Tag: ನೆಮಮಂಗಲ

  • ಸತತ 4 ಬಾರಿ ಪಂಚಾಯ್ತಿ ಸಭೆಗೆ ಗೈರು- ಸದಸ್ಯತ್ವದಿಂದ ನಾಲ್ವರು ಅನರ್ಹ

    ಸತತ 4 ಬಾರಿ ಪಂಚಾಯ್ತಿ ಸಭೆಗೆ ಗೈರು- ಸದಸ್ಯತ್ವದಿಂದ ನಾಲ್ವರು ಅನರ್ಹ

    ನೆಲಮಂಗಲ: ಇಷ್ಟು ದಿನ ಅನರ್ಹ ಶಾಸಕರರ ಸುದ್ದಿ ನೋಡಿದ್ದೀರಿ. ಇದೀಗ ಪಂಚಾಯ್ತಿ ಸದಸ್ಯರನ್ನು ಅನರ್ಹ ಮಾಡಿರುವ ಘಟನೆಯೊಂದು ನಡೆದಿದೆ.

    ಹೌದು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯ್ತಿಯ ನಾಲ್ವರ ಸದಸ್ಯತ್ವ ರದ್ದಾಗಿದೆ. ಗ್ರಾಮ ಪಂಚಾಯ್ತಿಯ ನಾಲ್ಕು ಸಭೆಗಳಿಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಈ ನಾಲ್ವರನ್ನ ಸದಸ್ಯತ್ವದಿಂದ ಅನರ್ಹ ಮಾಡಿ ಗ್ರಾಮೀಣಾಭಿವೃದ್ಧಿ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ.

    ಎಲ್ಲಾ ವಿಚಾರಣೆಗಳ ಬಳಿಕ ಗ್ರಾಮೀಣಾಭಿವೃದ್ಧಿ ಪಂಚಾಯತ್ ಅಧಿನಿಯಮ 1993ರ 43(ಎ)(111)ರಡಿ ಗ್ರಾಮ ಪಂಚಾಯ್ತಿ ಸದಸ್ಯರಾದ ಸಾವಿತ್ರಮ್ಮ, ನರಸಮ್ಮ, ಹನುಮಂತರಾಯಪ್ಪ, ಶಾಂತಮ್ಮ ಇವರುಗಳ ಸದಸ್ಯತ್ವ ರದ್ದು ಮಾಡಿದೆ.

    ಒಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಸಭೆಗಳ ಬಗ್ಗೆ ನಿರ್ಲಕ್ಷ್ಯವಹಿಸಿ ಬೇಕಾಬಿಟ್ಟಿ ಸಭೆಗಳಿಗೆ ಆಗಮಿಸುತ್ತಿದ್ದ, ಗೈರಾಗುತ್ತಿದ್ದ ಎಲ್ಲಾ ಪಂಚಾಯ್ತಿಯ ಸದಸ್ಯರಿಗೂ ಎಚ್ಚರಿಕೆಯ ಕರೆ ಗಂಟೆಯಾಗಿದೆ.

  • ಒಂದು ಪಿಡಿಒ ಹುದ್ದೆಗೆ ಮೂವರ ಪೈಪೋಟಿ – ಗ್ರಾಮ ಪಂಚಾಯಿತಿ ಸದಸ್ಯರಿಂದ ಮೌನ ಪ್ರತಿಭಟನೆ

    ಒಂದು ಪಿಡಿಒ ಹುದ್ದೆಗೆ ಮೂವರ ಪೈಪೋಟಿ – ಗ್ರಾಮ ಪಂಚಾಯಿತಿ ಸದಸ್ಯರಿಂದ ಮೌನ ಪ್ರತಿಭಟನೆ

    ನೆಲಮಂಗಲ: ಒಂದು ಪಿಡಿಒ ಹುದ್ದೆಗೆ ಮೂವರು ಕಿತ್ತಾಟ ನಡೆದ ಘಟನೆ ಡಾಬಸ್ ಪೇಟೆ ಪಂಚಾಯತಿಯಲ್ಲಿ ನಡೆದಿದೆ. ಅಧಿಕಾರಿಗಳ ಈ ವರ್ತನೆಗೆಯನ್ನು ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೈಗಾರಿಕಾ ಪಂಚಾಯತಿಯಾದ ಡಾಬಸ್ ಪೇಟೆಯಲ್ಲಿ, ಪಂಚಾಯತಿ ಸದಸ್ಯರು ಮೌನ ಪ್ರತಿಭಟನೆ ನಡೆಸಿದ್ದಾರೆ.

    ಗ್ರಾಮ ಪಂಚಾಯತಿ ಪಿಡಿಒಗಳಾದ ದಿನೇಶ್ ಮತ್ತು ರವೀಂದ್ರ ಬೇಡ ಎಂದು ಗ್ರಾಮ ಪಂಚಾಯತಿ ಸದಸ್ಯರು ಸ್ಥಳೀಯ ಶಾಸಕ ಕೆ.ಶ್ರೀನಿವಾಸಮೂರ್ತಿ ಅವರಿಗೆ ಒತ್ತಾಯ ಮಾಡಿದ್ದರು. ಈ ಹಿಂದೆ ಪಿಡಿಒ ಆಗಿದ್ದ ದಿನೇಶ್ ಕುಮಾರ್ ಗೆ ವರ್ಗಾವಣೆಯಾಗಿದ್ದು, ಅವರು ಹುದ್ದೆಯನ್ನು ತೆರವು ಮಾಡಿಲ್ಲ.

    ಇತ್ತ ಇದೇ ಹುದ್ದೆಗೆ ನೇಮಕವಾಗಿರುವ ರವೀಂದ್ರ ಅವರು ಮೇಲೆ, ಅವರು ಈ ಹಿಂದೆ ಕಾರ್ಯನಿರ್ವಹಿಸಿದ್ದ ಪಂಚಾಯತಿಯಲ್ಲಿ ಅಕ್ರಮದ ಆರೋಪ ಹೇಳಿ ಬಂದಿತ್ತು. ಆದ್ದರಿಂದ ಈ ಇಬ್ಬರು ನಮಗೆ ಬೇಡ ಎಂದು ಪಂಚಾಯಿತಿ ಸದಸ್ಯರು ಒತ್ತಾಯ ಮಾಡಿದ್ದರು. ಅಲ್ಲದೇ ತಾತ್ಕಾಲಿಕವಾಗಿ ಬೇರೆ ಪಿಡಿಓ ನೇಮಕಾತಿಗೆ ಜಿಲ್ಲಾ ಪಂಚಾಯತಿ ಸಿಇಒಗೆ ಒತ್ತಾಯಿಸಿದರು. ಇತ್ತ ಗ್ರಾಮ ಪಂಚಾಯತಿ ಸದಸ್ಯರಾದ ಜೆಡಿಎಸ್ ಮತ್ತು ಬಿಜೆಪಿ ಬಣದ ನಡುವೆ ಕಿತ್ತಾಟ ನಡೆದಿದೆ. ಅಲ್ಲದೇ ಪಿಡಿಒ ಸ್ಥಾನಕ್ಕೆ ನಿರಂಜನಮೂರ್ತಿ ಎಂಬ ಅಧಿಕಾರಿಯ ಹೆಸರು ಕೇಳಿ ಬರುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.

    ಇದೇ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಕೆ.ಶ್ರೀನಿವಾಸಮೂರ್ತಿ, ಪಿಡಿಒಗಳ ಹಗ್ಗಾಜಗ್ಗಾಟ ಸಂಗತಿ ನನಗೂ ತಿಳಿದು ಬಂದಿದೆ. ಇಂದು ಎಲ್ಲಾ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಸದಸ್ಯರು ಪಿಡಿಒ ಅಧಿಕಾರಿಯಾಗಿ ಹೊಸಬರನ್ನು ನೇಮಿಸಲು ಒತ್ತಾಯಿಸಿದ್ದಾರೆ. ಅದರಂತೆಯೇ ಮುಂದಿನ ದಿನಗಳಲ್ಲಿ ತಾತ್ಕಾಲಿಕ ಪಿಡಿಒ ನೇಮಕಾತಿಗೆ ಒತ್ತಾಯಿಸಲಿದ್ದೇವೆ ಎಂದರು. ಈ ವೇಳೆ ಸೋಂಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮೀದೇವಿ ಆಂಜನಮೂರ್ತಿ, ಗ್ರಾಮ ಪಂಚಾಯತಿ ಸದಸ್ಯರಾದ ಇಂದ್ರಮ್ಮ, ಶ್ರೀನಿವಾಸಮೂರ್ತಿ, ಚಂದ್ರಣ್ಣ, ಪುರುಷೋತ್ತಮ್, ವಿ.ಎಸ್.ಎಸ್.ಎನ್.ವೆಂಕಟೇಶ್ ಹಾಜರಿದ್ದರು.