Tag: ನೀಲಿ ಚಿತ್ರ

  • ಬ್ಲೂ ಫಿಲ್ಮ್ ವೀಕ್ಷಣೆ, ಚಿತ್ರೀಕರಣ ಕಾನೂನುಬದ್ಧಗೊಳಿಸಲು ಮುಂದಾದ ಉಕ್ರೇನ್

    ಬ್ಲೂ ಫಿಲ್ಮ್ ವೀಕ್ಷಣೆ, ಚಿತ್ರೀಕರಣ ಕಾನೂನುಬದ್ಧಗೊಳಿಸಲು ಮುಂದಾದ ಉಕ್ರೇನ್

    ಕೀವ್: ಕಳೆದ 3 ವರ್ಷಗಳಿಂದ ರಷ್ಯಾ (Russia) ಜೊತೆಗೆ ಉಕ್ರೇನ್ (Ukraine) ಯುದ್ಧದಲ್ಲಿ ತೊಡಗಿಕೊಂಡಿದೆ. ಹೀಗಾಗಿ ತನ್ನ ಸೇನೆಯ ಖರ್ಚು ಸೇರಿ ಯುದ್ಧದ ವೆಚ್ಚ ಭರಿಸಲು ನೀಲಿ ಚಿತ್ರಕ್ಕೆ (Blue Film) ಕಾನೂನು ಮಾನ್ಯತೆ ನೀಡಲು ಉಕ್ರೇನ್ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

    ತನ್ನ ದೇಶದಲ್ಲಿ ನೀಲಿ ಚಿತ್ರ ಚಿತ್ರೀಕರಣ, ಪ್ರಸಾರ ಮತ್ತು ವೀಕ್ಷಣೆಗೆ ಕಾನೂನು ಮಾನ್ಯತೆ ನೀಡಲು ಉಕ್ರೇನ್ ಮುಂದಾಗಿದ್ದು, ಈ ಹಿನ್ನೆಲೆ ಕಾನೂನು ತಿದ್ದುಪಡಿ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.ಇದನ್ನೂ ಓದಿ: ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದರೆ ಪೊಲೀಸ್ ರಕ್ಷಣೆ ಇಲ್ಲ: ಹೈಕೋರ್ಟ್

    ಒಂದು ವೇಳೆ ನೀಲಿ ಚಿತ್ರಕ್ಕೆ ಕಾನೂನು ಮಾನ್ಯತೆ ಸಿಕ್ಕರೆ, ಇದರಿಂದ ಬರುವ ಆದಾಯವನ್ನು ಸೇನೆಯ ಖರ್ಚು, ವೆಚ್ಚವನ್ನು ನೋಡಿಕೊಳ್ಳಲು ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಸರ್ಕಾರ ನಿರ್ಧರಿಸಿದೆ ಎನ್ನಲಾಗುತ್ತಿದೆ. ಆದರೆ ಕಳೆದ ವರ್ಷ ಈ ಕಾನೂನಿನಡಿ 1,400 ಕೇಸುಗಳು ದಾಖಲಾಗಿದ್ದವು.

    ಆದರೆ ದೇಶದಲ್ಲಿ ಈ ಕಾನೂನು ಜಾರಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಕಾನೂನು ಮಾನ್ಯತೆ ಸಿಕ್ಕಲ್ಲಿ ಉಕ್ರೇನ್‌ಗೆ ವಾರ್ಷಿಕ ನೂರಾರು ಕೋಟಿ ರೂ. ಆದಾಯ ಹರಿದುಬರಲಿದೆ ಎಂದು ಅಂದಾಜಿಸಲಾಗಿದೆ. ಈ ಮೊತ್ತದಿಂದ 24,000 ಮಾನವ ಬಳಕೆ ಡ್ರೋನ್‌ಗಳನ್ನು ಖರೀದಿಸಬಹುದಾಗಿದೆ ಎಂದು ವರದಿಗಳು ತಿಳಿಸಿದೆ.ಇದನ್ನೂ ಓದಿ: ಹೊಸಪೇಟೆ | ಟಿಬಿ ಡ್ಯಾಂ ಬಳಿಯ ಗುಡ್ಡದಲ್ಲಿ ಭಾರೀ ಬೆಂಕಿ

  • ಕೇಂದ್ರ ಸಚಿವ ತೇಲಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೀಲಿ ಚಿತ್ರ ಪ್ರಸಾರ

    ಕೇಂದ್ರ ಸಚಿವ ತೇಲಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೀಲಿ ಚಿತ್ರ ಪ್ರಸಾರ

    ಗುವಾಹಟಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವ ರಾಮೇಶ್ವರ್ ತೇಲಿ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ನೀಲಿ ಚಿತ್ರದ ವೀಡಿಯೋವೊಂದು ಪ್ರಸಾರವಾದ ಘಟನೆ ನಡೆದಿದೆ.

    ಇಂಡಿಯನ್ ಆಯಿಲ್‍ನಿಂದ ಟಿನ್‍ಸುಕಿಯಾದಲ್ಲಿ ಮೆಥನಾಲ್ ಮಿಶ್ರಿತ ಒ-15 ಪೆಟ್ರೋಲ್‍ನ ಪೈಲಟ್ ರೋಲ್‍ಔಟ್ ಬಿಡುಗಡೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆ ಕುರಿತು ಅಪರಾಧ ವಿಭಾಗವು ತನಿಖೆ ನಡೆಸುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರೊಜೆಕ್ಟರ್ ಆಪರೇಟರ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಘಟನೆಯೇನು?: ತಿನ್ಸುಕಿಯಾದಲ್ಲಿ ಕೇಂದ್ರ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಇಂಡಿಯನ್ ಆಯಿಲ್ ಅಧಿಕಾರಿಯೊಬ್ಬರು ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದರು. ಅದೇ ವೇಳೆಗೆ ವೇದಿಕೆಯಲ್ಲಿದ್ದ ಪರದೆಯ ಮೇಲೆ ಮೆಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯ ವೀಡಿಯೋ ಕ್ಲಿಪ್‍ಗಳು ಬರುತ್ತಿದ್ದವು. ಆ ವೇಳೆ ನೀಲಿ ಚಿತ್ರ ಬಿಡುಗಡೆಯಾಗಿದ್ದು, ಸುಮಾರು 2-3 ಸೆಕೆಂಡ್‍ಗಳ ಕಾಲ ವೀಡಿಯೋ ಪ್ರಸಾರವಾಗಿತ್ತು. ಇದರಿಂದಾಗಿ ನೆರೆದವರಿಗೆಲ್ಲರಿಗೂ ಮುಜುಗರವಾಗಿತ್ತು. ಇದನ್ನೂ ಓದಿ: ಪುಟಿನ್‌ಗೆ ಕ್ಯಾನ್ಸರ್‌ – ಯುದ್ಧದ ವೇಳೆ ಅಧಿಕಾರ ಹಸ್ತಾಂತರ ಸಾಧ್ಯತೆ!

    ಘಟನೆಗೆ ಸಂಬಂಧಿಸಿ ಮಾತನಾಡಿದ ತೇಲಿ, ಆ ಸಮಯದಲ್ಲಿ ನಾನು ಇಂಡಿಯನ್ ಆಯಿಲ್ ಅಧಿಕಾರಿಯೊಬ್ಬರ ಭಾಷಣವನ್ನು ಕೇಳುತ್ತಿದ್ದೆ. ನಾನು ಪರದೆಯತ್ತ ನೋಡುತ್ತಿರಲಿಲ್ಲ ಮತ್ತು ಅದರ ಬಗ್ಗೆ ತಿಳಿದಿರಲಿಲ್ಲ. ನಂತರ, ನನ್ನ ಪಿಎ ಘಟನೆಯ ಬಗ್ಗೆ ತಿಳಿಸಿದರು. ಡಿಸಿ ಕೂಡ ಅಲ್ಲೇ ಕುಳಿತಿದ್ದರು. ತಕ್ಷಣವೇ ತನಿಖೆ ಆರಂಭಿಸುವಂತೆ ಸೂಚಿಸಿದ್ದೇನೆ. ಇದು ನಿಜವಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಎನ್‍ಇಪಿ ಜಾರಿಯಲ್ಲಿ ಕರ್ನಾಟಕ ಬೆಸ್ಟ್: ಅಮಿತ್ ಶಾ

  • ಪೋಷಕರ ಮೊಬೈಲ್‍ನಲ್ಲಿ ಸೆಕ್ಸ್ ವಿಡಿಯೋ ನೋಡಿ 10ರ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ!

    ಪೋಷಕರ ಮೊಬೈಲ್‍ನಲ್ಲಿ ಸೆಕ್ಸ್ ವಿಡಿಯೋ ನೋಡಿ 10ರ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ!

    – ಕೊಲೆಗೈದು ತನಿಖೆಯ ದಾರಿ ತಪ್ಪಿಸಿದ 15ರ ಪೋರ

    ಮುಂಬೈ: ಪೋಷಕರ ಮೊಬೈಲ್‍ನಲ್ಲಿ ಸೆಕ್ಸ್ ವಿಡಿಯೋ ನೋಡಿದ್ದ 15 ವರ್ಷದ ಬಾಲಕನೊಬ್ಬ 10 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟು ಕೊಲೆಗೈದ ಘಟನೆ ಮುಂಬೈನಲ್ಲಿ ನಡೆದಿದ್ದು, ಪೊಲೀಸ್ ತನಿಖೆಯ ಬಳಿಕ ಸತ್ಯ ಬಯಲಿಗೆ ಬಂದಿದೆ.

    ಈ ಘಟನೆಯು ಕಳೆದ ಗುರುವಾರ ನಡೆದಿದ್ದು, ಕೊಲೆಯಾಗಿದ್ದ ಬಾಲಕನ ಮೃತ ದೇಹವು ಸಪೇದ್ ಪುಲ್ ನಾಲಾದಲ್ಲಿ ತೇಲುತ್ತಿದ್ದ ಟ್ರಾಲಿ ಬ್ಯಾಗ್‍ನಲ್ಲಿ ಶನಿವಾರ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು 15 ವರ್ಷದ ಬಾಲಕನ ಕೃತ್ಯವನ್ನು ಬಯಲು ಮಾಡಿದ್ದಾರೆ.

    ಘಟನೆಯ ವಿವರ:
    ಕೊಲೆಯಾದ ಬಾಲಕ ಹಾಗೂ ಆರೋಪಿ ಬಾಲಕ ನೆರೆಹೊರೆ ಮನೆಯವರು. ಎಂದಿನಂತೆ 10 ವರ್ಷದ ಬಾಲಕ ಗುರುವಾರ ಸಂಜೆ ಟ್ಯೂಷನ್‍ಗೆ ಹೋಗುತ್ತಿದ್ದ. ಈ ವೇಳೆ ಆತನನ್ನು ತನ್ನ ಮನೆಗೆ ಕರೆದೊಯ್ದ ಆರೋಪಿ, ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಆತನ ವರ್ತನೆಯಿಂದ ಹೆದರಿದ ಬಾಲಕ ಕಿರುಚಾಡಿದ್ದಾನೆ. ಧ್ವನಿ ಜೋರಾಗುತ್ತಿದ್ದಂತೆ ಕೃತ್ಯ ಬಯಲಿಗೆ ಬರುತ್ತದೆ ಎಂದು ಅರಿತ ಆರೋಪಿ ಆತನ ಕುತ್ತಿಗೆ ಹಿಡಿದು ಬಲವಾಗಿ ಹಿಡಿದಿದ್ದಾನೆ. ಸುಮಾರು 15ರಿಂದ 20 ನಿಮಿಷ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿದ್ದರಿಂದ ಉಸಿರುಗಟ್ಟಿಸಿ ಬಾಲಕ ಮೃತಪಟ್ಟಿದ್ದಾನೆ.

    ಮೃತ ಬಾಲಕನ ಉಡುಪುಗಳನ್ನು ಬಿಚ್ಚಿ ಶವವನ್ನು ಮಾತ್ರ ಟ್ರಾಲಿ ಬ್ಯಾಗ್‍ನಲ್ಲಿ ಇಟ್ಟಿದ್ದಾನೆ. ಬಳಿಕ ಬಟ್ಟೆ ಹಾಗೂ ಸ್ಕೂಲ್ ಬ್ಯಾಗ್ ಅನ್ನು ಸಾರ್ವಜನಿಕ ಶೌಚಾಲಯದಲ್ಲಿ ಬಚ್ಚಿಟ್ಟು ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದಾನೆ. ಬಾಲಕನ ಮೃತದೇಹವನ್ನು ತನ್ನ ಸ್ನೇಹಿತನ ಸ್ಕೂಟರ್ ಮೇಲೆ ಸಪೇದ್ ಪುಲ್ ನಾಲಾವರೆಗೂ ಸಾಗಿಸಿದ್ದಾನೆ. ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ನಾಲೆಯಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದಾನೆ.

    ಟ್ಯೂಷನ್‍ಗೆ ಹೋಗಿದ್ದ ಬಾಲಕ ಬಹಳ ಹೊತ್ತು ಕಳೆದರೂ ಬಾರದೇ ಇದ್ದಾಗ ಮನೆಯವರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ತನಗೆ ಏನು ಗೊತ್ತೇ ಇಲ್ಲ ಎನ್ನುವಂತೆ ಆರೋಪಿ ಬಾಲಕ ಕೂಡ ಅವರೊಂದಿಗೆ ಬಾಲಕನನ್ನು ಹುಡುಕಾಡುವ ನಾಟಕ ಮಾಡಿದ್ದಾನೆ.

    ಪ್ರಕರಣಕ್ಕೆ ತಿರುವು ನೀಡಲು ಆರೋಪಿ ಬಾಲಕ ಗೆಳೆಯನೊಂದಿಗೆ ಸೇರಿ ಹೊಸ ಪ್ಲಾನ್ ಮಾಡಿದ್ದಾನೆ. ಮೃತ ಬಾಲಕನ ತಂದೆಗೆ ಫೋನ್ ಮಾಡಿ, ನಿಮ್ಮ ಮಗನನ್ನು ಅಪಹರಿಸಿದ್ದೇವೆ. ನಿಮಗೆ ಮಗ ಬೇಕು ಎಂದರೆ 5 ಲಕ್ಷ ರೂ. ನೀಡಬೇಕು ಅಂತ ಹೇಳು ಎಂದು ತನ್ನ ಸ್ನೇಹಿತನಿಗೆ ಕೇಳಿಕೊಂಡಿದ್ದಾನೆ. ಈ ಕೆಲಸಕ್ಕಾಗಿ ನಿನಗೆ 20 ಸಾವಿರ ರೂ. ನೀಡುತ್ತೇನೆ ಎಂದು ಆರೋಪಿ ತಿಳಿಸಿದ್ದ.

    ಆರೋಪಿ ಬಾಲಕ ಹಾಗೂ ಸ್ನೇಹಿತ ಹೆಚ್ಚಾಗಿ ಕ್ರೈಂ ಶೋಗಳನ್ನು ನೋಡುತ್ತಿದ್ದರು. ಈ ಮೂಲಕ ತನಿಖೆಯ ದಾರಿ ತಪ್ಪಿಸಲು ಪ್ಲಾನ್ ಮಾಡುತ್ತಿದ್ದರು. ತಾವು ಬಳಸುತ್ತಿದ್ದ ಸಿಮ್‍ಗಳನ್ನು ಕೂಡ ಮುರಿದು ಹಾಕಿದ್ದರು.

    ಆರೋಪಿ ಸಿಕ್ಕಿದ್ದು ಹೇಗೆ?:
    ಬಾಲಕನನ್ನು ಕೊಲೆಗೈದಿದ್ದ ಆರೋಪಿ ಸ್ನೇಹಿತನ ಸ್ಕೂಟರ್ ನಲ್ಲಿ ಶವವನ್ನು ಸಾಗಿಸುತ್ತಿದ್ದ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಆರೋಪಿ ಬಾಲಕ ಸ್ಕೂಟರ್ ಮೇಲೆ ಟ್ರಾಲಿ ಬ್ಯಾಗ್ ಸಾಗಿಸುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ನನ್ನ ತಂದೆ ಹಾಗೂ ತಾಯಿ ಮೊಬೈಲ್‍ನಲ್ಲಿ ಗೇಮ್ ಆಡುತ್ತಿದ್ದೆ. ಒಂದು ದಿನ ಅವರ ಮೊಬೈಲ್‍ನಲ್ಲಿ ನೀಲಿ ಚಿತ್ರ ನೋಡಿದ್ದೆ. ಇದು ನನ್ನ ಮೇಲೆ ಕೆಟ್ಟ ಪರಿಣಾಮ ಬೀರಿತು. ಬಳಿಕ ಅದೇ ಅಭ್ಯಾಸವಾಯಿತು. ಇದೇ ಮುಂದೆ ಬಾಲಕನ ಮೇಲೆ ಅತ್ಯಾಚಾರಕ್ಕೆ ಪ್ರೇರಣೆ ನೀಡಿದ್ದ ಪರಿಣಾಮ ಘಟನೆ ನಡೆಯಿತು ಎಂದು ಆರೋಪಿ ಬಾಲಕ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳೆಗೆ ನೀಲಿ ಚಿತ್ರ ತೋರಿಸಿದ ಬೆಂಗ್ಳೂರಿನ ಓಲಾ ಡ್ರೈವರ್!

    ಮಹಿಳೆಗೆ ನೀಲಿ ಚಿತ್ರ ತೋರಿಸಿದ ಬೆಂಗ್ಳೂರಿನ ಓಲಾ ಡ್ರೈವರ್!

    ಬೆಂಗಳೂರು: ನಗರದಲ್ಲಿ ಓಲಾ ಕ್ಯಾಬ್ ಚಾಲಕನೋರ್ವ ನೀಲಿ ಚಿತ್ರವನ್ನು ತೋರಿಸುವ ಮೂಲಕ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿಬಂದಿದೆ.

    ಯಲಹಂಕದಿಂದ ಜೆಪಿ ನಗರದವರೆಗೆ ಹೋಗಲು ಮಹಿಳೆಯೊಬ್ಬರು ಓಲಾ ಬುಕ್ ಮಾಡಿದ್ದಾರೆ. ಈ ವೇಳೆ ವಿಧಾನಸೌಧ ಸಿಗ್ನಲ್ ನಿಂದ ಕ್ವೀನ್ಸ್ ಸರ್ಕಲ್ ನ ಕಡೆಗೆ ಬರುತ್ತಿದ್ದಂತೆ ಮಾರ್ಗ ಮಧ್ಯದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಗೆ ನೀಲಿ ಚಿತ್ರ ಕಾಣುವಂತೆ ತನ್ನ ಮೊಬೈಲ್ ನಲ್ಲಿ ತೋರಿಸಿದ್ದಾನೆ. ಚಾಲಕನ ಈ ವರ್ತನೆಯಿಂದ ಬೆದರಿದ ಮಹಿಳೆ ಅರ್ಧ ದಾರಿಯಲ್ಲಿಯೇ ಕಾರನ್ನು ನಿಲ್ಲಿಸುವಂತೆ ಚಾಲಕನಿಗೆ ಹೇಳಿದ್ದಾರೆ. ಆದರೆ ಚಾಲಕ ಮಹಿಳೆಯನ್ನು ಆಕೆಯ ನಿಗದಿತ ಸ್ಥಳಕ್ಕೆ ಕರೆದೊಯ್ದು ನಿಲ್ಲಿಸಿದ್ದಾನೆ.

    ಮಹಿಳೆ ಘಟನೆಯ ಒಂದು ದಿನದ ಬಳಿಕ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಐಪಿಸಿ ಸೆಕ್ಷನ್ 354(ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ಗುರುವಾರ ಬೆಳಗ್ಗೆ 6.28 ಕ್ಕೆ ಯಲಹಂಕ ನ್ಯೂ ಟೌನ್ ನಿಂದ ಜೆಪಿ ನಗರದವರೆಗೆ ಓಲಾ ಕ್ಯಾಬ್ ಬುಕ್ ಮಾಡಿದ್ದೇನು. ಈ ವೇಳೆ ವಿಧಾನಸೌಧ ಸಿಗ್ನಲ್ ನಿಂದ ಕ್ವೀನ್ಸ್ ಸರ್ಕಲ್ ನ ಕಡೆಗೆ ಬರುತ್ತಿದ್ದಂತೆ ಡ್ರೈವರ್ ಮುಂಬದಿಯ ಕನ್ನಡಿಯಿಂದ ಹಿಂದೆ ಕುಳಿತ್ತಿದ್ದ ನನ್ನನ್ನು ಗಮನಿಸುತ್ತಿರುವುದು ಕಂಡುಬಂತು. ಅಷ್ಟೇ ಅಲ್ಲದೇ ಅವನು ಎಡಗೈನಿಂದ ನನಗೆ ಮೊಬೈಲ್ ಕಾಣುವಂತೆ ಹಿಡಿದುಕೊಂಡಿದ್ದನು. ಅದರಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದು, ನನಗೂ ಕಾಣುವಂತೆ ಹಿಡಿದುಕೊಂಡಿದ್ದನು. ಮತ್ತೆ ಆತ ತನ್ನನ್ನು ತಾನೇ ಮುಟ್ಟುಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದ. ಅದನ್ನು ಕಂಡ ನನಗೆ ಭಯಗೊಂಡು ಕ್ಯಾಬ್ ನಿಲ್ಲಿಸುವಂತೆ ಸೂಚಿಸಿದೆ. ಅದಕ್ಕೆ ಅವನು ನಿಮ್ಮ ಇಳಿಯುವ ಸ್ಥಳ ಇನ್ನೂ ದೂರದಲ್ಲಿದೆ ಎಂದು ಹೇಳಿದ್ದಾನೆ. ಬಳಿಕ ತನ್ನ ಆಫೀಸ್ ನ ಬಳಿ ಬಂದು ಇಳಿದು ಆತನ ಬಗ್ಗೆ ಗ್ರಾಹಕ ಸೇವಾ ಕೇಂದ್ರಕ್ಕೆ ದೂರು ನೀಡಿದ್ದು, ಆತನ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಕಾನೂನು ಕ್ರಮಕೈಗೊಳ್ಳಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv