Tag: ನುಸುಳುಕೋರರು

  • ಚಿತ್ರದುರ್ಗದಲ್ಲಿ 6 ಮಂದಿ ಬಾಂಗ್ಲಾ ನುಸುಳುಕೋರರು ಪತ್ತೆ

    ಚಿತ್ರದುರ್ಗದಲ್ಲಿ 6 ಮಂದಿ ಬಾಂಗ್ಲಾ ನುಸುಳುಕೋರರು ಪತ್ತೆ

    ಚಿತ್ರದುರ್ಗ: ನಗರದಲ್ಲಿ ಖಾಸಗಿ ಗಾರ್ಮೆಂಟ್ಸ್‌ (Private Garments) ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ 6 ಮಂದಿ ಬಾಂಗ್ಲಾ ನುಸುಳುಕೋರರು ಪತ್ತೆಯಾಗಿದ್ದು, ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಚಿತ್ರದುರ್ಗ (Chitradurga) ಡಿವೈಎಸ್ಪಿ ದಿನಕರ್, ಸಿಪಿಐ ಗುಡ್ಡಪ್ಪ, ವೆಂಕಟೇಶ ನೇತೃತ್ವದಲ್ಲಿ ದಾಳಿ ನಡೆದಿದೆ. ಬಳಿಕ ಪೊಲೀಸರು ಪರಿಶೀಲನೆ ಮುಂದುವರಿಸಿ, 15 ಜನ ಶಂಕಿತ ಬಾಂಗ್ಲಾ ನುಸುಳುಕೋರರನ್ನು (Infiltrators) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ 6 ಮಂದಿ ಬಾಂಗ್ಲಾ ನುಸುಳುಕೋರರು ಪತ್ತೆಯಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಏಕಾಏಕಿ 60,000ಕ್ಕೂ ಹೆಚ್ಚು ಬಿಪಿಎಲ್‌ ಕಾರ್ಡ್ ಎಪಿಎಲ್‌ಗೆ ಶಿಫ್ಟ್‌ – ಅರ್ಹ ಫಲಾನುಭವಿಗಳು ಕಣ್ಣೀರು

    ವಶಕ್ಕೆ ಪಡೆದವರ ಪೈಕಿ ಹೆಚ್ಚಿನವರ ಬಳಿ ಪಶ್ಚಿಮ ಬಂಗಾಳದ ಆಧಾರ್ ಕಾರ್ಡ್ ಪತ್ತೆಯಾಗಿದೆ. ಸದ್ಯ ಕೋಟೆ ಪೊಲೀಸ್ ಠಾಣೆಯಲ್ಲಿ ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರು ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಇನ್ನೂ ಬಾಂಗ್ಲಾ ನುಸುಳುಕೋರರ ಪತ್ತೆಗೆ ಮಂಗಳವಾರವೂ (ನವೆಂಬರ್‌ 19) ಪೊಲೀಸರ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮರಣದಂಡನೆಗೆ ಗುರಿಯಾದ ರಾಜೋನಾ ಕ್ಷಮಾದಾನ ಅರ್ಜಿ 2 ವಾರದಲ್ಲೇ ಇತ್ಯರ್ಥಗೊಳಿಸಿ: ಸುಪ್ರೀಂ

  • ಪಂಜಾಬ್ ಗಡಿಯಲ್ಲಿ ಐವರು ನುಸುಳುಕೋರರನ್ನು ಹೊಡೆದುರುಳಿಸಿದ ಸೇನೆ

    ಪಂಜಾಬ್ ಗಡಿಯಲ್ಲಿ ಐವರು ನುಸುಳುಕೋರರನ್ನು ಹೊಡೆದುರುಳಿಸಿದ ಸೇನೆ

    ಚಂಡೀಗಢ: ಪಾಕಿಸ್ತಾನ ಪಂಜಾಬ್ ಗಡಿಯಲ್ಲಿ ಭಾರತಕ್ಕೆ ಅಕ್ರಮವಾಗಿ ಒಳನುಸುಳುತ್ತಿದ್ದ ಐವರು ನುಸುಳುಕೋರರನ್ನು ಭಾರತೀಯ ಸೈನಿಕರು ಹೊಡೆದು ಹಾಕಿದ್ದಾರೆ.

    ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಐದು ಜನ ನುಸುಳುಕೋರರು ಪಂಜಾಬ್ ಗಡಿಯಿಂದ ಭಾರತಕ್ಕೆ ಅಕ್ರಮವಾಗಿ ಬರುತ್ತಿರುವುದನ್ನು ಸೈನಿಕರು ನೋಡಿದ್ದಾರೆ. ಈ ವೇಳೆ ಅವರನ್ನು ತಡೆಯಲು ಹೋದಾಗ ಅವರು ಸೈನಿಕರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಆಗ ಭಾರತೀಯ ಸೈನಿಕರು ಕೂಡ ದಾಳಿ ಮಾಡಿದ್ದು, ಐದು ಜನ ನುಸುಳುಕೋರರನ್ನು ಹೊಡೆದು ಹಾಕಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಭಾರತೀಯ ಸೇನೆಯ ಹಿರಿಯ ಅಧಿಕಾರಿ, ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಐದು ಮಂದಿ ನುಸುಳುಕೋರರನ್ನು ಒಂದೇ ಪ್ರಯತ್ನದಲ್ಲಿ ಭಾರತೀಯ ಸೇನೆ ಹೊಡೆದು ಹಾಕಿದೆ. ಪಾಕಿಸ್ತಾನ ಮತ್ತು ಭಾರತದ ಗಡಿ ಪ್ರದೇಶ ಸುಮಾರು 3,300 ಕಿಮೀ ವಿಸ್ತೀರ್ಣದಲ್ಲಿ ಇದೆ. ಇದರಲ್ಲಿ 553 ಕಿಮೀ ಗಡಿ ಪ್ರದೇಶ ಪಂಜಾಬ್‍ನಲ್ಲಿ ಇದೆ ಎಂದು ಹೇಳಿದ್ದಾರೆ.

    ಇಂದು ಮುಂಜಾನೆ 4.45ರ ಸುಮಾರಿಗೆ ಭಿಖಿವಿಂದ್ ಪಟ್ಟಣ ತರಣ್ ತರಣ್ ಹತ್ತಿರವಿರುವ `ದಾಲ್’ ಗಡಿ ಪೋಸ್ಟ್ ಬಳಿ ನುಸುಳುಕೋರರ ಅನುಮಾನಾಸ್ಪದ ಚಲನೆಯನ್ನು ಭಾರತೀಯ ಸೇನೆಯ 103ನೇ ಬೆಟಾಲಿಯನ್‍ನ ಸೈನಿಕರು ಗಮನಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಹೋದ ಸೈನಿಕರು ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ನುಸುಳುಕೋರರು ಸೇನೆಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಐವರು ನುಸುಳುಕೋರರು ಹತರಾಗಿದ್ದಾರೆ.

    ಶುಕ್ರವಾರ ಮಧ್ಯೆರಾತ್ರಿಯಿಂದಲೇ ಗಡಿ ಪ್ರದೇಶದಲ್ಲಿ ಕೆಲವರು ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಇದರಿಂದ ಸೇನೆ ಗಡಿ ಪ್ರದೇಶದ ಮೇಲೆ ಕಣ್ಣಿಟ್ಟಿತ್ತು. ಹೀಗಿರುವಾಗ ಮುಂಜಾನೆ ಬಂದೂಕುಗಳನ್ನು ಹಿಡಿದುಕೊಂಡು ಹುಲ್ಲಿನ ನಡುವೆ ಅವಿತುಕೊಂಡು ನುಸುಳುಕೋರರು ಬರುವುದನ್ನು ಸೇನೆ ಗಮನಿಸಿದೆ. ಈ ವೇಳೆ ಗುಂಡಿನ ದಾಳಿ ಮಾಡಿ ನುಸುಳುಕೋರರನ್ನು ಹೊಡೆದು ಹಾಕಿದೆ. ನುಸುಳುಕೋರರು ತಂದಿರುವ ಮದ್ದುಗುಂಡುಗಳಿಗಾಗಿ ಸೇನೆ ಹುಡುಕಾಟ ಮುಂದುವರಿಸಿದೆ.