Tag: ನೆರೆ ಪರಿಹಾರ

  • ರೈತರ ವಿಚಾರದಲ್ಲಿ ತಾತ್ಸಾರ ಬೇಡ, ಸಿಎಂ ಬೆಂಗಳೂರಿಗೆ ಸೀಮಿತರಾಗಿದ್ದಾರೆ – ಬಿವೈವಿ ಕಿಡಿ

    ರೈತರ ವಿಚಾರದಲ್ಲಿ ತಾತ್ಸಾರ ಬೇಡ, ಸಿಎಂ ಬೆಂಗಳೂರಿಗೆ ಸೀಮಿತರಾಗಿದ್ದಾರೆ – ಬಿವೈವಿ ಕಿಡಿ

    ಬೀದರ್: ರೈತರ ವಿಚಾರದಲ್ಲಿ ತಾತ್ಸಾರ ಬೇಡ, ಸಿಎಂ ಸಿದ್ದರಾಮಯ್ಯ (CM Siddaramaiah) ಬೆಂಗಳೂರಿಗೆ (Bengaluru) ಮಾತ್ರ ಸೀಮಿತರಾಗಿದ್ದಾರೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಿಡಿಕಾರಿದ್ದಾರೆ.

    ಬೀದರ್ (Bidar) ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾದ ಹಿನ್ನೆಲೆ ಬಿವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ತಂಡ ನೆರೆ ವೀಕ್ಷಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಸಿಎಂಗೆ ಕಲ್ಯಾಣ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ, ಈ ಭಾಗದಲ್ಲಿ ರೈತರ ಬೆಳೆಗಳು ಸಂಪೂರ್ಣವಾಗಿ ಸರ್ವನಾಶವಾಗಿದೆ. ಕಳೆದ ಒಂದು ತಿಂಗಳಿಂದ ಮಳೆಯಾಗಿ ಎಲ್ಲಾ ಬೆಳೆಗಳು ನಾಶವಾಗಿದೆ. ರೈತರ ವಿಚಾರದಲ್ಲಿ ಸಿಎಂ ತಾತ್ಸಾರ ಬೇಡ, ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಸೀಮಿತರಾಗಿದ್ದಾರೆ. ಇಂತಹ ಸಮಯದಲ್ಲಿ ಸಿಎಂ ಹಾಗೂ ಸಚಿವರ ಹುಡುಗಾಟ ಬೇಡ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ 3,000 ಕೋಟಿ ಪ್ರವಾಹ ಪರಿಹಾರ ನೀಡಬೇಕು – ಅಶೋಕ್ ಆಗ್ರಹ

    ರಾಜ್ಯ ಸರ್ಕಾರ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಬಿಎಸ್‌ವೈ ಮನೆ ಕಳೆದುಕೊಂಡವರಿಗೆ ಕೇಂದ್ರದ ಕಡೆ ನೋಡದೆ ಪರಿಹಾರ ಕೊಟ್ಟಿದ್ದರು. ಇನ್ನು ತಡಮಾಡದೇ ನೀವು, ನಿಮ್ಮ ಸಚಿವರು ಇಲ್ಲಿಗೆ ಧಾವಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.

  • ಮನೆ ಹಾನಿಗೆ ಒಂದು ಬಾರಿ ಮಾತ್ರ ಪರಿಹಾರ – ಷರತ್ತು ಏನು?

    ಮನೆ ಹಾನಿಗೆ ಒಂದು ಬಾರಿ ಮಾತ್ರ ಪರಿಹಾರ – ಷರತ್ತು ಏನು?

    ಬೆಂಗಳೂರು : ಅತಿವೃಷ್ಟಿ, ಪ್ರವಾಹದಿಂದ ಮನೆ ಹಾನಿ ಪರಿಹಾರ ನೀಡುವ ವಿಚಾರವಾಗಿ ಸರ್ಕಾರ ಸ್ಪಷ್ಟನೆ ನೀಡಿದೆ. 2022 ರಲ್ಲಿ ಯಾರು ಪರಿಹಾರ ಪಡೆಯಲು ಅರ್ಹರು ಎಂಬುದಕ್ಕೆ ಕಂದಾಯ ಇಲಾಖೆ ಸ್ಪಷ್ಟೀಕರಣ ನೀಡಿದೆ.

    ಎಲ್ಲಾ ಡಿಸಿಗಳಿಗೂ ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. 2019, 2020, 2021 ರಲ್ಲಿ ಎ ಮತ್ತು ಬಿ ಕೆಟಗರಿಯಲ್ಲಿ ಪರಿಹಾರ ಪಡೆದಿದ್ದರೆ 2022 ರಲ್ಲಿ ಪುನಃ ಪರಿಹಾರ ಪಡೆಯಲು ಅರ್ಹರಲ್ಲ ಎಂದು ಕಂದಾಯ ಇಲಾಖೆ ಸ್ಪಷ್ಟನೆ ನೀಡಿದೆ.

    ಪರಿಹಾರ ಯಾರು ಪಡೆಯಬಹುದು ಅಂತ ಸರ್ಕಾರ ವಿವರವಾದ ಮಾಹಿತಿಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ.  ಇದನ್ನೂ ಓದಿ: ಕೊಯಿನಾಡು ಬಳಿ ರಸ್ತೆಯಲ್ಲಿ ಬಿರುಕು : ಮಡಿಕೇರಿ – ಮಂಗಳೂರು ಸಂಪರ್ಕ ಕಡಿತ ಸಾಧ್ಯತೆ

    ಪರಿಹಾರ ಪಡೆಯಲು ಯಾರು ಅರ್ಹರು?
    ವಾಸದ ಮನೆ ಅಧಿಕೃತ ಮನೆಯಾದಲ್ಲಿ ನಿಯಮಾನುಸಾರ ಪರಿಹಾರ ಪಾವತಿಸಬಹುದು. ಆದರೆ, ಜಮೀನಿನಲ್ಲಿ ಕಟ್ಟಿರುವ ಮನೆಗಳು (Farm House), ಸರ್ಕಾರಿ ಜಮೀನು, ಗೋಮಾಳಗಳಲ್ಲಿ ಜನ ವಾಸವಾಗಿರುವ ಮನೆಗಳು ಅನಧಿಕೃತವಾದಲ್ಲಿ ನಿಯಮಾನುಸಾರ ಅಫಿಡವಿಟ್‌ ಪಡೆದು ರೂ.1.00 ಲಕ್ಷ Ex-gratria ಪಾವತಿಸುವುದು.

    ವಿವಿಧ ಸರ್ಕಾರಿ ವಸತಿ ಯೋಜನೆಯಡಿ ಮನೆ ನಿರ್ಮಾಣ ಕೆಲಸ ಪೂರ್ಣಗೊಂಡು ನಿಯಮಾನುಸಾರ ಸಾರ್ವಜನಿಕರಿಗೆ ಮನ ಹಂಚಿಕೆಯಾಗಿರಬೇಕು. ಹಾಗೂ ಈ ಮನೆಯಲ್ಲಿ ಜನ ವಾಸವಿರಬೇಕು.ಇಂತಹ ಮನೆ ಅತಿವೃಷ್ಟಿ, ಪ್ರವಾಹದಿಂದ ಹಾನಿಯಾದಲ್ಲಿ ಸರ್ಕಾರಿ ಆದೇಶದನ್ವಯ A.B. ಹಾಗೂ C ಕೆಟಗರಿಯಲ್ಲಿ ಪರಿಹಾರ ಪಾವತಿಸುವುದು.

    2019, 2020 ಮತ್ತು 2021ನೇ ಸಾಲಿನಲ್ಲಿ ಅತಿವೃಷ್ಟಿ,ಪ್ರವಾಹದಿಂದ ಎ ಅಥವಾ ಬಿ ಕೆಟಗರಿಯಲ್ಲಿ ಪರಿಹಾರ ಪಡೆದಿರುವ ಸಂತ್ರಸ್ತರ ಮನೆ ಪುನಃ 2022 ಸಾಲಿನಲ್ಲಿ ಹಾನಿಯಾದಲ್ಲಿ ಪರಿಹಾರ ಪಡೆಯಲು ಅರ್ಹರಿರುವುದಿಲ್ಲ.  ಆದರೆ 2019, 2020 ನೇ ಸಾಲಿನಲ್ಲಿ ಅಲ್ಪಸ್ವಲ್ಪ ಮನೆ ಹಾನಿಯಾದ ‘ಸಿ’ ಕಟಗರಿಯಲ್ಲಿ ಸರ್ಕಾರದಿಂದ ರೂ.50,000 ಪರಿಹಾರ ಪಡೆದಿರುವ ಮನೆಗಳು ಪುನಃ 2022ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದಲ್ಲಿ A,B ಮತ್ತು C ಕೆಟಗರಿಯಲ್ಲಿ ಪರಿಹಾರ ಪಾವತಿಸಬಹುದು ಎಂದು ಸ್ಪಷ್ಟನೆ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 30 ತಿಂಗಳು ಕಳೆದರೂ ನೆರೆ ಸಂತ್ರಸ್ತರಿಗೆ ಸಿಕ್ಕಿಲ್ಲ ಪರಿಹಾರ

    30 ತಿಂಗಳು ಕಳೆದರೂ ನೆರೆ ಸಂತ್ರಸ್ತರಿಗೆ ಸಿಕ್ಕಿಲ್ಲ ಪರಿಹಾರ

    ಬೆಳಗಾವಿ: ಜಿಲ್ಲೆಯಲ್ಲಿ ನೆರೆ ಸಂಭವಿಸಿ 30 ತಿಂಗಳು ಕಳೆದಿವೆ. ಇಲ್ಲಿಯವರೆಗೂ ಪರಿಹಾರ ನೀಡದ ಅಧಿಕಾರಿಗಳ ವಿರುದ್ಧ ನೆರೆ ಸಂತ್ರಸ್ತರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ.

    ಪರಿಹಾರ ನೀಡದ ಅಧಿಕಾರಿಗಳು ಪರಿಹಾರದ ಆದೇಶ ನೀಡಿ ಇಲ್ಲವೇ ಸಾಯಲು ವಿಷ ನೀಡಿ ಎಂದು ನೂರಾರು ನೆರೆ ಸಂತ್ರಸ್ತರು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ನೇತೃತ್ವದಲ್ಲಿ ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಹೀಗೆ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

    2019ರಲ್ಲಿ ಘಟಪ್ರಭಾ ನದಿಯ ಪ್ರವಾಹದಿಂದ ಗೋಕಾಕ್ ತಾಲೂಕಿನ ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ಲೋಳಸೂರ, ನಲ್ಲಾನಟ್ಟಿ, ಬಸಳೀಗುಂದಿ, ಬಳೋಬಾಳ, ಬೀರನಗಡ್ಡಿ, ತಳಕಟ್ನಾಳ ಹಾಗೂ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ಜಿ, ಪುಲಗಡ್ಡಿ, ತಿಗಡಿ, ರಂಗಾಪುರ, ಹುಣಶ್ಯಾಳ ಪಿ.ವಾಯ್, ಡವಳೇಶ್ವರ, ಅರಳಿಮಟ್ಟಿ, ಅವರಾದಿ ಸೇರಿದಂತೆ ಇತರ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಪ್ರವಾಹದಲ್ಲಿ ಗ್ರಾಮಗಳಲ್ಲಿನ ಹಲವು ಮನೆಗಳಿಗೆ ಹಾನಿಯಾಗಿದ್ದವು. ಇದನ್ನೂ ಓದಿ: ಪಲಾವ್ ತಿಂದು ಏರ್ ಕಂಡೀಷನ್ ಹಾಕಿ ಧರಣಿ ಮಾಡೋದಲ್ಲ: ವಿಶ್ವನಾಥ್

    ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರ ಪರಿಹಾರ ಘೋಷಿಸಿತ್ತು. ಆದರೆ ಪ್ರವಾಹ ಘಟಿಸಿ 30 ತಿಂಗಳುಗಳಾಗಿದ್ದರೂ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 25ಲಕ್ಷ ರೂ. ಪರಿಹಾರ ನೀಡಿ-ಸರ್ಕಾರಕ್ಕೆ ಶ್ರೀರಾಮ ಸೇನೆ ಒತ್ತಾಯ

    ನೆರೆ ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಭ್ರಷ್ಟಾಚಾರ ಕುರಿತು ಸಮಗ್ರ ತನಿಖೆ ನಡೆಸಬೇಕು. ಮನೆ ಪರಿಹಾರದ ಆದೇಶವನ್ನು ತಕ್ಷಣ ನೀಡಬೇಕು. ನೆರೆ ಪರಿಹಾರ ಮಜೂರಾದ ಮನೆಗಳಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

  • ಸಂಪೂರ್ಣ ಮನೆ ಹಾನಿಯಾಗಿದ್ದರೆ 1 ಲಕ್ಷ ರೂ. ಪರಿಹಾರ: ಸಿಎಂ

    ಬೆಂಗಳೂರು: ಭಾರೀ ಮಳೆಯಿಂದಾಗಿ ಪೂರ್ಣ ಮನೆ ಹಾನಿಯಾಗಿದ್ದರೆ 1 ಲಕ್ಷ ರೂ. ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಲು ಸೂಚಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಭಾಗಶಃ ಬಿದ್ದ ಮನೆಗಳಿಗೂ ಪರಿಹಾರ ಕೊಡಲು ಸೂಚಿಸಿದ್ದೇವೆ. ಬೆಳೆ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಲಾಗುವುದು. ಜೊತೆಗೆ ಇಂದು ಕೋಲಾರ ಜಿಲ್ಲೆ ಹಾಗೂ ಹೊಸಕೋಟೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಿರುಪತಿಯಲ್ಲಿ ಆಣೆಕಟ್ಟು ಬಿರುಕು – ಜನರಲ್ಲಿ ಹೆಚ್ಚಿದ ಆತಂಕ

    ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಬಂಧಪಟ್ಟ ಇಲಾಖೆಗಳ ಸಚಿವರು ಭೇಟಿ ನೀಡಬಹುದು. ಉಸ್ತುವಾರಿ ಸಚಿವರಿಗೆ ಆ ಅಧಿಕಾರ ನೀಡಿಲ್ಲ. ಮುಖ್ಯಮಂತ್ರಿಗಳು ಬೇಕಾದರೆ ಸ್ಥಳಗಳಿಗೆ ತೆರಳಿ ವೀಕ್ಷಣೆ ನಡೆಸಬಹುದು ಎಂಬ ಸೂಚನೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಾರ್ಟ್ಸ್ ಧರಿಸಿದ್ದಕ್ಕೆ ಬ್ಯಾಂಕ್ ಒಳಗೆ ಬಿಡದ SBI ಸಿಬ್ಬಂದಿ

    ಗದಗ ಜಿಲ್ಲೆಯ ಹಾಲಕೇರಿ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ. ಸಂಗನಬಸವ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಅವರ ಅಂತಿಮ ನಮನ ಸಲ್ಲಿಸಲು ಹೋಗುತ್ತಿದ್ದೇನೆ. ಆ ಭಾಗದಲ್ಲಿ ಅತ್ಯಂತ ಪ್ರಭಾವಿ ಶ್ರೀಗಳಾಗಿದ್ದರು. ನಮಗೆ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಸ್ಮರಿಸಿದರು.

  • ಬರ, ನೆರೆ ಎರಡೂ ಅನುದಾನ ನಿಮಗೇ, ನಾವ್ಯಾಕೆ ಇರೋದು- ಏಕವಚನದಲ್ಲಿ ಶಿವಲಿಂಗೇಗೌಡ-ಪ್ರೀತಂಗೌಡ ವಾಗ್ದಾಳಿ

    ಬರ, ನೆರೆ ಎರಡೂ ಅನುದಾನ ನಿಮಗೇ, ನಾವ್ಯಾಕೆ ಇರೋದು- ಏಕವಚನದಲ್ಲಿ ಶಿವಲಿಂಗೇಗೌಡ-ಪ್ರೀತಂಗೌಡ ವಾಗ್ದಾಳಿ

    ಹಾಸನ: ನೆರೆ ಪರಿಹಾರದ ವಿಚಾರದಲ್ಲಿ ಶಾಸಕರಿಬ್ಬರ ನಡುವೆ ವಾಕ್ಸಮರ ಏರ್ಪಟ್ಟಿದ್ದು, ಏಕವಚನದಲ್ಲೇ ವಾಗ್ವಾದ ನಡೆಸಿದ್ದಾರೆ. ಜೆಡಿಎಸ್‍ನ ಅರಿಸಿಕೇರೆ ಶಾಸಕ ಶಿವಲಿಂಗೇಗೌಡ ಹಾಗೂ ಬಿಜೆಪಿಯ ಹಾಸನ ಶಾಸಕ ಪ್ರೀತಂಗೌಡ ಅನುದಾನದ ವಿಚಾರದಲ್ಲಿ ಜಗಳವಾಡಿಕೊಂಡಿದ್ದಾರೆ.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಇಬ್ಬರು ಶಾಸಕರು ಕಚ್ಚಾಡಿದ್ದು, ಬರಕ್ಕೆ ಹಣ ಬಂದ್ರೂ ನಿಮಗೇ, ಮಳೆಗೆ ಅನುದಾನ ಬಂದ್ರೂ ನಿಮಗೆ, ಹಾಗಿದ್ರೆ ನಾವ್ಯಾಕೆ ಇರೋದು ಎಂದು ಸಭೆಯಲ್ಲಿ ಶಿವಲಿಂಗೇಗೌಡ ಆಕ್ರೋಶ ಭರಿತವಾಗಿ ಮಾತನಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರೀತಂಗೌಡ ವಾಗ್ದಾಳಿ ನಡೆಸಿದ್ದು, ಹೌದು ಗೌಡ್ರೆ ನೀವು ಹೇಳ್ತಿರೋದು ಸರಿ, ಯಾವುದಕ್ಕೆ ಅನುದಾನ ಬಂದ್ರೂ ರೇವಣ್ಣೋರು ತಗೊಂಡ್ ಹೋಗ್ತಿದ್ದರು ಎಂದು ತಿರುಗೇಟು ನೀಡಿದ್ದಾರೆ.

    ಶಿವಲಿಂಗೇಗೌಡರು ನೇರವಾಗಿ ರೇವಣ್ಣೋರಿಗೆ ಹೇಳೋಕ್ಕಾಗದೆ ನಮ್ಮೆದುರು ಹೇಳುತ್ತಿದ್ದಾರೆ. ರೇವಣ್ಣವರಿಗೆ ಹೇಳಿ, ಶಿವಲಿಂಗೇಗೌಡರು ನಿಮ್ಮ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು, ಪ್ರೀತಂಗೌಡ ಕೂಡ ಶಿವಲಿಂಗೇಗೌಡರಿಗೆ ಧ್ವನಿಗೂಡಿಸಿದರು ಎಂದು ಹೇಳಿ ಎಂದು ಶಿವಲಿಂಗೇಗೌಡರ ಮಾತಿಗೆ ಪ್ರೀತಂಗೌಡ ತಿರುಗೇಟು ನೀಡಿದ್ದಾರೆ.

    ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಏಕವಚನದಲ್ಲಿ ಇಬ್ಬರು ಶಾಸಕರು ಜಗಳವಾಡಿದ್ದಾರೆ. ನೆರೆ ಪರಿಹಾರದಲ್ಲಿ ಸುಮಾರು 19 ಕೋಟಿ ರೂ. ಅನುದಾದ ಬಂದಿದೆ. ಸರಿಯಾಗಿ ಹಣ ಹಂಚಿಕೆ ಆಗಿಲ್ಲ. ಅರಸೀಕೆರೆ ಕ್ಷೇತ್ರಕ್ಕೆ ಏನೂ ಕೊಟ್ಟಿಲ್ಲ. ಇದೇನು ಜಿಲ್ಲೇನಾ? ಎಲ್ಲವನ್ನು ಬೇಕಾದಹಾಗೆ ಬಳಸಿಕೊಳ್ತಿದ್ದಾರೆ ಶಿವಲಿಂಗೇಗೌಡರು ಕಿಡಿಕಾರಿದ್ದಾರೆ. ಮಾತ್ರವಲ್ಲದೆ ನಿಂದು ಏನಿದೆ ಅದನ್ನು ನೀ ತಗೋ, ನಂದು ಏನಿದೆ ಅದನ್ನು ತಗೋತಿನಿ. ನಿನ್ನ ಕ್ಷೇತ್ರದ್ದು ನಾ ಕೇಳುತ್ತಿದ್ದೇನಾ ಎಂದು ಶಿವಲಿಂಗೇಗೌಡರು ಆಕ್ರೋಶ ಹೊರ ಹಾಕಿದ್ದಾರೆ.

    ಅನುದಾನ ನೀನು ತಂದಿದ್ದು ಎನ್ನಬೇಡ, ಸರ್ಕಾರ ಕೊಟ್ಟಿರೋದು. ನಾವೇನು ದನ ಕಾಯೋಕೆ ಬಂದಿಲ್ಲ ಎಂದು ಮತ್ತೆ ಶಿವಲಿಂಗೇಗೌಡ ಕಿಡಿಕಾರಿದ್ದಾರೆ. ಶಿವಲಿಂಗೇಗೌಡರ ಆರೋಪಕ್ಕೆ ಪ್ರತ್ಯುತ್ತರ ನೀಡಲು ಮುಂದಾದ ಶಾಸಕ ಪ್ರೀತಂಗೌಡ, ನಿಮ್ಮ ಸರ್ಕಾರ ಇದ್ದಾಗ ನೀವು ತಂದಿದ್ದು ಅಂತೀರಿ, ನಮ್ಮ ಸರ್ಕಾರ ಇದ್ದಾಗ ನಾನೇ ತಂದಿದ್ದೇನೆ ಅಂತೀವಿ. ಇದು ಯಡಿಯೂರಪ್ಪನವರ ಸರ್ಕಾರ. ಯಡಿಯೂರಪ್ಪ ಅವರೇ ಕೊಟ್ಟಿರೊ ಅನುದಾನ ಎಂದೇ ಹೇಳೋದು. ನನಗೂ ಟೇಬಲ್ ಕುಟ್ಟಿ ಮಾತನಾಡಲು ಬರುತ್ತೆ ಎಂದು ಶಾಸಕ ಪ್ರೀತಂಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ನೆರೆ ಪರಿಹಾರ ಸಿಗದ್ದಕ್ಕೆ ಆತ್ಮಹತ್ಯೆಗೆ ಶರಣು

    ನೆರೆ ಪರಿಹಾರ ಸಿಗದ್ದಕ್ಕೆ ಆತ್ಮಹತ್ಯೆಗೆ ಶರಣು

    ಧಾರವಾಡ: ಮನೆ ಹಾನಿ ಪರಿಹಾರ ಸಿಗದ ಕಾರಣ ಅಂಗವಿಕಲೆ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡದಲ್ಲಿ ನಡೆದಿದೆ.

    ಮಂಜುಳಾ ಕಲ್ಲೂರ್ ಆತ್ಮಹತ್ಯೆಗೆ ಶರಣಾದ ಯುವತಿ. ಧಾರವಾಡದ ಕಿತ್ತೂರ ರಾಣಿ ಚನ್ನಮ್ಮ ಪಾರ್ಕಿನಲ್ಲಿ ವಿಷ ಕುಡಿದು ಮಂಜುಳಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಧಾರವಾಡ ತಾಲೂಕಿನ ದುಬ್ಬನಮರಡಿ ಗ್ರಾಮದ ನಿವಾಸಿಯಾದ ಮಂಜುಳಾ ವಾಸವಿದ್ದ ಮನೆ ನಾಲ್ಕು ತಿಂಗಳ ಸುರಿದ ಮಳೆಗೆ ಬಿದ್ದಿತ್ತು. ಪರಿಹಾರ ನೀಡುವಂತೆ ಮಂಜುಳಾ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು. ಆದ್ರೆ ಜಿಲ್ಲಾಡಳಿತ 50 ಸಾವಿರ ರೂ. ಪರಿಹಾರ ನೀಡಿ ಕೈತೊಳೆದುಕೊಂಡಿತ್ತು.

    ಮೊದಲಿಗೆ ಮನೆಯ ಒಂದು ಗೋಡೆ ಬಿದ್ದಿತ್ತು. ನಂತರ ಮಳೆ ಹೆಚ್ಚಾದಾಗ ಸಂಪೂರ್ಣ ಮನೆಯೇ ವಾಸಕ್ಕೆ ಯೋಗ್ಯವಾಗಿರದ ಸ್ಥಿತಿಯಲ್ಲಿತ್ತು. ಹೀಗಾಗಿ ಮಂಜುಳಾ ತಮಗೆ ಹೆಚ್ಚಿನ ಪರಿಹಾರ ಸಿಗಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿಗೆ ಬರುತ್ತಿದ್ದರು. ಪರಿಹಾರ ಸಿಗದ್ದಕ್ಕೆ ಮನನೊಂದು ಮಂಜುಳಾ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

    ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ್ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಜುಳಾ ಮನೆಯಲ್ಲಿ ಎಲ್ಲರೂ ಅಂಗವಿಕಲರಾಗಿದ್ದಾರೆ ಎಂದು ಅವರ ಕುಟುಂದವರು ತಿಳಿಸಿದ್ದು, ಡಿಸಿಗೆ ಈ ಎಲ್ಲ ಮಾಹಿತಿ ನೀಡಿದ್ರೂ ಕೂಡಾ ಪರಿಹಾರ ನೀಡಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೆರೆ ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರ – ರಿಯಾಲಿಟಿ ಚೆಕ್‍ನಲ್ಲಿ ಬಯಲು

    ನೆರೆ ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರ – ರಿಯಾಲಿಟಿ ಚೆಕ್‍ನಲ್ಲಿ ಬಯಲು

    – ಸಂತ್ರಸ್ತರಾದ ರೈತರಿಗಿಲ್ಲ ಪರಿಹಾರ
    – ಬೇರೆ ರೈತರ ಖಾತೆಗೆ ಸರ್ಕಾರದ ದುಡ್ಡು

    ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಮುಷ್ಟಳ್ಳಿ ಗ್ರಾಮದ ನೂರಾರು ಎಕರೆ ಜಮೀನು ಕೃಷ್ಣಾ ನದಿಯ ನಿರಿನಿಂದ ಸಂಪೂರ್ಣ ಮುಳುಗಡೆಯಾಗಿತ್ತು. ಈ ಬಗ್ಗೆ ಜಿಲ್ಲಾಡಳಿತ ಅಧಿಕಾರಿಗಳ ತಂಡ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ನೀಡಿತ್ತು. ಈಗಾಗಲೇ ಒಂದಿಷ್ಟು ರೈತರ ಖಾತೆಗೆ ಪರಿಹಾರ ಹಣ ಬಂದಿದ್ದು, ಇನ್ನುಳಿದ ರೈತರಿಗೆ ಬಂದಿಲ್ಲ. ಇದಕ್ಕೆ ಕಾರಣ ರೈತರ ಹೆಸರಲ್ಲಿ ಬೇರೆಯವರ ಖಾತೆಗೆ ಪರಿಹಾರದ ಹಣ ಜಮಾ ಆಗಿದೆ. ಈ ಕುರಿತು ಪಬ್ಲಿಕ್ ಟಿವಿಗೆ ಎಕ್ಸ್ ಕ್ಲೂಸೀವ್ ದಾಖಲೆಗಳು ದೊರೆತಿವೆ.

    ಜಿಲ್ಲಾಡಳಿತ ಅಧಿಕಾರಿಗಳ ತಂಡ ಹಾನಿಯಾದ ಸ್ಥಳಗಳಲ್ಲಿ ವಾರಗಟ್ಟಲೆ ಬೀಡುಬಿಟ್ಟು ಸಮೀಕ್ಷೆ ನಡೆಸಿ ಹಾನಿಯಾದ ಪ್ರದೇಶಗಳ ಸಂಪೂರ್ಣ ಮಾಹಿತಿ ಸರ್ಕಾರಕ್ಕೆ ನೀಡಿತ್ತು. ರೈತರ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಭರ್ತಿ ಮಾಡಲು ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ್ ದೇಶಪಾಂಡೆಗೆ ಜವಾಬ್ದಾರಿ ನೀಡಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಗ್ರಾಮ ಲೆಕ್ಕಾಧಿಕಾರಿ, ಇಲ್ಲಿ ರೈತರ ಹೆಸರಿನಲ್ಲಿರುವ ಜಮೀನುಗಳ ಪರಿಹಾರದ ಹಣ ಬೆರೆಯವರ ಖಾತೆಗೆ ಜಮಾ ಮಾಡಿದ್ದಾನೆ. ಅಲ್ಲದೆ ಜಮೀನಿನ ಮಾಲೀಕನಿಗೆ ಗೊತ್ತಿಲ್ಲದ ಹಾಗೆ ಹಣ ಲಪಟಾಯಿಸಿದ್ದಾನಂತೆ. ಇನ್ನೂ ಕೆಲ ರೈತರಿಂದ ಲಂಚಪಡೆದು ಹಾನಿಗೊಳಗಾದ ರೈತರ ಜಮೀನಿಗೂ ಸಹ ಪರಿಹಾರ ನೀಡಿದ್ದಾನೆ. ಇದರಿಂದ ಅರ್ಹ ರೈತರನ್ನು ಬಿಟ್ಟು ಸಂಬಂಧವೇ ಇಲ್ಲದ ರೈತರ ಖಾತೆಗೆ ಸಾವಿರಾರು ರೂಪಾಯಿ ಜಮಾ ಆಗಿದೆ. ನದಿ ದಡದ ಜಮೀನು ಹೊಂದಿರುವ ರೈತರಿಗೆ ಪರಿಹಾರದ ಹಣವೇ ಬಂದಿಲ್ಲ. ಆದರೆ ನದಿಯಿಂದ ಸುಮಾರು 2 ರಿಂದ 3 ಕಿ. ಮೀ ದೂರದಲ್ಲಿ ಜಮೀನು ಹೊಂದಿರುವ ರೈತರಿಗೆ ಪರಿಹಾರ ಹಣ ಜಮಾ ಆಗಿದೆ.

    ಅಕ್ರಮವಾಗಿ ಹಣ ಪಡೆದ ರೈತರ ಸರ್ವೆ ನಂಬರ್ ಹಾಗೂ ಸಿಕ್ಕಿದ ಪರಿಹಾರ ಇಂತಿದೆ:
    * 18-46,9995
    * 52-46998
    * 42-20,159
    * 43/5-19738
    * 53/1-18797
    * 22-18798

    ಅರ್ಹ ರೈತನ ಜಮೀನು ಇನ್ಯಾರದ್ದೋ ಖಾತೆ:
    ಸರ್ವೆ 18/2- 46998 ಇವರಿಗೆ ಸೇರಬೇಕಿದ್ದ ಹಣ ಇವರಿಗೆ ಸಂಬಂಧವೇ ಇಲ್ಲ ಶಾಮಲಾಬಾಯಿ ಎಂಬುವವರ ಖಾತೆಗೆ 46,998 ರೂ ಜಮಾ ಆಗಿದೆ.

    ಹಾನಿಗೊಳಗಾದ್ರೂ ಪರಿಹಾರ ಸಿಕ್ಕಿಲ್ಲ:
    ಸರ್ವೆ ನಂಬರ್ 97 ರ ಯಂಕಪ್ಪ ಭೀಮಣ್ಣ, ಸರ್ವೆ ನಂಬರ್ 87ರ ವಿರೂಪಾಕ್ಷ ಬಸವರಾಜ್, ಸರ್ವೆ ನಂಬರ್ 101/1ರ ಮಲ್ಲನಗೌಡ, ಸರ್ವೆ ನಂಬರ್ 62 ರ ಗೌಸ್ ಹಾಗೂ ಸರ್ವೆ ನಂಬರ್. 72ರ ಮಲ್ಲಿಕಾರ್ಜುನರಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ.

    ಹೀಗೆ ಈ ಗ್ರಾಮದಲ್ಲಿ ಒಟ್ಟು 65 ಜನ ರೈತರಿಗೆ ಪ್ರವಾಹದ ಬೆಳೆ ಪರಿಹಾರ ಬಂದಿದೆ. ಆದರೆ ಇದರಲ್ಲಿ ಶೇ.50 ರಷ್ಟು ಅರ್ಹರಲ್ಲದ ರೈತರಿಗೆ ಹಣ ಜಮಾವಣೆ ಆಗಿದ್ದು, ಇದರಲ್ಲಿ ಗ್ರಾಮ ಲೆಕ್ಕಿಗ ಶ್ರೀನಿವಾಸ್ ದೇಶಪಾಂಡೆ ಭ್ರಷ್ಟಾಚಾರ ಸ್ಪಷ್ಟವಾಗಿ ಕಾಣುತ್ತದೆ. ಇಷ್ಟು ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದ್ದರೂ ತಹಶೀಲ್ದಾರರು ಏನು ಮಾಡುತ್ತಿದ್ದರು ಎಂಬ ಅನುಮಾನ ಎದ್ದಿದೆ.

  • ನಾನೇನಾದ್ರು ಸಿಎಂ ಆಗಿದ್ರೆ ಮೋದಿ ಮನೆ ಮುಂದೆ ನೆರೆ ಪರಿಹಾರಕ್ಕಾಗಿ ಧರಣಿ ಕೂರುತ್ತಿದ್ದೆ: ಸಿದ್ದರಾಮಯ್ಯ

    ನಾನೇನಾದ್ರು ಸಿಎಂ ಆಗಿದ್ರೆ ಮೋದಿ ಮನೆ ಮುಂದೆ ನೆರೆ ಪರಿಹಾರಕ್ಕಾಗಿ ಧರಣಿ ಕೂರುತ್ತಿದ್ದೆ: ಸಿದ್ದರಾಮಯ್ಯ

    ಬಾಗಲಕೋಟೆ: ನಾನೇನಾದ್ರು ಮುಖ್ಯಮಂತ್ರಿ ಆಗಿದ್ದಿದ್ದರೆ ನೆರೆ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮನೆ ಮುಂದೆ ಧರಣಿ ಕೂರುತ್ತಿದ್ದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಕಾಲದಲ್ಲಿ ಮಾತೆತ್ತಿದರೆ ದುಡ್ಡಿಲ್ಲ, ದುಡ್ಡಿಲ್ಲ ಅಂತಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡು ಆರು ತಿಂಗಳು ಕಳೆಯಲಿ. ಆಮೇಲೆ ಬೀದಿಗೆ ಇಳಿದು ಹೋರಾಟ ಮಾಡುತ್ತೇನೆ ಎಂದರು.

    ನನ್ನ ಕ್ಷೇತ್ರಕ್ಕೆ ಗೋವನಕೊಪ್ಪ ಪಂಚಾಯಿತಿ ಮಾಡಲು ಸಿಎಂ ಯಡಿಯೂರಪ್ಪ ಅವರು ಮನಸ್ಸು ಮಾಡಲಿಲ್ಲ. ಎಲ್ಲಾ ಫೈಲ್ ಓಕೆ ಆಗಿದ್ದರೂ ಕ್ಯಾನ್ಸಲ್ ಮಾಡಿದರು. ಇರಲಿ, ನಿಮ್ಮೂರನ್ನ ಸ್ವಂತ ಪಂಚಾಯಿತಿ ಮಾಡುತ್ತೇನೆ. ಇದನ್ನು ಬಹಳ ನೋವಿನಿಂದ ಹೇಳುತ್ತಿದ್ದೇನೆ. ಎಂದು ಗೋವನಕೊಪ್ಪ ಗ್ರಾಮಸ್ಥರ ಮುಂದೆ ಅಸಮಾಧಾನ ಹೊರಹಾಕಿದರು.

    ಈ ವೇಳೆ ಗ್ರಾಮಸ್ಥನೊಬ್ಬ ಕೆಲಸ ಮಾಡಿ ಅಂತ ಹೇಳಿದ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ನಾನು ಕೊಟ್ಟ ಭರವಸೆಯಂತೆ ಕೆಲಸ ಮಾಡಿದ್ದೇನೆ. ಆದರೂ ಮತ್ತೆ ಸಿಎಂ ಆಗಲು ಬಿಡಲಿಲ್ಲ. ಕೆಲಸ ಮಾಡದೇ ಇದ್ದರೂ ಬಿಜೆಪಿಗೆ ಮತ ಹಾಕುತ್ತಿರಾ ಎಂದು ಸೋಲಿನ ಬೇಸರ ಹೊರಹಾಕಿದರು.

    ಬಾದಾಮಿ ಕ್ಷೇತ್ರದಲ್ಲಿ ಪಂಚಾಯಿತಿ ಮಾಡಲು ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಮಾಡಿಸಿದ್ದೆ. ಸಿಎಂ ಯಡಿಯೂರಪ್ಪ ಬಂದು ಫೈಲ್ ರಿಜೆಕ್ಟ್ ಮಾಡಿಬಿಟ್ಟ. ಸಿಎಂ ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ ಎಲ್ಲಾ ಅಪ್ಪಗಳು ಕೂಡಿಬಿಟ್ಟಿದ್ದಾರೆ. ಏನು ಮಾಡುವುದು ಕೆಲಸ ಮಾಡಿ ಅಂತ ಹೇಳುತ್ತೇನೆ. ಆದರೂ ಮಾಡುತ್ತಿಲ್ಲ ಎಂದು ಹೇಳಿದರು.

    ನೆರೆ ಸಂತ್ರಸ್ತರಿಗೆ ಈವರೆಗೂ ಪರಿಹಾರ ಹಂಚಿಲ್ಲ. ರಾಜ್ಯ ಸರ್ಕಾರ 36 ಸಾವಿರ ಕೋಟಿ ರೂ. ಬೇಡಿಕೆ ಇಟ್ಟಿತ್ತು. ಆದರೆ ಕೇಂದ್ರ ಸರ್ಕಾರ 1,863 ಕೋಟಿ ರೂ. ಕೊಟ್ಟಿದೆ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಹಾಕಿದ್ದಾರೆ. ಈ ರಾಜ್ಯದಿಂದ 25 ಸಂಸದರು ಗೆದ್ದಿದ್ದಾರೆ. ಒಮ್ಮೆಯಾದರೂ ಕೇಂದ್ರದ ವಿರುದ್ಧ ಪರಿಹಾರ ಕೊಡಿ ಅಂತ ಗಟ್ಟಿ ಧ್ವನಿ ಎತ್ತಿದ್ದಾರಾ? ಆದರೂ ನೀವು ಅವರನ್ನು ಎರಡು, ಮೂರು ಲಕ್ಷ ಅಂತರದಿಂದ ಗೆಲ್ಲಿಸುತ್ತೀರಿ. ಅದು ಹೇಗೆ? ನಾನು ಸಿಎಂ ಆಗಿದ್ದಿದ್ದರೆ ನೆರೆ ಪರಿಹಾರಕ್ಕಾಗಿ ಪ್ರಧಾನಿ ಮೋದಿ ಮನೆ ಮುಂದೆ ಧರಣಿ ಕುಳಿತುಕೊಳ್ಳುತ್ತಿದ್ದೆ ಎಂದರು.

    ಇದಕ್ಕೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗೋವನಕೊಪ್ಪ ಗ್ರಾಮದ ವ್ಯಾಪ್ತಿಯ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು. ಈ ವೇಳೆ ಗ್ರಾಮದ ಬ್ರಹ್ಮಾನಂದ ಮಠಕ್ಕೆ ಭೇಟಿ ನೀಡಿ ಬ್ರಹ್ಮಾನಂದ ಸ್ವಾಮಿಗಳ ಗದ್ದುಗೆಗೆ ನಮಿಸಿದರು.

  • ಪ್ರಧಾನಿ ಮೋದಿ ವಿರುದ್ಧ ಯಡಿಯೂರಪ್ಪ ಸಿಡಿದ ಭಾಷಣ ರಹಸ್ಯ

    ಪ್ರಧಾನಿ ಮೋದಿ ವಿರುದ್ಧ ಯಡಿಯೂರಪ್ಪ ಸಿಡಿದ ಭಾಷಣ ರಹಸ್ಯ

    ಬೆಂಗಳೂರು: ಪ್ರಧಾನಿ ನರೇಂದ್ರ ಬಹಿರಂಗ ಸಮಾವೇಶದಲ್ಲಿ ನೆರೆ ಪರಿಹಾರ ಪ್ರಸ್ತಾಪದ ಬಗ್ಗೆ ಬಿಎಸ್‍ವೈಗೆ ಗೊತ್ತಿತ್ತಾ? ರಾಜ್ಯ ಬಿಜೆಪಿಯಿಂದ ತನಿಖಾ ವರದಿಯಲ್ಲಿನ ಅಸಲಿಯತ್ತು ಏನು? ಈ ಎಲ್ಲ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಒಂದು ಭಾಷಣದ ರಹಸ್ಯ ಎಕ್ಸ್ ಕ್ಲೂಸಿವ್  ಸ್ಟೋರಿ ರೋಚಕವಾಗಿದೆ. ಅಷ್ಟಕ್ಕೂ ಬಿಎಸ್‍ವೈ ಭಾಷಣ ಸಿದ್ಧವಾಗಿದ್ದು ಡಾಲರ್ಸ್ ಕಾಲೋನಿ ನಿವಾಸದಲ್ಲಿ ಅಂತೆ. ಇದು ಬಿಜೆಪಿಯ ಆಂತರಿಕ ತನಿಖಾ ವರದಿ.

    ಜನವರಿ 2ರಂದು ತುಮಕೂರಿಗೆ ಪ್ರಧಾನಿ ಬಂದಾಗ ಬಿಎಸ್‍ವೈ ಮೇಲೆ ಫುಲ್ ಖುಷಿಯಾಗಿದ್ರಂತೆ. ಸಿದ್ಧಗಂಗಾ ಮಠದಲ್ಲಿ ಭಾಷಣ ಮಾಡಿದ ನಂತರವೂ ಮೋದಿ ಯಡಿಯೂರಪ್ಪ ಮೇಲೆ ವಿಶ್ವಾಸ, ಪ್ರೀತಿ ಅಪಾರ ಅಂತೆ. ಆದ್ರೆ ಅದೇ ತುಮಕೂರಿನ ಕೃಷಿ ಸಮ್ಮಾನ್ ಕಾರ್ಯಕ್ರಮದಲ್ಲಿ ಮೋದಿ ಸಪ್ಪೆಯಾದ್ರಂತೆ. ಬಿಎಸ್‍ವೈ ಮೇಲೆ ಸಣ್ಣದೊಂದು ಅಸಮಾಧಾನ ವ್ಯಕ್ತಪಡಿಸಿದ್ದು ಹಳೆಯ ಸುದ್ದಿ.

    ಆದರೆ ಈಗ ನೆರೆ ಪರಿಹಾರ ವಿಚಾರದಲ್ಲಿ ಅಸಮಾಧಾನ ವ್ಯಕ್ತವಾಗುವ ರೀತಿ ಭಾಷಣದ ಬಗ್ಗೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ. ಭಾಷಣ ಬರೆದವರು ಯಾರು ಎಂಬ ಆಂತರಿಕ ತನಿಖೆಗೆ ಸೂಚಿಸಿದ್ದ ಹೈಕಮಾಂಡ್‍ಗೆ ಉತ್ತರ ಸಿಕ್ಕಿದೆ. ಭಾಷಣದ ಸಿದ್ಧಪಡಿಸಿದ ಬಗ್ಗೆ ರಾಜ್ಯ ಬಿಜೆಪಿ. ರಹಸ್ಯ ತನಿಖಾ ವರದಿ ರವಾನಿಸಿದೆ. ಭಾಷಣ ಸಿದ್ಧಪಡಿಸಿದ್ದು ವಾರ್ತಾ ಇಲಾಖೆಯ ಅಧಿಕಾರಿಗಳು ಅಲ್ಲ. ಯಡಿಯೂರಪ್ಪ ನಿವಾಸದಲ್ಲೇ ಸಿದ್ಧಗೊಂಡಿದ್ದ ಭಾಷಣದ ಸಾರಾಂಶ ಅನ್ನೋದು ಬಿಜೆಪಿ ತನಿಖಾ ವರದಿಯ ಹೈಲೈಟ್ಸ್. ಇದನ್ನೂ ಓದಿ: ಪ್ರಗತಿ ಸಭೆಯಲ್ಲಿ ಕರ್ನಾಟಕದ ಸಾಧನೆಯನ್ನು ಹೊಗಳಿದ ಮೋದಿ

    ಅಷ್ಟೇ ಅಲ್ಲ ಮೊದಲು ಯಡಿಯೂರಪ್ಪ ಭಾಷಣವನ್ನ ಓದಿ ಓಕೆ ಮಾಡಿದ್ರಂತೆ. ಆದರೆ ಯಡಿಯೂರಪ್ಪ ಭಾಷಣ ಓಕೆ ಮಾಡಿದ ಮೇಲೆ ನೆರೆ ವಿಚಾರ ಸೇರಿಸಿದ್ರಂತೆ. ಭಾಷಣದಲ್ಲಿ ನೆರೆ ಪರಿಹಾರ ಆಗ್ರಹ ಅಂಶ ಸೇರಿಸಿದವರ ಹೆಸ್ರು ಯಡಿಯೂರಪ್ಪಗೆ ಮಾತ್ರ ಗೊತ್ತಂತೆ. ಆ ಭಾಷಣದಲ್ಲಿ ನೆರೆ ವಿಚಾರ ಸೇರಿಸಿದ್ದು ಯಾರು ಎಂಬುದನ್ನ ತಿಳಿದು ಬಿಎಸ್‍ವೈ ಸೈಲೆಂಟ್ ಆಗಿದ್ದಾರೆ ಅಂತಾ ರಾಜ್ಯ ಬಿಜೆಪಿ ವರದಿ ರವಾನಿಸಿದೆ. ಹಾಗಾದ್ರೆ ಆ ಭಾಷಣದಲ್ಲಿ ನೆರೆ ಪರಿಹಾರ ಆಗ್ರಹ ವಿಚಾರ ಸೇರಿಸಿದವರು ಅಷ್ಟು ಪ್ರಮುಖರೇ? ನೆರೆ ಪರಿಹಾರವನ್ನು ಮನವಿ ರೂಪದಲ್ಲಿ ಕೇಳಲು ಹೋಗಿ ಆಗ್ರಹ ರೂಪದಲ್ಲಿ ಕೇಳಿಬಿಟ್ಟರಾ? ಈ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಕ್ಕಿಲ್ಲ.

  • ಜನರೆದುರು ನೀವು ಹೀರೋ, ನಾವು ವಿಲನ್ ಅಲ್ವಾ ಯಡಿಯೂರಪ್ಪ ಜೀ!

    ಜನರೆದುರು ನೀವು ಹೀರೋ, ನಾವು ವಿಲನ್ ಅಲ್ವಾ ಯಡಿಯೂರಪ್ಪ ಜೀ!

    ಬೆಂಗಳೂರು: ಆ ಒಂದು ದಿನ ದೆಹಲಿಯಿಂದ ಬಂತು ತುರ್ತು ಕರೆ ಬರುತ್ತೆ. ಆ ಕಡೆಯಿಂದ ತೂರಿ ಬಂದ ಮಾತಿಗೆ ಬಿಎಸ್ ಯಡಿಯೂರಪ್ಪ ಸೈಲೆಂಟ್ ಆಗ್ತಾರೆ. ಅಷ್ಟಕ್ಕೂ ಆ ಕರೆ ಮಾಡಿದವರು ಯಾರು? ಏಕೆ ಗೊತ್ತಾ? ಅನ್ನೋದನ್ನ ಕೇಳಿದ್ರೆ ನೀವು ಅಚ್ಚರಿಪಡ್ತೀರಿ. ಒಂದು ಕರೆಯ ಹಿಂದೆ ಯಡಿಯೂರಪ್ಪ ನಿಶಬ್ಧ ಕುತೂಹಲ ಹುಟ್ಟುಹಾಕಿದೆ.

    ಅಂದಹಾಗೆ ಅದು ಹೊಸ ವರ್ಷದ ಮೂರನೇ ದಿನ ಜನವರಿ 3. ದೆಹಲಿಯಿಂದ ಬಿಎಸ್‍ವೈಗೆ ತುರ್ತುಕರೆ ಬಂದೇ ಬಿಡ್ತು. ಬಿಎಸ್‍ವೈಗೆ ಕಾಲ್ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಫುಲ್ ಗರಂ ಆಗಿದ್ರಂತೆ. ತುಮಕೂರಿನಲ್ಲಿ ಪ್ರಧಾನಿ ಎದುರಿನ ಭಾಷಣಕ್ಕೆ ಗರಂ ಆದ ಅಮಿತ್ ಶಾ ಯಡಿಯೂರಪ್ಪಗೆ ಗರಂ ಕ್ಲಾಸ್ ತಗೊಂಡರಂತೆ. ನಾವು ವಿಲನ್, ತಾವು ಹೀರೋ. ಆದ್ರಲ್ಲವಾ ಯಡಿಯೂರಪ್ಪಜೀ ಅಂದ್ರಂತೆ ಅಮಿತ್ ಶಾ. ಪ್ರಧಾನಿ ಎದುರು ಈ ರೀತಿ ಮಾತನಾಡುವ ಅವಶ್ಯಕತೆ ಇತ್ತಾ ಯಡಿಯೂರಪ್ಪಜೀ, ಯಡಿಯೂರಪ್ಪಜೀ ನಿಮಗೆ ಏನಾಗಿತ್ತು? ಏಕೆ ಹೀಗೆ ಮಾಡಿದ್ರಿ ಅಂತಾ ಅಮಿತ್ ಶಾ ಪ್ರಶ್ನಿಸಿದ್ರು ಎನ್ನಲಾಗಿದೆ.

    ಆದ್ರೆ ಅಮಿತ್ ಶಾ ಮಾತಿಗೆ ಸಮರ್ಥನೆ ನೀಡದೇ ಸುಮ್ಮನಾದ ಯಡಿಯೂರಪ್ಪ, ಮನವಿ ರೂಪದಲ್ಲಿ ಹೇಳಲು ಹೋಗಿ ಆಗ್ರಹ ರೂಪ ಪಡೆದುಕೊಂಡಿದೆ. ನಿಮ್ಮನ್ನ ಮುಖಾಮಖಿ ಭೇಟಿಯಾದಾಗ ಮಾತಾಡ್ತೀನಿ, ನಾನು ಅಸಮಾಧಾನ ಅರ್ಥದಲ್ಲಿ ಹೇಳಿಲ್ಲ ಅಂತಾ ಚುಟುಕು ಸ್ಪಷ್ಟನೆ ನೀಡಿದರಂತೆ. ಆದರೆ ಯಡಿಯೂರಪ್ಪ ಪ್ರತಿಕ್ರಿಯೆಗೆ ತೃಪ್ತರಾಗದ ಅಮಿತ್ ಶಾ ಗರಂ ಆಗಿಯೇ ಕಾಲ್ ಕಟ್ ಮಾಡಿದರು ಎನ್ನಲಾಗಿದೆ.

    ಒಟ್ಟಿನಲ್ಲಿ ಸಿಎಂ ಭಾಷಣವನ್ನ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಯಡಿಯೂರಪ್ಪ ಮುಖಾಮುಖಿ ಭೇಟಿಯಾದಾಗ ಅಮಿತ್ ಶಾಗೆ ಏನ್ ಹೇಳ್ತಾರೆ? ಯಾವ ರೀತಿ ಸಮರ್ಥಿಸಿಕೊಳ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.