Tag: ನೂತನ ಶೀಕ್ಷಣ ನೀತಿ

  • ನೂತನ ಶಿಕ್ಷಣ ನೀತಿಯಲ್ಲಿ ಸಂಶಯಗಳಿಗೆ ಎಡೆಯಿಲ್ಲ: ಅಶ್ವಥ್ ನಾರಾಯಣ್

    ನೂತನ ಶಿಕ್ಷಣ ನೀತಿಯಲ್ಲಿ ಸಂಶಯಗಳಿಗೆ ಎಡೆಯಿಲ್ಲ: ಅಶ್ವಥ್ ನಾರಾಯಣ್

    ಧಾರವಾಡ: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ ನಂತರ ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಡಳಿತಾತ್ಮಕವಾಗಿ ಯಾವುದೇ ಅಡೆತಡೆ ಇರುವುದಿಲ್ಲ ಹಾಗೂ ಕಲಿಕೆಗೆ ಮುಕ್ತ ಸ್ವಾತಂತ್ರ್ಯ ಇದ್ದು, ಇಡೀ ನೀತಿಯಲ್ಲಿ ಸಂಶಯ ಪಡುವಂತದ್ದೂ ಏನೂ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಹೊಸ ಶಿಕ್ಷಣ ನೀತಿಯ ಮೂಲಕ ರಾಜ್ಯವೂ ಜಗತ್ತಿಗೆ ಮುಕ್ತವಾಗಿ ತೆರೆದುಕೊಳ್ಳಲಿದೆ, ಜಾಗತಿಕ ಅವಕಾಶಗಳಲ್ಲಿ ಇರುವ ಪೈಪೋಟಿ ಎದುರಿಸಲು ನಮ್ಮ ವಿದ್ಯಾರ್ಥಿಗಳಿಗೆ ಶಕ್ತಿ ತುಂಬುತ್ತದೆ ಎಂದರು. ಇದನ್ನೂ ಓದಿ: ಆದೇಶಕ್ಕೆ ಕ್ಯಾರೇ ಎನ್ನದ ಎಸ್‍ಪಿ ಮೇಲೆ ಸಿಎಂ ಗರಂ

    ಶಿಕ್ಷಣ ನೀತಿಯೂ ಗುಣಮಟ್ಟದ ಕಲಿಕೆ ಹಾಗೂ ಗುಣಮಟ್ಟದ ಬೋಧನೆಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತದೆಯೇ ವಿನಾ ಹಳೆಯ ಸಾಂಪ್ರದಾಯಿಕ ವ್ಯವಸ್ಥೆಯಲ್ಲಿದ್ದಂತೆ ರೆಡ್ ಟೇಪಿಸಂ ಇತ್ಯಾದಿಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. 38 ವರ್ಷಗಳ ನಂತರ ಜಾರಿಗೆ ಬಂದಿರುವ ಈ ಶಿಕ್ಷಣ ನೀತಿಯನ್ನು ಕರ್ನಾಟಕ ಇಡೀ ದೇಶದಲ್ಲೇ ಎಲ್ಲರಿಗಿಂತ ಮೊದಲು ಜಾರಿ ಮಾಡುತ್ತಿದೆ. ನೀತಿಯ ಜಾರಿಗೆ ಸಮುದಾಯ ಮಟ್ಟದ ಬೆಂಬಲ-ಸಹಕಾರ ಅಗತ್ಯವಾಗಿದೆ, ಇಂಥ ಸಹಕಾರವನ್ನು ಸಮಾಜದ ಬುದ್ಧಿಜೀವಿಗಳು, ತಜ್ಞರು ಕ್ರೋಢೀಕರಣ ಮಾಡಬೇಕಿದೆ ಎಂದು ಸಚಿವರು ಕರೆ ನೀಡಿದರು.