಗಿಸಲು ಸಾಧ್ಯವಿಲ್ಲ, ನನಗೆ ನನ್ನದೇ ಆದ ಶಕ್ತಿ ಇದೆ: ಬಿಎಸ್‍ವೈ

    ಆಶ್ಚರ್ಯ ಅನ್ನಿಸಿದ್ರು ಇದು ನಿಜ. ಬೆಂಗಳೂರಿನ ಹನುಮಂತ ನಗರದಲ್ಲಿ (Hanumantha Nagar Police) ಇಂತಹದ್ದೊಂದು ಘಟನೆ ನಡೆದಿದೆ. ಇಲ್ಲಿನ ಶ್ರೀಮಂತ ಉದ್ಯಮಿಯೊಬ್ಬರ ಮನೆಯಲ್ಲಿ ನೇಪಾಳ ಮೂಲದ ಲಲಿತ್ ಮತ್ತು ಬಹದ್ದೂರ್ ಅನ್ನೋರು ಕೆಲಸಕ್ಕಿದ್ರು. ತುಂಬಾ ನಂಬಿಕಸ್ಥರಾಗಿದ್ದ ಕಾರಣ ಮನೆಯವರಿಗೆ ಯಾವುದೇ ಡೌಟ್ ಬಂದಿರಲಿಲ್ಲ. ಕಳೆದ ವಾರ ಉದ್ಯಮಿ ಕುಟುಂಬ ಸಮೇತ ಸಿಂಗಾಪುರ್ ಟ್ರಿಪ್ ಹೋಗಿದ್ರು. ಅವರು ವಿದೇಶಕ್ಕೆ ಹಾರುತ್ತಿದ್ದಂತೆ, ದಂಪತಿ ಮನೆಯಲ್ಲಿಟ್ಟಿದ್ದ 75 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು, ಡೈಮಂಡ್ ರಿಂಗ್, ವಜ್ರದ ವಸ್ತುಗಳು ಸೇರಿ ಬರೋಬ್ಬರಿ ಎರಡೂವರೆ ಕೋಟಿಯಷ್ಟು ಮೌಲ್ಯದ ವಸ್ತುಗಳನ್ನು ದೋಚಿ ಸೈಲೆಂಟ್ ಆಗಿ ನೇಪಾಳ ಸೇರ್ಕೊಂಡಿದ್ದಾರೆ. ವಾಪಸು ಮನೆಗೆ ಬಂದು ನೋಡುವಷ್ಟರಲ್ಲಿ ಕೆಲಸಗಾರರ ಕೈಚಳಕ ಗೊತ್ತಾಗಿ ಸಿಸಿಟಿವಿ ಚೆಕ್ ಮಾಡಿದ್ದಾರೆ. ಎರಡು ಬ್ಯಾಗ್‌ಗಳಲ್ಲಿ ಲೆಗೇಜ್ ರೀತಿಯಲ್ಲಿ ಹಣ, ಚಿನ್ನಾಭರಣ ತುಂಬಿಕೊಂಂಡು ಎಸ್ಕೇಪ್ ಆಗಿರೋದು ಪತ್ತೆಯಾಗಿದೆ.

    CRIME

    ಈ ಸಂಬಂಧ ಹನುಮಂತನಗರದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹಾಗಾಗಿ ದೂರದ ನೇಪಾಳಿಗಳು, ಸೇರಿದಂತೆ ಅಪರಿಚಿತರನ್ನು ಮನೆ ಕೆಲಸಕ್ಕೆ ನೇಮಿಸುವ ಮುನ್ನ ಎಚ್ಚರವಾಗಿರುವಂತೆ ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೌದ್ಧ ಸನ್ಯಾಸಿಯ ವೇಷ ಧರಿಸಿ ದೇಶ ವಿರೋಧಿ ಚಟುವಟಿಕೆಯ ಶಂಕೆ – ಚೀನೀ ಮಹಿಳೆ ಬಂಧನ

    ಬೌದ್ಧ ಸನ್ಯಾಸಿಯ ವೇಷ ಧರಿಸಿ ದೇಶ ವಿರೋಧಿ ಚಟುವಟಿಕೆಯ ಶಂಕೆ – ಚೀನೀ ಮಹಿಳೆ ಬಂಧನ

    ನವದೆಹಲಿ: ಉತ್ತರ ದೆಹಲಿಯಲ್ಲಿ (Delhi) ಟಿಬೆಟಿಯನ್ ನಿರಾಶ್ರಿತರು ವಾಸವಿದ್ದ ಸ್ಥಳದಲ್ಲಿ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಶಂಕೆಯ ಮೇಲೆ ಚೀನಾದ ಮಹಿಳೆಯನ್ನು (Chinese woman) ಪೊಲೀಸರು (Delhi Police) ಬಂಧಿಸಿರುವುದಾಗಿ ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಮಹಿಳೆಯ ಗುರುತಿನ ಪತ್ರದಲ್ಲಿ ಆಕೆಯ ಹೆಸರು ಡೋಲ್ಮಾ ಲಾಮಾ ಎಂದು ಬರೆಯಲಾಗಿದೆ. ಆಕೆಯ ವಿಳಾಸ ನೇಪಾಳದ (Nepal) ರಾಜಧಾನಿ ಕಠ್ಮಂಡು ಎಂದು ತೋರಿಸಿದೆ. ಆದರೆ ಆಕೆಯ ನಿಜ ಹೆಸರು ಕೈ ರೂವೋ ಎಂದು ಪೊಲೀಸರು ತಿಳಿಸಿದ್ದಾರೆ.

    ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್ ಬಳಿ ಇರುವ ಟಿಬೆಟಿಯನ್ ನಿರಾಶ್ರಿತರ ಕಾಲೋನಿ ಮಜ್ನು ಕಾ ತಿಲ್ಲಾದಲ್ಲಿ ಆಕೆ ವಾಸವಿದ್ದಳು. ಆಕೆ ಬೌದ್ಧ ಸನ್ಯಾಸಿಗಳಂತೆ ಸಾಂಪ್ರದಾಯಿಕ ಕೆಂಪು ನಿಲುವಂಗಿ ಧರಿಸಿಕೊಂಡು, ಕೂದಲನ್ನೂ ಚಿಕ್ಕದಾಗಿ ಕತ್ತರಿಸಿಕೊಂಡಿದ್ದಳು. ಇದನ್ನೂ ಓದಿ: ಬೆಂಗ್ಳೂರಲ್ಲಿ ಆಯೋಧ್ಯೆ ತೀರ್ಪು ವಿರೋಧಿಸಿ, ಗಲಾಟೆಗೆ ಕರಪತ್ರ ಹಂಚಿಕೆ – PFI ಸಂಘಟನೆಯ ಕುತಂತ್ರ ಮತ್ತಷ್ಟು ಬಯಲು

    ಈ ಬಗ್ಗೆ ಮಹಿಳೆಯ ವಿದೇಶಿ ಪ್ರಯಾಣದ ದಾಖಲೆಗಳನ್ನು ಹುಡುಕಿದಾಗ ಆಕೆ 2019ರಲ್ಲಿ ಚೀನಾದ ಪಾಸ್‌ಪೋರ್ಟ್ ಬಳಸಿ ಭಾರತಕ್ಕೆ ಬಂದಿರುವುದು ತಿಳಿದುಬಂದಿದೆ. ಆಕೆಯನ್ನು ವಿಚಾರಿಸಿದಾಗ ಚೀನಾದ ಕಮ್ಯೂನಿಸ್ಟ್ ಪಕ್ಷದ ಕೆಲ ನಾಯಕರು ತನ್ನನ್ನು ಕೊಲ್ಲಲು ಬಯಸಿದ್ದರು ಎಂದು ಹೇಳಿಕೊಂಡಿದ್ದಾಳೆ.

    ಮಹಿಳೆ ಇಂಗ್ಲಿಷ್, ಮ್ಯಾಂಡರಿನ್ ಹಾಗೂ ನೇಪಾಳಿ ಭಾಷೆಗಳನ್ನು ತಿಳಿದಿದ್ದಾಳೆ. ಆಕೆ ಬೇಹುಗಾರಿಕೆ ಕೆಲಸಗಳಲ್ಲಿ ಭಾಗಿಯಾಗಿದ್ದಾಳೆಯೇ ಎಂಬುದನ್ನು ತಿಳಿಯಲು ಅಧಿಕಾರಿಗಳು ತನಿಖೆ ನಡೆಸುತ್ತಿದಾರೆ. ಇದನ್ನೂ ಓದಿ: ಕುರಾನ್ ಮಾತ್ರವಲ್ಲ, ಭಗವದ್ಗೀತೆ ಕೂಡಾ ಜಿಹಾದ್ ಕಲಿಸುತ್ತದೆ: ಶಿವರಾಜ್ ಪಾಟೀಲ್

    Live Tv
    [brid partner=56869869 player=32851 video=960834 autoplay=true]

  • ಉದ್ಯಮಿ ತಾಯಿಗೆ ನಿದ್ದೆ ಮಾತ್ರೆ ನೀಡಿ 180 ಗ್ರಾಂ ಚಿನ್ನ, 10 ಲಕ್ಷ ರೂ. ಕಳವುಗೈದ್ರು!

    ಉದ್ಯಮಿ ತಾಯಿಗೆ ನಿದ್ದೆ ಮಾತ್ರೆ ನೀಡಿ 180 ಗ್ರಾಂ ಚಿನ್ನ, 10 ಲಕ್ಷ ರೂ. ಕಳವುಗೈದ್ರು!

    – ಮನೆ ಕೆಲಸದವರಿಂದ್ಲೇ ಕೃತ್ಯ
    – ನಾಲ್ವರು ನೇಪಾಳಿಗರ ಬಂಧನ

    ಹೈದರಾಬಾದ್: ಉದ್ಯಮಿ ಮನೆಯಿಂದ 10 ಲಕ್ಷ ರೂ. 180 ಗ್ರಾಂ ಚಿನ್ನದ ಆಭರಣ ದರೋಡೆ ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಕಳ್ಳತನ ಅರೋಪದ ಮೇಲೆ ನಾಲ್ವರು ನೇಪಾಳಿಗರನ್ನು ಪೊಲೀಸರು ಬಂಧಿಸಿದ್ದಾರೆ.

    ಕಳ್ಳರಲ್ಲಿ ಇಬ್ಬರು ಉದ್ಯಮಿ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 19 ರಂದು ಉದ್ಯಮಿ ಮನೆಯಲ್ಲಿ ಕುಟುಂಬಸ್ಥರು ಇಲ್ಲದಿರುವುದನ್ನು ತಿಳಿದ ಕಳ್ಳರು ದರೋಡೆಗೆ ಹೊಂಚು ಹಾಕಿದ್ದಾರೆ. ಅಲ್ಲದೆ ಉದ್ಯಮಿಯ 70 ವರ್ಷದ ತಾಯಿ ಮಾತ್ರ ಮನೆಯಲ್ಲಿ ಇದ್ದರು.

    ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ದರೋಡೆಕೋರರು ವೃದ್ಧೆಗೆ ಚಹಾದಲ್ಲಿ ನಿದ್ದೆ ಮಾತ್ರೆ ಬೆರೆಸಿ ನೀಡಿದ್ದಾರೆ. ಈ ಚಹಾ ಕುಡಿದ ವೃದ್ಧೆ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಖತರ್ನಾಕ್ ಕಳ್ಳರು 180 ಗ್ರಾಂ ಚಿನ್ನ, 10 ಲಕ್ಷ ರೂ. ಹಣವನ್ನು ದೋಚಿ ಮನೆಯಿಂದ ಎಸ್ಕೇಪ್ ಆಗಿದ್ದಾರೆ.

    ಕಳ್ಳತನ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲು 15 ತಂಡಗಳನ್ನು ರಚಿಸಲಾಗಿತ್ತು. ಅಕ್ಟೋಬರ್ 22 ಮತ್ತು 25 ರ ನಡುವೆ ಲಕ್ನೋದಲ್ಲಿ ದರೋಡೆಕೊರರನ್ನು ಬಂಧಿಸಲಾಗಿದೆ. ಪೊಲೀಸರ ಬಲೆಗೆ ಬಿದ್ದಿರುವ ಕಳ್ಳರು ನೇಪಾಳಿ ಮೂಲದವರಾಗಿದ್ದಾರೆ. ಈ ನಾಲ್ವರು ಕಳ್ಳರಿಂದ 90ಗ್ರಾಂ ಚಿನ್ನ ಮತ್ತು 1.40 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಮಹೇಶ್ ಎಂ ಭಾಗವತ್ ತಿಳಿಸಿದ್ದಾರೆ.

  • ನೇಪಾಳಿಗಳಂತೆ ಹೋಲಿಕೆ- ಪಾಸ್‍ಪೋರ್ಟ್ ಅರ್ಜಿ ತಿರಸ್ಕೃತ

    ನೇಪಾಳಿಗಳಂತೆ ಹೋಲಿಕೆ- ಪಾಸ್‍ಪೋರ್ಟ್ ಅರ್ಜಿ ತಿರಸ್ಕೃತ

    -ರಾಷ್ಟ್ರೀಯತೆ ಸಾಬೀತು ಮಾಡಿ ಎಂದ ಅಧಿಕಾರಿ

    ಚಂಡೀಗಢ: ನೇಪಾಳಿಗಳಂತೆ ಕಾಣುತ್ತೀರಾ ಎಂದು ಯುವತಿಯರಿಗೆ ಅಧಿಕಾರಿಗಳು ಪಾಸ್‍ಪೋರ್ಟ್ ಅರ್ಜಿ ನಿರಾಕರಣೆ ಮಾಡಿರುವ ಘಟನೆ ಚಂಡೀಗಢದ ಅಂಬಾಲದಲ್ಲಿ ನಡೆದಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಯುವತಿ, ನಾನು ಮತ್ತು ನನ್ನ ತಂಗಿ ಪಾಸ್‍ಪೋರ್ಟ್ ಮಾಡಿಸಬೇಕು ಎಂದು ಅರ್ಜಿ ಹಾಕಲು ಹೋಗಿದ್ದೆವು. ಅಲ್ಲಿ ನಮ್ಮನ್ನು ನೋಡಿದ ಅಧಿಕಾರಿಗಳು ನೀವು ನೇಪಾಳಿಗಳಂತೆ ಕಾಣುತ್ತೀರಾ, ನಿಮ್ಮ ರಾಷ್ಟ್ರೀಯತೆಯನ್ನು ಮೊದಲು ಸಾಬೀತು ಮಾಡಿ ಎಂದು ಹೇಳಿದರು ಎಂದು ಹೇಳಿದ್ದಾರೆ.

    ನಾವು ತೆಗೆದುಕೊಂಡು ಹೋಗಿದ್ದ ಅರ್ಜಿ ಮೇಲೆ ಅಲ್ಲಿನ ಪಾಸ್‍ಪೋರ್ಟ್ ಮಾಡಿಕೊಡುವ ಅಧಿಕಾರಿಗಳು ಅರ್ಜಿದಾರರು ನೇಪಾಳಿಗಳಂತೆ ಕಾಣುತ್ತಾರೆ ಎಂದು ಬರೆದುಕೊಟ್ಟರು. ಮತ್ತು ನಮ್ಮ ರಾಷ್ಟ್ರೀಯತೆಯನ್ನು ಸಾಬೀತು ಮಾಡಿ ಎಂದು ಹೇಳಿದರು. ಆಗ ನಾವು ಈ ವಿಷಯವನ್ನು ಸಚಿವರಾದ ಅನಿಲ್ ವಿಜ್ ಅವರಿಗೆ ಹೇಳಿದ ನಂತರ ನಮ್ಮ ಪಾಸ್‍ಪೋರ್ಟ್ ಮಾಡಿಕೊಡುವ ಪ್ರಕ್ರಿಯೆಯನ್ನು ಆರಂಭಿಸಿದರು ಎಂದು ಯುವತಿ ಮಾಹಿತಿ ನೀಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಅಂಬಾಲದ ಜಿಲ್ಲಾಧಿಕಾರಿ ಅಶೋಕ್ ಶರ್ಮಾ, ಭಗತ್ ಬಹದ್ದೂರ್ ಎಂಬ ವ್ಯಕ್ತಿ ತನ್ನ ಹೆಣ್ಣುಮಕ್ಕಳಾದ ಸಂತೋಷ್ ಮತ್ತು ಹೆನ್ನಾಳೊಂದಿಗೆ ಪಾಸ್‍ಪೋರ್ಟ್ ಗಾಗಿ ಚಂಡೀಗಢದ ಪಾಸ್‍ಪೋರ್ಟ್ ಕಚೇರಿಗೆ ಹೋಗಿದ್ದಾರೆ. ಆದರೆ ಅಲ್ಲಿನ ಅಧಿಕಾರಿಗಳು ಪಾಸ್‍ಪೋರ್ಟ್ ಕೊಡಲು ನಿರಾಕರಿಸಿ ಅರ್ಜಿಯ ಮೇಲೆ ಅರ್ಜಿದಾರರು ನೇಪಾಳಿಗಳಂತೆ ಕಾಣುತ್ತಾರೆ ಎಂದು ಬರೆದು ಕಳುಹಿಸಿದ್ದಾರೆ ಎಂದು ಹೇಳಿದರು.

    ಈ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ಆ ಇಬ್ಬರು ಸಹೋದರಿಯರನ್ನು ಕರೆಸಿ, ಅಧಿಕಾರಿಗಳಿಗೆ ಅವರ ಪಾಸ್‍ಪೋರ್ಟ್ ಮಾಡಿಕೊಡಿ ಎಂದು ಸೂಚಿಸಿದ್ದೇನೆ. ಅವರಿಬ್ಬರಿಗೂ ಶ್ರೀಘದಲ್ಲೇ ಪಾಸ್‍ಪೋರ್ಟ್ ಮಾಡಿಕೊಡಲಾಗುತ್ತದೆ. ಜೊತೆಗೆ ಘಟನೆಯ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಶೋಕ್ ಶರ್ಮಾ ತಿಳಿಸಿದ್ದಾರೆ.