Tag: ನೂತನ ಸಚಿವರು

  • ಸಿದ್ದು, ಡಿಕೆಶಿ ಮೇಲೆ ನೂತನ ಸಚಿವರಿಗೆ ಲವ್!

    ಸಿದ್ದು, ಡಿಕೆಶಿ ಮೇಲೆ ನೂತನ ಸಚಿವರಿಗೆ ಲವ್!

    ಬೆಂಗಳೂರು: ವಿಧಾನಸಭೆಯಲ್ಲಿ ಇವತ್ತು ಒಂದು ಕುತೂಹಲ ಇತ್ತು. ನೂತನ ಸಚಿವರು ಸಿದ್ದರಾಮಯ್ಯ ಜತೆ ಹೇಗೆ ರಿಯಾಕ್ಟ್ ಮಾಡ್ತಾರೆ ಅನ್ನೋದ್ರ ಬಗ್ಗೆ ಎಲ್ಲರ ಗಮನ ಇತ್ತು. ರಾಜ್ಯಪಾಲರ ಭಾಷಣದ ಬಳಿಕ ಕೆಲವೊಂದು ಸ್ವಾರಸ್ಯಕರ ಘಟನೆಗಳು ನಡೆಯಿತು. ನೂತನ ಸಚಿವರ ಹತ್ರ ಕೆಲ ಕಾಂಗ್ರೆಸ್, ಜೆಡಿಎಸ್ ಶಾಸಕರು ಹೋಗಿ ವಿಶ್ ಮಾಡಿದರು. ಮತ್ತೆ ಕೆಲವು ನೂತನ ಸಚಿವರು ಕಾಂಗ್ರೆಸ್, ಜೆಡಿಎಸ್ ಶಾಸಕರ ಹತ್ತಿರ ಹೋಗಿ ಕೈ ಕುಲುಕಿ ಬಂದ್ರು. ಆದ್ರೆ ಹೆಚ್ಚು ಗಮನ ಸೆಳೆದಿದ್ದು ಸಿದ್ದರಾಮಯ್ಯರನ್ನ ಯಾರೆಲ್ಲ ವಿಶ್ ಮಾಡ್ತಾರೆ ಅನ್ನೋದು.

    ವಿಧಾನಸಭೆಯಲ್ಲಿ ಮೊದಲ ಸಾಲಿನ ಎರಡನೇ ಆಸನದಲ್ಲಿ ಸಿದ್ದರಾಮಯ್ಯ ಕುಳಿತಿದ್ದ ಕಡೆ ಮೊದಲು ಸಚಿವ ಬಿ.ಸಿ.ಪಾಟೀಲ್ ಬಂದರು. ಹೆಚ್‍ಡಿ ಕುಮಾರಸ್ವಾಮಿ, ಹೆಚ್.ಕೆ.ಪಾಟೀಲ್, ಡಿಕೆ ಶಿವಕುಮಾರ್ಚ ಮಾತನಾಡಿಸಿದ ಬಳಿಕ ನೇರವಾಗಿ ಸಿದ್ದರಾಮಯ್ಯ ಹತ್ತಿರ ಬಂದು ಬಿ.ಸಿ.ಪಾಟೀಲ್ ಕೈ ಕೊಟ್ಟರು. ಮಿನಿಸ್ಟರ್ ಆಗಿದೀವಿ ಅಂತಾ ಹಸಿರು ಶಾಲ್ ಮೇಲೆ ಕೈ ಹಾಕಿದ್ರು. ಇದಾದ ಬಳಿಕ ಉಳಿದ ಸಚಿವರು ಸ್ವಲ್ಪ ಹೊತ್ತು ಕಾಯುತ್ತಿದ್ದರು. ಹೆಚ್‍ಡಿ ಕುಮಾರಸ್ವಾಮಿ ಎದ್ದು ಹೋದ ಮೇಲೆ ನಾರಾಯಣಗೌಡ, ಗೋಪಾಲಯ್ಯ, ಶಿವರಾಂ ಹೆಬ್ಬಾರ್, ಬೈರತಿ ಬಸವರಾಜು ಸಿದ್ದರಾಮಯ್ಯ ಹತ್ತಿರ ಬಂದು ವಿಶ್ ಮಾಡಿ ಮಾತನಾಡಿದರು.

    ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಬಳಿ ಬಂದ ಬಂದ ಮಹೇಶ್ ಕುಮಟಹಳ್ಳಿ ಬೈಯ್ಕೊಂಡ್ರೆ ಬೈಯ್ಕೋಬಿಡಿ ಸರ್ ಅಂತಾ ಕೈ ಮುಗಿದ್ರು. ಆಗ ಸಿದ್ದರಾಮಯ್ಯ ರಿಯಾಕ್ಟ್ ಮಾಡಿ ಮಿನಿಸ್ಟರ್ ಆಗಪ್ಪಾ ಅಂತೇಳಿ ನಗುತ್ತಿದ್ದರು. ಹೀಗೆ ನೂತನ ಸಚಿವರು ಬಂದು ಸಿದ್ದರಾಮಯ್ಯ ಜತೆ ಮಾತನಾಡುತ್ತಿದ್ದರೆ, ಅವರ ಹಿಂದಿನ ಸಾಲಿನಲ್ಲಿ ಕುಳಿತಿದ್ದ ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಬೈರತಿ ಸುರೇಶ್ ನೋಡಿ ನಗುತ್ತಿದ್ದರು. ಆ ದೃಶ್ಯಗಳನ್ನು ನೋಡಿದ್ಮೇಲೆ ಅಯ್ಯೋ ಹೊರಗೆ ಹೀಗೆ ಹಿಗ್ಗಾಮುಗ್ಗಾ ಬೈದಾಡಿಕೊಂಡವರು ಇವರೇನಾ ಅಂತಾ ಅನ್ನಿಸದೇ ಇರಲಾರದು.

  • ಖಾತೆ ಫೈಟ್ ಆಯ್ತು – ಈಗ ಜಿಲ್ಲಾ ಉಸ್ತುವಾರಿ ಜಂಜಾಟ

    ಖಾತೆ ಫೈಟ್ ಆಯ್ತು – ಈಗ ಜಿಲ್ಲಾ ಉಸ್ತುವಾರಿ ಜಂಜಾಟ

    ಬೆಂಗಳೂರು: ಖಾತೆ ಹಂಚಿಕೆ ಮುಗಿದ ಬೆನ್ನಲ್ಲೇ ಈಗ ಜಿಲ್ಲಾ ಉಸ್ತುವಾರಿ ಜಂಜಾಟ ಶುರುವಾಗಿದೆ. ಸಿಎಂ ಯಡಿಯೂರಪ್ಪಗೆ ಈಗ ಜಿಲ್ಲಾ ಉಸ್ತುವಾರಿಗಳನ್ನು ಹಂಚುವ ಟೆನ್ಷನ್. ನೂತನ ಸಚಿವರ ಚಿತ್ತವೂ ಈಗ ಜಿಲ್ಲಾ ಉಸ್ತುವಾರಿ ಹುದ್ದೆಗಳ ಮೇಲೆ ಬಿದ್ದಿದೆ. ತಮ್ಮ ಜಿಲ್ಲೆಗೇ ಉಸ್ತುವಾರಿ ಸಚಿವರಾಗಲು ಮಿತ್ರಮಂಡಳಿ ಕಸರತ್ತು ಆರಂಭಿಸಿದ್ದಾರೆ.

    ಆದರೆ ಸಿಎಂ ಪ್ಲಾನೇ ಬೇರೆ ಇದೆ. ಜಿಲ್ಲಾ ಉಸ್ತುವಾರಿಗಳ ಮೂಲಕ ಮುಂದಿನ ಚುನಾವಣೆ ಲೆಕ್ಕಾಚಾರ ಹಾಕುತ್ತಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಜಿಲ್ಲಾ ಉಸ್ತುವಾರಿ ಹಂಚಲು ಸಿಎಂ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಒಕ್ಕಲಿಗರು ಹೆಚ್ಚಿರುವ ಜೆಡಿಎಸ್ ಭದ್ರಕೋಟೆ ಕ್ಷೇತ್ರಗಳ ಮೇಲೆಯೇ ಸಿಎಂಗೆ ಕಣ್ಣು ಬಿದ್ದಿದೆ. ಒಕ್ಕಲಿಗರ ಮತದಾರರು ಇರುವ ಜೆಡಿಎಸ್ ಕೋಟೆಗಳಿಗೆ ಒಕ್ಕಲಿಗ ಸಚಿವರನ್ನೇ ಹಾಕಲು ಸಿಎಂ ಮುಂದಾಲೋಚನೆ ಮಾಡಿದ್ದಾರೆ. ಮುಂದಿನ ಚುನಾವಣೆವರೆಗೆ ಜೆಡಿಎಸ್ ಕೋಟೆಗಳಲ್ಲಿ ಬಿಜೆಪಿ ಬಾವುಟ ಹಾರಿಸಲು ಸಿಎಂ ತಂತ್ರ ಕುತೂಹಲ ಹುಟ್ಟಿಸಿದೆ.

    ಜೆಡಿಎಸ್ ಭದ್ರ ಕೋಟೆಗಳಾದ ಹಾಸನ, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳನ್ನ ಬಿಜೆಪಿ ಟಾರ್ಗೆಟ್ ಮಾಡಿದೆ. ಹಾಗಾಗಿ ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಿಗೆ ಒಕ್ಕಲಿಗ ಸಚಿವರನ್ನೇ ಉಸ್ತುವಾರಿ ಸಚಿವ ಮಾಡಲು ಸಿಎಂ ಮುಂದಾಗಿದ್ದಾರೆ. ಸದ್ಯಕ್ಕೆ ಸಿಎಂ ಅವರ ಈ ಜಾತಿ ಲೆಕ್ಕಾಚಾರದ ಪ್ಲಾನ್ ಬೆಳಗಾವಿ ಹೊರತುಪಡಿಸಿ ಉಳಿದ ಜಿಲ್ಲೆಗೆ ಅನ್ವಯಿಸಲಿದೆ. ಬೆಳಗಾವಿ ಉಸ್ತುವಾರಿ ಆಗಲು ಸಾಕಷ್ಟು ಪೈಪೋಟಿ ಇದ್ದು, ಅದನ್ನು ಬೇರೆ ರೀತಿಯಲ್ಲಿ ಡೀಲ್ ಮಾಡಲು ಸಿಎಂ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಸಂಭಾವ್ಯ ಜಿಲ್ಲಾ ಉಸ್ತುವಾರಿ ಸಚಿವರು

    ಹಾಸನ- ಆರ್.ಅಶೋಕ್ ಅಥವಾ ಡಾ.ಅಶ್ವಥ್ ನಾರಾಯಣ್ ಅಥವಾ ಎಸ್.ಟಿ.ಸೋಮಶೇಖರ್
    ರಾಮನಗರ- ಆರ್.ಅಶೋಕ್ ಅಥವಾ ಡಾ.ಅಶ್ವಥ್ ನಾರಾಯಣ್
    ಮಂಡ್ಯ- ನಾರಾಯಣ ಗೌಡ
    ರಾಯಚೂರು- ಎಸ್.ಟಿ.ಸೋಮಶೇಖರ್
    ಬಳ್ಳಾರಿ- ಆನಂದ್ ಸಿಂಗ್
    ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್
    ಉತ್ತರ ಕನ್ನಡ- ಶಿವರಾಮ್ ಹೆಬ್ಬಾರ್
    ಮಡಿಕೇರಿ- ಕೆ.ಗೋಪಾಲಯ್ಯ
    ದಾವಣಗೆರೆ- ಬಿ.ಸಿ.ಪಾಟೀಲ್
    ಯಾದಗಿರಿ- ಶ್ರೀಮಂತ ಪಾಟೀಲ್
    ಕೊಪ್ಪಳ- ಬೈರತಿ ಬಸವರಾಜು

  • ನಮ್ಮ ಕೈಲಿ ಆಗ್ಲಿಲ್ಲ, ಆ ಪುಣ್ಯಾತ್ಮ ಮಂಡ್ಯ ಅಭಿವೃದ್ಧಿ ಮಾಡಲಿ – ಎಚ್‍ಡಿಕೆ ವ್ಯಂಗ್ಯ

    ನಮ್ಮ ಕೈಲಿ ಆಗ್ಲಿಲ್ಲ, ಆ ಪುಣ್ಯಾತ್ಮ ಮಂಡ್ಯ ಅಭಿವೃದ್ಧಿ ಮಾಡಲಿ – ಎಚ್‍ಡಿಕೆ ವ್ಯಂಗ್ಯ

    ಮೈಸೂರು: ನಮ್ಮ ಕೈಲಿ ಆಗಲಿಲ್ಲ ಆ ಪುಣ್ಯಾತ್ಮ ಮಂಡ್ಯ ಅಭಿವೃದ್ಧಿ ಮಾಡಲಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ನಾರಾಯಣ ಗೌಡ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಎಚ್‍ಡಿ ಕೋಟೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಮಧ್ಯಾಹ್ನಕ್ಕೊಂದು ಸಂಜೆಗೊಂದು ತೀರ್ಮಾನ ಆಗುತ್ತಿದೆ. ಮುಂದೆ ಏನಾಗಲಿದೆ ಎಂಬುದನ್ನ ಕಾದು ನೋಡೋಣ. ಯಡಿಯೂರಪ್ಪನವರು ಸರ್ಕಾರ ಹೇಗೆ ಉಳಿಸಿ ಕೊಳ್ಳಬೇಕೆಂಬುದರಲ್ಲಿ ತಜ್ಞರಿದ್ದಾರೆ. ಸರ್ಕಾರ ಬಿಳಿಸೋದು ಹಾಗೂ ಸರ್ಕಾರ ರಚಿಸೋದು ಅವರಿಗೆ ಕರಗತ ಆಗಿದೆ. ಆ ಅನುಭವದಲ್ಲಿ ಈ ಸರ್ಕಾರ ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗೆ ಇದೆ ಎಂದು ಹೇಳಿದರು.

    ಸರ್ಕಾರ ಎಷ್ಟು ದಿನ ಇರುತ್ತೆ ಅಂತ ಹೇಳೋಕೆ ನಾನು ಭವಿಷ್ಯಕಾರನಲ್ಲ. ಆದರೆ ಇಂದಿನ ಕಾರ್ಯಕ್ರಮಕ್ಕೆ ನನಗೆ ಯಾವುದೇ ಆಹ್ವಾನ ಬಂದಿಲ್ಲ ಹಾಗಾಗಿ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಬಹಳ ಕಷ್ಟ ಪಟ್ಟು, ಆಸೆ ಹೊತ್ತು ಮಂತ್ರಿಗಳಾಗಿದ್ದಾರೆ. ಅವರಿಂದ ನಾನು ಒಳ್ಳೆಯ ಆಡಳಿತ ನಿರೀಕ್ಷೆ ಮಾಡುತ್ತೇನೆ ಎಂದು ತಿಳಿಸಿದರು.

    ಮಂಡ್ಯದಲ್ಲಿ ನಾರಾಯಣಗೌಡ ಅಭಿವೃದ್ಧಿ ಮಾಡಿ ತೋರಿಸಲಿ. ನಮ್ ಕೈಯಲ್ಲಂತು ಆಗಲಿಲ್ಲ ಆ ಪುಣ್ಯಾತ್ಮ ಮಾಡಲಿ. ಹೊಸ ಸಚಿವರು ಟೀಕೆ ಮಾಡುತ್ತಾರೋ ಅಭಿವೃದ್ಧಿ ಮಾಡುತ್ತಾರೋ ಕಾದು ನೋಡೋಣ. ನಮ್ಮ ಪಕ್ಷಗಳಿಂದ ಹೊರ ಹೋದ ಶಾಸಕರಿಗೆ ತೃಪ್ತಿ ಆಗಿದೆ. ಅವರು ಇದೀಗಾ ಸಂಪತ್ಭರಿತರಾಗಿದ್ದಾರೆಂದು ನೂತನ ಸಚಿವರಿಗೆ ಎಚ್‍ಡಿಕೆ ವ್ಯಂಗ್ಯವಾಡಿ ಶುಭಾಶಯ ಕೋರಿದ್ದಾರೆ.

  • ‘ಹಲೋ ನ್ಯೂ ಮಿನಿಸ್ಟರ್ಸ್, ನೀವು ಪರ್ಮನೆಂಟ್ ಅಲ್ಲ 6 ತಿಂಗಳು ಚಾನ್ಸ್’

    ‘ಹಲೋ ನ್ಯೂ ಮಿನಿಸ್ಟರ್ಸ್, ನೀವು ಪರ್ಮನೆಂಟ್ ಅಲ್ಲ 6 ತಿಂಗಳು ಚಾನ್ಸ್’

    – ನೂತನ ಸಚಿವರಿಗೆ ಬಿಜೆಪಿ ಹೈಕಮಾಂಡ್‍ನಿಂದ ಖಡಕ್ ಸಂದೇಶ

    ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದ 10 ಜನ ಅರ್ಹ ಶಾಸಕರು ಸಚಿವ ಸ್ಥಾನ ಪಡೆದು ಫುಲ್ ಖುಷ್ ಮೂಡ್‍ನಲ್ಲಿ ಇರುವಾಗಲೇ ಬಿಜೆಪಿ ಹೈಕಮಾಂಡ್ ಖಡಕ್ ಸಂದೇಶವೊಂದನ್ನು ರವಾನಿಸಿದೆ.

    ಹಲೋ ನ್ಯೂ ಮಿನಿಸ್ಟರ್ಸ್, ನೀವು ಪರ್ಮನೆಂಟ್ ಅಲ್ಲ. 6 ತಿಂಗಳು ಚಾನ್ಸ್ ಎಂದು ಬಿಜೆಪಿ ಹೈಕಮಾಂಡ್‍ನಿಂದ ನೂತನ ಸಚಿವರಿಗೆ ಸಂದೇಶ ರವಾನೆಯಾಗಿದೆ. ‘ಕೆಲಸ ಚೆನ್ನಾಗಿ ಮಾಡುವವರು. ಪಕ್ಷಕ್ಕೆ ಗೌರವ ಕೊಡುವವರು ಪೂರ್ಣ ಅವಧಿಯವರೆಗೆ ಇರುತ್ತಾರೆ. ಮಂತ್ರಿ ಮಾಡಬೇಕು ಮಾಡಿದ್ದೇವೆ. ಆದ್ರೆ ಎಷ್ಟು ವರ್ಷದವರೆಗೆ ಮಂತ್ರಿ ಆಗಿಯೇ ಇರುತ್ತೀರಿ ಎನ್ನುವ ಬಗ್ಗೆ ನಾವು ಈಗಲೇ ಗ್ಯಾರಂಟಿ ನೀಡುವುದಿಲ್ಲ ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಮಂತ್ರಿ ಪದವಿ ಸಿಕ್ಕಿದ ನಂತರ 6 ತಿಂಗಳ ಬಳಿಕ ಮೌಲ್ಯಮಾಪನ ನಡೆಯುತ್ತಿದೆ. ಈ ಮೌಲ್ಯಮಾಪನದಲ್ಲಿ ಫೇಲ್ ಆದವರು ಮನೆಗೆ ಹೋಗುವುದು ಪಕ್ಕಾ. ಸಂಪುಟ ಪುನಾರಚನೆ ವೇಳೆ ಕಳಪೆ ಸಾಧನೆ ತೋರಿದವರು ಮಂತ್ರಿಮಂಡಲದಲ್ಲಿ ಉಳಿದುಕೊಳ್ಳುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ನಾಯಕರು ತಿಳಿಸಿದ್ದಾರೆ. ಇದರಿಂದಾಗಿ ನೂತನ ಸಚಿವರು ಸ್ವಲ್ಪ ಭಯಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ.

    ಇತ್ತ ಸಿಎಂ ಯಡಿಯೂರಪ್ಪ ಅವರು, ಪ್ರಮಾಣ ವಚನ ಸ್ವೀಕರಿಸಿದ ನೂತನ 10 ಮಂದಿ ಸಚಿವರಿಗೆ ಸಲಹೆಗಳನ್ನು ನೀಡಿದ್ದಾರೆ. ನೂತನ ಸಚಿವರ ಜೊತೆ ಸಂಪುಟ ಕೊಠಡಿಯಲ್ಲಿ ಸಭೆ ನಡೆಸಿದ್ದ ಸಿಎಂ, ಆರಂಭದಲ್ಲಿ ಅಭಿನಂದನೆ ತಿಳಿಸಿ ಸರ್ಕಾರ ಮತ್ತು ಪಕ್ಷದಲ್ಲಿ ಯಾವ ರೀತಿ ಇರಬೇಕೆಂಬ ಬಗ್ಗೆ ಪಾಠ ಮಾಡಿದ್ದರು.

    ನಿಮ್ಮನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ ಭರವಸೆಯನ್ನು ಈಡೇರಿಸಿದ್ದೇನೆ. ಆದರೆ ಖಾತೆಗಾಗಿ ನೀವು ಸ್ವಲ್ಪ ಕಾಯಬೇಕು. ಖಾತೆಗಳ ಬಗ್ಗೆ ಮಾಧ್ಯಮಗಳ ಮುಂದೆ ಬೇಡಿಕೆ ಇಡಬೇಡಿ. ಹೈಕಮಾಂಡ್ ಜೊತೆ ಚರ್ಚಿಸಿ ಖಾತೆಗಳನ್ನು ಅಂತಿಮಗೊಳಿಸುತ್ತೇನೆ ಎಂದು ಹೇಳಿದ್ದರು.

  • ರಾಜ್ಯದಲ್ಲಿ ಪ್ರವಾಹ ಭೀತಿ- ಹೊಸ ಸಚಿವರಿಗೆ ದುಬಾರಿ ಕಾರಿನ ಶೋಕಿ

    ರಾಜ್ಯದಲ್ಲಿ ಪ್ರವಾಹ ಭೀತಿ- ಹೊಸ ಸಚಿವರಿಗೆ ದುಬಾರಿ ಕಾರಿನ ಶೋಕಿ

    ಬೆಂಗಳೂರು: ರಾಜ್ಯದಲ್ಲಿ ಪ್ರವಾಹದ ಭೀಕರತೆಗೆ ಜನರು ತತ್ತರಿಸಿ ಹೋಗಿದ್ದಾರೆ. ಅರ್ಧ ಕರ್ನಾಟಕದ ಜನರ ಬದುಕು ಪ್ರವಾಹದಿಂದ ಬೀದಿಗೆ ಬಂದಿದೆ. ಇತ್ತ ಕೇಂದ್ರದಿಂದ ರಾಜ್ಯಕ್ಕೆ ಬಿಡಿಗಾಸು ಪರಿಹಾರ ಸಿಕ್ಕಿಲ್ಲ. ಆದರೆ ನೂತನ ಸಚಿವರಿಗೆ ಮಾತ್ರ ಕಾಸ್ಟ್ಲಿ ಕಾರಿನ ವ್ಯಾಮೋಹ ಶುರುವಾಗಿದೆ.

    ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೂ ಕೂಡ ಪ್ರವಾಹ ಪರಿಹಾರ ಧನವನ್ನು ಬಿಜೆಪಿ ನಾಯಕರಿಗೆ ಕೊಡಿಸಲು ವಿಳಂಬವಾಗುತ್ತಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದ ಹೊಸ ಸಚಿವರಿಗೆ ಓಡಾಡೋಕೆ ಮಾತ್ರ ದುಬಾರಿ ಕಾರು ಬೇಕಂತೆ. ಸದ್ಯ 15 ಲಕ್ಷದಿಂದ 23 ಲಕ್ಷದ ಇನ್ನೋವಾ ಕಾರನ್ನು ನೂತನ ಸಚಿವರುಗಳಿಗೆ ನೀಡಲಾಗಿದ್ದು, ನಮಗೆ ಇದರಲ್ಲಿ ಓಡಾಡೋಕೆ ಆಗಲ್ಲ 40-45 ಲಕ್ಷದ ಫಾರ್ಚೂನರ್ ಕಾರೇ ಬೇಕು ಎಂದು ಸಚಿವರು ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಅರ್ಧ ರಾಜ್ಯದ ಜನ ಸೂರಿಲ್ಲದೇ ಕಣ್ಣೀರಿನಲ್ಲಿ ಕೈತೊಳೆಯುವ ಈ ಪರಿಸ್ಥಿತಿಯಲ್ಲಿ ಪ್ರಭಾವಿ ಮುಖಂಡರು ಕಾಸ್ಟ್ಲಿ ಕಾರಿಗೆ ಡಿಮ್ಯಾಂಡ್ ಇಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ. ಸಚಿವರಿಗೆ ಈವರೆಗೂ ಖಾತೆಯೇ ಹಂಚಿಕೆಯಾಗಿಲ್ಲ, ಅಷ್ಟರಲ್ಲೇ ಶೋಕಿ ಶುರು ಮಾಡಿಕೊಂಡಿರುವ ಪ್ರಭಾವಿ ಸಚಿವರುಗಳ ಕಾರು ಕ್ಯಾತೆಗೆ ಜನ ಕೆಂಡಾಮಂಡಲರಾಗಿದ್ದಾರೆ.

  • ನೂತನ ಸಚಿವರಿಗೆ ಸಿಎಂ ಯಡಿಯೂರಪ್ಪ ಖಡಕ್ ಸೂಚನೆ

    ನೂತನ ಸಚಿವರಿಗೆ ಸಿಎಂ ಯಡಿಯೂರಪ್ಪ ಖಡಕ್ ಸೂಚನೆ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಸಂಪುಟ ವಿಸ್ತರಣೆ ನಡೆದ ನಂತರ ಔಪಚಾರಿಕ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಈ ವೇಳೆ ಅವರು ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುವಂತೆ ನೂತನ ಸಚಿವರಿಗೆ ಸೂಚನೆ ನೀಡಿದರು.

    ಸಭೆಯಲ್ಲಿ ಯಡಿಯೂರಪ್ಪ ಅವರು, ನಮ್ಮ ಸರ್ಕಾರದ ಮೊದಲ ಆದ್ಯತೆ ಪ್ರವಾಹ ಸಂತ್ರಸ್ತರ ನೋವಿಗೆ ಸ್ಪಂದಿಸುವುದು. ಎರಡು ದಿನ ಪ್ರವಾಹ ಪ್ರದೇಶಗಳಿಗೆ ಹೋಗಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಪರಿಶೀಲನಾ ಸಭೆ ನಡೆಸಬೇಕು. ಬಳಿಕ ಪ್ರವಾಹದಿಂದ ತೀವ್ರ ತೊಂದರೆಯಾಗಿರುವ ಗ್ರಾಮಗಳಿಗೆ ಭೇಟಿ ನೀಡಿ, ಸಂತ್ರಸ್ತರೊಂದಿಗೆ ಮಾತನಾಡಿ ಅದರ ವರದಿಯನ್ನು ಸಲ್ಲಿಸಬೇಕು ಎಂದು ನೂತನ ಸಚಿವರಿಗೆ ಸೂಚಿಸಿದ್ದಾರೆ.

    ಕೆಲವು ದಿನಗಳಲ್ಲಿ ಜಿಲ್ಲಾ ಉಸ್ತುವಾರಿಯ ಹೊಣೆಗಾರಿಕೆ ಹಾಗೂ ಖಾತೆ ಹಂಚಿಕೆ ಬಗ್ಗೆ ನಿರ್ಧರಿಸುತ್ತೇನೆ. ಅಲ್ಲಿಯವರೆಗೂ ಪ್ರವಾಹದಿಂದ ಆಗಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿಕೊಳ್ಳಿ. ಮುಂದಿನ ಸಚಿವ ಸಂಪುಟ ಸಭೆಯೊಳಗೆ ಅನುಷ್ಠಾನ ಯೋಗ್ಯ ಕಾರ್ಯತಂತ್ರ ರೂಪಿಸಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಅಭಿವೃದ್ಧಿಯೆಡೆಗೆ ಮುನ್ನಡೆಸಲು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

    ಪ್ರವಾಹ ಪೀಡಿತ ಜಿಲ್ಲೆಗಳ ಉಸ್ತುವಾರಿ:
    ಬೆಳಗಾವಿ- ಲಕ್ಷಣ ಸವದಿ, ಚಿಕ್ಕೋಡಿ(ಬೆಳಗಾವಿ)- ಶಶಿಕಲಾ ಜೊಲ್ಲೆ, ವಿಜಯಪುರ- ಗೋವಿಂದ ಕಾರಜೋಳ, ಬಳ್ಳಾರಿ- ಶ್ರೀರಾಮುಲು, ಬಾಗಲಕೋಟೆ- ಕೆ.ಎಸ್ ಈಶ್ವರಪ್ಪ, ಹಾವೇರಿ- ಬಸವರಾಜ ಬೊಮ್ಮಾಯಿ, ಗದಗ- ಸಿ. ಸಿ.ಪಾಟೀಲ್, ಯಾದಗಿರಿ – ಶ್ರೀರಾಮುಲು ಮತ್ತು ಪ್ರಭು ಚೌಹಾಣ್, ಧಾರವಾಡ- ಜಗದೀಶ ಶೆಟ್ಟರ್, ಚಿಕ್ಕಮಗಳೂರು- ಸಿ.ಟಿ ರವಿ, ಉಡುಪಿ- ಕೋಟ ಶ್ರೀನಿವಾಸ್ ಪೂಜಾರಿ, ಹಾಸನ- ಮಾಧುಸ್ವಾಮಿ, ಕೊಡಗು – ಎಸ್. ಸುರೇಶ್ ಕುಮಾರ್, ಮೈಸೂರು – ಆರ್. ಅಶೋಕ್, ಚಾಮರಾಜನಗರ- ವಿ.ಸೋಮಣ್ಣ